ತ್ರಿವಳಿ ತಲ್ಲಾಖ್ ನಿಷೇಧ ಒಂದು ಕ್ರಾಂತಿಕಾರಿ ಹೆಜ್ಜೆಯೇ ?
ಭಾರತದಲ್ಲಿ ಆಚರಿಸಲಾಗುತ್ತಿದ್ದ ಸತಿ ಸಹಗಮನ - ಬಾಲ್ಯವಿವಾಹ ಮುಂತಾದ ಸಂಪ್ರದಾಯಗಳನ್ನು ನಿಷೇದಿಸಿದಷ್ಟೇ ಮಹತ್ವ ಇದಕ್ಕೂ ಇದೆಯೇ ?
ಈ ಪ್ರಶ್ನೆಗೆ ಹೌದು ಎನ್ನುವ ಮುನ್ನ ಒಂದು ವಿಷಯ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳೋಣ....
ಯಾವುದೇ ಜಾತಿ ಧರ್ಮ, ಸಮುದಾಯ, ಪಂಗಡ, ಏನೇ ಇರಲಿ,
ಅವರ ನಂಬಿಕೆಗಳು, ಆಚರಣೆಗಳು, ಇತಿಹಾಸ ಏನೇ ಹೇಳಲಿ,
ಈ ಕ್ಷಣದಲ್ಲಿ ಮಹಿಳೆಗೆ ಆಕೆಯ ಸ್ವಾಭಾವಿಕ ಹಕ್ಕು ಸ್ವಾತಂತ್ರ್ಯ ಮತ್ತು ಸಮಾನತೆಗೆ ಧಕ್ಕೆ ಉಂಟುಮಾಡುವ ಎಲ್ಲವನ್ನೂ ನಿಷೇಧಿಸಲೇ ಬೇಕು.
ದೇವಸ್ಥಾನದ ಪ್ರವೇಶವೂ ಅಷ್ಟೆ ಅಥವಾ ಆಕೆಯನ್ನು ಮದುವೆಯಾಗಿ ಸರಿಯಾದ ಕಾರಣವಿಲ್ಲದೆ ಆಕೆಯ ಭವಿಷ್ಯದ ಬಗ್ಗೆ ಯೋಚಿಸದೆ ಕೇವಲ ಗಂಡಿನ ಏಕಮುಖದ ನಿರ್ಣಯದಂತೆ ಆಕೆಯನ್ನು ತ್ಯಜಿಸುವುದು ತಪ್ಪಾಗುತ್ತದೆ.
ಧರ್ಮದ ಮೂಲ ಆಶಯ ಏನೇ ಆಗಿದ್ದರೂ, ಈಗ ಅದರ ದುರುಪಯೋಗ ಆಗುತ್ತಿದ್ದರೆ ಅದನ್ನು ನಿಷೇಧಿಸಲೇಬೇಕು.
ಅದೇ ಸಂಧರ್ಭದಲ್ಲಿ ಒಂದು ವೇಳೆ ಹೊಸ ಕಾನೂನಿನಲ್ಲಿ ಪುರುಷ ದ್ವೇಷದ ಅಂಶವಿದ್ದರೆ ಅದನ್ನು ತೆಗೆದುಹಾಕಬೇಕು.
ಅಂದರೆ ಗಂಡು ಹೆಣ್ಣು ಇಬ್ಬರಿಗೂ ವಿಚ್ಚೇದನದ ಸಮಾನ ಅವಕಾಶ ಕೊಡಬೇಕು.
ಇಲ್ಲಿ ಇನ್ನು ಒಂದು ಜಿಜ್ಞಾಸೆ ಇದೆ. ಪಾಶ್ಚಿಮಾತ್ಯರಂತೆ ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ವಿಚ್ಛೇದನವನ್ನು ಸರಳ ಮತ್ತು ನಾಗರಿಕ ಪ್ರಜ್ಞೆಯ ರೀತಿಯಲ್ಲಿ ರೂಪಿಸಿದರೆ , ಮಹಿಳೆಯರು ಸಂಪ್ರದಾಯಗಳ ಬಂಧನದಿಂದ ಇತ್ತೀಚೆಗೆ ಅಷ್ಟೇ ಹೊರ ಬರುತ್ತಿರುವ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗುತ್ತಿರುವ ಸಂಧರ್ಭದಲ್ಲಿ ಕೌಟುಂಬಿಕ ವ್ಯವಸ್ಥೆ
ಆಧುನಿಕ ಹಿಂದು ಮತ್ತು ಮುಸ್ಲಿಂ ಇಬ್ಬರಲ್ಲೂ ತಾತ್ಕಾಲಿಕವಾಗಿ ಘರ್ಷಣೆ ಮತ್ತು ಶಿಥಿಲತೆಯೆಡೆಗೆ ಸಾಗುತ್ತದೆ. ಇದನ್ನು ಒಂದು ಹಂತಕ್ಕೆ ಬರುವವರೆಗೂ ಸಮಾಜ ಸಹಿಸಿಕೊಳ್ಳಲೇಬೇಕು. ಏಕೆಂದರೆ ಈ ನೆಪದಲ್ಲಿ ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಉಚಿತವಲ್ಲ.
ಎಂದಿನಂತೆ ಇಲ್ಲಿಯೂ ಅವಶ್ಯವಿರುವ ಮುಗ್ದ ಹೆಣ್ಣುಮಕ್ಕಳಿಗೆ ಇದರ ಪ್ರಯೋಜನ ಸರಿಯಾಗಿ ಸಿಗದೆ ಅಲ್ಲಿಯೂ ಕೆಟ್ಟ ಮನೋಭಾವದ ಪ್ರಬಲ ಹೆಣ್ಣು ಮಕ್ಕಳು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಎಲ್ಲಾ ವಿಷಯಗಳಂತೆ ಇಲ್ಲಿಯೂ ಇದೆ.
ಏನೇ ಆಗಲಿ, ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆ ಒದಗಿಸುವ ದೃಷ್ಟಿಯಿಂದ ತ್ರಿವಳಿ ತಲ್ಲಾಖ್ ನಿಷೇಧ ಒಂದು ಸ್ವಾಗತಾರ್ಹ ಬೆಳವಣಿಗೆ.
ಮುಸ್ಲಿಂ ಧರ್ಮದ ಸಂಪ್ರದಾಯವಾದಿಗಳು ಇದನ್ನು ವಿರೋಧಿಸಬಹುದು.
ಆದರೆ ನೆನಪಿಡಿ ,
ಇದು ಕೇವಲ ಘರ್ಷಣೆಯ ಕೌಟುಂಬಿಕ ಪರಿವಾರಗಳಿಗೆ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತುವವರಿಗೆ ಅನ್ವಯವೇ ಹೊರತು ಸಹಜ ಹೊಂದಾಣಿಕೆಯ ಮತ್ತು ಮಾತುಕತೆಗಳ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಜನರಿಗೆ ಇದು ಯಾವುದೇ ತೊಂದರೆ ಮಾಡುವುದಿಲ್ಲ. ಆದ್ದರಿಂದ ಇದನ್ನು ಕ್ರಾಂತಿಕಾರಿ ನಿರ್ಧಾರವೇ ಎನ್ನಬಹುದು.
ಹೌದು, ಬಲಪಂಥೀಯ ಹಿನ್ನೆಲೆಯ ಧಾರ್ಮಿಕ ನಂಬಿಕೆಯ ಸಾಂಪ್ರದಾಯಿಕ ಪಕ್ಷದ ಸರ್ಕಾರ,
ದ್ವೇಷದ ಮತ್ತು ಓಟಿನ ರಾಜಕೀಯಕ್ಕಾಗಿ ಇದನ್ನು ಜಾರಿಗೆ ತಂದಿದೆ. ಹಿಂದುಗಳಿಗೆ ಹೋಲಿಸಿದರೆ ಮುಸ್ಲೀಮರಲ್ಲಿ ವಿಚ್ಚೇದನ ಪ್ರಮಾಣ ಬಹಳ ಕಡಿಮೆ ಇದೆ. ಇದು ನಮ್ಮ ಧಾರ್ಮಿಕ ನಂಬಿಕೆಯ ಮೇಲೆ ಮಾಡಿದ ಹಲ್ಲೆ ಎಂಬ ಆರೋಪ ಮಾಡುತ್ತಾರೆ.
ಆದರೂ,. ರಾಜಕೀಯ ಏನೇ ಇದ್ದರೂ ಮಹಿಳೆಯರ ಸಮಾನತೆ ಮತ್ತು ಸ್ವಾತಂತ್ರ್ಯ ರಕ್ಷಿಸುವ ಎಲ್ಲಾ ಸುಧಾರಣೆಗಳಿಗೂ ಪ್ರಬುದ್ಧ ಮನಸ್ಸುಗಳ ಬೆಂಬಲ ಸದಾ ಇರುತ್ತದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಭಾರತದಲ್ಲಿ ಆಚರಿಸಲಾಗುತ್ತಿದ್ದ ಸತಿ ಸಹಗಮನ - ಬಾಲ್ಯವಿವಾಹ ಮುಂತಾದ ಸಂಪ್ರದಾಯಗಳನ್ನು ನಿಷೇದಿಸಿದಷ್ಟೇ ಮಹತ್ವ ಇದಕ್ಕೂ ಇದೆಯೇ ?
ಈ ಪ್ರಶ್ನೆಗೆ ಹೌದು ಎನ್ನುವ ಮುನ್ನ ಒಂದು ವಿಷಯ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳೋಣ....
ಯಾವುದೇ ಜಾತಿ ಧರ್ಮ, ಸಮುದಾಯ, ಪಂಗಡ, ಏನೇ ಇರಲಿ,
ಅವರ ನಂಬಿಕೆಗಳು, ಆಚರಣೆಗಳು, ಇತಿಹಾಸ ಏನೇ ಹೇಳಲಿ,
ಈ ಕ್ಷಣದಲ್ಲಿ ಮಹಿಳೆಗೆ ಆಕೆಯ ಸ್ವಾಭಾವಿಕ ಹಕ್ಕು ಸ್ವಾತಂತ್ರ್ಯ ಮತ್ತು ಸಮಾನತೆಗೆ ಧಕ್ಕೆ ಉಂಟುಮಾಡುವ ಎಲ್ಲವನ್ನೂ ನಿಷೇಧಿಸಲೇ ಬೇಕು.
ದೇವಸ್ಥಾನದ ಪ್ರವೇಶವೂ ಅಷ್ಟೆ ಅಥವಾ ಆಕೆಯನ್ನು ಮದುವೆಯಾಗಿ ಸರಿಯಾದ ಕಾರಣವಿಲ್ಲದೆ ಆಕೆಯ ಭವಿಷ್ಯದ ಬಗ್ಗೆ ಯೋಚಿಸದೆ ಕೇವಲ ಗಂಡಿನ ಏಕಮುಖದ ನಿರ್ಣಯದಂತೆ ಆಕೆಯನ್ನು ತ್ಯಜಿಸುವುದು ತಪ್ಪಾಗುತ್ತದೆ.
ಧರ್ಮದ ಮೂಲ ಆಶಯ ಏನೇ ಆಗಿದ್ದರೂ, ಈಗ ಅದರ ದುರುಪಯೋಗ ಆಗುತ್ತಿದ್ದರೆ ಅದನ್ನು ನಿಷೇಧಿಸಲೇಬೇಕು.
ಅದೇ ಸಂಧರ್ಭದಲ್ಲಿ ಒಂದು ವೇಳೆ ಹೊಸ ಕಾನೂನಿನಲ್ಲಿ ಪುರುಷ ದ್ವೇಷದ ಅಂಶವಿದ್ದರೆ ಅದನ್ನು ತೆಗೆದುಹಾಕಬೇಕು.
ಅಂದರೆ ಗಂಡು ಹೆಣ್ಣು ಇಬ್ಬರಿಗೂ ವಿಚ್ಚೇದನದ ಸಮಾನ ಅವಕಾಶ ಕೊಡಬೇಕು.
ಇಲ್ಲಿ ಇನ್ನು ಒಂದು ಜಿಜ್ಞಾಸೆ ಇದೆ. ಪಾಶ್ಚಿಮಾತ್ಯರಂತೆ ವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ವಿಚ್ಛೇದನವನ್ನು ಸರಳ ಮತ್ತು ನಾಗರಿಕ ಪ್ರಜ್ಞೆಯ ರೀತಿಯಲ್ಲಿ ರೂಪಿಸಿದರೆ , ಮಹಿಳೆಯರು ಸಂಪ್ರದಾಯಗಳ ಬಂಧನದಿಂದ ಇತ್ತೀಚೆಗೆ ಅಷ್ಟೇ ಹೊರ ಬರುತ್ತಿರುವ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗುತ್ತಿರುವ ಸಂಧರ್ಭದಲ್ಲಿ ಕೌಟುಂಬಿಕ ವ್ಯವಸ್ಥೆ
ಆಧುನಿಕ ಹಿಂದು ಮತ್ತು ಮುಸ್ಲಿಂ ಇಬ್ಬರಲ್ಲೂ ತಾತ್ಕಾಲಿಕವಾಗಿ ಘರ್ಷಣೆ ಮತ್ತು ಶಿಥಿಲತೆಯೆಡೆಗೆ ಸಾಗುತ್ತದೆ. ಇದನ್ನು ಒಂದು ಹಂತಕ್ಕೆ ಬರುವವರೆಗೂ ಸಮಾಜ ಸಹಿಸಿಕೊಳ್ಳಲೇಬೇಕು. ಏಕೆಂದರೆ ಈ ನೆಪದಲ್ಲಿ ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಉಚಿತವಲ್ಲ.
ಎಂದಿನಂತೆ ಇಲ್ಲಿಯೂ ಅವಶ್ಯವಿರುವ ಮುಗ್ದ ಹೆಣ್ಣುಮಕ್ಕಳಿಗೆ ಇದರ ಪ್ರಯೋಜನ ಸರಿಯಾಗಿ ಸಿಗದೆ ಅಲ್ಲಿಯೂ ಕೆಟ್ಟ ಮನೋಭಾವದ ಪ್ರಬಲ ಹೆಣ್ಣು ಮಕ್ಕಳು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಎಲ್ಲಾ ವಿಷಯಗಳಂತೆ ಇಲ್ಲಿಯೂ ಇದೆ.
ಏನೇ ಆಗಲಿ, ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆ ಒದಗಿಸುವ ದೃಷ್ಟಿಯಿಂದ ತ್ರಿವಳಿ ತಲ್ಲಾಖ್ ನಿಷೇಧ ಒಂದು ಸ್ವಾಗತಾರ್ಹ ಬೆಳವಣಿಗೆ.
ಮುಸ್ಲಿಂ ಧರ್ಮದ ಸಂಪ್ರದಾಯವಾದಿಗಳು ಇದನ್ನು ವಿರೋಧಿಸಬಹುದು.
ಆದರೆ ನೆನಪಿಡಿ ,
ಇದು ಕೇವಲ ಘರ್ಷಣೆಯ ಕೌಟುಂಬಿಕ ಪರಿವಾರಗಳಿಗೆ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತುವವರಿಗೆ ಅನ್ವಯವೇ ಹೊರತು ಸಹಜ ಹೊಂದಾಣಿಕೆಯ ಮತ್ತು ಮಾತುಕತೆಗಳ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಜನರಿಗೆ ಇದು ಯಾವುದೇ ತೊಂದರೆ ಮಾಡುವುದಿಲ್ಲ. ಆದ್ದರಿಂದ ಇದನ್ನು ಕ್ರಾಂತಿಕಾರಿ ನಿರ್ಧಾರವೇ ಎನ್ನಬಹುದು.
ಹೌದು, ಬಲಪಂಥೀಯ ಹಿನ್ನೆಲೆಯ ಧಾರ್ಮಿಕ ನಂಬಿಕೆಯ ಸಾಂಪ್ರದಾಯಿಕ ಪಕ್ಷದ ಸರ್ಕಾರ,
ದ್ವೇಷದ ಮತ್ತು ಓಟಿನ ರಾಜಕೀಯಕ್ಕಾಗಿ ಇದನ್ನು ಜಾರಿಗೆ ತಂದಿದೆ. ಹಿಂದುಗಳಿಗೆ ಹೋಲಿಸಿದರೆ ಮುಸ್ಲೀಮರಲ್ಲಿ ವಿಚ್ಚೇದನ ಪ್ರಮಾಣ ಬಹಳ ಕಡಿಮೆ ಇದೆ. ಇದು ನಮ್ಮ ಧಾರ್ಮಿಕ ನಂಬಿಕೆಯ ಮೇಲೆ ಮಾಡಿದ ಹಲ್ಲೆ ಎಂಬ ಆರೋಪ ಮಾಡುತ್ತಾರೆ.
ಆದರೂ,. ರಾಜಕೀಯ ಏನೇ ಇದ್ದರೂ ಮಹಿಳೆಯರ ಸಮಾನತೆ ಮತ್ತು ಸ್ವಾತಂತ್ರ್ಯ ರಕ್ಷಿಸುವ ಎಲ್ಲಾ ಸುಧಾರಣೆಗಳಿಗೂ ಪ್ರಬುದ್ಧ ಮನಸ್ಸುಗಳ ಬೆಂಬಲ ಸದಾ ಇರುತ್ತದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ