ಚಿಲ್ಲರೆ ವ್ಯಾಪಾರವು ವ್ಯವಸ್ಥಿತ ರೀತಿಯಲ್ಲಿ ತ್ವರಿತ ಬೆಳವಣಿಗೆ ದಾಖಲಿಸುವ ಉದ್ದೇಶದಿಂದ ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ.
ಈ ಸಂಬಂಧ ಕಾರ್ಯಪಡೆ ರಚಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಗ್ರಾಹಕ ವ್ಯವಹಾರ ಸಚಿವಾಲಯದ ಗಮನ ಸೆಳೆದಿದೆ. ಕೈಗಾರಿಕಾ ಸಚಿವ ಸುರೇಶ್ ಪ್ರಭು ಅವರು, ಗ್ರಾಹಕ ವ್ಯವಹಾರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರಿಗೆ ಪತ್ರ ಬರೆದಿದ್ದಾರೆ.
ಕಾರ್ಯಪಡೆಯಲ್ಲಿ ವಿವಿಧ ಭಾಗಿದಾರರಿಗೆ ಪ್ರಾತಿನಿಧ್ಯ ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಚಿಲ್ಲರೆ (ರಿಟೇಲ್) ವ್ಯಾಪಾರವು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಗ್ರಾಹಕರ ಹಿತಾಸಕ್ತಿ ಬಲಿಗೊಡದೆ ವ್ಯಾಪಾರ ಉತ್ತೇಜಿಸುವ ರೀತಿಯಲ್ಲಿ ಹೊಸ ನೀತಿ ರೂಪಿಸಬೇಕಾಗಿದೆ. ವ್ಯಾಪಾರ ನಿಯಂತ್ರಣ ವಿಷಯದಲ್ಲಿ ಗ್ರಾಹಕರ ವ್ಯವಹಾರ ಸಚಿವಾಲಯವು ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಗ್ರಾಹಕರ ವ್ಯವಹಾರಗಳ ಸಚಿವಾಲಯವು ಈಗಾಗಲೇ ಇ–ವಾಣಿಜ್ಯ (ಅಂತರ್ಜಾಲ ವಹಿವಾಟು) ನಿಯಂತ್ರಣದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಹಂತದಲ್ಲಿ ರಿಟೇಲ್ ವ್ಯಾಪಾರಕ್ಕೂ ಪ್ರತ್ಯೇಕ ನೀತಿ ರೂಪಿಸುವುದು ಸೂಕ್ತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರಾಷ್ಟ್ರೀಯ ನೀತಿ ರೂಪಿಸಲು ಮತ್ತು ಆಂತರಿಕ ವ್ಯಾಪಾರಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಲು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದರಿಂದ ಈ ವಿಷಯಕ್ಕೆ ಮಹತ್ವ ಬಂದಿದೆ.
ಈ ಕ್ರಮಗಳನ್ನು ಜಾರಿಗೆ ತಂದರೆ, ಆಂತರಿಕ ವ್ಯಾಪಾರ – ವಹಿವಾಟು ಬಲಗೊಳ್ಳುವುದಲ್ಲದೆ, ದೇಶದ ರಫ್ತು ವಹಿವಾಟಿನಲ್ಲಿ ಸುಧಾರಣೆ ಕಂಡು ಬರಲಿದೆ. ಹೊಸ ನೀತಿ ರೂಪಿಸುವಾಗ ವಾಣಿಜ್ಯ ಸಚಿವಾಲಯವು ರಾಜ್ಯ ಸರ್ಕಾರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ.
ದೇಶದಾದ್ಯಂತ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 6.5 ಕೋಟಿ ಸಣ್ಣ ವ್ಯಾಪಾರಿಗಳು ತೊಡಗಿಕೊಂಡಿದ್ದಾರೆ.
ಈ ಸಂಬಂಧ ಕಾರ್ಯಪಡೆ ರಚಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಗ್ರಾಹಕ ವ್ಯವಹಾರ ಸಚಿವಾಲಯದ ಗಮನ ಸೆಳೆದಿದೆ. ಕೈಗಾರಿಕಾ ಸಚಿವ ಸುರೇಶ್ ಪ್ರಭು ಅವರು, ಗ್ರಾಹಕ ವ್ಯವಹಾರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರಿಗೆ ಪತ್ರ ಬರೆದಿದ್ದಾರೆ.
ಕಾರ್ಯಪಡೆಯಲ್ಲಿ ವಿವಿಧ ಭಾಗಿದಾರರಿಗೆ ಪ್ರಾತಿನಿಧ್ಯ ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಚಿಲ್ಲರೆ (ರಿಟೇಲ್) ವ್ಯಾಪಾರವು ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಗ್ರಾಹಕರ ಹಿತಾಸಕ್ತಿ ಬಲಿಗೊಡದೆ ವ್ಯಾಪಾರ ಉತ್ತೇಜಿಸುವ ರೀತಿಯಲ್ಲಿ ಹೊಸ ನೀತಿ ರೂಪಿಸಬೇಕಾಗಿದೆ. ವ್ಯಾಪಾರ ನಿಯಂತ್ರಣ ವಿಷಯದಲ್ಲಿ ಗ್ರಾಹಕರ ವ್ಯವಹಾರ ಸಚಿವಾಲಯವು ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಗ್ರಾಹಕರ ವ್ಯವಹಾರಗಳ ಸಚಿವಾಲಯವು ಈಗಾಗಲೇ ಇ–ವಾಣಿಜ್ಯ (ಅಂತರ್ಜಾಲ ವಹಿವಾಟು) ನಿಯಂತ್ರಣದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಈ ಹಂತದಲ್ಲಿ ರಿಟೇಲ್ ವ್ಯಾಪಾರಕ್ಕೂ ಪ್ರತ್ಯೇಕ ನೀತಿ ರೂಪಿಸುವುದು ಸೂಕ್ತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ರಾಷ್ಟ್ರೀಯ ನೀತಿ ರೂಪಿಸಲು ಮತ್ತು ಆಂತರಿಕ ವ್ಯಾಪಾರಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಲು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದರಿಂದ ಈ ವಿಷಯಕ್ಕೆ ಮಹತ್ವ ಬಂದಿದೆ.
ಈ ಕ್ರಮಗಳನ್ನು ಜಾರಿಗೆ ತಂದರೆ, ಆಂತರಿಕ ವ್ಯಾಪಾರ – ವಹಿವಾಟು ಬಲಗೊಳ್ಳುವುದಲ್ಲದೆ, ದೇಶದ ರಫ್ತು ವಹಿವಾಟಿನಲ್ಲಿ ಸುಧಾರಣೆ ಕಂಡು ಬರಲಿದೆ. ಹೊಸ ನೀತಿ ರೂಪಿಸುವಾಗ ವಾಣಿಜ್ಯ ಸಚಿವಾಲಯವು ರಾಜ್ಯ ಸರ್ಕಾರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ.
ದೇಶದಾದ್ಯಂತ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 6.5 ಕೋಟಿ ಸಣ್ಣ ವ್ಯಾಪಾರಿಗಳು ತೊಡಗಿಕೊಂಡಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ