ವಿಷಯಕ್ಕೆ ಹೋಗಿ

latest current affairs internationals



ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವ ಸಲುವಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಮೊದಲ ಬಾರಿಗೆಇನ್ಸೈಟ್‌’ ಯೋಜನೆ ರೂಪಿಸಿದೆ.
ಮೇ 5ರಂದು ಗಗನನೌಕೆಯ ಉಡಾವಣೆಯಾಗಲಿದೆ.
ಮಂಗಳನ ಅಂಗಳವು ಸುಮಾರು 45ಕೋಟಿ ವರ್ಷಗಳ ಹಿಂದೆ ಯಾವ ರೀತಿ ಇತ್ತು ಎಂಬುದನ್ನು  ‘ಇನ್ಸೈಟ್‌’ (ಇಂಟೀರಿಯರ್ ಎಕ್ಸ್ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್ಪೋರ್ಟ್) ಅಧ್ಯಯನ ಮಾಡಬಲ್ಲದು.
ಬೇರೊಂದು ಸೌರವ್ಯೂಹದಲ್ಲಿ ಭೂಮಿ, ಚಂದ್ರ, ಗ್ರಹ ಸೇರಿದಂತೆ ಬಂಡೆಗಲ್ಲುಗಳು ಹೇಗೆ ನಿರ್ಮಾಣವಾಗುತ್ತದೆ ಎಂಬುದನ್ನು ಅರಿಯಲು ಅಧ್ಯಯನ ನೆರವಾಗಲಿದೆ.

ವಿಶ್ವದಲ್ಲೇ ಅತೀ ಉದ್ದದ ಸಮುದ್ರ ಸೇತುವೆಯನ್ನು ಚೀನಾ ನಿರ್ಮಿಸಿದ್ದುಸೇತುವೆಯ ವೀಕ್ಷಣೆಗೆ ವಾರ ಅವಕಾಶ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಆದರೆ ಸೇತುವೆಯನ್ನು ಸಂಚಾರ ಮುಕ್ತಗೊಳಿಸುವ ದಿನಾಂಕವನ್ನು ಅಧಿಕಾರಿಗಳು ಪ್ರಕಟಿಸಿಲ್ಲ.55 ಕಿ.ಮೀ. ಉದ್ದದ ಸೇತುವೆಯು ನೀರಿನೊಳಗೆ 6.7ಕಿ.ಮೀ. ಮಾರ್ಗವನ್ನು  ಹೊಂದಿದೆ.
ಸೇತುವೆ ಹಾಂಕಾಂಗ್ಮತ್ತು  ದಕ್ಷಿಣ ಚೀನಾದ ಜುಹೈ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಒಂಬತ್ತು ವರ್ಷಗಳ ಹಿಂದೆ ಇದರ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಬೃಹತ್ಯೋಜನೆಗೆ ಸುಮಾರು ₹ 9.83 ಲಕ್ಷ ಕೋಟಿ (15.1ಬಿಲಿಯನ್ಡಾಲರ್‌) ವೆಚ್ಚ ಮಾಡಲಾಗಿದೆನೀರಿನೊಳಗಿನ ಸುರಂಗ ಮಾರ್ಗ ನಿರ್ಮಾಣಕ್ಕೆ 80 ಸಾವಿರ ಟನ್ಪೈಪ್ಗಳನ್ನು ಬಳಸಲಾಗಿದೆಎಂದು ಮೂಲಗಳು ತಿಳಿಸಿವೆ.
60 ಐಫೆಲ್ಟವರ್ನಿರ್ಮಿಸುವಷ್ಟು ಉಕ್ಕನ್ನು ಸೇತುವೆ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಅನ್ಯಗ್ರಹ ಪತ್ತೆಹಚ್ಚಲು ಟ್ರಾನ್ಸಿಟಿಂಗ್ ಎಕ್ಸೊಪ್ಲಾನೆಟ್ ಸರ್ವೆ ಸ್ಯಾಟಲೈಟ್ (ಟಿಇಎಸ್ಎಸ್) ಎಂಬ ಬಾಹ್ಯಾಕಾಶ ನೌಕೆಯನ್ನು ಏಪ್ರಿಲ್ 16ರಂದು ಉಡಾವಣೆ ಮಾಡಲಿದೆ.
ಫ್ಲಾರಿಡಾದಲ್ಲಿ ನೌಕೆಯ ಅಂತಿಮ ಪರೀಕ್ಷೆಗಳು ನಡೆಯುತ್ತಿವೆ. ಇದು ಅನ್ಯಗ್ರಹಗಳು, ಅವುಗಳ ವಾತಾವರಣ ಹಾಗೂ ಜೀವಿಗಳ ಕುರುಹುಗಳನ್ನು ಪತ್ತೆಹಚ್ಚಲಿದೆಎಂದು ಕಾರ್ಯಕ್ರಮದ ಮುಖ್ಯಾಧಿಕಾರಿ ಜಾರ್ಜ್ ರಿಕ್ಕರ್ ತಿಳಿಸಿದ್ದಾರೆ.
ಗ್ರಹಗಳ ನಿಯಮಿತಪರ್ಯಟನೆವಿದ್ಯಮಾನದ ಮೇಲೆ ನಿಗಾ ವಹಿಸುವುದು ನೌಕೆಯ ಮುಖ್ಯ ಕೆಲಸ. ನಾಸಾದಕೆಪ್ಲರ್ನೌಕೆ ಕೂಡಾ ಇದೇ ವಿಧಾನ ಅನುಸರಿಸಿ ಸುಮಾರು 2,600 ಗ್ರಹಗಳನ್ನು ಪತ್ತೆಹಚ್ಚಿತ್ತು.
ನಕ್ಷತ್ರಗಳ ಸಂಖ್ಯೆಗಿಂತ ಗ್ರಹಗಳ ಸಂಖ್ಯೆ ಹೆಚ್ಚಿದೆ ಎಂಬ ಅಂಶವನ್ನು ಕೆಪ್ಲರ್ ನೌಕೆ ಪತ್ತೆಹಚ್ಚಿತ್ತು. ಆದರೆ ಈಗ ಉಡಾವಣೆಯಾಗುತ್ತಿರುವ ಟಿಇಎಸ್ಎಸ್ ನೌಕೆಯು, ನಮ್ಮ ಸಮೀಪದ ನಕ್ಷತ್ರಗಳಲ್ಲಿರಬಹುದಾದ ವೈವಿಧ್ಯಮಯ ಗ್ರಹಗಳ ಮೇಲೆ ಬೆಳಕು ಚೆಲ್ಲಲಿದೆಎಂದು ನಾಸಾದ ನಿರ್ದೇಶಕ ಪೌಲ್ ಹರ್ಟ್ಸ್ ಹೇಳಿದ್ದಾರೆ.
ನಮ್ಮಿಂದ 300 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಹಾಗೂ 30ರಿಂದ 100 ಪಟ್ಟು ಪ್ರಕಾಶಮಾನವಾಗಿರುವ ನಕ್ಷತ್ರಗಳ ಮೇಲೆ ಇದು ಪ್ರಮುಖವಾಗಿ ಅಧ್ಯಯನ ನಡೆಸಲಿದೆ. ಆಕಾಶಕಾಯಗಳ ದ್ರವ್ಯರಾಶಿ, ಸಾಂದ್ರತೆ ಹಾಗೂ ವಾತಾವರಣದ ಸಂಯೋಜನೆ ಅರಿಯಬೇಕಾದರೆ ಪ್ರಖರ ಬೆಳಕು ಸೂಸುವ ಆಕಾಶಕಾಯಗಳು ಸೂಕ್ತ. ವಾತಾವರಣದಲ್ಲಿರಬಹುದಾದ ನೀರು ಅಥವಾ ಇತರೆ ಪ್ರಮುಖ ಕಣಗಳ ಅಧ್ಯಯನದಿಂದ ಅಲ್ಲಿ ಜೀವಿಗಳು ಬದುಕುವ ಸಾಧ್ಯತೆಯಿದೆಯೇ ಎಂಬುದನ್ನು ತಿಳಿಯಬಹುದು.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಲಾಗಿದೆ.
ಮೂರು ದಶಕಗಳಿಗೂ ಹೆಚ್ಚು ಸಮಯ ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ರೋಸ್ಮೇರಿ ಡಿಕಾರ್ಲೊ ಹುದ್ದೆಗೆ ನೇಮಕಗೊಂಡಿದ್ದಾರೆ. ಮೂಲಕ, ವಿಶ್ವಸಂಸ್ಥೆಯ ಅತ್ಯುನ್ನತ ಹುದ್ದೆ ಮಹಿಳೆಯೊಬ್ಬರಿಗೆ ಒಲಿದಿದೆ.
2012ರಿಂದ ಜವಾಬ್ದಾರಿ ನಿರ್ವಹಿಸಿದ್ದ ಜೆಫ್ರಿ ಫೆಲ್ಟ್ಮನ್ಅವರಿಂದ ತೆರವಾಗಲಿರುವ ಸ್ಥಾನವನ್ನು ಡಿಕಾರ್ಲೊ ವಹಿಸಿಕೊಳ್ಳಲಿದ್ದಾರೆ. ವಿವಿಧ ರಾಷ್ಟ್ರಗಳಲ್ಲಿ ನಡೆಯುವ ರಾಜಕೀಯ ಸಂಘರ್ಷವನ್ನು ಕೊನೆಗಾಣಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆಯ ರಾಜಕೀಯ ವಿಭಾಗ ಹೊತ್ತುಕೊಂಡಿದೆ.

ನೈಪಿತಾವ್: ಮ್ಯಾನ್ಮಾರ್ ನೂತನ ಅಧ್ಯಕ್ಷರಾಗಿ ಆಂಗ್ಸಾನ್ಸೂಕಿ ಅವರ ಆಪ್ತ ವಿನ್ಮಿಂಟ್ಅವರು ಆಯ್ಕೆಯಾಗಿದ್ದಾರೆ. ಇದರಿಂದಾಗಿ, ಉನ್ನತ ಮಟ್ಟದ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಲು ಸೂಕಿ ಅವರಿಗೆ ಸಾಧ್ಯವಾಗಲಿದೆ.
ವಿನ್ಮಿಂಟ್ಅವರು ಇದಕ್ಕೂ ಮುನ್ನ ಸ್ಪೀಕರ್ಆಗಿದ್ದರು. ರೋಹಿಂಗ್ಯಾ ಮುಸ್ಲಿಂ ಸಮುದಾಯದವರ ಬಿಕ್ಕಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾರಕಕ್ಕೇರಿದಂತೆಯೇ, ಮ್ಯಾನ್ಮಾರ್ ಅಧ್ಯಕ್ಷರಾಗಿದ್ದ ಹಿತಿನ್ ಕಾ ಕಳೆದ ವಾರ ದಿಢೀರನೆ ರಾಜೀನಾಮೆ ನೀಡಿದ್ದರು. ಸಂಸತ್ತಿನಲ್ಲಿ ಮೂರನೇ ಎರಡು ಭಾಗದಷ್ಟು ಮತ ಪಡೆಯುವ ಮೂಲಕ ವಿನ್ಮಿಂಟ್ ಸ್ಥಾನಕ್ಕೆ ಆಯ್ಕೆಯಾದರು.
ವಿದೇಶಿ ವ್ಯಕ್ತಿಯನ್ನು ಸೂಕಿ ಮದುವೆಯಾಗಿದ್ದು, ಮಕ್ಕಳಿಬ್ಬರೂ ಬ್ರಿಟಿಷ್ಪ್ರಜೆಗಳಾಗಿರುವ ಕಾರಣ ಅವರು ಅಧ್ಯಕ್ಷರಾಗುವುದನ್ನು ಸೇನಾಕರಡು ಸಂವಿಧಾನ ನಿಷೇಧಿಸಿದೆ.
2015 ಚುನಾವಣೆಯಲ್ಲಿ ಇವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಬಹುಮತಗಳಿಸಿದ್ದರಿಂದ, ಸೂಕಿ ಕೌನ್ಸೆಲರ್ಆಗಿ ನೇಮಕಗೊಂಡರು. ಆದರೆ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇರಲಿಲ್ಲ.

 ವಾಷಿಂಗ್ಟನ್‌: ಆರ್ಕ್ಟಿಕ್ ಸರೋವರದ ಮಂಜುಗಡ್ಡೆಯ ಮೇಲು ಹೊದಿಕೆಯ ವಿಸ್ತೀರ್ಣ ಇದುವರೆಗಿನ ಎರಡನೇ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆನಾಸಾತಿಳಿಸಿದೆ.
ವರ್ಷ 144.8 ಲಕ್ಷ ಚದರ ಕಿಲೋ ಮೀಟರ್ವರೆಗೆ ಮಾತ್ರ ವಿಸ್ತರಿಸಿದೆ. 2017 ಮಾರ್ಚ್‌ 7ರಂದು ದಾಖಲೆಯ ಕನಿಷ್ಠ ಮಟ್ಟ ತಲುಪಿತ್ತು. ಪ್ರತಿ ವರ್ಷ ಫೆಬ್ರುವರಿಏಪ್ರಿಲ್ ಅವಧಿಯಲ್ಲಿ ವಾರ್ಷಿಕ ಗರಿಷ್ಠ ವಿಸ್ತೀರ್ಣ ತಲುಪುತ್ತದೆ ಎಂದು ನಾಸಾ ತಿಳಿಸಿದೆ.
ಹವಾಮಾನ ಬದಲಾವಣೆಯಿಂದಾಗಿ ಆರ್ಕ್ಟಿಕ್ ಮಂಜುಗಡ್ಡೆ ಹೊದಿಕೆ ಪ್ರಮಾಣ ಕಡಿಮೆ ಆಗುತ್ತಿರುವುದು ಮುಂದುವರಿದಿದೆಎಂದುನಾಸಾ ಗೊಡ್ಡಾರ್ಡ್ಬಾಹ್ಯಾಕಾಶ ಉಡ್ಡಯನ ಕೇಂದ್ರದ ಹಿರಿಯ ಹವಾಮಾನ ವಿಜ್ಞಾನಿ ಕ್ಲೇರ್ಪಾರ್ಕಿನ್ಸನ್ತಿಳಿಸಿದ್ದಾರೆ.
ಬಿಸಿಯಾಗುವಿಕೆ ಎಂದರೆ ಕಡಿಮೆ ಮಂಜುಗಡ್ಡೆ ರಚನೆಯಾಗುವುದು ಮತ್ತು ಹೆಚ್ಚು ಪ್ರಮಾಣದ ಮಂಜುಗಡ್ಡೆ ಕರಗುವುದು. ಇದೊಂದು ದ್ವಿಮುಖ ಪ್ರಕ್ರಿಯೆ. ಕಡಿಮೆ ಮಂಜುಗಡ್ಡೆ ಇರುವುದರಿಂದ ಸೂರ್ಯ ಕಿರಣಗಳ ಪ್ರತಿಫಲನವೂ ಕಡಿಮೆಯಾಗುತ್ತದೆ. ಇದರಿಂದ ತಾಪಮಾನ ಹೆಚ್ಚಳವಾಗುತ್ತದೆಎಂದು ಪಾರ್ಕಿನ್ಸನ್ತಿಳಿಸಿದ್ದಾರೆ.
1981ರಿಂದ 2010ರವರೆಗಿನ ಗರಿಷ್ಠ ಸರಾಸರಿ ಮಂಜುಗಡ್ಡೆ ಹೊದಿಕೆಯ ವಿಸ್ತೀರ್ಣ 11.6 ಲಕ್ಷ ಚದರ ಕಿಲೋ ಮೀಟರ್ಆಗಿತ್ತು ಎಂದು ಎನ್ಎಸ್ಐಡಿಸಿ ನಡೆಸಿದ ಜಂಟಿ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಕೇಪ್ ಕೆನವೆರಾಲ್‌ (ಅಮೆರಿಕ): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆನಾಸಾ’, ಮಂಗಳಗ್ರಹಕ್ಕೆ ಕಳುಹಿಸಿದ್ದಕ್ಯೂರಿಯಾಸಿಟಿರೋವರ್‌, ಮಾರ್ಚ್‌ 23ರಂದು ಎರಡು ಸಾವಿರ ದಿನಗಳನ್ನು ಪೂರೈಸಿದೆ.
ಮಂಗಳ ಗ್ರಹದಲ್ಲಿ ಒಂದು ಸೌರದಿನವೆಂದರೆ 24 ಗಂಟೆ 39 ನಿಮಿಷ ಮತ್ತು 35 ಸೆಕಂಡ್ಗಳು. ಮಂಗಳ ಗ್ರಹದಲ್ಲಿನ 2,000 ದಿನಗಳು ಭೂಮಿಯ ಮೇಲಿನ 2,055 ದಿನಗಳಿಗೆ ಸಮವಾಗಿವೆ.
ಆರು ಚಕ್ರಗಳನ್ನು ಹೊಂದಿರುವ ರೋವರ್‌, 2012ರಿಂದ ಮಂಗಳ ಗ್ರಹದ ಮೇಲೆ ಅನ್ವೇಷಣೆ ನಡೆಸುತ್ತಿದೆ. ಇದುವರೆಗೆ ಮಂಗಳನ ಅಂಗಳದಲ್ಲಿ 18.7 ಕಿಲೋ ಮೀಟರ್ಸಂಚರಿಸಿದೆ
ಮಂಗಳ ಗ್ರಹದಲ್ಲಿ ಕಲ್ಲು ಮತ್ತು ಮಣ್ಣು ಅಧಿಕವಾಗಿರುವ ಪ್ರದೇಶದಲ್ಲಿಕ್ಯೂರಿಯಾಸಿಟಿರೋವರ್ನೆಲ ಅಗೆಯಲಿದ್ದು, ನಂತರ ಅದು ಕಳುಹಿಸುವ ಮಣ್ಣಿನ ಮಾದರಿಗೆನಾಸಾಸಂಶೋಧಕರು ಕಾಯುತ್ತಿದ್ದಾರೆ.

ಬರ್ಲಿನ್: ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ಸುಮಾರು 22 ಕೋಟಿ ಮಂದಿ ಮಾತನಾಡುವ, 80 ವಿಧಗಳನ್ನು ಹೊಂದಿರುವ ದ್ರಾವಿಡ ಭಾಷೆ
ಗಳು 4,500 ವರ್ಷಗಳ ಹಿಂದೆಯೇ ಉಗಮವಾಗಿದ್ದವು ಎಂದು ಸಂಶೋಧನೆಯೊಂದು ತಿಳಿಸಿದೆ.
ಜರ್ಮನಿಯ ಮ್ಯಾಕ್ಸ್ಪ್ಲಾಂಕ್ಮಾನವ ಇತಿಹಾಸದ ವಿಜ್ಞಾನ ಸಂಸ್ಥೆ ಮತ್ತು ಡೆಹ್ರಾಡೂನ್ ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ಭಾಷಾ ವಿಶ್ಲೇಷಣೆ ನಡೆಸಿವೆ. ‘ರಾಯಲ್ ಸೊಸೈಟಿ ಓಪನ್ ಸೈನ್ಸ್ನಿಯತಕಾಲಿಕದಲ್ಲಿ ವರದಿ ಪ್ರಕಟವಾಗಿದೆ. ಅಧ್ಯಯನಕ್ಕೆ ದ್ರಾವಿಡ ಭಾಷೆಗಳ ಉಪಪಂಗಡಗಳ ಸ್ಥಳೀಯರನ್ನು ನೇರವಾಗಿ ಮಾತನಾಡಿಸಿ, ದತ್ತಾಂಶ ಸಂಗ್ರಹಿಸಲಾಗಿದೆ. ಮೊದಲಿನ ಭಾಷಾ ಮತ್ತು ಪ್ರಾಚ್ಯವಸ್ತು ಅಧ್ಯಯನಗಳ ಫಲಿತಾಂಶವನ್ನೇ ಅಧ್ಯಯನದ ಫಲಿತಾಂಶವೂ ಹೋಲುತ್ತದೆ.
ಪಶ್ಚಿಮದಲ್ಲಿ ಅಫ್ಗಾನಿಸ್ತಾನ, ಪೂರ್ವದಲ್ಲಿ ಬಾಂಗ್ಲಾದೇಶವನ್ನು ಒಳಗೊಂಡಿರುವ ದಕ್ಷಿಣ ಏಷ್ಯಾ ವಲಯ, ದ್ರಾವಿಡ, ಇಂಡೊಯುರೋಪಿಯನ್ ಮತ್ತು ಸೈನೊಟಿಬಿಟಿಯನ್ ಸೇರಿದಂತೆ ಆರು ದೊಡ್ಡ ಭಾಷಾ ಕುಟುಂಬಗಳನ್ನು ಮತ್ತು ಕನಿಷ್ಠ 600 ಭಾಷೆಗಳನ್ನು ಒಳಗೊಂಡಿದೆ.
ದ್ರಾವಿಡ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಬಹು ಹಿಂದೆ ರಚಿಸಿರುವ ಸಾಕಷ್ಟು ಸಾಹಿತ್ಯ ಕೃತಿಗಳು ಲಭ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.  3,500 ವರ್ಷಗಳ ಹಿಂದೆ ಇಂಡೊಆರ್ಯನ್ನರು ಭಾರತಕ್ಕೆ ಬರುವ ಮೊದಲೇ ದ್ರಾವಿಡರು ಭಾರತ ಉಪಖಂಡದಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಸಂಶೋಧನಾ ವಲಯದಲ್ಲಿ ಸಹಮತ ಮೂಡಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....