ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ರೋಗಗಳ ಗೂಡಿನಿಂದ ಸ್ವಾಸ್ಥ್ಯದ ಗುಡಿಗೆ

ಸ್ವಾತಂತ್ರ್ಯ ಬಂದಾಗ ದೇಶ ರೋಗಗಳ ಗೂಡಾಗಿತ್ತು, ಎಲುಬಿನ ಹಂದರವಾಗಿತ್ತು. ಹಳ್ಳಿಗಳೇ ಹೆಚ್ಚಾಗಿರುವ ದೇಶದಲ್ಲಿ ಆಗ ಇದ್ದ 33 ಕೋಟಿ ಭಾರತೀಯರ ಆರೋಗ್ಯ ರಕ್ಷ ಣೆಯೇ ಅತಿ ದೊಡ್ಡ ಸವಾಲು. ಹುಟ್ಟುವಾಗಲೇ ಸಾಯುವ ಮಕ್ಕಳು-ತಾಯಂದಿರು, ಅಕಾಲಿಕ ಮರಣ, ರೋಗರುಜಿನಗಳು ದೇಶದ ಆರೋಗ್ಯಕ್ಕೂ ಕಂಟಕಪ್ರಾಯವಾಗಿದ್ದವು. ಆದರೆ, ಈ ಕಷ್ಟ ಕೋಟಲೆಗಳನ್ನು ಮೀರಿ ನಿಂತ ದೇಶ ಇಂದು ಅತ್ಯುತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 145ನೇ ಸ್ಥಾನ ಪಡೆದಿದೆ. ಅದೆಷ್ಟೋ ಮಾರಣಾಂತಿಕ ರೋಗಗಳನ್ನು ನಿವಾರಿಸಿಕೊಂಡು, ಸರ್ವರಿಗೂ ಆರೋಗ್ಯ ನೀಡುತ್ತಾ ದೇಶವನ್ನು ಬೆಳೆಸಿದ ಸಾಹಸ ದೊಡ್ಡದೇನಲ್ಲ. ಜಾರಿಯ ಹೊಸ್ತಿಲಲ್ಲಿರುವ ಆಯುಷ್ಮಾನ್‌ ಭಾರತ್‌-ಸರ್ವರ ಆರೋಗ್ಯ ರಕ್ಷ ಣೆ ಯೋಜನೆ ನಿಜಕ್ಕೂ ಎಲ್ಲರಲ್ಲೂ ಭರವಸೆ ತುಂಬಿದೆ.

ಪಂಚ ಅರಿಷ್ಟ ನಿವಾರಣೆ

ದೇಶದಲ್ಲಿ ನಿತ್ಯ ಸಾವು, ನೋವಿಗೆ ಕಾರಣವಾಗುತ್ತಿದ್ದ ಪಂಚ ಅರಿಷ್ಟಗಳ ನಿವಾರಣೆ ಸ್ವಾತಂತ್ರ್ಯೋತ್ತರ ಭಾರತದ ಮಹತ್ಸಾಧನೆ. ಕುಷ್ಟ, ಪೋಲಿಯೊ, ಸಿಡುಬು, ಧನುರ್ವಾಯು, ಕೆಂಪು ಗುಳ್ಳೆ ಏಳುವ ಯಾಸ್‌ನ್ನು ಈಗ ದೇಶದಿಂದಲೇ ಹೊರಗಟ್ಟಲಾಗಿದೆ.


ಆರೋಗ್ಯಕರ 145ನೇ ಸ್ಥಾನ ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಆರೋಗ್ಯ ವ್ಯವಸ್ಥೆಗಳಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಈಗ 145ನೇ ಸ್ಥಾನ. ಈ ಸ್ಥಾನ ಚೀನಾ(48), ಶ್ರೀಲಂಕಾ (71), ಬಾಂಗ್ಲಾ(133), ಭೂತಾನ್‌(134)ಗಳಿಗಿಂತ ಕಡಿಮೆಯಾದರೂ ಸುಧಾರಣೆ ಹಾದಿಯಲ್ಲಿದೆ.

ಲಕ್ಷಾಂತರ ಆಸ್ಪತ್ರೆ

ದೇಶದಲ್ಲಿ ಪ್ರಸಕ್ತ ಸಣ್ಣ ಮತ್ತು ದೊಡ್ಡ ಗಾತ್ರದ ಲಕ್ಷಾಂತರ ಆಸ್ಪತ್ರೆಗಳಿವೆ. 1000 ಮೆಡಿಕಲ್‌, 3123 ನರ್ಸಿಂಗ್‌ ಕಾಲೇಜುಗಳಿವೆ. ಇವುಗಳಲ್ಲಿ ಹೆಚ್ಚು ನಗರ ಕೇಂದ್ರಿತ ಎನ್ನುವುದು ಸತ್ಯ. ಸರಕಾರಿ ಆರೋಗ್ಯ ಕೇಂದ್ರಗಳು ಹಳ್ಳಿಗಳ ಆರೋಗ್ಯ ಕಾಯುತ್ತಿವೆ.

ವಿದೇಶಿ ಆಕರ್ಷಣೆ

ಭಾರತದ ವೈದ್ಯಕೀಯ ಶಿಕ್ಷ ಣ ಮತ್ತು ಚಿಕಿತ್ಸೆಯ ಗುಣಮಟ್ಟ ಜಗತ್ತಿಗೇ ಆಕರ್ಷಕ. ಜಪಾನ್‌, ಚೀನಾ, ಮಲೇಶಿಯಾದಂಥ ಮುಂದುವರಿದ ದೇಶಗಳೂ ಸೇರಿದಂತೆ ವರ್ಷಕ್ಕೆ ಹಲವು ಸಾವಿರ ವಿದ್ಯಾರ್ಥಿಗಳು ಕಲಿಯಲು ಇಲ್ಲಿಗೆ ಬರುತ್ತಾರೆ. ಭಾರತದ ಚಿಕಿತ್ಸೆಗೂ ಬೇಡಿಕೆ.

ಸೌಹಾರ್ದತೆಯ ಚಿಕಿತ್ಸೆ

ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಪಾಕಿಸ್ತಾನದ ಬಾಲಕಿಗೆ ಹೃದಯ ಚಿಕಿತ್ಸೆ, 500 ಕೆಜಿ ತೂಕವಿದ್ದ ಈಜಿಪ್ಟಿನ ಮಹಿಳೆ ಆರೋಗ್ಯ ರಕ್ಷ ಣೆಗೆ ಮುಂಬಯಿ ಆಸ್ಪತ್ರೆಯನ್ನು ಆರಿಸಿದ್ದು ಸೌಹಾರ್ದತೆ ಮತ್ತು ಕಾಳಜಿಯ ಚಿಕಿತ್ಸೆಗೆ ನಿದರ್ಶನ. ಪಾಕಿಸ್ತಾನದಿಂದ ನೂರಾರು ಮಂದಿ ಚಿಕಿತ್ಸೆಗಾಗಿ ದೇಶಕ್ಕೆ ಬರುತ್ತಿದ್ದಾರೆ.

ಮೊದಲ ಹಾರ್ಟ್‌ ಕಸಿ

ದೇಶದ ಮೊದಲ ಹೃದಯ ಕಸಿ ದಿಲ್ಲಿಯ ಎಐಐಎಂಎಸ್‌ನಲ್ಲಿ 1994ರಲ್ಲಿ ನಡೆದಿತ್ತು. ಅಲ್ಲಿಂದ 2015ರವರೆಗೆ 350 ಕಸಿಗಳಾಗಿವೆ. ಈಗ ಹೃದಯವೊಂದೇ ಅಲ್ಲ, 2015ರಲ್ಲಿ 1698, 2017ರಲ್ಲಿ 2,347 ಹಾಗೂ 2017ರಲ್ಲಿ 3000 ಇತರ ಅಂಗಾಂಗಗಳ ಕಸಿ ನಡೆದಿದೆ.

ಮೊದಲ ಪ್ರನಾಳ ಶಿಶು : ಮುಂಬಯಿಯ ಜಸ್ಲೋಕ್‌ ಆಸ್ಪತ್ರೆಯಲ್ಲಿ ದೇಶದ ಮೊದಲ ಪ್ರನಾಳ ಶಿಶು ಜನನವಾಗಿದ್ದು 1978ರಲ್ಲಿ.

ಜಗತ್ತಿನ 5ನೇ ಅತಿ ದೊಡ್ಡ ಆಸ್ಪತ್ರೆ : ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆ 2800 ಬೆಡ್‌ಗಳೊಂದಿಗೆ ಜಗತ್ತಿನ 5ನೇ ಅತಿ ದೊಡ್ಡ ಆಸ್ಪತ್ರೆಯಾಗಿ ದಾಖಲಾಗಿದೆ. ಅದನ್ನು 4800 ಬೆಡ್‌ಗಳಿಗೇರಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ವರ್ಷಕ್ಕೆ ನಡೆಯುವ ಸರ್ಜರಿಗಳ ಸಂಖ್ಯೆ 26000!

ಜಗತ್ತಿನ ಬೃಹತ್‌ ಹೆಲ್ತ್‌ ಕೇರ್‌ : ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಜಾರಿಗೆ ಬಂದ ಯುನಿವರ್ಸಲ್‌ ಹೆಲ್ತ್‌ ಕೇರ್‌ ಇಡೀ ಜಗತ್ತಿನಲ್ಲೇ ದೊಡ್ಡದು. 50 ಕೋಟಿ ಮಂದಿಗೆ ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ಸುರಕ್ಷೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...