5002 ಕೋಟಿ ರೂ. ಖೋತಾ | ಮಂಗಳೂರು ಕಂಪನಿಗೆ ಮಾತ್ರ ಲಾಭ
|ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸಮಸ್ಯೆ ಕಾಡುತ್ತಿರುವ ಬೆನ್ನಲ್ಲೇ ವಿದ್ಯುತ್ ಆಡಿಟ್ಗಳು ಕಾಲಕಾಲಕ್ಕೆ ನಡೆಯದೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ತೀವ್ರ ನಷ್ಟದಲ್ಲಿವೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿ ಣಮಿಸಿದೆ.
ಕೆಇ ಆರ್ಸಿ ಇತ್ತೀಚೆಗೆ ತಾನೇ ಎರಡು ಬಾರಿ ದರ ಏರಿಕೆಗೆ ಅನುಮತಿ ನೀಡಿದರೂ ಅನುಕೂಲವಾಗಿಲ್ಲ. ಹೀಗಾಗಿ ಎಸ್ಕಾಂಗಳನ್ನು ನಷ್ಟದಿಂದ ಹೊರ ತರಲು ಸರ್ಕಾರ ದಾರಿ ಹುಡುಕುತ್ತಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೊರತುಪಡಿಸಿ ಉಳಿದ ನಾಲ್ಕು ಕಂಪನಿಗಳು ಅನುಭವಿಸುತ್ತಿರುವ ನಷ್ಟ 5002 ಕೋಟಿ ರೂ. ಆಗಿದೆ.
ಎರಡು ಬಾರಿ ದರ ಏರಿಕೆ: ಪ್ರತಿ ವರ್ಷ ನಷ್ಟ ತೋರಿಸಿಯೇ ದರ ಏರಿಸಲಾಗುತ್ತದೆ. ಈ ವರ್ಷ ಎರಡು ಬಾರಿ ಏರಿಸಿದ್ದು, ಒಮ್ಮೆ ಪ್ರತಿ ಯೂನಿಟ್ಗೆ 24 ಪೈಸೆ ಏರಿಕೆಯಾದರೆ, ಮತ್ತೊಮ್ಮೆ 15 ಪೈಸೆ ಏರಿಕೆಯಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸುವ ಪ್ರಸ್ತಾವನೆ ಆಧಾರದಲ್ಲಿಯೇ ಕೆಇಆರ್ಸಿ ಒಪ್ಪಿಗೆ ನೀಡಿರುತ್ತದೆ. ಆದಾಯಕ್ಕೂ ಮೀರಿ ಖರ್ಚುಗಳಿವೆಯೇ ಎಂಬ ಪ್ರಶ್ನೆ27 ಮೂಡಿದೆ. ವಿದ್ಯುತ್ ಖರೀದಿ, ಹೊಸ ಯೋಜನೆಗಳಿಗೆ ಹೂಡಿಕೆ ಹೀಗೆ ವಿವಿಧ ಉದ್ದೇಶಗಳಿಂದ ನಷ್ಟವಾಗುತ್ತಿದೆ.
ಯಾವ ಸಂಸ್ಥೆ? ಎಷ್ಟು ನಷ್ಟ?: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ 234 ಕೋಟಿ ರೂ., ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ 2645 ಕೋಟಿ ರೂ., ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ 1512 ಕೋಟಿ ರೂ. ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ 611 ಕೋಟಿ ರೂ.ಗಳ ನಷ್ಟದಲ್ಲಿವೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾತ್ರ 131 ಕೋಟಿ ರೂ.ಗಳ ಲಾಭದಲ್ಲಿದೆ.
ಸಬ್ಸಿಡಿ ಖರೀದಿಗೆ: ಸರ್ಕಾರ ಕೃಷಿ ಪಂಪ್ಸೆಟ್ಗಳಿಗೆ ಸಬ್ಸಿಡಿ ನೀಡುತ್ತದೆ. ಈ ಸಾಲಿನಲ್ಲಿ 9000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ವಿದ್ಯುತ್ ಸಹಾಯ ಧನಕ್ಕಾಗಿ ಬಳಸುತ್ತಿದೆ. ಪ್ರತಿ ತಿಂಗಳು ಬಿಡುಗಡೆ ಮಾಡುವ ಈ ಮೊತ್ತವನ್ನು ಪೂರ್ತಿ ವಿದ್ಯುತ್ ಖರೀದಿಗಾಗಿ ಕೆಪಿಸಿ ಎಲ್ಗೆ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ಹೇಳುತ್ತವೆ.
ವಿದ್ಯುತ್ ಆಡಿಟ್ಗೆ ಸೂಚನೆ: ಕಾಲಕಾಲಕ್ಕೆ ವಿದ್ಯುತ್ ಆಡಿಟ್ ನಡೆಯದಿರುವುದೇ ನಷ್ಟಕ್ಕೆ ಮೂಲ ಕಾರಣವೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆಡಿಟ್ ಮಾಡಲು ನಿರ್ಧರಿಸಲಾಗಿದೆ.
ಜಲ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ
ಕಲ್ಲಿದ್ದಲು ಕೊರತೆಯಿಂದ ಶಾಖೋತ್ಪನ್ನ ವಿದ್ಯುತ್ ಹಾಗೂ ಗಾಳಿ ಕೊರತೆ ಯಿಂದ ಪವನ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದ್ದು, ಜಲ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಲಾಗಿದೆ. ವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ಇರುವ ನೀರಿನ ಮಟ್ಟದಿಂದ ಮೇ ಕೊನೆಯ ತನಕ ಪ್ರತಿ ನಿತ್ಯ 30 ದಶಲಕ್ಷ ಯೂನಿಟ್ ಉತ್ಪಾದಿಸಬಹುದು. ಆದರೆ, ಕಲ್ಲಿದ್ದಲು ಲಭ್ಯವಾಗುವವರೆಗೆ 40 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಬೇಡಿಕೆ ಹೆಚ್ಚುತ್ತಿದೆ. ಈಗ 207 ದಶಲಕ್ಷ ಯೂನಿಟ್ಗೆ ಬೇಡಿಕೆ ಪ್ರಮಾಣ ಹೆಚ್ಚಿದೆ. ಪೀಕ್ ಅವರ್ನಲ್ಲಿ 10 ಸಾವಿರ ಮೆಗಾ ವಾಟ್ಗೆ ತಲುಪಿದೆ. ಬೇಡಿಕೆ ಇನ್ನಷ್ಟು ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ.
ವಿದ್ಯುತ್ ಸರಬರಾಜು ಹಾಗೂ ವಿತರಣೆಯಲ್ಲಿನ ಸೋರಿಕೆ ನಷ್ಟ ತಡೆಯಲು ನಿರಂತರ ಜ್ಯೋತಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಲ್ಲಿ ಸಾಕಷ್ಟು ಹಣ ವೆಚ್ಚವಾದರೂ ಸೋರಿಕೆಯ ನಷ್ಟ ಇನ್ನೂ ಶೇ. 10ರಿಂದ 30 ಉಳಿದಿದೆ. ಶೇ. 15ಕ್ಕಿಂತ ಕಡಿಮೆ ಇರಬೇಕು ಎಂಬುದು ನಿರಂತರ ಜ್ಯೋತಿ ರೂಪಿಸಿದಾಗ ಮಾಡಿಕೊಂಡಿದ್ದ ನಿಯಮ. ಬೇರೆ ಬೇರೆ ಉದ್ದೇಶದ ಬಳಕೆಗೆ ಬೇರೆ ಬೇರೆ ಫೀಡರ್ಗಳಿರಬೇಕು. ಪ್ರತಿಯೊಂದು ಫೀಡರ್ಗೂ ಮೀಟರ್ ಅಳವಡಿಸಿರಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ, ಇನ್ನೂ ಆ ನಿಯಮ ಜಾರಿಗೆ ಬಾರದಿದ್ದರಿಂದ 2 ತಿಂಗಳ ಗಡುವು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
|ರುದ್ರಣ್ಣ ಹರ್ತಿಕೋಟೆ
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಸಮಸ್ಯೆ ಕಾಡುತ್ತಿರುವ ಬೆನ್ನಲ್ಲೇ ವಿದ್ಯುತ್ ಆಡಿಟ್ಗಳು ಕಾಲಕಾಲಕ್ಕೆ ನಡೆಯದೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ತೀವ್ರ ನಷ್ಟದಲ್ಲಿವೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿ ಣಮಿಸಿದೆ.
ಕೆಇ ಆರ್ಸಿ ಇತ್ತೀಚೆಗೆ ತಾನೇ ಎರಡು ಬಾರಿ ದರ ಏರಿಕೆಗೆ ಅನುಮತಿ ನೀಡಿದರೂ ಅನುಕೂಲವಾಗಿಲ್ಲ. ಹೀಗಾಗಿ ಎಸ್ಕಾಂಗಳನ್ನು ನಷ್ಟದಿಂದ ಹೊರ ತರಲು ಸರ್ಕಾರ ದಾರಿ ಹುಡುಕುತ್ತಿದೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೊರತುಪಡಿಸಿ ಉಳಿದ ನಾಲ್ಕು ಕಂಪನಿಗಳು ಅನುಭವಿಸುತ್ತಿರುವ ನಷ್ಟ 5002 ಕೋಟಿ ರೂ. ಆಗಿದೆ.
ಎರಡು ಬಾರಿ ದರ ಏರಿಕೆ: ಪ್ರತಿ ವರ್ಷ ನಷ್ಟ ತೋರಿಸಿಯೇ ದರ ಏರಿಸಲಾಗುತ್ತದೆ. ಈ ವರ್ಷ ಎರಡು ಬಾರಿ ಏರಿಸಿದ್ದು, ಒಮ್ಮೆ ಪ್ರತಿ ಯೂನಿಟ್ಗೆ 24 ಪೈಸೆ ಏರಿಕೆಯಾದರೆ, ಮತ್ತೊಮ್ಮೆ 15 ಪೈಸೆ ಏರಿಕೆಯಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸುವ ಪ್ರಸ್ತಾವನೆ ಆಧಾರದಲ್ಲಿಯೇ ಕೆಇಆರ್ಸಿ ಒಪ್ಪಿಗೆ ನೀಡಿರುತ್ತದೆ. ಆದಾಯಕ್ಕೂ ಮೀರಿ ಖರ್ಚುಗಳಿವೆಯೇ ಎಂಬ ಪ್ರಶ್ನೆ27 ಮೂಡಿದೆ. ವಿದ್ಯುತ್ ಖರೀದಿ, ಹೊಸ ಯೋಜನೆಗಳಿಗೆ ಹೂಡಿಕೆ ಹೀಗೆ ವಿವಿಧ ಉದ್ದೇಶಗಳಿಂದ ನಷ್ಟವಾಗುತ್ತಿದೆ.
ಯಾವ ಸಂಸ್ಥೆ? ಎಷ್ಟು ನಷ್ಟ?: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ 234 ಕೋಟಿ ರೂ., ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ 2645 ಕೋಟಿ ರೂ., ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ 1512 ಕೋಟಿ ರೂ. ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ 611 ಕೋಟಿ ರೂ.ಗಳ ನಷ್ಟದಲ್ಲಿವೆ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾತ್ರ 131 ಕೋಟಿ ರೂ.ಗಳ ಲಾಭದಲ್ಲಿದೆ.
ಸಬ್ಸಿಡಿ ಖರೀದಿಗೆ: ಸರ್ಕಾರ ಕೃಷಿ ಪಂಪ್ಸೆಟ್ಗಳಿಗೆ ಸಬ್ಸಿಡಿ ನೀಡುತ್ತದೆ. ಈ ಸಾಲಿನಲ್ಲಿ 9000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ವಿದ್ಯುತ್ ಸಹಾಯ ಧನಕ್ಕಾಗಿ ಬಳಸುತ್ತಿದೆ. ಪ್ರತಿ ತಿಂಗಳು ಬಿಡುಗಡೆ ಮಾಡುವ ಈ ಮೊತ್ತವನ್ನು ಪೂರ್ತಿ ವಿದ್ಯುತ್ ಖರೀದಿಗಾಗಿ ಕೆಪಿಸಿ ಎಲ್ಗೆ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ಹೇಳುತ್ತವೆ.
ವಿದ್ಯುತ್ ಆಡಿಟ್ಗೆ ಸೂಚನೆ: ಕಾಲಕಾಲಕ್ಕೆ ವಿದ್ಯುತ್ ಆಡಿಟ್ ನಡೆಯದಿರುವುದೇ ನಷ್ಟಕ್ಕೆ ಮೂಲ ಕಾರಣವೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಆಡಿಟ್ ಮಾಡಲು ನಿರ್ಧರಿಸಲಾಗಿದೆ.
ಜಲ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಸೂಚನೆ
ಕಲ್ಲಿದ್ದಲು ಕೊರತೆಯಿಂದ ಶಾಖೋತ್ಪನ್ನ ವಿದ್ಯುತ್ ಹಾಗೂ ಗಾಳಿ ಕೊರತೆ ಯಿಂದ ಪವನ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದ್ದು, ಜಲ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಲಾಗಿದೆ. ವಿದ್ಯುತ್ ಉತ್ಪಾದನಾ ಜಲಾಶಯಗಳಲ್ಲಿ ಇರುವ ನೀರಿನ ಮಟ್ಟದಿಂದ ಮೇ ಕೊನೆಯ ತನಕ ಪ್ರತಿ ನಿತ್ಯ 30 ದಶಲಕ್ಷ ಯೂನಿಟ್ ಉತ್ಪಾದಿಸಬಹುದು. ಆದರೆ, ಕಲ್ಲಿದ್ದಲು ಲಭ್ಯವಾಗುವವರೆಗೆ 40 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಬೇಡಿಕೆ ಹೆಚ್ಚುತ್ತಿದೆ. ಈಗ 207 ದಶಲಕ್ಷ ಯೂನಿಟ್ಗೆ ಬೇಡಿಕೆ ಪ್ರಮಾಣ ಹೆಚ್ಚಿದೆ. ಪೀಕ್ ಅವರ್ನಲ್ಲಿ 10 ಸಾವಿರ ಮೆಗಾ ವಾಟ್ಗೆ ತಲುಪಿದೆ. ಬೇಡಿಕೆ ಇನ್ನಷ್ಟು ಹೆಚ್ಚಾಗಬಹುದೆಂದು ಅಂದಾಜು ಮಾಡಲಾಗಿದೆ.
ವಿದ್ಯುತ್ ಸರಬರಾಜು ಹಾಗೂ ವಿತರಣೆಯಲ್ಲಿನ ಸೋರಿಕೆ ನಷ್ಟ ತಡೆಯಲು ನಿರಂತರ ಜ್ಯೋತಿ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಲ್ಲಿ ಸಾಕಷ್ಟು ಹಣ ವೆಚ್ಚವಾದರೂ ಸೋರಿಕೆಯ ನಷ್ಟ ಇನ್ನೂ ಶೇ. 10ರಿಂದ 30 ಉಳಿದಿದೆ. ಶೇ. 15ಕ್ಕಿಂತ ಕಡಿಮೆ ಇರಬೇಕು ಎಂಬುದು ನಿರಂತರ ಜ್ಯೋತಿ ರೂಪಿಸಿದಾಗ ಮಾಡಿಕೊಂಡಿದ್ದ ನಿಯಮ. ಬೇರೆ ಬೇರೆ ಉದ್ದೇಶದ ಬಳಕೆಗೆ ಬೇರೆ ಬೇರೆ ಫೀಡರ್ಗಳಿರಬೇಕು. ಪ್ರತಿಯೊಂದು ಫೀಡರ್ಗೂ ಮೀಟರ್ ಅಳವಡಿಸಿರಬೇಕು ಎಂಬ ಸೂಚನೆ ನೀಡಲಾಗಿತ್ತು. ಆದರೆ, ಇನ್ನೂ ಆ ನಿಯಮ ಜಾರಿಗೆ ಬಾರದಿದ್ದರಿಂದ 2 ತಿಂಗಳ ಗಡುವು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ