ರಾಜ್ಯದಲ್ಲೇ ಪ್ರಪ್ರಥಮವಾಗಿ ಚಿರತೆಗಳ ಮೇಲೆ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ನೇತೃತ್ವದ ಮೈಸೂರಿನ ನೇಚರ್ ಕನ್ಸರ್ವೆಷನ್ ಫೌಂಡೇಷನ್ ಸುದೀರ್ಘ ಅಧ್ಯಯನ ನಡೆಸಿದ್ದು, ಅದರನ್ವಯ 2,500 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ.
ಈ ಮೂಲಕ ಚಿರತೆ ಸಂಖ್ಯೆಯನ್ನು ರಾಜ್ಯವಾರು ಅಂದಾಜಿಸಿದ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡ ಅಧ್ಯಯನ ನಡೆಸಿದೆ. ಇತ್ತೀಚೆಗೆ ಈ ತಂಡ, ಕ್ಯಾಮೆರಾ ಟ್ರ್ಯಾಪ್ನಿಂದ ಪಡೆದುಕೊಂಡ 363 ಚಿರತೆಗಳ ಚಿತ್ರಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದೆ. ಅದರ ಆಧಾರದ ಮೇಲೆ ರಾಜ್ಯದ ಚಿರತೆಗಳ ಸಂಖ್ಯೆ ಅಂದಾಜು 2,500 ಎಂದು ಲೆಕ್ಕ ಹಾಕಲಾಗಿದೆ.
2012ರಿಂದ ಅಧ್ಯಯನ: ರಾಜ್ಯಾದ್ಯಂತ ಹಲವು ಪ್ರದೇಶಗಳಲ್ಲಿ ರಕ್ಷಿತಾರಣ್ಯಗಳು, ಕಲ್ಲುಬಂಡೆಗಳ ಗುಡ್ಡಗಳು, ಖಾಸಗಿ ಜಮೀನು ಮತ್ತಿತರ ಚಿರತೆಗಳ ವಾಸಸ್ಥಾನವಿರಬಹುದಾದ ಪ್ರದೇಶಗಳಲ್ಲಿ 2012ರಿಂದ ಈ ಅಧ್ಯಯನ ಕೈಗೊಳ್ಳಲಾಗಿದೆ. ಚಿರತೆಗಳ ಮೇಲೆ ಇಷ್ಟು ದೊಡ್ಡ ಕಾರ್ಯವ್ಯಾಪ್ತಿಯಲ್ಲಿ ಕೈಗೊಂಡ ಅಧ್ಯಯನ ದೇಶದಲ್ಲೇ ಮೊದಲನೆಯದು ಎನ್ನಲಾಗಿದೆ. ಇಲ್ಲಿಯತನಕ ಮಲೆ ಮಹದೇಶ್ವರ, ಕಾವೇರಿ ನದಿಪಾತ್ರ, ಬಿಳಿಗಿರಿರಂಗನ ಬೆಟ್ಟ, ತಿಮ್ಮಲಾಪುರ ವನ್ಯಜೀವಿಧಾಮಗಳು, ಜಯಮಂಗಲಿ ಸಂರಕ್ಷಿತ ಪ್ರದೇಶ, ತುಮಕೂರು, ರಾಮನಗರ, ಮೈಸೂರು, ಬೆಂ. ಗ್ರಾಮಾಂತರ, ಬೆಂಗಳೂರು ನಗರ, ಭದ್ರಾವತಿ, ಬಳ್ಳಾರಿ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಸಂಜಯ್ ಗುಬ್ಬಿ ತಿಳಿಸಿದ್ದಾರೆ.
ಸರ್ಕಾರಕ್ಕೆ ಪ್ರಸ್ತಾವನೆ
ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಚಿರತೆ ಸಾಂದ್ರತೆ ಹೆಚ್ಚಿರುವ ಭದ್ರಾವತಿ ವಿಭಾಗದ ಕೆಲ ಆಯ್ದ (ಕುಕ್ಕಾವಾಡಿ-ಉಬ್ರಾಣಿ, ಹಾದಿಕೆರೆ, ಹಣ್ಣೇ, ರಂಗಯ್ಯನಗಿರಿ) ಪ್ರದೇಶಗಳು, ಹಾಗೂ ತುಮಕೂರು ವಿಭಾಗದಲ್ಲಿ ಸಣ್ಣ ಹುಲ್ಲೆ, ಚಿರತೆ, ಕತ್ತೆಕಿರುಬ, ಕೊಂಡುಕುರಿಗಳಿರುವ ಬುಕ್ಕಾಪಟ್ಟಣದ (ಬುಕ್ಕಾಪಟ್ಟಣ, ಮುತ್ತಗದಹಳ್ಳಿ, ಸುವರ್ಣಾವತಿ) ಕಾಡುಗಳನ್ನು ವನ್ಯಜೀವಿಧಾಮಗಳನ್ನಾಗಿ ಘೊಷಿಸಲು ಪ್ರಸ್ತಾವನೆಯನ್ನು ಸಂಜಯ್ ಗುಬ್ಬಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಗುರುತು ಹೇಗೆ?
ಪ್ರತಿ ಚಿರತೆಯ ಮೈಮೇಲಿರುವ ವಿಶಿಷ್ಟ ಚುಕ್ಕೆಗಳ ಆಧಾರದಿಂದ ವೈಯಕ್ತಿಕ ಚಿರತೆಗಳನ್ನು ಗುರುತಿಸಿ, ಸಂಖ್ಯಾಶಾಸ್ತ್ರ ವಿಧಾನಗಳನ್ನು ಉಪಯೋಗಿಸಿ ಒಂದು ಪ್ರದೇಶದಲ್ಲಿನ ಚಿರತೆಗಳ ಸಂಖ್ಯೆ ಮತ್ತು ಅವುಗಳ ಸಾಂದ್ರತೆ (ಒಂದು ಪ್ರದೇಶದಲ್ಲಿರುವ ಚಿರತೆಗಳ ಸಂಖ್ಯೆ) ಅಂದಾಜಿಸಲಾಗಿದೆ. ಸೆರೆಹಿಡಿ- ಮರು ಸೆರೆಹಿಡಿ ವಿಧಾನ ಅನುಸರಿಸಿ ಚಿರತೆಗಳ ಸಾಂದ್ರತೆ ಅಂದಾಜಿಸಲಾಗಿದೆ. ಉತ್ತರ ಅಮೆರಿಕದಲ್ಲಿ ಇದೇ ವಿಧಾನದಲ್ಲಿ ಮೀನುಗಳ ಸಂಖ್ಯೆ ಅಂದಾಜಿಸಲಾಗಿತ್ತು. ಹುಲಿ, ಹಂದಿ, ಮೀನು, ಘೕಂಡಾಮೃಗ, ಜಿರಾಫೆ ಮತ್ತಿತರ ವನ್ಯಜೀವಿಗಳ ಸಂಖ್ಯೆ ಅಂದಾಜಿಸಲು ಇದೇ ವಿಧಾನ ಅನುಸರಿಸಲಾಗುತ್ತಿದೆ. ಅಧ್ಯಯನ ಸಂದರ್ಭದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ತರಕರಡಿಯ ಇರುವಿಕೆ ದಾಖಲಾಗಿದೆ. ಜತೆಗೆ ದಕ್ಷಿಣ ಕರ್ನಾಟಕದಲ್ಲಿ ಸಣ್ಣ ಹುಲ್ಲೆಯ ಉಪಸ್ಥಿತಿ ಬೆಳಕಿಗೆ ಬಂದಿದೆ. ವನ್ಯಜೀವಿಗಳ ದೃಷ್ಟಿಕೋನದಲ್ಲಿ ಪ್ರಮುಖವಾದ ಹಲವು ತಾಣಗಳನ್ನು ಈ ಅಧ್ಯಯನದಿಂದ ಗುರುತಿಸಲಾಗಿದೆ. ತಂಡದಲ್ಲಿ ಎನ್.ಎಸ್. ಹರೀಶ್, ಎಚ್.ಸಿ. ಪೂರ್ಣೆಶ, ಆಶ್ರಿತ ಅನೂಪ್, ರಶ್ಮಿ ಭಟ್, ಸಂದೇಶ ಅಪ್ಪು ನಾಯ್್ಕ ಎಲ್. ಜ್ಞಾನೇಂದ್ರ, ಜಿ. ರವಿದಾಸ್ ಮತ್ತಿತರರಿದ್ದರು.
ರಾಷ್ಟ್ರೀಯ ಉದ್ಯಾನ ಸಂರಕ್ಷಿಸಲು ರಾಜ್ಯ ವಿಫಲ
ಬೆಂಗಳೂರು: ವ್ಯಾಪಕ ನಗರೀಕರಣ ಮತ್ತು ಕೈಗಾರಿಕೀಕರಣದ ರಾಷ್ಟ್ರೀಯ ಉದ್ಯಾನಕ್ಕೆ ಸೇರಿ 260 ಚ.ಕಿ.ಮೀ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯುಂಟಾಗುತ್ತಿದೆ ಎಂದು ಯುನೈಟೆಡ್ ಬೆಂಗಳೂರು ಸಂಚಾಲಕ ಎನ್.ಆರ್.ಸುರೇಶ್ ಆರೋಪಿಸಿದ್ದಾರೆ. ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾಣ್ಯಗಳ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಗುರುತಿಸಿ ಅಧಿಸೂಚನೆ ಹೊರಡಿಸಬೇಕೆಂದು ಎಲ್ಲ ರಾಜ್ಯಗಳಿಗೂ ಕೇಂದ್ರ ಪರಿಸರ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ರಾಷ್ಟ್ರೀಯ ಉದ್ಯಾನವನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೂ.2016 ರಂದು ಪ್ರಕಟಿಸಿದ ಕರಡು ಅಧಿಸೂಚನೆಯ ಪ್ರಕಾರ 268.96 ಚ.ಕಿ.ಮೀ. ಪರಿಸರ ಸೂಕ್ಷ್ಮ ವಲಯವನ್ನು ರಾಜ್ಯ ಸರ್ಕಾರವು 181.57 ಚ.ಕಿ.ಮೀ ಗೆ ಕಡಿಮೆ ಮಾಡಲು ಯತ್ನಿಸಿತ್ತು. ಅಧಿಸೂಚನೆಗಳ ಕಾಲಾವಧಿ ಮುಗಿದಿರುವುದರಿಂದ ಕೇಂದ್ರ ಸರ್ಕಾರವು ಹೊಸ ಅಧಿಸೂಚನೆ ಹೊರಡಿಸಲು ನೀಡಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು. ಸದಸ್ಯ ವಿಜಯ್ ನಿಶಾಂತ್ ಮತ್ತಿತರರಿದ್ದರು.
ಸಿಎಂಗೆ ಆಹ್ವಾನ
ಬನ್ನೇರುಘಟ್ಡ ರಾಷ್ಟ್ರೀಯ ಉದ್ಯಾನವನದಲ್ಲಿ 3 ವರ್ಷದಿಂದ ಮೈನಿಂಗ್ ವ್ಯವಹಾರ ನಡೆಯುತ್ತಿದ್ದು, ಇದರಿಂದ ಬನ್ನೇರುಘಟ್ಟ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅರಣ್ಯ ವಿಭಾಗದವರಿಗೆ ಹಾಗೂ ಸರ್ಕಾರಕ್ಕೆ ಎಲ್ಲ ವಿಷಯ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಸಿಎಂ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರತಿಕ್ರಿಯಿಸಿಲ್ಲ. ಇಂದಿರಾನಗರ ಕ್ಲಬ್ನಲ್ಲಿ ಸಂವಹನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಿಎಂ ಬಂದು ಸಮಸ್ಯೆ ಆಲಿಸಲಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆಯಿಂದ ಜಾಗೃತಿ ಜಾಥಾ
ಬೆಂಗಳೂರು: ಅರಣ್ಯ ಇಲಾಖೆ ಅ.2 ರಂದು ಬೆಳಗ್ಗೆ 8ಗಂಟೆಗೆ ಹೈಕೋರ್ಟ್ ಮುಂಭಾಗ ವನ್ಯಜೀವಿ ಸಪ್ತಾಹ ಅಂಗವಾಗಿ ಜಾಗೃತಿ ಜಾಥಾ ಏರ್ಪಡಿಸಿದೆ. ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅತಿಥಿಗಳಾಗಿ ಅರಣ್ಯ ಸಚಿವ ಆರ್.ಶಂಕರ್, ನಟ ದರ್ಶನ್ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರದಲ್ಲಿಯೇ ಅತಿಹೆಚ್ಚು ಹುಲಿ, ಚಿರತೆ, ಆನೆ ಹಾಗೂ ಸಿಂಗಳೀಕಗಳ ತಾಣ ಕರ್ನಾಟಕ. ಈ ಹೆಮ್ಮೆಯ ಕೊಡುಗೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಪ್ರತಿವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ವನ್ಯಜೀವಿ ಸಪ್ತಾಹ ಆಚರಿಸಿಕೊಂಡು ಬರುತ್ತಿದೆ. ಸಾರ್ವ ಜನಿಕರಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ಅರಣ್ಯ ಇಲಾಖೆಯಿಂದ ಹೈಕೋರ್ಟ್ ಮುಂಭಾಗದಿಂದ ಲಾಲ್ಬಾಗ್ವರೆಗೆ ಜಾಗೃತಿ ನಡಿಗೆ ಏರ್ಪಡಿಸ ಲಾಗಿದೆ ಎಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ. ಜಯರಾಂ ತಿಳಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳು
ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹ ಅಂಗವಾಗಿ ಅ.3ರಿಂದ 9ರವರೆಗೆ ಬನ್ನೇರುಘಟ್ಟ ಉದ್ಯಾನದಲ್ಲಿ ಬೆಳಗ್ಗೆ 6-30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನೇಚರ್ ಟ್ರಯಲ್ ಹಾಗೂ ವನ್ಯಜೀವಿ ಕಿರು ಚಿತ್ರ ಪ್ರದರ್ಶನ, ವನ್ಯಜೀವಿ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.9ರಂದು ಬೆಳಗ್ಗೆ 10 ಗಂಟೆಗೆ ಸೈಕಲ್ ಜಾಥಾ, ಬೆಳಗ್ಗೆ 8 ಗಂಟೆಯಿಂದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲ ವಿ.ಆರ್. ವಾಲಾ ಆಗಮಿಸಲಿದ್ದಾರೆ.
ಈ ಮೂಲಕ ಚಿರತೆ ಸಂಖ್ಯೆಯನ್ನು ರಾಜ್ಯವಾರು ಅಂದಾಜಿಸಿದ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡ ಅಧ್ಯಯನ ನಡೆಸಿದೆ. ಇತ್ತೀಚೆಗೆ ಈ ತಂಡ, ಕ್ಯಾಮೆರಾ ಟ್ರ್ಯಾಪ್ನಿಂದ ಪಡೆದುಕೊಂಡ 363 ಚಿರತೆಗಳ ಚಿತ್ರಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದೆ. ಅದರ ಆಧಾರದ ಮೇಲೆ ರಾಜ್ಯದ ಚಿರತೆಗಳ ಸಂಖ್ಯೆ ಅಂದಾಜು 2,500 ಎಂದು ಲೆಕ್ಕ ಹಾಕಲಾಗಿದೆ.
2012ರಿಂದ ಅಧ್ಯಯನ: ರಾಜ್ಯಾದ್ಯಂತ ಹಲವು ಪ್ರದೇಶಗಳಲ್ಲಿ ರಕ್ಷಿತಾರಣ್ಯಗಳು, ಕಲ್ಲುಬಂಡೆಗಳ ಗುಡ್ಡಗಳು, ಖಾಸಗಿ ಜಮೀನು ಮತ್ತಿತರ ಚಿರತೆಗಳ ವಾಸಸ್ಥಾನವಿರಬಹುದಾದ ಪ್ರದೇಶಗಳಲ್ಲಿ 2012ರಿಂದ ಈ ಅಧ್ಯಯನ ಕೈಗೊಳ್ಳಲಾಗಿದೆ. ಚಿರತೆಗಳ ಮೇಲೆ ಇಷ್ಟು ದೊಡ್ಡ ಕಾರ್ಯವ್ಯಾಪ್ತಿಯಲ್ಲಿ ಕೈಗೊಂಡ ಅಧ್ಯಯನ ದೇಶದಲ್ಲೇ ಮೊದಲನೆಯದು ಎನ್ನಲಾಗಿದೆ. ಇಲ್ಲಿಯತನಕ ಮಲೆ ಮಹದೇಶ್ವರ, ಕಾವೇರಿ ನದಿಪಾತ್ರ, ಬಿಳಿಗಿರಿರಂಗನ ಬೆಟ್ಟ, ತಿಮ್ಮಲಾಪುರ ವನ್ಯಜೀವಿಧಾಮಗಳು, ಜಯಮಂಗಲಿ ಸಂರಕ್ಷಿತ ಪ್ರದೇಶ, ತುಮಕೂರು, ರಾಮನಗರ, ಮೈಸೂರು, ಬೆಂ. ಗ್ರಾಮಾಂತರ, ಬೆಂಗಳೂರು ನಗರ, ಭದ್ರಾವತಿ, ಬಳ್ಳಾರಿ ಮತ್ತು ಚಿತ್ರದುರ್ಗ ವಿಭಾಗಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಸಂಜಯ್ ಗುಬ್ಬಿ ತಿಳಿಸಿದ್ದಾರೆ.
ಸರ್ಕಾರಕ್ಕೆ ಪ್ರಸ್ತಾವನೆ
ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ಚಿರತೆ ಸಾಂದ್ರತೆ ಹೆಚ್ಚಿರುವ ಭದ್ರಾವತಿ ವಿಭಾಗದ ಕೆಲ ಆಯ್ದ (ಕುಕ್ಕಾವಾಡಿ-ಉಬ್ರಾಣಿ, ಹಾದಿಕೆರೆ, ಹಣ್ಣೇ, ರಂಗಯ್ಯನಗಿರಿ) ಪ್ರದೇಶಗಳು, ಹಾಗೂ ತುಮಕೂರು ವಿಭಾಗದಲ್ಲಿ ಸಣ್ಣ ಹುಲ್ಲೆ, ಚಿರತೆ, ಕತ್ತೆಕಿರುಬ, ಕೊಂಡುಕುರಿಗಳಿರುವ ಬುಕ್ಕಾಪಟ್ಟಣದ (ಬುಕ್ಕಾಪಟ್ಟಣ, ಮುತ್ತಗದಹಳ್ಳಿ, ಸುವರ್ಣಾವತಿ) ಕಾಡುಗಳನ್ನು ವನ್ಯಜೀವಿಧಾಮಗಳನ್ನಾಗಿ ಘೊಷಿಸಲು ಪ್ರಸ್ತಾವನೆಯನ್ನು ಸಂಜಯ್ ಗುಬ್ಬಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಗುರುತು ಹೇಗೆ?
ಪ್ರತಿ ಚಿರತೆಯ ಮೈಮೇಲಿರುವ ವಿಶಿಷ್ಟ ಚುಕ್ಕೆಗಳ ಆಧಾರದಿಂದ ವೈಯಕ್ತಿಕ ಚಿರತೆಗಳನ್ನು ಗುರುತಿಸಿ, ಸಂಖ್ಯಾಶಾಸ್ತ್ರ ವಿಧಾನಗಳನ್ನು ಉಪಯೋಗಿಸಿ ಒಂದು ಪ್ರದೇಶದಲ್ಲಿನ ಚಿರತೆಗಳ ಸಂಖ್ಯೆ ಮತ್ತು ಅವುಗಳ ಸಾಂದ್ರತೆ (ಒಂದು ಪ್ರದೇಶದಲ್ಲಿರುವ ಚಿರತೆಗಳ ಸಂಖ್ಯೆ) ಅಂದಾಜಿಸಲಾಗಿದೆ. ಸೆರೆಹಿಡಿ- ಮರು ಸೆರೆಹಿಡಿ ವಿಧಾನ ಅನುಸರಿಸಿ ಚಿರತೆಗಳ ಸಾಂದ್ರತೆ ಅಂದಾಜಿಸಲಾಗಿದೆ. ಉತ್ತರ ಅಮೆರಿಕದಲ್ಲಿ ಇದೇ ವಿಧಾನದಲ್ಲಿ ಮೀನುಗಳ ಸಂಖ್ಯೆ ಅಂದಾಜಿಸಲಾಗಿತ್ತು. ಹುಲಿ, ಹಂದಿ, ಮೀನು, ಘೕಂಡಾಮೃಗ, ಜಿರಾಫೆ ಮತ್ತಿತರ ವನ್ಯಜೀವಿಗಳ ಸಂಖ್ಯೆ ಅಂದಾಜಿಸಲು ಇದೇ ವಿಧಾನ ಅನುಸರಿಸಲಾಗುತ್ತಿದೆ. ಅಧ್ಯಯನ ಸಂದರ್ಭದಲ್ಲಿ ಕರ್ನಾಟಕದಲ್ಲೇ ಮೊದಲ ಬಾರಿಗೆ ತರಕರಡಿಯ ಇರುವಿಕೆ ದಾಖಲಾಗಿದೆ. ಜತೆಗೆ ದಕ್ಷಿಣ ಕರ್ನಾಟಕದಲ್ಲಿ ಸಣ್ಣ ಹುಲ್ಲೆಯ ಉಪಸ್ಥಿತಿ ಬೆಳಕಿಗೆ ಬಂದಿದೆ. ವನ್ಯಜೀವಿಗಳ ದೃಷ್ಟಿಕೋನದಲ್ಲಿ ಪ್ರಮುಖವಾದ ಹಲವು ತಾಣಗಳನ್ನು ಈ ಅಧ್ಯಯನದಿಂದ ಗುರುತಿಸಲಾಗಿದೆ. ತಂಡದಲ್ಲಿ ಎನ್.ಎಸ್. ಹರೀಶ್, ಎಚ್.ಸಿ. ಪೂರ್ಣೆಶ, ಆಶ್ರಿತ ಅನೂಪ್, ರಶ್ಮಿ ಭಟ್, ಸಂದೇಶ ಅಪ್ಪು ನಾಯ್್ಕ ಎಲ್. ಜ್ಞಾನೇಂದ್ರ, ಜಿ. ರವಿದಾಸ್ ಮತ್ತಿತರರಿದ್ದರು.
ರಾಷ್ಟ್ರೀಯ ಉದ್ಯಾನ ಸಂರಕ್ಷಿಸಲು ರಾಜ್ಯ ವಿಫಲ
ಬೆಂಗಳೂರು: ವ್ಯಾಪಕ ನಗರೀಕರಣ ಮತ್ತು ಕೈಗಾರಿಕೀಕರಣದ ರಾಷ್ಟ್ರೀಯ ಉದ್ಯಾನಕ್ಕೆ ಸೇರಿ 260 ಚ.ಕಿ.ಮೀ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿಯುಂಟಾಗುತ್ತಿದೆ ಎಂದು ಯುನೈಟೆಡ್ ಬೆಂಗಳೂರು ಸಂಚಾಲಕ ಎನ್.ಆರ್.ಸುರೇಶ್ ಆರೋಪಿಸಿದ್ದಾರೆ. ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾಣ್ಯಗಳ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಸೂಕ್ಷ್ಮ ವಲಯ ಎಂದು ಗುರುತಿಸಿ ಅಧಿಸೂಚನೆ ಹೊರಡಿಸಬೇಕೆಂದು ಎಲ್ಲ ರಾಜ್ಯಗಳಿಗೂ ಕೇಂದ್ರ ಪರಿಸರ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ರಾಷ್ಟ್ರೀಯ ಉದ್ಯಾನವನ್ನು ಸಂರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜೂ.2016 ರಂದು ಪ್ರಕಟಿಸಿದ ಕರಡು ಅಧಿಸೂಚನೆಯ ಪ್ರಕಾರ 268.96 ಚ.ಕಿ.ಮೀ. ಪರಿಸರ ಸೂಕ್ಷ್ಮ ವಲಯವನ್ನು ರಾಜ್ಯ ಸರ್ಕಾರವು 181.57 ಚ.ಕಿ.ಮೀ ಗೆ ಕಡಿಮೆ ಮಾಡಲು ಯತ್ನಿಸಿತ್ತು. ಅಧಿಸೂಚನೆಗಳ ಕಾಲಾವಧಿ ಮುಗಿದಿರುವುದರಿಂದ ಕೇಂದ್ರ ಸರ್ಕಾರವು ಹೊಸ ಅಧಿಸೂಚನೆ ಹೊರಡಿಸಲು ನೀಡಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು. ಸದಸ್ಯ ವಿಜಯ್ ನಿಶಾಂತ್ ಮತ್ತಿತರರಿದ್ದರು.
ಸಿಎಂಗೆ ಆಹ್ವಾನ
ಬನ್ನೇರುಘಟ್ಡ ರಾಷ್ಟ್ರೀಯ ಉದ್ಯಾನವನದಲ್ಲಿ 3 ವರ್ಷದಿಂದ ಮೈನಿಂಗ್ ವ್ಯವಹಾರ ನಡೆಯುತ್ತಿದ್ದು, ಇದರಿಂದ ಬನ್ನೇರುಘಟ್ಟ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅರಣ್ಯ ವಿಭಾಗದವರಿಗೆ ಹಾಗೂ ಸರ್ಕಾರಕ್ಕೆ ಎಲ್ಲ ವಿಷಯ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಸಿಎಂ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರತಿಕ್ರಿಯಿಸಿಲ್ಲ. ಇಂದಿರಾನಗರ ಕ್ಲಬ್ನಲ್ಲಿ ಸಂವಹನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಿಎಂ ಬಂದು ಸಮಸ್ಯೆ ಆಲಿಸಲಿ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮನವಿ ಮಾಡಿದ್ದಾರೆ.
ಅರಣ್ಯ ಇಲಾಖೆಯಿಂದ ಜಾಗೃತಿ ಜಾಥಾ
ಬೆಂಗಳೂರು: ಅರಣ್ಯ ಇಲಾಖೆ ಅ.2 ರಂದು ಬೆಳಗ್ಗೆ 8ಗಂಟೆಗೆ ಹೈಕೋರ್ಟ್ ಮುಂಭಾಗ ವನ್ಯಜೀವಿ ಸಪ್ತಾಹ ಅಂಗವಾಗಿ ಜಾಗೃತಿ ಜಾಥಾ ಏರ್ಪಡಿಸಿದೆ. ಸಿಎಂ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅತಿಥಿಗಳಾಗಿ ಅರಣ್ಯ ಸಚಿವ ಆರ್.ಶಂಕರ್, ನಟ ದರ್ಶನ್ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರದಲ್ಲಿಯೇ ಅತಿಹೆಚ್ಚು ಹುಲಿ, ಚಿರತೆ, ಆನೆ ಹಾಗೂ ಸಿಂಗಳೀಕಗಳ ತಾಣ ಕರ್ನಾಟಕ. ಈ ಹೆಮ್ಮೆಯ ಕೊಡುಗೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಪ್ರತಿವರ್ಷ ಅಕ್ಟೋಬರ್ ಮೊದಲ ವಾರದಲ್ಲಿ ವನ್ಯಜೀವಿ ಸಪ್ತಾಹ ಆಚರಿಸಿಕೊಂಡು ಬರುತ್ತಿದೆ. ಸಾರ್ವ ಜನಿಕರಲ್ಲಿ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ಅರಣ್ಯ ಇಲಾಖೆಯಿಂದ ಹೈಕೋರ್ಟ್ ಮುಂಭಾಗದಿಂದ ಲಾಲ್ಬಾಗ್ವರೆಗೆ ಜಾಗೃತಿ ನಡಿಗೆ ಏರ್ಪಡಿಸ ಲಾಗಿದೆ ಎಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ. ಜಯರಾಂ ತಿಳಿಸಿದ್ದಾರೆ.
ವಿವಿಧ ಕಾರ್ಯಕ್ರಮಗಳು
ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹ ಅಂಗವಾಗಿ ಅ.3ರಿಂದ 9ರವರೆಗೆ ಬನ್ನೇರುಘಟ್ಟ ಉದ್ಯಾನದಲ್ಲಿ ಬೆಳಗ್ಗೆ 6-30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ನೇಚರ್ ಟ್ರಯಲ್ ಹಾಗೂ ವನ್ಯಜೀವಿ ಕಿರು ಚಿತ್ರ ಪ್ರದರ್ಶನ, ವನ್ಯಜೀವಿ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.9ರಂದು ಬೆಳಗ್ಗೆ 10 ಗಂಟೆಗೆ ಸೈಕಲ್ ಜಾಥಾ, ಬೆಳಗ್ಗೆ 8 ಗಂಟೆಯಿಂದ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲ ವಿ.ಆರ್. ವಾಲಾ ಆಗಮಿಸಲಿದ್ದಾರೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ