*ಜ*ಮ್ಮು- ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ 2016 ಸೆ.
18ರಂದು ಪಾಕಿಸ್ತಾನ ಉಗ್ರರು ನಡೆಸಿದ್ದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಪಾಕ್
ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ್ದ ಐತಿಹಾಸಿಕ ಸರ್ಜಿಕಲ್ ದಾಳಿಗೆ ಈಗ
ಎರಡು ವರ್ಷ. ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತಿಳಿಸಿದ
ಕಾರ್ಯಾಚರಣೆ ಇದು. ಪಾಕಿಸ್ತಾನ ಸೇನೆಯ ಆಶ್ರಯದಲ್ಲಿ, ನಿರ್ಭಯವಾಗಿ ಉಗ್ರ ಚಟುವಟಿಕೆ
ನಡೆಸುತ್ತಿದ್ದ ಭಯೋತ್ಪಾದಕರಿಗೆ ಇದು ಮರ್ವಘಾತ ನೀಡಿತ್ತು. ಅತ್ಯಂತ ಅಪಾಯಕಾರಿ
ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಡೆಸಿ, ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡಿತ್ತು.
ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂದಿನ ರಕ್ಷಣಾ ಸಚಿವರಾಗಿದ್ದರು.
*ದಾಳಿ ನಡೆದಿದ್ದು ಹೀಗೆ….*
2016 ಸೆ. 28ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೈನಿಕರ ತಂಡ ದಾಳಿಗೆ ಸನ್ನದ್ಧವಾಗಿ ಗಡಿ
ಪ್ರದೇಶದತ್ತ ಹೊರಟಿತು. ಕಮಾಂಡೋಗಳು 10 ಗಂಟೆ ನಡೆದು ಗಡಿ ತಲುಪಿದರು. ಪಾಕ್ ಆಕ್ರಮಿತ
ಕಾಶ್ಮೀರದಲ್ಲಿ 3 ಕಿಮೀ ಗಡಿಯೊಳಗೆ ಕ್ರಮಿಸಿದ್ದರು. ಉತ್ತರ ಕಾಶ್ಮೀರದ ನೌಗಾಮ್ ಸೆಕ್ಟರ್
ಮತ್ತು ಪೂಂಛ್ ಜಿಲ್ಲೆಯ ಗಡಿಯ ಮೂಲಕ ತೆರಳಿದ್ದ ಕಮಾಂಡೋಗಳು ತಡರಾತ್ರಿ 1.45ರ ಸುಮಾರಿಗೆ
ನಿಗದಿತ ಪ್ರದೇಶ ತಲುಪಿದ್ದರು. ಒಂದೇ ಸಮಯದಲ್ಲಿ 7 ಉಗ್ರ ನೆಲೆಗಳ ಮೇಲೆ ದಾಳಿ
ನಡೆಸಿದ್ದರು. ಸ್ವೀಡನ್ನಲ್ಲಿ ವಿನ್ಯಾಸಗೊಳಿಸಿರುವ ಕಾರ್ಲ್ ಗುಸ್ತಾವ್ ರಾಕೆಟ್ ಲಾಂಚರ್
ಬಳಸಿತ್ತು. ಸೆ. 29ರ ಸೂರ್ಯೋದಯಕ್ಕೂ ಮೊದಲು ಕಮಾಂಡೋಗಳು ಶಿಬಿರಕ್ಕೆ ಮರಳಿದ್ದರು.
ಬೆಳಗ್ಗೆ 5 ಗಂಟೆಯ ಹೊತ್ತಿಗೆ ಸೇನೆಯ ಮೂರೂ ವಿಭಾಗದ ಮುಖ್ಯಸ್ಥರು ರಕ್ಷಣಾ ಸಚಿವ ಮನೋಹರ
ಪರಿಕ್ಕರ್ರನ್ನು ಭೇಟಿ ಮಾಡಿದರು.
*ಪರಾಕ್ರಮ ಪರ್ವ*
ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ) ಕಾರ್ಯಾಚರಣೆಗೆ ಎರಡು ವರ್ಷ ಪೂರ್ಣಗೊಂಡ
ಹಿನ್ನೆಲೆಯಲ್ಲಿ ಸೇನೆ ಆಯೋಜಿಸಿರುವ ‘ ಪರಾಕ್ರಮ ಪರ್ವ’ ಪ್ರದರ್ಶನಕ್ಕೆ ಜೋಧಪುರದಲ್ಲಿ
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಸೇನಾ ನೆಲೆಯಲ್ಲಿನ ಬ್ಯಾಟಲ್ ಆಕ್ಸ್
ಮೈದಾನದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕೋರುವ ಸಂದೇಶಕ್ಕೆ ಪ್ರಧಾನಿ ಸಹಿ
ಹಾಕಿದರು. ಕೊನಾರ್ಕ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತೀಯ ರಕ್ಷಣಾ
ಪಡೆಯ ಮೂರೂ ವಿಭಾಗದ ಮುಖ್ಯಸ್ಥರು, ರಕ್ಷಣಾ ಸಚಿವರು ಪ್ರಧಾನಿ ನೇತೃತ್ವದಲ್ಲಿ ಕಂಬೈನ್ಡ್
ಕಮಾಂಡರ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
*ಮತ್ತೊಂದು ದಾಳಿಗೂ ಸಿದ್ಧ*
2016 ಅ.5ರಂದು ರಕ್ಷಣಾ ವಿಚಾರಗಳ ಸಂಸದೀಯ ಸ್ಥಾಯಿ ಸಮಿತಿಗೆ ಸೇನಾ ಮುಖ್ಯಸ್ಥ ಬಿಪಿನ್
ರಾವತ್ ಸರ್ಜಿಕಲ್ ದಾಳಿ ನಡೆದ ಬಗ್ಗೆ ಮಾಹಿತಿ ನೀಡಿದರು. ಗಡಿ ನಿಯಂತ್ರಣ ರೇಖೆಯಲ್ಲಿ
ಜಮಾವಣೆಗೊಂಡಿದ್ದ ಉಗ್ರರು, ಗುಪ್ತಚರ ವರದಿ, ಕಾರ್ಯಾಚರಣೆ ರೂಪುರೇಷೆ ಮತ್ತು ದಾಳಿಯಿಂದ
ಪಾಕ್ಗೆ ಸಂಭವಿಸಿದ ನಷ್ಟದ ಬಗ್ಗೆ ವಿವರಿಸಿದರು. ಅಗತ್ಯಬಿದ್ದರೆ ಮತ್ತೆ ಸರ್ಜಿಕಲ್ ದಾಳಿಗೆ
ಸೇನೆ ಸಿದ್ಧ ಎಂದು ರಾವತ್ ಹೇಳಿದ್ದರು.
*ದಾಳಿ ನಡೆದಿದ್ದ ಪ್ರದೇಶ*
ಪಾಕ್ನ ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮಗಳಾದ ಭಿಂಬೆರ್, ಕೆಲ್, ಲಿಪಾ ಸೆಕ್ಟರ್
*ದಾಳಿ ಪರಿಣಾಮ*
38 ಉಗ್ರರು, ಇಬ್ಬರು ಪಾಕಿಸ್ತಾನ ಯೋಧರು ಹತ
*ರಾಜಕೀಯ ಕೆಸರೆರಚಾಟ*
ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ ಸೇನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸರ್ಜಿಕಲ್
ದಾಳಿ ನಡೆಸಿದ್ದಕ್ಕೆ ಸಾಕ್ಷ್ಯ ನೀಡಿ ಎಂದು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಆರೋಪ
ಮಾಡಿದ್ದವು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಕೆಲ ತಿಂಗಳ ಬಳಿಕ ಕೇಂದ್ರ
ಸರ್ಕಾರ ದಾಳಿಯ ವಿಡಿಯೋ ಬಿಡುಗಡೆ ಮಾಡಿ, ಗೊಂದಲ ನಿವಾರಣೆ ಮಾಡಿತ್ತು.
18ರಂದು ಪಾಕಿಸ್ತಾನ ಉಗ್ರರು ನಡೆಸಿದ್ದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಪಾಕ್
ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ್ದ ಐತಿಹಾಸಿಕ ಸರ್ಜಿಕಲ್ ದಾಳಿಗೆ ಈಗ
ಎರಡು ವರ್ಷ. ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತಿಳಿಸಿದ
ಕಾರ್ಯಾಚರಣೆ ಇದು. ಪಾಕಿಸ್ತಾನ ಸೇನೆಯ ಆಶ್ರಯದಲ್ಲಿ, ನಿರ್ಭಯವಾಗಿ ಉಗ್ರ ಚಟುವಟಿಕೆ
ನಡೆಸುತ್ತಿದ್ದ ಭಯೋತ್ಪಾದಕರಿಗೆ ಇದು ಮರ್ವಘಾತ ನೀಡಿತ್ತು. ಅತ್ಯಂತ ಅಪಾಯಕಾರಿ
ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಡೆಸಿ, ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡಿತ್ತು.
ಗೋವಾ ಸಿಎಂ ಮನೋಹರ್ ಪರಿಕ್ಕರ್ ಅಂದಿನ ರಕ್ಷಣಾ ಸಚಿವರಾಗಿದ್ದರು.
*ದಾಳಿ ನಡೆದಿದ್ದು ಹೀಗೆ….*
2016 ಸೆ. 28ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೈನಿಕರ ತಂಡ ದಾಳಿಗೆ ಸನ್ನದ್ಧವಾಗಿ ಗಡಿ
ಪ್ರದೇಶದತ್ತ ಹೊರಟಿತು. ಕಮಾಂಡೋಗಳು 10 ಗಂಟೆ ನಡೆದು ಗಡಿ ತಲುಪಿದರು. ಪಾಕ್ ಆಕ್ರಮಿತ
ಕಾಶ್ಮೀರದಲ್ಲಿ 3 ಕಿಮೀ ಗಡಿಯೊಳಗೆ ಕ್ರಮಿಸಿದ್ದರು. ಉತ್ತರ ಕಾಶ್ಮೀರದ ನೌಗಾಮ್ ಸೆಕ್ಟರ್
ಮತ್ತು ಪೂಂಛ್ ಜಿಲ್ಲೆಯ ಗಡಿಯ ಮೂಲಕ ತೆರಳಿದ್ದ ಕಮಾಂಡೋಗಳು ತಡರಾತ್ರಿ 1.45ರ ಸುಮಾರಿಗೆ
ನಿಗದಿತ ಪ್ರದೇಶ ತಲುಪಿದ್ದರು. ಒಂದೇ ಸಮಯದಲ್ಲಿ 7 ಉಗ್ರ ನೆಲೆಗಳ ಮೇಲೆ ದಾಳಿ
ನಡೆಸಿದ್ದರು. ಸ್ವೀಡನ್ನಲ್ಲಿ ವಿನ್ಯಾಸಗೊಳಿಸಿರುವ ಕಾರ್ಲ್ ಗುಸ್ತಾವ್ ರಾಕೆಟ್ ಲಾಂಚರ್
ಬಳಸಿತ್ತು. ಸೆ. 29ರ ಸೂರ್ಯೋದಯಕ್ಕೂ ಮೊದಲು ಕಮಾಂಡೋಗಳು ಶಿಬಿರಕ್ಕೆ ಮರಳಿದ್ದರು.
ಬೆಳಗ್ಗೆ 5 ಗಂಟೆಯ ಹೊತ್ತಿಗೆ ಸೇನೆಯ ಮೂರೂ ವಿಭಾಗದ ಮುಖ್ಯಸ್ಥರು ರಕ್ಷಣಾ ಸಚಿವ ಮನೋಹರ
ಪರಿಕ್ಕರ್ರನ್ನು ಭೇಟಿ ಮಾಡಿದರು.
*ಪರಾಕ್ರಮ ಪರ್ವ*
ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ) ಕಾರ್ಯಾಚರಣೆಗೆ ಎರಡು ವರ್ಷ ಪೂರ್ಣಗೊಂಡ
ಹಿನ್ನೆಲೆಯಲ್ಲಿ ಸೇನೆ ಆಯೋಜಿಸಿರುವ ‘ ಪರಾಕ್ರಮ ಪರ್ವ’ ಪ್ರದರ್ಶನಕ್ಕೆ ಜೋಧಪುರದಲ್ಲಿ
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಸೇನಾ ನೆಲೆಯಲ್ಲಿನ ಬ್ಯಾಟಲ್ ಆಕ್ಸ್
ಮೈದಾನದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕೋರುವ ಸಂದೇಶಕ್ಕೆ ಪ್ರಧಾನಿ ಸಹಿ
ಹಾಕಿದರು. ಕೊನಾರ್ಕ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತೀಯ ರಕ್ಷಣಾ
ಪಡೆಯ ಮೂರೂ ವಿಭಾಗದ ಮುಖ್ಯಸ್ಥರು, ರಕ್ಷಣಾ ಸಚಿವರು ಪ್ರಧಾನಿ ನೇತೃತ್ವದಲ್ಲಿ ಕಂಬೈನ್ಡ್
ಕಮಾಂಡರ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
*ಮತ್ತೊಂದು ದಾಳಿಗೂ ಸಿದ್ಧ*
2016 ಅ.5ರಂದು ರಕ್ಷಣಾ ವಿಚಾರಗಳ ಸಂಸದೀಯ ಸ್ಥಾಯಿ ಸಮಿತಿಗೆ ಸೇನಾ ಮುಖ್ಯಸ್ಥ ಬಿಪಿನ್
ರಾವತ್ ಸರ್ಜಿಕಲ್ ದಾಳಿ ನಡೆದ ಬಗ್ಗೆ ಮಾಹಿತಿ ನೀಡಿದರು. ಗಡಿ ನಿಯಂತ್ರಣ ರೇಖೆಯಲ್ಲಿ
ಜಮಾವಣೆಗೊಂಡಿದ್ದ ಉಗ್ರರು, ಗುಪ್ತಚರ ವರದಿ, ಕಾರ್ಯಾಚರಣೆ ರೂಪುರೇಷೆ ಮತ್ತು ದಾಳಿಯಿಂದ
ಪಾಕ್ಗೆ ಸಂಭವಿಸಿದ ನಷ್ಟದ ಬಗ್ಗೆ ವಿವರಿಸಿದರು. ಅಗತ್ಯಬಿದ್ದರೆ ಮತ್ತೆ ಸರ್ಜಿಕಲ್ ದಾಳಿಗೆ
ಸೇನೆ ಸಿದ್ಧ ಎಂದು ರಾವತ್ ಹೇಳಿದ್ದರು.
*ದಾಳಿ ನಡೆದಿದ್ದ ಪ್ರದೇಶ*
ಪಾಕ್ನ ಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮಗಳಾದ ಭಿಂಬೆರ್, ಕೆಲ್, ಲಿಪಾ ಸೆಕ್ಟರ್
*ದಾಳಿ ಪರಿಣಾಮ*
38 ಉಗ್ರರು, ಇಬ್ಬರು ಪಾಕಿಸ್ತಾನ ಯೋಧರು ಹತ
*ರಾಜಕೀಯ ಕೆಸರೆರಚಾಟ*
ಕೇಂದ್ರ ಸರ್ಕಾರ ಪ್ರಚಾರಕ್ಕಾಗಿ ಸೇನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸರ್ಜಿಕಲ್
ದಾಳಿ ನಡೆಸಿದ್ದಕ್ಕೆ ಸಾಕ್ಷ್ಯ ನೀಡಿ ಎಂದು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಆರೋಪ
ಮಾಡಿದ್ದವು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಕೆಲ ತಿಂಗಳ ಬಳಿಕ ಕೇಂದ್ರ
ಸರ್ಕಾರ ದಾಳಿಯ ವಿಡಿಯೋ ಬಿಡುಗಡೆ ಮಾಡಿ, ಗೊಂದಲ ನಿವಾರಣೆ ಮಾಡಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ