ಸರಣಿ ಪ್ರಾಕೃತಿಕ ವಿಕೋಪಗಳ ಇತಿಹಾಸದಿಂದಲೇ ಕುಖ್ಯಾತಿ ಪಡೆದಿರುವ ಇಂಡೋನೇಷ್ಯಾ ಮತ್ತೆ ಭೀಕರ ಭೂಕಂಪ, ಸುನಾಮಿಗೆ ಬೆಚ್ಚಿದೆ. ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಲವೇಸಿ ದ್ವೀಪದ ಪಲುವಿನಲ್ಲಿ 430ಕ್ಕೂ ಹೆಚ್ಚು ಶವಗಳು ಪತ್ತೆಯಾಗಿದ್ದು, ಇಡೀ ನಗರ ಅಕ್ಷರಶಃ ಸ್ಮಶಾನವಾಗಿದೆ. ಸಾವಿರಾರು, ಮನೆ, ಕಟ್ಟಡಗಳು ನೆಲಕ್ಕುರುಳಿದ್ದು, ಸಾವಿನ ಸಂಖ್ಯೆ ಸಾವಿರ ಮುಟ್ಟುವ ಸಾಧ್ಯತೆ ಗೋಚರಿಸಿದೆ. ನಾಪತ್ತೆಯಾಗಿರುವ ನೂರಾರು ಜನರಿಗಾಗಿ ಶೋಧ ಕಾರ್ಯ ಆರಂಭವಾಗಿದ್ದು, ಗಾಯಾಳುಗಳು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಎಲ್ಲಿ ಭೂಕಂಪ – ಸುಲವೇಸಿ ದ್ವೀಪದ ಪಲು ನಗರ
ಯಾವಾಗ – ಶುಕ್ರವಾರ ಸಂಜೆ
ಏನಾಯ್ತು? – 7.5ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಳಿಕ ಸುನಾಮಿ ಆರ್ಭಟ
ಕಂಡಲೆಲ್ಲ ಶವ
ಪ್ರಮುಖ ಜನನಿಬಿಡ ಪ್ರದೇಶಗಳ ರಸ್ತೆಗಳ ಎಲ್ಲೆಂದರಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಎಂದು ಅಧಿಕಾರಿಗಳು ಹೇಳಿದ್ದಾರೆ.
5 -18 ಅಡಿ ಅಲೆ ಆರ್ಭಟ
3.50 ಲಕ್ಷ ಜನಸಂಖ್ಯೆ ಇರುವ ಸುಲವೇಸಿ ದ್ವೀಪದಲ್ಲಿ ಬೀಚ್ ಫೆಸ್ಟಿವಲ್ ಸಂಭ್ರಮದ ಸಿದ್ಧತೆ ನಡೆದಿತ್ತು. ಇದ್ದಕ್ಕಿದಂತೆ 5ರಿಂದ 18 ಅಡಿ ಎತ್ತರದವರೆಗೆ ಬಂದ ಸಮುದ್ರದ ಅಲೆಯಲ್ಲಿ ನೂರಾರು ಜನ ಕೊಚ್ಚಿಹೋದರು. ನಾಪತ್ತೆಯಾಗಿರುವವರನ್ನು ಬಿಟ್ಟು 600 ಜನ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುನಾಮಿಗೆ 400 ಬಲಿ
ಜಕಾರ್ತಾ: ಇಂಡೋನೇಷ್ಯಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಗೆ 430ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಪಲು ನಗರದ ಸುತ್ತಲಿನ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪನದಿಂದ 5ರಿಂದ 18 ಅಡಿ ಎತ್ತರದ ಸುನಾಮಿ ಅಲೆಗಳು ಸೃಷ್ಟಿಯಾಗಿದ್ದವು. ಅಲೆಗೆ ಸಿಲುಕಿ 400ಕ್ಕೂ ಅಧಿಕ ಜನ ಮೃತಗೊಂಡಿದ್ದರೆ, ಭೂಕಂಪನಕ್ಕೆ 30ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. ಸುಮಾರು 600 ಜನ ತೀವ್ರ ಗಾಯಗೊಂಡಿದ್ದು, 29 ಜನ ನಾಪತ್ತೆಯಾಗಿರುವ ವರದಿಯಾಗಿದೆ. ಪಲು ನಗರದಲ್ಲಿನ ಬಹುತೇಕ ಮನೆಗಳು ಸುನಾಮಿಗೆ ಕೊಚ್ಚಿಹೋಗಿವೆ. 3.50 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಪಲು ನಗರದ ಕಡಲ ತೀರಕ್ಕೆ ಅಪ್ಪಳಿಸಿದ ಬೃಹತ್ ಅಲೆಗಳಿಂದ ಶಾಪಿಂಗ್ ಮಾಲ್, ಮಸೀದಿ, ಮನೆಗಳನ್ನು ಜಲಾವೃತಗೊಂಡಿವೆ. ಬಹುತೇಕ ಕಟ್ಟಡಗಳು ಶಿಥಿಲ ಗೊಂಡಿವೆ. ಪಲು ಭಾಗದಲ್ಲಿ ತುರ್ತು ಪರಿಹಾರ ಕೇಂದ್ರಗಳನ್ನು ತೆರೆದಿರುವ ಇಂಡೋನೇಷ್ಯಾ ಸರ್ಕಾರ, ಸೇನೆಯನ್ನು ಕಳುಹಿಸಿಕೊಟ್ಟಿದೆ. ವಿಮಾನ ನಿಲ್ದಾಣ ಕೂಡ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಸೇನೆಯ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ತಪ್ಪಿದ ಭಾರಿ ಅನಾಹುತ: ದ್ವೀಪ ನಗರಿ ಸುಲವೇಸಿ, ಡೊಂಗ್ಗಾಲಾದಲ್ಲಿ ಭೂಕಂಪ ಕೇಂದ್ರೀತವಾಗಿತ್ತು. ಪಲುನಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾ ಗಿತ್ತು. ಆದಾಗ್ಯೂ ಪಲು ನಗರದ ಕಡಲ ತೀರದಲ್ಲಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ತಯಾರಿ ನಡೆಸಲಾಗುತ್ತಿತ್ತು. ಶುಕ್ರವಾರ ಸಂಜೆಯ ನಂತರ ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಬರುವವರಿದ್ದರು. ಆದರೆ ಕಾರ್ಯಕ್ರಮದ ತಯಾರಿ ಸಂದರ್ಭದಲ್ಲಿಯೇ ಸುನಾಮಿ ಅಪ್ಪಳಿಸಿದೆ. ಇದರಿಂದ ಸಾವಿನ ಸಂಖ್ಯೆ ಕಡಿಮೆ ಯಾಗಿದೆ ಎಂದು ಇಂಡೋನೇಷ್ಯಾ ಪ್ರಕೃತಿ ವಿಕೋಪ ಇಲಾಖೆ ತಿಳಿಸಿದೆ. ಆದರೆ ಈ ಕಾರ್ಯಕ್ರಮದ ಬಹುತೇಕ ಆಯೋಜಕರು ಈಗ ನಾಪತ್ತೆಯಾಗಿದ್ದಾರೆ.
ಭಾರತ, ವಿಶ್ವಸಂಸ್ಥೆ ನೆರವು: ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ಭಾರತ ಹಾಗೂ ವಿಶ್ವಸಂಸ್ಥೆ ನೆರವು ಘೋಷಿಸಿವೆ. ಪರಿಹಾರ ಕಾರ್ಯಾಚರಣೆ ಹಾಗೂ ಮರು ನಿರ್ವಣಕ್ಕೆ ನೆರವು ನೀಡುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.
ರಸ್ತೆಯಲ್ಲೇ ಚಿಕಿತ್ಸೆ
ಸುನಾಮಿ ಅಲೆಗೆ ಬಲಿಯಾದ ಪ್ರಾಣಿಗಳು, ಜಲಚರಗಳ ಮೃತದೇಹ ಪಲು ನಗರದ ರಸ್ತೆಗಳಲ್ಲಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಸ್ಥಳವಿಲ್ಲದಂತಾಗಿದೆ. ವೈದ್ಯರು ರಸ್ತೆ ಮಧ್ಯದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
2.30 ಲಕ್ಷ ಜನರ ಬಲಿ ಪಡೆದಿದ್ದ ಸುನಾಮಿ!
ಸುನಾಮಿ ಎಂದಾಕ್ಷಣ ಹಿಂದು ಮಹಾಸಾಗರದ ಸುತ್ತಲಿನ ಭಾರತ, ಇಂಡೋನೇಷ್ಯಾ, ಶ್ರೀಲಂಕಾದ ಜನರನ್ನು ಬೆಚ್ಚಿಬೀಳಿಸುವುದು 2004ರ ಘಟನೆ. ಸುಮಾತ್ರಾ ದ್ವೀಪದಲ್ಲಿ ಕೇಂದ್ರಿತವಾದ 9.1 ತೀವ್ರತೆಯ ಭೂಕಂಪನದ ಪರಿಣಾಮದಿಂದಾಗಿ 108 ಅಡಿಗಳ ಎತ್ತರದ ಸುನಾಮಿ ಅಲೆಗಳು ಇಂಡೋನೇಷ್ಯಾದ ನಗರಗಳನ್ನು ಆಹುತಿ ಪಡೆದುಕೊಂಡಿದ್ದವು. ಇಂಡೋನೇಷ್ಯಾ ಒಂದರಲ್ಲೇ 1.7 ಲಕ್ಷಕ್ಕೂ ಅಧಿಕ ಜನ ಮೃತರಾಗಿದ್ದರು. ತಮಿಳುನಾಡಿನ ಕೆಲ ಪ್ರದೇಶಗಳಿಗೂ ರಕ್ಕಸ ಅಲೆಗಳು ಅಪ್ಪಳಿಸಿದ್ದವು. 20 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಒಟ್ಟಾರೆ 2004 ಸುನಾಮಿಗೆ 2.30 ಲಕ್ಷ ಜನ ಬಲಿಯಾಗಿ, ವಿಶ್ವದ ಅತ್ಯಂತ ಭೀಕರ ಪ್ರಾಕೃತಿಕ ವಿಕೋಪ ಎಂದು ಗುರುತಿಸಲಾಗಿತ್ತು.
ಸರಣಿ ಭೂಕಂಪನ
ಇಂಡೋನೇಷ್ಯಾದ ಪಾಲಿಗೆ ಭೂಕಂಪನ ಹಾಗೂ ಸುನಾಮಿ ಕಾಯಂ ಶತ್ರುವಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಮೂರನೇ ಭೂಕಂಪ. ಲಾಂಬಾಕ್ ನಗರದಲ್ಲಿ ಜುಲೈ ಹಾಗೂ ಆಗಸ್ಟ್ನಲ್ಲಿ ಸಂಭವಿಸಿದ್ದ ಸರಣಿ ಭೂಕಂಪಕ್ಕೆ 520ಕ್ಕೂ ಅಧಿಕ ಜನ ಬಲಿಯಾಗಿದ್ದರು. ಪಲು ನಗರಕ್ಕೆ 1927, 1968ರಲ್ಲಿ ಸುನಾಮಿ ಅಪ್ಪಳಿಸಿತ್ತು. ಈಗ ಸುಮಾರು 5 ದಶಕಗಳ ಬಳಿಕ ಮತ್ತೆ ಜನರಿಗೆ ಸುನಾಮಿ ಕಾಡಿದೆ.
ಎಲ್ಲಿ ಭೂಕಂಪ – ಸುಲವೇಸಿ ದ್ವೀಪದ ಪಲು ನಗರ
ಯಾವಾಗ – ಶುಕ್ರವಾರ ಸಂಜೆ
ಏನಾಯ್ತು? – 7.5ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ ಬಳಿಕ ಸುನಾಮಿ ಆರ್ಭಟ
ಕಂಡಲೆಲ್ಲ ಶವ
ಪ್ರಮುಖ ಜನನಿಬಿಡ ಪ್ರದೇಶಗಳ ರಸ್ತೆಗಳ ಎಲ್ಲೆಂದರಲ್ಲಿ ಶವಗಳ ಸಾಲು ಕಂಡು ಬರುತ್ತಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಎಂದು ಅಧಿಕಾರಿಗಳು ಹೇಳಿದ್ದಾರೆ.
5 -18 ಅಡಿ ಅಲೆ ಆರ್ಭಟ
3.50 ಲಕ್ಷ ಜನಸಂಖ್ಯೆ ಇರುವ ಸುಲವೇಸಿ ದ್ವೀಪದಲ್ಲಿ ಬೀಚ್ ಫೆಸ್ಟಿವಲ್ ಸಂಭ್ರಮದ ಸಿದ್ಧತೆ ನಡೆದಿತ್ತು. ಇದ್ದಕ್ಕಿದಂತೆ 5ರಿಂದ 18 ಅಡಿ ಎತ್ತರದವರೆಗೆ ಬಂದ ಸಮುದ್ರದ ಅಲೆಯಲ್ಲಿ ನೂರಾರು ಜನ ಕೊಚ್ಚಿಹೋದರು. ನಾಪತ್ತೆಯಾಗಿರುವವರನ್ನು ಬಿಟ್ಟು 600 ಜನ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುನಾಮಿಗೆ 400 ಬಲಿ
ಜಕಾರ್ತಾ: ಇಂಡೋನೇಷ್ಯಾದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಗೆ 430ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಪಲು ನಗರದ ಸುತ್ತಲಿನ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪನದಿಂದ 5ರಿಂದ 18 ಅಡಿ ಎತ್ತರದ ಸುನಾಮಿ ಅಲೆಗಳು ಸೃಷ್ಟಿಯಾಗಿದ್ದವು. ಅಲೆಗೆ ಸಿಲುಕಿ 400ಕ್ಕೂ ಅಧಿಕ ಜನ ಮೃತಗೊಂಡಿದ್ದರೆ, ಭೂಕಂಪನಕ್ಕೆ 30ಕ್ಕೂ ಅಧಿಕ ಜನ ಬಲಿಯಾಗಿದ್ದಾರೆ. ಸುಮಾರು 600 ಜನ ತೀವ್ರ ಗಾಯಗೊಂಡಿದ್ದು, 29 ಜನ ನಾಪತ್ತೆಯಾಗಿರುವ ವರದಿಯಾಗಿದೆ. ಪಲು ನಗರದಲ್ಲಿನ ಬಹುತೇಕ ಮನೆಗಳು ಸುನಾಮಿಗೆ ಕೊಚ್ಚಿಹೋಗಿವೆ. 3.50 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಪಲು ನಗರದ ಕಡಲ ತೀರಕ್ಕೆ ಅಪ್ಪಳಿಸಿದ ಬೃಹತ್ ಅಲೆಗಳಿಂದ ಶಾಪಿಂಗ್ ಮಾಲ್, ಮಸೀದಿ, ಮನೆಗಳನ್ನು ಜಲಾವೃತಗೊಂಡಿವೆ. ಬಹುತೇಕ ಕಟ್ಟಡಗಳು ಶಿಥಿಲ ಗೊಂಡಿವೆ. ಪಲು ಭಾಗದಲ್ಲಿ ತುರ್ತು ಪರಿಹಾರ ಕೇಂದ್ರಗಳನ್ನು ತೆರೆದಿರುವ ಇಂಡೋನೇಷ್ಯಾ ಸರ್ಕಾರ, ಸೇನೆಯನ್ನು ಕಳುಹಿಸಿಕೊಟ್ಟಿದೆ. ವಿಮಾನ ನಿಲ್ದಾಣ ಕೂಡ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಸೇನೆಯ ಕಾರ್ಯಾಚರಣೆಗೂ ಅಡ್ಡಿಯಾಗಿದೆ.
ತಪ್ಪಿದ ಭಾರಿ ಅನಾಹುತ: ದ್ವೀಪ ನಗರಿ ಸುಲವೇಸಿ, ಡೊಂಗ್ಗಾಲಾದಲ್ಲಿ ಭೂಕಂಪ ಕೇಂದ್ರೀತವಾಗಿತ್ತು. ಪಲುನಲ್ಲಿ ಸುನಾಮಿ ಎಚ್ಚರಿಕೆಯನ್ನೂ ನೀಡಲಾ ಗಿತ್ತು. ಆದಾಗ್ಯೂ ಪಲು ನಗರದ ಕಡಲ ತೀರದಲ್ಲಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ತಯಾರಿ ನಡೆಸಲಾಗುತ್ತಿತ್ತು. ಶುಕ್ರವಾರ ಸಂಜೆಯ ನಂತರ ಸಾವಿರಾರು ಜನರು ಈ ಕಾರ್ಯಕ್ರಮಕ್ಕೆ ಬರುವವರಿದ್ದರು. ಆದರೆ ಕಾರ್ಯಕ್ರಮದ ತಯಾರಿ ಸಂದರ್ಭದಲ್ಲಿಯೇ ಸುನಾಮಿ ಅಪ್ಪಳಿಸಿದೆ. ಇದರಿಂದ ಸಾವಿನ ಸಂಖ್ಯೆ ಕಡಿಮೆ ಯಾಗಿದೆ ಎಂದು ಇಂಡೋನೇಷ್ಯಾ ಪ್ರಕೃತಿ ವಿಕೋಪ ಇಲಾಖೆ ತಿಳಿಸಿದೆ. ಆದರೆ ಈ ಕಾರ್ಯಕ್ರಮದ ಬಹುತೇಕ ಆಯೋಜಕರು ಈಗ ನಾಪತ್ತೆಯಾಗಿದ್ದಾರೆ.
ಭಾರತ, ವಿಶ್ವಸಂಸ್ಥೆ ನೆರವು: ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ಭಾರತ ಹಾಗೂ ವಿಶ್ವಸಂಸ್ಥೆ ನೆರವು ಘೋಷಿಸಿವೆ. ಪರಿಹಾರ ಕಾರ್ಯಾಚರಣೆ ಹಾಗೂ ಮರು ನಿರ್ವಣಕ್ಕೆ ನೆರವು ನೀಡುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.
ರಸ್ತೆಯಲ್ಲೇ ಚಿಕಿತ್ಸೆ
ಸುನಾಮಿ ಅಲೆಗೆ ಬಲಿಯಾದ ಪ್ರಾಣಿಗಳು, ಜಲಚರಗಳ ಮೃತದೇಹ ಪಲು ನಗರದ ರಸ್ತೆಗಳಲ್ಲಿ ಬಿದ್ದಿರುವ ದೃಶ್ಯಗಳು ಸಾಮಾನ್ಯವಾಗಿವೆ. ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಸ್ಥಳವಿಲ್ಲದಂತಾಗಿದೆ. ವೈದ್ಯರು ರಸ್ತೆ ಮಧ್ಯದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
2.30 ಲಕ್ಷ ಜನರ ಬಲಿ ಪಡೆದಿದ್ದ ಸುನಾಮಿ!
ಸುನಾಮಿ ಎಂದಾಕ್ಷಣ ಹಿಂದು ಮಹಾಸಾಗರದ ಸುತ್ತಲಿನ ಭಾರತ, ಇಂಡೋನೇಷ್ಯಾ, ಶ್ರೀಲಂಕಾದ ಜನರನ್ನು ಬೆಚ್ಚಿಬೀಳಿಸುವುದು 2004ರ ಘಟನೆ. ಸುಮಾತ್ರಾ ದ್ವೀಪದಲ್ಲಿ ಕೇಂದ್ರಿತವಾದ 9.1 ತೀವ್ರತೆಯ ಭೂಕಂಪನದ ಪರಿಣಾಮದಿಂದಾಗಿ 108 ಅಡಿಗಳ ಎತ್ತರದ ಸುನಾಮಿ ಅಲೆಗಳು ಇಂಡೋನೇಷ್ಯಾದ ನಗರಗಳನ್ನು ಆಹುತಿ ಪಡೆದುಕೊಂಡಿದ್ದವು. ಇಂಡೋನೇಷ್ಯಾ ಒಂದರಲ್ಲೇ 1.7 ಲಕ್ಷಕ್ಕೂ ಅಧಿಕ ಜನ ಮೃತರಾಗಿದ್ದರು. ತಮಿಳುನಾಡಿನ ಕೆಲ ಪ್ರದೇಶಗಳಿಗೂ ರಕ್ಕಸ ಅಲೆಗಳು ಅಪ್ಪಳಿಸಿದ್ದವು. 20 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಒಟ್ಟಾರೆ 2004 ಸುನಾಮಿಗೆ 2.30 ಲಕ್ಷ ಜನ ಬಲಿಯಾಗಿ, ವಿಶ್ವದ ಅತ್ಯಂತ ಭೀಕರ ಪ್ರಾಕೃತಿಕ ವಿಕೋಪ ಎಂದು ಗುರುತಿಸಲಾಗಿತ್ತು.
ಸರಣಿ ಭೂಕಂಪನ
ಇಂಡೋನೇಷ್ಯಾದ ಪಾಲಿಗೆ ಭೂಕಂಪನ ಹಾಗೂ ಸುನಾಮಿ ಕಾಯಂ ಶತ್ರುವಾಗಿದೆ. ಕಳೆದ ಮೂರು ತಿಂಗಳಲ್ಲಿ ಇದು ಮೂರನೇ ಭೂಕಂಪ. ಲಾಂಬಾಕ್ ನಗರದಲ್ಲಿ ಜುಲೈ ಹಾಗೂ ಆಗಸ್ಟ್ನಲ್ಲಿ ಸಂಭವಿಸಿದ್ದ ಸರಣಿ ಭೂಕಂಪಕ್ಕೆ 520ಕ್ಕೂ ಅಧಿಕ ಜನ ಬಲಿಯಾಗಿದ್ದರು. ಪಲು ನಗರಕ್ಕೆ 1927, 1968ರಲ್ಲಿ ಸುನಾಮಿ ಅಪ್ಪಳಿಸಿತ್ತು. ಈಗ ಸುಮಾರು 5 ದಶಕಗಳ ಬಳಿಕ ಮತ್ತೆ ಜನರಿಗೆ ಸುನಾಮಿ ಕಾಡಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ