ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಉತ್ತಮ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?,

ಡಾ ಬಿ. ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು
ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುವುದಲ್ಲ, ನಿಮ್ಮ ಮನೆವೈದ್ಯರ (ಫ್ಯಾಮಿಲಿ ಡಾಕ್ಟರ್) ಬಳಿಗೆ ಹೋಗಬೇಕು. ಅದು ಬಹಳ ಮುಖ್ಯ. ಏನು ಕಾಯಿಲೆ ಎಂದು ಕಂಡುಕೊಂಡ ನಂತರ ಬೇಕಾದರೆ ಆಸ್ಪತ್ರೆಗೆ ಹೋಗಬಹುದು. ತೊಂದರೆಯಿಲ್ಲ. ಮುಂದೆ ಏನು ಮಾಡಬೇಕು ಎಂದು ಆಸ್ಪತ್ರೆಯಲ್ಲಿ ಹೇಳುತ್ತಾರೆ. ಏಕೆಂದರೆ ಎಷ್ಟೋ ಆಸ್ಪತ್ರೆಗಳಲ್ಲಿ ಏನು ಕಾಯಿಲೆ ಎಂದು ಕಂಡುಹಿಡಿಯುವುದಿಲ್ಲ. ಅವರು ನೇರವಾಗಿ ಟೆಸ್ಟ್ ಮಾಡುವುದಕ್ಕೇ ಪ್ರಾರಂಭಿಸಿಬಿಡುತ್ತಾರೆ.
ನನಗೆ ಈಗಲೂ ನೆನಪಿದೆ. ನಾವು ಚಿಕ್ಕವರಿದ್ದಾಗ ಈ ದೊಡ್ಡ ದೊಡ್ಡ ಆಸ್ಪತ್ರೆಗಳು, ಕಾರ್ಪೆರೇಟ್ ಆಸ್ಪತ್ರೆಗಳು ಇರಲಿಲ್ಲ. ಆದರೆ ಆರಂಭದಲ್ಲಿ ಒಬ್ಬ ಮದ್ರಾಸ್​ನಲ್ಲಿ ಒಂದು ದೊಡ್ಡ ಆಸ್ಪತ್ರೆಯನ್ನು ಪ್ರಾರಂಭಿಸಿದ. ಅವನು ಅಮೆರಿಕಕ್ಕೆ ಹೋಗಿಬಂದವನಾಗಿದ್ದ. ಅಮೆರಿಕದ ಮಾದರಿಯನ್ನೇ ಇಲ್ಲಿ ಅಳವಡಿಸಲು ಒಂದು ಆಸ್ಪತ್ರೆಯನ್ನು ಸ್ಥಾಪಿಸಿದ. ಒಂದು ದಿನ ಅವನು ನಮ್ಮ ಒಬ್ಬ ಪ್ರೊಫೆಸರರ ಬಳಿ ಬಂದು, ‘ನಾನು ಒಂದು ಆಸ್ಪತ್ರೆಯನ್ನು ಸ್ಥಾಪನೆ ಮಾಡಿದ್ದೇನೆ. ನಿಮ್ಮ ಪೇಷಂಟ್​ಗಳು ಯಾರಾದರೂ ಇದ್ದರೆ ಅಡ್ಮಿಟ್ ಮಾಡಿ’ ಎಂದ.
ಒಂದು ದಿನ ಅವರು ಪೇಷಂಟ್ ಒಬ್ಬರನ್ನು ಸೇರಿಸಿದರು. ಅವರು ಹೀಗೆ ಬರೆದಿದ್ದರು; ‘ಈ ಪೇಷಂಟನ್ನು ನಾನು ನೋಡಿದ್ದೇನೆ. ಇಂತಿಂಥ ಕಾಯಿಲೆ ಇದೆ. ಇಲ್ಲಿ ಸೂಚಿಸಿದ ಎರಡು ಟೆಸ್ಟ್​ಗಳನ್ನು ಮಾಡಿ’. ಹೀಗೆ ಬರೆದುಕೊಟ್ಟ ಅವರು ಮರುದಿನ ಪೇಷಂಟ್ ನೋಡಲು ಆಸ್ಪತ್ರೆಗೆ ಹೋದರು. ಅಲ್ಲಿ ಆ ರೋಗಿಗೆ ಹಲವಾರು ಟೆಸ್ಟ್​ಗಳನ್ನು ಮಾಡಿಸಿಬಿಟ್ಟಿದ್ದರು. ಅದಕ್ಕೆ ಅವರು ಆಸ್ಪತ್ರೆಯ ವ್ಯಕ್ತಿಯನ್ನು ಕರೆದು ಕೇಳಿದರು, ‘ಯಾರು ಇಷ್ಟೊಂದು ಟೆಸ್ಟ್​ಗಳನ್ನು ಮಾಡಲು ಹೇಳಿದ್ದು? ನಾನು ಹೇಳಿದ್ದು ಎರಡೇ ಟೆಸ್ಟ್ ಗಳನ್ನಲ್ಲವೆ?’ ಎಂದು. ಅದಕ್ಕೆ ಹೀಗೆ ಉತ್ತರ ಬಂತು, ‘ಅಲ್ಲ, ಅದು ನಮ್ಮ ಆಸ್ಪತ್ರೆಯ ಕ್ರಮ. ಇಲ್ಲಿ ಬಂದವರಿಗೆ ಎಲ್ಲ ಟೆಸ್ಟ್ ಮಾಡುತ್ತೇವೆ. ಇಲ್ಲದಿದ್ದರೆ ನಮ್ಮ ಆಸ್ಪತ್ರೆ ಕೂಡ ನಡೆಯಬೇಕಲ್ಲವಾ?’ ಕೂಡಲೇ ಆ ಪೇಷಂಟನ್ನು ಡಿಸ್ಚಾರ್ಜ್ ಮಾಡಿಸಿದ ಅವರು ನಂತರ ಆ ಆಸ್ಪತ್ರೆಯ ಹತ್ತಿರವೂ ಹೋಗಲಿಲ್ಲ.
ಈ ಆಸ್ಪತ್ರೆಗಳ ಶಾಪ ಹೋಗಬೇಕಾದರೆ, ‘ನಾವು ಜನರಿಗೆ ಅನ್ಯಾಯ ಮಾಡಬಾರದು. ಆದಷ್ಟು ಸಮಾಧಾನ ಮಾಡಿ ಪೇಷಂಟ್​ಗೆ ಬೇಕಾಗಿದ್ದನ್ನೇ ಮಾಡಬೇಕು. ಅನವಶ್ಯಕವಾಗಿ ಬೇಡದ ಟೆಸ್ಟ್​ಗಳನ್ನು ಮಾಡಬಾರದು’ ಎಂಬುದು ಅವರಿಗೆ ಅರ್ಥವಾಗಬೇಕು. ಆದರೆ ಅಷ್ಟು ಬೇಗ ಅವರಿಗೆ ಗೊತ್ತಾಗುವುದಿಲ್ಲ. ಅದಕ್ಕೆ ಹಲವು ಕಾಲ ಬೇಕು.
ಈಗ ಏನಾಗಿದೆ ಅಂದರೆ, ನಾನು ಆಸ್ಪತ್ರೆ ಸ್ಥಾಪಿಸಿದ್ದೇನೆ. ನನಗೆ ಲಾಭ ಬೇಕು ಎಂಬ ಮನೋಭಾವವೇ ಮೊದಲು ಬರುತ್ತದೆ. ಲಾಭ ಬೇಕಾದರೆ ಅನ್ಯಾಯ ಮಾಡಬೇಕು. ನಮ್ಮ ಆಸ್ಪತ್ರೆಗಳಲ್ಲಿ ಕಾಯಿಲೆಯವನಿಂದ ಲಾಭ ಮಾಡಿಕೊಳ್ಳಬೇಕಾದರೆ – ಅವನಿಗೆ ಅತಿಯಾದ ಚಿಕಿತ್ಸೆಗಳನ್ನು ಮಾಡಬೇಕು. ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ. ಇದಕ್ಕೊಂದು ಉದಾಹರಣೆ ಹೇಳುತ್ತೇನೆ.
ಈಗ ಗರ್ಭಿಣಿಯರಾದ ಎಲ್ಲರೂ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ಆರಂಭದಲ್ಲೇ ಏನು ಮಾಡುತ್ತಾರೆ? ಎಷ್ಟು ಸಿಗಬಹುದೆಂದು ಯೋಚಿಸುತ್ತಾರೆ. ಸಹಜ ಹೆರಿಗೆಯಾದರೆ ಹತ್ತು ಸಾವಿರ ರೂ. ಸಿಗಬಹುದು. ಅದನ್ನೇ ಸಿಸೇರಿಯನ್ ಮಾಡಿದರೆ ಒಂದು ಲಕ್ಷ ರೂ. ಆಗಬಹುದು. ಹೀಗಾಗಿ ಪರೀಕ್ಷೆ ಮಾಡಿ, ‘ಸಹಜ ಹೆರಿಗೆ ಆಗುವುದು ಕಷ್ಟ. ಸಿಸೇರಿಯನ್ನೇ ಮಾಡೋಣ’ ಎಂಬ ಐಡಿಯಾ ಕೊಡುತ್ತಾರೆ. ಹಾಗಾಗಿ ಸಿಸೇರಿಯನ್ ವಿಭಾಗದ ರೇಟ್ ಹೆಚ್ಚುತ್ತ ಹೋಗುತ್ತದೆ. ಹಾಗೆಯೇ ನೀವು ಹೊಟ್ಟೆನೋವು ಎಂದು ಆಸ್ಪತ್ರೆಗೆ ಹೋದರೆ ಡಾಕ್ಟರ್ ಹೇಳುತ್ತಾರೆ, ‘ಇದು ಅಪೆಂಡಿಕ್ಸ್ ಇರಬಹುದು, ನೋಡೋಣ’ ಎಂದು. ನಂತರ ಆಪರೇಷನ್ ಮಾಡುತ್ತಾರೆ. ಆಗ ಸಹಜವಾಗಿ ಆಸ್ಪತ್ರೆಯ ಬಿಲ್ ಮೇಲಕ್ಕೆ ಏರುತ್ತದೆ. ಆದರೆ ಅಲ್ಲಿ ಅಪೆಂಡಿಕ್ಸ್ ನಾರ್ಮಲ್ ಕೂಡ ಇರಬಹುದು. ಅದನ್ನು ನಂತರವೂ ಹೇಳುವುದಿಲ್ಲ. ಸುಮ್ಮನೆ ಆಪರೇಷನ್ ಮಾಡುತ್ತಾರೆ. ಅಪೆಂಡಿಕ್ಸ್ ಇಲ್ಲ, ಆಪರೇಷನ್ನೂ ಆಯ್ತು. ಎಲ್ಲವೂ ಅನವಶ್ಯಕ. ಹಾಗಾಗಿ ಜಾಗ್ರತೆಯಿಂದಿರಿ. ನೀವು ಜಾಗ್ರತೆಯಿಂದಿಲ್ಲದಿದ್ದರೆ ಲೋಕ ನಿಮ್ಮನ್ನು ಬೇಕಾದ ಹಾಗೆ ಬಳಸಿಕೊಳ್ಳುತ್ತದೆ. ಹಾಗಾಗಿ ನಾವೆಲ್ಲ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...