ನಮ್ಮ ದೇಶಕ್ಕೊಂದು ಪರಂಪರೆ ಇದೆ. ಸಂಸ್ಕೃತಿ ಇದೆ. ಮೊದಲು ದೇಶದ ಹಿತ, ನಂತರ ನಮ್ಮ ವೈಯಕ್ತಿಕ ವಿಚಾರ ಬರಬೇಕು. ದೇಶ ನನಗೇನು ಮಾಡಿದೆ ಎನ್ನುವ ಮೊದಲು ದೇಶಕ್ಕಾಗಿ ನಾನೇನು ಮಾಡಿದ್ದೇನೆಂದು ಪ್ರಶ್ನಿಸಿಕೊಳ್ಳಬೇಕು. ದೇಶಭಕ್ತಿಯ ಎದುರು ಉಳಿದೆಲ್ಲವೂ ಗೌಣವಾಗಬೇಕು. ಆದರೆ ಇದನ್ನರಿಯದ ಕೆಲವರು ದೇಶದೊಳಗೇ ಇದ್ದು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. | ಡಾ.ಡಿ.ವೀರೇಂದ್ರ ಹೆಗ್ಗಡೆ ಮಾನವಜನ್ಮ ಪವಿತ್ರವಾದದ್ದು. ಭಗವಂತನ ಅನುಗ್ರಹದಿಂದ ಬಂದ ಈ ಜೀವನವನ್ನು ಸರ್ವಾಂಗ ಸುಂದರವಾಗಿಸಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ. ದೇಹವನ್ನು ಸದೃಢವಾಗಿ ಇಟ್ಟುಕೊಂಡು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿ, ಜೀವನದ ಗುರಿಯನ್ನು ಸಾಧಿಸಬೇಕು. ಆಗಲೇ ಜೀವನಕ್ಕೊಂದು ಅರ್ಥ ಬರುತ್ತದೆ. ಬಾಳು ಬಂಗಾರವಾಗುತ್ತದೆ. ಮನುಷ್ಯ ಸಂಘಜೀವಿ. ಅನಾದಿ ಕಾಲದಿಂದಲೂ ಮಾನವ ತನ್ನವರೊಂದಿಗೆ ಒಟ್ಟಾಗಿ ಜೀವನವನ್ನು ನಡೆಸುತ್ತಿದ್ದ. ಇಂದು ಬೇರೆ ಬೇರೆ ಸ್ಥಳಗಳಲ್ಲಿ ನಾವು ಉದ್ಯೋಗಸ್ಥರಾಗಿದ್ದರೂ, ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳಿಂದ ಇಡೀ ಪ್ರಪಂಚವೇ ನಮ್ಮ ಸಂಪರ್ಕದಲ್ಲಿದೆ. ಹುಟ್ಟು ಮತ್ತು ಸಾವುಗಳ ನಡುವಿನ ಜೀವನ ಪಯಣದಲ್ಲಿ ಹಲವರು ನಮ್ಮ ಸಂಪರ್ಕಕ್ಕೆ ಬರುತ್ತಾರೆ. ಅವರ ಸಹವಾಸ ನಮ್ಮ ಮೇಲೆ ವಿವಿಧ ರೀತಿಯ ಪ್ರಭಾವ ಬೀರುತ್ತದೆ. ಅವರ ಸಹವಾಸದಿಂದ ನಾವು ಸದ್ಗುಣಗಳಂತೆ ದುರ್ಗಣಗಳನ್ನೂ ಕೆಲವೊಮ್ಮೆ ಆಹ್ವಾನಿಸಿಕೊಳ್ಳುತ್ತೇವೆ. ಸದ್ಗುಣಗಳು ನಮ್ಮ ಏಳಿಗೆಗೆ ಪೂರ...
ಜ್ಞಾನ ಕಾರಂಜಿ! ನಿಮ್ಮ ಜ್ಞಾನ ದಾಹ ತಣಿಸುವ ಜ್ಞಾನ ಸಂಜಿವಿನಿ! ನಿಮ್ಮಿಂದ ನಿಮಗಾಗಿ ಮಾಹಿತಿ ವಿನಿಮಯ.