ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಗಗನಚುಂಬಿ ಮರಗಳ ಕಾಡು ಮ್ಯೂರ್ ವುಡ್ಸ್‌



ಮಂಜುಳಾ ರಾಜ್

ಅಮೆರಿಕದಲ್ಲಿ ಮಗನ ಮನೆಗೆ ಹೋದಾಗ ಮ್ಯೂರ್ ವುಡ್ಸ್‌ ಎನ್ನುವ ಸ್ಥಳಕ್ಕೆ ಹೋಗೋಣವೆಂದ. ವುಡ್ಸ್‌ ಅಂದಾಗ ಅದೇನಿರಬಹುದು, ವುಡ್ ಅಂದರೆ ಕಾಡಾ ಎಂದುಕೊಂಡೆ. ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯ ಪೆಸಿಫಿಕ್ ಬಂದರಿನ ಹತ್ತಿರದ ಟಮಲ್ ಪೇಸ್ ಶಿಖರದ ರಾಷ್ಟ್ರೀಯ ಉದ್ಯಾನ ಸಮಿತಿಯ ಭಾಗವಾದ ಮ್ಯೂರ್ ವುಡ್ಸ್‌ ರಾಷ್ಟ್ರೀಯ ಸ್ಮಾರಕ ಅತ್ಯಂತ ಅಪರೂಪದ ಅರಣ್ಯವೆನಿಸಿಕೊಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ 12 ಮೈಲಿ ದೂರವಿರುವ ಮ್ಯೂರ್ ವುಡ್ಸ್‌ 554 ಎಕರೆಗಳಲ್ಲಿ ಹರಡಿಕೊಂಡಿದೆ. ಅದರಲ್ಲಿ 240 ಎಕರೆಗಳಷ್ಟು ಪ್ರದೇಶ ಬಹಳ ಅಪರೂಪವಾದ ಪುರಾತನವಾದ ಕಾಡು ಪ್ರದೇಶವೆನಿಸಿಕೊಂಡಿದೆ. ಮನುಷ್ಯ ಪ್ರಕೃತಿಗೆ ಗೌರವ ನೀಡಿ, ಕಾಪಾಡಿ ಉಳಿಸಿಕೊಂಡಿರುವ ಒಳ್ಳೆಯ ಮಾದರಿ ಈ ಕಾಡು.
ತಂಪೋ ತಂಪು: ಹೊರಗಡೆ ಬಿಸಿಲು ಸುಡುತ್ತಿದ್ದರೂ ಆ ಅರಣ್ಯ ಪ್ರದೇಶದ ಒಳ ಹೊಕ್ಕೊಡನೆ ಚಳಿಯಿಂದ ಜಿಲ್ ಎನಿಸುತ್ತದೆ. ಮೆಲ್ಲಗೆ ನಡುಗುವಂತಾಗುತ್ತದೆ. ಪೆಸಿಫಿಕ್ ಮಹಾ ಸಾಗರದ ಸಾಮೀಪ್ಯ ಇರುವುದರಿಂದ ಈ ಪುರಾತನ ಅರಣ್ಯ ಸದಾ ಸಮುದ್ರದ ಮೇಲ್ಪದರದ ಹಿಮದಿಂದ ಆವರಿಸಿಕೊಂಡಿರುತ್ತದೆ. ಅಲ್ಲಿ ಸದಾ ಶೀತದ ವಾತಾವರಣವಿದ್ದು ಮರಗಳು ವೇಗವಾಗಿ ಬೆಳೆಯಲು ಸಹಾಯಕವಾಗಿದೆ. ಹಿಮ ಈ ಅರಣ್ಯದ ರೆಡ್‌ ವುಡ್ ಜಾತಿಯ ಮರಗಳಿಗೆ ಜೀವಜಲದಂತಿದೆ. ಮುಖ್ಯವಾಗಿ ಬೇಸಿಗೆಯಲ್ಲಿ, ಬರಗಾಲದಲ್ಲಿ ಈ ಹಿಮವೇ ಅವುಗಳಿಗೆ ಜೀವನಾಧಾರ, ಅದನ್ನು ಬಳಸಿಕೊಂಡೇ ಬೆಳೆಯುತ್ತದೆ.
ಈ ಅರಣ್ಯ ಸ್ಮಾರಕದೊಳಗಿನ ಹವಾಮಾನ ಬಹಳ ತಂಪಾಗಿರುತ್ತದೆ. ಮಳೆಗಾಲದಲ್ಲಿ ಚೆನ್ನಾದ ಮಳೆ ಇದ್ದು ಬೇಸಿಗೆಯಲ್ಲಿ ಹಿಮದ ಮಳೆಯಿಂದಲೇ ಅದು ಉಸಿರಾಡಲು ಸಾಧ್ಯ.
ಇತಿಹಾಸ: 150 ಮಿಲಿಯನ್ ಅರ್ಥಾತ್ 150 ದಶಲಕ್ಷ ವರ್ಷಗಳ ಹಿಂದೆ ಇಡೀ ಯು.ಎಸ್.ಎ. ತುಂಬಾ ರೆಡ್ ವುಡ್ ಮತ್ತು ಸಿಕ್ವಾಯ್ ಮರಗಳ ದಟ್ಟ ಅರಣ್ಯಗಳಿದ್ದುವಂತೆ, ಕ್ಯಾಲಿಫೋರ್ನಿಯಾದಲ್ಲಿ ಮರಗಳನ್ನು ಕಡಿಯುವ ಲಾಗಿಂಗ್ ಉದ್ಯಮ ಪ್ರಾರಂಭವಾಗುವುದಕ್ಕಿಂತ ಮುಂಚೆ 2 ದಶಲಕ್ಷ ಎಕರೆಗಳಷ್ಟು ಪುರಾತನವಾದ  ಬೃಹತ್ ಎತ್ತರದ ಮರಗಳನ್ನು ಹೊಂದಿರುವ ಅರಣ್ಯವಿತ್ತಂತೆ. 20ನೇ ಶತಮಾನದ ಹೊತ್ತಿಗೆ ಬಹಳಷ್ಟು ಅರಣ್ಯ ಕಡಿಯಲಾಯಿತಂತೆ. ಮನುಷ್ಯ ಎಲ್ಲಿಂದ ಎಲ್ಲಿಗೆ ಹೋದರೂ ಅಷ್ಟೆ, ತನ್ನ ಸುಖಕ್ಕಾಗಿ ಏನಾದರೂ ಮಾಡಬಲ್ಲ, ಅಮೆರಿಕವಾದರೇನು ಭಾರತವಾದರೇನು ಅಲ್ಲವೆ? ಆದರೆ ಈ ಪುರಾತನ ರೆಡ್ ವುಡ್ ಮರಗಳನ್ನು ಹೊಂದಿರುವ ಈ ತಾಣವನ್ನು ಮಾತ್ರ ಮುಟ್ಟಿರಲಿಲ್ಲ. ಏಕೆಂದರೆ ಅಲ್ಲಿಗೆ ಪ್ರವೇಶ ಸುಲಭವಾಗಿರಲಿಲ್ಲ.
(ಮ್ಯೂರ್‌ ವುಡ್ಸ್‌ನಲ್ಲಿನ ಹಾದಿ)
ಹೆಸರಿನ ಪುರಾಣ: ಆ ಸಮಯದಲ್ಲಿ ಆಗ ತಾನೆ ರಾಜಕೀಯಕ್ಕೆ ಕಾಲಿಟ್ಟಿದ್ದ ವಿಲಿಯಮ್ ಕೆಂಟ್ ಈ ಅರಣ್ಯವನ್ನು ಗಮನಿಸುತ್ತಿದ್ದು 664 ಎಕರೆಗಳಷ್ಟು ಸ್ಥಳವನ್ನು ಟಮಲ್ ಪೇಸ್ ಶಿಖರದ ಭೂ ಮತ್ತು ಜಲ ವಿಭಾಗದ ಕಂಪನಿಯಿಂದ ಕೊಂಡುಕೊಂಡನು. ಆದರೆ ನಂತರದ 1907ರಲ್ಲಿ ಜಲಸಂಸ್ಥೆಯೊಂದು ಈ ಸ್ಥಳದಲ್ಲಿ ನೀರು ಹರಿಸಿ ಆ ಅರಣ್ಯವನ್ನು ಆಹುತಿ ಕೊಡಲು ನಿರ್ಧರಿಸಿತು. ಈ ಯೋಜನೆಗೆ ಕೆಂಟ್ ವಿರೋಧ ವ್ಯಕ್ತಪಡಿಸಿದಾಗ ಅವನನ್ನು ಕೋರ್ಟಿಗೆಳೆಯುತ್ತೇವೆ ಎಂದು ಆ ಜಲ ಸಂಸ್ಥೆ ಅವನನ್ನು ಹೆದರಿಸಿತು. ಆಗ ಕೆಂಟ್ ಅಲ್ಲಿನ ರೆಡ್ ಉಡ್ ಅರಣ್ಯದ 290 ಎಕರೆಗಳನ್ನು ಸರ್ಕಾರಕ್ಕೆ ದಾನ ನೀಡಿದ. ಹೇಗಾದರೂ ಆ ಕಾಡನ್ನು ಉಳಿಸುವ ಉದ್ದೇಶ ಕೆಂಟ್‌ನದಾಗಿತ್ತು. ಜನವರಿ 1908ರಲ್ಲಿ ಅಧ್ಯಕ್ಷ ರೂಸ್ ವೆಲ್ಟ್  ಅದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿದರು. ಖಾಸಗಿ ಪ್ರಜೆಯೊಬ್ಬನಿಂದ ಪಡೆದ ಭೂಮಿ ಈ ರೀತಿ ರಾಷ್ಟ್ರೀಯ ಸ್ಮಾರಕವಾದದ್ದು ಇದೇ ಮೊದಲಂತೆ. ಈ ಅರಣ್ಯಕ್ಕೆ ಕೆಂಟ್‌ನ ಹೆಸರನ್ನೇ ಇಡುವ ಉದ್ದೇಶವಿತ್ತಂತೆ ಆದರೆ ಕೆಂಟ್ ಅಂದಿನ ಪರಿಸರವಾದಿ ಮ್ಯೂರ್‌ನ ಹೆಸರನ್ನಿಡಬೇಕೆಂದು ಬಲವಂತ ಮಾಡಿದನಂತೆ. ಆ ಪರಿಸರವಾದಿ ನಿಸರ್ಗವನ್ನು ಕಾಪಾಡಲು ಮಾಡುತ್ತಿದ್ದ ಪ್ರಚಾರವೇ ಈ ಕಾಡಿನ ಉಳಿವಿಗೆ ಕಾರಣವಾಯಿತೆನ್ನುವುದು ಕೆಂಟ್‌ನ ಅಭಿಪ್ರಾಯ. ಹೀಗಾಗಿ  ಮ್ಯೂರ್ ವುಡ್ ಎನ್ನುವ ಹೆಸರು ಬಂದಿತು. 1937ರಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ನಿರ್ಮಾಣವಾದ ನಂತರ ಮ್ಯೂರ್ ವುಡ್‌ಗೆ ಪ್ರವಾಸಿಗರ ದಂಡು ಹರಿದು ಬರಲು ಆರಂಭವಾಯಿತು. 2008 ಜನವರಿ 9ರಂದು ಐತಿಹಾಸಿಕ ತಾಣವೆಂದು ರಾಷ್ಟ್ರೀಯ ನೋಂದಣಿಯಾಯಿತು.
ಮ್ಯೂರ್ ವುಡ್‌ನ ಮುಖ್ಯ ಆಕರ್ಷಣೆಯೆಂದರೆ ಅಲ್ಲಿನ ಬೃಹತ್ ಎತ್ತರದ ರೆಡ್ ವುಡ್ ಅಂದರೆ ಕೆಂಪು ಮರಗಳು, ಅವು ಸುಮಾರು 380 ಅಡಿ ಎತ್ತರ ಬೆಳೆಯುತ್ತವೆ. ಮ್ಯೂರ್ ವುಡ್‌ನಲ್ಲಿರುವ ಅತಿ ಎತ್ತರದ ಮರ 258 ಅಡಿ ಎತ್ತರವಿದೆ. ಈ ಮರದ ಬೀಜಗಳು ಒಂದು ಟೊಮ್ಯಾಟೋ ಗಾತ್ರವಿರುತ್ತದೆಯಷ್ಟೆ. ಅಲ್ಲಿರುವ ಬಹಳಷ್ಟು ಮರಗಳು 500ರಿಂದ 800 ವರ್ಷ ಹಳೆಯವು. ಅತಿ ಹಳೆಯದೆಂದರೆ 1200 ವರ್ಷಗಳ ಪುರಾತನ ಮರಗಳಿವೆ.
ಇದರ ಜೊತೆ ಸ್ವಲ್ಪ ಕಡಿಮೆ ಎತ್ತರದ ಮರಗಳೂ ಇವೆ. ಅವು ಈ ರೆಡ್ ವುಡ್ ಮರಗಳ ಮಧ್ಯದಿಂದ ಬರುವ ಸೂರ್ಯನ ಬೆಳಕನ್ನು ಉಪಯೋಗ ಮಾಡಿಕೊಂಡು ಜೀವಿಸುತ್ತವೆ. ಈ ಜಾತಿಯ ಮರಗಳು ತಮಗೆ ದೊರಕಿದ ಸೂರ್ಯನ ಬೆಳಕಿಗೆ ಅನುಗುಣವಾಗಿ ತಮ್ಮ ಎಲೆ, ಕಾಂಡ ಬೇರುಗಳನ್ನು ರೂಪಿಸಿಕೊಂಡು ಬದುಕುತ್ತವೆ. ಶ್ರೀಮಂತರ ಮಧ್ಯೆ ಇರುವ ಕಡಿಮೆ ಸವಲತ್ತಿನಲ್ಲೇ ಜೀವಿಸುವ ಬಡವರಂತೆ.
ರೆಡ್ ವುಡ್ ಮರಗಳ ಜೊತೆ ಪಕ್ಷಿ ಪ್ರಾಣಿಗಳು: ಮರಗಳಿದ್ದಲ್ಲಿ ಅಲ್ಲೇ ಜೀವನ, 50 ಜಾತಿಯ ಪಕ್ಷಿಗಳು ಇಲ್ಲಿವೆ. ಈ ಎತ್ತರದ ಮರಗಳು ಹಸಿರಿನ ಸೂರನ್ನೇ ಸೃಷ್ಟಿ ಮಾಡುವುದರಿಂದ ತಮಗೆ ಸಿಗುವ ಅಲ್ಪ ಸ್ವಲ್ಪ ಬೆಳಕಿನಲ್ಲಿ ಬೆಳೆಯುವ ಮರ ಗಿಡಗಳಲ್ಲಿ ಹೂವು ಹಣ್ಣುಗಳು ಕಡಿಮೆ. ಅಂತೆಯೇ ಕೀಟಗಳೂ ಕಡಿಮೆ. ಆದ್ದರಿಂದ ಪಕ್ಷಿಗಳೂ ಕಡಿಮೆ. ಇಲ್ಲವಾದಲ್ಲಿ ಅಷ್ಟು ದೊಡ್ಡ ಕಾನನದಲ್ಲಿ ಮತ್ತೊಂದಷ್ಟು ಪಕ್ಷಿಗಳು ಇರಬೇಕಾಗಿತ್ತು. ಬೇರೆಡೆ ಅಪರೂಪವಾದ ಚುಕ್ಕೆಯನ್ನು ಮೈ ತುಂಬಾ ತುಂಬಿಕೊಂಡಿರುವ ಗೂಬೆಗಳು ಮತ್ತು ಮರ ಕುಟುಕಗಳೂ ಹೆಚ್ಚಾಗಿವೆ.
ಅನೇಕ ಸಸ್ತನಿಗಳಿಗೂ ಈ ಕಾಡು ಆಶ್ರಯ ನೀಡಿದೆ. ಆದರೆ ಇವುಗಳು ನಿಶಾಚರಿಗಳಾದ್ದರಿಂದ ಮತ್ತು ಬಿಲಗಳಲ್ಲಿ ವಾಸಿಸುವುದರಿಂದ ನೋಡಲು ಸುಲಭವಾಗಿ ಲಭ್ಯವಿಲ್ಲ. ಹನ್ನೊಂದು ಜಾತಿಯ ಬಾವಲಿಗಳಿವೆ, ಇವೆಲ್ಲವುದರ ಜೊತೆಗೆ ಮ್ಯೂರ್ ವುಡ್ಸ್ ಗೋಲ್ಡನ್ ಗೇಟ್ ಮನರಂಜನಾ ತಾಣದ ಭಾಗವೂ ಹೌದು.
(ಧರೆಗುರುಳಿದ ಮೇಲೂ ಕಲೆಯಾಗಿ ಜೀವತಳೆವ ಸಾರ್ಥಕ ಜನ್ಮ ಇಲ್ಲಿನ ಮರಗಳದ್ದು)
ಪ್ರವಾಸೋದ್ಯಮದ ಜಾಣ್ಮೆ: ಹೊರಗಡೆ ಬಿಸಿಲು ಸುಡುತ್ತಿದ್ದರೂ ಒಮ್ಮೆ ಒಳಗೆ ಹೋದರೆ ನಡುಗುವಷ್ಟು ತಂಪೆನಿಸುತ್ತದೆ. ಅಚ್ಚುಕಟ್ಟಾದ ಕಾಲುದಾರಿಯನ್ನು ರೂಪಿಸಲಾಗಿದೆ. ಎತ್ತರದ ಕೆಂಪು ಮರಗಳ ಜೊತೆಗೆ ಸಣ್ಣ ಪುಟ್ಟ ಮರಗಳು, ನೆಲಕ್ಕೆ ಹಸಿರು ಹಾಸಿದಂತಿರುವ ನೋಡಲು ನಮ್ಮ ಮುಟ್ಟಿದರೆ ಮುನಿಯಂತಿರುವ ನೆಲಹಾಸಿನಂತೆ ಕಾಣುವ ಹಸಿರು ಪುಟ್ಟ ನೆಲ ಬಳ್ಳಿಗಳು, ಅಲ್ಲಲ್ಲಿ ಜುಳುಜುಳು ಎಂದು ಹರಿಯುವ ನೀರಿನ ಝರಿಗಳು, ಸಾಹಸ ಪ್ರಿಯರಿಗೆ ಎತ್ತರಕ್ಕೆ ಏರಲು ಮೆಟ್ಟಲುಗಳು, ತಿನ್ನಲು ರೆಸ್ಟೋರೆಂಟ್, ತಿಂದ ಮೇಲೆ ಶೌಚಕ್ಕೆ ಅನುಕೂಲ, ಒಮ್ಮೆ ಒಳಗೆ ಹೋದರೆ ನಿಮಗೆ ಸಾಕೆನಿಸುವಷ್ಟು ಸುತ್ತಾಡಬಹುದು. ಸದಾ ಪ್ರವಾಸಿಗರು ಇರುತ್ತಾರೆ. ದಿನಕ್ಕೆ ಆರು ಸಾವಿರ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಅನೇಕ ಕ್ರೀಡಾ ಚಟುವಟಿಕೆಗಳ ತಾಣವೂ ಹೌದು. ವಿದೇಶಗಳಲ್ಲಿ ಪ್ರವಾಸೋದ್ಯಮ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ. ಬರುವ ಪ್ರವಾಸಿಗಳಿಗೆ ಅನುಕೂಲ ನೀಡುತ್ತದೆ ಮತ್ತು ಪ್ರವೇಶಕ್ಕೆ ದರವನ್ನೂ ತೆಗೆದುಕೊಳ್ಳುತ್ತದೆ. ಹತ್ತು ಡಾಲರ್ ಪ್ರವೇಶ ದರ, ನಿಜಕ್ಕೂ ನಾವು ಅವರಿಂದ ಕಲಿತುಕೊಳ್ಳ ಬೇಕಾದ ವಿಷಯವಿದು. ನಮ್ಮಲ್ಲಿರುವ ಅಪಾರ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಬಾಧ್ಯತೆ ನಮ್ಮದು.
ನಮ್ಮ ಪಶ್ಚಿಮ ಘಟ್ಟಗಳಿಗಿಂತ ದಟ್ಟ ಅರಣ್ಯಗಳಾದರೂ ಯಾವುದಿವೆ? ನಾವು ಮನಸ್ಸು ಮಾಡಿ ನಮ್ಮಲ್ಲಿನ ಕಾಡುಗಳನ್ನು ಉಳಿಸಿ, ಬೆಳೆಸಬೇಕಷ್ಟೆ.
**
ತಂಪೋ ತಂಪು: ಹೊರಗಡೆ ಬಿಸಿಲು ಸುಡುತ್ತಿದ್ದರೂ ಆ ಅರಣ್ಯ ಪ್ರದೇಶದ ಒಳ ಹೊಕ್ಕೊಡನೆ ಚಳಿಯಿಂದ ಜಿಲ್ ಎನಿಸುತ್ತದೆ. ಮೆಲ್ಲಗೆ ನಡುಗುವಂತಾಗುತ್ತದೆ. ಪೆಸಿಫಿಕ್ ಮಹಾ ಸಾಗರದ ಸಾಮೀಪ್ಯ ಇರುವುದರಿಂದ ಈ ಪುರಾತನ ಅರಣ್ಯ ಸದಾ ಸಮುದ್ರದ ಮೇಲ್ಪದರದ ಹಿಮದಿಂದ ಆವರಿಸಿಕೊಂಡಿರುತ್ತದೆ. ಅಲ್ಲಿ ಸದಾ ಶೀತದ ವಾತಾವರಣವಿದ್ದು ಮರಗಳು ವೇಗವಾಗಿ ಬೆಳೆಯಲು ಸಹಾಯಕವಾಗಿದೆ. ಹಿಮ ಈ ಅರಣ್ಯದ ರೆಡ್‌ ವುಡ್ ಜಾತಿಯ ಮರಗಳಿಗೆ ಜೀವಜಲದಂತಿದೆ. ಮುಖ್ಯವಾಗಿ ಬೇಸಿಗೆಯಲ್ಲಿ, ಬರಗಾಲದಲ್ಲಿ ಈ ಹಿಮವೇ ಅವುಗಳಿಗೆ ಜೀವನಾಧಾರ, ಅದನ್ನು ಬಳಸಿಕೊಂಡೇ ಬೆಳೆಯುತ್ತದೆ.
ಈ ಅರಣ್ಯ ಸ್ಮಾರಕದೊಳಗಿನ ಹವಾಮಾನ ಬಹಳ ತಂಪಾಗಿರುತ್ತದೆ. ಮಳೆಗಾಲದಲ್ಲಿ ಚೆನ್ನಾದ ಮಳೆ ಇದ್ದು ಬೇಸಿಗೆಯಲ್ಲಿ ಹಿಮದ ಮಳೆಯಿಂದಲೇ ಅದು ಉಸಿರಾಡಲು ಸಾಧ್ಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...