ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

samsung m11

ಇತ್ತೀಚಿನ ಪೋಸ್ಟ್‌ಗಳು

International Nurses Day

ಇಂದು, ಮೇ - 12 "ಅಂತರರಾಷ್ಟ್ರೀಯ ದಾದಿಯರ ದಿನ" (International Nurses Day) ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸ್ (ಐಸಿಎನ್) ಈ ದಿನವನ್ನು 1965 ರಿಂದ ಆಚರಿಸಿದೆ. 1953 ರಲ್ಲಿ ಯು.ಎಸ್. ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಡೊರೊಥಿ ಸದರ್ಲ್ಯಾಂಡ್, ಅಧ್ಯಕ್ಷ ಡ್ವೈಟ್ ಡಿ. ಐಸೆನ್‌ಹೋವರ್ "ದಾದಿಯರ ದಿನ" ವನ್ನು ಘೋಷಿಸುವಂತೆ ಪ್ರಸ್ತಾಪಿಸಿದರು; ಅವನು ಅದನ್ನು ಅಂಗೀಕರಿಸಲಿಲ್ಲ. ಆಧುನಿಕ ಶುಶ್ರೂಷೆಯ ಸಂಸ್ಥಾಪಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನಾಚರಣೆಯ ಕಾರಣ 1974 ರ ಜನವರಿಯಲ್ಲಿ, ಮೇ 12 ಅನ್ನು ಆಚರಿಸಲು ಆಯ್ಕೆ ಮಾಡಲಾಯಿತು. ಪ್ರತಿ ವರ್ಷ, ಐಸಿಎನ್ ಅಂತರರಾಷ್ಟ್ರೀಯ ದಾದಿಯರ ದಿನದ ಕಿಟ್ ಅನ್ನು ಸಿದ್ಧಪಡಿಸುತ್ತದೆ ಮತ್ತು ವಿತರಿಸುತ್ತದೆ. ಕಿಟ್‌ನಲ್ಲಿ ಶೈಕ್ಷಣಿಕ ಮತ್ತು ಸಾರ್ವಜನಿಕ ಮಾಹಿತಿ ಸಾಮಗ್ರಿಗಳಿವೆ, ಎಲ್ಲೆಡೆ ದಾದಿಯರು ಇದನ್ನು ಬಳಸುತ್ತಾರೆ. 1998 ರ ಹೊತ್ತಿಗೆ, ಮೇ 8 ಅನ್ನು ವಾರ್ಷಿಕ ರಾಷ್ಟ್ರೀಯ ವಿದ್ಯಾರ್ಥಿ ದಾದಿಯರ ದಿನವೆಂದು ಗೊತ್ತುಪಡಿಸಲಾಯಿತು. 'Florence Nightingale' [12 May 1820 – 13 August 1910] ಪ್ರತಿ ವರ್ಷ "ಮೇ 12ರಂದು ವಿಶ್ವ ದಾದಿಯರ ದಿನ" ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ದಿನ ಖ್ಯಾತ ದಾದಿ ಪ್ಯಾರೆನ್ಸ್‌ ನೈಟಿಂಗೇಲ್ (1820) ಅವರು ಹುಟ್ಟಿದ ದಿನ. ಅವರು ಮನುಕುಲಕ್ಕೆ ನೀಡಿದ ಅಮೋ...

🌺 ನುಡಿಗಟ್ಟುಗಳು 🌺

🌺 ನುಡಿಗಟ್ಟುಗಳು 🌺 🌻 ಅಂಕುರಾರ್ಪಣ ಮಾಡು - ಪ್ರಾರಂಭೋತ್ಸವ 🌻 ಅಲಾಲುಟೋಪಿ - ಮೋಸ ಮಾಡುವವನು 🌻 ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಈಡು ಮಾಡು 🌻 ಉತ್ಸವ ಮೂರ್ತಿ - ಕೆಲಸ ಮಾಡದ ಆಲಸಿ 🌻 ಉಭಯ ಸಂಕಟ - ಎರಡರಲ್ಲಿ ಏನನ್ನೂ ಆರಿಸಿಕೊಳ್ಳಬೇಕೆಂಬ ಚಿಂತೆ 🌻 ಊದುವ ಶಂಖ ಊದಿಬಿಡು - ಹೇಳುವುದು ನಿಷ್ಪ್ರಯೋಜಕವಾದರೂ ಹೇಳಿಬಿಡು 🌻 ಊರತ್ತೆ - ವೇಶ್ಯೆಗೆ ಆಶ್ರಯ ಕೊಟ್ಟವಳು 🌻 ಒನಕೆ ಚಿಗುರು - ಅಸಾಧ್ಯವಾದುದು ಆಗು 🌻 ಒಬ್ಬರ ಕೈ ವೀಣೆಯಾಗಿರು - ಇತರರ ಇಚ್ಚೆಯಂತೆ ನಡೆ 🌻 ಕಣ್ಣಿಗೆ ಅಂಜನ ಹಾಕು - ಸ್ಪಷ್ಟವಾಗಿ ಅರಿವಾಗು 🌻 ಕಣ್ಣಿನಲ್ಲಿ ಗಂಗಾವತಾರವಾಗು - ಆನಂದಭಾಷ್ಪ 🌻 ಕಣ್ಣುರಿ - ಅಸೂಯೆ 🌻 ಕಣ್ಸವಿ - ಇಷ್ಟವಾದ ನೋಟ 🌻 ಕಲ್ಲುನೀರು ಕರಗುವ ಹೊತ್ತು - ಮಧ್ಯರಾತ್ರಿ 🌻 ಕಾಗೆ ಮುಳುಗು - ಸ್ನಾನದ ಶಾಸ್ತ್ರ ಮಾಡು 🌻 ಕಾಲಗುಣ - ಶಕುನ 🌻 ಕಾಲಲ್ಲಿ ಹಾವು ಬಿಡು - ಗೊಂದಲಪಡಿಸು 🌻 ಕಿವಿ ಸೋಲು - ಕೇಳು, ನಂಬು 🌻 ಕುಂತೀ ಮಕ್ಕಳ ಸಂಸಾರ - ಕಷ್ತದ ಜೀವನ 🌻 ಕೈ ಕಂಡ ಕೆಲಸ - ತನಗೆ ತಿಳಿದಿರುವ ಕೆಲಸ 🌻 ಕೈ ಹರಿತ ಆಗು - ಅನುಭವಿಯಾಗು 🌻 ಗಟ್ಟಿಕುಳ - ಶ್ರೀಮಂತ 🌻 ಗಾಳಿಗೆ ಗರಿ ಮೂಡು - ಶೀಘ್ರತೆ ಹೆಚ್ಚಾಗು 🌻 ಗುಡ್ಡಕ್ಕೆ ಕಲ್ಲುಹೊರು - ವ್ಯರ್ಥವಾದ ಕೆಲಸ ಮಾಡು 🌻 ಚಿದಂಬರ ರಹಸ್ಯ - ಅರ್ಥವಾಗದ ಗುಟ್ಟು 🌻 ತಲೆ ಕುಂಬಾರನ ಚಕ್ರವಾಗು - ಯೋಚನಾಕ್ರಾಂತವಾಗು 🌻 ತಲೆಯ ಮೇಲೆ ಕೈ ಇಡು - ವಂಚಿಸು 🌻 ನರ...

KAS ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು:~

★ ಕೆ.ಎ.ಎಸ್. ಅಧಿಕಾರಿಯಾಗಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು. ★ ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು.!! ★ ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ.   ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವಾಗುವುದಿಲ್ಲ. ಮುಗ್ಧ ಮನಸ್ಸು ಏಕಾಗ್ರತೆಗೊಳ್ಳುವುದಿಲ್ಲ. ಯಾವುದೋ...

TOP KANNADA CURRENT AFFAIRS 12 MARCH 2020

ಇಂದಿನ ಪ್ರಚಲಿತ ವಿದ್ಯಮಾನಗಳು 12 ಮಾರ್ಚ್ 2020  ಪ್ರಮುಖ ದಿನ 1) ಸೈಬರ್ ಸೆನ್ಸಾರ್ಶಿಪ್ ವಿರುದ್ಧ ವಿಶ್ವ ದಿನ - ಮಾರ್ಚ್ 12. ಆರ್ಥಿಕತೆ    1) ಮೂಡಿಸ್ ಇನ್ವೆಸ್ಟರ್ ಸೇವೆಯಿಂದ 2020 ರ ಭಾರತದ ಬೆಳವಣಿಗೆಯ ಪ್ರಕ್ಷೇಪಣ - 5.3%. 2) ಯುಎನ್‌ಸಿಟಿಎಡಿ ಇನ್ವೆಸ್ಟ್‌ಮೆಂಟ್ ಟ್ರೆಂಡ್ಸ್ ಮಾನಿಟರ್ ಪ್ರಕಾರ, ಕರೋನವೈರಸ್ (ಸಿಒವಿಐಡಿ -19) ಏಕಾಏಕಿ ಜಾಗತಿಕ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) - 5% -15% ರಷ್ಟು ಕುಗ್ಗಲು ಕಾರಣವಾಗಬಹುದು.    ಅಂತಾರಾಷ್ಟ್ರೀಯ    1) ಮಾರ್ಚ್ 11 ರಂದು, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ಇತ್ತೀಚಿನ ಪ್ರಗತಿಯನ್ನು ಸ್ವಾಗತಿಸಲು ನಿರ್ಣಯವನ್ನು ಅಂಗೀಕರಿಸಿದೆ.    ರಾಷ್ಟ್ರೀಯ 1) ನವದೆಹಲಿಯಲ್ಲಿ ಆಯೋಜಿಸಲಾದ ಶ್ರೀರಾಮ್ ಶಂಕರ್‌ಲಾಲ್ ಸಂಗೀತ ಉತ್ಸವದ 73 ನೇ ಆವೃತ್ತಿ. 2) ಕಾಮನ್ವೆಲ್ತ್ ಪ್ರಧಾನ ಕಾರ್ಯದರ್ಶಿ ಕಾಮನ್ವೆಲ್ತ್ ನಿಧಿಗಳಲ್ಲಿ ಒಂದನ್ನು ಹೆಸರಿಸಬಹುದು ಎಂದು ಸಲಹೆ ನೀಡಿದರು - ಸರ್ದಾರ್ ವಲ್ಲಭಭಾಯಿ ಪಟೇಲ್. 3) ಆಯುಷ್ಮಾನ್ ಭಾರತ್-ಪಿಎಂಜೆಎವೈ ಅಡಿಯಲ್ಲಿ ಭಾರತದ ಅನೇಕ ರಾಜ್ಯಗಳಲ್ಲಿ ‘ಆರೋಗ್ಯ ಲಾಭ ಪ್ಯಾಕೇಜ್ 2.0’ (1578 ಕಾರ್ಯವಿಧಾನಗಳನ್ನು ಒಳಗೊಂಡಿದೆ) ಜಾರಿಗೆ ತರಲಾಗಿದೆ. 4) ಕೇಂದ್ರ ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು 2021 ರಿಂದ ನೈರ್ಮಲ್ಯ ಕರವಸ್ತ್ರ ವಿಲೇವಾರಿ ಚೀಲಗ...

IMPORTENT INFO FOR SDA/FDA EXAMS ಲೋಹಗಳ ಅಧ್ಯಯನ

• ಧಾತುಗಳನ್ನು ಲೋಹಗಳು ಮತ್ತು ಅಲೋಹಗಳೆಂಬ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. • ಲೋಹಗಳು ಸಾಮಾನ್ಯ ತಾಪದಲ್ಲಿ ಬಹುತೇಕವು ಘನ ರೂಪದಲ್ಲಿದೆ. ಆದರೆ ‘ಪಾದರಸ’ ಮತ್ತು ‘ಗ್ಯಾಲಿಯಂ’ಗಳು ದ್ರವ ರೂಪದಲ್ಲಿರುವ ಲೋಹಗಳಾಗಿವೆ. • ಲೋಹಗಳೆಲ್ಲವೂ ಉತ್ತಮ ಉಷ್ಣ ಮತ್ತು ವಿದ್ಯುತ್‍ವಾಹಕಗಳು. • ಇವು ಎಲೆಕ್ಟ್ರಾನ್‍ಗಳನ್ನು ಬಿಟ್ಟುಕೊಡುವ ಗುಣವುಳ್ಳ ಧಾತುಗಳಾಗಿವೆ. • ಲೋಹಗಳ ಬಹುಮುಖ್ಯ ಆಕರ ಭೂಗರ್ಭ. ಇದರಲ್ಲಿ ಲೋಹವು ಶುದ್ಧರೂಪದಲ್ಲೂ, ಸಂಯುಕ್ತ ರೂಪದಲ್ಲೂ ದೊರೆಯುತ್ತದೆ. • ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. • ಪ್ರಮುಖ ಲೋಹಗಳು- ತಾಮ್ರ, ಕಬ್ಬಿಣ, ಚಿನ್ನ, ಬೆಳ್ಳಿ, ಪಾದರಸ, ಸತು, ಪ್ಲಾಟಿನಂ, ಅಲ್ಯುಮಿನಿಯಂ, ಹಿತ್ತಾಳೆ, ಮೆಗ್ನೀಷಿಯಂ,ಉಕ್ಕು,ಕ್ಯಾಲ್ಸಿಯಂ, ಪೊಟ್ಯಾಷಿಯಂ, ಸೊಡಿಯಂ , ಕಂಚು • ಲೋಹಗಳ ರಾಸಾಯನಿಕ ಗುಣಗಳು : 1. ಲೋಹಗಳು ಗಾಳಿಯೊಂದಿಗೆ ( ಆಮ್ಲಜನಕ) ವರ್ತಿಸಿ ಆಯಾ ಲೋಹಗಳ ಆಕ್ಸೈಡ್‍ಗಳಾಗುತ್ತವೆ. ಉದಾ- ಸೋಡಿಯಂ ಲೋಹವು ಗಾಳಿಯೊಂದಿಗೆ ವರ್ತಿಸಿ, ಸೋಡಿಯಂ ಆಕ್ಸೈಡ್ ಉಂಟಾಗುತ್ತದೆ. 2. ಲೋಹಗಳು ಸಾಮಾನ್ಯವಾಗಿ ನೀರಿನೊಂದಿಗೆ ವರ್ತಿಸಿ ಹೈಡ್ರೋಜನ್ ಬಿಡುಗಡೆ ಮಾಡುತ್ತವೆ. ಮತ್ತು ಆಯಾ ಲೋಹಗಳ ‘ಆಕ್ಸೈಡ್’ ಗಳಾಗುತ್ತವೆ.ಉದಾ – ಕಬ್ಬಿಣವು ನೀರಿನೊಂದಿಗೆ ವರ್ತಿಸಿ, ಕಬ್ಬಿಣದ ಆಕ್ಸೈಡ್ ಆಗುತ್ತದೆ. 3. ಲೋಹಗಳು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಆಯಾ ಲೋಹಗಳ ‘ಕ್ಲೋರೈಡ್’ ಗಳು ಉಂಟಾಗುತ್ತವೆ.ಉದಾ –ಮೆಗ್ನಿಷಿಯಂ ಜೊ...