ಬೆಂಗಳೂರು: ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ನೃಪತುಂಗ ಪ್ರಶಸ್ತಿಗೆ ಈ ಬಾರಿ ದಲಿತ ಕವಿ ಡಾ. ಸಿದ್ಧಲಿಂಗಯ್ಯ ಆಯ್ಕೆಯಾಗಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಸ್ಥಾಪಿಸಿರುವ ನೃಪತುಂಗ ದತ್ತಿ ಪ್ರಶಸ್ತಿ 7ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಬುಧವಾರ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಹಿರಿಯ ಕವಿ ಡಾ. ರಂಜಾನ್ ದರ್ಗಾ, ಖ್ಯಾತ ವಿಮರ್ಶಕ ಎಸ್.ಆರ್. ವಿಜಯಶಂಕರ್, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಡಾ.ಎ.ಎನ್. ಪ್ರಕಾಶ್ಗೌಡ, ಕಾರ್ವಿುಕ ಕಲ್ಯಾಣ ಅಧಿಕಾರಿ ವಿಜಯಕುಮಾರ್ ರೈ, ಕ.ರಾ.ರ.ಸಾ. ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ ವ.ಚ. ಚನ್ನೇಗೌಡ ಒಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ಪ್ರಶಸ್ತಿಗೆ ಡಾ. ಸಿದ್ಧಲಿಂಗಯ್ಯ ಅವರನ್ನು ಆಯ್ಕೆ ಮಾಡಿದೆ. ಕಸಾಪದಲ್ಲಿ ಬಿಎಂಟಿಸಿ 1.5 ಕೋಟಿ ರೂ. ದತ್ತಿ ಸ್ಥಾಪಿಸಿದ್ದು, 2017ರಿಂದ ಪ್ರತಿವರ್ಷ ಒಬ್ಬ ಸಾಹಿತಿ ಅಥವಾ ಕನ್ನಡ ಪರ ಹೋರಾಟಗಾರರಿಗೆ ನೃಪತುಂಗ ಪ್ರಶಸ್ತಿ ನೀಡಲಾಗುತ್ತಿದೆ. ನಾಡೋಜ ಡಾ.ದೇ. ಜವರೇಗೌಡ, ಡಾ.ಜಿ.ಎಸ್. ಶಿವರುದ್ರಪ್ಪ, ಚಿದಾನಂದ ಮೂರ್ತಿ ಸೇರಿ ಈವರೆಗೆ 12 ಮಂದಿಗೆ ನೃಪತುಂಗ ಪ್ರಶಸ್ತಿ ನೀಡಲಾಗಿದೆ. 2017ನೇ ಸಾಲಿನಲ್ಲಿ ಕನ್ನಡದ ಶ್ರೇಷ್ಠ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಐವರು ಯುವ ಸಾಹಿತಿಗಳಿಗೆ ಮಯೂರವರ್ಮ ಪುರಸ್ಕಾರ
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ 45 ವರ್ಷದೊಳಗಿನ ಸಾಹಿತಿಗಳಿಗೆ ಬಿಎಂಟಿಸಿ ಕೊಡಮಾಡುವ ಮಯೂರವರ್ಮ ದತ್ತಿ ಪ್ರಶಸ್ತಿಯನ್ನು ಬುಧವಾರ ಕಸಾಪ ಘೋಷಿಸಿದೆ. ಡಾ. ಎಂ.ಎನ್. ನಂದೀಶ್ (ನಂದೀಶ್ ಹಂಚೆ), ಡಾ. ಶಿವರಾಜ ಬಿ.ಇ. (ಬ್ಯಾಡರಹಳ್ಳಿ), ಲಕ್ಷ್ಮಣ ನಂದಿಹಾಳ, ಕೃಷ್ಣಪ್ಪ ಎಸ್. ಗುಡಗುಡಿ ಹಾಗೂ ಗಣಪತಿ ಗೋ. ಚಲವಾದಿ ಅವರು ಮಯೂರವರ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿದೆ. ನೃಪತುಂಗ ಹಾಗೂ ಮಯೂರವರ್ಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.9ರಂದು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಸ್ಥಾಪಿಸಿರುವ ನೃಪತುಂಗ ದತ್ತಿ ಪ್ರಶಸ್ತಿ 7ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ. ಬುಧವಾರ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ನೇತೃತ್ವದಲ್ಲಿ ಹಿರಿಯ ಕವಿ ಡಾ. ರಂಜಾನ್ ದರ್ಗಾ, ಖ್ಯಾತ ವಿಮರ್ಶಕ ಎಸ್.ಆರ್. ವಿಜಯಶಂಕರ್, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಡಾ.ಎ.ಎನ್. ಪ್ರಕಾಶ್ಗೌಡ, ಕಾರ್ವಿುಕ ಕಲ್ಯಾಣ ಅಧಿಕಾರಿ ವಿಜಯಕುಮಾರ್ ರೈ, ಕ.ರಾ.ರ.ಸಾ. ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ ವ.ಚ. ಚನ್ನೇಗೌಡ ಒಳಗೊಂಡ ಆಯ್ಕೆ ಸಮಿತಿ ಸರ್ವಾನುಮತದಿಂದ ಪ್ರಶಸ್ತಿಗೆ ಡಾ. ಸಿದ್ಧಲಿಂಗಯ್ಯ ಅವರನ್ನು ಆಯ್ಕೆ ಮಾಡಿದೆ. ಕಸಾಪದಲ್ಲಿ ಬಿಎಂಟಿಸಿ 1.5 ಕೋಟಿ ರೂ. ದತ್ತಿ ಸ್ಥಾಪಿಸಿದ್ದು, 2017ರಿಂದ ಪ್ರತಿವರ್ಷ ಒಬ್ಬ ಸಾಹಿತಿ ಅಥವಾ ಕನ್ನಡ ಪರ ಹೋರಾಟಗಾರರಿಗೆ ನೃಪತುಂಗ ಪ್ರಶಸ್ತಿ ನೀಡಲಾಗುತ್ತಿದೆ. ನಾಡೋಜ ಡಾ.ದೇ. ಜವರೇಗೌಡ, ಡಾ.ಜಿ.ಎಸ್. ಶಿವರುದ್ರಪ್ಪ, ಚಿದಾನಂದ ಮೂರ್ತಿ ಸೇರಿ ಈವರೆಗೆ 12 ಮಂದಿಗೆ ನೃಪತುಂಗ ಪ್ರಶಸ್ತಿ ನೀಡಲಾಗಿದೆ. 2017ನೇ ಸಾಲಿನಲ್ಲಿ ಕನ್ನಡದ ಶ್ರೇಷ್ಠ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಐವರು ಯುವ ಸಾಹಿತಿಗಳಿಗೆ ಮಯೂರವರ್ಮ ಪುರಸ್ಕಾರ
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ 45 ವರ್ಷದೊಳಗಿನ ಸಾಹಿತಿಗಳಿಗೆ ಬಿಎಂಟಿಸಿ ಕೊಡಮಾಡುವ ಮಯೂರವರ್ಮ ದತ್ತಿ ಪ್ರಶಸ್ತಿಯನ್ನು ಬುಧವಾರ ಕಸಾಪ ಘೋಷಿಸಿದೆ. ಡಾ. ಎಂ.ಎನ್. ನಂದೀಶ್ (ನಂದೀಶ್ ಹಂಚೆ), ಡಾ. ಶಿವರಾಜ ಬಿ.ಇ. (ಬ್ಯಾಡರಹಳ್ಳಿ), ಲಕ್ಷ್ಮಣ ನಂದಿಹಾಳ, ಕೃಷ್ಣಪ್ಪ ಎಸ್. ಗುಡಗುಡಿ ಹಾಗೂ ಗಣಪತಿ ಗೋ. ಚಲವಾದಿ ಅವರು ಮಯೂರವರ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿದೆ. ನೃಪತುಂಗ ಹಾಗೂ ಮಯೂರವರ್ಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.9ರಂದು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ