ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಅಮೂಲ್ಯ ಜೀವಜಲ ನೀರು!

ಮಾರ್ಚ 22 ನ್ನು ವಿಶ್ವಜಲ ದಿನ ಎಂದು ಆಚರಿಲಾಗುತ್ತದೆ. ನೀರಿನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ
ನೀರಿನ ಪ್ರಾಮುಖ್ಯತೆ-
 ಭೂಮಿಯ ಮೇಲಿರುವ ಮೂಲಭೂತ ವಸ್ತುಗಳಲ್ಲಿ ನೀರು ಒಂದು. ನೀರನ್ನು ಹೈಡ್ರೋಜನ್ ಮೋನಾಕ್ಸೆಡ್ ಎಂದು ಕರೆಯುವರು. ಜೀವಪೋಷಣೆಯಲ್ಲಿ ನೀರು ಅವಶ್ಯ. ನಮ್ಮ ದೇಹದ 2/3 ಭಾಗ ಮತ್ತು ರಕ್ತದ 9/10 ಭಾಗ ನೀರಿನಿಂದ ಕೂಡಿದೆ. ಭೂಮಿಯು ಸುಮಾರು ¾ ಭಾಗ ನೀರಿನಿಂದ ಆವೃತ್ತವಾಗಿದೆ.
ನೀರಿನ ಲಕ್ಷಣಗಳು-
 ಶುದ್ದ ನೀರು ಬಣ್ಣ ಇಲ್ಲದ ಪಾರದರ್ಶಕ ದ್ರವ. ವಾಸನೆ ಹಾಗೂ ರುಚಿ ಇಲ್ಲದ ದ್ರವ, ನೀರು ಒಂದು ಸಂಯುಕ್ತವಾಗಿದ್ದು, ಇದು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳಿಂದ 2/1 ಪ್ರಮಾಣದಲ್ಲಿ ಕೂಡಿ ನೀರಾಗಿದೆ. ನೀರಿನ ಅಣುಸೂತ್ರ H20. ಶುದ್ದ ನೀರು ಒಂದು ಅನುಷ್ಟವಾಹಕ ಮತ್ತು ವಿದ್ಯುತವಾಹಕ
 ನೀರು ಯಾವ ತಾಪಮಾನದಲ್ಲಿ ಕುದಿಯುತ್ತದಯೋ ಅದನ್ನು ನೀರಿನ ಕುದಿಯುವ ಬಿಂದು ಎನ್ನುವರು. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್. 0 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ನೀರು ಘನಿಭವಿಸುತ್ತದೆ. 4 ಡಿಗ್ರಿಸೆಲ್ಸಿಯ ಇದು ನೀರಿನ ಸಾಂದ್ರತೆ ಇದೆ.
 ನೀರು ಒಂದು ದ್ರಾವಕವಾಗಿದ್ದು, ಎರಡು  ಅಥವಾ ಹೆಚ್ಚು ವಸ್ತುಗಳ ಸಮಜ್ಯಾತ ಮಿಶ್ರಣವನ್ನು ದ್ರಾವಣ ಎನ್ನುವರು ನೀರನ್ನು ಸಾರ್ವತ್ರಿಕ ದ್ರಾವಕ ಎನ್ನುವರು. ನಿಸರ್ಗದಲ್ಲಿ ಸಿಗುವ ಅತ್ಯಂತ ಶುದ್ದವಾಗಿ ಕಂಡುಬರುವುದು ಮಳೆ ನೀರು 0.005% ರಷ್ಟು ಲವಣಗಳನ್ನು ತನ್ನಲ್ಲಿ ಕರಗಿಸಿಕೊಂಡಿರುತ್ತದೆ. ಸಮುದ್ರದ ನೀರು 3.5% ಲವಣಗಳನ್ನೊಳಗೊಂಡಿದೆ. ಲವಣಯುಕ್ತ ನೀರನ್ನು ಅತಿಸಾರ ಮತ್ತು ನಿರ್ಜಲಿಕರಣದಿಂದ ಬಳಲುತ್ತಿರುವ ವ್ಯಕ್ತಿಗೆ ನೀಡಲಾಗುವುದು.
ಜಲಚಕ್ರ-
ಭೂಮಿಯ ಮೇಲಿನ ನೀರು ಸೂರ್ಯನ ಶಾಖದಿಂದ ಕಾದು ಆವಿಯಾಗಿ ವಾತವರಣವನ್ನು ಸೇರುತ್ತದೆ. ಆವಿಯು ಮೋಡವಾಗಿ ಪುನಃ ಮಳೆ ಮತ್ತು ಹಿಮದ ರೂಪದಲ್ಲಿ ಭೂಮಿಯನ್ನು ಸೇರುತ್ತದೆ. ಇದನ್ನು ಜಲಚಕ್ರ ಎನ್ನುವರು. ಜಲಚಕ್ರವು ನಿರಂತರ ಪ್ರಕ್ರಿಯೆಯಾಗಿದ್ದು ಆವೀಕರಣ, ಶಾಂದ್ರೀಕರಣ ಮತ್ತು ಅವಕಾತ ಎಂಬ ಮೂರು ಹಂತಗಳನ್ನು ಒಳಗೊಂಡಿದೆ.
 ಕೆರೆ, ನದಿ, ಸಾಗರಗಳಂತಹ ನೀರಿನ ಆಕರಗಳಲ್ಲಿ ನೀರು ಸೂರ್ಯನ ಶಾಖದಿಂದ ಕಾದು ಆವಿಯಾಗಿ ಗಾಳಿಯನ್ನು ಸೇರುತ್ತದೆ. ಇದನ್ನು ಆವೀಕರಣ ಎನ್ನುವರು. ಆವೀಕರಣದ ಮೂಲಕ ಸೇರಿದ ನೀರಾವಿ ಗಾಳಿಯಲ್ಲಿ ಮೇಲೆ ಸಾಗಿ ತಣ್ಣಗಾಗಿ ಮೋಡಗಳಲ್ಲಿ ನೀರಿನ ಹನಿಗಳಾಗಿ ಬದಲಾಗುತ್ತದೆ, ಇದನ್ನು ಸಾಂದ್ರೀಕರಣ ಎನ್ನುವರು. ಮೋಡಗಳ ಸೂತ್ತಲಿನ ಗಾಳಿಯು ತಣ್ಣಗಾದಾಗ ದೊಡ್ಡದಾಗಿರುವ ಭಾರವಾದ ಹನಿಯಾಗಿ ಮಳೆ ಬಿಳುತ್ತದೆ. ಮೊಡಗಳ ಸೂತ್ತಲಿನ ಗಾಳಿಯು ಇನ್ನೂ ತಂಪಾದಾಗ ಮೋಡದಿಂದ ಹಿಮ ಬೀಳುತ್ತದೆ. ಹೀಗೆ ಮೋಡಗಳಿಂದ ಮಳೆ ಅಥವಾ ಹಿಮ ಬೀಳುವ ಪ್ರಕ್ರಿಯೆಯನ್ನು ಅವಪಾತ ಎನ್ನುವರು.
 ಭೂಮಿಯು ಮೇಲೆ ಲಬ್ಯವಿರುವ ಶೇಕಡಾ 97 ರಷ್ಟು ನೀರು ಸಮುದ್ರ ಮತ್ತು ಸಾಗರಗಳಲ್ಲಿದೆ. ಇದು ಉಪ್ಪು ನೀರು ಇದ್ದು ಕುಡಿಯು ಕೃಷಿ ಅಥವಾ ಕೈಗಾರಿಕೆಗಳಿಗೆ ಬಳಸಲು ಯೋಗ್ಯವಾದುದಲ್ಲ. ಕೇವಲ 3% ಮಾತ್ರ ಸಿಹಿ ನೀರು ಇದರಲ್ಲಿ 2% ರಷ್ಟು ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ರೂಪದಲ್ಲಿ ಮತ್ತು 1% ರಷ್ಟು ನದಿ ಸರೋವರಗಳಂತಹ ನೀರಿನ ಆಕರಗಳಲ್ಲಿದೆ. ನಾವು ನೀರನ್ನು ಮಿತವಾಗಿ ವಿವೇಚನೆಯಿಂದ ಬಳಸದೇ ಇದ್ದರೆ ಕ್ಷಾಮ ಉಂಟಾಗಿ ಬರಗಾಲ ಸಂಭವಿಸುತ್ತದೆ.
ನೀರಿನ ಅಭಾವಕ್ಕೆ ಕಾರಣಗಳು
-ಜನಸಂಖ್ಯಾ ಹೆಚ್ಚಳದಿಂದ ನೀರಿನ ನಿರಂತರ ಬಳಕೆ ಹೆಚ್ಚಾದ ಕೈಗಾರಿಕರಣದಿಂದ
-ಮಳೆಯ ಅಸಮಾನ ಹಂಚಿಕೆ ಇದ್ದು ಮಳೆಯು ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿ ಬೀಳುವುದಿಲ್ಲ.
-ಅಂತರ್ಜಲ ಮಟ್ಟದ ಕುಸಿತ. ಅಂತರ್ಜಲವನ್ನು ಹೆಚ್ಚು ಬಳಕೆ ಮಾಡುತ್ತಿರುವುದರಿಂದ  ಅಂತರ್ಜಲ ಮಟ್ಟ ಕುಸಿದು ಕೆಲವು ಕಡೆಗಳಲ್ಲಿ ಬತ್ತಿ ಹೋಗಿದೆ.
-ಜಲಮಾಲಿನ್ಯ: ನೀರು ಸಾರ್ವತ್ರಿಕ ದ್ರಾವಕವಾಗಿರುವುದರಿಂದ ಗೃಹ ಮತ್ತು ಕೃಷಿ ಕೈಗಾರಿಕೆಗಳ ತಾಜ್ಯವಸ್ತುಗಳು ನೀರಿನೊಂದಿಗೆ ಸೇರಿಕೊಂಡು ನೀರು ಕಲುಷಿತಗೊಂಡು ಕಾಯಿಲೆಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಜಲಚರ, ಜಲಸಸ್ಯಗಳು ನಾಶವಾಗುತ್ತಿವೆ.
-ನೀರಿನ ವಿವೇಚನಾರಹಿತ ಬಳಕೆ: ನೀರನ್ನು ಸಮರ್ಷಕವಾಗಿ ಬಳಸದೇ ಅಗತ್ಯಕ್ಕಿಂತಾ ಹೆಚ್ಚಾಗಿ ಬಳಸುತ್ತಿರುವುದರಿಂದ ನೀರಿನ ಅಭಾವ ಸೃಷ್ಠಿಯಾಗಿದೆ.
ನೀರಿನ ನಿರ್ವಹಣೆ-
 ನೀರು ಜೀವ ಸಂಕುಲದ ಉಗಮ, ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿದ್ದು ಸಮರ್ಪಕವಾಗಿ ಬಳಸುವುದರಿಂದ ನೀರನ್ನು ಸಂರಕ್ಷಿಸಬಹುದು
ನೀರಿಗೆ ಕ್ಲೋರಿನ ನಂತರ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ ಶುದ್ದೀಕರಿ ಕುಡಿಯವ ನೀರನ್ನು ಪೂರೈಸುವುದು
ತಾಜ್ಯವಸ್ತುಗಳನ್ನು ನೀರಿನ ಆಕರಗಳಿಗೆ ಹಾಕುವುದರಿಂದ ಆಗುವ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.
ಕೈಗಾರಿಕಾ ತಾಜ್ಯಗಳನ್ನು ನೀರಿನ ಆಕರಗಳಿಗೆ ವಿಸರ್ಜಿಸುವ ಮೊದಲು ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವುದು.
ಕಲುಷಿತ ನೀರನ್ನು ಶುದ್ದೀಕರಿಸಿ ಪುನಃ ಬಳಕೆ ಮಾಡುವುದು
ಜಲಾನಯನ ಪ್ರದೇಶಳ ಹೂಳೆತ್ತಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು.
ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡುವುದು.
ಚೆಕ್ ಡ್ಯಾಂಗಳನ್ನು ನಿರ್ಮಿಸಿ ನೀರನ್ನು ಸಂಗ್ರಹಿಸುವುದು.
ಅರಣ್ಯ ನಾಶವನ್ನು ಕಡಿಮೆ ಮಾಡಿ ನದಿಗಳ ಅಂತರ ಜೋಡಣೆಯನ್ನು ಮಾಡುವುದು.
ಕೃಷಿಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ದತಿಯನ್ನು ಅಳವಡಿಸಿಕೊಳ್ಳುವುದು.
ಮಳೆ ನೀರು ಕೊಯ್ಲಿನ ಮೂಖಾಂತರ ನೀರನ್ನು ಸಂಗ್ರಹಿಸಿ ಬಳಕೆ ಮಾಡುವುದರೊಂದಿಗೆ ಭೂಮಿಯಲ್ಲಿ ಇಂಗುವಂತೆ ಮಾಡಿ ಮರುಪೂರಣ ಮಾಡುವುದು.
ಟಿಪ್ಪಣಿ-
 ರಾಜಸ್ಥಾನದ ನಿವಾಸಿ ರಾಜೇಂದ್ರಸಿಂಗ್ ಭಾರತದ ಖ್ಯಾತ ಜಲ ಸಂರಕ್ಷಕರಾಗಿದ್ದು ಮಳೆ ನೀರು ಕೊಯ್ಲು ಮತ್ತು ಜಲ ನಿರ್ವಹಣೆಯಾಗಿ ಇವರಿಗೆ ಮ್ಯಾಗ್ಸೆಸ್ ಪ್ರಶಸ್ತಿ ದೊರೆತಿದೆ. ಇವರು ನಿರ್ಮಿಸಿದ ಜೊಹಾಡಗಳು ಅಂದರೆ ಮಳೆ ನೀರು ಸಂಗ್ರಹಣಾ ತೊಟ್ಟಿಗಳು ಮಳೆ ನೀರನ್ನು ಸಂಗ್ರಹಿಸಿಕೊಂಡು ವರ್ಷದುದ್ದಕ್ಕೂ ರಾಜಸ್ಥಾನದ ಜನತೆಗೆ ನೀರನ್ನು ಒದಗಿಸುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...