ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಜೀವವೈವಿಧ್ಯದ ಸೊಬಗು ಉರುಗ, | ರಾಜು ಹೊಸಮನಿ ನರಗುಂದ(ಗದಗ)

ಹಾವೆಂದರೆ ಭಯದಿಂದ ಮಾರುದೂರ ಓಡುವ ಮನುಷ್ಯ, ಕಲ್ಲುನಾಗರಕ್ಕೆ ಭಕ್ತಿಯಿಂದ ಹಾಲೆರೆಯುತ್ತಾನೆ. ಪುರಾಣಗಳಲ್ಲಿ ಬರುವ ರೋಚಕ ಸಂಗತಿಗಳು, ಸಿನಿಮಾ-ಸೀರಿಯಲ್​ಗಳಲ್ಲಿ ತೋರಿಸುವ ವಿಜೃಂಭಿತ ದೃಶ್ಯಗಳಿಂದ ಹಾವುಗಳು ಜನರ ದೃಷ್ಟಿಯಲ್ಲಿ ಭಯಂಕರ ಜೀವಿಯಾಗಿ ಉಳಿದಿವೆ. ಆದರೆ, ಉರಗಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳಿಗೆ ತೊಂದರೆಯಾದರಷ್ಟೇ ತಿರುಗಿ ಬೀಳುತ್ತವೆ. ಅಂಥ ಹಾವುಗಳ ರಕ್ಷಣೆಗಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 16ರಂದು ‘ವಿಶ್ವ ಹಾವುಗಳ ದಿನ’ ಆಚರಿಸಲಾಗುತ್ತದೆ. ಇದು 2013ರ ಜುಲೈ 16ರಿಂದ ಪ್ರಾರಂಭವಾಯಿತು.
3500ಕ್ಕೂ ಹೆಚ್ಚು ಪ್ರಭೇದ
ಪ್ರಪಂಚದಲ್ಲಿ 3,500ಕ್ಕೂ ಹೆಚ್ಚಿನ ಜಾತಿಯ ಹಾವುಗಳಿದ್ದು, ಶೇ. 90 ವಿಷರಹಿತ (ನಾನ್-ವೆನಮಸ್). ಉಳಿದ ಶೇ. 10 ಮಾತ್ರ ವಿಷಪೂರಿತ. ಸುಮಾರು 270ಕ್ಕೂ ಅಧಿಕ ಜಾತಿಯ ಹಾವುಗಳು ಭಾರತದಲ್ಲಿವೆ. ಅವುಗಳಲ್ಲಿ ಕಾಳಿಂಗ (ಕಿಂಗ್-ಕೋಬ್ರಾ), ನಾಗರಹಾವು (ಕೋಬ್ರಾ), ಕನ್ನಡಿ ಅಥವಾ ಕೊಳಕುಮಂಡಲ (ವೈಪರ್), ಕಡಂಬಳ ಅಥವಾ ಕೆಟ್ಟಹಾವು (ಕಾಮನ್-ಕ್ರೈಯೆಟ್) ವಿಷಕಾರಿ ಹಾವು (ಬಿಗ್-ಫೋರ್ ವೆನಮಸ್) ಪ್ರಮುಖವಾದವು. ತಿಳಿವಳಿಕೆಯ ಕೊರತೆ ಅಥವಾ ಅಜಾಗರೂಕತೆಯಿಂದಾಗಿ ಭಾರತದಲ್ಲಿ ಹಾವುಗಳ ಕಡಿತದಿಂದ ಪ್ರತಿ ವರ್ಷ 45,000ಕ್ಕೂ ಅಧಿಕ ಜನ ಮೃತಪಡುತ್ತಾರೆ. ಬಯಲುಸೀಮೆಯಲ್ಲಿ ನಾಗರಹಾವುಗಳ ಸಂತತಿ ಹೆಚ್ಚಾಗಿದ್ದು, ಜೀವವೈವಿಧ್ಯದ ಮಹತ್ವ ಮತ್ತು ಜಾಗೃತಿ ಕೊರತೆಯಿಂದಾಗಿ ನಿತ್ಯ ಸಾಯಿಸಲ್ಪಡುತ್ತಿವೆ. ಸಾಮಾನ್ಯವಾಗಿ ಕಂಡುಬರುವ ವಿಷಕಾರಿಯಲ್ಲದ ಹಾವುಗಳೆಂದರೆ ತೋಳ ಹಾವು (ವೂಲ್ಪ್ ಸ್ನೇಕ್), ಕೇರೆ ಹಾವು (ರ್ಯಾಟ್ ಸ್ನೇಕ್), ಹಸಿರು ಚೌಕಳಿ ಹಾವು (ಗ್ರೀನ್ ಕೀಲ್ ಬ್ಯಾಕ್ ಸ್ನೇಕ್), ಚೌಕಳಿ ಹಾವು (ಚೆಕ್ಕರ್ಡ್ ಕೀಲ್ ಬ್ಯಾಕ್), ಕುಕ್ರಿ ಹಾವು, ಆಭರಣ ಹಾವು (ಕಾಮನ್ ಟ್ರಿಂಕೆಟ್ ಸ್ನೇಕ್), ಹಸಿರು ಬಳ್ಳಿ ಹಾವು (ಗ್ರೀನ್​ವೈನ್ ಸ್ನೇಕ್), ಮಣ್ಣುಮುಕ್ಕ ಹಾವು (ಸ್ಯಾಂಡ್ ಬೊವಾ), ವ್ಹಿಟ್ಟಕರ್ಸ್ ಬೊವಾ, ಬೋಲನಾಥಿ ಹಾವು ಮತ್ತು ಬ್ಯಾಂಡೆಡ್ ರೇಸರ್.
ಶಾಲಾ ಕೊಠಡಿ, ಬಿಸಿಯೂಟ ಅಡುಗೆ ಕೋಣೆ, ಸರ್ಕಾರಿ ಕಚೇರಿ, ಮನೆಗಳಲ್ಲಿ ಇತ್ತೀಚೆಗೆ ಹಾವು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮಕ್ಕಳು ತೊಂದರೆಗೊಳಗಾಗುವುದು ಹೆಚ್ಚು. ಆದಷ್ಟು ಶಾಲೆ, ಸರ್ಕಾರಿ ಕಚೇರಿ, ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ. ಹಾವು ಕಂಡರೆ ಭಯಪಡದೆ, ನುರಿತ ಉರಗ ಸಂರಕ್ಷಕರನ್ನು ಸಂರ್ಪಸಿ. ಅವುಗಳನ್ನು ಕೊಲ್ಲಬೇಡಿ. ಯಾವುದೇ ಹಾವು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆಗೊಳಗಾಗಿ ಒತ್ತಾಯಪೂರ್ವಕವಾಗಿ ಹಾಲು ಕುಡಿಸಲು ಮುಂದಾಗಬೇಡಿ. ಇದರಿಂದ ಅಪಾಯವೇ ಹೆಚ್ಚು.
ಇಲಿಗಳ ಕಾಟಕ್ಕೆ ಮುಕ್ತಿ
ಸಾಮಾನ್ಯವಾಗಿ ಹಾವುಗಳು ಮನುಷ್ಯನ ವಾಸಸ್ಥಾನದಿಂದ ದೂರವಿರಲು ಇಷ್ಟಪಡುತ್ತವೆ. ಕಪ್ಪೆ ಅಥವಾ ಇಲಿಯನ್ನು ನುಂಗಿದಾಗ ಮಾತ್ರ ಮನೆ ಅಥವಾ ಪಾಳು ಬಿದ್ದ ಕಟ್ಟಡಗಳಲ್ಲಿ ಆಶ್ರಯ ಪಡೆಯುತ್ತವೆ. ಹಾವುಗಳು ಜೀವಿತಾವಧಿಯಲ್ಲಿ ಸಾವಿರಕ್ಕೂ ಹೆಚ್ಚು ಇಲಿಗಳನ್ನು ಭಕ್ಷಿಸುವ ಮೂಲಕ ಇಲಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗದಿಂದ ರಕ್ಷಿಸುತ್ತವೆ.
ಮರಿಗಳು ಡೇಂಜರ್!
ಜೂನ್​ನಿಂದ ಆಗಸ್ಟ್ ಅವಧಿಯಲ್ಲಿ ಹೆಚ್ಚಾಗಿ ಹಾವುಗಳು ಮೊಟ್ಟೆ ಇಡುತ್ತವೆ. ಪ್ರತಿ ಹಾವು ಅಂದಾಜು 40 ಮೊಟ್ಟೆ ಇಡುವುದರಿಂದ ಸಹಜವಾಗಿಯೇ ಮರಿ ಹಾವುಗಳು ಮಳೆ ನೀರಿಗೆ ಜನವಸತಿ ಕಡೆಗೆ ಬರುತ್ತವೆ. ಈ ವೇಳೆ ಅರಿವಿಲ್ಲದೆ ತುಳಿಯುವುದು, ಮಕ್ಕಳು ಆಟವಾಡಲು ಮುಂದಾಗುವುದರಿಂದ ಕಚ್ಚುವ ಸಾಧ್ಯತೆ ಇರುತ್ತದೆ. ಮರಿಗಳು ಕೂಡ ವಿಷ ಕಕ್ಕುತ್ತವೆ. ಹೀಗಾಗಿ ಮಳೆಗಾಲದ ಅವಧಿಯಲ್ಲಿ ಹಾವು ಕಚ್ಚಿದ ಪ್ರಕರಣ ಅಧಿಕವಾಗುತ್ತವೆ ಎನ್ನುತ್ತಾರೆ ಉರಗತಜ್ಞ ಪ್ರಸನ್ನ ಕುಮಾರ್.
ಶೇ. 90ರಷ್ಟು ಹಾವುಗಳು ವಿಷ ಕಕ್ಕುವುದಿಲ್ಲ. ಹಾಗಂತ ಕಡೆಗಣಿಸಬಾದರು. ಪ್ರಾಥಮಿಕ ಚಿಕಿತ್ಸೆ ಪಡೆದು ಆದಷ್ಟು ಬೇಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.
| ಪ್ರಸನ್ನ ಕುಮಾರ್ ಉರಗತಜ್ಞ ಬೆಂಗಳೂರು
ಹಾವು ಕಡಿತಕ್ಕೀಡಾದವರಿಗೆ ನೀಡುವ ಆಂಟಿ ಸ್ನೇಕ್ ವೆನಮ್ ಅಗತ್ಯ ಪ್ರಮಾಣದಲ್ಲಿ ಸದ್ಯ ಲಭ್ಯವಿದೆ. ಮುಂದೆ ಕೂಡ ಕೊರತೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಆನ್​ಲೈನ್​ನಲ್ಲಿ ಸಹ ಮಾರಾಟ ವ್ಯವಸ್ಥೆ ಮಾಡಲಾಗಿದೆ.
| ಡಾ. ಲತಾ ಪ್ರಮೀಳಾ ಮುಖ್ಯ ಮೇಲ್ವಿಚಾರಕರು ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್
ಮಳೆ ಅಬ್ಬರಕ್ಕೆ ಹಾವಳಿ
| ವರುಣ ಹೆಗಡೆ ಬೆಂಗಳೂರು
ಕಾನನದಲ್ಲಿ ನೆಲೆಯೂರಿದ್ದ ಹಾವುಗಳು ಮಳೆ ಅಬ್ಬರಕ್ಕೆ ಜನವಸತಿ ಪ್ರದೇಶದ ಕಡೆ ಮುಖ ಮಾಡಿರುವುದು ಆತಂಕದ ವಾತಾವರಣ ಸೃಷ್ಟಿಸಿದೆ. ವರ್ಷದ ಆರಂಭದಲ್ಲೇ 3,070 ಮಂದಿ ಹಾವುಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.18 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಮೇನಲ್ಲಿ 863 ಮಂದಿಗೆ ಕಚ್ಚಿದ್ದು, ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದ ಆಸ್ಪತ್ರೆಗಳಲ್ಲಿ ಹಾವಿನ ವಿಷಕ್ಕೆ ಔಷಧಗಳ ಕೊರತೆ ಎದುರಾಗಿರುವುದು ಕಡಿತಕ್ಕೆ ಒಳಗಾದವರಿಗೆ ಮೃತ್ಯು ಭಯ ಹೆಚ್ಚುವಂತೆ ಮಾಡಿದೆ.
ಬೆನ್ನು ಬಿಡದ ಹಾವು: ಹಾವಿನ ಕಡಿತ ಪ್ರಕರಣದಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, 993 ಮಂದಿಗೆ ಕಚ್ಚಿದೆ. ಮೂವರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 768 ಮಂದಿಯಲ್ಲಿ ನಾಲ್ವರು, ಕಲಬುರಗಿಯಲ್ಲಿ 459ರಲ್ಲಿ 9 ಮಂದಿ ಅಸುನೀಗಿದ್ದಾರೆ. ಮೈಸೂರು (768-4 ಸಾವು), ಶಿವಮೊಗ್ಗ (288-1 ಸಾವು) ಹಾಸನ (202) ಹಾಗೂ ಹಾವೇರಿ (202)ಯಲ್ಲಿ ಅಧಿಕ ಹಾವು ಕಡಿತ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ತಲಾ 2, ಕೊಡಗು, ಉಡುಪಿ, ರಾಯಚೂರು, ಉ.ಕನ್ನಡ ಹಾಗೂ ಗದಗದಲ್ಲಿ ತಲಾ ಒಬ್ಬರು ಹಾವು ಕಚ್ಚಿ ಅಸುನೀಗಿದ್ದಾರೆ.
ತುರ್ತು ಶುಶ್ರೂಷೆ ಅಗತ್ಯ
ಕೆಲವೊಂದು ಹಾವುಗಳ ವಿಷ ಅಧಿಕವಾಗಿರುವ ಕಾರಣ ತಕ್ಷಣ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ 2-3 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕಚ್ಚಿದಾಗ ಆಂಟಿ ಸ್ನೇಕ್​ವೆನಮ್ ನೀಡಬೇಕು. ಬಹುತೇಕ ಸಂದರ್ಭದಲ್ಲಿ ಹಾವಿನ ವಿಷ ದೇಹದಲ್ಲಿ ಹರಡಿ  ಸಾಯುವುದಕ್ಕಿಂತ, ಕಚ್ಚಿದ ಆಘಾತಕ್ಕೆ ಅಥವಾ ವಿಷಕ್ಕೆ ಪ್ರತಿರೋಧಕವಾಗಿ ನೀಡುವ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದಲೂ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ. ಮುಖ್ಯವಾಗಿ ಕಚ್ಚಿದ ಹಾವು ವಿಷಕಾರಿ ಆಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.
ಜೀವ ಉಳಿಸುವ ಪ್ರಥಮ ಚಿಕಿತ್ಸೆ
ಹಾವು ಕಡಿತಕ್ಕೆ ಒಳಗಾದ ಜಾಗದ 5ರಿಂದ 8 ಇಂಚು ಮೇಲ್ಭಾಗ, ಕೆಳಭಾಗದಲ್ಲಿ ಬಟ್ಟೆ ಅಥವಾ ಹಗ್ಗದಿಂದ ಬಿಗಿಯಾಗಿ ಕಟ್ಟುವ ಮೂಲಕ ವಿಷ ದೇಹವ್ಯಾಪಿ ಸಂಚರಿಸುವುದಕ್ಕೆ ತಡೆಯೊಡ್ಡಲು ಸಾಧ್ಯ. ಬಳಿಕ ಕಚ್ಚಿದ ಜಾಗದಲ್ಲಿ ವಿಷಯುಕ್ತ ಕಪು್ಪ ರಕ್ತ್ತನ್ನು ಹೊರಹಾಕಬೇಕು. ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು.
ಔಷಧ ಕೊರತೆ
ಹೆಚ್ಚಾಗಿ ಹಾವು ಕಡಿತಕ್ಕೆ ಒಳಪಡುವವರು ಬಡ ಕೃಷಿ ಕಾರ್ವಿುಕರು. ಸಹಜವಾಗಿ ಇವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿ ಸ್ನೇಕ್ ವೆನಮ್ ಲಸಿಕೆ ಕೊರತೆ ಇದೆ. ಸದ್ಯ ರಾಜ್ಯದಲ್ಲಿ 31,765 ಇಂಜೆಕ್ಷನ್ ಮಾತ್ರ ಲಭ್ಯವಿದೆ. ಕುದುರೆ ರಕ್ತದ ಮೂಲಕ ಆಂಟಿ ಸ್ನೇಕ್ ವೆನಮ್  ತಯಾರಿಸಲಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...