ಜ್ಞಾನ ಕಾರಂಜಿ
ಜ್ಞಾನ ಕಾರಂಜಿಯ ಎಲ್ಲಾ ಜ್ಞಾನಾಸಕ್ತರಿಗೆ ನಮಸ್ಕಾರಗಳು.
ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ ದಿನಾಂಕ ೨೯-೦೩-೨೦೧೬
ಜ್ಞಾನ ಪ್ರಸರಣದಲ್ಲಿ ಒಂದು ಅವಿಸ್ಮರಣೀಯ ದಿನ.
ಹೌದು ಮಿತ್ರರೆ!
ಜ್ಞಾನಾಸಕ್ತರ ದಾಹವನ್ನು ತಣಿಸಿ ಸಂತೃಪ್ತಗೊಳಿಸುವ, ತಡೆರಹಿತವಾದ ಜ್ಞಾನದ ಪ್ರವಹಿಸುವಿಕೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮವಾದ ವಾಟ್ಸ್ಯಾಪ್ನಲ್ಲಿ ಪುಟಿಯಲು
ಪ್ರಾರಂಭವಾದ ಕಾರಂಜಿಯೇ ಈ ನಿಮ್ಮ ಜ್ಞಾನ ಕಾರಂಜಿ.
ದೃಷ್ಟಿ ಸವಾಲುಳ್ಳ ಜ್ಞಾನಾಸಕ್ತ ಗೆಳೆಯರು ಇದರ ರುವಾರಿಗಳೂ.
ಅಂದು ಒಂದು ಸಣ್ಣ ಕಾರಂಜಿಯಾಗಿ ಆರಂಭಗೊಂಡ ಈ ವಾಟ್ಸ್ಯಾಪ್ ಗುಂಪು, ಇಂದು ೫ ಗುಂಪುಗಳಾಗಿ ಸಾವಿರಕ್ಕೂ ಹೆಚ್ಚು ಜ್ಞಾನಾಸಕ್ತರನ್ನು ಒಳಗೊಳ್ಳುವುದರ ಜೊತೆಗೆ, ಫೇಸ್ಬುಕ್ನಲ್ಲಿ ೩೯೦೦೦ಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡು ಜ್ಞಾನದ ಸರೋವರವಾಗಿ ರೂಪುಗೊಂಡಿದೆ.
ಈ ಸಂತಸದ ಸಂದರ್ಭದಲ್ಲಿ ಜ್ಞಾನ ಕಾರಂಜಿಯ ಚಿಲುಮೆಗಳಾಗಿ, ಜ್ಞಾನ ಸರೋವರದ ಅಮೂಲ್ಯ ಹನಿಗಳಾಗಿರುವ ತಮ್ಮೆಲ್ಲರಿಗೂ ನಿರ್ವಾಹಕ ತಂಡದ ವತಿಯಿಂದ ಕೃತಜ್ಞಾತೆಗಳನ್ನು ಅರ್ಪಿಸಲು
ಹರ್ಷವೆನಿಸುತ್ತಿದೆ.
ಪ್ರೀತಿಯ ಓದುಗರೆ, ಜ್ಞಾನ ಕಾರಂಜಿಯ ಎರಡನೕೆ ವರ್ಷದ ಆಚರಣೆಯ ಈ ಶುಭ ಸಂದರ್ಭದಲ್ಲಿ ಜ್ಞಾನ ಸರೋವರದ ಆಳ-ಅಗಲಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ನಿರ್ವಾಹಕ ತಂಡವು ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲು ಅಣಿಯಾಗಿದ್ದು,.......
ಇಂದಿನಿಂದ ನಿಮ್ಮ ಜ್ಞಾನ ಕಾರಂಜಿಯ ಜ್ಞಾನದ ಚಿಲುಮೆ.....
"ಜ್ಞಾನ ಕಾರಂಜಿ’ ಆಂಡ್ರಾಯ್ಡ್ ಅಪ್ಲಿಕೇಷನ್ ರೂಪದಲ್ಲಿ ಹಾಗು ಬ್ಲಾಗ್ ರೂಪದಲ್ಲಿ ಚಿಮ್ಮಲಿದೆ.
ದೃಷ್ಟಿ ಸವಾಲುಳ್ಳ ಜ್ಞಾನಾಸಕ್ತ ಸ್ನೇಹಿತರಿಗೆ ಸಾಮಾಜಿಕ,ಆರ್ಥಿಕ ಅನಾನುಕೂಲತೆಗೊಳಗಾದ ಸಹೋದರ-ಸಹೋದರಿಯರಿಗೆ ಜ್ಞಾನದ ಮುಕ್ತ ಹಾಗು ಸಮಾನ ಲಭ್ಯತೆಯನ್ನು ಸಾಧಿಸುವ ಮಹತ್ವದ ಉದ್ದೇಶದಿಂದ ಆರಂಭಗೊಂಡ ಈ ನಿಮ್ಮ ಜ್ಞಾನದ ಕಾರಂಜಿ, ಹೊಸ ವೇದಿಕೆಗಳಾದ ಆಂಡ್ರಾಯ್ಡ್ ಅಪ್ಲಿಕೇಷನ್ ಹಾಗೂ ಬ್ಲಾಗ್ ಗಳ ಮೂಲಕ ತನ್ನ ಉದ್ದೇಶಗಳ ಈಡೇರಿಕೆಯಲ್ಲಿ ಮತ್ತಷ್ಟು ಆಳ-ಅಗಲಗಳನ್ನು ತಲುಪಲು ಸಾಧ್ಯವಾಗಲಿದೆ ಎಂಬುದು ನಮ್ಮ ಆಶಯ.
ಪ್ರಿಯ ಜ್ಞಾನಾಸಕ್ತರೆ, ಈವರೆಗೆ ಲಭ್ಯ ಜ್ಞಾನದ ವಿತರಣೆಯ ಕಾರ್ಯಕ್ಕೆ ಸಾಕ್ಷಿಯಾಗಿರುವ ಈ ನಿಮ್ಮ ಗುಂಪು, ಬರುವ ದಿನಗಳಲ್ಲಿ ಹೊಸ ಆಯಾಮವನ್ನು ಪಡೆಯಲಿದ್ದು,
ಮಹತ್ವದ ಜ್ಞಾನ ಸಾಹಿತ್ಯವನ್ನು ದೃಷ್ಟಿ ಸವಾಲುಳ್ಳ [ಅಂಧ] ಸದಸ್ಯರು ತಡೆರಹಿತವಾಗಿ ಪಡೆಯಲು ಅನುವಾಗುವಂತೆ ಹಾಗೂ ಕನ್ನಡದಲ್ಲಿ ಯುನಿಕೋಡ್ ಶಿಷ್ಟಾಚಾರದ ಸಾಹಿತ್ಯದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ
ಪ್ರಮುಖ ಪುಸ್ತಕಗಳನ್ನು ಹಾಗೂ ಲೇಖನಗಳನ್ನು ಯುನಿಕೋಡ್ ರೂಪದಲ್ಲಿ ತಯಾರಿಸಿ ಒದಗಿಸಲು ನಿರ್ಧರಿಸಿದೆ.
ಬನ್ನಿ ಜ್ಞಾನಾಸಕ್ತರೆ, ಜ್ಞಾನದ ಚಿಲುಮೆಗಳಿಗೆ ಇರುವ ಅಡೆತಡೆಗಳನ್ನು ಒಟ್ಟಾಗಿ ನಿವಾರಿಸೋಣ.
ನಮ್ಮ ಧ್ಯೇಯ: "ಮುಕ್ತ ಜ್ಞಾನ, ತನ್ಮೂಲಕ ಸ್ವಸ್ತ ಹಾಗೂ ಸದೃಡ ಸಮಾಜದ ನಿರ್ಮಾಣ’.
ವಂದನೆಗಳೊಂದಿಗೆ:
ಇಂತಿ ನಿಮ್ಮ, ಜ್ಞಾನ ಕಾರಂಜಿ ನಿರ್ವಾಹಕ ತಂಡ. Manju k SHIVAKUMAR rc
ಜ್ಞಾನ ಕಾರಂಜಿಯ ಎಲ್ಲಾ ಜ್ಞಾನಾಸಕ್ತರಿಗೆ ನಮಸ್ಕಾರಗಳು.
ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ ದಿನಾಂಕ ೨೯-೦೩-೨೦೧೬
ಜ್ಞಾನ ಪ್ರಸರಣದಲ್ಲಿ ಒಂದು ಅವಿಸ್ಮರಣೀಯ ದಿನ.
ಹೌದು ಮಿತ್ರರೆ!
ಜ್ಞಾನಾಸಕ್ತರ ದಾಹವನ್ನು ತಣಿಸಿ ಸಂತೃಪ್ತಗೊಳಿಸುವ, ತಡೆರಹಿತವಾದ ಜ್ಞಾನದ ಪ್ರವಹಿಸುವಿಕೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮವಾದ ವಾಟ್ಸ್ಯಾಪ್ನಲ್ಲಿ ಪುಟಿಯಲು
ಪ್ರಾರಂಭವಾದ ಕಾರಂಜಿಯೇ ಈ ನಿಮ್ಮ ಜ್ಞಾನ ಕಾರಂಜಿ.
ದೃಷ್ಟಿ ಸವಾಲುಳ್ಳ ಜ್ಞಾನಾಸಕ್ತ ಗೆಳೆಯರು ಇದರ ರುವಾರಿಗಳೂ.
ಅಂದು ಒಂದು ಸಣ್ಣ ಕಾರಂಜಿಯಾಗಿ ಆರಂಭಗೊಂಡ ಈ ವಾಟ್ಸ್ಯಾಪ್ ಗುಂಪು, ಇಂದು ೫ ಗುಂಪುಗಳಾಗಿ ಸಾವಿರಕ್ಕೂ ಹೆಚ್ಚು ಜ್ಞಾನಾಸಕ್ತರನ್ನು ಒಳಗೊಳ್ಳುವುದರ ಜೊತೆಗೆ, ಫೇಸ್ಬುಕ್ನಲ್ಲಿ ೩೯೦೦೦ಕ್ಕೂ ಹೆಚ್ಚಿನ ಸದಸ್ಯರನ್ನು ಒಳಗೊಂಡು ಜ್ಞಾನದ ಸರೋವರವಾಗಿ ರೂಪುಗೊಂಡಿದೆ.
ಈ ಸಂತಸದ ಸಂದರ್ಭದಲ್ಲಿ ಜ್ಞಾನ ಕಾರಂಜಿಯ ಚಿಲುಮೆಗಳಾಗಿ, ಜ್ಞಾನ ಸರೋವರದ ಅಮೂಲ್ಯ ಹನಿಗಳಾಗಿರುವ ತಮ್ಮೆಲ್ಲರಿಗೂ ನಿರ್ವಾಹಕ ತಂಡದ ವತಿಯಿಂದ ಕೃತಜ್ಞಾತೆಗಳನ್ನು ಅರ್ಪಿಸಲು
ಹರ್ಷವೆನಿಸುತ್ತಿದೆ.
ಪ್ರೀತಿಯ ಓದುಗರೆ, ಜ್ಞಾನ ಕಾರಂಜಿಯ ಎರಡನೕೆ ವರ್ಷದ ಆಚರಣೆಯ ಈ ಶುಭ ಸಂದರ್ಭದಲ್ಲಿ ಜ್ಞಾನ ಸರೋವರದ ಆಳ-ಅಗಲಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ನಿರ್ವಾಹಕ ತಂಡವು ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲು ಅಣಿಯಾಗಿದ್ದು,.......
ಇಂದಿನಿಂದ ನಿಮ್ಮ ಜ್ಞಾನ ಕಾರಂಜಿಯ ಜ್ಞಾನದ ಚಿಲುಮೆ.....
"ಜ್ಞಾನ ಕಾರಂಜಿ’ ಆಂಡ್ರಾಯ್ಡ್ ಅಪ್ಲಿಕೇಷನ್ ರೂಪದಲ್ಲಿ ಹಾಗು ಬ್ಲಾಗ್ ರೂಪದಲ್ಲಿ ಚಿಮ್ಮಲಿದೆ.
ದೃಷ್ಟಿ ಸವಾಲುಳ್ಳ ಜ್ಞಾನಾಸಕ್ತ ಸ್ನೇಹಿತರಿಗೆ ಸಾಮಾಜಿಕ,ಆರ್ಥಿಕ ಅನಾನುಕೂಲತೆಗೊಳಗಾದ ಸಹೋದರ-ಸಹೋದರಿಯರಿಗೆ ಜ್ಞಾನದ ಮುಕ್ತ ಹಾಗು ಸಮಾನ ಲಭ್ಯತೆಯನ್ನು ಸಾಧಿಸುವ ಮಹತ್ವದ ಉದ್ದೇಶದಿಂದ ಆರಂಭಗೊಂಡ ಈ ನಿಮ್ಮ ಜ್ಞಾನದ ಕಾರಂಜಿ, ಹೊಸ ವೇದಿಕೆಗಳಾದ ಆಂಡ್ರಾಯ್ಡ್ ಅಪ್ಲಿಕೇಷನ್ ಹಾಗೂ ಬ್ಲಾಗ್ ಗಳ ಮೂಲಕ ತನ್ನ ಉದ್ದೇಶಗಳ ಈಡೇರಿಕೆಯಲ್ಲಿ ಮತ್ತಷ್ಟು ಆಳ-ಅಗಲಗಳನ್ನು ತಲುಪಲು ಸಾಧ್ಯವಾಗಲಿದೆ ಎಂಬುದು ನಮ್ಮ ಆಶಯ.
ಪ್ರಿಯ ಜ್ಞಾನಾಸಕ್ತರೆ, ಈವರೆಗೆ ಲಭ್ಯ ಜ್ಞಾನದ ವಿತರಣೆಯ ಕಾರ್ಯಕ್ಕೆ ಸಾಕ್ಷಿಯಾಗಿರುವ ಈ ನಿಮ್ಮ ಗುಂಪು, ಬರುವ ದಿನಗಳಲ್ಲಿ ಹೊಸ ಆಯಾಮವನ್ನು ಪಡೆಯಲಿದ್ದು,
ಮಹತ್ವದ ಜ್ಞಾನ ಸಾಹಿತ್ಯವನ್ನು ದೃಷ್ಟಿ ಸವಾಲುಳ್ಳ [ಅಂಧ] ಸದಸ್ಯರು ತಡೆರಹಿತವಾಗಿ ಪಡೆಯಲು ಅನುವಾಗುವಂತೆ ಹಾಗೂ ಕನ್ನಡದಲ್ಲಿ ಯುನಿಕೋಡ್ ಶಿಷ್ಟಾಚಾರದ ಸಾಹಿತ್ಯದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ
ಪ್ರಮುಖ ಪುಸ್ತಕಗಳನ್ನು ಹಾಗೂ ಲೇಖನಗಳನ್ನು ಯುನಿಕೋಡ್ ರೂಪದಲ್ಲಿ ತಯಾರಿಸಿ ಒದಗಿಸಲು ನಿರ್ಧರಿಸಿದೆ.
ಬನ್ನಿ ಜ್ಞಾನಾಸಕ್ತರೆ, ಜ್ಞಾನದ ಚಿಲುಮೆಗಳಿಗೆ ಇರುವ ಅಡೆತಡೆಗಳನ್ನು ಒಟ್ಟಾಗಿ ನಿವಾರಿಸೋಣ.
ನಮ್ಮ ಧ್ಯೇಯ: "ಮುಕ್ತ ಜ್ಞಾನ, ತನ್ಮೂಲಕ ಸ್ವಸ್ತ ಹಾಗೂ ಸದೃಡ ಸಮಾಜದ ನಿರ್ಮಾಣ’.
ವಂದನೆಗಳೊಂದಿಗೆ:
ಇಂತಿ ನಿಮ್ಮ, ಜ್ಞಾನ ಕಾರಂಜಿ ನಿರ್ವಾಹಕ ತಂಡ. Manju k SHIVAKUMAR rc
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ