ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಾಂಜಾದ ಅದ್ಬುತ ಬಾಟಲ್ ಹೌಸ್ by ನಡೆ-ನುಡಿ – ಕೆ.ವಿ.ಶಶಿದರ.

ಗಾಂಜಾದ ಬಾಟಲ್ ಹೌಸ್ Bottle house ಪ್ರವಾಸಿಗರನ್ನು ವಿಸ್ಮಯಗೊಳಿಸುವ ಅನೇಕ ಆಕರ‍್ಶಣೆಗಳನ್ನು ಅಜರ್ ಬೈಜಾನ್ ದೇಶ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಇಂತಹ ನೂರಾರು ವಿಸ್ಮಯಗಳಲ್ಲಿ ಅಜರ್ ಬೈಜಾನ್‍ನ ಗಾಂಜಾ ನಗರದಲ್ಲಿರುವ ಬಾಟಲ್ ಹೌಸ್ ಕೂಡ ಒಂದು. ಇದು ಪೂರ‍್ಣವಾಗಿ ಗಾಜಿನ ಬಾಟಲ್‍ಗಳಿಂದ ಕಟ್ಟಲಾದ ಕಟ್ಟಡ. ಇದರ ರೂವಾರಿ ಸ್ತಳೀಯ ವಾಸ್ತು ಶಿಲ್ಪಿ ಇಬ್ರಾಹಿಂ ಜಪರೋವ್. ಸುಮಾರು 48,000 ಬಾಟಲ್‍ಗಳನ್ನು ಬಳಸಿ ಈ ಮನೆ ಕಟ್ಟಲಾಗಿದೆ ಇಬ್ರಾಹಿಂ ಜಪರೋವ್ ಎರಡನೇ ಮಾಹಾಯುದ್ದದಲ್ಲಿ ಕಾಣೆಯಾದ ತನ್ನ ಕಿರಿಯ ಸಹೋದರ ಹಾಗೂ ಇತರರ ಸವಿನೆನಪಿಗಾಗಿ ಈ ಮನೆ ಕಟ್ಟಿರುವುದು ವಿಶೇಶ. ಈ ಮನೆ ಕಟ್ಟಲು ಆತ ಬಳಕೆ ಮಾಡಿಕೊಂಡಿದ್ದು ಒಟ್ಟಾರೆ 48,000 ಗಾಜಿನ ಬಾಟಲ್‍ಗಳನ್ನು. ವಿಶೇಶವಾದ ದ್ರಾವಣವೊಂದನ್ನು ಬಳಸಿ ಅಲ್ಲಾಡದಂತೆ ಬಾಟಲ್‍ಗಳನ್ನು ಒಂದರ ಮೇಲೊಂದು ಹಾಗೂ ಒಂದರ ಪಕ್ಕ ಒಂದು ಇಬ್ರಾಹಿಂ ಜೋಡಿಸಿದ. ಇಟ್ಟಿಗೆಯಂತೆ ಒಂದೇ ದಪ್ಪ ಮತ್ತು ಎತ್ತರದ ಗಾಜಿನ ಬಾಟಲ್‍ಗಳು ಸಿಗುವುದು ಕಶ್ಟ. ಆತನಿಗೆ ದೊರೆತ ವಿವಿದ ಸುತ್ತಳತೆ, ಉದ್ದ, ದಪ್ಪ ಹಾಗೂ ಬಣ್ಣದ ಬಾಟಲ್‍ಗಳನ್ನು, ಚಾಕಚಕ್ಯತೆಯಿಂದ ಮನೆ ಕಟ್ಟಲು ಬಳಸಿಕೊಂಡ. ಇದರ ಜೊತೆಗೆ ಒಡೆದ ಕನ್ನಡಿಯ ಚೂರು, ಗಾಜು, ಹರಳು, ಮೊಸಾಯಿಕ್ ತುಣುಕುಗಳು ಎಲ್ಲವನ್ನೂ ಆತ ಉಪಯೋಗಿಸಿಕೊಂಡ. ತನ್ನ ಕನಸಿನ ಮನೆ ಒಳ ಹೊಕ್ಕರೆ ಮೋಡಿಯಾಗುವಂತಹ ವಾತವರಣ ಸ್ರುಶ್ಟಿಯಾಗಬೇಕೆಂದು ಇಬ್ರಾಹಿಂ ಬಯಸಿದ್ದ. ಬಾಟಲ್ ಹೌಸ್ Bottle house ಮನೆಯ...

**ಜ್ಞಾನ ಕಾರಂಜಿ**::: ಚಿಲ್ಲರೆ ವ್ಯಾಪಾರ ರಾಷ್ಟ್ರೀಯ ನೀತಿ

ಚಿಲ್ಲರೆ ವ್ಯಾಪಾರವು ವ್ಯವಸ್ಥಿತ ರೀತಿಯಲ್ಲಿ ತ್ವರಿತ ಬೆಳವಣಿಗೆ ದಾಖಲಿಸುವ ಉದ್ದೇಶದಿಂದ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ. ಈ ಸಂಬಂಧ ಕಾರ್ಯಪಡೆ ರಚಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಗ್ರಾಹಕ ವ್ಯವಹಾರ ಸಚಿವಾಲಯದ ಗಮನ ಸೆಳೆದಿದೆ. ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಅವರು, ಗ್ರಾಹಕ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರಿಗೆ ಪತ್ರ ಬರೆದಿದ್ದಾರೆ. ಕಾರ್ಯಪಡೆಯಲ್ಲಿ  ವಿವಿಧ ಭಾಗಿದಾರರಿಗೆ ಪ್ರಾತಿನಿಧ್ಯ ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಚಿಲ್ಲರೆ (ರಿಟೇಲ್‌) ವ್ಯಾಪಾರವು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಗ್ರಾಹಕರ ಹಿತಾಸಕ್ತಿ ಬಲಿಗೊಡದೆ ವ್ಯಾಪಾರ ಉತ್ತೇಜಿಸುವ ರೀತಿಯಲ್ಲಿ ಹೊಸ ನೀತಿ ರೂಪಿಸಬೇಕಾಗಿದೆ. ವ್ಯಾಪಾರ ನಿಯಂತ್ರಣ ವಿಷಯದಲ್ಲಿ ಗ್ರಾಹಕರ ವ್ಯವಹಾರ ಸಚಿವಾಲಯವು ಸಮನ್ವಯ  ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ವ್ಯವಹಾರಗಳ ಸಚಿವಾಲಯವು ಈಗಾಗಲೇ ಇ–ವಾಣಿಜ್ಯ (ಅಂತರ್ಜಾಲ ವಹಿವಾಟು) ನಿಯಂತ್ರಣದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಹಂತದಲ್ಲಿ ರಿಟೇಲ್‌ ವ್ಯಾಪಾರಕ್ಕೂ ಪ್ರತ್ಯೇಕ ನೀತಿ ರೂಪಿಸುವುದು ಸೂಕ್ತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ರಾಷ್ಟ್ರೀಯ ನೀತಿ ರೂಪಿಸಲು ಮತ್ತು ಆಂತರಿಕ ವ್ಯಾಪಾರಕ್ಕೆ ಪ್ರತ್ಯೇಕ  ಸಚಿವಾಲಯ ಆರಂಭಿಸಲು ಅಖಿಲ ಭಾರ...

**ಜ್ಞಾನ ಕಾರಂಜಿ**::: ಅಣ್ವಸ್ತ್ರ ಮುಕ್ತ–ಶಾಂತಿ ಸ್ಥಾಪನೆಗೆ ಬದ್ಧ

1.        ಮಾತುಕತೆಗೆ ಗಡಿ ದಾಟಿ ದಕ್ಷಿಣ ಕೊರಿಯಾಕ್ಕೆ ಐತಿಹಾಸಿಕ ಭೇಟಿ ನೀಡಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ . ಸೋಲ್‌(ದಕ್ಷಿಣ ಕೊರಿಯಾ):   ಉತ್ತರ ಕೊರಿಯಾ ಅಧ್ಯಕ್ಷ ಅಧ್ಯಕ್ಷ ಕಿಮ್ ಜಾಂಗ್ ಉನ್‌ ಅವರು ತಮ್ಮ ಗಡಿ ದಾಟುವ ಮೂಲಕ ಮೊದಲ ಬಾರಿಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ – ಇನ್‌ ಅವರನ್ನು ಭೇಟಿ ಮಾಡಿದ್ದಾರೆ. 1950–1953 ರಲ್ಲಿ ನಡೆದ ಕೊರಿಯಾ ಯುದ್ಧದ ಬಳಿಕ ಉತ್ತರ ಕೊರಿಯಾ ನಾಯಕರೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಹಾಗೂ ಐತಿಹಾಸಿಕವೂ ಆಗಿದೆ. ಕಿಮ್ ಜಾಂಗ್ ಉನ್‌ ಮತ್ತು ಮೂನ್‌ ಜೇ – ಇನ್‌ ಅವರು ಉಭಯ ದೇಶಗಳ ಮಿಲಿಟರಿ ನಿಷೇಧಿತ ಗಡಿ ಪ್ರದೇಶದಲ್ಲಿ ಭೇಟಿಯಾಗಿದ್ದಾರೆ. ಪನ್ಮುಂಜೊಮ್‌ನಲ್ಲಿ ಐತಿಹಾಸಿಕ ಅಂತರ ಕೊರಿಯಾ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಸ್ಥಳೀಯ ಕಾಲಮಾನ ಬೆಳಿಗ್ಗೆ 10.30 ಕ್ಕೆ ಮಾತುಕತೆ ನಡೆಸಲಿದ್ದಾರೆ. ಕೊರಿಯಾ ಶೃಂಗಸಭೆ ನಡೆಯುವ ‘ ಪೀಸ್ ಹೌಸ್‌ ‘ ಪ್ರವೇಶಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರು ‘ ಒಂದು ಹೊಸ ಇತಿಹಾಸ ಪ್ರಾರಂಭವಾಗುತ್ತದೆ ’ ಮತ್ತು ‘ ಶಾಂತಿ ಮರು ಸ್ಥಾಪನೆಗೆ ಐತಿಹಾಸಿಕ ಮುನ್ನುಡಿ ’ ಎಂದು ಅತಿಥಿ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಸಿಎನ್‌ಎನ್‌ ವರದಿಮಾಡಿದೆ. 2.        ಅಣ್ವಸ್ತ್ರ ಮುಕ್ತ – ಶಾಂತಿ ಸ್ಥಾಪನೆಗೆ ಬದ್ಧ...

**ಜ್ಞಾನ ಕಾರಂಜಿ**::: ಕೇಂದ್ರ ಲೋಕಸೇವಾ ಆಯೋಗ 2017ರ ಸಾಲಿನ ಪರೀಕ್ಷೆಯ ಫಲಿತಾಂಶ

ಒಟ್ಟು 990 ವಿದ್ಯಾರ್ಥಿಗಳು ನಾಗರೀಕ ಸೇವೆಗೆ ಅರ್ಹತೆ ಗಿಟ್ಟಿಸಿದ್ದಾರೆ. ಪರೀಕ್ಷೆಗಳು ಕಳೆದ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆದಿತ್ತು. ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದವರನ್ನು ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ತೆಲಂಗಾಣದ ದುರಿಶೆಟ್ಟಿ ಅನುದೀಪ್ ಅವರು ಈ ಬಾರಿಯ ಯುಪಿಎಸ್‌ಸಿ ಟಾಪರ್‌ ಆಗಿದ್ದು, ಎರಡನೇ ಸ್ಥಾನವನ್ನು ಅನು ಕುಮಾರಿ ಹಾಗೂ ಮೂರನೇ ಸ್ಥಾನವನ್ನು ಸಚಿನ್ ಗುಪ್ತಾ ಪಡೆದಿದ್ದಾರೆ. 476 ಸಾಮಾನ್ಯ, ಹಿಂದುಳಿದ ವರ್ಗದ 275, ಪರಿಶಿಷ್ಟ ಜಾತಿಯ 75, ಪರಿಶಿಷ್ಟ ಪಂಗಡದ 74 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿದ್ದಾರೆ., 10:54 PM

**ಜ್ಞಾನ ಕಾರಂಜಿ**::: ವುಹಾನ್‍ನಲ್ಲಿ ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ

ವುಹಾನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೀನಾ ಸರ್ಕಾರದ ಅಧಿಕಾರಿಗಳು ಸ್ವಾಗತಿಸಿದರು. 👉  ಚೀನಾ ಅಧ್ಯಕ್ಷರೊಂದಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ, ಭಾರತ-ಚೀನಾ ಶೀತಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ವಿವಾದ ಚರ್ಚೆ ನಡೆಸಲಿದ್ದಾರೆ. ಇದಲ್ಲದೆ ಉಭಯ ದೇಶಗಳ ನಡುವಿನ ವಾಣಿಜ್ಯ ಒಪ್ಪಂದ ಹಾಗೂ ಉಭಯ ದೇಶಗಳ ನಡುವಿನ ಸಾಮಾನ್ಯ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಎರಡೂ ದೇಶಗಳ ನಡುವೆ ಇರುವ ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಿ ಇತ್ಯರ್ಥ ಪಡಿಸುವ ಪ್ರಯತ್ನ ಮಾಡಲಿದ್ದು, ಪ್ರಸ್ತುತ ಮತ್ತು ಭವಿಷ್ಯದ ಅಂತಾರಾಷ್ಟ್ರೀಯ ಪರಿಸ್ಥಿತಿಗಳ ಕುರಿತು ಮಾತುಕತೆ ನಡೆಸಲಿದ್ದಾರೆ., 10:55 PM

**ಜ್ನಾನ ಕಾರಂಜಿ**::: ರಾಹುಲ್ ದ್ರಾವಿಡ್‍ಗೆ ದ್ರೋಣಾಚಾರ್ಯ ಹಾಗೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ರಾಜೀವ್‍ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸ್ಸು

ರಾಹುಲ್ ದ್ರಾವಿಡ್‍ಗೆ ದ್ರೋಣಾಚಾರ್ಯ ಹಾಗೂ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ರಾಜೀವ್‍ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸ್ಸು ಮಾಡಿದೆ. ಇದೇ ವೇಳೆ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರಿಗೆ ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ ಎಂದು ಬಿಸಿಸಿಐನ ಸಿಒಎ ಮುಖ್ಯಸ್ಥ ವಿನೋದ್‍ರೈ ತಿಳಿಸಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವವರ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದು, ಬಿಸಿಸಿಐ ವತಿಯಿಂದ ದ್ರಾವಿಡ್‍ರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರಿಸಿದ್ದೇವೆ.  ಅಂಡರ್-19 ಭಾರತ ತಂಡವು ವಿಶ್ವಕಪ್ ಗೆಲ್ಲುವಲ್ಲಿ ದ್ರಾವಿಡ್‍ರ ಪಾತ್ರಮುಖ್ಯವಾಗಿದೆ, ಅಲ್ಲದೆ ಅವರ ಗರಡಿಯಲ್ಲಿ ಅನೇಕ ಪಂದ್ಯಗಳನ್ನು ಗೆದ್ದಿರುವುದನ್ನು ಪರಿಗಣಿಸಿ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಿದ್ದೇವೆ.  ಈ ಹಿಂದೆ ಕೊಹ್ಲಿಯ ತರಬೇತುದಾರ ರಾಜ್‍ಕುಮಾರ್ ಶರ್ಮಾ ಅವರು ಕೂಡ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತ ತಂಡದ ಯಶಸ್ವಿ ನಾಯಕನಾಗಿ ಗುರುತಿಸಿ ಕೊಂಡಿರುವ ವಿರಾಟ್ ಕೊಹ್ಲಿ ಅವರ ಹೆಸರನ್ನು ಈ ಬಾರಿಯೂ ರಾಜೀವ್‍ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಕಳಿಸಿದ್ದೇವೆ,,

ಗೂಗಲ್ ಕುರಿತ ಈ ಮಾಹಿತಿ ನಿಮ್ಮನ್ನು ಬೆರಗಾಗಿಸುತ್ತೆ! by ನಡೆ-ನುಡಿ – ರತೀಶ ರತ್ನಾಕರ.

ಗೂಗಲ್ ಕಚೇರಿ Google Office ಮಿಂದಾಣದ ಬಳಕೆದಾರರು ಗೂಗಲ್ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಒಂದು ನಿಮಿಶಕ್ಕೆ 20 ಲಕ್ಶ ಹುಡುಕಾಟಗಳು ಗೂಗಲ್ ಮೂಲಕ ಆಗುತ್ತಿವೆ ಎಂದರೆ ಅದರ ಬಳಕೆ ಹಾಗೂ ಮಂದಿಮೆಚ್ಚುಗೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಮೇರಿಕಾದ ಸ್ಟಾನ್ಪೋರ‍್ಡ್ ಕಲಿಕೆವೀಡಿನಲ್ಲಿ ಪಿ.ಎಚ್‍ಡಿ ಮಾಡುವಾಗ ಗೆಳೆಯರಾದ ಲ್ಯಾರಿ ಪೇಜ್(Larry Page) ಹಾಗೂ ಸರ‍್ಗೆ ಬ್ರಿನ್ (Sergey Brin) ಜೊತೆಯಾಗಿ, ಸೆಪ್ಟೆಂಬರ್ 4, 1998 ರಲ್ಲಿ ಹುಟ್ಟುಹಾಕಿದ ಗೂಗಲ್ ಇಂದು ಜಗತ್ತಿನ ಹೆಸರುವಾಸಿ ಕಂಪನಿ. ಗೂಗಲ್ಲಿನ ಹಳೆಯ ಹೆಸರು ಬ್ಯಾಕ್‍ರಬ್ (BackRub) ಎಂದಿತ್ತು ಮಿಂದಾಣದಲ್ಲಿ ಏನಾನ್ನಾದರು ಹುಡುಕಲು ನೆರವಾಗುವಂತೆ ಒಂದು ಪುಟವನ್ನು ಲ್ಯಾರಿ ಹಾಗೂ ಸರ‍್ಗೆ ಜೊತೆಗೂಡಿ ಮಾಡಿದ್ದರು. ಅದಕ್ಕೆ ಬ್ಯಾಕ್‍ರಬ್ ಎಂಬ ಹೆಸರಿಟ್ಟಿದ್ದರು. ಬಳಕೆದಾರರಿಗೆ ಬೇಕಾದ ಪುಟಗಳನ್ನು ಹೆಕ್ಕಿ ತೋರಿಸಲು ಕೆಲವಾರು ಹೊಲಬುಗಳನ್ನು (algorithms) ಬರೆಯಲಾಗಿತ್ತು. ಮೊದಲಿಗೆ ಲ್ಯಾರಿ ಹಾಗೂ ಸರ‍್ಗೆ ಅವರಿಗೆ ಒಂದೊಳ್ಳೆ ಮಿಂದಾಣದ ಪುಟವನ್ನು ಮಾಡಲು ಬೇಕಿರುವ ಎಚ್‍ಟಿಎಮ್‍ಎಲ್(HTML) ಚಳಕಗಳ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಹಾಗಾಗಿ ಬೇಕಾದ ಎರಡು ಆಯ್ಕೆಗಳನ್ನು ಕೊಟ್ಟು ಒಂದು ಪುಟವನ್ನು ಮಾಡಿದ್ದರು. ಈಗಲೂ ಗೂಗಲ್ ಪುಟವನ್ನು ನೋಡಿದರೆ ಬರೆಯಲು ಒಂದು ಸಣ್ಣ ಜಾಗ ಹಾಗೂ ಒಂದು ಬಟನ್ ಇರುತ್ತದೆ. ಬೇರಾವುದೇ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ಆದರೆ ಪುಟದ ಹಿನ್ನಲೆಯ ಕೆಲಸಕ್ಕೆ...

**ಜ್ಞಾನ ಕಾರಂಜಿ**::: ಪ್ರಚಲಿತ ಏಪ್ರಿಲ್ ೨೦

2018 ಗ್ಲೋಬಲ್ ಮಲೇರಿಯಾ ಶೃಂಗಸಭೆಯನ್ನು ಯಾವ ದೇಶವು ಆಯೋಜಿಸಿದೆ ? ಎ ಭಾರತ ಬಿ ದಕ್ಷಿಣ ಆಫ್ರಿಕಾ ಸಿ ಆಸ್ಟ್ರೇಲಿಯಾ ಡಿ ಯುನೈಟೆಡ್ ಕಿಂಗ್ಡ   ಡಿ * ಯುನೈಟೆಡ್ ಕಿಂಗ್ಡಮ್ * ವಿವರಣೆ : ಮಲೇರಿಯಾವನ್ನು ಸೋಲಿಸುವ ಬಗೆಗಿನ ಆಟದ ಬದಲಾಗುತ್ತಿರುವ ಕಟ್ಟುಪಾಡುಗಳನ್ನು ಏಪ್ರಿಲ್ 18 ರಂದು ಯುನೈಟೆಡ್ ಕಿಂಗ್ಡಮ್ನ ಲಂಡನ್ನ 25 ನೇ ಕಾಮನ್ವೆಲ್ತ್ ಮುಖ್ಯ ಸರ್ಕಾರದ ಸಭೆಯೊಂದಿಗೆ ( CHOGM) 2018 ರ ಗ್ಲೋಬಲ್ ಮಲೇರಿಯಾ ಶೃಂಗಸಭೆಯೊಡನೆ ನಡೆಸಲಾಯಿತು . ಮಲೇರಿಯಾ ವಿರುದ್ಧದ ಹೋರಾಟವನ್ನು ಮುಂದುವರೆಸಲು ವಿಶ್ವದ ಆರ್ಥಿಕ ನಾಯಕರು ತಮ್ಮ ಹಣಕಾಸಿನ ಮತ್ತು ರಾಜಕೀಯ ಬದ್ಧತೆಗಳನ್ನು ನವೀಕರಿಸಲು ಶೃಂಗಸಭೆ ನಿರೀಕ್ಷಿಸಿದೆ . 2016 ರಲ್ಲಿ ಮಲೇರಿಯಾ ಪ್ರಕರಣಗಳು ಜಾಗತಿಕವಾಗಿ 216 ಮಿಲಿಯನ್ಗಳಿಗೆ ಏರಿದೆ , ಒಂದು ವರ್ಷದ ಹಿಂದೆ ಐದು ಮಿಲಿಯನ್ ಪ್ರಕರಣಗಳು ಹೆಚ್ಚಾಗಿದೆ . ಶೃಂಗಸಭೆಯು ಸರ್ಕಾರಗಳು , ಖಾಸಗಿ ವಲಯ , ಲೋಕೋಪಕಾರಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ $ 4 . 1 ಶತಕೋಟಿ ಡಾಲರ್ ಮೌಲ್ಯದ ಸಮಗ್ರ ಬದ್ಧತೆಗಳನ್ನು ಒಳಗೊಂಡಿತ್ತು . ಶೃಂಗಸಭೆಯಲ್ಲಿ ಭಾಗವಹಿಸಲು ಯಾವುದೇ ಭಾರತ ಪ್ರತಿನಿಧಿ ಇರಲಿಲ್ಲ . ಏಪ್ರಿಲ್ 2018 ಕ್ಕೆ IMF ನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ( WEO) ಪ್ರಕಾರ , ಆರ್ಥಿಕತೆಯ ದೃಷ್ಟಿಯಿಂದ ಜಗತ್ತಿನಲ್ಲಿ ಭಾರತದ ಸ್ಥಾನ ಏನು ? ಎ 10 ನೇ ಬಿ 6 ನೇ ಸಿ 8 ನೇ ಡಿ 11 ನೇ . ಸರಿಯ...

**ಜ್ಞಾನ ಕಾರಂಜಿ**::: ಕಾಮನ್‌ವೆಲ್ತ್‌ ಒಕ್ಕೂಟದ ಮುಖ್ಯಸ್ಥರಾಗಿ ಚಾರ್ಲ್ಸ್‌

ಕಾಮನ್‌ವೆಲ್ತ್‌ ಮುಖ್ಯಸ್ಥರಾಗಿ ಬ್ರಿಟನ್‌ ರಾಜಕುಮಾರ ಚಾರ್ಲ್ಸ್‌ ನೇಮಕಗೊಂಡಿದ್ದಾರೆ. ಇಲ್ಲಿಯವರೆಗೆ ಅವರ ತಾಯಿ ರಾಣಿ ಎಲಿಜಬೆತ್‌ –2 ಈ ಸ್ಥಾನದಲ್ಲಿದ್ದರು. ‘ಚಾರ್ಲ್ಸ್ (69) ಈ ಹುದ್ದೆ ಏರಬೇಕು ಎನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು, ಈತನೇ ನೇಮಕವಾಗುತ್ತಾನೆ ಎನ್ನುವ ಭರವಸೆ ಕೂಡ ನನಗಿತ್ತು’ ಎಂದು ಎಲಿಜಬೆತ್‌ (91) ಹೇಳಿದ್ದಾರೆ.

**ಜ್ಞಾನ ಕಾರಂಜಿ**::: ನಾಸಾ ಮುಖ್ಯಸ್ಥ ಸ್ಥಾನಕ್ಕೆ ಜಿಮ್

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) 13ನೇ ಮುಖ್ಯಸ್ಥ ಸ್ಥಾನಕ್ಕೆ ಅಮೆರಿಕ ನೌಕಾಪಡೆಯ ಮುಖ್ಯಸ್ಥ, ಮಾಜಿ ಪೈಲಟ್‌ ಜಿಮ್‌ ಬ್ರಿಡೆನ್‌ಸ್ಟೈನ್‌ ಅವರನ್ನು ಅಮೆರಿಕ ಸಂಸತ್ತು ನೇಮಕ ಮಾಡಿದೆ. ಜಿಮ್‌ (42) ಅವರ ಹೆಸರನ್ನು ಏಳು ತಿಂಗಳ ಹಿಂದೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದ್ದರು. ಆದರೆ ಇವರು ತಂತ್ರಜ್ಞಾನದಲ್ಲಿ ಪಳಗಿಲ್ಲವೆಂದು ಅನೇಕರು ವಿರೋಧಿಸಿದ್ದರು. ಆದರೆ ಈಗ ಅಂಗೀಕಾರ ದೊರೆತಿದೆ. ಮನುಷ್ಯರನ್ನು ಚಂದ್ರನಲ್ಲಿಗೆ ಕರೆದೊಯ್ಯುವ ಬಗ್ಗೆ ಜಿಮ್‌ ಅತೀವ ಆಸಕ್ತಿ ಹೊಂದಿದ್ದಾರೆ. ನಾಸಾ ಮತ್ತು ಬಾಹ್ಯಾಕಾಶ ಉದ್ಯಮದ ಸಂಬಂಧವನ್ನು ಹತ್ತಿರ ತರುವ ಬಗ್ಗೆ ಅವರು ಮಾತನಾಡಿದ್ದಾರೆ. 2016ರ ಅಮೆರಿಕ ಅಧ್ಯಕ್ಷ ಚುನಾವಣೆ ವೇಳೆ ಜಿಮ್‌, ಟ್ರಂಪ್‌ ಬೆಂಬಲಕ್ಕೆ ನಿಂತಿದ್ದರು.

**ಜ್ಞಾನ ಕಾರಂಜಿ**::: ಪ್ರಪಂಚದ ಸರೋವರಗಳು ಮತ್ತು ದೇಶಗಳು

*.ಕ್ಯಾಸ್ಪೀಯನ ಸರೋವರ-  ಇರಾನ್ *.ಸುಪೇರೀಯರ ಸರೋವರ-  ಅಮೆರಿಕ *.ವಿಕ್ಟೋರಿಯಾ ಸರೋವರ-   ತಂಜೇನಿಯ *.ಯೂರಲ್ ಸರೋವರ-  ರಷ್ಯ *.ಮಿಚಿಗನ್ ಸರೋವರ-  ಅಮೆರಿಕ *.ಬೈಕಲ್ ಸರೋವರ-  ರಷ್ಯ *.ಗ್ರೇಟಬೀಯರ ಸರೋವರ-  ಕೆನಡಾ *.ಲದೂಗ ಸರೋವರ-  ರಷ್ಯ *.ಮಾನಸ ಸರೋವರ-  ಟಿಬೆಟ್ *.ಸೋಸೇಕುರ ಸರೋವರ-  ಟಿಬೆಟ್ *.ಟಿಟಿಕಾಕ ಸರೋವರ-  ಪೆರು *.ರುಡಾಲ್ಫ್ ಸರೋವರ-  ಕೀನ್ಯಾ *.ನ್ಯಾಸ ಸರೋವರ-  ತಾಂಜೇನಿಯ *.ವಾನೇರ್ಸ ಸರೋವರ-  ಸ್ವಿಡನ

**ಜ್ಞಾನ ಕಾರಂಜಿ**::: ports in india

> *Kolkata Dock System-West Bengal* > *Haldia Dock Complex-West Bengal* > *Paradip-Odisha* > *Visakhapatnam-Andhra Pradesh* > *Ennore-Tamilnadu* > *Chennai-Tamilnadu* > *Thoothukodi-Tamilnadu* > *Cochin-Kerala* > *New Mangalore-Karnataka* > *Mormugao-Goa* > *Jawaharlal Nehru Port (Nhava Sheva)-Maharashtra* > *Mumbai-Maharashtra* > *Kandla-Gujarat* > *Port Blair-Andaman and Nicobar Islands* ================= *Statewise Number of Non-Major Ports in India* ============ > *Maharashtra- 53* > *Gujarat-40* > *Tamilnadu-15* > *Kerala-13* > *Andhra Pradesh-12* > *Karnataka-10* > *Goa-5* > *Odisha-2* > *West Bengal-11* > *Andaman & Nicobar-23* > *Lakshadweep-10* > *Daman & Diu-2* > *Pondicherry-1*    *Total-187*

**ಜ್ಞಾನ ಕಾರಂಜಿ**::: ಮಾನವನ ದೇಹದ ಬಗ್ಗೆ ನಿಮಗೆಷ್ಟು ಗೊತ್ತು.

★ ಮೂಳೆಗಳ ಸಂಖ್ಯೆ - 206 ★ ಸ್ನಾಯುಗಳ ಸಂಖ್ಯೆ - 639 ★ ಮೂತ್ರಪಿಂಡಗಳ ಸಂಖ್ಯೆ - 2 ★ ಹಾಲು ಹಲ್ಲುಗಳ ಸಂಖ್ಯೆ - 20 ★ ಪಕ್ಕೆಲುಬುಗಳ ಸಂಖ್ಯೆ - 24 (12 ಜೋಡಿಗಳು) ★ ಹೃದಯದ ಕೋಣೆಗಳ ಸಂಖ್ಯೆ - 4 ★ ದೊಡ್ಡ ಅಪಧಮನಿ - ಮಹಾಪಧಮನಿಯ ★ ಸಾಮಾನ್ಯ ರಕ್ತದೊತ್ತಡ - 120 - 80 ★ ರಕ್ತದ ಪಿಎಚ್ - 7.4 ★ ಬೆನ್ನುಮೂಳೆಯ ಬೆನ್ನುಹುರಿ ಸಂಖ್ಯೆ - 33 ★ ನೆಕ್ನಲ್ಲಿ ಬೆನ್ನುಹುರಿಯ ಸಂಖ್ಯೆ - 7 ★ ಮುಖದ ಮೂಳೆಗಳ ಸಂಖ್ಯೆ - 14 ★ ಸ್ಕಲ್ ಮೂಳೆಗಳು ಸಂಖ್ಯೆ - 22 ★ ಆರ್ಮ್ಸ್ ರಲ್ಲಿ ಮೂಳೆಗಳು ಸಂಖ್ಯೆ - 6 ★ ಪ್ರತಿ ಮನುಷ್ಯನ ಮೂಳೆಗಳ ಸಂಖ್ಯೆ ಕಿವಿ - 3 ★ ಮಾನವ ಸ್ನಾಯುಗಳ ಸಂಖ್ಯೆ ಆರ್ಮ್ - 72 ★ 2 - ಹೃದಯದಲ್ಲಿ ಪಂಪ್ಗಳ ಸಂಖ್ಯೆ ★ ದೊಡ್ಡ ಆರ್ಗನ್ - ಸ್ಕಿನ್ ★ ದೊಡ್ಡ ಗ್ರಂಥಿ - ಯಕೃತ್ತು ಚಿಕ್ಕ ಕೋಶ - ರಕ್ತ ಕಣ ದೊಡ್ಡ ಕೋಶ - ಎಗ್ ಸೆಲ್ (ಅಂಡಾಮ್) ★ ಚಿಕ್ಕ ಮೂಳೆ - ಸ್ಟಪ್ಸ್ ಸಣ್ಣ ಕರುಳಿನ ಸರಾಸರಿ ಉದ್ದ - 7 ಮೀ ★ ದೊಡ್ಡ ಕರುಳಿನ ಸರಾಸರಿ ಉದ್ದ - 1.5 ಮೀ ★ ಹೊಸ ಜನನ ಸರಾಸರಿ ತೂಕ ಬೇಬಿ - 2.6 ಕೆಜಿ. ★ ಒಂದು ನಿಮಿಷದಲ್ಲಿ ಪಲ್ಸ್ ದರ - 72 ಬಾರಿ ★ ದೇಹದ ತಾಪಮಾನ - 36.9o ಸಿ (98.4o ಎಫ್) ★ ಸರಾಸರಿ ರಕ್ತ ಪರಿಮಾಣ - 4 - 5 ಲೀಟರ್ ★ ಆರ್ಬಿಸಿ ಸರಾಸರಿ ಜೀವನ - 120 ದಿನಗಳು ★ ಮಾನವ ಕಾಲು ಮೂಳೆಗಳ ಸಂಖ್ಯೆ - 33 ★ ಪ್ರತಿ ಮಣಿಕಟ್ಟಿನಲ್ಲಿ ಎಲುಬುಗಳ ಸಂಖ್ಯೆ - 8 ★ ಕೈಯಲ್ಲಿ ಎಲುಬುಗಳ ಸಂಖ್ಯೆ - 27 ★ ಅತಿದೊಡ್ಡ ಅಂತಃಸ್ರಾವ...

ಶಾಂಗೈ ಸುತ್ತ ಒಂದು ಸುತ್ತು (ಕಂತು-2) by ನಡೆ-ನುಡಿ – ಜಯತೀರ‍್ತ ನಾಡಗವ್ಡ.

ಯು ಗಾರ‍್ಡನ್(Yu Garden), Shanghai, ಶಾಂಗೈ ಯು (ಯುಯುಆನ್) ಗಾರ‍್ಡನ್ ಶಾಂಗೈ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಶಾಂಗೈನಲ್ಲಿ ನೋಡಲೇಬೇಕಾದ ಇನ್ನಶ್ಟು ಜಾಗಗಳ ಕುರಿತು ಹೇಳದೇ ಹೋದರೆ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ. ಯು ಗಾರ‍್ಡನ್(Yu Garden) Yuyuan Garden, Dragon Wall, ಯು ಗಾರ‍್ಡನ್ ಡ್ರ್ಯಾಗನ್, ಕೆತ್ತನೆಯಿರುವ ಗೋಡೆ ಡ್ರ್ಯಾಗನ್ ಕೆತ್ತನೆಯಿರುವ ಗೋಡೆ (ಯು ಗಾರ‍್ಡನ್) ಯು ಗಾರ‍್ಡನ್ ಇಲ್ಲವೇ ಯುಯುಆನ್ ಗಾರ‍್ಡನ್ ಎಂದು ಕರೆಯಲ್ಪಡುವ ಈ ತಾಣ ಶಾಂಗೈನ ಹಳೆಯದಾದ ಬಾಗ. ಯು ಗಾರ‍್ಡನ್‌ಗೆ ಬಂಡೆಗಲ್ಲುಗಳ ತೋಟವೆನ್ನಬಹುದು. ಇದನ್ನು ಮಿಂಗ್ ಅರಸುಮನೆತನದ(Ming Dynasty) ಪಾನ್ ಯುಂಡುವಾನ್(Pan Yunduan) 1559ರ ಹೊತ್ತಿಗೆ ಅವನ ತಂದೆಗಾಗಿ ಕಟ್ಟಿಸಿದ. ವರುಶಗಳು ಕಳೆದಂತೆ ಮಿಂಗ್ ಅರಸು ಮನೆತನದವರಿಂದ ಬೇರೆ ಅರಸರ ಪಾಲಾಗುತ್ತ ಸಾಗಿದ ಈ ತೋಟ, 1961ರ ಹೊತ್ತಿಗೆ ಚೀನಾ ಸರಕಾರದ ಪಾಲಾಗಿ, ಮಂದಿಗೆ ನೋಡಲು ತೆರೆದುಕೊಂಡಿತು. ಸುಮಾರು 5 ಎಕರೆಯಶ್ಟು ದೊಡ್ಡದಾದ ಈ ಗಾರ‍್ಡನ್ಅನ್ನು ಸ್ಯಾನ್‌ಸುಯಿ ಹಾಲ್, ವಾನ್‌ಹುವಾ ಚೇಂಬರ್, ಡಿಯಾನ್‌ಚುನ್ ಹಾಲ್, ಹುಜಿಂಗ್ ಹಾಲ್, ಯುಹುವಾ ಹಾಲ್ ಮತ್ತು ಇನ್ನರ್ ಗಾರ‍್ಡನ್ ಎಂಬ 6 ಮುಕ್ಯ ಬಾಗಗಳಾಗಿ ಬೇರ‍್ಪಡಿಸಲಾಗಿದೆ. ಪ್ರತಿ ಬಾಗವು ಡ್ರ್ಯಾಗನ್ ಕೆತ್ತನೆಯಿರುವ ಗೋಡೆಗಳಿಂದ ಬೇರ‍್ಪಡಿಸಿರುವುದು ವಿಶೇಶ. ಸ್ಯಾನ್‌ಸುಯಿ ಹಾಲ್‌ನಲ್ಲಿ 12 ಮೀಟರ್ ಎತ...