ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

**ಜ್ಞಾನ ಕಾರಂಜಿ**::: 🌲 ಪ್ರಪಂಚದ ಆದಿವಾಸಿ ಜನಾಂಗ...

☘ ಆದಿವಾಸಿ ಜನಾಂಗಗಳು ಇಂದು ಜಗತ್ತಿನಲ್ಲಿ 260 ಮಿಲಿಯನ್ನಷ್ಟು ಇದ್ದಾರೆ ☘ ಗ್ರೀನ್ ಲ್ಯಾಂಡಲ್ಲಿ ಶೇ 90% ರಷ್ಟು ಆದಿವಾಸಿಗಳಿದ್ದಾರೆ ☘ ಹೌಸ ಮಸಾಯಿ ಆದಿವಾಸಗಳ ಮನೆಯನ್ನು ಕ್ರಾಲ್ ಎಂದು ಕರೆಯುತ್ತಾರೆ ☘ ಎಸ್ಕಿಮೋಗಳ ಮನೆಯನ್ನು ಇಗ್ಲೂಗಳು ಎಂದು ಕರೆಯುತ್ತಾರೆ ✨ ಹೆಸರು........‌.‌.....‌✨ ದೇಶ ☘ ಪಿಗ್ಮಿ.....‌‌‌..... ಮಧ್ಯ ಆಪ್ರಿಕಾ ☘ ರೆಡ್ ಇಂಡಿಯನ್ಸ್...... ಉ.ಅಮೆರಿಕಾ ☘ ಮಸಾಯಿ..... ಕಿನ್ಯಾ .ತಾಂಜೇನಿಯಾ ☘ ಎಸ್ಕಿಮೋ........ಕೆನಡಾ, ಅಲಾಸ್ಕ, ☘ ಐನು.....‌ ಜಪಾನ್ ☘ ವೆಡ್ಡಾ....... ಶ್ರೀಲಂಕಾ ☘ ಚಕ್ಮ...... ಬಾಂಗ್ಲದೇಶ ☘ ಮಾವೋರಿಸ್..... ನ್ಯೂಜಿಲ್ಯಾಂಡ್ ☘KEY NOTE☘ 🌲ಸಮಭಾಜಕ ವೃತ್ತ ಪ್ರದೇಶದಲ್ಲಿ ಕಂಡುಬರುವ ಬುಡಕಟ್ಟು ಜನಾಂಗಗಳು ☘ ದಕ್ಷಿಣ ಅಮೆರಿಕದ ಅಮೆಜಾನ್ ನದಿ ಬಯಲಿನಲ್ಲಿ - ರೆಡ್ ಇಂಡಿಯನ್ಸ್ ☘ ಆಫ್ರಿಕಾದ ಕಾಂಗೊ ನದಿ ಬಯಲು - ಪಿಗ್ಮಿ ಬುಡಕಟ್ಟು ಜನಾಂಗ ☘ ಆಫ್ರಿಕಾದ ಗಿನಿ ತೀರ ಪ್ರದೇಶ/ ಗಿನಿ ಕೋಸ್ಟ್ - ಕಿಕು,ಮಸಾಯಿ, ಹೌಸಾ

**ಜ್ಞಾನ ಕಾರಂಜಿ**::: ಕೆಲವುಮಾಹಿತಿಗಳು

☘ 1 ಡಜನ್ – 12 ☘ 1 ಅಡಿ – 12 ಅಂಗುಲಗಳು ☘ 1 ಲೀಟರ್ -100 ಘನ ಸೆಂ. ಮಿ ☘ 1 ಗ್ರೋಸ – 12 ಡಜನ್ ☘ 1 ನಾಟ್ – 1.151 ಸರ್ವೆ ಮೈಲುಗಳು ☘ 1 ಲೀಗ್ – 3 ಸರ್ವೆ ಮೈಲುಗಳು ☘ 1 ಟನ್ – 1000 ಕೆ. ಜಿ ☘ 1 ಎಕರೆ -40 ಗುಂಟೆಗಳು ☘1 ಮೀಟರ್ -100 ಸೆಂ. ಮಿ ☘ 1 ಕಿಲೊಮೀಟರ್ – 1000 ಮೀಟರ್‍ಗಳು ☘ 1 ಸೆಂ. ಮಿ – 10 ಮಿಲಿಮೀಟರ್ ☘ 1 ಟನ್ – 10 ಕ್ವಿಂಟಲ್ ☘ 1 ಕ್ವಿಂಟಲ್ – 100 ಕಿ. ಗ್ರಾಂ ☘ 1 ಕೆ. ಜಿ – 1000 ಗ್ರಾಂ ☘ 60 ಸೆಕೆಂಡ್ – 1 ನಿಮಿಷ ☘ 60 ನಿಮಿಷ – 1 ಗಂಟೆ ☘ 3600 ಸೆಕೆಂಡ್ -1 ಗಂಟೆ ☘ 10 ವರ್ಷ – 1 ದಶಕ ☘ 100 ವರ್ಷ -1 ಶತಕ ☘ 1 ಮಿಲಿಯನ್ – 10 ಲಕ್ಷ ☘ 10 ಮಿಲಿಯನ್ – 1 ಕೋಟಿ ☘ 100 ಮಿಲಿಯನ್ – 10 ಕೋಟಿ ☘ 1 ಬಿಲಿಯನ್ – 100 ಕೋಟಿ ☘ 52 ವಾರಗಳು – 1 ವರ್ಷ ☘ 365 – 1 ವರ್ಷ

**ಜ್ಞಾನ ಕಾರಂಜಿ**::: 🌲ಸೂಕ್ಷ್ಮಾಣು ಜೀವಿಗಳ ಬಗ್ಗೆ ಒಂದಿಷ್ಟು ಮಾಹಿತಿ....

☘ ವೈರಸ್ ಗಳು☘ ಇವು ಸಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿಯಾಗಿದ್ದು, ಇವುಗಳು ಅತ್ಯಂತ ಚಿಕ್ಕ ಜೀವಿಗಳು. ವೈರಸ್ ಗಳ ಗಾತ್ರ 0.015 ರಿಂದ 0.2 ಮೈಕ್ರಾನ್ ಗಳು.ಇವುಗಳ ರಚನೆ ಅತ್ಯಂತ ಸರಳವಾಗಿದೆ.ವೈರಸ್ ಗಳಲ್ಲಿ3 ವಿಧ. 1. ಸಸ್ಯ ವೈರಸ್ 2. ಪ್ರಾಣಿ ವೈರಸ್ 3. ಬ್ಯಾಕ್ಟೀರಿಯಾ ಪೇಜ್ 🌲ವೈರಸ್ ಗಳಿಂದ ಉಂಟಾಗುವ ರೋಗಗಳು... ☘ಏಡ್ಸ್, ಹೆಪಟೈಟಿಸ್ ಬಿ, ರೇಬೀಸ್ , ಪೋಲಿಯೋ, ಮಂಗನ ಬಾವು, ಚಿಕನ್ ಪಾಕ್ಸ್ , ಕಾಲು ಬಾಯಿ ರೋಗ.. 🌲ಬ್ಯಾಕ್ಟೀರಿಯಾ. ☘ ಇವುಗಳ ಗಾತ್ರ 0.2 ರಿಂದ 1.0 ಮೈಕ್ರಾನ್ ಗಳು.. ಇವುಗಳು ಕಶಾಂಗಗಳಿಂದ ಚಲಿಸುತ್ತವೆ. ☘ ದೇಹವು ಮೂರು ಪೊರೆಗಳಿಂದಾವೃತವಾಗಿದೆ.ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳು..... ☘ ಕ್ಷಯ ☘ ಕಾಲರ ☘ ಪ್ಲೇಗ್ ☘ ಕುಷ್ಟ ☘ಧನುರ್ವಾಯು ☘ ಡಿಪ್ತೀರಿಯಾ ☘ ಟೈಫಾಯ್ಡ್ ☘ ನಾಯಿಕೆಮ್ಮು ☘ ಜಾಂಡೀಸ್ ☘ ನ್ಯೂಮೋನಿಯಾ 🌲ಶಿಲೀಂದ್ರ ☘ ಇವು ಪತ್ರಹರಿತ್ತನ್ನು ಹೊಂದಿರುವುದಿಲ್ಲ.. ☘ ಇವು ಕೊಳೆತಿನಿಗಳು ☘ ಇವುಗಳ ಬೀಜಾಣುಗಳು ಗಾಳಿಯಲ್ಲಿ ಹರಡಿ ವಸ್ತುಗಳ ಮೇಲೆ ಬೆಳೆಯುತ್ತವೆ. 🌲ವಿಧಗಳು ☘ ಯೀಸ್ಟ್ ☘ ಬೂಸ್ಟ್ ☘ ಅಣಬೆ 🌲 ಪ್ರೊಟೊಜೋವಾ ☘ ಇವು ಏಕಕೋಶ ಜೀವಿಗಳಾಗಿವೆ. ಅಂದರೆ ಒಂದೇ ಒಂದು ಜೀವಕೋಶವನ್ನೊಂದಿರುವ ಜೀವಿಗಳು. ☘ ಇವುಗಳ ಗಾತ್ರ 2 ರಿಂದ 200 ಮೈಕ್ರಾನ್ ಗಳು ☘ ಏಕಕೋಶ ಜೀವಿಗಳು ಮಿಥ್ಯಪಾದ, ಲೋಮಾಂಗ/ ಕಶಾಂಗಗಳಿಂದ ಚಲಿಸುತ್ತವೆ ☘ ಏಕಕೋಶ ಜೀವಿಗಳಿಗೆ ಉದಾಹರಣೆ ಅಮೀಬಾ, ಯುಗ್ಲೀನಾ, ಪ್ರಾರಮೀಸಿಯಂ, ಎ...

**ಜ್ಞಾನ ಕಾರಂಜಿ**::: *ಭಾರತದ ಪ್ರಮುಖ ಪರಿಸರ ಚಳುವಳಿಗಳು*

ಹಸಿರು ಚಳುವಳಿ' ಅಥವಾ 'ಸಂರಕ್ಷಣೆ ಚಳವಳಿ 1.ಬಿಷ್ನೋಯ್ ಚಳವಳಿ - 1700 ಸ್ಥಳ- ಖೇಜರ್ಲಿ, ಮಾರವಾರ್ ಪ್ರದೇಶ, ರಾಜಸ್ಥಾನ ಮುಖಂಡರು- ಅಮೃತಾ ದೇವಿ, ಬಿಷ್ನೋಯ್ ಗ್ರಾಮಸ್ಥರು & ಖಜರ್ಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ. ಗುರಿ- ರಾಜನ ಅರಮನೆ ಕಟ್ಟಲು ಮರಗಳನ್ನು ಕತ್ತರಿಸುತ್ತಿದ್ದ ಸೈನಿಕರ ತಡೆ 2. ಚಿಪ್ಕೋ ಚಳವಳಿ-1973 ಸ್ಥಳ-ಚಮೋಲಿ ಜಿಲ್ಲೆ ಮತ್ತು ನಂತರ ಉತ್ತರಾಖಂಡದ ತೆಹ್ರಿ-ಗಡ್ವಾಲ್ ಜಿಲ್ಲೆ ನಾಯಕರು- ಸುಂದರ್ಲಾಲ್ ಬಹುಗುಣ, ಗೌರಾ ದೇವಿ, ಸುಧೇಶ ದೇವಿ, ಬಚ್ಚನಿ ದೇವಿ, ಚಂಡಿ ಪ್ರಸಾದ್ ಭಟ್, ಗೋವಿಂದ ಸಿಂಗ್ ರಾವತ್, ಧೂಮ್ ಸಿಂಗ್ ನೇಗಿ, ಶಂಷರ್ ಸಿಂಗ್ ಬಿಶ್ತ್ ಮತ್ತು ಘಾನಸಮ ರತುರಿ. ಗುರಿ- ಹಿಮಾಲಯದ ಇಳಿಜಾರುಗಳಲ್ಲಿ ಮರಗಳನ್ನು ರಕ್ಷಿಸಲು ಮುಖ್ಯ ಉದ್ದೇಶವಾಗಿತ್ತು 3. ಸೈಲೆಂಟ್ ವ್ಯಾಲಿ ಉಳಿಸಿ ಚಳವಳಿ-1978 ಸ್ಥಳ-ಸೈಲೆಂಟ್ ವ್ಯಾಲಿ, ಭಾರತದ ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿತ್ಯಹರಿದ್ವರ್ಣದ ಉಷ್ಣವಲಯದ ಅರಣ್ಯ. ನಾಯಕರು- ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ( KSSP) NGO ಮತ್ತು ಕವಿ ಕಾರ್ಯಕರ್ತ ಸುಘತಕುಮಾರಿ ಸೈಲೆಂಟ್ ವ್ಯಾಲಿ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗುರಿ-ಸೈಲೆಂಟ್ ಕಣಿವೆಯ ಮರಗಳನ್ನು ಜಲವಿದ್ಯುತ್ ಯೋಜನೆಗಾಗಿ ನಾಶವಾಗುವುದನ್ನು ತಡೆಯುವುದು 4. ಜಂಗಲ್ ಬಚಾವೊ ಆಂದೋಲನ- 1982 ಸ್ಥಳ- ಬಿಹಾರದ ಸಿಂಗ್ ಭೂಮ್ ಜಿಲ್ಲೆ ನಾಯಕರು- ಸಿಂಗ್ ಭ...

**ಜ್ಞಾನ ಕಾರಂಜಿ**::: 🌲ಕೆಲವು ಶಾಸನಗಳ ಬಗ್ಗೆ ಒಂದಿಷ್ಟು ಮಾಹಿತಿ..

☘ ಐಹೊಳೆ ಶಾಸನ - ರವಿಕೀರ್ತಿ . ಮೇಗುತಿ ದೆವಾಲಯದಲ್ಲಿ ಕೆತ್ತಲಾಗಿದೆ ( ಇಮ್ಮಡಿ ಪುಲಕೇಶಿಯ ಕಾಲದ್ದು) ☘ ಚಂದ್ರವಳ್ಳಿ ಶಾಸನದ ಕತೃ - ಮಯೂರ ವರ್ಮ ( ಚಿತ್ರದುರ್ಗ) ☘ ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಇರುವುದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ. ☘ ಬ್ರಾಹ್ಮಿ ಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ ☘ ಹಲ್ಮಿಡಿ ಶಾಸನದ ಕತೃ - ಕಾಕುತ್ಸ ವರ್ಮ. ☘ ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ ☘ ತಾಳಗುಂದ ಶಾಸನದ ಕತೃ - ಕವಿ ಕುಬ್ಜ ☘ ತಾಳಗುಂದ ಶಾಸನವನ್ನು ಬರೆಸಿದವರು - ಶಾಂತಿವರ್ಮ ( ಶಿವಮೊಗ್ಗ ಜಿಲ್ಲೆಯಲ್ಲಿದೆ) ☘ ನಿಟ್ಟೂರು ಶಾಸನದ ಕತೃ - ಚಡಪ. ☘ ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ - ದಂತಿದುರ್ಗ ☘ ಭಾಂಡ್ಕ ಮತ್ತು ತಾಳೆಗಾಂ ಶಾಸನ - ಒಂದನೇ ಕೃಷ್ಣ ☘ ಸಂಜಾನ್ ತಾಮ್ರ ಶಾಸನ - ಅಮೋಘ ವರ್ಷ ☘ ಬಾದಾಮಿ ಶಾಸನದ ಕತೃ - ಒಂದನೇ ಪುಲಿಕೇಶಿ ☘ ಮಹಾಕೂಟಸ್ತಂಭ ಶಾಸನ ಕತೃ - ಮಂಗಳೇಶ. ಬಾದಾಮಿಯ ಮಹಾಕೂಟೇಶ್ವರ ದೇವಾಲಯದಲ್ಲಿದೆ

**ಜ್ಞಾನ ಕಾರಂಜಿ**::: *ಭಾರತದ ಸಂವಿಧಾನದ ಪ್ರಮುಖ ವಿಧಿಗಳು*

💐ಭಾರತ ಸಂವಿಧಾನ 💐 ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) 1ಒಕ್ಕೂಟದ ಹೆಸರು 2ನೂತನ ರಾಜ್ಯಗಳ ರಚನೆ 3ಸರಹದ್ದುಗಳು ಭಾಗ -2 5ಪೌರತ್ವ 6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು . 7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು 8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು ಭಾಗ -3 ( ಮೂಲಭೂತ ಹಕ್ಕುಗಳು ) 14ಸಮಾನೆತೆಯ ಹಕ್ಕು 15ತಾರತಮ್ಯ ನಿಷೇಧ 16 ಉದ್ಯೋಗದಲ್ಲಿ ಸಮಾನತೆ 17ಅಸ್ಪ್ರಶ್ಯತೆ ನಿರ್ಮೊಲನೆ 18ಬಿರುಡುಗಳ ರದ್ದತಿ 19 6 ಸ್ವಾತಂತ್ರ್ಯಗಳು 20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ 21ಜೀವಿಸುವ ಹಕ್ಕು 21("ಎ) ವಿದ್ಯಾಭ್ಯಾಸದ ಹಕ್ಕು 23ಮಾನವ ಮಾರಾಟ , ಬಲವಂತ ದುಡಿಮೆ 24ಬಾಲಕಾ... ಕ ನಿಷೇಧ 25ಧಾರ್ಮಿಕ ಆಚರಣೆ 26ಧಾರ್ಮಿಕ ಸ್ವಾತಂತ್ರ್ಯ 27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ 29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ 30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ : ಭಾಗ-4(ಎ) ಮೂಲಭೂತ ಕರ್ತವ್ಯಗಳು 51(ಎ)11ಮೂಲಭೂತ ಕರ್ತವ್ಯಗಳು 💐ಭಾಗ -5(ಕೇಂದ್ರ ಸರ್ಕಾರ ) 52 ರಾಷ್ಪಪತಿ 54ರಾಷ್ಪಪತಿ ಚುನಾವಣೆ 58ರಾಷ್ಪಪತಿಯ ಅರ್ಹತೆಗಳು 60ರಾಷ್ಪಪತಿಯ ಪ್ರಮಾಣ ವಚನ 61 ಮಹಾಭಿಯೋಗ 63ಉಪರಾಷ್ಪಪತಿ 67ಉಪರಾಷ್ಪಪತಿ ಪದವಧಿ 72ರಾಷ್ಪಪತಿ ಕ್ಷಮಾಧಾನ 74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು 75ಪ್ರಧಾನಿ ಮಂತ್ರಿಮಂಡಲದ ನೇಮಕ 76ಅ ....ಜನರಲ್ 79 ಸಂಸತ್ತಿನ ರಚನೆ 80 ರಾಜ್ಯಸಭೆ ರಚನೆ 81ಲೋಕಸಭೆ ರ...

**ಜ್ಞಾನ ಕಾರಂಜಿ**::: ಆಶ್ಟ್ರೇಲಿಯಾದ ಬಗ್ಗೆ ನಿಮಗೆಷ್ಟು ಗೊತ್ತು?

☘ ಆಸ್ಟ್ರೇಲಿಯಾ ಅಪರೂಪದ ಪ್ರಾಣಿ ಪಕ್ಷಿಗಳ ನಾಡು ಎಂದು ಕರೆಯುತ್ತಾರೆ ಏಕೆಂದರೆ ಇಲ್ಲಿನ ಶೇ 60% ಜೀವಿಗಳು ಬೇರೆ ಎಲ್ಲಿಯೂ ಕಾಣ ಸಿಗವು ☘ ಆಸ್ಟ್ರೇಲಿಯಾವನ್ನು ಚಿನ್ನದ ಉಣ್ಣೆಯ ನಾಡು ಎಂದು ಕರೆಯುತ್ತಾರೆ ☘ ಆಸ್ಟ್ರೇಲಿಯಾದ ಮುಖ್ಯ ಕಸುಬು ಕುರಿ ಸಾಕಾಣಿಕೆ ☘ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಉಣ್ಣೆ ನೀಡುವ ಮರಿನೋ ತಳಿಯ ಕುರಿಗಳನ್ನು ಹೆಚ್ಚಾಗಿ ಸಾಕುತ್ತಾರೆ ☘ ಜಗತ್ತಿನ ಅತೀ ದೊಡ್ಡ ಹವಳ ದ್ವೀಪವಾದ ಗ್ರೇಟ್ ಬ್ಯಾರಿಯರ್ ರೀಪ್ ಆಸ್ಟ್ರೇಲಿಯಾದ ಈಶಾನ್ಯ ಕರಾವಳಿಯಲ್ಲಿ ಕಂಡುಬರುತ್ತದೆ ☘ ಎಮು ಮತ್ತು ರಿಯಾ ಆಸ್ಟ್ರೇಲಿಯಾದ ಹಾರಲಾಗದ ಪಕ್ಷಿಗಳಾಗಿವೆ ☘ ಕಾಂಗೂರು ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿಯಾಗಿದೆ ☘ ಆಸ್ಟ್ರೇಲಿಯಾದಲ್ಲಿ ಅರ್ಟಿಸಿಯನ್ ಬಾವಿಗಳು ಕಂಡುಬರುತ್ತವೆ ☘ ಆಸ್ಟ್ರೇಲಿಯಾದಲ್ಲಿ ಕಂಡುಬರುವ ಆವರ್ತ ಮಾರುತವನ್ನು ವಿಲ್ಲಿ ವಿಲ್ಲಿ ಎಂದು ಕರೆಯುತ್ತಾರೆ ☘ ಐರಿ ಸರೋವರ ಆಸ್ಟ್ರೇಲಿಯಾದ ಅತೀ ದೊಡ್ಡ ಸರೋವರವಾಗಿದೆ ☘ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಹುಲ್ಲುಗಾವಲುಗಳು... 🌾 ಉಷ್ಣ ವಲಯದ..... ಸವನ್ನಾ 🌾 ಸಮಶೀತೋಷ್ಣ.....‌ ಡೌನ್ಸ್

**ಜ್ಞಾನ ಕಾರಂಜಿ**::: ಭೂಗೋಳ ಭಾಗ 2

+ ಜನಸಂಖ್ಯೆಯಲ್ಲಿ ಭಾರತ ಪಡೆದಿರುವ ಸ್ಥಾನ – 2 ನೇ ಸ್ಥಾನ + ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ – ಚೀನಾ + ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ – 47,000 ಬಗೆ + ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ – 1200 ಬಗೆ + ಭಾರತದಲ್ಲಿರುವ ಮತ್ಯಗಳ ಬಗಗಳು – 2500 ಬಗೆ + ಭಾರತದ ದಕ್ಷಿಣದಲ್ಲಿರುವ ಖಾರಿ – ಮನ್ನಾರ್ ಖಾರಿ + ಭಾರತದ ಪಶ್ಚಿಮದಲ್ಲಿರುವ ಖಾರಿ – ಕಛ್ ಖಾರಿ + ಭರತನ ತಂದೆ ಹಾಗೂ ತಾಯಿ – ದುಶ್ಯಂತ ಹಾಗೂ ಶಕುಂತಲೆ + ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು – ಪರ್ಶಿಯನ್ನರು + ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು – ಮ್ಯಾಸಿಡೋನಿಯರು + ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು – ಸರ್ ಹರ್ಬರ್ಟ್ ರಿಸ್ತೆ ( 1901 ) + ಭಾರತದಲ್ಲಿಯ ಜಾತಿಯ ಸಂಖ್ಯೆ – 3000 + ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ – 18 + ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು – ರಿಚರ್ಡ್ ಆಕ್ಲ್ಯುಯಸ್ + ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ – ಇಂಗ್ಲೇಂಡ್ + ಹಿಮಾಲಯ ಪರ್ವತದ ಉದ್ದ – 1500 ಮೈಲುಗಳು + ಪ್ರಪಂಚದ ಅತ್ಯಂತ ಎತ್ತರವಾದ ಶಿಖರ – ಮೌಂಟ್ ಎವರೆಸ್ಟ್ + ಮೌಂಟ್ ಎವರೆಸ್ಟ್ ಇರುವುದು – ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ + ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ – ತೇನ್ ಸಿಂಗ್ ನೂರ್ಗೆ + ಮೌಂಟ್ ಎವರೆಸ್ಟ್ ಶಿಖರ ಹತ್ತ...

**ಜ್ಞಾನ ಕಾರಂಜಿ**::: ಪ್ರಚಲಿತಗಳು 28.09.2018

1. ಚಂದ್ರಶೇಖರ ಕಂಬಾರ ರವರು ಎಷ್ಟನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ? 1. 83ನೇ 2. 84ನೇ 3. 85ನೇ 4. 86ನೇ Correct Answer: option2 Justification: ಕನ್ನಡ ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಧಾರವಾದದಲ್ಲಿ ಡಿಸೆಂಬರ್ 7 ,8,9 ರಂದು ನಡೆಯುಲಿರುವ 84ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ 2. ಈ ಕೆಳಗಿನ ಯಾರು ಲಲಿತಕಲಾ ಅಕಾಡಮಿ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ? 1.ಜಂಜುಕೇಶ್ವರ 2. ಮಧುದೇಸಾಯಿ 3. ಉಪಾಧ್ಯಾಯ 1. 1 ಮತ್ತು 2 2. 2 ಮತ್ತು 3 3. 1ಮತ್ತು 3 4. ಮೇಲಿನ ಎಲ್ಲಾವು Correct Answer: option4 Justification: ಕನ್ನಡ ಲಲಿತಕಲಾ ಅಕಾಡಿಮಿಯು 2018ನೇ ಸಾಲಿನ ಗೌರವ ಪ್ರಶಸ್ತಿಗೆ ಮೈಸೂರಿನ ಎಸ್.ಎಮ್. ಜಂಜುಕೇಶ್ವರ, ಧಾರವಾಡದ ಮಧು ದೇಸಾಯಿ ಹಾಗೂ ಉಡುಪಿಯ ಉಪಾದ್ಯಾಯ ಮೂಡುಬಳ್ಳಿ ಭಾಜನರಾಗಿದ್ದಾರೆ. ಗೌರವ ಪ್ರಶಸ್ತಿಯು 50 ಸಾವಿರ ರೂ ನಗದು ಬಹುಮಾನ ಸೇರಿದಂತೆ ಸ್ಮರಣ ಫಲಕ ಒಳಗೊಂಡಿದೆ. 3. ನ್ಯಾನೊ ತಂತ್ರಜ್ಞಾನ ಕುರಿತ ಬೆಂಗಳೂರು ಇಂಡಿಯಾದ ಅಂತರರಾಷ್ಟ್ರೀಯ 10ನೇ ಅವೃತ್ತಿಯ ಸಮ್ಮೇಳನ ಕೆಳಗಿನ ಯಾವ ತಿಂಗಳನಲ್ಲಿ ನಡೆಯುಲ್ಲಿದೆ? 1. ಅಕ್ಟೋಬರ್ 2. ನವೆಂಬರ್ 3. ಡಿಸೆಂಬರ್ 4. ಜನವರಿ Correct Answer: option3 Justification: ನ್ಯಾನೊ ತಂತ್ರಜ್ಞಾನ ಕುರಿತ ಬೆಂಗಳೂರು ಇಂಡಿಯಾದ ಅಂತರರಾಷ್ಟ್ರೀಯ 10ನ...

**ಜ್ಞಾನ ಕಾರಂಜಿ**::: ಕರಾಳ ಸುನಾಮಿ: ಇಂಡೋನೇಷ್ಯಾದಲ್ಲಿ ರಕ್ಕಸ ಅಲೆಗೆ 430 ಬಲಿ,

ಸರಣಿ ಪ್ರಾಕೃತಿಕ ವಿಕೋಪಗಳ ಇತಿಹಾಸದಿಂದಲೇ ಕುಖ್ಯಾತಿ ಪಡೆದಿರುವ ಇಂಡೋನೇಷ್ಯಾ ಮತ್ತೆ ಭೀಕರ ಭೂಕಂಪ, ಸುನಾಮಿಗೆ ಬೆಚ್ಚಿದೆ. ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಲವೇಸಿ ದ್ವೀಪದ ಪಲುವಿನಲ್ಲಿ 430ಕ್ಕೂ ಹೆಚ್ಚು ಶವಗಳು ಪತ್ತೆಯಾಗಿದ್ದು, ಇಡೀ ನಗರ ಅಕ್ಷರಶಃ ಸ್ಮಶಾನವಾಗಿದೆ. ಸಾವಿರಾರು, ಮನೆ, ಕಟ್ಟಡಗಳು ನೆಲಕ್ಕುರುಳಿದ್ದು, ಸಾವಿನ ಸಂಖ್ಯೆ ಸಾವಿರ ಮುಟ್ಟುವ ಸಾಧ್ಯತೆ ಗೋಚರಿಸಿದೆ. ನಾಪತ್ತೆಯಾಗಿರುವ ನೂರಾರು ಜನರಿಗಾಗಿ ಶೋಧ ಕಾರ್ಯ ಆರಂಭವಾಗಿದ್ದು, ಗಾಯಾಳುಗಳು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲಿ ಭೂಕಂಪ – ಸುಲವೇಸಿ ದ್ವೀಪದ ಪಲು ನಗರ ಯಾವಾಗ – ಶುಕ್ರವಾರ ಸಂಜೆ ಏನಾಯ್ತು? – 7.5ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಳಿಕ ಸುನಾಮಿ ಆರ್ಭಟ ಕಂಡಲೆಲ್ಲ ಶವ ಪ್ರಮುಖ ಜನನಿಬಿಡ ಪ್ರದೇಶಗಳ ರಸ್ತೆಗಳ ಎಲ್ಲೆಂದರಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಎಂದು ಅಧಿಕಾರಿಗಳು ಹೇಳಿದ್ದಾರೆ. 5 -18 ಅಡಿ ಅಲೆ ಆರ್ಭಟ 3.50 ಲಕ್ಷ ಜನಸಂಖ್ಯೆ ಇರುವ ಸುಲವೇಸಿ ದ್ವೀಪದಲ್ಲಿ ಬೀಚ್ ಫೆಸ್ಟಿವಲ್ ಸಂಭ್ರಮದ ಸಿದ್ಧತೆ ನಡೆದಿತ್ತು. ಇದ್ದಕ್ಕಿದಂತೆ 5ರಿಂದ 18 ಅಡಿ ಎತ್ತರದವರೆಗೆ ಬಂದ ಸಮುದ್ರದ ಅಲೆಯಲ್ಲಿ ನೂರಾರು ಜನ ಕೊಚ್ಚಿಹೋದರು. ನಾಪತ್ತೆಯಾಗಿರುವವರನ್ನು ಬಿಟ್ಟು 600 ಜನ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸ...

**ಜ್ಞಾನ ಕಾರಂಜಿ**::: ಪುತಿನ್ ಭಾರತ ಪ್ರವಾಸ ಫಿಕ್ಸ್,

ಎಸ್-400 ಟ್ರಯಂಫ್ ಖರೀದಿ ಮೋದಿ-ಪುತಿನ್ ಸಹಿ ಸಾಧ್ಯತೆ >> ನವದೆಹಲಿ: ಮುಂದಿನ ತಿಂಗಳು 4 ಮತ್ತು 5ರಂದು ನಡೆಯಲಿರುವ ಭಾರತ- ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗದಲ್ಲಿ ಪಾಲ್ಗೊಳ್ಳಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ನವದೆಹಲಿಗೆ ಆಗಮಿಸುತ್ತಿದ್ದು, ಎಸ್-400 ಟ್ರಯಂಫ್ ರಕ್ಷಣಾ ವ್ಯವಸ್ಥೆ ಸೇರಿ 40 ಸಾವಿರ ಕೋಟಿ ರೂ. ರಕ್ಷಣಾ ಉಪಕರಣ ಖರೀದಿ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ಭದ್ರತೆ ಕುರಿತ ಸಂಪುಟ ಸಮಿತಿ ಎಸ್-400 ಟ್ರಯಂಫ್ ಖರೀದಿಗೆ ಸಮ್ಮತಿಸಿದೆ. ರಕ್ಷಣಾ ಉಪಕರಣಗಳ ಖರೀದಿ ಸಂಬಂಧ ಭಾರತ ಮತ್ತು ರಷ್ಯಾ ನಡುವೆ ಒಪ್ಪಂದ ಏರ್ಪಟ್ಟ 2 ವರ್ಷಗಳ ಬಳಿಕ ಎಸ್-400 ಟ್ರಯಂಫ್ ಮೊದಲ ಸ್ಕ್ವಾಡ್ರನ್ ಪೂರೈಕೆಯಾಗುವ ನಿರೀಕ್ಷೆಯಿದೆ. ಇನ್ನುಳಿದ ಉಪಕರಣಗಳನ್ನು 4-5 ವರ್ಷಗಳ ಅವಧಿಯಲ್ಲಿ ಪೂರೈಕೆ ಮಾಡಲಾಗುತ್ತದೆ. ನಿರ್ಬಂಧ?: ರಷ್ಯಾದಿಂದ ಸುಖೋಯ್ ಯುದ್ಧವಿಮಾನಗಳು ಮತ್ತು ಎಸ್-400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕಾಗಿ ಚೀನಾ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ರಷ್ಯಾದಿಂದ ರಕ್ಷಣಾ ಉಪಕರಣಗಳನ್ನು ಖರೀದಿಸಿದರೆ ಭಾರತದ ಮೇಲೂ ಅಮೆರಿಕ ನಿರ್ಬಂಧ ಹೇರುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚೆಗೆ ಅಮೆರಿಕದೊಂದಿಗೆ ನಡೆದ 2+2 ಸಭೆಯಲ್ಲಿ ಭಾರತ ಈ ವಿಷಯವನ್ನು ಪ್ರಸ್ತಾಪಿಸಿತ್ತು. ಆದರೆ ಅಮೆರಿಕ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.

**ಜ್ಞಾನ ಕಾರಂಜಿ**::: ತಲ್ಲಾಖ್ ತಲ್ಲಾಖ್ ತಲ್ಲಾಖ್

ತ್ರಿವಳಿ ತಲ್ಲಾಖ್ ನಿಷೇಧ ಒಂದು ಕ್ರಾಂತಿಕಾರಿ ಹೆಜ್ಜೆಯೇ ? ಭಾರತದಲ್ಲಿ ಆಚರಿಸಲಾಗುತ್ತಿದ್ದ  ಸತಿ ಸಹಗಮನ - ಬಾಲ್ಯವಿವಾಹ ಮುಂತಾದ ಸಂಪ್ರದಾಯಗಳನ್ನು ನಿಷೇದಿಸಿದಷ್ಟೇ ಮಹತ್ವ ಇದಕ್ಕೂ ಇದೆಯೇ ? ಈ ಪ್ರಶ್ನೆಗೆ ಹೌದು ಎನ್ನುವ ಮುನ್ನ ಒಂದು ವಿಷಯ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳೋಣ.... ಯಾವುದೇ ಜಾತಿ ಧರ್ಮ, ಸಮುದಾಯ, ಪಂಗಡ, ಏನೇ ಇರಲಿ, ಅವರ ನಂಬಿಕೆಗಳು, ಆಚರಣೆಗಳು, ಇತಿಹಾಸ ಏನೇ ಹೇಳಲಿ, ಈ ಕ್ಷಣದಲ್ಲಿ ಮಹಿಳೆಗೆ ಆಕೆಯ ಸ್ವಾಭಾವಿಕ ಹಕ್ಕು ಸ್ವಾತಂತ್ರ್ಯ ಮತ್ತು ಸಮಾನತೆಗೆ ಧಕ್ಕೆ ಉಂಟುಮಾಡುವ ಎಲ್ಲವನ್ನೂ ನಿಷೇಧಿಸಲೇ ಬೇಕು. ದೇವಸ್ಥಾನದ ಪ್ರವೇಶವೂ ಅಷ್ಟೆ ಅಥವಾ ಆಕೆಯನ್ನು ಮದುವೆಯಾಗಿ ಸರಿಯಾದ ಕಾರಣವಿಲ್ಲದೆ ಆಕೆಯ ಭವಿಷ್ಯದ ಬಗ್ಗೆ ಯೋಚಿಸದೆ ಕೇವಲ ಗಂಡಿನ ಏಕಮುಖದ ನಿರ್ಣಯದಂತೆ ಆಕೆಯನ್ನು ತ್ಯಜಿಸುವುದು ತಪ್ಪಾಗುತ್ತದೆ. ಧರ್ಮದ ಮೂಲ ಆಶಯ ಏನೇ ಆಗಿದ್ದರೂ, ಈಗ ಅದರ ದುರುಪಯೋಗ ಆಗುತ್ತಿದ್ದರೆ ಅದನ್ನು ನಿಷೇಧಿಸಲೇಬೇಕು. ಅದೇ ಸಂಧರ್ಭದಲ್ಲಿ ಒಂದು ವೇಳೆ ಹೊಸ ಕಾನೂನಿನಲ್ಲಿ ಪುರುಷ ದ್ವೇಷದ ಅಂಶವಿದ್ದರೆ ಅದನ್ನು ತೆಗೆದುಹಾಕಬೇಕು. ಅಂದರೆ ಗಂಡು ಹೆಣ್ಣು ಇಬ್ಬರಿಗೂ ವಿಚ್ಚೇದನದ ಸಮಾನ ಅವಕಾಶ ಕೊಡಬೇಕು. ಇಲ್ಲಿ ಇನ್ನು ಒಂದು ಜಿಜ್ಞಾಸೆ ಇದೆ. ಪಾಶ್ಚಿಮಾತ್ಯರಂತೆ ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ವಿಚ್ಛೇದನವನ್ನು ಸರಳ ಮತ್ತು ನಾಗರಿಕ ಪ್ರಜ್ಞೆಯ ರೀತಿಯಲ್ಲಿ ರೂಪಿಸಿದರೆ , ಮಹಿಳೆಯರು ಸಂಪ್ರದಾಯಗಳ ಬಂಧನದಿಂದ ಇತ್ತೀಚೆಗೆ ಅಷ್ಟೇ...

**ಜ್ಞಾನ ಕಾರಂಜಿ**::: ಸರ್ಜಿಕಲ್ ದಾಳಿಗೆ 2 ವರ್ಷ,

*ಜ*ಮ್ಮು- ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ 2016 ಸೆ. 18ರಂದು ಪಾಕಿಸ್ತಾನ ಉಗ್ರರು ನಡೆಸಿದ್ದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ್ದ ಐತಿಹಾಸಿಕ ಸರ್ಜಿಕಲ್ ದಾಳಿಗೆ ಈಗ ಎರಡು ವರ್ಷ. ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತಿಳಿಸಿದ ಕಾರ್ಯಾಚರಣೆ ಇದು. ಪಾಕಿಸ್ತಾನ ಸೇನೆಯ ಆಶ್ರಯದಲ್ಲಿ, ನಿರ್ಭಯವಾಗಿ ಉಗ್ರ ಚಟುವಟಿಕೆ ನಡೆಸುತ್ತಿದ್ದ ಭಯೋತ್ಪಾದಕರಿಗೆ ಇದು ಮರ್ವಘಾತ ನೀಡಿತ್ತು. ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಡೆಸಿ, ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡಿತ್ತು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂದಿನ ರಕ್ಷಣಾ ಸಚಿವರಾಗಿದ್ದರು. *ದಾಳಿ ನಡೆದಿದ್ದು ಹೀಗೆ….* 2016 ಸೆ. 28ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೈನಿಕರ ತಂಡ ದಾಳಿಗೆ ಸನ್ನದ್ಧವಾಗಿ ಗಡಿ ಪ್ರದೇಶದತ್ತ ಹೊರಟಿತು. ಕಮಾಂಡೋಗಳು 10 ಗಂಟೆ ನಡೆದು ಗಡಿ ತಲುಪಿದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 3 ಕಿಮೀ ಗಡಿಯೊಳಗೆ ಕ್ರಮಿಸಿದ್ದರು. ಉತ್ತರ ಕಾಶ್ಮೀರದ ನೌಗಾಮ್ ಸೆಕ್ಟರ್ ಮತ್ತು ಪೂಂಛ್ ಜಿಲ್ಲೆಯ ಗಡಿಯ ಮೂಲಕ ತೆರಳಿದ್ದ ಕಮಾಂಡೋಗಳು ತಡರಾತ್ರಿ 1.45ರ ಸುಮಾರಿಗೆ ನಿಗದಿತ ಪ್ರದೇಶ ತಲುಪಿದ್ದರು. ಒಂದೇ ಸಮಯದಲ್ಲಿ 7 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದರು. ಸ್ವೀಡನ್​ನಲ್ಲಿ ವಿನ್ಯಾಸಗೊಳಿಸಿರುವ ಕಾರ್ಲ್ ಗುಸ್ತಾವ್ ರಾಕೆಟ್ ಲಾಂಚರ್ ಬಳಸಿತ್ತು. ಸೆ. 29...

**ಜ್ಞಾನ ಕಾರಂಜಿ**::: ಏಷ್ಯಾಕಪ್​ ಫೈನಲ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ದಾಖಲೆ ವೀರ ಧೋನಿ:

ದುಬೈ: ಕ್ರಿಕೆಟ್​ ರಂಗದಲ್ಲಿ ಅದ್ಭುತ ಸಾಧನೆ ಮಾಡಿರುವ ಭಾರತೀಯ ಕ್ರಿಕೆಟರ್​, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಪಂದ್ಯಗಳನ್ನಾಡಿದರೆ ಸಾಕು ಅವರಿಂದ ಒಂದಿಲ್ಲೊಂದು ದಾಖಲೆ ಸೃಷ್ಟಿಯಾಗುತ್ತದೆ. ಹಾಗೆಯೇ ಫೈನಲ್​ ಪಂದ್ಯದಲ್ಲೂ ಅವರೊಂದು ಸಾಧನೆ ಮಾಡಿ ಮತ್ತಷ್ಟು ಉತ್ತುಂಗಕ್ಕೇರಿದ್ದಾರೆ. ಏಷ್ಯಾಕಪ್​ನ ಈ ಟೂರ್ನಿಯಲ್ಲಂತೂ ಧೋನಿ ಅದಾಗಲೇ ಎರಡು ಸಾಧನೆ ಮಾಡಿದ್ದರು. ಒಂದು, ಭಾರತೀಯ ಕ್ರಿಕೆಟರ್​ಗಳ ಪೈಕಿ ಅತ್ಯಂತ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನಕ್ಕೇರಿದರು. ಮತ್ತೊಂದು ಏಷ್ಯಾಕಪ್​ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್​ ಆಗುವ ಮೂಲಕ 200 ಪಂದ್ಯಗಳಲ್ಲಿ ನಾಯಕನಾದ ಕೀರ್ತಿಗೆ ಪಾತ್ರರಾದರು. ಈಗ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ. ಅದೇನೆಂದರೆ, ಬಾಂಗ್ಲಾದೇಶ ಎದುರಿಗಿನ ಫೈನಲ್​ ಪಂದ್ಯದಲ್ಲಿ ಧೋನಿ ಅವರು 800ನೇ ಸ್ಟಂಪ್​ ಔಟ್​ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಸ್ಟಂಪ್​ ಔಟ್​ ಮಾಡಿದ ಏಷ್ಯಾದ ಮೊದಲ ಕ್ರಿಕೆಟರ್​ ಎಂಬ ಖ್ಯಾತಿಗೆ ಭಾಜನರಾದರು. ಪಂದ್ಯದ 43ನೇ ಓವರ್​ನಲ್ಲಿ ಕುಲದೀಪ್​ ಯಾದವ್​ ಅವರ ಬೌಲಿಂಗ್​ನಲ್ಲಿ ಮಶ್ರಫೆ ಮೊರ್ತಜಾ ಅವರ ಸ್ಟಂಪ್​ ಎಗರಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಕ್ರಿಕೆಟ್​ನ ಮೂರು ಪ್ರಕಾರಗಳಾದ ಟೆಸ್ಟ್​, ಏಕದಿನ, ಟಿ20ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಟಂಪ್​ ಔಟ್​ ಮಾಡಿದ ...

**ಜ್ಞಾನ ಕಾರಂಜಿ**::: ವಿಶ್ವ ಅಥ್ಲೆಟಿಕ್ಸ್​ಗೆ ಪಿಂಕ್ ಟ್ರ್ಯಾಕ್!,

ದೋಹಾ: ಮಧ್ಯಪ್ರಾಚ್ಯದ ಮೊಟ್ಟಮೊದಲ ಐಎಎಎಫ್ ವಿಶ್ವ ಚಾಂಪಿಯನ್​ಷಿಪ್​ಗೆ ಆತಿಥ್ಯ ವಹಿಸಿಕೊಂಡಿರುವ ದೋಹಾ, ಪ್ರತಿಷ್ಠಿತ ಕೂಟಕ್ಕೆ ಸರಿಯಾಗಿ ಒಂದು ವರ್ಷವಿರುವ ಹಂತದಲ್ಲಿ ತನ್ನ ಕ್ರಾಂತಿಕಾರಕ ವ್ಯವಸ್ಥೆಗಳನ್ನು ವಿಶ್ವಕ್ಕೆ ಪರಿಚಯಿಸಿದೆ. ಖಲೀಫಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಗುಲಾಬಿ ಬಣ್ಣದ ಟ್ರ್ಯಾಕ್​ಗಳನ್ನು ಹಾಕಲಾಗಿದ್ದರೆ, ಪೂರ್ಣ ಸ್ಟೇಡಿಯಂಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಅಳವಡಿಸಿದೆ. ಹೊರಾಂಗಣ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ಎಸಿ ವ್ಯವಸ್ಥೆಯನ್ನು ಅಳವಡಿಸಿರುವುದು ಇದೇ ಮೊದಲು. ಕತಾರ್ ದೇಶದ ರಾಜಧಾನಿಯಾಗಿರುವ ದೋಹಾದಲ್ಲಿ ಚಳಿಗಾಲದ ಅವಧಿಯಲ್ಲೂ ವಿಪರೀತ ಬಿಸಿಲಿರುತ್ತದೆ. 2019ರ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 6ರವರೆಗೆ ವಿಶ್ವ ಅಥ್ಲೆಟಿಕ್ಸ್ ನಡೆಯಲಿದ್ದು, ಈ ಹಂತದಲ್ಲಿ ಅಂದಾಜು 37 ಡಿಗ್ರಿ ಬಿಸಿಲು ಇರುತ್ತದೆ. ಆದರೆ, ಹವಾನಿಯಂತ್ರಿತ ವ್ಯವಸ್ಥೆಯಿಂದಾಗಿ ದೋಹಾ ಸ್ಟೇಡಿಯಂನ ಒಳಗಡೆ ಗರಿಷ್ಠ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. 48 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಸ್ಟೇಡಿಯಂಗೆ ಎಸಿ ವ್ಯವಸ್ಥೆ ಹಾಕಿರುವ ಪರಿಣಾಮ ವಾತಾವರಣ ಹಾಗೂ ಗಾಳಿಯ ಮೇಲೆ ಮಾತ್ರವೇ ಆಗಲಿದೆ. ಇದರಿಂದ ಸ್ಪರ್ಧಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಘಟಕರು ಹೇಳಿದ್ದಾರೆ. ಆದರೆ, ಜಾವೆಲಿನ್ ಥ್ರೋ ಸ್ಪರ್ಧೆಯ ವೇಳೆ ಎಸಿ ವ್ಯವಸ್ಥೆ ಸ್ಥಗಿತಗೊಂಡಿರಲಿದೆ. -ಪಿಟಿಐ

**ಜ್ಞಾನ ಕಾರಂಜಿ**::: ಔಷಧೀಯ ಗುಣ ಹೊಂದಿರುವ ‘ಮುಟ್ಟಿದರೆ ಮುನಿ’ ಗಿಡಮೂಲಿಕೆ,

‘ನಾಚಿಕೆಮುಳ್ಳು’ ಎಂದು ಆಡು ಭಾಷೆಯಲ್ಲಿ ಕರೆಯಲ್ಪಡುವ ಗಿಡಮೂಲಿಕೆ ‘ಮುಟ್ಟಿದರೆ ಮುನಿ’. ಇದರ ಔಷಧೀಯ ಗುಣಗಳು ಅನೇಕ. ಈ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ನಮ್ಮ ಆಹಾರದಲ್ಲಿ ಬಳಸಿದರೆ ಅದು ಆರೋಗ್ಯವನ್ನು ಕಾಯ್ದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ. ಮದ್ದಾಗಿ ಬಳಸಿದರೆ ರೋಗಗಳನ್ನು ಗುಣಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಆಹಾರವಾಗಿ ಉಪಯೋಗಿಸಬಹುದಾದ ಬಹಳ ಸುಲಭ ವಿಧಾನ ತಂಬುಳಿ. ತಂಬುಳಿಯನ್ನು ಮಾಡಿ ಅದನ್ನು ಅನ್ನದ ಜೊತೆಯಲ್ಲಿ ಸೇರಿಸಿ ಸೇವಿಸಬಹುದು. ಮುಟ್ಟಿದರೆ ಮುನಿಯ ಸೊಪ್ಪನ್ನು ಮಾತ್ರ ತೆಗೆದುಕೊಂಡು ಅದನ್ನು ತುಪ್ಪದಲ್ಲಿ ಹುರಿಯಬೇಕು. ಹುರಿದ ಹದಿನೈದು ಇಪ್ಪತ್ತು ಎಲೆಗಳನ್ನು ತೆಂಗಿನ ತುರಿಯೊಂದಿಗೆ ಸೇರಿಸಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಜೀರಿಗೆ, ಕಾಳುಮೆಣಸಿನ ಪುಡಿ, ಸಾಸಿವೆಯ ಒಗ್ಗರಣೆ ಹಾಕಿದರೆ ತಂಬುಳಿ ಸಿದ್ಧ. ಬೇಕಾದಲ್ಲಿ ಸ್ವಲ್ಪ ಬೆಲ್ಲ, ಉಪ್ಪು ಸೇರಿಸಿಕೊಳ್ಳಬಹುದು. ಮುಟ್ಟಿದರೆ ಮುನಿಗೆ ಯಾವುದೇ ರೀತಿಯ ಅಡ್ಡ ವಾಸನೆಗಳೂ ಇರುವುದಿಲ್ಲ. ಇದನ್ನು ಆರಾಮವಾಗಿ ಬಳಸಬಹುದು. ಜ್ಯೂಸ್ ಮಾಡಿ ಕುಡಿಯುವುದು ಕೂಡ ಉತ್ತಮ ವಿಧಾನ. ಮುಟ್ಟಿದರೆ ಮುನಿಯ ವೈಶಿಷ್ಟ್ಯ ಏನೆಂದರೆ ನಾವು ಯಾವಾಗ ಅದನ್ನು ಮುಟ್ಟುತ್ತೇವೆಯೋ ಆಗೆಲ್ಲ ಅದು ಮುದುಡಿಕೊಳ್ಳುತ್ತದೆ. ಇದು ನಮಗೆಲ್ಲ ತಿಳಿದಿರುವಂತಹ ಸಂಗತಿ. ಅಂತೆಯೇ ನಮ್ಮ ದೇಹದಲ್ಲಿ ಯಾವ ಯಾವ ಭಾಗದಲ್ಲಿ, ಯಾವ ಯಾವ ತೊಂದರೆಗಳಲ್ಲಿ ಮುದುಡಿಕೊಳ್ಳಬೇಕಾದಂತಹ ಆವಶ್ಯಕ...

**ಜ್ಞಾನ ಕಾರಂಜಿ**::: ರಾಮಮಂದಿರಕ್ಕೆ ದಿಕ್ಸೂಚಿ?,

ಕಳಂಕಿತ ರಾಜಕಾರಣಿಗಳ ಚುನಾವಣೆ ಸ್ಪರ್ಧೆ, ಆಧಾರ್, ಬಡ್ತಿ ಮೀಸಲಾತಿ ಪ್ರಕರಣಗಳ ಗೊಂದಲಗ ಳಿಗೆ ತೆರೆ ಎಳೆದ ಬೆನ್ನಲ್ಲೇ ಸುಪ್ರೀಂಕೋರ್ಟ್ ಗುರುವಾರ ಮತ್ತೊಂದು ಐತಿಹಾಸಿಕ ತೀರ್ಪಿತ್ತಿದೆ. ರಾಮಮಂದಿರ ನಿರ್ವಣಕ್ಕೆ ಪರೋಕ್ಷವಾಗಿ ಸಂಬಂಧಿಸಿದ ಪ್ರಕರಣದ ವಿಚಾರಣೆ ಕಾಯ್ದಿರಿಸಿದ್ದ ನ್ಯಾಯಾಲಯ ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಅಗತ್ಯವಿಲ್ಲ ಎಂದಿದ್ದ 1994ರ ತೀರ್ಪಿನ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವಹಿಸಲು ನಿರಾಕರಿಸಿದೆ. ಹಾಗೆಯೇ ಅಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಅ.29ರಿಂದ ಪ್ರತಿದಿನ ನಡೆಸುವುದಾಗಿ ಸವೋಚ್ಚ ನ್ಯಾಯಾಲಯ ಘೋಷಿಸಿರುವುದು 2019ರ ಲೋಕಸಭೆ ಚುನಾವಣೆಗೆ ಮುನ್ನವೇ ಈ ಪ್ರಕರಣದ ತೀರ್ಪು ಹೊರಬರಬಹುದೆನ್ನುವ ನಿರೀಕ್ಷೆ ಮೂಡಿಸಿದೆ. ಈ ಎರಡು ಬೆಳವಣಿಗೆಗಳು ರಾಮಮಂದಿರ ನಿರ್ವಣಕ್ಕೆ ದಿಕ್ಸೂಚಿಯಂತಿದೆ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ. ಮಂದಿರ ನಿರೀಕ್ಷೆ ಏಕೆ? 2019ರ ಲೋಕಸಭೆ ಚುನಾವಣೆವರೆಗೆ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಬಾರದೆಂದು ಸುನ್ನಿ ವಕ್ಪ್ ಮಂಡಳಿ ಪರ ವಕೀಲ ಕಪಿಲ್ ಸಿಬಲ್ ಮಂಡಿಸಿದ್ದ ವಾದಕ್ಕೆ ಸುಪ್ರೀಂ ಮನ್ನಣೆ ನೀಡದಿರುವುದು ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಲು ಸುಪ್ರೀಂ ತೀರ್ವನಿಸಿರುವುದರಿಂದ ಲೋಕಸಭೆ ಚುನಾವಣೆಗೆ ಮೊದಲೇ ತೀರ್ಪು ಹೊರಬರುವ ವಿಶ್ವಾಸ. ಕೋರ್ಟ್ ಹೇಳಿದ್ದು ಸರ್ಕಾರದಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿ 1994ರ ಆದೇಶ ನೀಡಲಾಗಿದೆ. ಅಯೋಧ್ಯೆ ಭೂ ವಿವ...

**ಜ್ಞಾನ ಕಾರಂಜಿ**::: ವಿವಾಹೇತರ ಸಂಬಂಧ ಕ್ರಿಮಿನಲ್ ಅಪರಾಧವಲ್ಲ,

ಐಪಿಸಿ ಸೆಕ್ಷನ್ 497, ಸಿಆರ್​ಪಿಸಿ ಸೆಕ್ಷನ್ 198(2) ರದ್ದುಗೊಳಿಸಿದ ಸುಪ್ರೀಂ >> ನವದೆಹಲಿ: ವಿವಾಹೇತರ ಸಂಬಂಧ ಹೊಂದುವುದು ಅಪರಾಧ ಎಂಬ 158 ವರ್ಷಗಳ ಹಳೆಯ ಐಪಿಸಿ ಸೆಕ್ಷನ್ 497ನ್ನು (ಅಡಲ್ಟರಿ ಕಾಯ್ದೆ) ಸುಪ್ರೀಂಕೋರ್ಟ್ ಗುರುವಾರ ರದ್ದುಪಡಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಖಾನ್ವಿಲ್ಕರ್, ನ್ಯಾ. ಆರ್.ಎಫ್. ನಾರಿಮನ್, ನ್ಯಾ. ಚಂದ್ರಚೂಡ್ ಹಾಗೂ ನ್ಯಾ. ಇಂದೂ ಮಲ್ಹೊತ್ರಾ ಅವರಿದ್ದ ಪಂಚಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ‘ವಿವಾಹೇತರ ಸಂಬಂಧ ಹೊಂದಲು ಪತ್ನಿಗೆ ಪತಿಯ ಒಪ್ಪಿಗೆ ಅಗತ್ಯ. ಪತ್ನಿ ಪತಿಯ ಸ್ವತ್ತು ಎಂಬ ಐಪಿಸಿ 497 ಮತ್ತು ಸಿಆರ್​ಪಿಸಿಯ ಸೆಕ್ಷನ್ 198 ಎರಡೂ ಕೂಡ ಅಸಾಂವಿಧಾನಿಕ’ ಎಂದಿದೆ. ಸುಪ್ರೀಂ ಹೇಳಿದ್ದೇನು? ವಿವಾಹೇತರ ಸಂಬಂಧ ಕಾಯ್ದೆ ಪ್ರಕಾರ, ಪತಿಯೇ ಒಡೆಯ ಹಾಗೂ ಪತ್ನಿ ಆತನ ಸ್ವತ್ತು ಎನ್ನುತ್ತದೆ. ಇದು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ. ವಿವಾಹೇತರ ಸಂಬಂಧ ಅಪರಾಧವಲ್ಲ. ಆದರೆ ಈ ಕಾರಣಕ್ಕಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾದಲ್ಲಿ ಪತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಬಹುದು. ವಿವಾಹೇತರ ಸಂಬಂಧವನ್ನು ವಿಚ್ಛೇದನ ಪಡೆಯಲು ಪ್ರಮುಖ ಕಾರಣ ಎಂದು ಪರಿಗಣಿಸಲಾಗುವುದು ಸಂತಸರಹಿತ ವೈವಾಹಿಕ ಜೀವನದ ಫಲವಾಗಿ ವಿವಾಹೇತರ ಸಂಬಂಧ ಏರ್ಪಡಬಹುದು. ಚೀನಾ, ಜಪಾನ್, ಆಸ್ಟ್ರೇಲಿಯಾದಲ್ಲಿ ವಿವಾಹೇತರ ಸಂಬಂಧ ಅಪರಾಧವಲ್ಲ. ತಂದೆ ನೀಡಿದ್ದ ತೀರ್...

**ಜ್ಞಾನ ಕಾರಂಜಿ**::: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್​ ಆಯ್ಕೆ,

ಡಿಸೆಂಬರ್​ನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್​ ಕಂಬಾರ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್​ ಘೋಷಿಸಿದ್ದಾರೆ. ಇಂದು ಗದಗ ನಗರದಲ್ಲಿ ನಡೆದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಡಿ.7, 8ರಂದು ನಡೆಯಲಿದೆ ಎಂದು ಸಭೆಯ ನಂತರದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ. ಚಂದ್ರಶೇಖರ್​ ಕಂಬಾರ್​ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದಾರೆ.

**ಜ್ಞಾನ ಕಾರಂಜಿ**::: ಕರುನಾಡು 2,500 ಚಿರತೆಗಳ ಆವಾಸ ಸ್ಥಾನ,

ರಾಜ್ಯದಲ್ಲೇ ಪ್ರಪ್ರಥಮವಾಗಿ ಚಿರತೆಗಳ ಮೇಲೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ ಮೈಸೂರಿನ ನೇಚರ್ ಕನ್ಸರ್ವೆಷನ್ ಫೌಂಡೇಷನ್ ಸುದೀರ್ಘ ಅಧ್ಯಯನ ನಡೆಸಿದ್ದು, ಅದರನ್ವಯ 2,500 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಚಿರತೆ ಸಂಖ್ಯೆಯನ್ನು ರಾಜ್ಯವಾರು ಅಂದಾಜಿಸಿದ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡ ಅಧ್ಯಯನ ನಡೆಸಿದೆ. ಇತ್ತೀಚೆಗೆ ಈ ತಂಡ, ಕ್ಯಾಮೆರಾ ಟ್ರ್ಯಾಪ್​ನಿಂದ ಪಡೆದುಕೊಂಡ 363 ಚಿರತೆಗಳ ಚಿತ್ರಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದೆ. ಅದರ ಆಧಾರದ ಮೇಲೆ ರಾಜ್ಯದ ಚಿರತೆಗಳ ಸಂಖ್ಯೆ ಅಂದಾಜು 2,500 ಎಂದು ಲೆಕ್ಕ ಹಾಕಲಾಗಿದೆ. 2012ರಿಂದ ಅಧ್ಯಯನ: ರಾಜ್ಯಾದ್ಯಂತ ಹಲವು ಪ್ರದೇಶಗಳಲ್ಲಿ ರಕ್ಷಿತಾರಣ್ಯಗಳು, ಕಲ್ಲುಬಂಡೆಗಳ ಗುಡ್ಡಗಳು, ಖಾಸಗಿ ಜಮೀನು ಮತ್ತಿತರ ಚಿರತೆಗಳ ವಾಸಸ್ಥಾನವಿರಬಹುದಾದ ಪ್ರದೇಶಗಳಲ್ಲಿ 2012ರಿಂದ ಈ ಅಧ್ಯಯನ ಕೈಗೊಳ್ಳಲಾಗಿದೆ. ಚಿರತೆಗಳ ಮೇಲೆ ಇಷ್ಟು ದೊಡ್ಡ ಕಾರ್ಯವ್ಯಾಪ್ತಿಯಲ್ಲಿ ಕೈಗೊಂಡ ಅಧ್ಯಯನ ದೇಶದಲ್ಲೇ ಮೊದಲನೆಯದು ಎನ್ನಲಾಗಿದೆ. ಇಲ್ಲಿಯತನಕ ಮಲೆ ಮಹದೇಶ್ವರ, ಕಾವೇರಿ ನದಿಪಾತ್ರ, ಬಿಳಿಗಿರಿರಂಗನ ಬೆಟ್ಟ, ತಿಮ್ಮಲಾಪುರ ವನ್ಯಜೀವಿಧಾಮಗಳು, ಜಯಮಂಗಲಿ ಸಂರಕ್ಷಿತ ಪ್ರದೇಶ, ತುಮಕೂರು, ರಾಮನಗರ, ಮೈಸೂರು, ಬೆಂ. ಗ್ರಾಮಾಂತರ, ಬೆಂಗಳೂರು ನಗರ, ಭದ್ರಾವತಿ, ಬಳ್ಳಾರಿ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ಅಧ್...

**ಜ್ಞಾನ ಕಾರಂಜಿ**::: *ಸರೋವರಗಳು*

*ಬೈಕಲ್ ಲೇಕ್ (ರಶಿಯಾ)* ಪ್ರಪಂಚದ ಅತ್ಯಂತ ಆಳವಾದ ಸರೋವರವಾಗಿದೆ. ಪ್ರಪಂಚದ ಅತಿದೊಡ್ಡ ಮತ್ತು ಅತ್ಯಂತ ಪ್ರಾಚೀನ ಸರೋವರಗಳ ಪೈಕಿ ಒಂದು *ಐರ್ ಸರೋವರ*ಎಂಬುದು ಆಸ್ಟ್ರೇಲಿಯಾದ ಪ್ರಮುಖ ಸರೋವರವಾಗಿದೆ *ಒನಕಲ್* (ಉಗಾಂಡಾ) ಮತ್ತು  *ಆಸ್ವಾನ್* (ಈಜಿಪ್ಟ್) ಗಳು ಮಾನವ ನಿರ್ಮಿತ ಸರೋವರಗಳಾಗಿವೆ. ಟಿಬೆಟಿಯನ್ ಹಿಮಾಲಯದಲ್ಲಿರುವ *ಲೇಕ್ ಟಸ್ಸೊ* ಸೆಕುರು ವಿಶ್ವದ ಅತಿ ಎತ್ತರದ ಕೆರೆಯಾಗಿದೆ. ಬೋಲಿವಿಯಾ ಮತ್ತು ಪೆರುಗಳ ಗಡಿಯಲ್ಲಿರುವ *ಟಿಟಿಕಾಕಾ* ಸರೋವರವು ವಿಶ್ವದ ಅತಿ ಹೆಚ್ಚು ಸಂಚಾರ ಮಾಡುವ ಸರೋವರವ ಭಾರತದ ಅತ್ಯಂತ ಎತ್ತರದ ಕೆರೆ *Devtal* ಸರೋವರ *ವ್ಯಾನ್ ಸರೋವರ* (ಟರ್ಕಿ) ಪ್ರಪಂಚದ ಅತ್ಯಂತ ಉಪ್ಪು ನೀರಿನ ಸರೋವರ *ಕ್ಯಾಸ್ಪಿಯನ್ ಸಮುದ್ರವು ವಿಶ್ವದ ದೊಡ್ಡ ಸರೋವರವಾಗಿದೆ*. ಇದು ಒಂದು ಉಪ್ಪು ನೀರಿನ ಸರೋವರವಾಗಿದೆ. ಉತ್ತರದಿಂದ ಉರಲ್ ಮತ್ತು ವೋಲ್ಗಾ ನದಿಗಳು ಹರಿಯುತ್ತವೆ, ಆದ್ದರಿಂದ ಅದರ ಉತ್ತರದ ಭಾಗವು ಕಡಿಮೆ ಲವಣಯುಕ್ತವಾಗಿದೆ. *ವಿಕ್ಟೋರಿಯಾ ಸರೋವರ*, ಉಗಾಂಡಾ, ತಾಂಜಾನಿಯಾ ಮತ್ತು ಕೀನ್ಯಾ ನಡುವಿನ ಗಡಿಯನ್ನು ರೂಪಿಸುತ್ತದೆ. *ಸುಪೀರಿಯರ್ ಸರೋವರ*ವಿಶ್ವದ ಅತಿದೊಡ್ಡ ತಾಜಾ (ಸಿಹಿ) ನೀರಿನ ಸರೋವರವಾಗಿದೆ. *ಲೋಪ್ ನಾರ್ ಸರೋವರ*. ಚೀನಾದ ಪರಮಾಣು ಪರೀಕ್ಷಾ ಶ್ರೇಣಿಯ ಬಳಿ ಇದೆ. *ಚಾಡ್ ಸರೋವರ*,  ನೈಜೀರಿಯಾ, ಕ್ಯಾಮೂರನ್ ಗಡಿಯನ್ನು ರೂಪಿಸುತ್ತದೆ. *ಗ್ರೇಟ್ ಬೀಯ...

**ಜ್ಞಾನ ಕಾರಂಜಿ**::: ಪ್ರಶ್ಣೋತ್ತರಗಳ ಮಾಲಿಕೆ 5

1) ವರ್ಲ್ಡ್ ಕಪ್ ಪ್ರಶಸ್ತಿ ವಿಜೇತ ಆಸ್ಟ್ರೇಲಿಯಾ ತಂಡದ ಪ್ರಥಮ ನಾಯಕ ಯಾರು? ಉತ್ತರ:- ಅಲನ್ ಬಾರ್ಡರ್ 2) ಪಾಕಿಸ್ತಾನದ ಪ್ರಸ್ತುತ ರಾಷ್ಟ್ರಾಧ್ಯಕ್ಷರು ಯಾರು? ಉತ್ತರ:- ಮಾಮ್ ನೂನ್ ಹುಸ್ಸೇನ್ 3) ವಜ್ರವು ಒಳಗೊಂಡಿರುವ ವಸ್ತು ಯಾವುದು? ಉತ್ತರ:- ಇಂಗಾಲ 4) ಅಪಗರ್ ಸ್ಕೋರ್ (Apgar score) ಪರೀಕ್ಷೆ ಎಂಬುದು? ಉತ್ತರ:- ನವಜಾತ ಶಿಶುಗಳ ಆರೋಗ್ಯದ ಬಗ್ಗೆ ತಿಳಿಸುವುದು 5) ವಿಶ್ವ ಪರಂಪರೆಯ ದಿನವನ್ನು ಎಂದು ಆಚರಿಸಲಾಗುವುದು? ಉತ್ತರ:- 18 ನೇ ಎಪ್ರೀಲ್  6) ಕಪ್ಪು ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ? ಉತ್ತರ:- ಪೆಟ್ರೋಲಿಯಂ 7) BARC ಯ ಪ್ರಸ್ತುತ ನಿರ್ದೇಶಕರು ಯಾರು? ಉತ್ತರ:- ಶೇಖರ್ ಬಸು 8) ದೀಪಾ ಕರ್ಮಾರ್ಕರ್ ಸಂಬಂಧಿಸಿರುವುದು ಯಾವುದಕ್ಕೆ? ಉತ್ತರ:- ಜಿಮ್ನಾಸ್ಟಿಕ್ 9) ಪ್ರಪಂಚದ ಅತಿ ಶಕ್ತಿಯುತವಾದ ನಗರ ಯಾವುದು? ಉತ್ತರ:- ರೇಕ್ ಜಾವಿಕ್  10) ಬೌದ್ಧರ ಗೋಲ್ಡನ್ ಪಗೋಡಾ ದೇವಸ್ಥಾನ ಎಲ್ಲಿ ಕಂಡುಬರುತ್ತದೆ? ಉತ್ತರ:- ಮಯನ್ಮಾರ್ 11) ವಾತಾವರಣದ ಒತ್ತಡವನ್ನು ಅಳೆಯುವ ಮಾನ? ಉತ್ತರ:- ಬಾರೋಮೀಟರ್ 12) ವಿನೇಗರ್ ಏನನ್ನು ಒಳಗೊಂಡಿದೆ? ಉತ್ತರ:- ಅಸಿಟಿಕ್ ಆಸಿಡ್ 13) ಯಾವ ಪ್ರಧಾನಮಂತ್ರಿಯು ಕೆಂಪುಕೋಟೆಯ ಮೇಲೆ ಅತಿ ಹೆಚ್ಚು ಬಾರಿ ಧ್ವಜವನ್ನು ಹಾರಿಸಿದ್ದಾರೆ? ಉತ್ತರ:- ಜವಾಹರಲಾಲ್ ನೆಹರು 14) ಜೀನ್ಸ್ ನ್ನು ಮೊಟ್ಟಮೊದಲು ಮಾರಾಟ ಮಾಡಿದ್ದು? ಲೆವಿಸ್ ಸ್ಟ್ರಾಸ್

**ಜ್ಞಾನ ಕಾರಂಜಿ**::: ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು*

*ಕ್ರ.ಸಂ. - ವರ್ಷ - ಕೃತಿ - bಸಾಹಿತಿ* 1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ 3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ 4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ 5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ 6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ 7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ 8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ 9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್ 10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ 11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ. 12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್ 13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ 14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ 15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ 16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ...

**ಜ್ಞಾನ ಕಾರಂಜಿ**::: *ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು*

1. ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ - ಎಂಪೇಡೋಕಲ್ಸ್ (495-425 ಬಿ.ಸಿ.) 2. ಮೆಡಿಸಿನ್ ತಂದೆ - ಹಿಪ್ಪೊಕ್ರೇಟ್ಸ್ (460-375 ಬಿ.ಸಿ.) 3. ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ - ಅರಿಸ್ಟಾಟಲ್ (384-322 ಬಿ.ಸಿ.) 4. ಬಾಟನಿ ಮತ್ತು ಪರಿಸರವಿಜ್ಞಾನದ ತಂದೆ - ಥಿಯೋಫ್ರಾಸ್ಟಸ್ (370-287 ಬಿ.ಸಿ.) 5. ಅನ್ಯಾಟಮಿಯ ತಂದೆ - ಆಂಡ್ರಿಯಾಸ್ ವೆಸಲಿಯಸ್ (1514 -1564) 6. ತುಲನಾತ್ಮಕ ಅಂಗರಚನಾಶಾಸ್ತ್ರದ ಪಿತಾಮಹ - ಜಾರ್ಜ್ ಕುವಿಯರ್ (1769-1832) 7. ಸೂಕ್ಷ್ಮ ಅಂಗರಚನಾಶಾಸ್ತ್ರದ ತಂದೆ - ಮೊರ್ಸೆಲ್ಲೋ ಮಾಲ್ಪಿಘಿ (1628-1694) 8. ಪ್ಲಾಂಟ್ ಅಂಗರಚನಾಶಾಸ್ತ್ರದ ತಂದೆ - ಎನ್. ಗ್ರೂ (1641-1712) 9. ತಂದೆ / ಹಿಸ್ಟಾಲಜಿ ಸಂಸ್ಥಾಪಕ - ಫ್ರಾಂಕೋಯಿಸ್ ಬಿಚಾಟ್ (1717-1802) 10. ಮೈಕ್ರೋಸ್ಕೋಪಿ ಪಿತಾಮಹ - ಆಂಟನಿ ವಾನ್ ಲೀವೆನ್ಹೋಕ್ (1632-1723) 11. ಸೈಟೋಲಜಿ ತಂದೆ - ರಾಬರ್ಟ್ ಹುಕ್ (1635-1703) 12. ಆಧುನಿಕ ಸೈಟೋಲಜಿ ಪಿತಾಮಹ - ಸ್ವಾನ್ಸನ್ 13. ಜೀವಿವರ್ಗೀಕರಣ ಶಾಸ್ತ್ರ ಮತ್ತು ನಾಮಕರಣದ ಪಿತಾಮಹ - ಕ್ಯಾರೊಲಸ್ ಲಿನ್ನಿಯಸ್ (1707-1778) 14. ಭ್ರೂಣಶಾಸ್ತ್ರದ ಸ್ಥಾಪಕರು - C.F. ವೋಲ್ಫ್ (1738-1794) 15. ಆಧುನಿಕ ಭ್ರೂಣಶಾಸ್ತ್ರದ ತಂದೆ - ವಾನ್ ಬೇರ್ (1792-1876) 16. ಪ್ರತಿರಕ್ಷಾ ಪಿತಾಮಹ - ಎಡ್ವರ್ಡ್ ಜೆನ್ನರ್ (1749-1823) 17. ಎಪಿಡೆಮಿಯಾಲಜಿ ತಂದೆ - ...

**ಜ್ಞಾನ ಕಾರಂಜಿ**::: ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ,

ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ನಾಯಕತ್ವ ಮತ್ತು 2022ರ ಹೊತ್ತಿಗೆ ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತಂತೆ ಪ್ರತಿಜ್ಞೆ ಕೈಗೊಂಡಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವಕ್ಕೆ ಭಾಜನರಾಗಿದ್ದಾರೆ. ಪರಿಸರ ಸ್ವಚ್ಛತೆಗೆ ಗಣನೀಯ ಸೇವೆ ಸಲ್ಲಿಸುವ ಮಹಾನ್‌ ವ್ಯಕ್ತಿಗಳಿಗೆ ಕೊಡಲಾಗುವ ‘ಅರ್ಥ್‌ ಅವಾರ್ಡ್‌ ಚಾಂಪಿಯನ್‌’ ಪ್ರಶಸ್ತಿಗೆ ವಿಶ್ವದ ಅತ್ಯುತ್ತಮ ಪರಿಸರ ಬದಲಾವಣೆದಾರರ ಪೈಕಿ ಆರು ಜನ ಸಾಧಕರನ್ನು ಗುರುತಿಸಲಾಗಿದೆ. ಪರಿಸರದ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ದಿಟ್ಟ, ನಾವೀನ್ಯ ಮತ್ತು ದಣಿವರಿಯದ ಪ್ರಯತ್ನಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿರುವವರನ್ನು ಈ ಪ್ರಶಸ್ತಿಗಳನ್ನು ನೀಡಲು ಈ ವರ್ಷ ಗುರುತಿಸಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಉದ್ಯಮ ಶೀಲತೆ ದೃಷ್ಟಿ ಮತ್ತು ಸಮರ್ಥನೀಯ ಶಕ್ತಿಯ ಬಳಕೆಯಲ್ಲಿ ನಾಯಕತ್ವ ವಹಿಸಿರುವುದಕ್ಕಾಗಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಐಎಸ್​ಎ ಎಂದರೇನು? ಸೌರಶಕ್ತಿ ಬಳಕೆ ಉತ್ತೇಜಿಸುವುದಕ್ಕಾಗಿ ಸ್ಥಾಪಿತವಾಗಿರುವ ಸೌರ ಸಂಪತ್ತು ಹೇರಳವಾಗಿರುವ ರಾಷ್ಟ್ರಗಳ ಒಕ್ಕೂಟವೇ ಇಂಟರ್​ನ್ಯಾಷನಲ್ ಸೋಲಾರ್ ಅಲಯನ್ಸ್ ( International Solar Alliance). ಭಾರತ ಮತ್ತು ಫ್ರಾನ್ಸ್ ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರಗಳು. 2015ರ ನವೆಂಬರ್ 30ರಂದು ಪ್ಯಾರಿಸ್​ನಲ್ಲಿ ಏರ್ಪ...

**ಜ್ಞಾನ ಕಾರಂಜಿ**::: ನೇಪಾಳದ ರಾಯಭಾರಿಯಾಗಿ ಬಾಲಿವುಡ್‌ ತಾರೆ ಜಯಪ್ರದಾ ನೇಮಕ,

ಮಾಜಿ ಸಂಸತ್‌ ಸದ್ಯಸ್ಯೆ ಮತ್ತು ಬಾಲಿವುಡ್‌ ನಟಿ ಜಯಪ್ರದಾ ಅವರನ್ನು ನೇಪಾಳ ಸರ್ಕಾರ ಸೌಹಾರ್ಧದ ರಾಯಭಾರಿಯನ್ನಾಗಿ ನೇಮಿಸಿದೆ. ಜಯಪ್ರದಾ ಅವರನ್ನು ರಾಯಭಾರಿಯನ್ನಾಗಿ ನೇಮಿಸುವ ಪ್ರಸ್ತಾವವನ್ನು ನೇಪಾಳದ ಸಂಸತ್​ನಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು. ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನಗೊಂಡಾಗ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಮತ್ತು ನೇಪಾಳದ ಪ್ರವಾಸೋದ್ಯಮವನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ ಎಂದು ಆಯ್ಕೆಗೂ ಮುನ್ನ ನಿರೀಕ್ಷೆ ಹೊಂದಲಾಗಿತ್ತು. Govt of Nepal's letter to Jaya Prada appointing her Goodwill Ambassador for Tourism & Culture of Nepal to India  @abpnewstv,   @MEAIndia,   @AmarSinghTweets,   pic.twitter.com/gGGoDnRs4O, — Ashish (ABP News) (@AshishSinghLIVE)  September 25, 2018, ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ರಾಯಭಾರಿಯಾಗಿರಲಿದ್ದಾರೆ. ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೇಪಾಳಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ. ನೇಪಾಳ ಪ್ರವಾಸೋದ್ಯಮಕ್ಕೆ ಭಾರತ ಪ್ರಮುಖ ಗ್ರಾಹಕ ರಾಷ್ಟ್ರವಾಗಿದೆ. ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನೇಪಾಳ 2020ರ ವರ್ಷವನ್ನು ‘ವಿಸಿಟ್​ ನೇಪಾಳ ಇಯರ್​’ (ನೇಪಾಳ ಭೇಟಿ ವರ್ಷ) ಎಂ...

**ಜ್ಞಾನ ಕಾರಂಜಿ**::: ಡಿಜಿಟಲ್ ಸ್ಪರ್ಶದ ಟೆಲಿಕಾಂ ನೀತಿ,

ದೇಶದ ದೂರಸಂಪರ್ಕ ವಲಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ-2018 (ಎನ್​ಡಿಸಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ದೂರಸಂಪರ್ಕ ಆಯೋಗಕ್ಕೆ ಡಿಜಿಟಲ್ ಸಂವಹನ ಆಯೋಗ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೂ ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯಿಂದ ದೇಶದ ಸಂವಹನ ವ್ಯವಸ್ಥೆ ಸಶಕ್ತವಾಗಲಿದ್ದು, ಡಿಜಿಟಲ್ ಸಾರ್ವಭೌಮತ್ವ ವೃದ್ಧಿಸಲಿದೆ. ಸಾರ್ವಜನಿಕ, ಉದ್ದಿಮೆ ಮತ್ತು ಸಂಸ್ಥೆಗಳ ಆರ್ಥಿಕ ಮತ್ತು ಸಾಮಾಜಿಕ ಸಂವಹನಗಳು ಉತ್ತಮವಾಗಲಿವೆ. ಡಿಜಿಟಲ್ ಸಂವಹನದ ಮೂಲಸೌಕರ್ಯ ಮತ್ತು ಸೇವೆ ಕೈಗೆಟಕುವ ದರದಲ್ಲಿ ಜನರಿಗೆ ದೊರೆಯಲಿದೆ. ದೇಶದ ಜಿಡಿಪಿಗೆ ದೂರಸಂಪರ್ಕ ವಲಯದ ಕೊಡುಗೆ ಶೇ. 6 ಇದ್ದು ಹೊಸ ನೀತಿಯಿಂದ ಇದು ಶೇ. 8ಕ್ಕೆ ಏರಲಿದೆ ಎಂದು ಸರ್ಕಾರ ದೂರಸಂಪರ್ಕ ಸಚಿವಾಲಯ ತಿಳಿಸಿದೆ. -ಪಿಟಿಐ ಹೊಸ ನೀತಿ ಗ್ರಾಹಕ ಕೇಂದ್ರೀಕೃತ ಮತ್ತು ಅಪ್ಲಿಕೇಷನ್ ಚಾಲಿತವಾಗಿದೆ. ದೇಶದ ಸಂವಹನ ವ್ಯವಸ್ಥೆ ಜಾಗತಿಕ ಮಟ್ಟಕ್ಕೆ ಏರಲಿದೆ. 5ಜಿ ಅಂತರ್ಜಾಲ ಸೇವೆ, ಯಂತ್ರದಿಂದ ಯಂತ್ರದ ಸಂವಹನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಲಿದೆ. | ಮನೋಜ್ ಸಿನ್ಹಾ, ದೂರಸಂಪರ್ಕ ಸಚಿವ ಟೆಲಿಕಾಂ ಹೊಸ ನೀತಿ ವಿಶೇಷ ಉತ್ತಮ ಸಂಪರ್ಕ, ಸುರಕ್ಷಿತ ಭಾರತ 50 ಎಂಬಿಪಿಎಸ್ ವೇಗದಲ್ಲಿ ಸರ್ವರಿಗೂ ಬ್ರಾಂಡ್​ಬ್ಯಾಂಡ್ ಸಂಪರ್ಕ ಎಲ್ಲ ಗ್ರಾಪಂಗಳಿಗೆ 1 ಜಿಬಿಪಿಎಸ್ ಅಂತರ್ಜಾಲ ಬ್ರಾಂಡ್​...

**ಜ್ಞಾನ ಕಾರಂಜಿ**::: 59 ನಿಮಿಷಕ್ಕೆ 1 ಕೋಟಿ ರೂ. ಸಾಲ!,

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ (ಎಂಎಸ್​ಎಂಇ) ಇನ್ನು 1 ಕೋಟಿ ರೂ.ವರೆಗಿನ ಸಾಲ ಸುಲಭವಾಗಿ ಮತ್ತು ವೇಗವಾಗಿ ದೊರೆಯಲಿದೆ. ದಾಖಲೆಗಳು ಸಮರ್ಪಕವಾಗಿದ್ದರೆ 59 ನಿಮಿಷಗಳಲ್ಲಿ ಸಾಲ ಮಂಜೂರಾಗಲಿದೆ. ಸಾಲ ನೀಡಿಕೆಯ ಪೋರ್ಟಲ್​ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಚಾಲನೆ ನೀಡಿದ್ದಾರೆ. ಸಾಲದ ಅರ್ಜಿಯನ್ನು ಅಗತ್ಯ ದಾಖಲೆಗಳ ಸಾಫ್ಟ್ ಕಾಪಿ ಜತೆಗೆ ಆನ್​ಲೈನ್ ಮೂಲಕ ಸಲ್ಲಿಸಬೇಕು. ಇದನ್ನು ಏಕಗವಾಕ್ಷಿ ಪದ್ಧತಿ ಅನ್ವಯ ಒಂದೇ ವೇದಿಕೆಯಲ್ಲಿ ಕಾರ್ಪೆರೇಟ್ ಸಚಿವಾಲಯ ಮತ್ತು ಸಾಲ ಮಾಹಿತಿ ಬ್ಯೂರೊಗಳು ಪರಿಶೀಲಿಸಲಿವೆ. ವಂಚನೆ ಉದ್ದೇಶ ಮತ್ತು ಉದ್ದಿಮೆ ತಯಾರಿಸುವ ವಸ್ತುವಿನ ಬಗ್ಗೆ ಕೂಲಂಕಷವಾಗಿ ಪರಾಮರ್ಶೆ ನಡೆಸಲಿವೆ. ನಂತರ ಈ ಅರ್ಜಿಯನ್ನು ಸಂಬಂಧಿಸಿದ ಬ್ಯಾಂಕ್​ಗೆ ಕಳುಹಿಸಲಾಗುತ್ತದೆ. ಏನು ದಾಖಲೆ ಬೇಕು? ಜಿಎಸ್​ಟಿ ಪಾವತಿ, ಆದಾಯ ತೆರಿಗೆ ಸಲ್ಲಿಕೆ ವಿವರ, ಬ್ಯಾಂಕ್ ಖಾತೆಯ ಮಾಹಿತಿಯನ್ನು ಉದ್ದಿಮೆಗಳು ಸಲ್ಲಿಸಬೇಕು. ಈ ದಾಖಲೆಗಳು ಸಮರ್ಪಕವಾಗಿದ್ದು, ಪರಿಶೀಲನಾ ವರದಿಯಲ್ಲಿ ಯಾವುದೇ ಋಣಾತ್ಮಕ ಅಂಶ ಇರದಿದ್ದರೆ ಅರ್ಜಿ ಸಲ್ಲಿಸಿದ 8 ದಿನಗಳಲ್ಲಿ ಸಾಲ ಬಿಡುಗಡೆ ಆಗಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಪೋರ್ಟಲ್ ಅಭಿವೃದ್ಧಿ ಈ ಪೋರ್ಟಲ್​ನ್ನು ಎಸ್​ಬಿಐ, ಪಿಎನ್​ಬಿ, ಬ್ಯಾಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ವಿಜಯಾ ಬ್ಯಾಂಕ್​ಗಳ ಸಹಯೋಗದಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾ...

**ಜ್ಞಾನ ಕಾರಂಜಿ**::: ಪರಿಶಿಷ್ಟರಿಗೂ ಸಾಮಾನ್ಯ ನ್ಯಾಯ!,

ಕೆ.ರಾಘವ ಶರ್ಮ ನವದೆಹಲಿ: 1992ರ ಇಂದ್ರಾ ಸಾವ್ನಿ ಮತ್ತು 2006 ಎಂ.ನಾಗರಾಜು ತೀರ್ಪಿನಲ್ಲಿ ದಾಖಲಿಸಲಾಗಿ ರುವ ಕೆನೆಪದರ ತತ್ವವು ಇತರ ಹಿಂದುಳಿದ ವರ್ಗಗಳಂತೆ ಎಸ್ಸಿ-ಎಸ್ಟಿ ಸಮುದಾಯಗಳ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕು ಎಂದು ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಈ ಸಮುದಾಯಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲು ನೀಡಿಕೆ ಕಡ್ಡಾಯವೇನಲ್ಲ. ಅದು ಸರ್ಕಾರಗಳ ವಿವೇಚನೆಗೆ ಬಿಟ್ಟದ್ದು ಎಂದೂ ಸ್ಪಷ್ಟಪಡಿಸಿದೆ. ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಎಂ.ನಾಗರಾಜು ಪ್ರಕರಣದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ, ಬೇರೆ ಸಮುದಾಯಗಳ ಜನರಂತೆಯೇ ಪರಿಶಿಷ್ಟರೂ ನೆಮ್ಮದಿಯ ಜೀವನ ಸಾಗಿಸಬೇಕು ಎಂಬ ಏಕಮೇವ ಉದ್ದೇಶದಿಂದ ಮೀಸಲಾತಿಗೆ ಆದ್ಯತೆ ನೀಡಲಾಯಿತು. ಹಾಗೆಂದ ಮಾತ್ರಕ್ಕೆ ‘ಹಿಂದುಳಿದಿರುವಿಕೆಯಿಂದ ಹೊರಬಂದ’ ಪರಿಶಿಷ್ಟ ನೌಕರರಿಗೆ ಮತ್ತೆ ಮತ್ತೆ ಮೀಸಲಾತಿ ನೀಡುವುದು ಸ್ವಾಗತಾರ್ಹ ಎನಿಸುವುದಿಲ್ಲ. ಇದರಿಂದ ಅರ್ಹರು ಅವಕಾಶ ವಂಚಿತರಾಗುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಬಡ್ತಿ ಮೀಸಲಾತಿ ನೀತಿ ಅನುಷ್ಠಾನ ವೇಳೆ ಕೆನೆಪದರ ತತ್ವವನ್ನು ಅಳವಡಿಸಿಕೊಳ್ಳುವುದೆ ಸೂಕ್ತ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ. ಎಂ.ನಾಗರಾಜು ಪ್ರಕರಣವನ್ನು 7 ಸದಸ್ಯರ ಪೀಠಕ್ಕೆ ವರ್ಗಾಯಿಸಬೇಕು ಎಂಬ ಕೇಂದ್ರ ಸರ್ಕಾ...

**ಜ್ಞಾನ ಕಾರಂಜಿ**::: ಆಧಾರ್​ಗೆ ಸಾಂವಿಧಾನಿಕ ಸಿಂಧುತ್ವ,

ಭಾರತದ ನ್ಯಾಯಾಂಗ ಇತಿಹಾಸದ ಪುಟಗಳಲ್ಲಿ ಬುಧವಾರ ದಾಖಲೆ ದಿನವಾಗಿ ಸೇರ್ಪಡೆಯಾಯಿತು. ಆಧಾರ್ ಕಾರ್ಡ್​ನ ಸಿಂಧುತ್ವ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಸುಪ್ರೀಂಕೋರ್ಟ್, ಆಧಾರ್​ನ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದ್ದು ಒಂದೆಡೆಯಾದರೆ ಎಸ್​ಸಿ, ಎಸ್​ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಷರತ್ತುಬದ್ಧ ಸಮ್ಮತಿ ನೀಡುವ ಮೂಲಕ ಮತ್ತೊಂದು ಜಿಜ್ಞಾಸೆಗೂ ತೆರೆ ಎಳೆಯಿತು. ಮತ್ತೊಂದೆಡೆ ಸಾಂವಿಧಾನಿಕ ಮಹತ್ವ ಪಡೆದಿರುವ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರಕ್ಕೆ ಸಮ್ಮತಿಸುವ ಐತಿಹಾಸಿಕ ನಿರ್ಧಾರ ಪ್ರಕಟಿಸಿತು. ಒಂದು ದೇಶ, ಒಂದೇ ಆಧಾರ ಕೇಂದ್ರ ಸರ್ಕಾರ ದೇಶದ ಹಿತಾಸಕ್ತಿ ಉದ್ದೇಶದಿಂದ ಸಂಗ್ರಹಿಸುವ ಮಾಹಿತಿಗಳು ಖಾಸಗಿತನದ ಉಲ್ಲಂಘನೆ ಆಗದೆಂದು ಸ್ಪಷ್ಟಪಡಿಸುವ ಮೂಲಕ ಸುಪ್ರೀಂಕೋರ್ಟ್ ಬುಧವಾರ ಆಧಾರ್ ಕಾರ್ಡ್​ನ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1 ಬಹುಮತದಲ್ಲಿ ಆಧಾರ್ ಕಾಯ್ದೆಯನ್ನು ಸಿಂಧುಗೊಳಿಸಿತು. ಆಧಾರ್ ಯೋಜನೆಯನ್ನು ದೇಶಕ್ಕೆ ಪರಿಚಯಿಸಿದ್ದ ಹಳೆಯ ಪಕ್ಷವೇ ಅದರಿಂದಾಗುವ ಲಾಭ ತಿಳಿದುಕೊಂಡಿಲ್ಲ. ಆಧಾರ್​ನಿಂದ ಪ್ರತಿವರ್ಷ 90 ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ. ಸುಪ್ರೀಂಕೋರ್ಟ್ ಆದೇಶ ಐತಿಹಾಸಿಕ. | ಅರುಣ್ ಜೇಟ್ಲಿ, ಕೇಂದ್ರ ವಿತ್ತ ಸಚಿವ ಸುಪ್ರೀಂ ತೀರ್ಪೆನು? ಆಧಾರ್ ಮಾಹಿತಿಗಳ ಸಂರಕ್ಷಣೆಗಾಗಿ ಕೇಂದ್ರ ಶೀಘ್ರ ಕ...

**ಜ್ಞಾನ ಕಾರಂಜಿ**::: ಚಿಕ್ಕದೇವರಾಜ ಒಡೆಯರ್ ಬಗ್ಗೆ ತಿಳಿದುಕೊಳ್ಳಿ,

(1763-1704) • ಚಿಕ್ಕದೇವರಾಯ ಒಡೆಯರ್ ಅವರು ಮೈಸೂರು ದೊರೆಗಳಲ್ಲಿ ಪ್ರಮುಖರು. • ಇವರು ‘ನವಕೋಟಿ ನಾರಾಯಣ’ ಎಂಬ ಬಿರುದು ಪಡೆದಿದ್ದರು. ಅವರಿಗೆ ನವಕೋಟಿ ನಾರಾಯಣ ಎನ್ನುವ ಬಿರುದು ಬರಲು ಕಾರಣ ಅವರು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿ ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ಖಜಾನೆಯಲ್ಲಿ ಒಂಬತ್ತು ಕೋಟಿ ಧನ ಕನಕಗಳನ್ನು ಸಂಗ್ರಹಿಸಿದರು. • ಇವರು “ ಕರ್ನಾಟಕ ಚಕ್ರವರ್ತಿ” ಎನ್ನುವ ಬಿರುದು ಕೂಡ ಹೊಂದಿದ್ದರು. • ಆಡಳಿತವನ್ನು ಸುವ್ಯವಸ್ಥೆಗೊಳಿಸಲು ಚಿಕ್ಕದೇವರಾಜ ಒಡೆಯರು “ ಅಠಾರ ಕಛೇರಿಯನ್ನು ಸ್ಥಾಪನೆ” ಮಾಡಿದರು.ಇದರಲ್ಲಿ 18 ಆಡಳಿತ ಶಾಖೆಗಳಿದ್ದವು. • ಇವರು ಪತ್ರವ್ಯವಹಾರದ ಖಾಯಂ ವ್ಯವಸ್ಥೆಗಾಗಿ ‘ ಅಂಚೆ ವ್ಯವಸ್ಥೆ’ಯನ್ನು ಪ್ರಾರಂಭಿಸಿದ್ದರು. • ಮೊಘಲ ದೊರೆ ಔರಂಗಜೇಬ್‍ನ ಗೆಳತನ ಬೆಳೆಸಿ ಅವರು ಬೆಂಗಳೂರನ್ನು ಗುತ್ತಿಗೆ ಪಡೆದರು. • ಚಿಕ್ಕದೇವರಾಜ ಒಡೆಯರ್ ಅವರು’ ಚಿಕ್ಕದೇವೃಆಜನಾಲೆ ಮತ್ತು’ದೊಡ್ಡದೇವರಾಜ ನಾಲೆ’ ಎಂಬ ಎರಡು ಕಾಳುವೆಗಳನ್ನು ನಿರ್ಮಿಸಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಿದರು. • ಚಿಕ್ಕದೇವರಾಜ ಒಡೆಯರ್ ಅವರು ಕಲೆ ಮತ್ತು ಸಾಹಿತ್ಯದ ಪೋಷಕರಾಗಿದ್ದರು. ಸ್ವತ: ಕವಿಯಾಗಿದ್ದು ‘ಮೇಲುಕೋಟೆ ಚೆಲುವನಾರಾಯಣ’ ಸ್ವಾಮಿಯ ಕುರಿತು “ಚಿಕ್ಕದೇವರಾಜ ಬಿನ್ನಪಂ’ ಎಂಬ ಕೃತಿಯನ್ನು ರಚಿಸಿದರು. ಸಿಂಗಾರಾಯ್ಯ, ಚಿಕ್ಕುಪಾಧ್ಯಾಯ, ಮತ್ತು ಸಂಚಿಯ ಹೊನ್ನಮ್ಮ ಇವರ ಆಸ್ಥಾನದ ಕವಿಗಳಾಗಿದ್ದರು. • ಚಿಕ್ಕದೇವರಾಜ ಒಡೆಯರ್ ಅವರು ತಾ...

**ಜ್ಞಾನ ಕಾರಂಜಿ**::: ಭಾರತಪರ ಸೊಲಿಹ್​ಗೆ ಜಯ,

ಕೊಲೊಂಬೊ: ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಬೆಂಬಲಿತ ಅಬ್ದುಲ್ಲಾ ಯಮೀನ್ ಸೋಲು ಅನುಭವಿಸಿದ್ದು, ಭಾರತದ ಪರ ಒಲವು ಹೊಂದಿರುವ ಮೊಹಮದ್ ಸೊಲಿಹ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದೊಂದು ವರ್ಷದಿಂದ ಈ ದ್ವೀಪ ರಾಷ್ಟ್ರದಲ್ಲಿ ಭಾರತ ಹಾಗೂ ಚೀನಾ ಮೇಲುಗೈ ಕುರಿತು ಆಂತರಿಕ ಕಲಹ ನಡೆಯುತ್ತಿತ್ತು. ನಿರ್ಗಮಿತ ಅಧ್ಯಕ್ಷ ಅಬ್ದುಲ್ಲಾ ಯಮೀನ್​ರ ಭಾರತ ವಿರೋಧಿ ನೀತಿಗಳ ಮಧ್ಯೆ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಯಮೀನ್ ಆಡಳಿತಾವಧಿ ನ.17ಕ್ಕೆ ಮುಗಿಯಲಿದೆ. ಸೋಮವಾರ ಅಧಿಕೃತ ಫಲಿತಾಂಶ ಪ್ರಕಟವಾಗಿದ್ದು, ಮೊಹಮದ್​ಗೆ 1,34,616 ಮತ ಬಂದರೆ, ಅಬ್ದುಲ್ಲಾ 96,132 ಮತಗಳಿಸಿದ್ದಾರೆ. ಮತಗಳಿಕೆಯಲ್ಲಿ ಶೇ.58.33 ಮತಗಳನ್ನು ನೂತನ ಅಧ್ಯಕ್ಷ ಮೊಹಮದ್ ಪಡೆದಿದ್ದಾರೆ ಎಂದು ಅಧಿಕೃತವಾಗಿ ಚುನಾವಣೆ ಆಯೋಗ ಘೋಷಿಸಿದೆ. ಶೇ.89 ಮತದಾನವಾಗಿದ್ದ ಮಾಲ್ಡೀವ್ಸ್ ಚುನಾವಣೆಯಲ್ಲಿ ಅಬ್ದುಲ್ಲಾ ಸರ್ಕಾರವು ತೀವ್ರ ಚುನಾವಣೆ ಅಕ್ರಮ ನಡೆಸಿತ್ತು ಎಂದು ಅಂತಾರಾಷ್ಟ್ರೀಯ ತಜ್ಞರು ವರದಿ ಮಾಡಿದ್ದರು. ಅಂತಾರಾಷ್ಟ್ರೀಯ ವೀಕ್ಷಕರಿಗೂ ವೀಸಾ ನೀಡಿರಲಿಲ್ಲ. ಮೂರು ದಶಕಗಳ ಕಾಲ ಮಾಲ್ಡೀವ್ಸ್​ನಲ್ಲಿ ಸರ್ವಾಧಿಕಾರ ನಡೆಸಿದ್ದ ಕುಟುಂಬದ ಸದಸ್ಯ ಅಬ್ದುಲ್ಲಾ ಯಮೀನ್, ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ಹಾಗೂ ಪ್ರತಿಪಕ್ಷಗಳ ಮೇಲೆ ನಿರ್ಬಂಧ ಹೇರಿದ್ದರು. ಪ್ರತಿಪಕ್ಷಗಳ ಚುನಾವಣೆ ಪ್ರಚಾರದ ಸುದ್ದಿಗಳನ್ನು ಪ್ರಕಟಿಸಲು ಕೂಡ ಅವಕಾಶ ನೀಡಿರಲಿಲ್ಲ. ಆದರೆ ಮ...

**ಜ್ಞಾನ ಕಾರಂಜಿ**::: ವರ್ಜೀನಿಯಾಲ್ಲಿ ಪತ್ತೆಯಾಯ್ತು ಎರಡು ತಲೆಯ ವಿಷಕಾರಿ ಹಾವು;

ಯಾವ ತಲೆ ಹೇಗೆ ವರ್ತಿಸುತ್ತಿದೆ ಗೊತ್ತೇ?, ವಾಷಿಂಗ್ಟನ್​: ಹಲವು ತಲೆಗಳ ಹಾವುಗಳನ್ನು ಭಾರತೀಯ ಪುರಾಣಗಳಲ್ಲಿ ಕೇಳಿದ್ದೇವೆಯೇ ಹೊರತು ನೋಡಿದ್ದು ವಿರಳ. ಆದರೆ, ಆಂಥ ಹಾವುಗಳು ವಾಸ್ತವದಲ್ಲಿಯೂ ಇವೆ ಎಂಬುದು ಈಗ ಗೊತ್ತಾಗಿದೆ. ವರ್ಜೀನಿಯಾದಲ್ಲಿ ಸಿಕ್ಕ ಎರಡು ತಲೆಯ ಹಾವು ಈಗ ಜಗತ್ತಿನ ಅಚ್ಚರಿಗೆ ಕಾರಣವಾಗಿದೆ. ಕಾಪರ್​ಹೆಡ್​ ಎಂಬ ಅತ್ಯಂತ ವಿಷಕಾರಿ ಪ್ರಬೇಧಕ್ಕೆ ಸೇರಿದ ಹಾವಿನಲ್ಲಿ ಇಂಥ ವಿಸ್ಮಯ ಕಂಡು ಬಂದಿದ್ದು, ಎರಡು ವಾರಗಳ ಹಿಂದೆ ವರ್ಜೀನಿಯಾದಲ್ಲಿ ಪತ್ತೆಯಾಗಿದೆ. ಪರಿಸರ ತಜ್ಞ ಜೆಡಿ ಕ್ಲಿಯೋಫರ್​ ಅವರು ಅದರ ಚಿತ್ರಗಳನ್ನು, ವಿಡಿಯೋಗಳನ್ನು ಫೇಸ್​ಬುಕ್​ನಲ್ಲಿ ಪ್ರಕಟಿಸಿದ್ದಾರೆ. ವಿರಳಾತಿ ವಿರಳ ಎನ್ನಬಹುದಾದ ಈ ವಿಚಿತ್ರ ಹಾವನ್ನು ಸದ್ಯ ಜೀವ ತಳಿ ತಜ್ಞರು ಅಧ್ಯಯನಕ್ಕಾಗಿ ಕೊಂಡೊಯ್ದಿದ್ದಾರೆ. ಇದಕ್ಕೂ ಮೊದಲು ದೇಹರಚನಾ ತಜ್ಞರು ಈ ಹಾವನ್ನು ಅಧ್ಯಯನ ಮಾಡಿದ್ದರು. ಅದರಂತೆ, ಈ ಹಾವಿನ ಎಡ ತಲೆಯಲ್ಲಿ ಅನ್ನನಾಳದ ವ್ಯವಸ್ಥೆ ಹೆಚ್ಚು ಅಭಿವೃದ್ಧಿ ಹೊಂದಿದೆ. ಆದರೆ, ಬಲ ತಲೆಯಲ್ಲಿ ಗಂಟಲಿನ ರಚನೆ ಅತ್ಯುತ್ತಮವಾಗಿದ್ದು, ಆಹಾರ ಸೇವಿಸಲು ಶಕ್ತವಾಗಿದೆ. ಹೀಗಾಗಿ ಒಂದು ತಲೆ ಆಹಾರ ಸೇವಿಸುವ ಕಾರ್ಯವನ್ನು ಮಾಡಿದರೆ, ಇನ್ನೊಂದು ತಲೆ ಆಹಾರವನ್ನು ದೇಹಕ್ಕೆ ರವಾನಿಸುವ ಕೆಲಸ ಮಾಡುತ್ತಿದೆ. ಆಹಾರ ಸೇವಿಸಲು ಬಲ ತಲೆ ಯೋಗ್ಯವಾಗಿದ್ದರೂ, ದೇಹದ ಮೇಲೆ ಎಡ ತಲೆ ಪ್ರಾಬಲ್ಯ ಪಡೆದುಕೊಂಡಿದೆ. ಈ ಸಂಗತಿ ತಜ್ಞರ ಅಚ್ಚರಿಗೂ ಕಾರಣವಾಗಿದೆ. (function(d, s,...

**ಜ್ಞಾನ ಕಾರಂಜಿ**::: 2019ರಲ್ಲಿ ಇಂಟರ್​ನೆಟ್ 100 ಜಿಬಿಪಿಎಸ್ ವೇಗ,

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕಪ್ರಕಾರ ಇಂಟರ್​ನೆಟ್ ವೇಗ ದೊರೆಯುವಂತೆ ಮಾಡಲು ನಾಲ್ಕು ಉಪಗ್ರಹಗಳ (ಹೈ- ಥ್ರೂಪುಟ್) ಮೇಲೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಭಾರಿ ನಿರೀಕ್ಷೆ ಇರಿಸಿದೆ. ಈಗಾಗಲೇ ಒಂದು ಉಪಗ್ರಹ ಉಡಾವಣೆ ಯಶಸ್ವಿಯಾಗಿದ್ದ ಡಿಸೆಂಬರ್​ನಲ್ಲಿ ಬಾಕಿ ಮೂರು ಉಪಗ್ರಹಗಳನ್ನು ನಿಗದಿತ ಕಕ್ಷೆ ಸೇರಲಿದೆ. ಈ ಉಪಗ್ರಹಗಳ ಸಹಾಯದಿಂದ 2019ರ ಅಂತ್ಯದೊಳಗೆ ಭಾರತದಲ್ಲಿ ಇಂಟರ್​ನೆಟ್ ಬಳಕೆದಾರರಿಗೆ ಪ್ರತಿ ಸೆಕೆಂಡ್​ಗೆ 100 ಗಿಗಾಬಿಟ್ಸ್ ವೇಗವನ್ನು ನೀಡಬಹುದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ಕಳೆದ ಜೂನ್​ನಲ್ಲಿ ಜಿಸ್ಯಾಟ್-19 ಉಡಾವಣೆ ಯಶಸ್ವಿಯಾಗಿದೆ. ನವೆಂಬರ್​ನಲ್ಲಿ ಜಿಸ್ಯಾಟ್ -29, ಡಿಸೆಂಬರ್​ನಲ್ಲಿ ಜಿಸ್ಯಾಟ್-11, ಜಿಸ್ಯಾಟ್ -20 ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಇದುವರೆಗೂ ಇಸ್ರೋದಿಂದ ನಿರ್ವಣವಾಗಿರುವ ಉಪಗ್ರಹಗಳ ಪೈಕಿ ಅತೀ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಯ ಜಿಸ್ಯಾಟ್-11, 14 ಗಿಗಾಬೈಟ್ಸ್ ಡಾಟಾ ರೇಟ್ ಒದಗಿಸಲಿದೆ. 5.7 ಟನ್ ತೂಕದ ಉಪಗ್ರಹವಿದು.

**ಜ್ಞಾನ ಕಾರಂಜಿ**::: ಸಿಕ್ಕಿಂಗೆ ಸಿಕ್ತು ಏರ್​ಪೋರ್ಟ್​

ಗಾಂಗ್ಟಕ್: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಿಕ್ಕಿಂ ರಾಜಧಾನಿ ಗಾಂಗ್ಟಕ್ ಬಳಿಯ ಪಾಕ್ಯೊಂಗ್ ಗ್ರಾಮದಲ್ಲಿ ‘ಗ್ರೀನ್​ಫೀಲ್ಡ್ ವಿಮಾನನಿಲ್ದಾಣ’ವನ್ನು ಉದ್ಘಾಟಿಸಿದರು. ಈ ಮೂಲಕ ದೇಶದ 100ನೇ ಏರ್​ಪೋರ್ಟ್ ಕಾರ್ಯನಿರ್ವಹಿಸಲು ಸಿದ್ಧಗೊಂಡಿದೆ. ಸಿಕ್ಕಿಂಗೆ ಇದು ಮೊದಲನೇ ಏರ್​ಪೋರ್ಟ್ ಆಗಿದೆ. ಬಳಿಕ ಮಾತನಾಡಿದ ಪ್ರಧಾನಿ, ‘ಸಿಕ್ಕಿಂಗೆ ಇಂದು ಐತಿಹಾಸಿಕ ದಿನ. ಸ್ವಾತಂತ್ರ್ಯ ಸಿಕ್ಕಾಗಿನಿಂದ 2014ರವರೆಗೆ ದೇಶದಲ್ಲಿ ಕೇವಲ 65 ಏರ್​ಪೋರ್ಟ್​ಗಳಿದ್ದವು. ಆದರೆ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಕಳೆದ 4 ವರ್ಷಗಳಲ್ಲಿ ದೇಶಾದ್ಯಂತ 35 ಹೆಚ್ಚುವರಿ ಏರ್​ಪೋರ್ಟ್ ಗಳನ್ನು ನಿರ್ವಿುಸಿದೆ. ಇದು ನಮ್ಮ ಅಬಿವೃದ್ಧಿಯ ಉತ್ಸಾಹಕ್ಕೆ ಸಾಕ್ಷಿ’ ಎಂದು ಪರೋಕ್ಷವಾಗಿ ವಿಪಕ್ಷಗಳಿಗೆ ಕುಟುಕಿದರು. ಇಂಡೋ- ಚೀನಾ ಗಡಿಯಿಂದ ಕೇವಲ 60 ಕಿ.ಮೀ ದೂರದಲ್ಲಿ ಗ್ರೀನ್​ಫೀಲ್ಡ್ ಏರ್​ಪೋರ್ಟ್ ಇದೆ. ಹಾಗಾಗಿ ಭಾರತೀಯ ವಾಯುಪಡೆಯ ಯುದ್ಧವಿಮಾನಗಳನ್ನು ಲ್ಯಾಂಡ್ ಮಾಡಲು ಕೂಡ ಏರ್ ಪೋರ್ಟ್ ಪ್ರಮುಖ ಕೇಂದ್ರವಾಗಲಿದೆ. ಕಠಿಣ ಸವಾಲೊಡ್ಡಿದ ಸಿಕ್ಕಿಂ ಏರ್​ಪೋರ್ಟ್ ಬೆಂಗಳೂರು: ಗಾಂಗ್ಟಕ್ ವಿಮಾನ ನಿಲ್ದಾಣ ನಿರ್ಮಾಣ ನಮಗೆ ಸವಾಲಿನ ಕೆಲಸವಾಗಿತ್ತು. ಅಲ್ಲಿನ ಭೌಗೋಳಿಕ ಸನ್ನಿವೇಶಗಳಿಂದ ನಿರ್ಮಾಣ ಕಾರ್ಯ ಹೆಚ್ಚಿನ ಅವಧಿ ತೆಗೆದುಕೊಂಡಿತ್ತು. ಮುಂದೆ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಏರ್​ಪೋರ್ಟ್​ಗೆ ಸರ್ಕಾರ ಚಾಲನೆ ನೀಡಿದರೆ ಉತ್ತಮ ಎಂದು ಏರ್​ಪೋರ್ಟ್ ನಿರ್ದೇಶ...

**ಜ್ಞಾನ ಕಾರಂಜಿ**::: ಆಹಾರ ಉತ್ಪಾದನೆಗೆ ಬರ,

ಅತಿವೃಷ್ಟಿ, ಅನಾವೃಷ್ಟಿಯಿಂದ ಅಪಾರ ಬೆಳೆಹಾನಿ >> | ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು: ರಾಜ್ಯದ ಕೆಲ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದರೆ, ಇನ್ನಿತರೆಡೆ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿದ್ದು, ಆಹಾರ ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಕುಸಿತವಾಗುವ ಆತಂಕ ಎದುರಾಗಿದೆ. ಪ್ರಸಕ್ತ ವರ್ಷ ಬರೋಬ್ಬರಿ 14.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಮುಂಗಾರಿನಲ್ಲಿ 74.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇರಿಸಲಾಗಿತ್ತು. ಇದರಲ್ಲಿ 63.65 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಅನಾವೃಷ್ಟಿಗೆ 14.40 ಲಕ್ಷ ಹೆಕ್ಟೇರ್ ಹಾಗೂ ಅತಿವೃಷ್ಟಿಗೆ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮಾಸಾಂತ್ಯಕ್ಕೆ ಬೆಳೆ ಹಾನಿ ಕುರಿತ ಸಮಗ್ರ ವರದಿ ಸಿದ್ಧವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಹುಸಿಯಾದ ನಿರೀಕ್ಷೆ ಏಪ್ರಿಲ್-ಮೇ ತಿಂಗಳಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಸುರಿದ ಕಾರಣ ಮುಂಗಾರು ಬಿತ್ತನೆ ಚುರುಕಾಗಿತ್ತು. ಅಂದಾಜು 100 ಲಕ್ಷ ಟನ್ ಆಹಾರ ಉತ್ಪಾದನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅನಾವೃಷ್ಟಿಯಿಂದಾಗಿ ಬಹುತೇಕ ಬೆಳೆ ಹಾನಿಯಾಗಿವೆ. ಇದು ಉತ್ಪಾದನೆ ಮೇಲೆ ಪರಿಣಾಮ ಬ...

**ಜ್ಞಾನ ಕಾರಂಜಿ**::: ಹಳೇ ಮೈಸೂರು ಪ್ರವಾಸೋದ್ಯಮಕ್ಕೆ ಯದುವೀರ ಒಡೆಯರ್​ ರಾಯಭಾರಿ,

ಮೈಸೂರು: ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹಳೇ ಮೈಸೂರು ಭಾಗದ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಹಳೇ ಮೈಸೂರು ಭಾಗವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ ನಡೆಸಿದ್ದು ಬ್ರಾಂಡ್​ ಅಂಬಾಸಿಡರ್​ ಆಗುವಂತೆ ಸಚಿವ ಸಾ.ರಾ.ಮಹೇಶ್​ ಅವರು ಯದುವೀರ ಒಡೆಯರ್​ಗೆ ಮನವಿ ಮಾಡಿದ್ದರು. ಸಚಿವರ ಮನವಿಗೆ ಒಪ್ಪಿಗೆ ನೀಡಿದ ಯದುವೀರ ಒಡೆಯರ್​ ರಾಯಾಭಾರಿಯಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

**ಜ್ಞಾನ ಕಾರಂಜಿ**::: ಉತ್ತಮ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?,

ಡಾ ಬಿ. ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುವುದಲ್ಲ, ನಿಮ್ಮ ಮನೆವೈದ್ಯರ (ಫ್ಯಾಮಿಲಿ ಡಾಕ್ಟರ್) ಬಳಿಗೆ ಹೋಗಬೇಕು. ಅದು ಬಹಳ ಮುಖ್ಯ. ಏನು ಕಾಯಿಲೆ ಎಂದು ಕಂಡುಕೊಂಡ ನಂತರ ಬೇಕಾದರೆ ಆಸ್ಪತ್ರೆಗೆ ಹೋಗಬಹುದು. ತೊಂದರೆಯಿಲ್ಲ. ಮುಂದೆ ಏನು ಮಾಡಬೇಕು ಎಂದು ಆಸ್ಪತ್ರೆಯಲ್ಲಿ ಹೇಳುತ್ತಾರೆ. ಏಕೆಂದರೆ ಎಷ್ಟೋ ಆಸ್ಪತ್ರೆಗಳಲ್ಲಿ ಏನು ಕಾಯಿಲೆ ಎಂದು ಕಂಡುಹಿಡಿಯುವುದಿಲ್ಲ. ಅವರು ನೇರವಾಗಿ ಟೆಸ್ಟ್ ಮಾಡುವುದಕ್ಕೇ ಪ್ರಾರಂಭಿಸಿಬಿಡುತ್ತಾರೆ. ನನಗೆ ಈಗಲೂ ನೆನಪಿದೆ. ನಾವು ಚಿಕ್ಕವರಿದ್ದಾಗ ಈ ದೊಡ್ಡ ದೊಡ್ಡ ಆಸ್ಪತ್ರೆಗಳು, ಕಾರ್ಪೆರೇಟ್ ಆಸ್ಪತ್ರೆಗಳು ಇರಲಿಲ್ಲ. ಆದರೆ ಆರಂಭದಲ್ಲಿ ಒಬ್ಬ ಮದ್ರಾಸ್​ನಲ್ಲಿ ಒಂದು ದೊಡ್ಡ ಆಸ್ಪತ್ರೆಯನ್ನು ಪ್ರಾರಂಭಿಸಿದ. ಅವನು ಅಮೆರಿಕಕ್ಕೆ ಹೋಗಿಬಂದವನಾಗಿದ್ದ. ಅಮೆರಿಕದ ಮಾದರಿಯನ್ನೇ ಇಲ್ಲಿ ಅಳವಡಿಸಲು ಒಂದು ಆಸ್ಪತ್ರೆಯನ್ನು ಸ್ಥಾಪಿಸಿದ. ಒಂದು ದಿನ ಅವನು ನಮ್ಮ ಒಬ್ಬ ಪ್ರೊಫೆಸರರ ಬಳಿ ಬಂದು, ‘ನಾನು ಒಂದು ಆಸ್ಪತ್ರೆಯನ್ನು ಸ್ಥಾಪನೆ ಮಾಡಿದ್ದೇನೆ. ನಿಮ್ಮ ಪೇಷಂಟ್​ಗಳು ಯಾರಾದರೂ ಇದ್ದರೆ ಅಡ್ಮಿಟ್ ಮಾಡಿ’ ಎಂದ. ಒಂದು ದಿನ ಅವರು ಪೇಷಂಟ್ ಒಬ್ಬರನ್ನು ಸೇರಿಸಿದರು. ಅವರು ಹೀಗೆ ಬರೆದಿದ್ದರು; ‘ಈ ಪೇಷಂಟನ್ನು ನಾನು ನೋಡಿದ್ದೇನೆ. ಇಂತಿಂಥ ಕಾಯಿಲೆ ಇದೆ. ಇಲ್ಲಿ ಸೂಚಿಸಿದ ಎರಡು ಟೆಸ್ಟ್​ಗಳನ್ನು ಮಾಡಿ’. ಹೀಗೆ ಬರೆದುಕೊಟ್ಟ ಅವರು ಮರುದಿನ ಪೇಷಂಟ್ ನೋಡಲು ಆಸ್...

**ಜ್ಞಾನ ಕಾರಂಜಿ**::: ಇನ್ಶೂರೆನ್ಸ್ ಪ್ರೀಮಿಯಂ ಯಾವಾಗ ದುಬಾರಿಯಾಗುತ್ತೆ ಗೊತ್ತಾ?,

ಸಿ.ಎಸ್. ಸುಧೀರ್ # ನನಗೆ 37 ವರ್ಷ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಒಂದು ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ನಿರ್ಧರಿಸಿದ್ದೇನೆ. ಪಾಲಿಸಿಗಳ ಬಗ್ಗೆ ವಿಚಾರಿಸಿದಾಗ ಪ್ರೀಮಿಯಂ ಸ್ವಲ್ಪ ಹೆಚ್ಚಿಗೆ ಇದೆ ಅನಿಸಿತು. ನನ್ನ ವಯಸ್ಸಿನ ವ್ಯಕ್ತಿಗೆ ಸಾಮಾನ್ಯವಾಗಿ ಪ್ರೀಮಿಯಂ ಎಷ್ಟಿರಬಹುದು? ನಾನು ವಾರ್ಷಿಕವಾಗಿ 18 ಲಕ್ಷ ರೂ. ಸಂಬಳ ಪಡೆಯುತ್ತಿದ್ದು, ಇಬ್ಬರು ಅವಲಂಬಿತರಿದ್ದಾರೆ. ದಯವಿಟ್ಟು ಸೂಕ್ತ ಮಾಹಿತಿ ನೀಡಿ. – ಪ್ರಶಾಂತ್, ಬೆಂಗಳೂರು ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಯ ವಯಸ್ಸು ಮತ್ತು ಎಷ್ಟು ಅವಧಿಗೆ ಇನ್ಶೂರೆನ್ಸ್ ಪಡೆಯಲಾಗುತ್ತಿದೆ ಎನ್ನುವುದರ ಮೇಲೆ ಪ್ರೀಮಿಯಂ ನಿಗದಿಯಾಗುತ್ತದೆ. ಸಾಮಾನ್ಯವಾಗಿ ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿಗೆ ವಯಸ್ಸಾಗಿದ್ದು, ಹೆಚ್ಚು ಅವಧಿಗೆ ಇನ್ಶೂರೆನ್ಸ್ ಪಡೆಯುತ್ತಿದ್ದರೆ ಪ್ರೀಮಿಯಂ ದುಬಾರಿಯಾಗುತ್ತದೆ. ಇದರ ಜತೆಗೆ, ಇನ್ಶೂರೆನ್ಸ್ ಪಡೆದುಕೊಳ್ಳುವ ವ್ಯಕ್ತಿ ಧೂಮಪಾನ ಮಾಡುತ್ತಿದ್ದರೂ ಪ್ರೀಮಿಯಂ ಜಾಸ್ತಿಯಾಗುತ್ತದೆ. ಇನ್ಶೂರೆನ್ಸ್ ಪ್ರೀಮಿಯಂ ದುಬಾರಿ ಅನಿಸುತ್ತಿದೆ ಎಂದು ಹೇಳುವುದನ್ನು ನೋಡಿದಾಗ ಹೂಡಿಕೆ ಆಧಾರಿತ ಲೈಫ್ ಇನ್ಶೂರೆನ್ಸ್ ಖರೀದಿಗೆ ನೀವು ಚಿಂತನೆ ಮಾಡುತ್ತಿದ್ದೀರಿ ಎನಿಸುತ್ತದೆ. ಸಾಮಾನ್ಯವಾಗಿ ಹೂಡಿಕೆ ಆಧಾರಿತ ಮನಿ ಬ್ಯಾಕ್ ಪಾಲಿಸಿಗಳಲ್ಲಿ ಇನ್ಶೂರೆನ್ಸ್ ಮೊತ್ತದ ಜತೆಗೆ ಹೂಡಿಕೆಯ ಮೊತ್ತವೂ ಸೇರಿರುವುದರಿಂದ ಪ್ರೀಮಿಯಂ ಹೆಚ್ಚಿಗ...