ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

**ಜ್ಞಾನ ಕಾರಂಜಿ**::: ಪ್ರಚಲಿತ ಪ್ರಶ್ಣೋತ್ತರಗಳು 11

1. ಕೆಳಗಿನ ಯಾರು ಸಿಯೋಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ? 1. ನರೆಂದ್ರ ಮೋದಿ 2. ಬರಾಕ್ ಒಬಾಮ 3. ಮನಮೋಹನ್ ಸಿಂಗ್ 4. ದೇವೆಗೌಡ. Correct Answer: option1 Justification: 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆ, ವಿಶ್ವ ಶಾಂತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಜಾಪ್ರಭುತ್ವ ರಕ್ಷಣೆ, ಭ್ರಷ್ಟಾಚಾರ ನಿರ್ಮಾಲನೆ ಮುಂತಾದವುಗಳಲ್ಲಿ ಮೋದಿ ಪಾತ್ರವನ್ನು ಆಧರಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2. ಎಮ್ ನಾಗೇಶ್ವರ ರಾವ್ ಕೆಳಗಿನ ಯಾವ ಸಂಸ್ಥೆಯ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ? 1. CBI 2. RAW 3. NSG 4. IB Correct Answer: option1 Justification: ನಿಷ್ಠಾವಂತ ಪೋಲಿಸ್ ಅಧಿಕಾರಿ ಎಮ್. ನಾಗೇಶ್ವರರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. 3. ಭಾರತ್ ಸ್ಟೆಜ್-4 ಮೋಟಾರು ವಾಹನಗಳನ್ನು ಕೆಳಗಿನ ಯಾವ ವರ್ಷದಿಂದ ಮಾರುವಂತ್ತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ? 1. 2018 2. 2019 3. 2020 4. 2021 Correct Answer: option3 Justification: ದೇಶದಲ್ಲಿ 2020ರ ಏಪ್ರೀಲ್ 1 ರಿಂದ ಜಾರಿಗೆ ಬರುವಂತೆ ಭಾರತ ಸ್ಟೇಜ್-4 ಮೋಟಾರು ವಾಹನಗಳನ್ನು ಮಾರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಭಾರತ ಸ್ಟೇಜ್-6 ಬಿಎಸ್-6 ಎಮಿಷನ್ ನಿಯಮವು 2020ರ ಏಪ್ರೀಲ್ 1 ರಿಂದ ಜಾರಿಗೆ ಬರಲಿದೆ. 4. ಸಿಂಧೂ ನದಿ ನೀರು ಹಂಚಿ...

ಜ್ಞಾನ ಕಾರಂಜಿ::: ಪ್ರಮುಖ ವನ್ಯ ಧಾಮಗಳು

ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ. ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ: - ಬೆಂಗಳೂರು, ಕರ್ನಾಟಕ. ಭದ್ರ ವನ್ಯ ಜೀವಿ ತಾಣ: - ಚಿಕ್ಕಮಗಳೂರು, ಕರ್ನಾಟಕ. ದಾಂಡೇಲಿ ಅರಣ್ಯ ಧಾಮ: - ದಾಂಡೇಲಿ, ಕರ್ನಾಟಕ. ರಂಗನತಿಟ್ಟು ಪಕ್ಷಿಧಾಮ: - ಶ್ರೀರಂಗಪಟ್ಟಣ , ಕರ್ನಾಟಕ. ಸೋಮೇಶ್ವರ ವನ್ಯಧಾಮ: - ಉತ್ತರಕನ್ನಡ , ಕರ್ನಾಟಕ. ತುಂಗಭದ್ರ ವನ್ಯಧಾಮ: - ಬಳ್ಳಾರಿ, ಕರ್ನಾಟಕ. ಸರಸ್ವತಿ ಕಣಿವೆ ಅರಣ್ಯ ಧಾಮ: - ಶಿವಮೊಗ್ಗ , ಕರ್ನಾಟಕ. ಗಿರ ಅರಣ್ಯ ಧಾಮ: - ಜುನಾಘಡ್ , ಗುಜರಾತ್. ಅಚಾನ್ಕ್ಮಾರ್ ವನ್ಯ ತಾಣ: - ಬಿಲಾಸ್ ಪುರ, ಛತ್ತೀಸ್ ಗಡ . ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ: - ಶಾಹ್ ದಾಲ್ , ಮಧ್ಯಪ್ರದೇಶ್ ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ , ಮಹಾರಾಷ್ಟ್ರ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ , ಉತ್ತರಾಂಚಲ ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್. ದಾಲ್ಮ ವನ್ಯಧಾಮ - ಸಿಂಗಭೂಂ, ಜಾರ್ಖಂಡ್. ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್ ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ. ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್. ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್. ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ. ಶಿವಪುರಿ ರಾಷ್ಟೀಯ ಉದ್ಯಾನವನ -...

**ಜ್ಞಾನ ಕಾರಂಜಿ**::: ಉಪಯುಕ್ತ ಪ್ರಶ್ಣೋತ್ತರಗಳು 11

101. ಸರಿಸ್ಸಾ ಪಕ್ಷಿಧಾಮ ಎಲ್ಲಿದೆ- ರಾಜಸ್ಥಾನ 102. ಮೀನಾಕ್ಷಿ ದೇವಾಲಯ ಎಲ್ಲಿದೆ- ಮಥುರಾ 103. ಗೋವಾದ ಮುಖ್ಯ ಭಾಷೆ-ಕೊಂಕಣಿ 104. ಗೌತಮ ಬುದ್ದ ಮರಣ ಹೊಂದಿದ ಸ್ಥಳ- ಕುಶಿನಗರ 105. ಪಾಕಿಸ್ತಾನದ ಬೇಡಿಕೆ ಯಾವ ಅಧಿವೇಶನದಲ್ಲಿ ಮಂಡನೆಯಾಯಿತು ಲಾಹೋರ ಅಧಿವೇಶನದಲ್ಲಿ 106. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ 24 ನೇ ರಾಜ್ಯ 107. ಕಂದಹಾರ ವಿಮಾನ ಎಷ್ಟನೇ ಅಪಹರಣ ವರ್ಷ-1998 108. ಮಹಾಲೆಕ್ಕ ಪರಿಶೋಧಕ ಸಂಬಳ- 36000 109. ಲೋಕಸಭೆಗೆ ರಾಜ್ಯದಿಂದ ಎಷ್ಟು ಸದಸ್ಯರು ಆಯ್ಕೆಯಾಗುತ್ತಾರೆ- 28 110. ಫಿರೋಜಾಬಾದ್ ಯಾವುದಕ್ಕೆ ಹೆಸರಾಗಿದೆ-ಗಾಜು 111. ರಾಷ್ಟ್ರಧ್ವಜದ ಅಳತೆ-3*2 112. ಭಾರತದ ದೊಡ್ಡದಾದ ರೆಸಿಡೆನ್ಸಿ- ರಾಷ್ಟ್ರಪತಿ ಭವನ 113. ಭಾರತದ ಪ್ರಥಮ ಎಲೆಕ್ಟ್ರಾನಿಕ್ ರೇಲ್ವೆ- ಕ್ವಿನ್ ಕಲ್ಕತ್ತಾ 114. ಬಾಜ್ಪೆ ವಿಮಾನ ನಿಲ್ದಾಣ ಎಲ್ಲಿದೆ- ಗೋವಾ 115. ಭಾರತದ ಪ್ರಥಮ ಯುದ್ದ ಹಡುಗು-ಆಯ್.ಎನ್.ಎಸ್. ತ್ರಿಶೂಲ್ 116. ಭಾರತದ ಪ್ರಥಮ ಅಣು ಬಾಂಬನ್ನು ಪ್ರಥಮವಾಗಿ ಪರೀಕ್ಷೆ ನಡೆದ ವರ್ಷ- 1997 117. ಜಗತ್ತಿನ ದೊಡ್ಡದಾದ ಸಮುದ್ರ-ದ.ಚೀನಾ ಸಮುದ್ರ 118. ಜಗತ್ತಿನ ದೊಡ್ಡದಾದ ನದಿ- ಅಮೇಜಾನ್ ನೈಲ್ 119. ಭಾರತದ ನೆಲೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣೇ ಎಂಧರೆ-ಲಕ್ಷದ್ವೀಪ 120. ಗೋಲ್ಡನ್ ಸಿಟಿ ಎಂದು ಯಾವುದನ್ನು ಕರೆಯುತ್ತಾರೆ- ಹೈಧ್ರಾಬಾದ್ 121. ಜಗತ್ತಿನಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ದೇಶ- ...

**ಜ್ಞಾನ ಕಾರಂಜಿ**::: ಪ್ರವಾಹಕ್ಕೆ ಎದುರಾಗಿ ಈಜುವ ಸವಾಲು!

ಷೇರು ಮಾರುಕಟ್ಟೆಯಲ್ಲಿ ನೀವು ಎಷ್ಟು ಬೇಕಾದರೂ ಹಣ ಹೂಡಿ. ಆದರೆ, ಎರಡು ನಿಯಮಗಳನ್ನು ಮಾತ್ರ ಎಂದಿಗೂ ಮರೆಯಬೇಡಿ, ಅವೆಂದರೆ : ನಿಯಮ 1. ಎಂದೂ ಹಣ ಕಳೆದುಕೊಳ್ಳಬೇಡಿ; ನಿಯಮ 2 : ಮೊದಲನೇ ನಿಯಮವನ್ನು ಎಂದೂ ಮರೆಯಬೇಡಿ ! ಇದು ಜಾಗತಿಕ ಷೇರು ಮಾರುಕಟ್ಟೆಯ ಗುರು ಎನಿಸಿರುವ ವಾರನ್ ಬಫೆಟ್ ಹೇಳಿರುವ ಮಾತು. ಈ ಮಾತನ್ನು ಅವರಷ್ಟೇ ಕಾರ್ಯಗತಗೊಳಿಸಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಜಟಿಲವಾಗಿ ಕಾಣಿಸಿಕೊಂಡಿದೆ. ಅಂಕಿ ಅಂಶಗಳ ಹಾವು ಏಣಿ ಆಟದಲ್ಲಿ ಪೇರುಪೇಟೆಯು ಅಂದಾಜಿಗೇ ಸಿಲುಕದಿರುವುದು ಈಗ ಸ್ವಾಭಾವಿಕವಾಗಿ ಬಿಟ್ಟಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡು ವಾರಗಳ ನಿರಂತರ ಹಿನ್ನಡೆ ಅನುಭವಿಸಿದ್ದು , ಕಳೆದ ವಾರದಲ್ಲೇ ಶೇ 2.8 ರಷ್ಟು ಕುಸಿತ ಕಂಡು ಏಳು ತಿಂಗಳ ಹಿಂದೆ ಇದ್ದ ಸ್ಥಿತಿಗೆ ತಲುಪಿವೆ. ಅಕ್ಟೋಬರ್ ತಿಂಗಳಲ್ಲಿ ಈ ಎರಡು ಮಾರುಕಟ್ಟೆಗಳ ಸೂಚ್ಯಂಕಗಳು ಶೇ 8 ರಷ್ಟು ಕುಸಿತ ಕಂಡು, 2018 ರಲ್ಲಿ ಒಟ್ಟಾರೆಯಾಗಿ ಕಂಡುಬಂದಿದ್ದ ಸಕಾರಾತ್ಮಕ ಗುರುತುಗಳನ್ನು ಅಳಿಸಿಹಾಕಿವೆ. ಅಕ್ಟೋಬರ್ 26 ರಂದು ಕೊನೆಗೊಂಡ ಪೇಟೆಯ ವಹಿವಾಟಿನಂತೆ ನವೆಂಬರ್‌ನ ಆರಂಭದಲ್ಲೂ ಮಾರುಕಟ್ಟೆ ಅಷ್ಟೇನು ಸುಧಾರಣೆ ಕಾಣದು ಎಂಬ ಮುನ್ಸೂಚನೆ ಸಿಕ್ಕಿದೆ. ವಾರಾಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 33,349 ಅಂಶಗಳಿಗೆ ಕೊನೆಯಾಗಿದ್ದರೆ, ನಿಫ್ಟಿ 10,030 ಅಂಶಗಳಲ್ಲಿ ವಹಿವಾಟು ಮುಗಿಸಿದೆ. ಅಂದರೆ ಕಳೆದ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ...

**ಜ್ಞಾನ ಕಾರಂಜಿ**::: ಇಳಿಕೆ ಹಾದಿಯಲ್ಲಿ ಇಂಧನ ದರ

ನವದೆಹಲಿ: ದೇಶದಾದ್ಯಂತ ಇಂಧನ ದರಗಳು ಇಳಿಕೆ ಹಾದಿಯಲ್ಲಿವೆ. ಭಾನುವಾರ ಪೆಟ್ರೋಲ್, ಡೀಸೆಲ್‌ ದರಗಳು ಕ್ರಮವಾಗಿ 40 ಪೈಸೆ ಮತ್ತು 33 ಪೈಸೆಯಷ್ಟು ಇಳಿಕೆಯಾಗಿವೆ. ಬೆಂಗಳೂರಿನಲ್ಲಿ ಒಂದು ಲೀಟರ್‌ ಪೆಟ್ರೋಲ್ ₹ 80.67 ಹಾಗೂ ಡೀಸೆಲ್‌ ₹ 74.43 ರಂತೆ ಮಾರಾಟವಾಯಿತು. ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ₹ 80.05, ಡೀಸೆಲ್‌ ₹ 74.05ರಷ್ಟಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ 11ನೇ ದಿನವೂ ಇಂಧನ ದರಗಳನ್ನು ತಗ್ಗಿಸಿವೆ. ಅಕ್ಟೋಬರ್‌ 18 ರಿಂದ 28ರವರೆಗೆ ಪೆಟ್ರೋಲ್‌ ಲೀಟರಿಗೆ ‌₹ 2.78 ಹಾಗೂ ಡೀಸೆಲ್‌ ಲೀಟರಿಗೆ1.64ರಷ್ಟು ಇಳಿಕೆಯಾಗಿವೆ.

**ಜ್ಞಾನ ಕಾರಂಜಿ**::: ಕೆಎಸ್ಆರ್‌ಟಿಸಿಗೆ ‘ಅವಾರ್ಡ್‌ ಆಫ್ ಎಕ್ಸಲೆನ್ಸ್‌’ ಪ್ರಶಸ್ತಿ

ಬೆಂಗಳೂರು: ಕೇಂದ್ರ ಸರ್ಕಾರದ ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡುವ ಪ್ರಸಕ್ತ ಸಾಲಿನ ‘ಅವಾರ್ಡ್‌ ಆ‍ಫ್ ಎಕ್ಸಲೆನ್ಸ್‌ ಪ್ರಶಸ್ತಿ-2018’ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಭಾಜನವಾಗಿದೆ. ನ. 4ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ 11ನೇ ಅರ್ಬನ್‌ ಮೊಬಿಲಿಟಿ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಿಗೆ ಕೆಎಸ್ಆರ್‌ಟಿಸಿ ಅನುಷ್ಠಾನಗೊಳಿಸಿರುವ ನಗರ ಸಾರಿಗೆ ಸೇವೆಗೆ ಪ್ರಶಸ್ತಿ ಲಭಿಸಿದೆ.

**ಜ್ಞಾನ ಕಾರಂಜಿ**::: ರಾಜ್ಯದ 24 ಜಿಲ್ಲೆಗಳ 100 ತಾಲ್ಲೂಕು ಬರಪೀಡಿತ: ₹16,662 ಕೋಟಿ ನಷ್ಟ

ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 24 ಜಿಲ್ಲೆಗಳ 100 ಬರಪೀಡಿತ ತಾಲ್ಲೂಕುಗಳಲ್ಲಿ ₹ 16,662.48 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ ದೆಹಲಿಯಲ್ಲಿ ಸೋಮವಾರ ಕೇಂದ್ರ ಸಚಿವರನ್ನು ಭೇಟಿ ಮಾಡಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಥಿಯಿಂದ (ಎನ್‌ಡಿಆರ್‌ಎಫ್‌) ಪರಿ ಹಾರ ನೀಡುವಂತೆ ಮನವಿ ಸಲ್ಲಿಸಲಿದ್ದಾರೆ. ಮುಂಗಾರು ಅವಧಿಯಲ್ಲಿ 74.69 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿತ್ತು. ಸೆಪ್ಟೆಂಬರ್‌ ಅಂತ್ಯದದವರೆಗೆ 66.36 ಲಕ್ಷ ಹೆಕ್ಟೇರ್‌ (ಶೇ 89ರಷ್ಟು) ಪ್ರದೇಶದಲ್ಲಿ ಬಿತ್ತನೆ ಆಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಬಳಿಕ, ಬರ ಪೀಡಿತ ತಾಲ್ಲೂಕುಗಳಲ್ಲಿ ತೇವಾಂಶ ಕೊರತೆಯಿಂದ 27.32 ಲಕ್ಷ ಹೆಕ್ಟೇರ್‌ (ಶೇ 41 ಬಿತ್ತನೆ ಪ್ರದೇಶ)  ಹಾನಿಗೆ ಒಳಗಾಗಿರುವುದನ್ನು ಗುರುತಿಸಲಾಗಿದೆ. ಈ ಪೈಕಿ, 26.19 ಲಕ್ಷ ಹೆಕ್ಟೇರ್‌ನಲ್ಲಿ ಶೇ 33ಕ್ಕೂ ಹೆಚ್ಚು ಪ್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದೆ. ಟ್ಯಾಂಕರ್‌ ನೀರು: ಗ್ರಾಮೀಣ ಪ್ರದೇಶಗಳ 159 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 203 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ನಗರ ಪ್ರದೇಶಗಳಲ್ಲಿ 136 ವಾರ್ಡ್‌ಗಳಲ್ಲಿ ಟ್ಯಾ...

**ಜ್ಞಾನ ಕಾರಂಜಿ**::: ನಾಮೋ ಮನದ ಮಾತು, ಏಕೀಕೃತ ಭಾರತ: ಸರ್ದಾರ್‌ ಪಟೇಲ್‌ ಕೊಡುಗೆ

ನವದೆಹಲಿ: ದೇಶ ವಿಭಜನೆಯ ನಂತರ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲು ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಸಕಾಲಿಕ ಮತ್ತು ದಿಟ್ಟ ನಿರ್ಧಾರ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾನುವಾರ ಪ್ರಸಾರವಾದ ಧ್ವನಿಮುದ್ರಿತ ‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ದಾರ್ ಪಟೇಲ್‌ ಇಲ್ಲದೆ ಭಾರತದ ಏಕೀಕರಣ ಊಹಿಸುವುದು ಸಾಧ್ಯವಿರಲಿಲ್ಲ. ಜುನಾಗಡ, ಹೈದರಾಬಾದ್‌, ತಿರುವಾಂಕೂರು, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಂತಹ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸುವಲ್ಲಿ ಅವರ ಧೈರ್ಯ ನಮಗೆಲ್ಲ ಮಾದರಿ ಎಂದು ಸ್ಮರಿಸಿದರು. ‘ಇಂದು ನಾವು ನೋಡುತ್ತಿರುವ ಸುಂದರ ಏಕೀಕೃತ ಭಾರತವು ಪಟೇಲ್‌ ಅವರ ಧೀಮಂತ ವ್ಯಕ್ತಿತ್ವ, ತಂತ್ರಗಾರಿಕೆ, ಜಾಣ್ಮೆ, ಧೈರ್ಯದ ಫಲ’ ಎಂದು ಮೋದಿ ಶ್ಲಾಘಿಸಿದರು. ‘ಅ.31ರಂದು ಲೋಕಾರ್ಪಣೆಯಾಗಲಿರುವ ‘ಏಕತೆಯ ಮೂರ್ತಿ’ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ’ ಎಂದರು. ಪಟೇಲ್‌ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಲಾಗಿರುವ ‘ಏಕತೆಗಾಗಿ ಓಟ’ದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಅವರು ಮನವಿ ಮಾಡಿದರು. ಗುಜರಾತ್‌ನ ನರ್ಮದಾ ದಂಡೆಯ ಮೇಲಿರುವ ಏಕತಾ ಮೂರ್ತಿ ಹೊಸ ಆಕರ್ಷಕ ಪ್ರವಾಸಿ ತಾಣವಾಗಲಿದೆ ಎಂದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಅವರ ಕೊಡುಗೆಯನ್ನು ಸ್ಮರಿಸಿದರು. ಎಫ್‌–16 ಯುದ್ಧ ವಿಮಾನ ಖರೀದಿಗೆ ಒತ್ತಡ ಹೇರುವುದಿಲ್ಲ: ...

**ಜ್ಞಾನ ಕಾರಂಜಿ**::: ಸರ್ದಾರ್ ಪಟೇಲ್‌ ಪ್ರತಿಮೆಗಳಿಗೂ ಸರದಾರ

ಸ್ವಾತಂತ್ರ್ಯಾನಂತರ 546 ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸಿದ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಬಭಾಯಿ ಪಟೇಲ್ ಅವರ ಪ್ರತಿಮೆಯನ್ನು ಬುಧವಾರ (ಅಕ್ಟೋಬರ್ 31) ಅನಾವರಣ ಮಾಡಲಾಗುತ್ತದೆ. ಅಂದು ಪಟೇಲ್ ಅವರ 142ನೇ ಜನ್ಮದಿನಾಚರಣೆಯೂ ಹೌದು. ಲೋಕಾರ್ಪಣೆಯ ನಂತರ ಜಗತ್ತಿನ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಈ ‘ಏಕತಾ ಪ್ರತಿಮೆ’ ಪಾತ್ರವಾಗಲಿದೆ ₹ 2,300 ಕೋಟಿ ಪ್ರತಿಮೆ ನಿರ್ಮಾಣದ ವೆಚ್ಚ ಲೋಹ ಅಭಿಯಾನ ‘ಉಕ್ಕಿನ ಮನುಷ್ಯ’ನ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ಬಹುಪಾಲು ಲೋಹವನ್ನು ದೇಶದ ಎಲ್ಲಾ ಗ್ರಾಮಗಳಿಂದ ಸಂಗ್ರಹಿಸಲು ‘ಲೋಹ ಅಭಿಯಾನ’ ನಡೆಸಲಾಗಿತ್ತು. ರೈತರಿಂದ ಕೃಷಿ ಸಲಕರಣೆಗಳ ಲೋಹಗಳನ್ನು ಸಂಗ್ರಹಿಸಲಾಯಿತು. ಹೀಗೆ ಒಟ್ಟು 1.69 ಲಕ್ಷ ಲೋಹದ ತುಣುಕುಗಳನ್ನು ಸಂಗ್ರಹಿಸಿ, ಅದನ್ನು ಪ್ರತಿಮೆ ನಿರ್ಮಾಣದಲ್ಲಿ ಬಳಸಲಾಗಿದೆ * ಪಟೇಲರ ಜೀವನಗಾಥೆ ಸಾರುವ ವಸ್ತುಸಂಗ್ರಹಾಲಯ * ‘ಲೇಸರ್‌ ಲೈಟ್’ ಪ್ರದರ್ಶನ * ಸರ್ದಾರ್ ಪಟೇಲ್, ಮಹಾತ್ಮಾ ಗಾಂಧಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಜೀವನ–ಸಾಧನೆಗಳ ಬಗ್ಗೆ ಅಧ್ಯಯನ ನಡೆಸಲು ಸಂಶೋಧನಾ ಕೇಂದ್ರ * ಪ್ರತಿಮೆ ಸುತ್ತಲಿನ ಪ್ರದೇಶದಲ್ಲಿ ಜಲವಿಹಾರ * ದೇಶದ ಎಲ್ಲಾ ರಾಜ್ಯಗಳ ಹೆಗ್ಗಳಿಕೆ ಮತ್ತು ಮಹತ್ವವನ್ನು ಸಾರುವ ಪ್ರದರ್ಶನ ಕೇಂದ್ರ * ಪ್ರತಿಮೆಯ ಉದ್ದಕ್ಕೂ ಮೇಲಕ್ಕೇರುವ–ಇಳಿಯುವ ಲಿಫ್ಟ್‌ ವ್ಯವಸ್ಥೆ. ಪ್ರತಿಮೆ ಸುತ್ತಮುತ್ತಲಿನ ಪ್ರದೇಶ ಮತ್ತು ನರ್ಮದಾ ನದಿಗೆ ಅಡ್ಡಲಾಗಿ...

**ಜ್ಞಾನ ಕಾರಂಜಿ**::: ಶಿಶುವಿನ ಆರೈಕೆ ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಸಿದ್ಧ ಮಿಥ್ಯಗಳು/ಕಟ್ಟುಕತೆಗಳು

ಒಂದು ಮಗು ಹುಟ್ಟಿದಾಗ, ಇಡೀ ಕುಟುಂಬವು ಮಗುವನ್ನು ನೋಡಿಕೊಳ್ಳಲು ಒಟ್ಟಾಗಿ ಬರುತ್ತದೆ. ಆದಾಗ್ಯೂ, ಹೊಸ ತಾಯಿಯನ್ನು ಸುತ್ತುವರೆದಿರುವ ಬಹಳಷ್ಟು ಮಿಥ್ಯಗಳು/ಕಟ್ಟುಕತೆಗಳು ಹಲವು ಬಾರಿ ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗುತ್ತವೆ. ಈ ಮಿಥ್ಯಗಳು/ಕಟ್ಟುಕತೆಗಳು ಮತ್ತು ಅವುಗಳ ಹಿಂದಿನ ಸತ್ಯವನ್ನು ಇಲ್ಲಿ ನೋಡೋಣ. ಮಿಥ್ಯ 1 - ಕ್ಲಿನಿಕಲಿ ಟೆಸ್ಟೆಡ್ ಮತ್ತು ಕ್ಲಿನಿಕಲಿ ಪ್ರೂವನ್ ಮೈಲ್ಡ್ ಉತ್ಪನ್ನಗಳು ಒಂದೇ ಸತ್ಯ 'ಕ್ಲಿನಿಕಲ್ ಟೆಸ್ಟೆಡ್' ಒಂದು ಪ್ರಯೋಗಾಲಯದಲ್ಲಿ ನಡೆಸಿದ ಕೇವಲ ಒಂದು ವೈಜ್ಞಾನಿಕ ಪರೀಕ್ಷೆಯಾಗಿದ್ದು, ವಿಫಲವಾದರೂ ಸಹ ಯಾವುದೇ ಬ್ರ್ಯಾಂಡ್ ಅದನ್ನು ಮಾಡಿದುದಾಗಿ ಹೇಳಬಹುದು. ನೀವು ಕ್ಲಿನಿಕಲಿ ಪ್ರೂವನ್ ಮೈಲ್ಡ್ ವಿಶಿಷ್ಟ ಗುರುತನ್ನು ಹೊಂದಿದ ಹೊಸ ಜಾನ್ಸನ್ಸ್ ಉತ್ಪನ್ನಗಳಂತಹವನ್ನು ಆರಿಸಬೇಕು ಏಕೆಂದರೆ ಅವು ಮಗುವಿನ ಚರ್ಮದ ಮೇಲೆ ಬಳಸಲು ಸುರಕ್ಷಿತವಾಗಿವೆ. ಮಗುವಿನ ಚರ್ಮದ ಮೇಲೆ ಕೆರಳಿಕೆ ಮತ್ತು ಅಲರ್ಜಿಗಳಿಗೆ ನಾಲ್ಕು ಕಟ್ಟುನಿಟ್ಟಾದ ವೈದ್ಯಕೀಯ ಪರೀಕ್ಷೆಗಳ ನಂತರ ಒಂದು ಉತ್ಪನ್ನವು 100% ಯಶಸ್ಸಿನ ಪ್ರಮಾಣದಲ್ಲಿ ಉತ್ತೀರ್ಣವಾದರೆ ಮಾತ್ರ ಕ್ಲಿನಿಕಲಿ ಪ್ರೂವನ್ ಮೈಲ್ಡ್ ಎಂದು ಸಮರ್ಥಿಸಬಹುದು. ಮಿಥ್ಯ 2 - ಶಿಶು ಉತ್ಪನ್ನಗಳಲ್ಲಿನ ಪರಿಮಳ ಮಗುವಿಗೆ ಹಾನಿಯನ್ನುಂಟುಮಾಡಬಹುದು ಸತ್ಯ ಸೌಮ್ಯ ಸುಗಂಧವು ಶಿಶುಗಳಲ್ಲಿ ವಾಸನೆಯ ಗ್ರಹಿಕೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪರಿಮಳಯುಕ್ತ ಮಗುವಿನ ಆರೈಕ...

**ಜ್ಞಾನ ಕಾರಂಜಿ**::: ಜಿಎಸ್‌ಟಿ ದರ ಶ್ರೇಣಿ 4ರಿಂದ 3ಕ್ಕೆ ಇಳಿಕೆ?

ಹೊಸದಿಲ್ಲಿ: ಜಿಎಸ್‌ಟಿ ಅಡಿಯಲ್ಲಿ ಈಗಿನ 4 ಶ್ರೇಣಿಗಳ ತೆರಿಗೆ ದರಗಳು 3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್‌ ದೇಬ್‌ರಾಯ್‌ ತಿಳಿಸಿದ್ದಾರೆ. ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್‌ ಮಂಡಳಿಯ ಮಾಜಿ ಅಧ್ಯಕ್ಷ ಸುಮಿತ್‌ ದತ್‌ ಮುಜುಂದಾರ್‌ ಅವರ ಜಿಎಸ್‌ಟಿ : ಎಕ್ಸ್‌ಪ್ಲೈನ್ಡ್‌ ಫಾರ್‌ ಕಾಮನ್‌ ಮ್ಯಾನ್‌' ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಬೇಕ್‌ ದೇಬ್‌ರಾಯ್‌, ಆರ್ಥಿಕ ತಜ್ಞರ ದೃಷ್ಟಿಕೋನದಿಂದ ಜಿಎಸ್‌ಟಿಯಲ್ಲಿ ಒಂದೇ ತರಿಗೆ ಪದ್ಧತಿ ಇರಬೇಕು. ಭಾರತ, ಕೆನಡಾ, ಆಸ್ಪ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಜಿಎಸ್‌ಟಿಯಡಿಯಲ್ಲಿ ಶ್ರೇಣಿಗಳ ಇವೆ. ಜಿಎಸ್‌ಟಿ ಜಾರೊಯಲ್ಲಿರುವ ಹಲವು ರಾಷ್ಟ್ರಗಳಲ್ಲಿ ಒಂದೇ ತೆರಿಗೆ ಇದೆ ಎಂದರು. ಹಲವು ಶ್ರೇಣಿಗಳ ತೆರಿಗೆ ಪದ್ಧತಿಯು ಜಿಎಸ್‌ಟಿಯನ್ನು ಸಂಕೀರ್ಣಗೊಳಿಸುತ್ತದೆ. ಭಾರತದಲ್ಲೂ ಈ ಪರೋಕ್ಷ ತೆರಿಗೆಯನ್ನು ಮತ್ತಷ್ಟು ಸುಧಾರಣೆಗೊಳಿಸಬೇಕಾಗಿದೆ. ಸಾಮಾನ್ಯವಾಗಿ ಜಿಎಸ್‌ಟಿಯಲ್ಲಿ ಸ್ಥಿರತೆ ಕಂಡುಕೊಳ್ಳಲು ಹಲವು ರಾಷ್ಟ್ರಗಳು 10 ವರ್ಷ ತೆಗೆದುಕೊಂಡಿವೆ. ಭಾರತದಲ್ಲಿ ಈಗಿನ 4ರಿಂದ 3ಕ್ಕೆ ಜಿಎಸ್‌ಟಿ ತೆರಿಗೆ ಶ್ರೇಣಿ ಇಳಿಯುವ ನಿರೀಕ್ಷೆ ಇದೆ ಎಂದರು. ಈಗ ಶೇ.5, ಶೇ.12, ಶೇ.18 ಮತ್ತು ಶೇ.28 ಎಂದು ನಾಲ್ಕು ಬಗೆಯ ಜಿಎಸ್‌ಟಿ ತೆರಿಗೆಯ ಶ್ರೇಣಿ ಇದೆ.

**ಜ್ಞಾನ ಕಾರಂಜಿ**::: 3 ವರ್ಷಗಳಲ್ಲಿ 33,500 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ: ಇಡಿ

ಅಕ್ರಮ ಹಣ ವರ್ಗಾವಣೆಗೆ(ಮನಿ ಲಾಂಡ್ರಿಂಗ್‌) ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ 390 ಆರೋಪ ಪಟ್ಟಿಗಳನ್ನು ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದೆ. ಈ ಅವಧಿಯಲ್ಲಿ 33,500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 2005ರಿಂದ 2015ರ ಅವಧಿಯಲ್ಲಿ 9,003 ಕೋಟಿ ರೂ. ಆಸ್ತಿಯನ್ನು ಇ.ಡಿ.ಮುಟ್ಟುಗೋಲು ಹಾಕಿಕೊಂಡಿತ್ತು. ಈ ಹತ್ತು ವರ್ಷಗಳ ಅವಧಿಯಲ್ಲಿ 173 ದೂರುಗಳನ್ನು ದಾಖಲಿಸಿತ್ತು. ಆದರೆ, 2015ರಿಂದ ಈಚೆಗಿನ ಮೂರು ವರ್ಷಗಳಲ್ಲಿ 33,500 ಕೋಟಿ ರೂ.ಗೂ ಹೆಚ್ಚಿನ ಆಸ್ತಿಯನ್ನು ಜಪ್ತಿ ಮಾಡಿದ್ದು, ಪ್ರಕರಣಗಳ ಸಂಖ್ಯೆ 390ನ್ನು ಮುಟ್ಟಿದೆ. 3 ವರ್ಷದಲ್ಲಿ ಫೆಮಾ ಅಡಿಯಲ್ಲಿ 8,452 ಪ್ರಕರಣಗಳು ದಾಖಲಾಗಿವೆ. ಕಳೆದ ಹತ್ತು ವರ್ಷಗಳಲ್ಲಿ 9,500 ದೂರುಗಳು ದಾಖಲಾಗಿದ್ದವು. ಕಳೆದ ಎರಡು ವರ್ಷಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು 682ರಿಂದ 1,033ಕ್ಕೆ ಹೆಚ್ಚಿಸಲಾಗಿದೆ. ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಕರ್ನಲ್‌ ಸಿಂಗ್‌ ಅವರ ಮೂರು ವರ್ಷಗಳ ಅವಧಿ ಭಾನುವಾರ ಮುಕ್ತಾಯವಾಗುತ್ತಿದ್ದು, ಐಪಿಎಸ್‌ ಅಧಿಕಾರಿ ಎಸ್‌.ಕೆ.ಮಿಶ್ರಾ ಅಧಿಕಾರ ಸ್ವೀಕರಿಸಲಿದ್ದಾರೆ.

**ಜ್ಞಾನ ಕಾರಂಜಿ**::: ಭಾರತದಿಂದ ಆಮದು ಹೆಚ್ಚಿಸಲು ಚೀನಾ ಸಮ್ಮತಿ

ಭಾರತದಿಂದ ಆಮದನ್ನು ಹೆಚ್ಚಿಸಲು ಚೀನಾ ಸಮ್ಮತಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ. ''ಜಾಗತಿಕ ಮಟ್ಟದ ವಿದ್ಯಮಾನಗಳ ಪರಿಣಾಮ ಭಾರತೀಯ ರಫ್ತು ಹೆಚ್ಚಳಕ್ಕೆ ಅವಕಾಶ ಸೃಷ್ಟಿಯಾಗಿದೆ'' ಎಂದು ವಾಣಿಜ್ಯ ಸಂಘಟನೆ ಕಾನ್ಫಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರೀಸ್‌ (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು. ಚೀನಿ ಅಧಿಕಾರಿಗಳು ನವೆಂಬರ್‌ನಲ್ಲಿ ಭಾರತೀಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ. ಭಾರತೀಯ ರಫ್ತುದಾರರು ಚೀನಾದ ಮಾರುಕಟ್ಟೆ ಪ್ರವೇಶದ ಬಗ್ಗೆ ಎದುರಿಸುತ್ತಿರುವ ಅಡಚಣೆಗಳ ಬಗ್ಗೆ ಅಲ್ಲಿನ ಅಧಿಕಾರಿಗಳ ಜತೆಗೆ ಚರ್ಚಿಸಲಿದ್ದಾರೆ ಎಂದರು. ಭಾರತ ಇತರ ಯಾವುದೇ ದೇಶಕ್ಕಿಂತಲೂ ಹೆಚ್ಚು ವ್ಯಾಪಾರ ಕೊರತೆಯನ್ನು ಚೀನಾದ ಜತೆ ಹೊಂದಿದೆ. ಅಂದರೆ ರಫ್ತಿಗೆ ಹೋಲಿಸಿದರೆ, ಭಾರತ ಅತಿ ಹೆಚ್ಚು ಉತ್ಪನ್ನಗಳನ್ನು ಚೀನಾದಿಂದ ಖರೀದಿಸುತ್ತಿದೆ. ಭಾರಿ ಸಂಖ್ಯೆಯಲ್ಲಿ ಚೀನಾದ ಎಲೆಕ್ಟ್ರಾನಿಕ್ಸ್‌ ಮತ್ತು ಇತರ ಉತ್ಪನ್ನಗಳು ಭಾರತಕ್ಕೆ ಆಮದಾಗುತ್ತಿವೆ. ಭಾರತದ ರಫ್ತು ಹೆಚ್ಚಳವಾದಾಗ ಈ ಅಂತರ ಕಡಿಮೆಯಾದೀತು. 200 ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಯೋಜನೆ ಭಾರತವು ಚೀನಾಕ್ಕೆ ಸುಮಾರು 200 ವಿಧದ ಉತ್ಪನ್ನಗಳ ರಫ್ತು ಹೆಚ್ಚಿಸಲು ಯೋಜನೆ ಹಮ್ಮಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆಮದು-ರಫ್ತು ಅಂತರವನ್ನು ತಗ್ಗಿಸುವುದು ಇದರ ಉದ್ದೇಶ. ಏಷ್ಯಾ ಪೆಸಿಫಿಕ್‌ ವ್ಯಾಪಾರ ಒಪ್ಪಂದದ ಅಡ...

**ಜ್ಞಾನ ಕಾರಂಜಿ**::: ಜೀವನಾಂಶಕ್ಕೆ ಮದುವೆಯ ಫ್ರೂಫ್‌ ಬೇಕಿಲ್ಲ: ಸುಪ್ರೀಂ ಮಹತ್ವದ ತೀರ್ಪು

ಮೈಸೂರಿನ ಪ್ರಕರಣವೊಂದರಲ್ಲಿ ಮದುವೆಗೆ ಸಾಕ್ಷ್ಯ ಒದಗಿಸಿಲ್ಲವೆಂಬ ಕಾರಣಕ್ಕೆ ಜೀವನಾಂಶ ನೀಡಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿ, ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ. ಕಮಲ ವರ್ಸಸ್‌ ಎಂ.ಆರ್‌.ಮೋಹನ್‌ ಕುಮಾರ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌, ಮೌಖಿಕ ಹಾಗೂ ದಾಖಲೆಯ ಸಾಕ್ಷ್ಯಗಳನ್ನು ಗಮನಿಸಿ ಕೌಟುಂಬಿಕ ನ್ಯಾಯಾಲಯ ಅವರ ನಡುವೆ ಮದುವೆ ನಡೆದಿದೆ ಎಂಬ ನಿರ್ಧಾರಕ್ಕೆ ಬಂದಿದೆ. ಮೇಲ್ಮನವಿ ಆಲಿಸುವ ಅಧಿಕಾರ ಹೊಂದಿರುವ ಹೈಕೋರ್ಟ್‌,ಸಾಕ್ಷ್ಯಗಳನ್ನು ಮರು ಮೌಲ್ಯಮಾಪನ ಮಾಡುವ ಹಾಗೂ ಕೌಟುಂಬಿಕ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾದ ಅಭಿಪ್ರಾಯಕ್ಕೆ ಬರುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣದಲ್ಲಿ ಕಮಲ ಹಾಗೂ ಮೋಹನ್‌ ಕುಮಾರ್‌ ನಡುವೆ ಗಂಡ-ಹೆಂಡತಿ ಸಂಬಂಧವಿತ್ತುಮತ್ತು ಅದರ ಪರಿಣಾಮ ಅವರಿಗೆ ಮಕ್ಕಳಾಗಿವೆ. ಹಾಗಾಗಿ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿತ್ತು.ಆದರೆ ಮರುಪರಿಶೀಲನಾ ಅರ್ಜಿ ಆಲಿಸಿದ ಹೈಕೋರ್ಟ್‌, 'ಮೋಹನ್‌ ಕುಮಾರ್‌ ಜೊತೆ ಸಾಂಪ್ರದಾಯಿಕ ರೀತಿಯಲ್ಲಿ ಮದುವೆ ನಡೆದಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಪತ್ನಿ ವಿಫಲವಾಗಿದ್ದಾಳೆ. ಹಾಗಾಗಿ ಆಕೆ ಕಾನೂನು ಬದ್ಧ ಪತ್ನಿ, ಆಕೆಗೆ ಜೀವನಾಂಶ ಪಡೆಯುವ ಹಕ್ಕಿಲ್ಲವೆಂದು' ಆದೇಶ ನೀಡಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲವೆಂದು ಸುಪ್ರೀಂಕೋರ್ಟ್‌ ಹೇಳಿದೆ. ...

**ಜ್ಞಾನ ಕಾರಂಜಿ**::: ಮರುಮದುವೆ; ಮಕ್ಕಳ ಸುಪರ್ದಿಗಿಲ್ಲ ಧಕ್ಕೆ

ನವದೆಹಲಿ: ವಿಚ್ಛೇಧಿತ ಪುರುಷನು ಬೇರೊಂದು ಮದುವೆಯಾದರೂ ಮಕ್ಕಳ ಸುಪರ್ದಿಯ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚ್ಛೇಧಿತ ಪತಿಯ ಸುಪರ್ದಿಯಿಂದ ಮಕ್ಕಳನ್ನು ವಾಪಸ್ ಕೊಡಿಸುವಂತೆ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಮುಂಬೈನ ವೈದ್ಯ ದಂಪತಿ 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದಿದ್ದರು. ಮಕ್ಕಳನ್ನು ಪತಿಯ ಸುಪರ್ದಿಗೆ ಕೊಡಲಾಗಿತ್ತು. ಇಬ್ಬರೂ ಸರ್ಕಾರಿ ನೌಕರಿಯಲ್ಲಿ ಇದ್ದ ಕಾರಣ ಮಗಳ ಶೈಕ್ಷಣಿಕ ಮತ್ತು ವೈವಾಹಿಕ ವೆಚ್ಚದ ಒಂದು ಭಾಗವನ್ನು ಪತ್ನಿಯೂ ಭರಿಸಬೇಕು ಎಂದು ಸ್ಥಳೀಯ ನ್ಯಾಯಾಲಯ ಹೇಳಿತ್ತು. ಇದರ ಮಧ್ಯೆಯೇ ವಿಚ್ಚೇಧಿತ ಪತಿಯು ಬೇರೊಂದು ಮದುವೆ ಮಾಡಿಕೊಂಡಿದ್ದರು. ಆಗ ಅವರ ಮೊದಲ ಪತ್ನಿಯು ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿ, ಮಕ್ಕಳನ್ನು ತನ್ನ ಸುಪರ್ದಿಗೆ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಹೈಕೋರ್ಟ್ ಅದನ್ನು ಮಾನ್ಯ ಮಾಡಿತ್ತು. ಆ ತೀರ್ಪಿನ ವಿರುದ್ಧ ಪತಿಯು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ‘ಆ ವ್ಯಕ್ತಿಯು ಮರುಮದುವೆ ಮಾಡಿಕೊಂಡಿದ್ದರೂ ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಎರಡನೇ ಪತ್ನಿ ಉದ್ಯೋಗದಲ್ಲಿ ಇದ್ದರೂ, ಮಕ್ಕಳನ್ನು ನೋಡಿಕೊಳ್ಳಲು ಎಂದೇ ರಾಜೀನಾಮೆ ನೀಡಿದ್ದಾರೆ. ಆದರೆ ವಿಚ್ಛೇಧಿತ ಪತ್ನಿಯು ಮಗಳ ಶೈಕ್ಷಣಿಕ ವೆ...

**ಜ್ಞಾನ ಕಾರಂಜಿ**::: ರೋಗಗಳ ಗೂಡಿನಿಂದ ಸ್ವಾಸ್ಥ್ಯದ ಗುಡಿಗೆ

ಸ್ವಾತಂತ್ರ್ಯ ಬಂದಾಗ ದೇಶ ರೋಗಗಳ ಗೂಡಾಗಿತ್ತು, ಎಲುಬಿನ ಹಂದರವಾಗಿತ್ತು. ಹಳ್ಳಿಗಳೇ ಹೆಚ್ಚಾಗಿರುವ ದೇಶದಲ್ಲಿ ಆಗ ಇದ್ದ 33 ಕೋಟಿ ಭಾರತೀಯರ ಆರೋಗ್ಯ ರಕ್ಷ ಣೆಯೇ ಅತಿ ದೊಡ್ಡ ಸವಾಲು. ಹುಟ್ಟುವಾಗಲೇ ಸಾಯುವ ಮಕ್ಕಳು-ತಾಯಂದಿರು, ಅಕಾಲಿಕ ಮರಣ, ರೋಗರುಜಿನಗಳು ದೇಶದ ಆರೋಗ್ಯಕ್ಕೂ ಕಂಟಕಪ್ರಾಯವಾಗಿದ್ದವು. ಆದರೆ, ಈ ಕಷ್ಟ ಕೋಟಲೆಗಳನ್ನು ಮೀರಿ ನಿಂತ ದೇಶ ಇಂದು ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 145ನೇ ಸ್ಥಾನ ಪಡೆದಿದೆ. ಅದೆಷ್ಟೋ ಮಾರಣಾಂತಿಕ ರೋಗಗಳನ್ನು ನಿವಾರಿಸಿಕೊಂಡು, ಸರ್ವರಿಗೂ ಆರೋಗ್ಯ ನೀಡುತ್ತಾ ದೇಶವನ್ನು ಬೆಳೆಸಿದ ಸಾಹಸ ದೊಡ್ಡದೇನಲ್ಲ. ಜಾರಿಯ ಹೊಸ್ತಿಲಲ್ಲಿರುವ ಆಯುಷ್ಮಾನ್‌ ಭಾರತ್‌-ಸರ್ವರ ಆರೋಗ್ಯ ರಕ್ಷ ಣೆ ಯೋಜನೆ ನಿಜಕ್ಕೂ ಎಲ್ಲರಲ್ಲೂ ಭರವಸೆ ತುಂಬಿದೆ. ಪಂಚ ಅರಿಷ್ಟ ನಿವಾರಣೆ ದೇಶದಲ್ಲಿ ನಿತ್ಯ ಸಾವು, ನೋವಿಗೆ ಕಾರಣವಾಗುತ್ತಿದ್ದ ಪಂಚ ಅರಿಷ್ಟಗಳ ನಿವಾರಣೆ ಸ್ವಾತಂತ್ರ್ಯೋತ್ತರ ಭಾರತದ ಮಹತ್ಸಾಧನೆ. ಕುಷ್ಟ, ಪೋಲಿಯೊ, ಸಿಡುಬು, ಧನುರ್ವಾಯು, ಕೆಂಪು ಗುಳ್ಳೆ ಏಳುವ ಯಾಸ್‌ನ್ನು ಈಗ ದೇಶದಿಂದಲೇ ಹೊರಗಟ್ಟಲಾಗಿದೆ. ಆರೋಗ್ಯಕರ 145ನೇ ಸ್ಥಾನ ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಆರೋಗ್ಯ ವ್ಯವಸ್ಥೆಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಈಗ 145ನೇ ಸ್ಥಾನ. ಈ ಸ್ಥಾನ ಚೀನಾ(48), ಶ್ರೀಲಂಕಾ (71), ಬಾಂಗ್ಲಾ(133), ಭೂತಾನ್‌(134)ಗಳಿಗಿಂತ ಕಡಿಮೆಯಾದರೂ ಸುಧಾರಣೆ ಹಾದಿಯಲ್ಲಿದೆ....

**ಜ್ಞಾನ ಕಾರಂಜಿ**::: ಏಳು ದಶಕದಲ್ಲಿ ಆರ್ಥಿಕತೆ, ಕೈಗಾರಿಕೆ, ಉದ್ದಿಮೆ ಬೆಳವಣಿಗೆ

ದೇಶವು ಈ 7 ದಶಕದಲ್ಲಿ ಆರ್ಥಿಕ ಹಾಗೂ ಉದ್ಯಮ ವಲಯದಲ್ಲಿ ಭಾರಿ ಸಕಾರಾತ್ಮಕ ಪ್ರಗತಿ ಕಂಡಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತ, ಜಿಡಿಪಿ ಬೆಳವಣಿಗೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತಿ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ವಿಶ್ವದ 6ನೇ ಅತಿ ದೊಡ್ಡ ಆರ್ಥಿಕತೆಯಾಗಿ ಇತ್ತೀಚೆಗೆ ಫ್ರಾನ್ಸ್‌ ಅನ್ನೂ ಭಾರತ ಹಿಂದಿಕ್ಕಿದೆ. ಸ್ವಾತಂತ್ರ್ಯದ ಆರಂಭಿಕ ಹಂತದಲ್ಲಿ ರಚನೆಯಾದ ಕೈಗಾರಿಕಾ ನೀತಿಯಿಂದ ಇತ್ತೀಚಿನ ಮೇಕ್‌ ಇನ್‌ ಇಂಡಿಯಾದ ತನಕ ಅನೇಕ ಕೈಗಾರಿಕಾ ನೀತಿಗಳು ದೇಶದ ಉದ್ಯಮ ವಲಯದ ಚಹರೆಯನ್ನೇ ಬದಲಿಸಿದೆ. ಮೊದ ಮೊದಲು ಕೇಂದ್ರ ಸರಕಾರದ ಅಧೀನದಲ್ಲಿ ಉದ್ಯಮ ವಲಯದ ದಿಗ್ಗಜ ಕಂಪನಿಗಳು ಪ್ರಗತಿಯಾದರೆ, ಉದಾರೀಕರಣದ ನಂತರ ಖಾಸಗಿ ವಲಯದ ಕೈಗಾರಿಕೆಗಳೂ ಗಣನೀಯ ಪ್ರಗತಿ ದಾಖಲಿಸಿತು. ಎಂಬತ್ತರ ದಶಕದ ನಂತರ ಐಟಿ ವಲಯ, ಆರ್‌ಆ್ಯಂಡ್‌ಡಿ, ಇ-ಕಾಮರ್ಸ್‌ ಇತ್ತೀಚಿನ ಸ್ಟಾರ್ಟಪ್‌ ಗಳೆಂಬ ನವೋದ್ಯಮದ ತನಕ ಉದ್ಯಮ ಕ್ಷೇತ್ರ ಅನೇಕ ಟಿಸಿಲುಗಳನ್ನು ಒಡೆದಿದೆ. 1. ಜಿಡಿಪಿ ಪ್ರಗತಿ: ಭಾರತದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ ವನ್ನು (ಜಿಡಿಪಿ)ರೂಪಾಯಿಗಳ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ, ಕಳೆದ 71 ವರ್ಷಗಳಲ್ಲಿ 2.7 ಲಕ್ಷ ಕೋಟಿ ರೂ.ಗಳಿಂದ ಬರೋಬ್ಬರಿ 190 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೊತ್ತಕ್ಕೆ ಜಿಗಿದಿದೆ. ಈ ವರ್ಷ ಶೇ.7.5ರ ಜಿಡಿಪಿ ಪ್ರಗತಿ ನಿರೀಕ್ಷಿಸಲಾಗಿದೆ. 2. ತಲಾ ಆದಾಯ ಏರಿಕೆ: ಸ್ವಾತಂತ್ರ್ಯದ ಸಿಕ್ಕಿದ 1947ರಲ್ಲಿ ಪ್ರತಿ ವ್...

**ಜ್ಞಾನ ಕಾರಂಜಿ**::: ಕಪ್ಪು ಸಮುದ್ರ: 2400 ವರ್ಷಗಳಷ್ಟು ಹಳೆಯ ಹಡಗು ಪತ್ತೆ

ವಾಷಿಂಗ್ಟನ್‌: ವಿಶ್ವದ ಅತ್ಯಂತ ಹಳೆಯದಾದ ಹಡಗೊಂದರ ಪಳೆಯುಳಿಕೆಯನ್ನು ವಿಜ್ಞಾನಿಗಳ ತಂಡ ಕಪ್ಪು ಸಮುದ್ರದ ಆಳದಲ್ಲಿ ಮಂಗಳವಾರ ಪತ್ತೆ ಹಚ್ಚಿದೆ. ಈ ಬಗ್ಗೆ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದ್ದು, ವಿಜ್ಞಾನಿಗಳ ಪ್ರಕಾರ ಇದು ವ್ಯಾಪಾರಿ ಹಡಗು ಆಗಿದ್ದು, ಸುಮಾರು 2400 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಮುದ್ರದ ತಳದಲ್ಲಿ ಉಳಿದು ಕೊಂಡಿದೆ ಎನ್ನಲಾಗಿದೆ. ಇಂಗ್ಲೆಂಡ್‌ ಮೂಲದ ವಿಜ್ಞಾನಿಗಳ ತಂಡ ಕಪ್ಪು ಸಮುದ್ರ ಕಡಲತೀರ ಪುರಾತತ್ವ ಅಧ್ಯಯನ ಯೋಜನೆ ಅಡಿಯಲ್ಲಿ ಸಾಗರದಾಳದಲ್ಲಿ ಶೋಧ ಕಾರ್ಯ ನಡೆಸಿತ್ತು. ಬಲ್ಗೇರಿಯಾ ತೀರಪ್ರದೇಶದಿಂದ ಸುಮಾರು 80.4 ಕಿ.ಮೀ ದೂರದಲ್ಲಿ ಈ ಹಡಗು ಪತ್ತೆಯಾಗಿದ್ದು, 75 ಅಡಿಗಳಷ್ಟು ಉದ್ದವಿದೆ. ಈ ಹಡಗು ಪ್ರಾಚೀನ ಗ್ರೀಕ್‌–ರೋಮನ್ನರ ಕಾಲದಲ್ಲಿ ಸಂಚರಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. ಸಮುದ್ರದ ಆಳದಲ್ಲಿ ಆಮ್ಲಜನಕ ಕೊರತೆಯಿರುವುದರಿಂದ ಹಡಗಿನ ಅವಶೇಷಗಳು ಹಾಳಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳ ತಂಡಕ್ಕೆ ದೊರೆತಿರುವ ವಸ್ತುಗಳನ್ನು ಬ್ರಿಟಿಷ್‌ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ.

**ಜ್ಞಾನ ಕಾರಂಜಿ**::: ಎನರ್ಜಿ ಏಜನ್ಸಿಗೆ ಭಾರತೀಯ ನೀಲ್‌ ಚಟರ್ಜಿ ನೇಮಕ

ವಾಷಿಂಗ್ಟನ್: ಮಹತ್ವದ ಫೆಡರಲ್ ಎನರ್ಜಿ ರೆಗ್ಯುಲೇಟರಿ ಕಮಿಷನ್‌ (ಶಕ್ತಿ ನಿಯಂತ್ರಣ ಆಯೋಗ) ಮುಖ್ಯಸ್ಥರನ್ನಾಗಿ ಭಾರತೀಯ ಸಂಜಾತ ನೀಲ್ ಚಟರ್ಜಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ. ಶಕ್ತಿ ನಿಯಂತ್ರಣ ಆಯೋಗವು ಅಂತರರಾಜ್ಯ ವಿದ್ಯುಚ್ಚಕ್ತಿ, ನೈಸರ್ಗಿಕ ಅನಿಲ ಹಾಗೂ ತೈಲ ಪೂರೈಕೆ ಪ್ರಕ್ರಿಯೆಗಳನ್ನು ನಿರ್ವಹಿಸುತ್ತದೆ. ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದ ಕೆವಿನ್ ಮೆಕಿಂಟೈರ್ ಅವರ ಸ್ಥಾನವನ್ನು ಇವರು ತುಂಬಲಿದ್ದಾರೆ. ನೀಲ್ ಅವರು ಆಯೋಗದ ಮುಖ್ಯಸ್ಥರಾಗಿ ಕಳೆದ ವರ್ಷ ಕೆಲ ಸಮಯ ಕೆಲಸ ಮಾಡಿದ್ದರು. ಈಗ ಮತ್ತೆ ಟ್ರಂಪ್ ಅವರಿಂದ ನೇಮಕಗೊಂಡಿದ್ದಾರೆ. 50 ವರ್ಷಗಳ ಹಿಂದೆ ಇವರು ಕೋಲ್ಕತ್ತದಿಂದ ಅಮೆರಿಕಕ್ಕೆ ಬಂದಿದ್ದರು. ವಕೀಲ, ರಾಜಕೀಯ ಸಲಹೆಗಾರರೂ ಆಗಿರುವ ಇವರು, ಸಿನ್ಸಿನಾಟಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.

**ಜ್ಞಾನ ಕಾರಂಜಿ**::: ಇಥಿಯೋಪಿಯಾಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ

ಅಡಿಸ್‌ ಅಬಾಬ: ಅಧಿಕಾರ ಸ್ವೀಕರಿಸಿದ ನಂತರ ಹಲವಾರು ಸುಧಾರಣೆಗಳಿಗೆ ನಾಂದಿ ಹಾಡಿ ಗಮನ ಸೆಳೆದಿರುವ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್‌, ರಾಷ್ಟ್ರಪತಿ ಹುದ್ದೆಗೆ ಮಹಿಳೆಯೊಬ್ಬರನ್ನು ನೇಮಕ ಮಾಡುವ ಮೂಲಕ ಲಿಂಗ ಸಮಾನತೆ ವಿಷಯದಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದಾರೆ. ರಾಜತಾಂತ್ರಿಕ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ 68 ವರ್ಷದ ಸಹ್ಲೆ–ವರ್ಕ್‌ ಝೆವ್ಡೆ ದೇಶದ ಮೊದಲ ರಾಷ್ಡ್ರಪತಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು.

**ಜ್ಞಾನ ಕಾರಂಜಿ**::: ಭಾರತೀಯ ವಾಯುಪಡೆಗೆ ಸುಧಾರಿತ ಸುಖೊಯ್‌ ಯುದ್ಧವಿಮಾನ ಸೇರ್ಪಡೆ

ಮುಂಬೈ: ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಸುಧಾರಿತ ಸುಖೊಯ್‌–30 ಎಂಕೆಐ ಯುದ್ಧ ವಿಮಾನವು ಶುಕ್ರವಾರ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು. ಮಹಾರಾಷ್ಟ್ರದ ನಾಸಿಕ್‌ನ ಓಝಾರ್‌ ಜಿಲ್ಲೆಯಲ್ಲಿನ 11 ಬೇಸ್‌ ರಿಪೇರ್‌ ಡಿಪೊ (11 ಬಿಆರ್‌ಡಿ) ಘಟಕದಲ್ಲಿ ಇದನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು. ಘಟಕದ ನಿರ್ವಹಣಾ ಕಮಾಂಡರ್‌ ಏರ್‌ಮಾರ್ಷಲ್‌ ಹೇಮಂತ್‌ ಶರ್ಮಾ ಅವರು, ನೈರುತ್ಯ ಏರ್‌ಕಮಾಂಡರ್‌ ಏರ್‌ಮಾರ್ಷಲ್‌ ಎಚ್.ಎಸ್. ಅರೋರಾ ಅವರಿಗೆ ಇದನ್ನು ಹಸ್ತಾಂತರಿಸಿದರು. 11 ಬಿಆರ್‌ಡಿ ಘಟಕವು ಮಿಗ್‌–29 ಮತ್ತು ಸುಖೊಯ್‌ 30ಎಂಕೆಐಯಂತಹ ಮುಂಚೂಣಿ ಯುದ್ಧವಿಮಾನಗಳನ್ನು ದುರಸ್ತಿಗೊಳಿಸುವ ಮತ್ತು ಅಭಿವೃದ್ಧಿಗೊಳಿಸುವ ಭಾರತೀಯ ವಾಯುಪಡೆಯ ಏಕೈಕ ಘಟಕವಾಗಿದೆ. ಸುಖೊಯ್‌ ಸು–30 ಎಂಕೆಐ ಯುದ್ಧವಿಮಾನವನ್ನು ರಷ್ಯಾದ ಸುಖೊಯ್‌ ಕಂಪನಿ ವಿನ್ಯಾಸಗೊಳಿಸಿದ್ದು, ಭಾರತದ ಎಚ್‌ಎಎಲ್‌ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ. 1974ರ ಏಪ್ರಿಲ್‌ 11ರಂದು ಸ್ಥಾಪಿಸಲಾದ ಈ ಡಿಪೊಗೆ 1975ರ ಜನವರಿ 1ರಂದು ‘11 ಬೇಸ್‌ ರಿಪೇರ್‌ ಡಿಪೊ’ ಎಂದು ಮರುನಾಮಕರಣ ಮಾಡಲಾಯಿತು. ತಂತ್ರಜ್ಞರು ಮತ್ತು ತಾಂತ್ರಿಕ ಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿರುವ ಈ ಘಟಕವು 1983ರಲ್ಲಿ 100 ಸು–7 ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಿತು.

**ಜ್ಞಾನ ಕಾರಂಝಿ**::: ದೇಶದಲ್ಲಿ 81 ಸಾವಿರ ಕೋಟ್ಯಧಿಪತಿಗಳು

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ವರ್ಷಕ್ಕೆ ₹ 1 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದ ತೆರಿಗೆದಾರರ ಸಂಖ್ಯೆಯು 48,416 ರಿಂದ 81,344ಕ್ಕೆ ತಲುಪಿದ್ದು,  ಶೇ 68ರಷ್ಟು ಹೆಚ್ಚಳ ದಾಖಲಿಸಿದೆ. ಕಾರ್ಪೊರೇಟ್‌ಗಳು, ಇತರೆ ಸಂಸ್ಥೆಗಳು, ಹಿಂದೂ ಅವಿಭಕ್ತ ಕುಟುಂಬ ಮತ್ತು ವ್ಯಕ್ತಿಗಳು ಒಳಗೊಂಡಂತೆ 88,649 ತೆರಿಗೆದಾರರ ಆದಾಯವು 2014–15ರಲ್ಲಿ ₹ 1 ಕೋಟಿಗಿಂತ ಹೆಚ್ಚಿಗೆ ಇತ್ತು. 4 ವರ್ಷಗಳಲ್ಲಿ  ಈ ಕೋಟ್ಯಧಿಪತಿಗಳ ಸಂಖ್ಯೆ 1.40 ಲಕ್ಷಕ್ಕೆ ತಲುಪಿದೆ. ಈ ಅವಧಿಯಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯು ಶೇ 60ರಷ್ಟು ಏರಿಕೆಯಾಗಿರುವುದನ್ನು ಇದು ಸೂಚಿಸುತ್ತದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ತಿಳಿಸಿದೆ. ಮಂಡಳಿಯು ಬಿಡುಗಡೆ ಮಾಡಿರುವ ನಾಲ್ಕು ವರ್ಷಗಳಲ್ಲಿ ಸಲ್ಲಿಕೆಯಾದ ಆದಾಯ ಮತ್ತು ನೇರ ತೆರಿಗೆಯ ವಿವರಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ‘ತೆರಿಗೆ ಇಲಾಖೆಯು ನಾಲ್ಕು ವರ್ಷಗಳಲ್ಲಿ ಕೈಗೊಂಡ ಕಾನೂನು, ಆಡಳಿತ, ಮಾಹಿತಿ ಮತ್ತು ಜಾರಿ ಪ್ರಯತ್ನಗಳ ಫಲವಾಗಿ ತೆರಿಗೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ’ ಎಂದು ‘ಸಿಬಿಡಿಟಿ’ ಅಧ್ಯಕ್ಷ ಸುಶೀಲ್‌ಚಂದ್ರ ಹೇಳಿದ್ದಾರೆ. ಐ.ಟಿ ರಿಟರ್ನ್ಸ್‌:  ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್ಸ) ಸಲ್ಲಿಸಿದವರ ಸಂಖ್ಯೆಯಲ್ಲಿಯೂ ಶೇ 80ರಷ್ಟು ಹೆಚ್ಚಳ ಕಂಡು ಬಂದಿದೆ. 2013–14ರಲ್ಲಿ...

**ಜ್ಞಾನ ಕಾರಂಜಿ**::: 6 ತಿಂಗ್ಳಲ್ಲಿ 680 ಕೆಜಿ ಚಿನ್ನ ಉತ್ಪಾದನೆ

ರಾಯಚೂರು: ಹಟ್ಟಿ ಚಿನ್ನದಗಣಿ ಕಂಪನಿ ವರ್ಷದಿಂದ ವರ್ಷಕ್ಕೆ ಚಿನ್ನದ ಉತ್ಪಾದನೆಯಲ್ಲಿ ದಾಖಲೆ ಏಕಸ್ವಾಮ್ಯತೆ ಸಾಧಿಸುತ್ತಿದೆ. 2018-19ನೇ ಆರ್ಥಿಕ ಸಾಲಿಗೆ 1,700 ಕೆಜಿ ಚಿನ್ನದ ಉತ್ಪಾದನೆ ಗುರಿಯಲ್ಲಿ ಆರ್ಥಿಕ ವರ್ಷದ ಪ್ರಥಮ 6 ತಿಂಗಳಲ್ಲಿ (ಏಪ್ರಿಲ್ 2018ರಿಂದ ಸೆಪ್ಟೆಂಬರ್ 2018) 680 ಕೆಜಿ ಉತ್ಪಾದನೆ ಮಾಡಿದೆ. ಉಳಿದ 1020 ಕೆಜಿ ಚಿನ್ನವನ್ನು ಅಕ್ಟೋಬರ್ 2018 ರಿಂದ ಮಾರ್ಚ್ 2019ರೊಳಗೆ (6 ತಿಂಗಳು) ಪ್ರಗತಿ ತೋರಬೇಕಿದೆ. 2017-18ರ ಆರ್ಥಿಕ ಸಾಲಿನಲ್ಲಿ 1,640 ಕೆಜಿ ನಿರೀಕ್ಷೆ ಮೀರಿ ಚಿನ್ನ ಉತ್ಪಾದನೆ ಮಾಡಿದ್ದ ಕಂಪನಿ, ಈ ಬಾರಿ ದಾಖಲೆ ಮೀರಿ ಉತ್ಪಾದನೆೆ ಕೈಗೊಂಡಿದೆ.

**ಜ್ಞಾನ ಕಾರಂಜಿ**::: ನಷ್ಟದ ಸುಳಿಯಲ್ಲಿ ಎಸ್ಕಾಂಗಳು

5002 ಕೋಟಿ ರೂ. ಖೋತಾ | ಮಂಗಳೂರು ಕಂಪನಿಗೆ ಮಾತ್ರ ಲಾಭ |ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸಮಸ್ಯೆ ಕಾಡುತ್ತಿರುವ ಬೆನ್ನಲ್ಲೇ ವಿದ್ಯುತ್ ಆಡಿಟ್​ಗಳು ಕಾಲಕಾಲಕ್ಕೆ ನಡೆಯದೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ತೀವ್ರ ನಷ್ಟದಲ್ಲಿವೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿ ಣಮಿಸಿದೆ. ಕೆಇ ಆರ್​ಸಿ ಇತ್ತೀಚೆಗೆ ತಾನೇ ಎರಡು ಬಾರಿ ದರ ಏರಿಕೆಗೆ ಅನುಮತಿ ನೀಡಿದರೂ ಅನುಕೂಲವಾಗಿಲ್ಲ. ಹೀಗಾಗಿ ಎಸ್ಕಾಂಗಳನ್ನು ನಷ್ಟದಿಂದ ಹೊರ ತರಲು ಸರ್ಕಾರ ದಾರಿ ಹುಡುಕುತ್ತಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೊರತುಪಡಿಸಿ ಉಳಿದ ನಾಲ್ಕು ಕಂಪನಿಗಳು ಅನುಭವಿಸುತ್ತಿರುವ ನಷ್ಟ 5002 ಕೋಟಿ ರೂ. ಆಗಿದೆ. ಎರಡು ಬಾರಿ ದರ ಏರಿಕೆ: ಪ್ರತಿ ವರ್ಷ ನಷ್ಟ ತೋರಿಸಿಯೇ ದರ ಏರಿಸಲಾಗುತ್ತದೆ. ಈ ವರ್ಷ ಎರಡು ಬಾರಿ ಏರಿಸಿದ್ದು, ಒಮ್ಮೆ ಪ್ರತಿ ಯೂನಿಟ್​ಗೆ 24 ಪೈಸೆ ಏರಿಕೆಯಾದರೆ, ಮತ್ತೊಮ್ಮೆ 15 ಪೈಸೆ ಏರಿಕೆಯಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸುವ ಪ್ರಸ್ತಾವನೆ ಆಧಾರದಲ್ಲಿಯೇ ಕೆಇಆರ್​ಸಿ ಒಪ್ಪಿಗೆ ನೀಡಿರುತ್ತದೆ. ಆದಾಯಕ್ಕೂ ಮೀರಿ ಖರ್ಚುಗಳಿವೆಯೇ ಎಂಬ ಪ್ರಶ್ನೆ27 ಮೂಡಿದೆ. ವಿದ್ಯುತ್ ಖರೀದಿ, ಹೊಸ ಯೋಜನೆಗಳಿಗೆ ಹೂಡಿಕೆ ಹೀಗೆ ವಿವಿಧ ಉದ್ದೇಶಗಳಿಂದ ನಷ್ಟವಾಗುತ್ತಿದೆ. ಯಾವ ಸಂಸ್ಥೆ? ಎಷ್ಟು ನಷ್ಟ?: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ 234 ಕೋಟಿ ರೂ., ಹುಬ್...

**ಜ್ಞಾನ ಕಾರಂಜಿ**::: ಕನ್ನಡಕ್ಕೆ ಏಕಿಷ್ಟೆಲ್ಲ ಕಷ್ಟ, ಮುಗಿಯದ ಸಂಕಷ್ಟ…

ಭಾರತದ ಎಲ್ಲ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಎಂದ ರಾಮಮನೋಹರ ಲೋಹಿಯಾರ ಮಾತಿನಲ್ಲಿ ದೇಶದ ಏಕತೆಯನ್ನು ಶಾಶ್ವತವಾಗಿ ಕಾಯ್ದುಕೊಳ್ಳುವ ಆಶಯವಿತ್ತು. ಆದರೆ ಒಂದೊಂದಾಗಿ ಪ್ರಾದೇಶಿಕ ಭಾಷೆಗಳ ಅಸ್ತಿತ್ವವನ್ನೇ ಹೊಸಕಿ ಹಾಕುವ ಯತ್ನ ಸಂವಿಧಾನದ ಹೆಸರಿನಲ್ಲಿ ನಡೆಯುತ್ತಿದೆ. ಅದಕ್ಕೆ ಪರಿಹಾರ ಸಂವಿಧಾನದಲ್ಲೇ ಇದೆ. ಮತ್ತೊಂದು ಕನ್ನಡ ರಾಜ್ಯೋತ್ಸವ ಹೊಸಿಲಿಗೆ ಬಂದು ನಿಂತಿದೆ. ಈ ಮನೆ ಕನ್ನಡಿಗರದೋ ಅಲ್ಲವೋ ಒಳಕ್ಕೆ ಕಾಲಿಟ್ಟರೆ ಹೇಗೋ ಏನೋ ಎಂಬ ಅನುಮಾನ ಅದರ ಮುಖದಲ್ಲಿ ಮನೆಮಾಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ, ಕರ್ನಾಟಕ ಎಂದು ನಾಮಕರಣವಾದಾಗ ಇದ್ದ ಹರ್ಷ, ಸಂತೋಷ ಈಗ ಇಲ್ಲ ಎನ್ನುವುದು ನಮಗೆಲ್ಲ ಗೊತ್ತಿರುವಂತೆ ರಾಜ್ಯೋತ್ಸವಕ್ಕೂ ಗೊತ್ತಿದೆ. ವರ್ಷಕ್ಕೆ ಒಮ್ಮೆ ಬರಲೇಬೇಕಿರುವುದು ಸದ್ಯಕ್ಕೆ ಅದರ ಕರ್ಮ. ಈ ಹಿಂದಿನ 62 ವರ್ಷ ಬಂದಿದ್ದಂತೆ ಈಗ 63ನೇ ವರ್ಷದಲ್ಲಿ ಬಂದಿದೆ. ತನ್ನ ಬರುವನ್ನು ಸಂಭ್ರಮಿಸುವ ಮನೆಗಳ ಹುಡುಕಾಟ ಅದರ ಪಾಲಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಕಷ್ಟವೆನಿಸಬಹುದು. ಸ್ವಾತಂತ್ರ್ಯ ಬಂದ ಹೊಸತರಲ್ಲಿ ನೂರಾರು ಸುಂದರ ಕನಸುಗಳಿಗೆ ಮುನ್ನುಡಿ ಬರೆದುಕೊಂಡ ಪೀಳಿಗೆ ಈಗ ಇಲ್ಲ. ಹುಯಿಲಗೋಳ ನಾರಾಯಣ ರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಬಯಸಿದರು. ಭಾಷಾವಾರು ಪ್ರಾಂತ್ಯ ರಚನೆಯನ್ನು ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’ ಎಂದು ಸಿದ್ದಯ್ಯ ಪುರಾಣಿಕರು ಸ...

**ಜ್ಞಾನ ಕಾರಂಜಿ**::: ರಾಜಪಕ್ಸೆ ಮತ್ತೆ ಅಧಿಕಾರಕ್ಕೆ ಮರಳಿರುವುದು ಭಾರತದ ಆತಂಕಕ್ಕೆ ಕಾರಣ!

ಶ್ರೀಲಂಕಾದಲ್ಲಿ ಶುಕ್ರವಾರ ಮಹತ್ವದ ರಾಜಕೀಯ ವಿದ್ಯಮಾನ ಘಟಿಸಿದ್ದು, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅಲ್ಲಿನ ಪ್ರಧಾನಿ ರಾನಿಲ್ ವಿಕ್ರಮಸಿಂಘೆಯನ್ನು ಪದಚ್ಯುತಿಗೊಳಿಸಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆಯನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

**ಜ್ಞಾನ ಕಾರಂಜಿ**::: 🌕*ಭಾರತದಲ್ಲಿ ಮೊದಲಿಗರು*🌕

1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ. ಉತ್ತರ:: *ಅನ್ನಾ ರಾಜನ್ ಜಾರ್ಜ್* 2) ಭಾರತದ ಪ್ರಥಮ ರಾಷ್ಟ್ರಪತಿ. ಉತ್ತರ:: *ಡಾ. ರಾಜೇಂದ್ರ ಪ್ರಸಾದ್.* 3) ಸೇನಾ ಪಡೆಯ ಪ್ರಥಮ ಮುಖಸ್ಥ. ಉತ್ತರ:: *ಜನರಲ್ ಮಾಣಿಕ್ ಷಾ.* 4)ಭಾರತದ ಮೊದಲ ಗವರ್ನರ್ ಜನರಲ್. ಉತ್ತರ:: *ಮೌಂಟ್ ಬ್ಯಾಟನ್*. 5)ಭಾರತದ ಮೊದಲ ಉಪ ರಾಷ್ಟ್ರಪತಿ. ಉತ್ತರ:: *ಡಾ. ಎಸ್. ರಾಧಾಕೃಷ್ಣನ್.* 6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್. ಉತ್ತರ:: *ಸಿ. ರಾಜಗೊಪಾಲಾಚಾರಿ*. 7)ಭಾರತದ ಮೊದಲ ಗಗನ ಯಾತ್ರಿ. ಉತ್ತರ:: *ರಾಕೇಶ್ ಶರ್ಮಾ*. 8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು. ಉತ್ತರ:: *ನ್ಯಾಯಮೂರ್ತಿ ಹೀರಾಲಾಲ್ ಕನಿಯಾ*. 9)ಭಾರತದ ಮೊದಲ ಪೈಲೆಟ್. ಉತ್ತರ:: *J.R.D.ಟಾಟಾ.* 10)ಎವೆರೆಸ್ಟ್ ಏರಿದ ಮೊದಲ ಭಾರತೀಯ. ಉತ್ತರ:: *ಶರ್ಪಾ ತೆನ್ನ್ ಸಿಂಗ್.* 11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ. ಉತ್ತರ:: *ಸಿ. ರಾಜಗೊಪಲಾಚಾರಿ.* 12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ ವ್ಯಕ್ತಿ. ಉತ್ತರ:: *ಡಾ. ಜಾಕೀರ್ ಹುಸೇನ್.* 13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ. ಉತ್ತರ:: *ಆಚಾರ್ಯ ವಿನೋಬಾ ಭಾವೆ.* 14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ. ಉತ್ತರ:: *ಬಾನು ಅತೀಯಾ.* 15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷಿಣಿ. ಉತ್ತರ:: *ಅನಿಬೆಸೆಂಟ್.* 16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ ಭಾರತದ ಮಹಿಳೆ. ಉತ್ತರ::...

**ಜ್ಞಾನ ಕಾರಂಜಿ**::: *ನಿಮಗಿದು ತಿಳಿದಿರಲಿ*

ಭಾರತದ ಸರ್ಕಾರದ ಮುಖ್ಯ ಕಾನೂನು ಸಲಹೆಗಾರ - ಅಟಾರ್ನಿ ಜನರಲ್. ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಾಥಮಿಕ ಸಲಹೆಗಾರ - ಸಾಲಿಸಿಟರ್ ಜನರಲ್. 1945 ರಲ್ಲಿ ಸ್ಥಾಪಿತವಾದ ಸೆಂಟ್ರಲ್ ವಾಟರ್ ಕಮಿಷನ್ (CWC). ಶಾಂಘೈ ಸಹಕಾರ ಸಂಸ್ಥೆ (SCO) ಅನ್ನು 2001 ರಲ್ಲಿ ಸ್ಥಾಪಿಸಲಾಯಿತು. ಶಾಂಘಾಯ್ ಸಹಕಾರ ಸಂಘದ ಮುಖ್ಯಸ್ಥರು (SCO) - ಬೀಜಿಂಗ್, ಚೀನಾ. ಜಾಗತಿಕ ಹಸಿವು ಸೂಚ್ಯಂಕ - 2018 (ಜಿಹೆಚ್ಐ), ಭಾರತದ ಸ್ಥಾನ -103. ವಿಶ್ವ ಬ್ಯಾಂಕಿನ ಮಾನವ ಬಂಡವಾಳ ಸೂಚ್ಯಂಕ 2018 ರಲ್ಲಿ (ಎಚ್ಸಿಐ), ಭಾರತದ ಸ್ಥಾನ - 115 ನೇ ಸ್ಥಾನ. ವಿಶ್ವ ಬ್ಯಾಂಕ್ನ ಮಾನವ ಬಂಡವಾಳ ಸೂಚ್ಯಂಕ 2018 (ಹೆಚ್ಸಿಐ) - ಸಿಂಗಾಪುರ್ ಟಾಪ್. ಮಲೇಷಿಯಾದ ಮರಣದಂಡನೆಯನ್ನು ನಿರ್ಮೂಲನೆ ಮಾಡಲು ಈ ಏಷ್ಯಾದ ರಾಷ್ಟ್ರದ ಸರ್ಕಾರ ನಿರ್ಧರಿಸಿದೆ. *ತುಷಾರ್ ಮೆಹ್ತಾ ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕ* ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರು ಭಾರತದ ಹೊಸ ಸಾಲಿಸಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ಜೂನ್ 30, 2020 ರವರೆಗೆ ಅವರು ಹುದ್ದೆಯಲ್ಲಿರುತ್ತಾರೆ ಕಳೆದ ವರ್ಷ ಅಕ್ಟೋಬರ್ನಿಂದ ರಾಜೀನಾಮೆ ನೀಡಿದ್ದ ನಂತರ ಈ ಹುದ್ದೆ ಖಾಲಿಯಾಗಿತ್ತು.

**ಜ್ಞಾನ ಕಾರಂಜಿ**::: ಪ್ರಮುಖ ಸಂಸ್ಥೆಗಳು ಕೇಂದ್ರ ಕಛೇರಿ ಇರುವ ಸ್ಥಳ*

1) ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆ ದೆಹ್ರಾದೂನ್.(ಉತ್ತರಖಂಡ) 2) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ದೆಹ್ರಾದೂನ್ 3) ಹಪ್ಕೈನ್ ಇನ್ಸ್ಟಿಟ್ಯೂಟ್ ಮುಂಬೈ. 4) ಭಾರತೀಯ ಕ್ಯಾನ್ಸರ್ ರಿಸರ್ಚ್ ಇನ್ಸ್ಟಿಟ್ಯೂಟ್ ಮುಂಬೈ. 5) ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ ಮುಂಬೈ. 6) ತಳಿ ಸಂವರ್ಧನಾ ಸಂಸ್ಥೆ ಹಿಸ್ಸಾರ್ (ಹರ್ಯಾಣ). 7) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಕರ್ನಾಲ್ (ಹರ್ಯಾಣ). 8) ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ಬೆಂಗಳೂರು. 9) ರಾಮನ್ ಸಂಶೋಧನಾ ಕೇಂದ್ರ • ಬೆಂಗಳೂರು. 10) ನ್ಯಾಶನಲ್ ಏರೊನಾಟಿಕಲ್ ಲ್ಯಾಬರೋಟರಿ ಬೆಂಗಳೂರು. 11) ವಲ್ಲಭಭಾಯ್ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟ್ ದೆಹಲಿ. 12) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೆಬಲ್ ಡಿಸೀಜ್ ದೆಹಲಿ. 13) ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ ದೆಹಲಿ. 14) ಭಾರತೀಯ ಹವಾಮಾನ ವೀಕ್ಷಣಾಲಯ ಪುಣೆ ಮತ್ತು ದೆಹಲಿ. 15) ವೈದ್ಯಕೀಯ ವಿಜ್ಞಾನ ಅಖಿಲ ಭಾರತ ಸಂಸ್ಥೆ (ಏಮ್ಸ್) ದೆಹಲಿ. 16) ಅಖಿಲ ಭಾರತ ಮಲೇರಿಯಾ ಸಂಶೋಧನಾ ಸಂಸ್ಥ ದೆಹಲಿ . 17) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ದೆಹಲಿ. 18) ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆ (ಕಾಸರಗೋಡು) ಕೇರಳ. 19) ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸೆ ನಾಗ್ಪುರ 20) ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ • ಧನ್ ಬಾದ್. 21) ಆಣ್ವಿಕ ಮತ್ತು ಕೊ...

**ಜ್ಞಾನ ಕಾರಂಜಿ**::: ✍🏻● *ಭಾರತ ನೌಕಾಪಡೆಗೆ ‘ಬರಾಕ್’ ಬಲ*●

*barak-8-sam-missile* *ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆ ‘ಬರಾಕ್–8’ ಅನ್ನು ಭಾರತದ ನೌಕಾಪಡೆಗೆ ಸದ್ಯದಲ್ಲೇ ಪೂರೈಸುವುದಾಗಿ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಪ್ರಕಟಿಸಿದೆ.* ಬರಾಕ್–8 ಎಲ್‌ಆರ್–ಎಸ್‌ಎಎಂ (ಲಾಂಗ್ ರೇಂಜ್ ಸರ್ಫೇಸ್ ಟು ಏರ್‌ ಮಿಸೈಲ್) ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ನೌಕಾಪಡೆಯ 7 ಹಡಗುಗಳಲ್ಲಿ ಅಳವಡಿಸಲಾಗುತ್ತದೆ. ಈ ಕ್ಷಿಪಣಿ ವ್ಯವಸ್ಥೆಯ ಮಾರಾಟವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಪ್ರತೀಕ ವಾಗಿದೆ ಎಂದು ಐಎಐ ಹೇಳಿದೆ. *ಇಸ್ರೇಲ್‌ನ ಐಎಐ, ಭಾರತದ ಡಿಆರ್‌ಡಿಒ ಮತ್ತು ಇತರೆ ಕಂಪನಿಗಳಿಂದ ಜಂಟಿ ಅಭಿವೃದ್ಧಿ,* *ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಸ್ರಾನಿಕ್ಸ್, ಒಪ್ಪಂದವನ್ನು ಕಾರ್ಯರೂಪಕ್ಕೆ ತರಲಿದೆ* *ವಾಯು, ಭೂಮೇಲ್ಮೈ ಹಾಗೂ ಸಮುದ್ರದ ಮೂಲಕ ಎದುರಾಗುವ ಬೆದರಿಕೆಗಳನ್ನು ನಿಭಾಯಿಸುವ ಸಾಮರ್ಥ್ಯ ಇದಕ್ಕಿದೆ* ಅತ್ಯಾಧುನಿಕ ಡಿಜಿಟಲ್ ರೆಡಾರ, ಲಾಂಚರ್‌ಗಳು, ಕಮಾಂಡ್ ಮತ್ತು ಕಂಟ್ರೋಲಿಂಗ್ ವ್ಯವಸ್ಥೆ, ಡಾಟಾ ಲಿಂಕ್ ಮತ್ತು ವಿಶಾಲ ವ್ಯಾಪ್ತಿಯ ಸಂಪರ್ಕ ವ್ಯವಸ್ಥೆ ಹೊಂದಿದೆ *ಯಾವುದೇ ವಾತಾವರಣದಲ್ಲಿ ಹಗಲು, ರಾತ್ರಿ ಎನ್ನದೇ ಏಕಕಾಲದಲ್ಲಿ ವಿವಿಧ ಕಡೆ ನಿಗಾ ವಹಿಸುವ ಸಾಮರ್ಥ್ಯವಿದೆ*

**ಜ್ಞಾನ ಕಾರಂಜಿ**::: ಪ್ರಚಲಿತ ವಿದ್ಯಮಾನಗಳು (23 ಅಕ್ಟೋಬರ್ 2018

>> ಪರಿಸರ ಸಚಿವಾಲಯದಿಂದ 'ಹರಿತ್ ದೀಪಾವಳಿ, ಸ್ವಸ್ಥ್  ದೀಪಾವಳಿ'  ಪ್ರಾರಂಭ ಪರಿಸರ ಸಚಿವಾಲಯ ಹರಿತ್ ದೀಪಾವಳಿ, ಸ್ವಸ್ಥ ದೀಪಾವಳಿ ಅಭಿಯಾನವನ್ನು ಪ್ರಾರಂಭಿಸಿದೆ. 2017-18ರಲ್ಲಿ ಈ ಕಾರ್ಯಾಚರಣೆಯನ್ನು ಆರಂಭಿಸಲಾಯಿತು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಶಾಲಾ ಮಕ್ಕಳು ಭಾಗವಹಿಸಿದರು ಮತ್ತು ಪಟಾಕಿ ಹಾರಿಸದಂತೆ ಪ್ರತಿಜ್ಞೆಯನ್ನು ತೆಗೆದುಕೊಂಡರು. ಹರಿತ್ ದೀಪಾವಳಿ-ಸ್ವಸ್ಥ ದೀಪಾವಳಿ ಅಭಿಯಾನವು ಈಗ "ಗ್ರೀನ್ ಗುಡ್ ಡೀಡ್" ಚಳವಳಿಯೊಂದಿಗೆ ವಿಲೀನಗೊಂಡಿತು. ಇದು ಪರಿಸರದ ಸಂರಕ್ಷಣೆ ಮತ್ತು ಸಂರಕ್ಷಣೆಗಾಗಿ ಸಾಮಾಜಿಕ ಕ್ರೋಢೀಕರಣವಾಗಿ ಪ್ರಾರಂಭಿಸಲ್ಪಟ್ಟಿದೆ. >> 27 ನೇ IAEA ಫ್ಯೂಷನ್ ಇಂಧನ ಸಮ್ಮೇಳನ ಗುಜರಾತ್ನ ಗಾಂಧಿನಗರದಲ್ಲಿ ಪ್ರಾರಂಭ 27 ನೇ IAEA ಫ್ಯೂಷನ್ ಎನರ್ಜಿ ಕಾನ್ಫರೆನ್ಸ್ (Fusion Energy Conference (FEC 2018) ) ಗುಜರಾತ್ನ ಗಾಂಧಿನಗರದಲ್ಲಿ ಆರಂಭವಾಗಿದೆ. FEC 2018 ಪ್ರಮುಖ ಭೌತಶಾಸ್ತ್ರ ಮತ್ತು ತಂತ್ರಜ್ಞಾನ ಸಮಸ್ಯೆಗಳ ಚರ್ಚೆಗೆ ಮತ್ತು ಪರಮಾಣುವಿನ ಶಕ್ತಿಯ ಬಳಕೆಗೆ ನವೀನ ಪರಿಕಲ್ಪನೆಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (International Atomic Energy Agency (IAEA) ) ಯು ಫ್ಯೂಷನ್ ಎನರ್ಜಿ ಸಮ್ಮೇಳನಗಳ ಸರಣಿಯ ಸಮ್ಮಿಳನದ ಮೂಲಕ ಪರಮಾಣು ಸಂಶೋಧನೆ ಮತ್ತು ಅಭಿವೃದ್ಧಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಫಲಿತಾಂಶಗಳ ವಿನಿಮಯವನ್ನು...

**ಜ್ಞಾನ ಕಾರಂಜಿ**::: ಪ್ರಚಲಿತ ವಿದ್ಯಮಾನಗಳು (24 ಅಕ್ಟೋಬರ್ 2018

>> ವಿಶ್ವಸಂಸ್ಥೆಯ ದಿನ: 24 ಅಕ್ಟೋಬರ್ (United Nations Day) ವಿಶ್ವಸಂಸ್ಥೆಯ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಯುಎನ್ 1945 ರಲ್ಲಿ ಅಸ್ಥಿತ್ವಕ್ಕೆ ಬಂದ ವಾರ್ಷಿಕೋತ್ಸವವನ್ನು ಈ ದಿನವು ಸೂಚಿಸುತ್ತದೆ. ಭದ್ರತಾ ಕೌನ್ಸಿಲ್ನ ಐದು ಶಾಶ್ವತ ಸದಸ್ಯರ ಸಂಸ್ಥಾಪಕ ದಾಖಲೆಯ ಅನುಮೋದನೆಯೊಂದಿಗೆ ವಿಶ್ವಸಂಸ್ಥೆಯು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಅಕ್ಟೋಬರ್ 24 ರಂದು 1948 ರಿಂದ ವಿಶ್ವಸಂಸ್ಥೆಯ ದಿನವಾಗಿ ಆಚರಿಸಲಾಗುತ್ತದೆ. 1971 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸದಸ್ಯ ರಾಷ್ಟ್ರಗಳಲ್ಲಿ  ಸಾರ್ವಜನಿಕ ರಜಾ ದಿನವಾಗಿ ಆಚರಿಸಲು ಶಿಫಾರಸು ಮಾಡಿದೆ. >> ವಿಶ್ವ ಅಭಿವೃದ್ಧಿ ಮಾಹಿತಿ ದಿನ: 24 ಅಕ್ಟೋಬರ್ (World Development Information Day ) 1972 ರಲ್ಲಿ ಜನರಲ್ ಅಸೆಂಬ್ಲಿ, ವಿಶ್ವ ಅಭಿವೃದ್ಧಿ ಮಾಹಿತಿ ದಿನ ಅನ್ನು ಅಭಿವೃದ್ಧಿ ಸಂಭಂದಿತ ಸಮಸ್ಯೆಗಳಿಗೆ ವಿಶ್ವದ ಗಮನವನ್ನು ಸೆಳೆಯಲು ಮತ್ತು ಅವುಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಗುರುತಿಸಲು ಸ್ಥಾಪಿಸಿತು. ದಿನಾಂಕವು ಯುನೈಟೆಡ್ ನೇಷನ್ಸ್ ಡೇ, ಅಕ್ಟೋಬರ್ 24 ರಂದು ಏಕಕಾಲಿಕವಾಗಿ ಇರಬೇಕೆಂದು ನಿರ್ಧರಿಸಿತು, >> ನ್ಯೂಯಾರ್ಕ್ನಲ್ಲಿ 2018ರ UN DAY concert 2018 ರ ಯುನೈಟೆಡ್ ನೇಷನ್ಸ್ ಡೇ ಕನ್ಸರ್ಟ್ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಸಾರ್...

**ಜ್ಞಾನ ಕಾರಂಜಿ**::: 🌷 *_ಕಾಯ್ದೆಗಳ ಜಾರಿ_*🌷

💥ಪ್ರಥಮ ಅರಣ್ಯ ನೀತಿ 1894 💥ಕಾರ್ಖಾನೆಗಳ ಕಾಯ್ದೆ 1948 💥ಪ್ರಥಮ ವನ ಮಹೋತ್ಸವ 1950 💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954 💥ಅಂತರಾಜ್ಯ ಜಲ ಕಾಯ್ದೆ. 1956 💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972 💥ಸಿಂಹ ಯೋಜನೆ. 1972 💥ಹುಲಿ ಯೋಜನೆ. 1973 💥ಮೆಾಸಳೆ ಯೋಜನೆ. 1974 💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974 💥ಅರಣ್ಯ ಸಂರಕ್ಷಣಾ ಕಾಯ್ದೆ. 1980 💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980 💥ಪರಿಸರ ಸಂರಕ್ಷಣಾ ಕಾಯ್ದೆ. 1986 💥ಘೆಂಡಾಮ್ರಗ ಯೋಜನೆ. 1987 💥ಭಾರತದ ಹೊಸ ಅರಣ್ಯ ನೀತಿ. 1988 💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989 💥ಕರಾವಳಿ ಸಂರಕ್ಷಣಾ ಯೋಜನೆ. 1989 💥ಆನೆ ಯೋಜನೆ 1992 💥ಹಿಮ ಚಿರತೆ ಯೋಜನೆ. 2009

**ಜ್ಞಾನ ಕಾರಂಜಿ**::: ಉಗ್ರ ಶೋಷಣೆ ವಿರುದ್ಧದ ದನಿಗೆ ಶಾಂತಿ ನೊಬೆಲ್,

ಪರಮೇಶ್ವರಯ್ಯ ಸೊಪ್ಪಿಮಠ ಐಸಿಸ್ ಉಗ್ರರ ಉಪಟಳದಿಂದ ನಲುಗಿರುವವರು ಯಾಜಿದಿ ಹೆಣ್ಣುಮಕ್ಕಳು. ಯಾಜಿದಿ ಹುಡುಗಿಯರನ್ನು ಇಸ್ಲಾಮಿಕ್ ಉಗ್ರರ ವೇಶ್ಯಾವಾಟಿಕೆಗೆ ತಳ್ಳುವ ವ್ಯವಸ್ಥಿತ ಜಾಲವೇ ಇರಾಕ್​ನಲ್ಲಿದೆ. ಇಂಥ ಜಾಲದ ಬಲಿಪಶುವಾದವರು ನಾದಿಯಾ ಮುರಾದ್. ಶೋಷಣೆಗೆ ಬಲಿಯಾಗಿ ಬದುಕೇ ಮುಗಿದುಹೋಯಿತು ಎನ್ನುವಂತಿದ್ದ ನಾದಿಯಾ ಇಂದು ಶಾಂತಿ ನೊಬೆಲ್ ಪುರಸ್ಕೃತರು. ಇಡೀ ವಿಶ್ವವೇ ಇವರ ಛಲಕ್ಕೆ ತಲೆಬಾಗಿದೆ. ಇರಾಕ್​ನ ವಿಶೇಷವಾದ ಪಂಥ ಯಾಜಿದಿ. ಇವರನ್ನು ಐಸಿಸ್ ಸದಸ್ಯರು ಧರ್ಮಹೀನರು ಮತ್ತು ಗುಲಾಮಗಿರಿ ಅಥವಾ ಸಾವಿಗೆ ಅರ್ಹರು ಎಂದು ಪರಿಗಣಿಸುತ್ತಾರೆ! ಇಂತಹ ಧಾರ್ವಿುಕ ಅಲ್ಪಸಂಖ್ಯಾತರ ಯಾಜಿದಿ ಪಂಥದಲ್ಲಿ ಜನಿಸಿದವರು ನಾದಿಯಾ. ಇರಾಕ್​ನ ಕೊಚೊ ಎಂಬ ಹಳ್ಳಿಯಲ್ಲಿದ್ದ ಇವರ ಕುಟುಂಬ ಕೃಷಿ ಅವಲಂಬಿಸಿ ಬದುಕು ಸಾಗಿಸುತ್ತಿತ್ತು. ಮೆದುಮಾತಿನ, ನಾಚಿಕೆ ಸ್ವಭಾವದ ನಾದಿಯಾ ಶಾಲಾ ಶಿಕ್ಷಕಿಯಾಗಬೇಕು ಅಥವಾ ಬ್ಯೂಟಿ ಪಾರ್ಲರ್ ತೆರೆಯಬೇಕು ಎನ್ನುವ ಕನಸು ಹೊಂದಿದ್ದಳು. ಆದರೆ, ಬದುಕಿನ ಅನುಭವಗಳು ಈಕೆಯನ್ನು ಹೋರಾಟಗಾರ್ತಿಯನ್ನಾಗಿ ರೂಪಿಸಿವೆ. ಶೋಷಣೆಯ ಬಲಿಪಶು 2014ರ ಆಗಸ್ಟ್ 3ರಂದು ನಾದಿಯಾ ಕುಟುಂಬ ವಾಸವಿದ್ದ ನಗರದ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದರು. ಸುಮಾರು 6500ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ ಐದು ಸಾವಿರ ಜನರನ್ನು ಕೊಂದು ಹಾಕಿದರು. ಅಪಹರಿಸಲ್ಪಟ್ಟ ಯಾಜಿದಿ ಮಹಿಳೆಯರಲ್ಲಿ 21ರ ಹರೆಯದ ಮುರಾದ್ ಕೂಡ ಒಬ್ಬಳು. ಇವರನ್ನ...

**ಜ್ಞಾನ ಕಾರಂಜಿ**::: ದೇಶದ ಮೊದಲ ಇಂಜಿನ್​ಲೆಸ್ ರೈಲು,

ಮೇಡ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿರುವ ದೇಶದ ಮೊದಲ ಇಂಜಿನ್​ರಹಿತ ರೈಲು (ಮೆಟ್ರೋ ಮಾದರಿ) ‘ಟ್ರೇನ್ 18’ ಸಿದ್ಧವಾಗಿದ್ದು, ಈ ಮಾಸಾಂತ್ಯಕ್ಕೆ ಪರೀಕ್ಷಾರ್ಥ ಸಂಚಾರ ನಡೆಸಲಿದೆ. ದೇಶದಲ್ಲಿ ಸಂಚರಿಸುತ್ತಿರುವ ಎಲ್ಲ ಶತಾಬ್ದಿ ರೈಲುಗಳನ್ನು ಟ್ರೇನ್ 18 ರೈಲಾಗಿ ಬದಲಾಯಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದ್ದು, ಅದರಂತೆ ಬೆಂಗಳೂರು-ಚೆನ್ನೈ ಮಾರ್ಗದ ಶತಾಬ್ದಿ ರೈಲು ಕೂಡ ಇಂಜಿನ್​ರಹಿತವಾಗಿ ಕಾರ್ಯಾಚರಣೆಗೆ ಇಳಿಯಲಿದೆ. 3 ದಶಕಗಳ ಕಾಲ ಕಾರ್ಯ ನಿರ್ವಹಿಸಿರುವ ಶತಾಬ್ದಿ ರೈಲುಗಳ ಬದಲಾಗಿ ಅತ್ಯಾಧುನಿಕ, ಆಕರ್ಷಕ ಟ್ರೇನ್ 18 ಹಳಿಗಿಳಿಸುವುದರ ಕುರಿತು ಭಾರತೀಯ ರೈಲ್ವೆ ಇಲಾಖೆ ಈ ಹಿಂದೆ ಘೋಷಣೆ ಮಾಡಿತ್ತು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೊದಲ ಟ್ರೇನ್ 18 ಸಿದ್ಧವಾಗಿದ್ದು, ಮಾಸಾಂತ್ಯಕ್ಕೆ ಇದರ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ. ಜನವರಿಯಲ್ಲಿ ದೆಹಲಿ-ಭೋಪಾಲ್ ಮಾರ್ಗದ ನಡುವೆ ಈ ರೈಲು ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ರೈಲುಗಳೂ ಇಂಜಿನ್​ಲೆಸ್: ಮುಂದಿನ ದಿನಗಳಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು-ಚೆನ್ನೈ ಶತಾಬ್ದಿ, ದಕ್ಷಿಣ ರೈಲ್ವೆಯ ಮೈಸೂರು-ಚೆನ್ನೈ ಶತಾಬ್ದಿ ಬದಲಾಗಿ ಟ್ರೇನ್ 18 ಹಳಿಗಿಳಿಯಲಿದೆ ಎಂದು ನೈಋತ್ಯ ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಈ ರೈಲು ಚಾಲನೆಗೆ ಲೋಕೋಪೈಲೆಟ್​ಗಳಿಗೆ ಪ್ರತ್ಯೇಕ ತರಬೇತಿ ಅಗತ್ಯವಿದ್ದು, ರೈಲು ವಾಣಿಜ್ಯ ಸಂಚಾ...

**ಜ್ಞಾನ ಕಾರಂಜಿ**::: 2020ರ ಏಪ್ರಿಲ್​ನಿಂದ ಬಿಎಸ್-6 ವಾಹನ ಮಾರಾಟ ಕಡ್ಡಾಯ: ಸುಪ್ರೀಂಕೋರ್ಟ್,

ರಾಷ್ಟ್ರದಲ್ಲಿ ಭಾರತ್ ಸ್ಟೇಜ್ 6 (ಬಿಎಸ್-6) ವಾಹನಗಳ ಮಾರಾಟವನ್ನು 2020ರ ಏಪ್ರಿಲ್ 1 ರಿಂದ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಜಸ್ಟೀಸ್​ ಮದನ್​ ಬಿ. ಲೋಕೂರ್​ ಅವರ ನೇತೃತ್ವದ ತ್ರಿಸದಸ್ಯ ಪೀಠ ಬಿಎಸ್​-4 ವಾಹನಗಳ ಮಾರಾಟಕ್ಕೆ 2020ರ ಮಾರ್ಚ್​ 31ರ ನಂತರ ಹೆಚ್ಚುವರಿ ಸಮಯಾವಕಾಶ ನೀಡಿ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ನ್ಯಾಯ ಪೀಠ ಸ್ವಚ್ಛ ಇಂಧನದ ವಾಹನಗಳ ಮಾರಾಟದತ್ತ ಸಾಗಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದು, ಬಿಎಸ್​-4 ವಾಹನಗಳ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಮೋಟಾರು ವಾಹನಗಳಿಂದಾಗುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರತ್ ಸ್ಟೇಜ್ ಹೊಗೆ ಉಗುಳುವಿಕೆ ಮಟ್ಟವನ್ನು ನಿಗದಿಪಡಿಸಿದೆ. ಸದ್ಯ ಬಿಎಸ್-4 ನೀತಿ ಜಾರಿಯಲ್ಲಿದೆ. ಬಿಎಸ್-5 ಬದಲು ನೇರವಾಗಿ ಬಿಎಸ್-6 ಗುಣಮಟ್ಟದ ಇಂಧನ ಮಾರಾಟ ವ್ಯವಸ್ಥೆ 2020ರ ವೇಳೆಗೆ ಪರಿಚಯಿಸುವ ಕುರಿತು ಕೇಂದ್ರ ಸರ್ಕಾರ 2016ರಲ್ಲಿ ನಿರ್ಧಾರ ಕೈಗೊಂಡಿತ್ತು. (ಏಜೆನ್ಸೀಸ್​)

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ,

ಪ್ರತಿಷ್ಠಿತ ಸಿಯೋಲ್ ಶಾಂತಿ ಪುರಸ್ಕಾರ 2018ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 1.47 ಕೋಟಿ ನಗದು ಪುರಸ್ಕಾರ ಹಾಗೂ ಪಾರಿತೋಷಕವನ್ನು ಒಳಗೊಂಡಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆ ಮಾಡುವ ‘ಮೋದಿನಾಮಿಕ್ಸ್’ ನೀತಿ ಜಾರಿಗೊಳಿಸಿದ್ದಕ್ಕಾಗಿ ಭಾರತದ ಪ್ರಧಾನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾಗಿ ಕ್ವಾನ್ ಇ ಹೈಯಾಕ್ ಅಧ್ಯಕ್ಷತೆಯ ಸಿಯೋಲ್ ಶಾಂತಿ ಪುರಸ್ಕಾರ ಸಾಂಸ್ಕೃತಿಕ ಪ್ರತಿಷ್ಠಾನ ಹೇಳಿದೆ. ವಿವಿಧ ರಾಷ್ಟ್ರಗಳ ಜತೆ ಆರ್ಥಿಕ ಸಹಕಾರ, ಮಾನವೀಯ ಹಿತಾಸಕ್ತಿ ಸಂರಕ್ಷಣೆ ಮತ್ತು ವಿಶ್ವಶಾಂತಿಗೆ ಉತ್ತೇಜನ ನೀಡಿರುವುದು ಮೋದಿಯವರ ಹಿರಿಯ ಸಾಧನೆ. ಅಲ್ಲದೆ, ರಾಜತಾಂತ್ರಿಕ ನೀತಿಗಳ ಮೂಲಕ ಅಂತಾರಾಷ್ಟ್ರೀಯ ಸಹಕಾರ ಏರ್ಪಡಿಸಿಕೊಂಡು ಏಷ್ಯಾ-ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿರುವ ಅವರು ಈ ಪ್ರಶಸ್ತಿಗೆ ಎಲ್ಲ ರೀತಿಯಲ್ಲೂ ಅರ್ಹರು ಎಂದು ಪ್ರತಿಷ್ಠಾನ ತಿಳಿಸಿದೆ. ನೋಟು ಅಮಾನ್ಯೀಕರಣಕ್ಕೆ ಮೆಚ್ಚುಗೆ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಜತೆಗೆ ಸರ್ಕಾರಕ್ಕೆ ಭ್ರಷ್ಟಾಚಾರದ ಕಳಂಕ ಅಂಟಿಕೊಳ್ಳದಂತೆ ಪ್ರಧಾನಿ ಮೋದಿ ನೋಡಿಕೊಂಡಿದ್ದಾರೆ. ಇದಕ್ಕಾಗಿ ಅವರು ನೋಟು ಅಮಾನ್ಯೀಕರಣ ಸೇರಿ ಹಲವು ಭ್ರಷ್ಟಾಚಾರ ನಿಗ್ರಹ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪ್ರತಿಷ್ಠಾನ ಮೆಚ್ಚುಗೆ ವ್ಯಕ್ತಪಡಿಸಿದೆ. ಇತ್ತೀಚೆಗೆ ಮೋದಿ ಅವರಿಗೆ ವಿಶ್ವಸಂಸ್ಥೆಯು ‘ಚಾಂಪಿಯನ್ಸ್ ಆಫ್...

**ಜ್ಞಾನ ಕಾರಂಜಿ**::: ಮೈ ನಹೀ ಹಮ್ ವೆಬ್​ಗೆ ಚಾಲನೆ,

ಐಟಿ ಉದ್ಯೋಗಿಗಳು ಮತ್ತು ಕಂಪನಿಗಳನ್ನು ಸಮಾಜಸೇವೆಯತ್ತ ಸೆಳೆಯಲು ಅನುವಾಗುವಂತೆ ಆರಂಭಿಸಲಾಗಿರುವ ಮೈ ನಹೀ ಹಮ್ (ನಾನು ಅಲ್ಲ ನಾವು) ಎಂಬ ಆಪ್ ಮತ್ತು ವೆಬ್​ಸೈಟ್​ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದರು. ಸಮಾಜದ ದುರ್ಬಲ ವರ್ಗದವರ ಏಳಿಗೆಗೆ ಶ್ರಮಿಸಲು ವಿಶೇಷವಾಗಿ ಅವರಿಗೆ ಅತ್ಯಾಧುನಿಕ ತಂತ್ರಜ್ಞಾನದ ಅನುಕೂಲಗಳನ್ನು ತಲುಪಿಸಲು ಐಟಿ ಉದ್ಯೋಗಿಗಳು ಮತ್ತು ಕಂಪನಿಗಳನ್ನು ಒಂದೇ ವೇದಿಕೆಗೆ ಕರೆತರುವುದು ಇದರ ಉದ್ದೇಶ. ಜತೆಗೆ ಸಮಾಜದ ಏಳಿಗೆಗೆ ಕೆಲಸ ಮಾಡುವ ಬಯಕೆ ಹೊಂದಿರುವವರಿಗೆ ಅಗತ್ಯ ಉತ್ತೇಜನ ದೊರೆಯುವಂತೆ ಇದು ಮಾಡಲಿದೆ. ನಂತರ ಮೋದಿ ನಡೆಸಿದ ವಿಡಿಯೋ ಸಂವಾದದಲ್ಲಿ ರಾಷ್ಟ್ರದಾದ್ಯಂತ ಅಂದಾಜು 100ಕ್ಕೂ ಹೆಚ್ಚು ತಾಣಗಳಲ್ಲಿ ಐಟಿ ವೃತ್ತಿಪರರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತದ ಯುವಜನರು ತಂತ್ರಜ್ಞಾನದ ಬಲವನ್ನು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳುವ ಜತೆಗೆ, ಇತರರ ಕ್ಷೇಮಾಭಿವೃದ್ಧಿಗೂ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು. ಸುಧಾಮೂರ್ತಿಗೆ ಶ್ಲಾಘನೆ ಇನ್ಪೋಸಿಸ್ ಫೌಂಡೇಷನ್ನಿನಿಂದ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯ ಹಾಗೂ ತಮ್ಮ ಲೇಖನಿಯಿಂದ ಅನೇಕರಿಗೆ ಪ್ರೇರಣೆ ನೀಡುತ್ತಿದ್ದೀರಿ ಎಂದು ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ಮೋದಿ ಶ್ಲಾಘಿಸಿದರು. ವಿಡಿಯೋ ಸಂವಾದದಲ್ಲಿ ಸುಧಾಮೂರ್ತಿ ಭಾಗವಹಿಸಿ ಸಂಸ್ಥೆಯ ಮೂಲಕ ಕೈಗೊಳ್ಳುತ್ತಿರುವ ಕಾರ್ಯವನ್ನು ವಿವರಿಸಿದರು...

**ಜ್ಞಾನ ಕಾರಂಜಿ**::: ಇನ್ನು ಪರಿಸರಸ್ನೇಹಿ ಪಟಾಕಿಗಳ ಕಾಲ,

ಸುಪ್ರೀಂ ಕೋರ್ಟ್ ಒಂದಷ್ಟು ಚೌಕಟ್ಟು ವಿಧಿಸಿ, ‘ಹಸಿರು ಪಟಾಕಿ’ಗಳನ್ನು ಸಿಡಿಸಲು ಅನುಮತಿ ನೀಡಿದೆ. ಈ ಬೆಳವಣಿಗೆ ಮಾಲಿನ್ಯ ತಗ್ಗಿಸಲು, ಪರಿಸರವನ್ನು ನಿರ್ಮಲವಾಗಿಸಲು ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ. ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪನ ಬದಲಿಗೆ ಈಗ ಮಣ್ಣಿನ ಗಣಪನೇ ಚೌತಿಯ ಸಂಭ್ರಮ ಹೆಚ್ಚಿಸುತ್ತಿದ್ದಾನೆ. ಹಾಗೇ, ವಿಷಕಾರಿ ಅನಿಲಗಳನ್ನು ಹೊರ ಹಾಕುವ ಪಟಾಕಿಗಳ ಅಬ್ಬರ ಕಡಿಮೆಯಾಗಿ ಮುಂಬರುವ ವರ್ಷಗಳಲ್ಲಿ ‘ಹಸಿರು ಪಟಾಕಿ’ಗಳೇ ಸದ್ದು ಮಾಡಲಿವೆ. ಇದರ ವೈಜ್ಞಾನಿಕ ಪರೀಕ್ಷೆಯೂ ಫಲಪ್ರದವಾಗಿದ್ದು, ಪಟಾಕಿ ತಯಾರಕರು ಕೂಡ ಒಲವು ತೋರುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಏನಿದು ಹಸಿರು ಪಟಾಕಿ?: ಇವು ಕಡಿಮೆ ಮಾಲಿನ್ಯಕಾರಕಗಳು. ಮರುಬಳಕೆ ಕಾಗದ, ಮಿತಪ್ರಮಾಣದ ರಾಸಾಯನಿಕ ಪದಾರ್ಥದ ಬಳಕೆ, ಕಡಿಮೆ ಶಬ್ದ-ಹೊಗೆಯನ್ನು ಹೊಮ್ಮಿಸುವ ಇವನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಇವು ಮನುಷ್ಯನ ಸ್ವಾಸ್ಥ್ಯ ಮತ್ತು ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುತ್ತವೆ. ಹಲವು ಸಂಸ್ಥೆಗಳ ಪ್ರಯೋಗ: ‘ಹಸಿರು ಪಟಾಕಿ’ಗಳ ತಯಾರಿಕೆಯ ಸ್ಥಿತಿಗತಿ-ಸಾಧ್ಯತೆಗಳನ್ನು ಪರಾಮಶಿಸಿಯೇ ಸುಪ್ರೀಂ ಕೋರ್ಟ್ ಇಂಥ ಪಟಾಕಿಗಳನ್ನು ಸಿಡಿಸಲು ಸಮ್ಮತಿ ನೀಡಿದೆ, ಇವು ವಾಯುಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ನೆರವಾಗಲಿವೆ ಎಂಬ ವಿಶ್ವಾಸ ಸಿಎಸ್​ಐಆರ್ ವಿಜ್ಞಾನಿಗಳದ್ದು. ಸಿಎಸ್​ಐಆರ್ ಪ್ರಯೋಗಾಲಯಗಳು, ಸೆಂಟ್...

**ಜ್ಞಾನ ಕಾರಂಜಿ**::: ಬಡ್ತಿ ಮೀಸಲು ಕಾಯ್ದೆಗೆ ತಕರಾರು,

ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಹಿತರಕ್ಷಣೆ ಹೆಸರಲ್ಲಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ನ್ಯಾಯಾಂಗದ ಅಧಿಕಾರವನ್ನು ಕಿತ್ತುಕೊಂಡಿದೆ. ಎಂ. ನಾಗರಾಜ್ ಪ್ರಕರಣಕ್ಕೆ ಸಂಬಂದಿಸಿ ಸೆ.26ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ ತತ್ವ ಅಳವಡಿಸ ಬೇಕು ಎಂದು ತೀರ್ಪು ನೀಡಿದ್ದು, ಈ ಪ್ರಕರಣ ವನ್ನು ಆ ತೀರ್ಪಿನ ವ್ಯಾಪ್ತಿಯಲ್ಲೇ ನೋಡಬೇಕು ಎಂದು ಅರ್ಜಿದಾರ ಬಿ.ಕೆ. ಪವಿತ್ರ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದ್ದಾರೆ. ಬಡ್ತಿ ಮೀಸಲಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಜ್ಯೇಷ್ಠತೆ ವಿಸ್ತರಿಸುವ ಕುರಿತ ಸರ್ಕಾರದ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಕೆಲ ವಿಚಾರ ಗಳನ್ನು ಮುಂದಿಟ್ಟ ವಕೀಲ ಧವನ್, ಬಡ್ತಿ ಮೀಸಲಾತಿ ನೀಡುವಾಗ ಎಸ್ಸಿ-ಎಸ್ಟಿ ಸಮುದಾಯದ ನೌಕರನ ಆಡಳಿತ ದಕ್ಷತೆ, ಹಿಂದುಳಿದಿರುವಿಕೆ, ಸಮುದಾಯಗಳಿಗೆ ಸಿಕ್ಕಿರುವ ಪ್ರಾತಿನಿಧ್ಯಗಳಂತಹ ಮಾನದಂಡಗಳನ್ನು ಅನುಸರಿಸಬೇಕು. ಇದನ್ನು 2006ರ ಎಂ. ನಾಗರಾಜ್ ತೀರ್ಪಿನಲ್ಲೂ ಹೇಳ ಲಾಗಿತ್ತು. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ತೀರ್ಪಿನಲ್ಲೂ ಪುನರುಚ್ಚರಿಸಲಾಗಿದ್ದು, ಕೆನೆಪದರ ತತ್ವ ಅಳವಡಿಸಿಕೊಳ್ಳುವ ಬಗ್ಗೆ ಒತ್ತಿ ಹೇಳಲಾಗಿದೆ ಎಂದು ನ್ಯಾಯಮೂರ್ತಿ ಉದಯ್ ಲಲಿತ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ವಿಭಾಗೀಯ ಪೀಠದ ಗಮನಸೆಳೆದರು. ಈ ಮೊದಲು ನೂತನ ಕಾಯ್ದೆ ಜಾರಿಗೆ ಕ್ರಮ ಕ...

**ಜ್ಞಾನ ಕಾರಂಜಿ**::: ರುಚಿಭರಿತ ಧಾರವಾಡ ಪೇಡಕ್ಕೆ ಜಿಐ ನೋಂದಣಿ,

ಧಾರವಾಡ ಪೇಡಾ ಇಷ್ಟಪಡದವರು ಬಹುಶಃ ತುಂಬ ಕಡಿಮೆ ಜನ. ರುಚಿಕರವಾದ ಧಾರವಾಡ ಪೇಡ ಈ ಬಾರಿ ಜಿಯೋಗ್ರಾಫಿಕಲ್​ ಇಂಡಿಕೇಶನ್ಸ್ (ಜಿಐ) ದಡಿ ನೋಂದಣಿಯಾಗಿದೆ. ಹಾಗೇ ಬೆಂಗಳೂರಿನ ನೀಲಿ ದ್ರಾಕ್ಷಿ ಕೂಡ ಈ ಬಾರಿಯ ಜಿಐ ಟ್ಯಾಗ್​ ಪಡೆದುಕೊಂಡಿದೆ. ಈಗಾಗಲೇ ಮೈಸೂರು ರೇಷ್ಮೆ, ಇಳಕಲ್​ ಸೀರೆ, ನಾಗಪುರ ಕಿತ್ತಳೆ ಸೇರಿ ಒಟ್ಟೂ ಭಾರತದ 326 ಉತ್ಪನ್ನಗಳನ್ನು ಈ ಭೌಗೋಳಿಕ ಸೂಚ್ಯಂಕದಡಿ ನೋಂದಣಿ ಮಾಡಲಾಗಿದೆ. ಧಾರವಾಡ ಪೇಡ ಉಳಿದೆಲ್ಲ ಹಾಲು ಉತ್ಪನ್ನ ಸಿಹಿತಿಂಡಿಗಳಿಗಿಂತ ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ. ಇದನ್ನು ಕೈಯಿಂದಲೇ ವಿಶಿಷ್ಟವಾಗಿ ತಯಾರಿಸುತ್ತಾರೆ. ಹಾಗೇ ಯಾವುದೇ ಕೃತಕ ಸುವಾಸನೆ ಭರಿತ ಪದಾರ್ಥಗಳನ್ನೂ ಹಾಕುವುದಿಲ್ಲ. ಇಂಥ ಧಾರವಾಡ ಪೇಡ ಜಿಯೋಗ್ರಫಿಕಲ್​ ಇಂಡಿಕೇಶನ್​ನಡಿ ನೋಂದಣಿಯಾಗಿದ್ದು ಈ ದೀಪಾವಳಿಯನ್ನು ಪೇಡದೊಂದಿಗೆ ಆಚರಿಸಿ ಎಂದು ಸಿಐಪಿಎಎಂ ಟ್ವೀಟ್​ ಮಾಡಿದೆ. Celebrate  #Diwali2018,  with Dharwad Pedha, a  #GeographicalIndication,  from Karnataka that has a longer shelf life than other milk made sweets. It's known for its distinct method of hand preparation wherein no flavouring agents are used.  #GiftaGI,   #GI,   #happyDiwali,   #CreativeIndia,   pic.twitter.com/MwvPtvGFd...

**ಜ್ಞಾನ ಕಾರಂಜಿ**::: ಕಾರವಾರಕ್ಕೆ ವಿಕ್ರಮಾದಿತ್ಯ ವಾಪಸ್,

ಭಾರತೀಯ ನೌಕಾಪಡೆಯ ಏಕೈಕ ಯುದ್ಧ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಎರಡನೇ ಬಾರಿ ರಿಪೇರಿ ಕಾರ್ಯ ಮುಗಿಸಿ ವಾರದೊಳಗೆ ಕಾರವಾರ ಬಂದರಿಗೆ ವಾಪಸಾಗುತ್ತಿದೆ. ಕೊಚ್ಚಿ ಶಿಪ್​ಯಾರ್ಡ್​ನಿಂದ ನೌಕೆ ಹೊರಟಿದ್ದು, ಅ.30ರೊಳಗೆ ತನ್ನ ಕೇಂದ್ರ ಸ್ಥಾನವಾದ ಕಾರವಾರ ಕದಂಬ ನೌಕಾನೆಲೆ ತಲುಪುವ ಸಾಧ್ಯತೆ ಇದೆ. ನವೆಂಬರ್ ಮೊದಲ ವಾರದಲ್ಲಿ ವಿಕ್ರಮಾದಿತ್ಯ ನೌಕೆ ಗೋವಾದಲ್ಲಿ ನೌಕಾ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದೆ. ಮೇ 25 ರಂದು ಕೊಚ್ಚಿ ಶಿಪ್ ಯಾರ್ಡ್​ಗೆ ತೆರಳಿದ್ದ ವಿಕ್ರಮಾದಿತ್ಯ ನೌಕೆಯ ಯುದ್ಧ ವಿಮಾನಗಳು ಇಳಿಯುವ ರನ್​ವೇ ಸೇರಿ ಹೆಚ್ಚಿನ ಭಾಗಗಳಿಗೆ ಬಣ್ಣ ಬಳಿಯಲಾಗಿದೆ. ಇಂಜಿನ್​ನ 25 ಶಾಫ್ಟ್​ಗಳಲ್ಲಿ 16ನ್ನು ಬದಲಿಸಲಾಗಿದೆ. ಇನ್ನೂ ಹಲವು ನಿರ್ವಹಣಾ ಕೆಲಸಗಳನ್ನು ಮಾಡಲಾಗಿದ್ದು, ಅದರ ವೆಚ್ಚ 705 ಕೋಟಿ ರೂ. ಎಂದು ಆಂಗ್ಲ ಮಾಧ್ಯಮಗಳು ಕೊಚ್ಚಿಯಿಂದ ವರದಿ ಮಾಡಿವೆ. ಎರಡನೇ ನಿರ್ವಹಣೆ: ರಷ್ಯಾ ಬಳಕೆ ಮಾಡಿದ್ದ ಐಎನ್​ಎಸ್ ಗೋರ್ಶ್​ಕೋವ್ ಎಂಬ ನೌಕೆಯನ್ನು 2.35 ಶತಕೋಟಿ ಡಾಲರ್​ಗೆ ಭಾರತ ಖರೀದಿಸಿತ್ತು. 2013ರಲ್ಲಿ ಭಾರತಕ್ಕೆ ಹಸ್ತಾಂತರಗೊಂಡಿದ್ದ ಯುದ್ಧ ನೌಕೆ 2014ರ ಜನವರಿಯಲ್ಲಿ ಭಾರತ ತಲುಪಿತ್ತು. ಭಾರತಕ್ಕೆ ಬಂದ ಕೆಲವೇ ದಿನದಲ್ಲಿ ಕೊಚ್ಚಿಗೆ ಕೊಂಡೊಯ್ದು ಅದರ ನಿರ್ವಹಣೆ ಮತ್ತು ಕೆಲ ಶಸ್ತ್ರಾಸ್ತ್ರ ಜೋಡಣೆ ಕಾರ್ಯ ನಡೆಸಲಾಗಿತ್ತು. ಈಗ ಮತ್ತೊಮ್ಮೆ ಕೊಚ್ಚಿ ಡ್ರೖೆ ಡಾಕ್ ವ್ಯವಸ್ಥೆಯಲ್ಲಿ ನಿರ್ವಹಣೆ ಕೈಗೊಳ್ಳಲಾಗಿದೆ. 2021 ಅ...

**ಜ್ಞಾನ ಕಾರಂಜಿ**::: ವಿಶ್ವ ಸಂಸ್ಥೆಯ ದಿನಾಚರಣೆ

ಅಕ್ಟೋಬರ್ 24 # 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು. ★★ ವಿಶ್ವ ಸಂಸ್ಥೆ ಬಗ್ಗೆ ಮಾಹಿತಿ # ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು. # ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ. ★  ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು 1) ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್ 2) ಇಂಗ್ಲೇಂಡ್ ನ ಚರ್ಚಿಲ್ 3) ರಷ್ಯಾದ ಜೋಸೆಪ್ ಸ್ಟಾಲಿನ್ ★ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು 1) ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್ 2) ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್ 3) ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್ 4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ) 5) ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್ ★ ವಿಶ್ವಸಂಸ್ಥೆಯ ಧ್ವಜ: # ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು *ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್ * ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್ ★ ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು *...
https://www.flipkart.com/mi-20000-mah-power-bank-plm06zm-2i/p/itmezqanhyjtzmzz?pid=PWBEZQANFZWTXTUS&lid=LSTPWBEZQANFZWTXTUSBOWZSG&marketplace=FLIPKART&srno=s_1_2&otracker=search&fm=SEARCH&iid=e6f6020f-5f67-4b60-8399-1e3d958d2eeb.PWBEZQANFZWTXTUS.SEARCH&ppt=Homepage&ppn=Homepage&ssid=k7vx9a4jk6h69s001540360598786&qH=7d28c3c511d5c871

ಜ್ಞಾನ ಕಾರಂಜಿ ‍ ಅಶ್ವಿನಿ ನಾಚಪ್ಪ ಬರ್ತಡೇ ಆರ್ಟಿಕಲ್

ಅಶ್ವಿನಿ ನಾಚಪ್ಪ ಭಾರತದ ಫ್ಲೋರೆನ್ಸ್ ಗ್ರಿಫಿತ್ ಜೋಯ್ನರ್ ಎಂದು ಪ್ರಸಿದ್ಧಿ ಪಡೆದ ಭಾರತದ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರು ಜನಿಸಿದ ದಿನ ಅಕ್ಟೋಬರ್ 21, 1967.  ಕೊಡಗಿನ ಬೆಡಗಿ ಅಶ್ವಿನಿಯವರಿಗೆ ಗಗನ ಸಖಿಯ...