ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

**ಜ್ಞಾನ ಕಾರಂಜಿ**::: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್​ಗೆ 1435 ಕೋಟಿ ರೂ.

ನವದೆಹಲಿ: ಸೆ. 1ರಿಂದ ಆರಂಭವಾಗುತ್ತಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್​ಗೆ 1435 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಈ ಹಿಂದೆ 800 ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿತ್ತು. ಹೆಚ್ಚುವರಿ 635 ಕೋಟಿ ರೂ.ಗಳಲ್ಲಿ 400 ಕೋಟಿ ರೂ.ಗಳನ್ನು ತಾಂತ್ರಿಕ ಸೌಕರ್ಯ ಹಾಗೂ 235 ಕೋಟಿ ರೂ.ಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಸೆ.1ರಂದು 650 ಶಾಖೆ ಹಾಗೂ 3250 ಸಹಾಯ ಕೇಂದ್ರ ಆರಂಭವಾಗಲಿದೆ. ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿರುವ ಎಲ್ಲ 1.55 ಲಕ್ಷ ಅಂಚೆ ಕಚೇರಿಗಳು ಸಹಾಯ ಕೇಂದ್ರಗಳಾಗಲಿವೆ. ಇದರಿಂದ ಹೊಸದಾಗಿ 3500ಕ್ಕೂ ಅಧಿಕ ಬ್ಯಾಂಕಿಂಗ್ ಉದ್ಯೋಗ ಸೃಷ್ಟಿಯಾಗಲಿದ್ದು, ಗ್ರಾಮೀಣ ಪ್ರದೇಶಗಳಿಗೂ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಗುರಿ ಇರಿಸಿಕೊಳ್ಳಲಾಗಿದೆ. ಒ-ಸ್ಮಾರ್ಟ್​ಗೆ ಒಕೆ: ಮೀನುಗಾರರು ಹಾಗೂ ನೌಕಾ ಭದ್ರತಾ ಸಿಬ್ಬಂದಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಒ-ಸ್ಮಾರ್ಟ್ ಯೋಜನೆಗೆ ಸಮ್ಮತಿಸಿದೆ. ಮೀನುಗಾರರು ಹಾಗೂ ಭದ್ರತಾ ಸಿಬ್ಬಂದಿಗೆ ಸಮುದ್ರದ ವಾತಾವರಣ ಕುರಿತು ಮುಂಜಾಗ್ರತಾ ಸಂದೇಶವನ್ನು ಈ ಯೋಜನೆ ಮೂಲಕ ನೀಡಲಾಗುತ್ತದೆ. ಸಮುದ್ರದಲ್ಲಿ ಎಲ್ಲಿ ಮೀನುಗಳ ಲಭ್ಯತೆ ಇದೆ ಎನ್ನುವ ಮಾಹಿತಿಯನ್ನು ಮೀನುಗಾರರಿಗೆ ಕೊಡಲಾಗುತ್ತದೆ.

**ಜ್ಞಾನ ಕಾರಂಜಿ**::: ಉಗ್ರ ನಿಗ್ರಹಕ್ಕೆ ಭಾರತ ಬದ್ಧ

ಕಾಠ್ಮಂಡು: ಬಿಮ್ಸ್​ಟೆಕ್ ಸದಸ್ಯ ರಾಷ್ಟ್ರಗಳಲ್ಲಿನ ಪ್ರಾದೇಶಿಕ ಸಂಪರ್ಕ ವೃದ್ಧಿ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ಗುರುವಾರ ಆರಂಭವಾದ 4ನೇ ಬಿಮ್ಸ್​ಟೆಕ್ ಶೃಂಗದಲ್ಲಿ ಮೋದಿ ಮಾತನಾಡಿದರು. ಬಿಮ್ಸ್​ಟೆಕ್ ಸದಸ್ಯ ರಾಷ್ಟ್ರಗಳು ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಹೋಲಿಕೆ ಹೊಂದಿವೆ. ಹಾಗೆಯೇ ಭಯೋತ್ಪಾದನೆ, ಮಾದಕ ದ್ರವ್ಯ ಹಾಗೂ ಮಾನವ ಕಳ್ಳ ಸಾಗಣೆಯಂಥ ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳ ನಿಯಂತ್ರಣಕ್ಕೆ ಒಗ್ಗೂಡಿ ಕೆಲಸ ಮಾಡಬೇಕಿದೆ. ಇದಕ್ಕೆ ಪೂರಕ ಸಂಪರ್ಕ ಸೇತು ನಿರ್ವಿುಸಲು ಭಾರತ ಸಿದ್ಧವಿದೆ ಎಂದು ಮೋದಿ ಭರವಸೆ ನೀಡಿದರು. ಬಿಮ್ಸ್​ಟೆಕ್ ಸದಸ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಮಾದಕದ್ರವ್ಯ ಜಾಲದಿಂದಲೇ ಭಯೋತ್ಪಾದನೆಗೆ ಆರ್ಥಿಕ ನೆರವು ಸಿಗುತ್ತಿದೆ. ಈ ಜಾಲಕ್ಕೆ ಕಡಿವಾಣ ಹಾಕಿದಲ್ಲಿ ಭಯೋತ್ಪಾದನೆ ನಿಗ್ರಹ ಕೂಡ ಸಾಧ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ಇದರ ಜತೆಗೆ ಭಾರತವು ಜ್ಞಾನ ಸಂಪರ್ಕ ಜಾಲ ವಿಸ್ತರಣೆಗೆ ಡಿಜಿಟಲ್ ಸಂಪರ್ಕ ಸಾಧಿಸಲು ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಹಾಗೂ ನೇಪಾಳಕ್ಕೆ ನೆರವು ನೀಡುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ಏನಿದು ಬಿಮ್ಸ್​ಟೆಕ್ ಒಕ್ಕೂಟ ಬಂಗಾಳ ಕೊಲ್ಲಿ ಸಮುದ್ರದ ಅಕ್ಕಪಕ್ಕದಲ್ಲಿರುವ ರಾಷ್ಟ್ರಗಳನ್ನು ಸೇರಿಸಿ ಈ ಒಕ್ಕೂಟ ರಚಿಸಲಾಗಿದೆ. ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ...

**ಜ್ಞಾನ ಕಾರಂಜಿ**::: ವಾರ್ನಿಶ್ ನೋಟು!

ನೋಟುಗಳ ಬಾಳಿಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ವಿಶಿಷ್ಟ ಕ್ರಮಕ್ಕೆ ಮುಂದಾಗಿದೆ. ವಾರ್ನಿಶ್ ಮಾಡಿದ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಿದೆ. ಆರ್​ಬಿಐನ 2017-18ನೇ ಹಣಕಾಸು ವರ್ಷದ ವಾರ್ಷಿಕ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ, ನೋಟುಗಳ ಮುದ್ರಣ ವೆಚ್ಚದಲ್ಲಿ ಭಾರಿ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ. ಕೆನ್ಯಾ, ಜಾಂಬಿಯಾ ಮತ್ತಿತರ ದೇಶಗಳಲ್ಲಿ ವಾರ್ನಿಶ್ ಮಾಡಲಾದ ನೋಟುಗಳು ಈಗಾಗಲೇ ಚಲಾವಣೆಯಲ್ಲಿವೆ. ಅಧ್ಯಯನ ಭಾರತದಲ್ಲಿ ನೋಟುಗಳ ಬಾಳಿಕೆ ಹೆಚ್ಚಿಸಲು ಆರ್​ಬಿಐ ಗಂಭೀರ ಚಿಂತನೆ ನಡೆಸುತ್ತಿದೆ. ಕೇಂದ್ರ ಸರ್ಕಾರದ ಜತೆ ಈಗಾಗಲೇ ಚರ್ಚೆಗಳೂ ನಡೆದಿವೆ. ವಿವಿಧ ದೇಶಗಳಲ್ಲಿ ಚಲಾವಣೆಯಲ್ಲಿರುವ ನೋಟುಗಳ ಕುರಿತು ಅಧ್ಯಯನ ನಡೆಸಲಾಗಿದೆ. ವಾರ್ನಿಶ್ ಮಾಡಿದ ನೋಟುಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಆರ್​ಬಿಐ ವರದಿಯಲ್ಲಿ ತಿಳಿಸಲಾಗಿದೆ. ಆರ್​ಬಿಐ ಹಿಂಪಡೆದ ನೋಟುಗಳ ಸಂಖ್ಯೆ # 2015-16 – 1,636 ಕೋಟಿ # 2016-17 – 1,250 ಕೋಟಿ # 2017-18 – 2,767 ಕೋಟಿ ಏಕೆ ಅಗತ್ಯ? ವಿಶೇಷ ಮಾದರಿಯ ಕಾಗದದಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇವು ಕೆಲ ವರ್ಷಗಳಲ್ಲಿ ಹರಿದು ಹೋಗುತ್ತವೆ ಅಥವಾ ಚಲಾವಣೆಗೆ ಯೋಗ್ಯವಲ್ಲದ ರೀತಿಯಲ್ಲಿ ಬ್ಯಾಂಕುಗಳಿಗೆ ವಾಪಸಾಗುತ್ತವೆ. ಹೀಗಾಗಿ ಆರ್​ಬಿಐ ಹೊಸ ನೋಟುಗಳನ...

**ಜ್ಞಾನ ಕಾರಂಜಿ**::: ಡಾ. ಸಿದ್ಧಲಿಂಗಯ್ಯಗೆ ನೃಪತುಂಗ ಪ್ರಶಸ್ತಿ

ಬೆಂಗಳೂರು: ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ನೃಪತುಂಗ ಪ್ರಶಸ್ತಿಗೆ ಈ ಬಾರಿ ದಲಿತ ಕವಿ ಡಾ. ಸಿದ್ಧಲಿಂಗಯ್ಯ ಆಯ್ಕೆಯಾಗಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಸ್ಥಾಪಿಸಿರುವ ನೃಪತುಂಗ ದತ್ತಿ ಪ್ರಶಸ್ತಿ 7ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಬುಧವಾರ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಹಿರಿಯ ಕವಿ ಡಾ. ರಂಜಾನ್ ದರ್ಗಾ, ಖ್ಯಾತ ವಿಮರ್ಶಕ ಎಸ್.ಆರ್. ವಿಜಯಶಂಕರ್, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಡಾ.ಎ.ಎನ್. ಪ್ರಕಾಶ್​ಗೌಡ, ಕಾರ್ವಿುಕ ಕಲ್ಯಾಣ ಅಧಿಕಾರಿ ವಿಜಯಕುಮಾರ್ ರೈ, ಕ.ರಾ.ರ.ಸಾ. ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ ವ.ಚ. ಚನ್ನೇಗೌಡ ಒಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ಪ್ರಶಸ್ತಿಗೆ ಡಾ. ಸಿದ್ಧಲಿಂಗಯ್ಯ ಅವರನ್ನು ಆಯ್ಕೆ ಮಾಡಿದೆ. ಕಸಾಪದಲ್ಲಿ ಬಿಎಂಟಿಸಿ 1.5 ಕೋಟಿ ರೂ. ದತ್ತಿ ಸ್ಥಾಪಿಸಿದ್ದು, 2017ರಿಂದ ಪ್ರತಿವರ್ಷ ಒಬ್ಬ ಸಾಹಿತಿ ಅಥವಾ ಕನ್ನಡ ಪರ ಹೋರಾಟಗಾರರಿಗೆ ನೃಪತುಂಗ ಪ್ರಶಸ್ತಿ ನೀಡಲಾಗುತ್ತಿದೆ. ನಾಡೋಜ ಡಾ.ದೇ. ಜವರೇಗೌಡ, ಡಾ.ಜಿ.ಎಸ್. ಶಿವರುದ್ರಪ್ಪ, ಚಿದಾನಂದ ಮೂರ್ತಿ ಸೇರಿ ಈವರೆಗೆ 12 ಮಂದಿಗೆ ನೃಪತುಂಗ ಪ್ರಶಸ್ತಿ ನೀಡಲಾಗಿದೆ. 2017ನೇ ಸಾಲಿನಲ್ಲಿ ಕನ್ನಡದ ಶ್ರೇಷ್ಠ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಐವರು ಯುವ...

**ಜ್ಞಾನ ಕಾರಂಜಿ**::: 12 ವರ್ಷಗಳ ಬಳಿಕ ಭರ್ತಿಯಾದ ಸೂಪಾ ಜಲಾಶಯ

ಕಾರವಾರ/ದಾಂಡೇಲಿ/ಜೊಯಿಡಾ: ರಾಜ್ಯದ ಅತೀ ಎತ್ತರದ ಜಲಾಶಯ ಸೂಪಾ ಹನ್ನೆರಡು ವರ್ಷಗಳ ಬಳಿಕ ಈ ಬಾರಿ  ಭರ್ತಿಯಾಗಿದ್ದು, ಬುಧವಾರ ನೀರು ಹೊರ ಬಿಡಲಾಗಿದೆ. 564 ಮೀಟರ್ (ಸಮುದ್ರ ಮಟ್ಟದಿಂದ) ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯದಲ್ಲಿ ಬುಧವಾರ ಬೆಳಗ್ಗೆ 8 ಗಂಟೆಗೆ 562.75 ಮೀಟರ್​ವರೆಗೆ ನೀರು ಸಂಗ್ರಹವಾಗಿತ್ತು. 16,500 ಕ್ಯೂಸೆಕ್ ಒಳಹರಿವಿತ್ತು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಬುಧವಾರ ಮಧ್ಯಾಹ್ನ 3 ಗಂಟೆ 10 ನಿಮಿಷಕ್ಕೆ 3 ಗೇಟ್​ಗಳನ್ನು ಅರ್ಧ ಅಡಿ ತೆರೆದು ಪ್ರತಿ ಸೆಕೆಂಡ್​ಗೆ 7 ಸಾವಿರ ಕ್ಯೂಬಿಕ್ ಅಡಿ (ಕ್ಯೂಸೆಕ್-ಪ್ರತಿ ಸೆಕೆಂಡ್​ಗೆ 28.317 ಲೀಟರ್) ನೀರು ಹೊರ ಬಿಡಲಾಗುತ್ತಿದೆ. ಅಲ್ಲದೆ, ಸೂಪಾ ಜಲಾಶಯದ ಕೆಳಗಿರುವ ವಿದ್ಯುದಾಗಾರದಿಂದ 150 ಮೆಗಾವ್ಯಾಟ್​ನ ಎರಡು ಟರ್ಬೆನ್​ಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, 4,300 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 562 ಮೀಟರ್​ಗೆ ತಲುಪುವವರೆಗೂ ಅಂದರೆ, ಆ. 30ರ ಮಧ್ಯಾಹ್ನದವರೆಗೂ ಇದೇ ಹಂತದಲ್ಲಿ ನೀರು ಹೊರ ಬಿಡಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಐತಿಹಾಸಿಕ ಕ್ಷಣ: 1987ರಲ್ಲಿ ನಿರ್ಮಾಣಗೊಂಡ ಜಲಾಶಯ 31 ವರ್ಷಗಳಲ್ಲಿ ಎರಡೇ ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಬುಧವಾರ ಮೂರನೇ ಬಾರಿ ನೀರು ಹೊರಬಿಡಲಾಯಿತು. ಸಮೀಪದ ಗ್ರಾಮಗಳ ನೂರಾರು ಜನ ನೀರು ಬಿಡುವ ಕ್ಷಣವನ್ನು ಕಣ್ತುಂಬಿಕೊಂಡರು. ಜಲ...

**ಜ್ಞಾನ ಕಾರಂಜಿ**::: *29 ಆಗಸ್ಟ್: ರಾಷ್ಟ್ರೀಯ ಕ್ರೀಡಾ ದಿನ*

▪.. * ರಾಷ್ಟ್ರೀಯ ಕ್ರೀಡೆ ದಿನ (ಧ್ಯಾನ್ಚಂದ್ ಅವರ ಜನ್ಮದಿನ / ರಾಷ್ಟ್ರೀಯ ಖೇಲ್ ದಿವಾಸ್) 2018* ▪.  *ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯನ್ನು ಭಾರತದಾದ್ಯಂತ ಆಗಸ್ಟ್ 29, 2018, ಬುಧವಾರ ನಡೆಯಲಿದೆ.* 🏑🏑 *ರಾಷ್ಟ್ರೀಯ ಕ್ರೀಡಾ ದಿನದ ಇತಿಹಾಸ (ಧ್ಯಾನ್ಚಂದ್ ಅವರ ಜನ್ಮದಿನ / ರಾಷ್ಟ್ರೀಯ ಖೇಲ್ ದಿವಾಸ್)* 🏑🏑 ▪..ಭಾರತದ ರಾಷ್ಟ್ರೀಯ ಕ್ರೀಡಾ ದಿನದ ಇತಿಹಾಸ (ರಾಷ್ಟ್ರೀಯ ಖೇಲ್ ದಿವಾಸ್ ಎಂದು ಸಹ ಕರೆಯಲ್ಪಡುತ್ತದೆ) ಆಗಸ್ಟ್ 29, 1905 ರಂದು ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಕುಟುಂಬದಲ್ಲಿ ಜನಿಸಿದ ಧ್ಯಾನ್ಚಂದ್ ಎಂಬ ಹುಡುಗನಾಗಿದ್ದಾಗ. ಕ್ರೀಡೆಗಳ ಇತಿಹಾಸದಲ್ಲಿ ಶ್ರೇಷ್ಠ ಹಾಕಿ ಆಟಗಾರರಲ್ಲಿ ಒಬ್ಬನೆಂದು ಅವನು ಪರಿಗಣಿಸಲ್ಪಟ್ಟಿದ್ದಾನೆ.ಅವರು ಹಾಕಿ ಕ್ಷೇತ್ರದಲ್ಲಿ 1928, 1932 ಮತ್ತು 1936 ರಲ್ಲಿ ಮೂರು ಒಲಂಪಿಕ್ ಚಿನ್ನದ ಪದಕಗಳನ್ನು ಗಳಿಸಿದರು.ಆತನ ಮಾಸ್ಟರ್ ಚೆಂಡಿನ ನಿಯಂತ್ರಣಕ್ಕಾಗಿ "ದಿ ವಿಝಾರ್ಡ್" ಎಂದು ಕರೆಯಲ್ಪಟ್ಟರು; ಅವರು 1948 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು 400 ಗೋಲುಗಳಿಗಿಂತ ಹೆಚ್ಚು ಗೋಲುಗಳನ್ನು ಗಳಿಸಿದರು. ಭಾರತ ಸರ್ಕಾರವು ಧ್ಯಾನ್ಚಂದ್ ಅವರಿಗೆ 1956 ರಲ್ಲಿ ಪದ್ಮಭೂಷಣದ ಮೂರನೆಯ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿತು. ಆದ್ದರಿಂದ, ಅವರ ಹುಟ್ಟುಹಬ್ಬದ ಅಂದರೆ 29 ಆಗಸ್ಟ್, ಭಾರತದ ರಾಷ್ಟ...

**ಜ್ಞಾನ ಕಾರಂಜಿ**::: 💠💠 *ಪ್ರಚಲಿತ ಘಟನೆಗಳ ಬಹು ಆಯ್ಕೆ ಪ್ರಶ್ನೆಗಳು (28-08-2018)* 💠💠

1. ಜೈವಿಕ ಇಂಧನದಿಂದ ನಡೆಸಲ್ಪಡುವ ಮೊದಲ ವಿಮಾನವನ್ನು ಭಾರತದ ಯಾವ ಏರ್ಲೈನ್ ಸಂಸ್ಥೆ ಯಶಸ್ವಿಯಾಗಿ ಪರೀಕ್ಷಾ ಹಾರಾಟ ನಡೆಸಿತು? [ಎ] ಏರ್ ಇಂಡಿಯಾ [ಬಿ] ಸ್ಪೈಸ್ ಜೆಟ್ [ಸಿ] ವಿಸ್ತಾರಾ [ಡಿ] ಜೆಟ್ಲೈಟ್ 2. ಇತ್ತೀಚೆಗೆ ನಿಧನರಾದ ಗೋಪಾಲ್ ಬೋಸ್, ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದರು? [ಎ] ಕ್ರಿಕೆಟ್ [ಬಿ] ಬಾಕ್ಸಿಂಗ್ [ಸಿ] ಟೆನಿಸ್ [ಡಿ] ಚೆಸ್ 3. ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮತ್ತು ಇತ್ತೀಚೆಗೆ ಯಾವ ಸಂಸ್ಥೆಯು ಉನ್ನತ-ಎತ್ತರದ ಪ್ರದೇಶಗಳಲ್ಲಿ ಸೈನಿಕರಿಗೆ ಟೆಲಿಮೆಡಿಸಿನ್ ನೋಡ್ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ? [A] VSSC [B] ISRO [C] BARC [D] DRDO 4. ಸಮುದ್ರದ ಹೈಡ್ರಾಲಿಕ್ ವ್ಯವಸ್ಥೆಯನ್ನು ಹೊಂದಿರುವ ಭಾರತದ ಏಕೈಕ ವಿಮಾನವಾಹಕ ನೌಕೆ ಯಾವುದು? [ಎ] ಐಎನ್ಎಸ್ ಸಹ್ಯಾದ್ರಿ [ಬಿ] ಐಎನ್ಎಸ್ ವಿಕ್ರಾಂತ್ [ಸಿ] ಐಎನ್ಎಸ್ ವಿಕ್ರಮಾದಿತ್ಯ [ಡಿ] ಐಎನ್ಎಸ್ ಸಾತ್ಪುರಾ 5. 3ನೇ ಭಾರತೀಯ ಸಾಗರ ಕಾನ್ಫರೆನ್ಸ್ (Indian Ocean Conference IOC-2018-2018) ನಡೆದ ಸ್ಥಳ ಯಾವುದು? [ಎ] ಕೊಲಂಬೊ [ಬಿ] ದೆಹಲಿ [ಸಿ] ಟೋಕಿಯೊ [ಡಿ] ಹನೋಯಿ 6. ವೈಯಕ್ತಿಕ ಕಾನೂನುಗಳ (ತಿದ್ದುಪಡಿ) ಬಿಲ್, 2018 ಯಾವ ರೋಗದ ರೋಗಿಗಳಿಗೆ ಸಂಬಂಧಿಸಿರುವ ತಾರತಮ್ಯ ಮತ್ತು ಕಳಂಕವನ್ನು ತೆಗೆದುಹಾಕಲು ಉದ್ದೇಶಿಸಿದೆ? [ಎ] ಕುಷ್ಠರೋಗ [ಬಿ] ಎಚ್ಐವಿ [ಸಿ] ಟೈಫಾಯಿಡ್ [ಡಿ] ಕ್ಯಾನ್ಸರ್ 7. ಕಂಪೆನಿ ಆಕ್ಟ್ 2013 ರ ದಂಡದ ನಿಬಂಧನೆಗಳ ಪರಿಶೀಲನೆಯ ಬಗ್...

**ಜ್ಞಾನ ಕಾರಂಜಿ**::: #ಇತಿಹಾಸದಲ್ಲಿ_ಬರುವ_ಪ್ರಮುಖ_ಶಾಸನಗಳು_ಮತ್ತು_ಅದರ_ರಚನಕಾರರು

1.ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ – ಹರಿಷೇಣ 2. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ – ಅಲಹಾ ಬಾದ್ ಸ್ತಂಭ ಶಾಸನ 3. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ – ಕೌಸಂಬಿ 4. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ – ಫೀರೋಜ್ ಷಾ ತುಘಲಕ್ 5. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ –ಮೆಹ್ರೋಲಿ ಕಬ್ಬಿಣದ ಸ್ತಂಭ ಶಾಸನ 6. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು – ಮಿರತ್ ಶಾಸನ ಹಾಗೂ ತೋಪ್ರ ಶಾಸನ 7. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ – ಕಂದಾಹಾರ್ 8. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ – ರುದ್ರದಾಮನ್ 9. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು – ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು 10. ತೆಲುಗಿನ ಪ್ರಥಮ ಶಾಸನ –ಕಲಿಮಲ್ಲ ಶಾಸನ 11. ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ 12. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ – ಅಶೋಕ 13. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ – ಬ್ರಾಹ್ಮಿ ಹಾಗೂ ಖರೋಷ್ಠಿ 14. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ – ಕಳಿಂಗ ಶಾಸನ 15. ಅಶೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು –1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್ ...

**ಜ್ಞಾನ ಕಾರಂಜಿ**::: ಯುವಶಕ್ತಿಯ ಹೆಗಲ ಮೇಲೆ ಒಲಿಂಪಿಕ್ಸ್ ಭವಿಷ್ಯ!

ಕ್ರೀಡೆಯಲ್ಲಿ ಭಾರತ ಹೊಸ ಶಕ್ತಿಯಾಗಿ ರೂಪುಗೊಳ್ಳುತ್ತಿರುವ ಹಂತದಲ್ಲಿ ಈಗ ಮತ್ತೊಂದು ರಾಷ್ಟ್ರೀಯ ಕ್ರೀಡಾ ದಿನ (ಆ.29) ಆಚರಿಸುವ ಸಮಯ ಬಂದಿದೆ. ಹಾಕಿ ಕ್ರೀಡೆಯ ದಂತಕಥೆ ಧ್ಯಾನ್​ಚಂದ್​ರ ಜನ್ಮದಿನವನ್ನೇ ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಾರತದ ಒಲಿಂಪಿಕ್ಸ್ ಕನಸು, ಸಾಧನೆ, ಪರಿಶ್ರಮದ ಮೇಲೊಂದು ನೋಟ… | ರಘುನಾಥ್ ಡಿ.ಪಿ. ಆರು ಗ್ರಾಮ್ ಚಿನ್ನ ಒಂದಿಡೀ ದೇಶದ ಮೌಲ್ಯವನ್ನು ಎತ್ತಿ ಹಿಡಿಯುವ ವಿಸ್ಮಯವೇ ಒಲಿಂಪಿಕ್ಸ್! ವಿಶ್ವದ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇರುವ ಮೌಲ್ಯವೇ ಇಂಥದ್ದು. ಹಾಗಾಗಿಯೇ ಒಲಿಂಪಿಕ್ಸ್​ನಲ್ಲಿ ಗೆಲ್ಲುವ ಪದಕ ಹಾಗೂ ಗೆದ್ದ ಕ್ರೀಡಾಪಟುಗಳಿಗೆ ಆಯಾ ದೇಶ ತೋರುವ ರಾಜಮರ್ಯಾದೆ ಎಣಿಕೆಗೆ ನಿಲುಕದ್ದು. ಶತಕೋಟಿ ಜನರಿರುವ ದೇಶವಾಗಿದ್ದರೂ ಭಾರತ ಈವರೆಗೂ ಒಲಿಂಪಿಕ್ಸ್ ಕಣದಲ್ಲಿ ಗೆದ್ದಿರುವ ಸ್ವರ್ಣ ಕೇವಲ 9. ಇದರಲ್ಲಿ ಒಂದೇ ಒಂದು ವೈಯಕ್ತಿಕ ಸ್ವರ್ಣ. ಸ್ಪರ್ಧಿಸಿರುವ 34 ಒಲಿಂಪಿಕ್ಸ್​ಗಳಿಂದ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 28 ಮಾತ್ರ. ಭಾರತ ಯುವಜನರ ದೇಶ. ಶೇ.50ಕ್ಕೂ ಹೆಚ್ಚು ಜನಸಂಖ್ಯೆ ಯುವ ಜನರಿಂದಲೇ ಕೂಡಿದೆ. ದೇಶದ ಪ್ರಗತಿಯಲ್ಲೂ ಇವರ ಪಾತ್ರ ಬಹುಮುಖ್ಯ. ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಇವರೇ ತುಂಬಿದ್ದಾರೆ. ದೇಶದ ಕ್ರೀಡಾಪ್ರಗತಿಯಲ್ಲಿ ಇವರೇ ಪ್ರಮುಖ ಅಸ್ತ್ರ. ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುವ ಇವರ ಕಾರ್ಯ...

**ಜ್ಞಾನ ಕಾರಂಜಿ**::: ಮಂಜಿತ್​ಗೆ ಗೋಲ್ಡ್, ಪದಕಗಳ ಅರ್ಧಶತಕ!

ಜಕಾರ್ತ: ಕೊನೆಯ 90 ಮೀಟರ್ ಓಟದಲ್ಲಿ ಮೂವರು ಸ್ಪರ್ಧಿಗಳನ್ನು ಹಿಂದಿಕ್ಕುವ ಮೂಲಕ ಭರ್ಜರಿ ನಿರ್ವಹಣೆ ತೋರಿದ ಮಂಜಿತ್ ಸಿಂಗ್   ಏಷ್ಯಾಡ್​ನ ಪುರುಷರ 800 ಮೀಟರ್ ಓಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಈ ವಿಭಾಗದ ಬೆಳ್ಳಿ ಪದಕ ಕೂಡ ಭಾರತದ ಜಿನ್ಸನ್ ಜಾನ್ಸನ್ ಗೆದ್ದುಕೊಂಡರು. ಪದಕದ ನಿರೀಕ್ಷೆ ಇರದ ಕ್ರೀಡೆಯಾಗಿದ್ದ ಮಾರ್ಷಲ್ ಆರ್ಟ್ಸ್ ಕುರಾಷ್​ನಲ್ಲಿ ಭಾರತ 2 ಪದಕ ಜಯಿಸುವ ಮೂಲಕ ಗಮನಸೆಳೆದಿದೆ. ಬೆಳಗಾವಿಯ ಮಲಪ್ರಭಾ ಜಾಧವ್ ಕುರಾಷ್​ನ 52 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರೆ, ಪಿಂಕಿ ಬಲ್ಹಾರಾ ಬೆಳ್ಳಿ ಪದಕವನ್ನು ಒಲಿಸಿಕೊಂಡರು. ವಿಶ್ವ ಅಥ್ಲೆಟಿಕ್ಸ್ ಒಕ್ಕೂಟದ ಮಾನ್ಯತೆಯ ಹೊಸ ಸ್ಪರ್ಧಾ ಕಣವಾಗಿರುವ 4/400 ಮೀಟರ್ ಮಿಶ್ರ ರಿಲೇ ಇದೇ ಮೊದಲ ಬಾರಿಗೆ ಏಷ್ಯಾಡ್​ಗೆ ಪದಾರ್ಪಣೆ ಮಾಡಿದ್ದು, ಕನ್ನಡತಿ ಎಂಆರ್ ಪೂವಮ್ಮ ಒಳಗೊಂಡ ಭಾರತ ತಂಡ ಈ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿತು. ಕೂಟದ 10ನೇ ದಿನ ಭಾರತ 1 ಚಿನ್ನ, 6 ಬೆಳ್ಳಿ ಮತ್ತು 2 ಕಂಚು ಗೆದ್ದು ಹಾಲಿ ಗೇಮ್ಸ್​ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಅರ್ಧಶತಕ ಪೂರೈಸಿದೆ. 800 ಮೀಟರ್ ಫೈನಲ್​ನಲ್ಲಿ ಅದ್ಭುತ ನಿರ್ವಹಣೆ ತೋರಿದ ಮಂಜಿತ್ ಸಿಂಗ್, ರೇಸ್ ಮುಗಿಯಲು ಕೊನೆಯ 90 ಮೀಟರ್ ಇರುವಾಗ 4ನೇ ಸ್ಥಾನದಲ್ಲಿದ್ದರು. ಜಿನ್ಸನ್ ಜಾನ್ಸನ್ 3ನೇ ಸ್ಥಾನದಲ್ಲಿದ್ದರು. ಆದರೆ, ಈ ನಿಮಿಷಗಳಲ್ಲಿ ವೇಗ ವೃದ್ಧಿಸಿಕೊಂಡ ಮಂಜಿತ್ 1 ನಿಮಿಷ 46.15 ಸೆಕೆಂಡ್​ನಲ...

**ಜ್ಞಾನ ಕಾರಂಜಿ**::: ನಲವತ್ತು ಉತ್ಪನ್ನ ರಫ್ತಿಗೆ ಚಿಂತನೆ

ವಾಣಿಜ್ಯ ಸಮರ ಸಾರಿರುವ ಅಮೆರಿಕ, ಅನೇಕ ವಸ್ತುಗಳ ಮೇಲಿನ ಸುಂಕ ಹೆಚ್ಚಳ ಮಾಡಿರುವುದರಿಂದ ದುಬಾರಿ ಬೆಲೆಕೊಟ್ಟು ಆಮದು ಮಾಡಿಕೊಳ್ಳಲು ಚೀನಾ ಹಿಂದೇಟು ಹಾಕುತ್ತಿದೆ. ಈ ಸನ್ನಿವೇಶವನ್ನು ದೇಶದ ರಫ್ತು ಹೆಚ್ಚಳಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಭಾರತ, ಅಮೆರಿಕದಿಂದ ಚೀನಾಕ್ಕೆ ಪೂರೈಕೆ ಆಗುತ್ತಿದ್ದ ವಸ್ತುಗಳ ಪೈಕಿ 40 ಉತ್ಪನ್ನಗಳನ್ನು ರಫ್ತು ಮಾಡಲು ಚಿಂತನೆ ನಡೆಸಿದೆ. ತಾಜಾ ದ್ರಾಕ್ಷಿ, ಹತ್ತಿ ನೂಲು, ಸಂಸ್ಕರಿಸಿದ ತಂಬಾಕು, ಮಿಶ್ರಲೋಹದ ಉಕ್ಕಿನ ಪೈಪ್ ಸೇರಿ 40 ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಇದರಲ್ಲಿ 20 ಉತ್ಪನ್ನಗಳು ಭಾರತದಲ್ಲಿ ಯಥೇಚ್ಛವಾಗಿ ಉತ್ಪಾದನೆ ಆಗುತ್ತಿದ್ದು, ಚೀನಾದ ಬೇಡಿಕೆಯನ್ನೂ ತಣಿಸಲಿದೆ. ಈ 20 ಉತ್ಪನ್ನಗಳಲ್ಲಿ ದನದ ಮಾಂಸ, ಬಾದಾಮಿಗಳೂ ಸೇರಿವೆ. ಆದರೆ, ಉತ್ಪನ್ನಗಳ ಪೂರೈಕೆ ಕುರಿತಂತೆ ಕೇಂದ್ರ ವಾಣಿಜ್ಯ ಸಚಿವಾಲಯದ ವಕ್ತಾರರು ಮಾಡಿದ್ದ ದೂರವಾಣಿ ಕರೆಗೆ ಚೀನಾದಿಂದ ತಕ್ಷಣದಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ. ಭಾರತ ರಫ್ತು ವಹಿವಾಟಿನಲ್ಲಿ -ಠಿ; 4.41 ಲಕ್ಷ ಕೋಟಿ (63 ಬಿಲಿಯನ್ ಡಾಲರ್) ಕೊರತೆ ಎದುರಿಸುತ್ತಿದ್ದು, ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಚೀನಾದಲ್ಲಿ ಅಮೆರಿಕ ಹೊಂದಿರುವ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಭಾರತ ಮುಂದಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ 40 ಉತ್ಪನ್ನಗಳ ಹೊರತಾಗಿ ಇನ್ನೂ 80 ವಸ್ತುಗಳನ್ನು ಚೀನಾಕ್ಕೆ ರಫ್ತು ಮ...

**ಜ್ಞಾನ ಕಾರಂಜಿ**::: ಡಿ. 1 ರಿಂದ ವಾಣಿಜ್ಯ ಡ್ರೋನ್ ಹಾರಾಟಕ್ಕೆ ಸರ್ಕಾರ ಸಮ್ಮತಿ

ನವದೆಹಲಿ: ಕೃಷಿ, ಆರೋಗ್ಯ ಸೇವೆಗಳು, ವಿಪತ್ತು ಪರಿಹಾರಕ್ಕಾಗಿ ಡ್ರೋನ್​ಗಳನ್ನು ಬಳಸಲು ಸರ್ಕಾರದ ಹೊಸ ಕಾನೂನು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಆದರೆ ಈ ಕಾನೂನು ಅನುಸಾರ ಆಹಾರ ವಿತರಣೆ, ಸರಕು ಸಾಗಣೆಗೆ ಸದ್ಯಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದಿನದಲ್ಲಿ ಕೇವಲ ನಾಗರಿಕ ಡ್ರೋನ್ ಹಾರಾಟಕ್ಕೆ ಅವಕಾಶವಿದೆ. ಅವುಗಳ ಹಾರಾಟ 450 ಮೀಟರ್ ಎತ್ತರ ಮೀರುವಂತಿಲ್ಲ. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಹಾಗೂ ಕೇಂದ್ರೀಯ ಗುಪ್ತಚರ ದಳದ ನ್ಯಾನೋ ಡ್ರೋನ್​ಗಳು ಹೊರತುಪಡಿಸಿ ಉಳಿದ ಎಲ್ಲ ಡ್ರೋನ್​ಗಳು ನೋಂದಣಿ ಮಾಡಿಸಿಕೊಂಡು ವಿಶಿಷ್ಟ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ. ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಗಡಿ, ಕರಾವಳಿ ಗಡಿ, ಸರ್ಕಾರದ ಸಚಿವಾಲಯಗಳ ಸುತ್ತ ಡ್ರೋನ್ ಹಾರಾಡುವಂತಿಲ್ಲ. ವಿಜಯ್ ಚೌಕ್, ಮಿಲಿಟರಿ ನೆಲೆಗಳ ಮೇಲೂ ಹಾರಾಡುವಂತಿಲ್ಲ. ಮದುವೆ ಫೋಟೋಗ್ರಫಿಗೆ ಬಳಸುವಂತಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

**ಜ್ಞಾನ ಕಾರಂಜಿ**::: ಅಂತರ್ಜಾಲ ಬಂದ್ ಆರ್ಥಿಕ ನಷ್ಟದ ವ್ಯಥೆ

ಗಲಭೆ ಹಾಗೂ ಇತರ ಪ್ರಕ್ಷುಬ್ಧ ವಾತಾವರಣಗಳಿಂದ ಸಾವಿರಾರು ಕೋಟಿ ರೂಪಾಯಿ ಆರ್ಥಿಕ ನಷ್ಟವಾಗುವುದು ಆಗಿಂದಾಗ್ಗೆ ವರದಿಯಾಗುತ್ತಿರುತ್ತದೆ. ಆದರೆ ಡಿಜಿಟಲ್ ಯುಗದಲ್ಲಿ ಇಂತಹ ಸಂದರ್ಭದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಅಂತರ್ಜಾಲ ಬಂದ್ ಮಾಡುವುದರಿಂದಲೂ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಭಾರತದಲ್ಲಿ 2012-17ರ ಅವಧಿಯಲ್ಲಿ 130 ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿ 16,315 ಗಂಟೆಗಳ ಕಾಲ ಅಂತರ್ಜಾಲ ಬಂದ್ ಮಾಡಲಾಗಿದೆ. ಇದರಿಂದ ದೇಶಕ್ಕೆ ಬರೋಬ್ಬರಿ 21,310 ಕೋಟಿ ರೂ. ನಷ್ಟವಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್​ನ್ಯಾಷನಲ್ ಎಕನಾಮಿಕ್ ರಿಲೇಷನ್ ಸಂಸ್ಥೆಯ ವರದಿಯಲ್ಲಿ ಬಹಿರಂಗವಾಗಿದೆ. ಶೇ.3.1 ಹೆಚ್ಚಳ ಸ್ಥಿರ ದೂರವಾಣಿ ಹಾಗೂ ಮೊಬೈಲ್​ನಲ್ಲಿ ಶೇ.10 ಅಂತರ್ಜಾಲ ಹರಿವು ಏರಿಕೆಯಾದರೆ ತಲಾ ಆದಾಯದಲ್ಲಿ ಶೇ.3.1 ಹೆಚ್ಚಳವಾಗುತ್ತದೆ. ಅದೇ ಮೊಬೈಲ್ ಅಂತರ್ಜಾಲದಲ್ಲಿ ಅದೇ ಪ್ರಮಾಣ ಹೆಚ್ಚಳವಾದರೆ ಶೇ.1.6 ತಲಾವಾರು ಆದಾಯ ಏರಿಕೆಯಾಗುತ್ತದೆ. ಗುಜರಾತ್ ನಗರಗಳ ನಷ್ಟ ಪಟೇಲ್​ವಿುೕಸಲು ಹೋರಾಟದ ಪ್ರಯುಕ್ತ ಗುಜರಾತ್​ನ ಅಹಮದಾಬಾದ್ ಹಾಗೂ ಸೂರತ್ ನಗರಗಳು ಭಾರಿ ನಷ್ಟ ಅನುಭವಿಸಿವೆ. ಅಹಮದಾಬಾದ್​ನಲ್ಲಿ -ಠಿ; 1,680 ಕೋಟಿ ಹಾಗೂ ಸೂರತ್​ನಲ್ಲಿ -ಠಿ; 5,953 ಕೋಟಿ ಆರ್ಥಿಕ ಹಾನಿಯಾಗಿದೆ. ವರದಿಯಲ್ಲಿ ಬೃಹತ್ ನಗರಗಳ ಪಟ್ಟಿಯಲ್ಲಿ ಇವೆರಡರ ಹೆಸರಿದೆ. 2015-16ರಲ್ಲಿ ಅತ್ಯಧಿಕ 2...

**ಜ್ಞಾನ ಕಾರಂಜಿ**::: ಭಾರತದ ಸತ್ಯ ತ್ರಿಪಾಠಿ ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿ ಭಾರತದ ಸತ್ಯ ತ್ರಿಪಾಠಿ ನೇಮಕವಾಗಿದ್ದಾರೆ. ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಉದ್ಯೋಗಿಯಾಗಿರುವ ತ್ರಿಪಾಠಿ, ಏಲಿಯಟ್ ಹ್ಯಾರೀಸ್ ಅವರಿಂದ ತೆರವಾಗುವ ಸ್ಥಾನ ತುಂಬಲಿದ್ದಾರೆ. ಆರ್ಥಿಕ ತಜ್ಞ, ವಕೀಲರಾಗಿರುವ ತ್ರಿಪಾಠಿ ಕಳೆದ 20 ವರ್ಷಗಳಿಂದ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಏಷ್ಯಾ ಹಾಗೂ ಆಫ್ರಿಕಾದ ಸುಸ್ಥಿರ ಅಭಿವೃದ್ಧಿ ವಿಚಾರದಲ್ಲಿ ಪ್ರಾವಿಣ್ಯ ಹೊಂದಿರುವ ತ್ರಿಪಾಠಿ, ಇಂಡೋನೇಷ್ಯಾ ಸುನಾಮಿ ಸಂದರ್ಭದಲ್ಲಿವ ವಿಶ್ವಸಂಸ್ಥೆ ಸಂಯೋಜಕರಾಗಿ ಕೆಲಸ ಮಾಡಿದ್ದರು. ಆರ್ಥಿಕತೆ, ವಾಯು ಮಾಲಿನ್ಯ ನಿಯಂತ್ರಣ, ಅರಣ್ಯ ಅಭಿವೃದ್ಧಿ, ಆಡಳಿತ ಹಾಗೂ ಕಾನೂನು ವಿಚಾರದಲ್ಲಿ ತ್ರಿಪಾಠಿ ಉತ್ತಮ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಬರ್ಹಾಂಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಧ್ಯಯನ ಮಾಡಿ, ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. – ಪಿಟಿಐ

**ಜ್ಞಾನ ಕಾರಂಜಿ**::: ಕಸ್ತೂರಿ ರಂಗನ್ ವರದಿಗೂ ವಿರೋಧ ಮುಂದೇನು?

ಕೆ. ರಾಘವ ಶರ್ಮಾ ನವದೆಹಲಿ  ಕೇರಳ ಮತ್ತು ಕರ್ನಾಟಕದ ಕೊಡಗಿನ ಭೀಕರ ಪ್ರವಾಹ, ಭೂಕುಸಿತಗಳಿಗೆ ಕಾರಣಗಳೇನಿರಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿರುವ ಮಧ್ಯೆಯೇ 2011ರಲ್ಲಿ ಡಾ. ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು ಸಲ್ಲಿಸಿದ್ದ ವರದಿಯ ಅನುಷ್ಠಾನಕ್ಕೆ ಒತ್ತಾಯ ಕೇಳಿಬರುತ್ತಿದೆ. ಆದರೆ, ಗಾಡ್ಗೀಳ್ ವರದಿ ಬದಲು, ಕೇಂದ್ರ ಸರ್ಕಾರ ವಿಜ್ಞಾನಿ, ಪರಿಸರ ತಜ್ಞ ಡಾ. ಕಸ್ತೂರಿ ರಂಗನ್ ಸಮಿತಿ ರಚಿಸಿ ಹೊಸ, ಪ್ರತ್ಯೇಕ ವರದಿ ತರಿಸಿಕೊಂಡಿದ್ದರಿಂದ ಗಾಡ್ಗೀಳ್ ವರದಿ ಇತಿಹಾಸದ ಪುಟ ಸೇರಿದೆ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುವ ರಾಜ್ಯಗಳು ಆಕ್ಷೇಪಣೆ ಸಲ್ಲಿಸಲು ಈ ತಿಂಗಳ 25 ಕೊನೆಯ ದಿನವಾಗಿತ್ತು. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ರಾಜ್ಯಗಳು ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೂಡ ಈಗ ತಿರಸ್ಕರಿಸಿರುವುದರಿಂದ ಇಲ್ಲಿನ ವೈವಿಧ್ಯಮಯ ಪರಿಸರದ ಸಂರಕ್ಷಣೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾದೀತು. # ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತ ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕರ್ನಾಟಕ ವಿರೋಧಿಸಿದೆ. ಮುಂದೇನು? – ಕಸ್ತೂರಿ ರಂಗನ್ ವರದಿಯ ಪೂರ್ಣ ಪ್ರಮಾಣದ ಅನುಷ್ಠಾನವನ್ನು ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗ...

**ಜ್ಞಾನ ಕಾರಂಜಿ**::: ಏಷ್ಯಾಡ್​ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಪ್ರಥಮ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಸಿಂಧು!

ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್​ ಫೈನಲ್​ ಪ್ರವೇಶಿಸಿದ ಮೊದಲ ಬ್ಯಾಡ್ಮಿಂಟನ್​ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಐತಿಹಾಸಿಕ ಚಿನ್ನದ ಪದಕ ಬೇಟೆಗಿಳಿದಿದ್ದ ಭಾರತದ ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು, ವಿಶ್ವದ ನಂಬರ್​ ಒನ್​ ಆಟಗಾರ್ತಿ ಚೈನೀಸ್​ ತೆಪೆಯ ತೈ ಜು ಯಿಂಗ್ ಎದುರು 13-21, 16-21 ನೇರ ಸೆಟ್​ಗಳ ಮೂಲಕ ಸೋಲನುಭವಿಸಿದರು. ನಿನ್ನೆ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಜಪಾನಿನ ಮಾಜಿ ವಿಶ್ವ ಚಾಂಪಿಯನ್ ಅಕಾನೆ ಯೆಮಗುಚಿ ವಿರುದ್ಧ 21-17, 15-21, 21-10ರ ಅಂತರದಲ್ಲಿ ಗೆಲ್ಲುವ ಮೂಲಕ ಏಷ್ಯಾಡ್​ ಫೈನಲ್ಸ್​ಗೆ ಐತಿಹಾಸಿಕ ಪ್ರವೇಶ ಪಡೆದಿದ್ದರು. ಸಿಂಧು ಸಾಧನೆಗೆ ದೇಶವೇ ಮೆಚ್ಚುಗೆಯ ಸುರಿಮಳೆ ಸುರಿಸಿದ್ದು, ಕ್ರೀಡಾ ಸಚಿವ ರಾಜ್ಯವರ್ಧನ್​ ರಾಥೋಡ್​ ಟ್ವೀಟ್​ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಏಷ್ಯಾಡ್ ಬ್ಯಾಡ್ಮಿಂಟನ್​ನ ಮಹಿಳಾ ಸಿಂಗಲ್ಸ್​ನಲ್ಲಿ ಭಾರತ ಈವರೆಗೂ ಪದಕ ಸಾಧನೆ ಮಾಡಿರಲಿಲ್ಲ. ಆದರೆ, ಹಾಲಿ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ್ದು, ಸಿಂಧು ಮೂಲಕ ಐತಿಹಾಸಿಕ ಸ್ವರ್ಣವನ್ನು ನಿರೀಕ್ಷಿಸಿತ್ತು. 1982ರ ಏಷ್ಯಾಡ್​ನಲ್ಲಿ ಸಯ್ಯದ್ ಮೋದಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಬಂದಿರಲಿಲ್ಲ. (ಏಜೆನ್ಸೀಸ್​) PV Sindhu scripts HISTORY! Our stellar shuttler  @Pvsi...

**ಜ್ಞಾನ ಕಾರಂಜಿ**::: ಅಮೂಲ್ಯ ಜೀವಜಲ ನೀರು!

ಮಾರ್ಚ 22 ನ್ನು ವಿಶ್ವಜಲ ದಿನ ಎಂದು ಆಚರಿಲಾಗುತ್ತದೆ. ನೀರಿನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ ನೀರಿನ ಪ್ರಾಮುಖ್ಯತೆ-  ಭೂಮಿಯ ಮೇಲಿರುವ ಮೂಲಭೂತ ವಸ್ತುಗಳಲ್ಲಿ ನೀರು ಒಂದು. ನೀರನ್ನು ಹೈಡ್ರೋಜನ್ ಮೋನಾಕ್ಸೆಡ್ ಎಂದು ಕರೆಯುವರು. ಜೀವಪೋಷಣೆಯಲ್ಲಿ ನೀರು ಅವಶ್ಯ. ನಮ್ಮ ದೇಹದ 2/3 ಭಾಗ ಮತ್ತು ರಕ್ತದ 9/10 ಭಾಗ ನೀರಿನಿಂದ ಕೂಡಿದೆ. ಭೂಮಿಯು ಸುಮಾರು ¾ ಭಾಗ ನೀರಿನಿಂದ ಆವೃತ್ತವಾಗಿದೆ. ನೀರಿನ ಲಕ್ಷಣಗಳು-  ಶುದ್ದ ನೀರು ಬಣ್ಣ ಇಲ್ಲದ ಪಾರದರ್ಶಕ ದ್ರವ. ವಾಸನೆ ಹಾಗೂ ರುಚಿ ಇಲ್ಲದ ದ್ರವ, ನೀರು ಒಂದು ಸಂಯುಕ್ತವಾಗಿದ್ದು, ಇದು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳಿಂದ 2/1 ಪ್ರಮಾಣದಲ್ಲಿ ಕೂಡಿ ನೀರಾಗಿದೆ. ನೀರಿನ ಅಣುಸೂತ್ರ H20. ಶುದ್ದ ನೀರು ಒಂದು ಅನುಷ್ಟವಾಹಕ ಮತ್ತು ವಿದ್ಯುತವಾಹಕ  ನೀರು ಯಾವ ತಾಪಮಾನದಲ್ಲಿ ಕುದಿಯುತ್ತದಯೋ ಅದನ್ನು ನೀರಿನ ಕುದಿಯುವ ಬಿಂದು ಎನ್ನುವರು. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್. 0 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ನೀರು ಘನಿಭವಿಸುತ್ತದೆ. 4 ಡಿಗ್ರಿಸೆಲ್ಸಿಯ ಇದು ನೀರಿನ ಸಾಂದ್ರತೆ ಇದೆ.  ನೀರು ಒಂದು ದ್ರಾವಕವಾಗಿದ್ದು, ಎರಡು  ಅಥವಾ ಹೆಚ್ಚು ವಸ್ತುಗಳ ಸಮಜ್ಯಾತ ಮಿಶ್ರಣವನ್ನು ದ್ರಾವಣ ಎನ್ನುವರು ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು. ನಿಸರ್ಗದಲ್ಲಿ ಸಿಗುವ ಅತ್ಯಂತ ಶುದ್ದವಾಗಿ ಕಂಡುಬರುವುದು ಮಳೆ ನೀರು 0.005% ರಷ್ಟು ಲವಣಗಳನ್ನು ತನ್ನಲ್ಲಿ ಕರ...

**ಜ್ಞಾನ ಕಾರಂಜಿ**::: ಸಾಮಾನ್ಯ ಅರ‍್ಥಶಾಸ್ತ್ರ ಮತ್ತು ಇತರೆ

* ಪೋಕ್ಸೊ ಕಾಯ್ದೆ (2012) ಯನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಜಾರಿಗೆ ತರಲಾಗಿದೆ . * 23 ನೇ ಕಾಮನವೆಲ್ ತ್ ದೇಶಗಳ ಮುಖ್ಯಸ್ಥರ ಸಭೆಯು 2013 ರ ನವೆಂಬರ್ 15 ರಿಂದ 17 ರವರೆಗೆ ಶ್ರೀಲಂಕಾದಲ್ಲಿ ಜರುಗಿತು . * ಕಾಮನವೆಲ್ತ್ ದೇಶಗಳ ಮುಖ್ಯಸ್ಥರ ಮುಂದಿನ ಮತ್ತು 24 ನೇ ಸಭೆ 2015 ರ ನವೆಂಬ ರ‍್ 27 ರಿಂದ 29 ರವರೆಗೆ ಮಾಲ್ಟಾ ಧೆಶದ ರಾಜಧಾನಿ ವಾಲೆಟ್ಟಾದಲ್ಲಿ ಜರುಗಲಿದೆ . * ಆಲಿಪ್ತ ನೀತಿಯ ಒಕ್ಕೂಟದ ಮೊದಲ ಸಭೆಯು 1961 ರಲ್ಲಿ ಬೆಲ್ ಗ್ರೇಡ್ನಲ್ಲಿ ಜರುಗಿತು . * ಆಲಿಪ್ತ ನೀತಿ ಒಕ್ಕೂಟದ 16 ನೇ ಶೃಂಗ ಸಭೆಯು ಅಗಸ್ಟ್ 26 ರಿಂದ 31 2012 ರವರೆಗೆ ಇರಾನ ನ ಟೆಹರಾನನಲ್ಲಿ ಜರುಗಿತು . * ಆಲಿಪ್ತ ನೀತಿ ಒಕ್ಕೂಟದ ಮುಂದಿನ ಸಭೆಯು ಮತ್ತು 17 ನೇ ಸಭೆಯು ವೆನಿಜುವೆಲಾದ ಕಾರಕಸ್ ನಲ್ಲಿ ಜರುಗಲಿದೆ . * ಆಲಿಪ್ತ ನೀತಿ ಒಕ್ಕೂಟದಲ್ಲಿ ಪ್ರಸ್ತುತವಾಗಿ 120 ಸದಸ್ಯ ರಾಷ್ಟ್ರಗಳಿವೆ . * 40 ನೇ ಜಿ -7 ರಾಷ್ಟ್ರಗಳ ಶೃಂಗಸಭೆಯು ಬೆಲ್ಜಿಯಂ ಬ್ರುಸೇಲ್ಸನಲ್ಲಿ ಜರುಗಿತು . * 41 ನೇ ಜಿ -7 ರಾಷ್ಟ್ರಗಳ ಶೃಂಗಸಭೆಯು ಜರ್ಮನಿಯ ಬವಾರಿಯಾ ದಲ್ಲಿ ಜರುಗಲಿದೆ . * ಪ್ರಸ್ತುತವಾಗಿ ಜಿ -7 ರಾಷ್ಟ್ರಗಳಲ್ಲಿ ಕೆನಡಾ , ಪ್ರಾನ್ಸ , ಜರ್ಮನಿ , ಇಟಲಿ , ಜಪಾನ್ , ಯುಕೆ ಮತ್ತು ಅಮೇರಿಕ ರಾಷ್ಟ್ರಗಳಿವ...