ಸುಪ್ರೀಂ ಕೋರ್ಟ್ ಒಂದಷ್ಟು ಚೌಕಟ್ಟು ವಿಧಿಸಿ, ‘ಹಸಿರು ಪಟಾಕಿ’ಗಳನ್ನು ಸಿಡಿಸಲು ಅನುಮತಿ ನೀಡಿದೆ. ಈ ಬೆಳವಣಿಗೆ ಮಾಲಿನ್ಯ ತಗ್ಗಿಸಲು, ಪರಿಸರವನ್ನು ನಿರ್ಮಲವಾಗಿಸಲು ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತಾದ ವಿವರ ಇಲ್ಲಿದೆ.
ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪನ ಬದಲಿಗೆ ಈಗ ಮಣ್ಣಿನ ಗಣಪನೇ ಚೌತಿಯ ಸಂಭ್ರಮ ಹೆಚ್ಚಿಸುತ್ತಿದ್ದಾನೆ. ಹಾಗೇ, ವಿಷಕಾರಿ ಅನಿಲಗಳನ್ನು ಹೊರ ಹಾಕುವ ಪಟಾಕಿಗಳ ಅಬ್ಬರ ಕಡಿಮೆಯಾಗಿ ಮುಂಬರುವ ವರ್ಷಗಳಲ್ಲಿ ‘ಹಸಿರು ಪಟಾಕಿ’ಗಳೇ ಸದ್ದು ಮಾಡಲಿವೆ. ಇದರ ವೈಜ್ಞಾನಿಕ ಪರೀಕ್ಷೆಯೂ ಫಲಪ್ರದವಾಗಿದ್ದು, ಪಟಾಕಿ ತಯಾರಕರು ಕೂಡ ಒಲವು ತೋರುತ್ತಿರುವುದು ಸಕಾರಾತ್ಮಕ ಬೆಳವಣಿಗೆ.
ಏನಿದು ಹಸಿರು ಪಟಾಕಿ?: ಇವು ಕಡಿಮೆ ಮಾಲಿನ್ಯಕಾರಕಗಳು. ಮರುಬಳಕೆ ಕಾಗದ, ಮಿತಪ್ರಮಾಣದ ರಾಸಾಯನಿಕ ಪದಾರ್ಥದ ಬಳಕೆ, ಕಡಿಮೆ ಶಬ್ದ-ಹೊಗೆಯನ್ನು ಹೊಮ್ಮಿಸುವ ಇವನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಇವು ಮನುಷ್ಯನ ಸ್ವಾಸ್ಥ್ಯ ಮತ್ತು ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುತ್ತವೆ.
ಹಲವು ಸಂಸ್ಥೆಗಳ ಪ್ರಯೋಗ: ‘ಹಸಿರು ಪಟಾಕಿ’ಗಳ ತಯಾರಿಕೆಯ ಸ್ಥಿತಿಗತಿ-ಸಾಧ್ಯತೆಗಳನ್ನು ಪರಾಮಶಿಸಿಯೇ ಸುಪ್ರೀಂ ಕೋರ್ಟ್ ಇಂಥ ಪಟಾಕಿಗಳನ್ನು ಸಿಡಿಸಲು ಸಮ್ಮತಿ ನೀಡಿದೆ, ಇವು ವಾಯುಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ನೆರವಾಗಲಿವೆ ಎಂಬ ವಿಶ್ವಾಸ ಸಿಎಸ್ಐಆರ್ ವಿಜ್ಞಾನಿಗಳದ್ದು. ಸಿಎಸ್ಐಆರ್ ಪ್ರಯೋಗಾಲಯಗಳು, ಸೆಂಟ್ರಲ್ ಎಲೆಕ್ಟೋ› ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್(ಸಿಇಸಿಆರ್ಐ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ(ಐಐಸಿಟಿ), ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ನ್ಯಾಷನಲ್ ಕೆಮಿಕಲ್ ಲ್ಯಾಬೋರೆಟರಿ ಸಂಸ್ಥೆಗಳು ಹಸಿರು ಪಟಾಕಿಯ ಪ್ರಯೋಗಗಳಲ್ಲಿ ತೊಡಗಿದ್ದು, ಈಗ ತಯಾರಾಗುತ್ತಿರುವ ಪಟಾಕಿಗಳಿಂದ ಹಾನಿಕಾರಕ ಪದಾರ್ಥಗಳನ್ನು ಕೈಬಿಟ್ಟು ಬೇರೆ ಪದಾರ್ಥಗಳಿಂದ ಹಸಿರು ಪಟಾಕಿ ತಯಾರಿಸುವ ಉದ್ದೇಶಕ್ಕೆ ವಿಜ್ಞಾನಿಗಳ ವಲಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಪಟಾಕಿಪ್ರಯೋಗಗಳಿಗೆ ಸೇಫ್ ವಾಟರ್ ರಿಲೀಜರ್(ಎಸ್ಡಬ್ಲ್ಯುಎಎಸ್), ಸೇಫ್ ಥಮೈಟ್ ಕ್ರ್ಯಾಕರ್ (ಸ್ಟಾರ್) ಮತ್ತು ಸೇಫ್ ಮಿನಿಮಲ್ ಅಲ್ಯುಮಿನಿಯಂ(ಎಸ್ಎಎಫ್ಎಎಲ್) ಇತ್ಯಾದಿ ವಿಭಿನ್ನ ಹೆಸರುಗಳನ್ನೂ ನೀಡಲಾಗಿದೆ. ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಷತೆ ಸಂಘಟನೆಯು ಈ ಪಟಾಕಿಗಳನ್ನು ಪರೀಕ್ಷಿಸಿ, ವಿಶ್ಲೇಷಿಸುತ್ತಿದ್ದು, ಭವಿಷ್ಯದಲ್ಲಿನ ಬಳಕೆಯ ಸಾಧ್ಯತೆಗಳನ್ನು ಗಮನಿಸುತ್ತಿದೆ.
ಇದು ವೈದ್ಯರ ಸಲಹೆ ಸ್ವಾಮಿ!
ಪೋಲಿಯೋ ನಿಮೂಲನೆಯಲ್ಲಿ ಡಾ.ಹರ್ಷವರ್ಧನ್ ತೋರಿದ ಬದ್ಧತೆಗೆ ವಿಶ್ವ ಆರೋಗ್ಯ ಸಂಸ್ಥೆಯೂ ಭೇಷ್ ಎಂದಿತ್ತು. ಈಗ, ‘ಹಸಿರು ಪಟಾಕಿ’ಯ ಚಿಂತನೆಯನ್ನು ಸಿಎಸ್ಐಆರ್ (ಇಟ್ಠnಜ್ಝಿ ಟ್ಛ ಖ್ಚಜಿಛ್ಞಿಠಿಜ್ಛಿಜ್ಚಿ ಚ್ಞಛ ಐಛ್ಠಠಠ್ಟಿಜಿಚ್ಝ ್ಕಠಛಿಚ್ಟ್ಚ)ಗೆ
ಈ ವರ್ಷದ ಜನವರಿಯಲ್ಲಿ ನೀಡಿದವರು ವಿಜ್ಞಾನ-ತಂತ್ರಜ್ಞಾನ ಮತ್ತು ಪರಿಸರ ಸಚಿವ ಡಾ. ಹರ್ಷವರ್ಧನ್ ಅವರೇ. ಮಾಲಿನ್ಯ ತಗ್ಗಿಸುವ ಪಟಾಕಿಗಳನ್ನು ತಯಾರಿಸುವ ಸೂತ್ರವೊಂದನ್ನು ಅವರು ಮುಂದಿಟ್ಟಾಗ ಸಂಚಲನವೇ ಸೃಷ್ಟಿಯಾಯಿತು. ಮೂರು-ನಾಲ್ಕು ಬಗೆಯ ಫಾಮುಲಾಗಳನ್ನು ಬಳಸಿ ಇವನ್ನು ತಯಾರಿಸಲಾಗುತ್ತದೆ. ಇವು 40% ಮಾಲಿನ್ಯವನ್ನು ತಗ್ಗಿಸುತ್ತವೆ.
ಡೇಂಜರಸ್ ರಾಸಾಯನಿಕಗಳು
ಬಣ್ಣ-ಬಣ್ಣದ ಕಿರಣಗಳನ್ನು ಸೂಸುವ, ಭಾರಿ ಶಬ್ದ ಮಾಡುವ ಪಟಾಕಿಗಳಲ್ಲಿ ಜೀವಕ್ಕೇ ಕುತ್ತು ತರಬಹುದಾದ ಹಲವು ರಾಸಾಯನಿಕಗಳಿರುತ್ತವೆ. ಅಧ್ಯಯನಗಳ ಪ್ರಕಾರ, ದೀಪಾವಳಿ ಸಮಯದಲ್ಲಿ ವಾತಾವರಣದಲ್ಲಿನ ಸಲ್ಪರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಟಿಎಸ್ಪಿ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಪಟಾಕಿಗಳನ್ನು ಹೊತ್ತಿಸುವುದರಿಂದ ಸಲ್ಪರ್ ಡೈಆಕ್ಸೈಡ್(ಸಿಒ2), ಕಾರ್ಬನ್ ಮೊನಾಕ್ಸೈಡ್(ಸಿಒ), ಪಿಎಂ10, ಅಲ್ಯುಮಿನಿಯಂ, ಮ್ಯಾಂಗನೀಸ್, ಕ್ಯಾಡ್ಮಿಯಂ ಮುಂತಾದ ಲೋಹಗಳ ಸಣ್ಣ ಕಣಗಳು ಗಾಳಿಯನ್ನು ಸೇರಿಕೊಂಡು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.
ಎಸ್ಒ2: ಹೆಚ್ಚಿನ ಪ್ರಮಾಣದಲ್ಲಿ ಎಸ್ಒ2 ಮತ್ತು ಪಿಎಂ10 ಗಾಳಿಯನ್ನು ಸೇರಿಕೊಳ್ಳುವುದು ಅಪಾಯಕಾರಿ. ಇದು ಗಾಳಿಯಲ್ಲಿ ಸುಲಭವಾಗಿ ಬೆರೆತುಕೊಳ್ಳಬಹುದಾಗಿದ್ದು, ಶ್ವಾಸಕೋಶಕ್ಕೆ ಸಮಸ್ಯೆ ಉಂಟುಮಾಡುತ್ತದೆ.
ಆನ್ಲೈನ್ ಮಾರಾಟ ನಿಷೇಧ
ಇ-ಕಾಮರ್ಸ್ ವೆಬ್ಸೈಟ್ಗಳ ಮೂಲಕ ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರು ವುದು ಪ್ರಮುಖ ಅಂಶ. ಏಕೆಂದರೆ, ಕಳೆದ ವರ್ಷ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಸುಪ್ರೀಂ ಕೋರ್ಟ್ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದರೂ ಆನ್ಲೈನ್ ಮೂಲಕ ಮಾರಾಟದ ಭರಾಟೆ ಜೋರಾಗಿತ್ತು. ಈ ಬಾರಿ ಹಾಗಾಗದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಕೋರ್ಟ್ ಸೂಚಿಸಿದೆ.
ಪರಿಸರದ ಮೇಲೆ ಪ್ರಭಾವ
ಪಟಾಕಿಗಳಲ್ಲಿ ಹೆಚ್ಚಿನ ಪ್ರಮಾಣದ ಸಲ್ಪರ್, ಪೊಟ್ಯಾಷಿಯಂ ಕ್ಲೋರೈಡ್ ಅಂಶವಿರುತ್ತದೆ. ಇದರಿಂದ ಪರಿಸರ ಮಾಲಿನ್ಯ ಪ್ರಮಾಣವೂ ಹೆಚ್ಚುತ್ತದೆ. ಹೆಚ್ಚಿನ ಸಲ್ಪರ್ ಅಂಶಗಳಿರುವ ಕಾರಣದಿಂದ ಉತ್ಪತ್ತಿಯಾಗುವ ವಿಷಾನಿಲದ ಪ್ರಭಾವದಿಂದಾಗಿ ಕಣ್ಣಿನ ತೊಂದರೆ, ಉಸಿರಾಟದ ಸಮಸ್ಯೆಗಳು, ಪೊಟ್ಯಾಷಿಯಂ ಕ್ಲೋರೈಡ್ ಅಂಶದಿಂದ ಚರ್ಮದ ಅಲರ್ಜಿಗಳು ಎದುರಾಗಬಹುದು.
ಪಟಾಕಿ ಉದ್ಯಮ
ಶಿವಕಾಶಿಯ ಪಟಾಕಿ ಉದ್ಯಮ ವಾರ್ಷಿಕ 7000 ಕೋಟಿ ರೂ. ವಹಿವಾಟು ನಡೆಸುತ್ತದೆ. ಪಟಾಕಿ ತಯಾರಿಕಾ ಘಟಕಗಳಲ್ಲಿ 3 ಲಕ್ಷ ಕಾರ್ವಿುಕರಿದ್ದರೆ, ಪಟಾಕಿಗಳ ಪ್ಯಾಕೇಜಿಂಗ್, ಪ್ರಿಂಟಿಂಗ್, ಪೇಪರ್ ರೋಲಿಂಗ್ ಮತ್ತು ರವಾನೆ ಕ್ಷೇತ್ರದಲ್ಲಿ 5 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಪಟಾಕಿಯ ಬೇಡಿಕೆ ಇದೇ ರೀತಿ ಕುಸಿಯುತ್ತ ಸಾಗಿದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಶಿವಕಾಶಿಯಲ್ಲಿ ತಯಾರಾಗುವ ಶೇಕಡ 20-25ರಷ್ಟು ಪಟಾಕಿಗಳು ದೆಹಲಿ-ಎನ್ಸಿಆರ್ನಲ್ಲಿಯೇ ಮಾರಾಟವಾಗುತ್ತವೆ.
ಈ ದುರಂತಗಳು ಕಣ್ತೆರೆಸಲಿ
ಪಟಾಕಿ ತಯಾರಿಕೆಯ ಹೊತ್ತಲ್ಲಿ ಅವಘಡಗಳು ಸಂಭವಿಸಿ ಕಾರ್ವಿುಕರು ಪ್ರಾಣ, ಕಳೆದುಕೊಂಡ ಕಹಿನೆನಪುಗಳಿವೆ. ಬೆಳಕಿನ ಹಬ್ಬವಾದ ದೀಪಾವಳಿ ಇಂಥ ಬಡಕಾರ್ವಿುಕರ ಮನೆಗೆ ಶಾಶ್ವತ ಕತ್ತಲು ತಂದಿಟ್ಟಿದ್ದು ವಿಪರ್ಯಾಸ. ಶಿವಕಾಶಿಯಲ್ಲಿ ಇಂಥ ಹಲವು ಘಟನೆಗಳು ಸಂಭವಿಸಿವೆ. ಅಲ್ಲದೆ, ಈ ಉದ್ಯಮದಲ್ಲಿ ಬಾಲಕಾರ್ವಿುಕರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂಬ ಕಳವಳವೂ ಇದೆ.
ಪಿಒಪಿ(ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪನ ಬದಲಿಗೆ ಈಗ ಮಣ್ಣಿನ ಗಣಪನೇ ಚೌತಿಯ ಸಂಭ್ರಮ ಹೆಚ್ಚಿಸುತ್ತಿದ್ದಾನೆ. ಹಾಗೇ, ವಿಷಕಾರಿ ಅನಿಲಗಳನ್ನು ಹೊರ ಹಾಕುವ ಪಟಾಕಿಗಳ ಅಬ್ಬರ ಕಡಿಮೆಯಾಗಿ ಮುಂಬರುವ ವರ್ಷಗಳಲ್ಲಿ ‘ಹಸಿರು ಪಟಾಕಿ’ಗಳೇ ಸದ್ದು ಮಾಡಲಿವೆ. ಇದರ ವೈಜ್ಞಾನಿಕ ಪರೀಕ್ಷೆಯೂ ಫಲಪ್ರದವಾಗಿದ್ದು, ಪಟಾಕಿ ತಯಾರಕರು ಕೂಡ ಒಲವು ತೋರುತ್ತಿರುವುದು ಸಕಾರಾತ್ಮಕ ಬೆಳವಣಿಗೆ.
ಏನಿದು ಹಸಿರು ಪಟಾಕಿ?: ಇವು ಕಡಿಮೆ ಮಾಲಿನ್ಯಕಾರಕಗಳು. ಮರುಬಳಕೆ ಕಾಗದ, ಮಿತಪ್ರಮಾಣದ ರಾಸಾಯನಿಕ ಪದಾರ್ಥದ ಬಳಕೆ, ಕಡಿಮೆ ಶಬ್ದ-ಹೊಗೆಯನ್ನು ಹೊಮ್ಮಿಸುವ ಇವನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಇವು ಮನುಷ್ಯನ ಸ್ವಾಸ್ಥ್ಯ ಮತ್ತು ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುತ್ತವೆ.
ಹಲವು ಸಂಸ್ಥೆಗಳ ಪ್ರಯೋಗ: ‘ಹಸಿರು ಪಟಾಕಿ’ಗಳ ತಯಾರಿಕೆಯ ಸ್ಥಿತಿಗತಿ-ಸಾಧ್ಯತೆಗಳನ್ನು ಪರಾಮಶಿಸಿಯೇ ಸುಪ್ರೀಂ ಕೋರ್ಟ್ ಇಂಥ ಪಟಾಕಿಗಳನ್ನು ಸಿಡಿಸಲು ಸಮ್ಮತಿ ನೀಡಿದೆ, ಇವು ವಾಯುಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ನೆರವಾಗಲಿವೆ ಎಂಬ ವಿಶ್ವಾಸ ಸಿಎಸ್ಐಆರ್ ವಿಜ್ಞಾನಿಗಳದ್ದು. ಸಿಎಸ್ಐಆರ್ ಪ್ರಯೋಗಾಲಯಗಳು, ಸೆಂಟ್ರಲ್ ಎಲೆಕ್ಟೋ› ಕೆಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್(ಸಿಇಸಿಆರ್ಐ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ(ಐಐಸಿಟಿ), ನ್ಯಾಷನಲ್ ಬೊಟಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ನ್ಯಾಷನಲ್ ಕೆಮಿಕಲ್ ಲ್ಯಾಬೋರೆಟರಿ ಸಂಸ್ಥೆಗಳು ಹಸಿರು ಪಟಾಕಿಯ ಪ್ರಯೋಗಗಳಲ್ಲಿ ತೊಡಗಿದ್ದು, ಈಗ ತಯಾರಾಗುತ್ತಿರುವ ಪಟಾಕಿಗಳಿಂದ ಹಾನಿಕಾರಕ ಪದಾರ್ಥಗಳನ್ನು ಕೈಬಿಟ್ಟು ಬೇರೆ ಪದಾರ್ಥಗಳಿಂದ ಹಸಿರು ಪಟಾಕಿ ತಯಾರಿಸುವ ಉದ್ದೇಶಕ್ಕೆ ವಿಜ್ಞಾನಿಗಳ ವಲಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಪಟಾಕಿಪ್ರಯೋಗಗಳಿಗೆ ಸೇಫ್ ವಾಟರ್ ರಿಲೀಜರ್(ಎಸ್ಡಬ್ಲ್ಯುಎಎಸ್), ಸೇಫ್ ಥಮೈಟ್ ಕ್ರ್ಯಾಕರ್ (ಸ್ಟಾರ್) ಮತ್ತು ಸೇಫ್ ಮಿನಿಮಲ್ ಅಲ್ಯುಮಿನಿಯಂ(ಎಸ್ಎಎಫ್ಎಎಲ್) ಇತ್ಯಾದಿ ವಿಭಿನ್ನ ಹೆಸರುಗಳನ್ನೂ ನೀಡಲಾಗಿದೆ. ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಷತೆ ಸಂಘಟನೆಯು ಈ ಪಟಾಕಿಗಳನ್ನು ಪರೀಕ್ಷಿಸಿ, ವಿಶ್ಲೇಷಿಸುತ್ತಿದ್ದು, ಭವಿಷ್ಯದಲ್ಲಿನ ಬಳಕೆಯ ಸಾಧ್ಯತೆಗಳನ್ನು ಗಮನಿಸುತ್ತಿದೆ.
ಇದು ವೈದ್ಯರ ಸಲಹೆ ಸ್ವಾಮಿ!
ಪೋಲಿಯೋ ನಿಮೂಲನೆಯಲ್ಲಿ ಡಾ.ಹರ್ಷವರ್ಧನ್ ತೋರಿದ ಬದ್ಧತೆಗೆ ವಿಶ್ವ ಆರೋಗ್ಯ ಸಂಸ್ಥೆಯೂ ಭೇಷ್ ಎಂದಿತ್ತು. ಈಗ, ‘ಹಸಿರು ಪಟಾಕಿ’ಯ ಚಿಂತನೆಯನ್ನು ಸಿಎಸ್ಐಆರ್ (ಇಟ್ಠnಜ್ಝಿ ಟ್ಛ ಖ್ಚಜಿಛ್ಞಿಠಿಜ್ಛಿಜ್ಚಿ ಚ್ಞಛ ಐಛ್ಠಠಠ್ಟಿಜಿಚ್ಝ ್ಕಠಛಿಚ್ಟ್ಚ)ಗೆ
ಈ ವರ್ಷದ ಜನವರಿಯಲ್ಲಿ ನೀಡಿದವರು ವಿಜ್ಞಾನ-ತಂತ್ರಜ್ಞಾನ ಮತ್ತು ಪರಿಸರ ಸಚಿವ ಡಾ. ಹರ್ಷವರ್ಧನ್ ಅವರೇ. ಮಾಲಿನ್ಯ ತಗ್ಗಿಸುವ ಪಟಾಕಿಗಳನ್ನು ತಯಾರಿಸುವ ಸೂತ್ರವೊಂದನ್ನು ಅವರು ಮುಂದಿಟ್ಟಾಗ ಸಂಚಲನವೇ ಸೃಷ್ಟಿಯಾಯಿತು. ಮೂರು-ನಾಲ್ಕು ಬಗೆಯ ಫಾಮುಲಾಗಳನ್ನು ಬಳಸಿ ಇವನ್ನು ತಯಾರಿಸಲಾಗುತ್ತದೆ. ಇವು 40% ಮಾಲಿನ್ಯವನ್ನು ತಗ್ಗಿಸುತ್ತವೆ.
ಡೇಂಜರಸ್ ರಾಸಾಯನಿಕಗಳು
ಬಣ್ಣ-ಬಣ್ಣದ ಕಿರಣಗಳನ್ನು ಸೂಸುವ, ಭಾರಿ ಶಬ್ದ ಮಾಡುವ ಪಟಾಕಿಗಳಲ್ಲಿ ಜೀವಕ್ಕೇ ಕುತ್ತು ತರಬಹುದಾದ ಹಲವು ರಾಸಾಯನಿಕಗಳಿರುತ್ತವೆ. ಅಧ್ಯಯನಗಳ ಪ್ರಕಾರ, ದೀಪಾವಳಿ ಸಮಯದಲ್ಲಿ ವಾತಾವರಣದಲ್ಲಿನ ಸಲ್ಪರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್, ಟಿಎಸ್ಪಿ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಪಟಾಕಿಗಳನ್ನು ಹೊತ್ತಿಸುವುದರಿಂದ ಸಲ್ಪರ್ ಡೈಆಕ್ಸೈಡ್(ಸಿಒ2), ಕಾರ್ಬನ್ ಮೊನಾಕ್ಸೈಡ್(ಸಿಒ), ಪಿಎಂ10, ಅಲ್ಯುಮಿನಿಯಂ, ಮ್ಯಾಂಗನೀಸ್, ಕ್ಯಾಡ್ಮಿಯಂ ಮುಂತಾದ ಲೋಹಗಳ ಸಣ್ಣ ಕಣಗಳು ಗಾಳಿಯನ್ನು ಸೇರಿಕೊಂಡು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ.
ಎಸ್ಒ2: ಹೆಚ್ಚಿನ ಪ್ರಮಾಣದಲ್ಲಿ ಎಸ್ಒ2 ಮತ್ತು ಪಿಎಂ10 ಗಾಳಿಯನ್ನು ಸೇರಿಕೊಳ್ಳುವುದು ಅಪಾಯಕಾರಿ. ಇದು ಗಾಳಿಯಲ್ಲಿ ಸುಲಭವಾಗಿ ಬೆರೆತುಕೊಳ್ಳಬಹುದಾಗಿದ್ದು, ಶ್ವಾಸಕೋಶಕ್ಕೆ ಸಮಸ್ಯೆ ಉಂಟುಮಾಡುತ್ತದೆ.
ಆನ್ಲೈನ್ ಮಾರಾಟ ನಿಷೇಧ
ಇ-ಕಾಮರ್ಸ್ ವೆಬ್ಸೈಟ್ಗಳ ಮೂಲಕ ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರು ವುದು ಪ್ರಮುಖ ಅಂಶ. ಏಕೆಂದರೆ, ಕಳೆದ ವರ್ಷ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಸುಪ್ರೀಂ ಕೋರ್ಟ್ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದರೂ ಆನ್ಲೈನ್ ಮೂಲಕ ಮಾರಾಟದ ಭರಾಟೆ ಜೋರಾಗಿತ್ತು. ಈ ಬಾರಿ ಹಾಗಾಗದಂತೆ ನಿಗಾ ವಹಿಸಲು ಪೊಲೀಸ್ ಇಲಾಖೆಗೆ ಕೋರ್ಟ್ ಸೂಚಿಸಿದೆ.
ಪರಿಸರದ ಮೇಲೆ ಪ್ರಭಾವ
ಪಟಾಕಿಗಳಲ್ಲಿ ಹೆಚ್ಚಿನ ಪ್ರಮಾಣದ ಸಲ್ಪರ್, ಪೊಟ್ಯಾಷಿಯಂ ಕ್ಲೋರೈಡ್ ಅಂಶವಿರುತ್ತದೆ. ಇದರಿಂದ ಪರಿಸರ ಮಾಲಿನ್ಯ ಪ್ರಮಾಣವೂ ಹೆಚ್ಚುತ್ತದೆ. ಹೆಚ್ಚಿನ ಸಲ್ಪರ್ ಅಂಶಗಳಿರುವ ಕಾರಣದಿಂದ ಉತ್ಪತ್ತಿಯಾಗುವ ವಿಷಾನಿಲದ ಪ್ರಭಾವದಿಂದಾಗಿ ಕಣ್ಣಿನ ತೊಂದರೆ, ಉಸಿರಾಟದ ಸಮಸ್ಯೆಗಳು, ಪೊಟ್ಯಾಷಿಯಂ ಕ್ಲೋರೈಡ್ ಅಂಶದಿಂದ ಚರ್ಮದ ಅಲರ್ಜಿಗಳು ಎದುರಾಗಬಹುದು.
ಪಟಾಕಿ ಉದ್ಯಮ
ಶಿವಕಾಶಿಯ ಪಟಾಕಿ ಉದ್ಯಮ ವಾರ್ಷಿಕ 7000 ಕೋಟಿ ರೂ. ವಹಿವಾಟು ನಡೆಸುತ್ತದೆ. ಪಟಾಕಿ ತಯಾರಿಕಾ ಘಟಕಗಳಲ್ಲಿ 3 ಲಕ್ಷ ಕಾರ್ವಿುಕರಿದ್ದರೆ, ಪಟಾಕಿಗಳ ಪ್ಯಾಕೇಜಿಂಗ್, ಪ್ರಿಂಟಿಂಗ್, ಪೇಪರ್ ರೋಲಿಂಗ್ ಮತ್ತು ರವಾನೆ ಕ್ಷೇತ್ರದಲ್ಲಿ 5 ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಪಟಾಕಿಯ ಬೇಡಿಕೆ ಇದೇ ರೀತಿ ಕುಸಿಯುತ್ತ ಸಾಗಿದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಶಿವಕಾಶಿಯಲ್ಲಿ ತಯಾರಾಗುವ ಶೇಕಡ 20-25ರಷ್ಟು ಪಟಾಕಿಗಳು ದೆಹಲಿ-ಎನ್ಸಿಆರ್ನಲ್ಲಿಯೇ ಮಾರಾಟವಾಗುತ್ತವೆ.
ಈ ದುರಂತಗಳು ಕಣ್ತೆರೆಸಲಿ
ಪಟಾಕಿ ತಯಾರಿಕೆಯ ಹೊತ್ತಲ್ಲಿ ಅವಘಡಗಳು ಸಂಭವಿಸಿ ಕಾರ್ವಿುಕರು ಪ್ರಾಣ, ಕಳೆದುಕೊಂಡ ಕಹಿನೆನಪುಗಳಿವೆ. ಬೆಳಕಿನ ಹಬ್ಬವಾದ ದೀಪಾವಳಿ ಇಂಥ ಬಡಕಾರ್ವಿುಕರ ಮನೆಗೆ ಶಾಶ್ವತ ಕತ್ತಲು ತಂದಿಟ್ಟಿದ್ದು ವಿಪರ್ಯಾಸ. ಶಿವಕಾಶಿಯಲ್ಲಿ ಇಂಥ ಹಲವು ಘಟನೆಗಳು ಸಂಭವಿಸಿವೆ. ಅಲ್ಲದೆ, ಈ ಉದ್ಯಮದಲ್ಲಿ ಬಾಲಕಾರ್ವಿುಕರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂಬ ಕಳವಳವೂ ಇದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ