ವಿಷಯಕ್ಕೆ ಹೋಗಿ

ಜ್ಞಾನ ಕಾರಂಜಿಯ ಬಗ್ಗೆ ತಿಳಿಯಿರಿ

ಜ್ಞಾನ ಕಾರಂಜಿ
ಜ್ಞಾನ ಕಾರಂಜಿಯ ಎಲ್ಲಾ ಜ್ಞಾನಾಸಕ್ತರಿಗೆ ನಮಸ್ಕಾರಗಳು.
ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ  ದಿನಾಂಕ ೨೯-೦೩-೨೦೧೬
ಜ್ಞಾನ ಪ್ರಸರಣದಲ್ಲಿ ಒಂದು ಅವಿಸ್ಮರಣೀಯ ದಿನ.
ಹೌದು ಮಿತ್ರರೆ!
ಜ್ಞಾನಾಸಕ್ತರ  ದಾಹವನ್ನು ತಣಿಸಿ ಸಂತೃಪ್ತಗೊಳಿಸುವ, ತಡೆರಹಿತವಾದ ಜ್ಞಾನದ   ಪ್ರವಹಿಸುವಿಕೆಯನ್ನು ಖಾತ್ರಿಪಡಿಸುವ  ಉದ್ದೇಶದಿಂದ ಸಾಮಾಜಿಕ ಮಾಧ್ಯಮವಾದ ವಾಟ್ಸ್ಯಾಪ್ನಲ್ಲಿ ಪುಟಿಯಲು
ಪ್ರಾರಂಭವಾದ ಕಾರಂಜಿಯೇ ಈ ನಿಮ್ಮ  ಜ್ಞಾನ ಕಾರಂಜಿ.
ದೃಷ್ಟಿ ಸವಾಲುಳ್ಳ ಜ್ಞಾನಾಸಕ್ತ ಗೆಳೆಯರು ಇದರ ರುವಾರಿಗಳೂ.
ಅಂದು ಒಂದು ಸಣ್ಣ ಕಾರಂಜಿಯಾಗಿ ಆರಂಭಗೊಂಡ ಈ ವಾಟ್ಸ್ಯಾಪ್ ಗುಂಪು, ಇಂದು ೫ ಗುಂಪುಗಳಾಗಿ ಸಾವಿರಕ್ಕೂ ಹೆಚ್ಚು ಜ್ಞಾನಾಸಕ್ತರನ್ನು  ಒಳಗೊಳ್ಳುವುದರ ಜೊತೆಗೆ, ಫೇಸ್ಬುಕ್ನಲ್ಲಿ ೩೯೦೦೦ಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡು ಜ್ಞಾನದ ಸರೋವರವಾಗಿ ರೂಪುಗೊಂಡಿದೆ.
ಈ ಸಂತಸದ ಸಂದರ್ಭದಲ್ಲಿ ಜ್ಞಾನ ಕಾರಂಜಿಯ ಚಿಲುಮೆಗಳಾಗಿ, ಜ್ಞಾನ ಸರೋವರದ ಅಮೂಲ್ಯ ಹನಿಗಳಾಗಿರುವ   ತಮ್ಮೆಲ್ಲರಿಗೂ ನಿರ್ವಾಹಕ ತಂಡದ ವತಿಯಿಂದ ಕೃತಜ್ಞಾತೆಗಳನ್ನು ಅರ್ಪಿಸಲು
ಹರ್ಷವೆನಿಸುತ್ತಿದೆ.
ಪ್ರೀತಿಯ ಓದುಗರೆ,  ಜ್ಞಾನ ಕಾರಂಜಿಯ ಎರಡನೕೆ ವರ್ಷದ ಆಚರಣೆಯ ಈ ಶುಭ ಸಂದರ್ಭದಲ್ಲಿ  ಜ್ಞಾನ ಸರೋವರದ ಆಳ-ಅಗಲಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ನಿರ್ವಾಹಕ ತಂಡವು ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲು ಅಣಿಯಾಗಿದ್ದು,.......
ಇಂದಿನಿಂದ ನಿಮ್ಮ ಜ್ಞಾನ ಕಾರಂಜಿಯ ಜ್ಞಾನದ ಚಿಲುಮೆ.....
      "ಜ್ಞಾನ ಕಾರಂಜಿ’ ಆಂಡ್ರಾಯ್ಡ್ ಅಪ್ಲಿಕೇಷನ್ ರೂಪದಲ್ಲಿ ಹಾಗು ಬ್ಲಾಗ್  ರೂಪದಲ್ಲಿ ಚಿಮ್ಮಲಿದೆ.
ದೃಷ್ಟಿ ಸವಾಲುಳ್ಳ ಜ್ಞಾನಾಸಕ್ತ ಸ್ನೇಹಿತರಿಗೆ ಸಾಮಾಜಿಕ,ಆರ್ಥಿಕ ಅನಾನುಕೂಲತೆಗೊಳಗಾದ  ಸಹೋದರ-ಸಹೋದರಿಯರಿಗೆ ಜ್ಞಾನದ ಮುಕ್ತ ಹಾಗು ಸಮಾನ  ಲಭ್ಯತೆಯನ್ನು  ಸಾಧಿಸುವ ಮಹತ್ವದ ಉದ್ದೇಶದಿಂದ ಆರಂಭಗೊಂಡ ಈ ನಿಮ್ಮ ಜ್ಞಾನದ ಕಾರಂಜಿ, ಹೊಸ ವೇದಿಕೆಗಳಾದ ಆಂಡ್ರಾಯ್ಡ್ ಅಪ್ಲಿಕೇಷನ್ ಹಾಗೂ ಬ್ಲಾಗ್ ಗಳ ಮೂಲಕ ತನ್ನ ಉದ್ದೇಶಗಳ ಈಡೇರಿಕೆಯಲ್ಲಿ ಮತ್ತಷ್ಟು ಆಳ-ಅಗಲಗಳನ್ನು ತಲುಪಲು ಸಾಧ್ಯವಾಗಲಿದೆ ಎಂಬುದು ನಮ್ಮ ಆಶಯ.
ಪ್ರಿಯ ಜ್ಞಾನಾಸಕ್ತರೆ, ಈವರೆಗೆ ಲಭ್ಯ ಜ್ಞಾನದ ವಿತರಣೆಯ ಕಾರ್ಯಕ್ಕೆ ಸಾಕ್ಷಿಯಾಗಿರುವ ಈ ನಿಮ್ಮ ಗುಂಪು, ಬರುವ ದಿನಗಳಲ್ಲಿ ಹೊಸ ಆಯಾಮವನ್ನು ಪಡೆಯಲಿದ್ದು,
ಮಹತ್ವದ ಜ್ಞಾನ ಸಾಹಿತ್ಯವನ್ನು ದೃಷ್ಟಿ ಸವಾಲುಳ್ಳ [ಅಂಧ] ಸದಸ್ಯರು ತಡೆರಹಿತವಾಗಿ ಪಡೆಯಲು ಅನುವಾಗುವಂತೆ ಹಾಗೂ ಕನ್ನಡದಲ್ಲಿ ಯುನಿಕೋಡ್  ಶಿಷ್ಟಾಚಾರದ ಸಾಹಿತ್ಯದ ಲಭ್ಯತೆಯನ್ನು  ಹೆಚ್ಚಿಸುವ ನಿಟ್ಟಿನಲ್ಲಿ
ಪ್ರಮುಖ ಪುಸ್ತಕಗಳನ್ನು ಹಾಗೂ  ಲೇಖನಗಳನ್ನು ಯುನಿಕೋಡ್ ರೂಪದಲ್ಲಿ ತಯಾರಿಸಿ ಒದಗಿಸಲು ನಿರ್ಧರಿಸಿದೆ.
ಬನ್ನಿ ಜ್ಞಾನಾಸಕ್ತರೆ, ಜ್ಞಾನದ ಚಿಲುಮೆಗಳಿಗೆ ಇರುವ ಅಡೆತಡೆಗಳನ್ನು ಒಟ್ಟಾಗಿ ನಿವಾರಿಸೋಣ.
ನಮ್ಮ ಧ್ಯೇಯ: "ಮುಕ್ತ ಜ್ಞಾನ, ತನ್ಮೂಲಕ ಸ್ವಸ್ತ ಹಾಗೂ ಸದೃಡ ಸಮಾಜದ ನಿರ್ಮಾಣ’.
ವಂದನೆಗಳೊಂದಿಗೆ:
ಇಂತಿ ನಿಮ್ಮ, ಜ್ಞಾನ ಕಾರಂಜಿ ನಿರ್ವಾಹಕ ತಂಡ. Manju k SHIVAKUMAR rc

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...