ಕೆ. ರಾಘವ ಶರ್ಮಾ ನವದೆಹಲಿ
ಕೇರಳ ಮತ್ತು ಕರ್ನಾಟಕದ ಕೊಡಗಿನ ಭೀಕರ ಪ್ರವಾಹ, ಭೂಕುಸಿತಗಳಿಗೆ ಕಾರಣಗಳೇನಿರಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿರುವ ಮಧ್ಯೆಯೇ 2011ರಲ್ಲಿ ಡಾ. ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು ಸಲ್ಲಿಸಿದ್ದ ವರದಿಯ ಅನುಷ್ಠಾನಕ್ಕೆ ಒತ್ತಾಯ ಕೇಳಿಬರುತ್ತಿದೆ. ಆದರೆ, ಗಾಡ್ಗೀಳ್ ವರದಿ ಬದಲು, ಕೇಂದ್ರ ಸರ್ಕಾರ ವಿಜ್ಞಾನಿ, ಪರಿಸರ ತಜ್ಞ ಡಾ. ಕಸ್ತೂರಿ ರಂಗನ್ ಸಮಿತಿ ರಚಿಸಿ ಹೊಸ, ಪ್ರತ್ಯೇಕ ವರದಿ ತರಿಸಿಕೊಂಡಿದ್ದರಿಂದ ಗಾಡ್ಗೀಳ್ ವರದಿ ಇತಿಹಾಸದ ಪುಟ ಸೇರಿದೆ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುವ ರಾಜ್ಯಗಳು ಆಕ್ಷೇಪಣೆ ಸಲ್ಲಿಸಲು ಈ ತಿಂಗಳ 25 ಕೊನೆಯ ದಿನವಾಗಿತ್ತು. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ರಾಜ್ಯಗಳು ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೂಡ ಈಗ ತಿರಸ್ಕರಿಸಿರುವುದರಿಂದ ಇಲ್ಲಿನ ವೈವಿಧ್ಯಮಯ ಪರಿಸರದ ಸಂರಕ್ಷಣೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾದೀತು.
# ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತ ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕರ್ನಾಟಕ ವಿರೋಧಿಸಿದೆ. ಮುಂದೇನು?
– ಕಸ್ತೂರಿ ರಂಗನ್ ವರದಿಯ ಪೂರ್ಣ ಪ್ರಮಾಣದ ಅನುಷ್ಠಾನವನ್ನು ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ವಿರೋಧಿಸಿವೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ವರದಿಯ ಪರಿಷ್ಕೃತ ಅಧಿಸೂಚನೆ ಸಾಧ್ಯವಾಗಿಲ್ಲ. 3 ದಿನಗಳ ಹಿಂದೆ ಕರ್ನಾಟಕ ಕೂಡ ತನ್ನ ಆಕ್ಷೇಪಣೆ ಸಲ್ಲಿಸಿದ್ದು, ಕೇಂದ್ರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದರಿಂದ ಸೂಕ್ಷ್ಮ ಪರಿಸರ, ಸಾವಿರಾರು ಜೀವ ವೈವಿಧ್ಯ, ಪ್ರಬೇಧಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳ ರಕ್ಷಣೆ ಹೇಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರಗಳು ಸಲ್ಲಿಸಿರುವ ಆಕ್ಷೇಪಣೆಗಳಿಂದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಕದ ಬಡಿಯುವುದೆ ಅಥವಾ ರಾಜ್ಯಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದೇ ಎಂಬುದು ಸ್ಪಷ್ಟವಾಗಿಲ್ಲ.
# 2011ರಲ್ಲಿ ಗಾಡ್ಗೀಳ್ ವರದಿಯಲ್ಲಿ ಹೇಳಿದ್ದೇನು?
– ಡಾ. ಗಾಡ್ಗೀಳ್ ಸಮಿತಿ ರಚನೆಗೆ 2010ರಲ್ಲಿ ಆದೇಶಿಸಿದ್ದು ಅಂದಿನ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್. ಒಂದೂವರೆ ವರ್ಷದಲ್ಲಿ ವರದಿ ಸಿದ್ಧಪಡಿಸಿದ ಸಮಿತಿ, 1,29,037 ಚ.ಕಿ.ಮೀ ಭೂಪ್ರದೇಶ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ. ಇದನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಬೇಕು ಮತ್ತು ಅವುಗಳನ್ನು 3 ವಿಭಾಗಗಳನ್ನಾಗಿ ವಿಂಗಡಿಸಬೇಕೆಂದು ಶಿಫಾರಸು ಮಾಡಿತ್ತು. ಸಮಿತಿಯ ಕೆಲ ಪ್ರಮುಖ ಶಿಫಾರಸುಗಳು ಹೀಗಿವೆ:
ತಳಿ ಮಾರ್ಪಾಡು ಮಾಡಿದ (genetically modified)) ಕೃಷಿಗೆ ಇಲ್ಲಿ ಅವಕಾಶ ನೀಡಕೂಡದು.
ಮೂರು ವರ್ಷದೊಳಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು.
ಗಿರಿಧಾಮಗಳಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣ ಬೇಡ.
ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತಿಸುವುದಕ್ಕೆ ನಿಷೇಧ.
ಪರಿಸರ ಸೂಕ್ಷ್ಮ ವಲಯ-1 ಮತ್ತು 2ರಲ್ಲಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಕೆಲಸಗಳಿಗೆ ಬಳಸುವಂತಿಲ್ಲ, ಗಣಿಗಾರಿಕೆಗೂ ಅವಕಾಶವಿಲ್ಲ, ಪರಿಸರ ಮಲಿನಗೊಳಿಸುವ ಕೈಗಾರಿಕೆ, ಹೊಸ ರೈಲ್ವೆ ಲೈನ್ಗಳು ಹಾಗೂ ದೊಡ್ಡ ಪ್ರಮಾಣದ ರಸ್ತೆ ನಿರ್ವಣಕ್ಕೂ ಸಮ್ಮತಿ ನೀಡಬಾರದು.
ಪರಿಸರ ಸೂಕ್ಷ್ಮ ವಲಯ-1ರಲ್ಲಿ ಜಲಾಶಯ ನಿರ್ವಣವೂ ಬೇಡ.
ಪರಿಸರ ಸೂಕ್ಷ್ಮ ವಲಯ-1ರಲ್ಲಿ ಥರ್ಮಲ್ ವಿದ್ಯುತ್ ಸ್ಥಾವರಗಳಿಗೆ ಅನುಮತಿ ಬೇಡ.
ಮುಂದಿನ 5-8 ವರ್ಷಗಳಲ್ಲಿ ಪರಿಸರ ಸೂಕ್ಷ್ಮ ವಲಯ-1 ಮತ್ತು 2ರಲ್ಲಿ ಎಲ್ಲ ಮಾದರಿಯ ರಾಸಾಯನಿಕ ಕೀಟನಾಶಕಗಳಿಂದ ಪರಿಸರವನ್ನು ಕಾಪಾಡಬೇಕು.
# ರಾಜ್ಯದ ವಿರೋಧವೇಕೆ?
ಕಸ್ತೂರಿ ರಂಗನ್ ವರದಿ ಪ್ರಕಾರ ರಾಜ್ಯದ 10 ಜಿಲ್ಲೆಗಳ 1573 ಗ್ರಾಮಗಳು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಅಭಿವೃದ್ಧಿ ಚಟುವಟಿಕೆ (ಮರಳು ಗಣಿಗಾರಿಕೆ, ಕಟ್ಟಡ ನಿರ್ವಣ, ರಸ್ತೆ-ರೈಲ್ವೆ ಸಂಪರ್ಕ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆ) ಕೈಗೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ರಾಜ್ಯ ವರದಿಯ ಅನುಷ್ಠಾನಕ್ಕೆ ಸಮ್ಮತಿಸಿಲ್ಲ.
# ಗಾಡ್ಗೀಳ್ ವರದಿ ಏನಾಯ್ತು?
ಗಾಡ್ಗೀಳ್ ವರದಿಯಲ್ಲಿನ ಅಂಶಗಳು ಬೆಳಕಿಗೆ ಬರುತ್ತಿದ್ದಂತೆ ಸಂಬಂಧಪಟ್ಟ ರಾಜ್ಯಗಳಿಂದ ವಿರೋಧ ವ್ಯಕ್ತವಾದವು. ಹೀಗಾಗಿ, ಅಂದಿನ ಯುಪಿಎ ಸರ್ಕಾರ ವರದಿಯ ಅಧಿಕೃತ ಬಿಡುಗಡೆಯನ್ನೇ ರದ್ದುಪಡಿಸಿತ್ತು! 2012ರಲ್ಲಿ ಅಂದಿನ ಯುಪಿಎ ಸರ್ಕಾರ ಡಾ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ, ಗಾಡ್ಗೀಳ್ ಸಮಿತಿ ವರದಿಯನ್ನು ಸಮಗ್ರವಾಗಿ ಅವಲೋಕಿಸಿ, ರಾಜ್ಯಗಳ ಪ್ರತಿಕ್ರಿಯೆಗಳನ್ನೂ ಗಣನೆಗೆ ತೆಗೆದುಕೊಂಡು ವರದಿ ನೀಡಬೇಕೆಂದು ನಿರ್ದೇಶಿಸಿದರು. 2013ರಲ್ಲಿ ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೇಂದ್ರಕ್ಕೆ ಹಸ್ತಾಂತರಿಸಿತು. ಒಟ್ಟು 1750 ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದ ಸಮಿತಿ, ಶೇ.81ರಷ್ಟು ಮಂದಿ ಗಾಡ್ಗೀಳ್ ವರದಿಯನ್ನು ವಿರೋಧಿಸಿದ್ದಾರೆ ಎಂದು ದಾಖಲಿಸಿತು.
# ಸರ್ಕಾರ ನೀಡಿರುವ ಸಲಹೆಯೇನು?
ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ. ಕಸ್ತೂರಿ ರಂಗನ್ ವರದಿಯ ಅಧಿಸೂಚನೆಗೆ ನಮಗೆ ಆಕ್ಷೇಪಣೆಗಳಿದ್ದು, ಕೇಂದ್ರ ಪರಿಸರ ಇಲಾಖೆ ರಾಜ್ಯದ ಬೇಡಿಕೆಗಳನ್ನು ಪರಿಶೀಲಿಸಲು ಅಧ್ಯಯನ ಸಮಿತಿ ರಚನೆ ಮಾಡಿದರೆ ಪೂರಕ ಸಹಕಾರ ನೀಡಲು ಸಿದ್ಧ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
# ವರದಿಯಲ್ಲಿ ಏನಿದೆ?
– ಕಸ್ತೂರಿ ರಂಗನ್ ಸಮಿತಿಯ ಕೆಲ ಶಿಫಾರಸುಗಳು ಹೀಗಿವೆ
ಗಣಿಗಾರಿಕೆ, ಕಲ್ಲು ಕ್ವಾರಿ ಮತ್ತು ಮರಳು ಗಣಿಗಾರಿಕೆಗೆ ನಿಷೇಧ.
ಥರ್ಮಲ್ ವಿದ್ಯುತ್ ಯೋಜನೆಗಳಿಗೆ ಅನುಮತಿ ಬೇಡ. ಆದರೆ ಜಲ ವಿದ್ಯುತ್ ಯೋಜನೆಗಳಿಗೆ ಷರತ್ತುಬದ್ಧ ಅನುಮತಿ ನೀಡಬಹುದು.
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗೆ ಅವಕಾಶ ಬೇಡ.
ಟೌನ್ಶಿಪ್ ನಿರ್ಮಾಣ ಮಾಡಕೂಡದು. ಆದರೆ 20000 ಚ.ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಯೋಜನೆಗಳನ್ನು ನಡೆಸಬಹುದು.
ಎಚ್ಚರಿಕೆಯ ಮತ್ತು ಷರತ್ತುಬದ್ಧ ಕ್ರಮಗಳೊಂದಿಗೆ ಅರಣ್ಯ ಭೂಮಿಯನ್ನು ಅರಣ್ಯೇತರ ಕೆಲಸಗಳಿಗೆ ಬಳಸಬಹುದು.
# ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿತು?
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷದ ಫೆಬ್ರವರಿಯಲ್ಲಿ 56,285 ಚ.ಕಿ.ಮೀ ಭೂಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಿ ಅಧಿಸೂಚನೆ ಜಾರಿ ಮಾಡಿತು. ಕೇರಳದಲ್ಲಿ 13,108 ಚ.ಕಿ.ಮೀ ಭೂಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಕಸ್ತೂರಿ ರಂಗನ್ ಸಮಿತಿ ಹೇಳಿದ್ದಕ್ಕೆ ಕೇರಳ ಆಕ್ಷೇಪ ವ್ಯಕ್ತಪಡಿಸಿತು. ಆದ್ದರಿಂದ ಈ ಪ್ರಮಾಣವನ್ನು 9993 ಚ.ಕಿ.ಮೀ.ಗೆ ಇಳಿಸಲಾಯಿತು.
ಕೇರಳ ಮತ್ತು ಕರ್ನಾಟಕದ ಕೊಡಗಿನ ಭೀಕರ ಪ್ರವಾಹ, ಭೂಕುಸಿತಗಳಿಗೆ ಕಾರಣಗಳೇನಿರಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿರುವ ಮಧ್ಯೆಯೇ 2011ರಲ್ಲಿ ಡಾ. ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು ಸಲ್ಲಿಸಿದ್ದ ವರದಿಯ ಅನುಷ್ಠಾನಕ್ಕೆ ಒತ್ತಾಯ ಕೇಳಿಬರುತ್ತಿದೆ. ಆದರೆ, ಗಾಡ್ಗೀಳ್ ವರದಿ ಬದಲು, ಕೇಂದ್ರ ಸರ್ಕಾರ ವಿಜ್ಞಾನಿ, ಪರಿಸರ ತಜ್ಞ ಡಾ. ಕಸ್ತೂರಿ ರಂಗನ್ ಸಮಿತಿ ರಚಿಸಿ ಹೊಸ, ಪ್ರತ್ಯೇಕ ವರದಿ ತರಿಸಿಕೊಂಡಿದ್ದರಿಂದ ಗಾಡ್ಗೀಳ್ ವರದಿ ಇತಿಹಾಸದ ಪುಟ ಸೇರಿದೆ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಪಶ್ಚಿಮಘಟ್ಟ ವ್ಯಾಪ್ತಿಗೆ ಒಳಪಡುವ ರಾಜ್ಯಗಳು ಆಕ್ಷೇಪಣೆ ಸಲ್ಲಿಸಲು ಈ ತಿಂಗಳ 25 ಕೊನೆಯ ದಿನವಾಗಿತ್ತು. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿರುವ ರಾಜ್ಯಗಳು ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೂಡ ಈಗ ತಿರಸ್ಕರಿಸಿರುವುದರಿಂದ ಇಲ್ಲಿನ ವೈವಿಧ್ಯಮಯ ಪರಿಸರದ ಸಂರಕ್ಷಣೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪಶ್ಚಿಮ ಘಟ್ಟಗಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಮತ್ತಷ್ಟು ಕರಾಳವಾದೀತು.
# ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತ ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕರ್ನಾಟಕ ವಿರೋಧಿಸಿದೆ. ಮುಂದೇನು?
– ಕಸ್ತೂರಿ ರಂಗನ್ ವರದಿಯ ಪೂರ್ಣ ಪ್ರಮಾಣದ ಅನುಷ್ಠಾನವನ್ನು ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ವಿರೋಧಿಸಿವೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ವರದಿಯ ಪರಿಷ್ಕೃತ ಅಧಿಸೂಚನೆ ಸಾಧ್ಯವಾಗಿಲ್ಲ. 3 ದಿನಗಳ ಹಿಂದೆ ಕರ್ನಾಟಕ ಕೂಡ ತನ್ನ ಆಕ್ಷೇಪಣೆ ಸಲ್ಲಿಸಿದ್ದು, ಕೇಂದ್ರ ಇಕ್ಕಟ್ಟಿನಲ್ಲಿ ಸಿಲುಕಿದೆ. ಇದರಿಂದ ಸೂಕ್ಷ್ಮ ಪರಿಸರ, ಸಾವಿರಾರು ಜೀವ ವೈವಿಧ್ಯ, ಪ್ರಬೇಧಗಳನ್ನು ಹೊಂದಿರುವ ಪಶ್ಚಿಮ ಘಟ್ಟಗಳ ರಕ್ಷಣೆ ಹೇಗೆ ಎಂಬ ಗೊಂದಲ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರಗಳು ಸಲ್ಲಿಸಿರುವ ಆಕ್ಷೇಪಣೆಗಳಿಂದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಕದ ಬಡಿಯುವುದೆ ಅಥವಾ ರಾಜ್ಯಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದೇ ಎಂಬುದು ಸ್ಪಷ್ಟವಾಗಿಲ್ಲ.
# 2011ರಲ್ಲಿ ಗಾಡ್ಗೀಳ್ ವರದಿಯಲ್ಲಿ ಹೇಳಿದ್ದೇನು?
– ಡಾ. ಗಾಡ್ಗೀಳ್ ಸಮಿತಿ ರಚನೆಗೆ 2010ರಲ್ಲಿ ಆದೇಶಿಸಿದ್ದು ಅಂದಿನ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್. ಒಂದೂವರೆ ವರ್ಷದಲ್ಲಿ ವರದಿ ಸಿದ್ಧಪಡಿಸಿದ ಸಮಿತಿ, 1,29,037 ಚ.ಕಿ.ಮೀ ಭೂಪ್ರದೇಶ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿದೆ. ಇದನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಬೇಕು ಮತ್ತು ಅವುಗಳನ್ನು 3 ವಿಭಾಗಗಳನ್ನಾಗಿ ವಿಂಗಡಿಸಬೇಕೆಂದು ಶಿಫಾರಸು ಮಾಡಿತ್ತು. ಸಮಿತಿಯ ಕೆಲ ಪ್ರಮುಖ ಶಿಫಾರಸುಗಳು ಹೀಗಿವೆ:
ತಳಿ ಮಾರ್ಪಾಡು ಮಾಡಿದ (genetically modified)) ಕೃಷಿಗೆ ಇಲ್ಲಿ ಅವಕಾಶ ನೀಡಕೂಡದು.
ಮೂರು ವರ್ಷದೊಳಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು.
ಗಿರಿಧಾಮಗಳಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣ ಬೇಡ.
ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ಪರಿವರ್ತಿಸುವುದಕ್ಕೆ ನಿಷೇಧ.
ಪರಿಸರ ಸೂಕ್ಷ್ಮ ವಲಯ-1 ಮತ್ತು 2ರಲ್ಲಿ ಅರಣ್ಯ ಪ್ರದೇಶವನ್ನು ಅರಣ್ಯೇತರ ಕೆಲಸಗಳಿಗೆ ಬಳಸುವಂತಿಲ್ಲ, ಗಣಿಗಾರಿಕೆಗೂ ಅವಕಾಶವಿಲ್ಲ, ಪರಿಸರ ಮಲಿನಗೊಳಿಸುವ ಕೈಗಾರಿಕೆ, ಹೊಸ ರೈಲ್ವೆ ಲೈನ್ಗಳು ಹಾಗೂ ದೊಡ್ಡ ಪ್ರಮಾಣದ ರಸ್ತೆ ನಿರ್ವಣಕ್ಕೂ ಸಮ್ಮತಿ ನೀಡಬಾರದು.
ಪರಿಸರ ಸೂಕ್ಷ್ಮ ವಲಯ-1ರಲ್ಲಿ ಜಲಾಶಯ ನಿರ್ವಣವೂ ಬೇಡ.
ಪರಿಸರ ಸೂಕ್ಷ್ಮ ವಲಯ-1ರಲ್ಲಿ ಥರ್ಮಲ್ ವಿದ್ಯುತ್ ಸ್ಥಾವರಗಳಿಗೆ ಅನುಮತಿ ಬೇಡ.
ಮುಂದಿನ 5-8 ವರ್ಷಗಳಲ್ಲಿ ಪರಿಸರ ಸೂಕ್ಷ್ಮ ವಲಯ-1 ಮತ್ತು 2ರಲ್ಲಿ ಎಲ್ಲ ಮಾದರಿಯ ರಾಸಾಯನಿಕ ಕೀಟನಾಶಕಗಳಿಂದ ಪರಿಸರವನ್ನು ಕಾಪಾಡಬೇಕು.
# ರಾಜ್ಯದ ವಿರೋಧವೇಕೆ?
ಕಸ್ತೂರಿ ರಂಗನ್ ವರದಿ ಪ್ರಕಾರ ರಾಜ್ಯದ 10 ಜಿಲ್ಲೆಗಳ 1573 ಗ್ರಾಮಗಳು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಅಭಿವೃದ್ಧಿ ಚಟುವಟಿಕೆ (ಮರಳು ಗಣಿಗಾರಿಕೆ, ಕಟ್ಟಡ ನಿರ್ವಣ, ರಸ್ತೆ-ರೈಲ್ವೆ ಸಂಪರ್ಕ ಸೇರಿದಂತೆ ವಿವಿಧ ಮೂಲಸೌಕರ್ಯ ಯೋಜನೆ) ಕೈಗೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ರಾಜ್ಯ ವರದಿಯ ಅನುಷ್ಠಾನಕ್ಕೆ ಸಮ್ಮತಿಸಿಲ್ಲ.
# ಗಾಡ್ಗೀಳ್ ವರದಿ ಏನಾಯ್ತು?
ಗಾಡ್ಗೀಳ್ ವರದಿಯಲ್ಲಿನ ಅಂಶಗಳು ಬೆಳಕಿಗೆ ಬರುತ್ತಿದ್ದಂತೆ ಸಂಬಂಧಪಟ್ಟ ರಾಜ್ಯಗಳಿಂದ ವಿರೋಧ ವ್ಯಕ್ತವಾದವು. ಹೀಗಾಗಿ, ಅಂದಿನ ಯುಪಿಎ ಸರ್ಕಾರ ವರದಿಯ ಅಧಿಕೃತ ಬಿಡುಗಡೆಯನ್ನೇ ರದ್ದುಪಡಿಸಿತ್ತು! 2012ರಲ್ಲಿ ಅಂದಿನ ಯುಪಿಎ ಸರ್ಕಾರ ಡಾ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿ, ಗಾಡ್ಗೀಳ್ ಸಮಿತಿ ವರದಿಯನ್ನು ಸಮಗ್ರವಾಗಿ ಅವಲೋಕಿಸಿ, ರಾಜ್ಯಗಳ ಪ್ರತಿಕ್ರಿಯೆಗಳನ್ನೂ ಗಣನೆಗೆ ತೆಗೆದುಕೊಂಡು ವರದಿ ನೀಡಬೇಕೆಂದು ನಿರ್ದೇಶಿಸಿದರು. 2013ರಲ್ಲಿ ಡಾ. ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಕೇಂದ್ರಕ್ಕೆ ಹಸ್ತಾಂತರಿಸಿತು. ಒಟ್ಟು 1750 ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದ ಸಮಿತಿ, ಶೇ.81ರಷ್ಟು ಮಂದಿ ಗಾಡ್ಗೀಳ್ ವರದಿಯನ್ನು ವಿರೋಧಿಸಿದ್ದಾರೆ ಎಂದು ದಾಖಲಿಸಿತು.
# ಸರ್ಕಾರ ನೀಡಿರುವ ಸಲಹೆಯೇನು?
ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾರ್ವಜನಿಕರು, ಜನಪ್ರತಿನಿಧಿಗಳು ಸೇರಿದಂತೆ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ. ಕಸ್ತೂರಿ ರಂಗನ್ ವರದಿಯ ಅಧಿಸೂಚನೆಗೆ ನಮಗೆ ಆಕ್ಷೇಪಣೆಗಳಿದ್ದು, ಕೇಂದ್ರ ಪರಿಸರ ಇಲಾಖೆ ರಾಜ್ಯದ ಬೇಡಿಕೆಗಳನ್ನು ಪರಿಶೀಲಿಸಲು ಅಧ್ಯಯನ ಸಮಿತಿ ರಚನೆ ಮಾಡಿದರೆ ಪೂರಕ ಸಹಕಾರ ನೀಡಲು ಸಿದ್ಧ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
# ವರದಿಯಲ್ಲಿ ಏನಿದೆ?
– ಕಸ್ತೂರಿ ರಂಗನ್ ಸಮಿತಿಯ ಕೆಲ ಶಿಫಾರಸುಗಳು ಹೀಗಿವೆ
ಗಣಿಗಾರಿಕೆ, ಕಲ್ಲು ಕ್ವಾರಿ ಮತ್ತು ಮರಳು ಗಣಿಗಾರಿಕೆಗೆ ನಿಷೇಧ.
ಥರ್ಮಲ್ ವಿದ್ಯುತ್ ಯೋಜನೆಗಳಿಗೆ ಅನುಮತಿ ಬೇಡ. ಆದರೆ ಜಲ ವಿದ್ಯುತ್ ಯೋಜನೆಗಳಿಗೆ ಷರತ್ತುಬದ್ಧ ಅನುಮತಿ ನೀಡಬಹುದು.
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗೆ ಅವಕಾಶ ಬೇಡ.
ಟೌನ್ಶಿಪ್ ನಿರ್ಮಾಣ ಮಾಡಕೂಡದು. ಆದರೆ 20000 ಚ.ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಯೋಜನೆಗಳನ್ನು ನಡೆಸಬಹುದು.
ಎಚ್ಚರಿಕೆಯ ಮತ್ತು ಷರತ್ತುಬದ್ಧ ಕ್ರಮಗಳೊಂದಿಗೆ ಅರಣ್ಯ ಭೂಮಿಯನ್ನು ಅರಣ್ಯೇತರ ಕೆಲಸಗಳಿಗೆ ಬಳಸಬಹುದು.
# ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿತು?
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷದ ಫೆಬ್ರವರಿಯಲ್ಲಿ 56,285 ಚ.ಕಿ.ಮೀ ಭೂಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಗುರುತಿಸಿ ಅಧಿಸೂಚನೆ ಜಾರಿ ಮಾಡಿತು. ಕೇರಳದಲ್ಲಿ 13,108 ಚ.ಕಿ.ಮೀ ಭೂಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಕಸ್ತೂರಿ ರಂಗನ್ ಸಮಿತಿ ಹೇಳಿದ್ದಕ್ಕೆ ಕೇರಳ ಆಕ್ಷೇಪ ವ್ಯಕ್ತಪಡಿಸಿತು. ಆದ್ದರಿಂದ ಈ ಪ್ರಮಾಣವನ್ನು 9993 ಚ.ಕಿ.ಮೀ.ಗೆ ಇಳಿಸಲಾಯಿತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ