ವಿಷಯಕ್ಕೆ ಹೋಗಿ

ಎರಡು ಆಯಾಮಗಳ ಕಲಿಕೆ ಬಯೋ ಎಂಜಿನಿಯರಿಂಗ್



ಜೀವ ಶಾಸ್ತ್ರ ಮತ್ತು ಔಷಧ ಶಾಸ್ತ್ರ ಎರಡೂ ಆಯಾಮಗಳನ್ನು ಕಲಿಸುವ ಶಿಕ್ಷಣ ಶಾಖೆ ಸಾಮಾನ್ಯವಾಗಿ ಕರೆಯುವ ಬಯೋ ಎಂಜಿನಿಯರಿಂಗ್‌ ಅಥವಾ ಬಯೋ ಮೆಡಿಕಲ್‌ ಎಂಜಿನಿಯರಿಂಗ್‌. ಇದನ್ನು ಕಲಿಯಲು ಒಂದಿಷ್ಟು ಕಷ್ಟವೆನಿಸಿದರೂ ಅತ್ಯುತ್ತಮ ಉದ್ಯೋಗಾವಕಾಶ ಇರುವ ಕ್ಷೇತ್ರ ಇದು. ತನ್ನ ವೈಶಿಷ್ಟ್ಯದಿಂದಾಗಿಯೇ ಇದು ಇತರ ಎಂಜಿನಿಯರಿಂಗ್‌ ವಿಭಾಗಗಳಿಗಿಂತ ಭಿನ್ನವಾಗಿದೆ.
ರೋಗಿಗಳಿಗೆ ನೀಡುವ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಿ ಇನ್ನಷ್ಟು ಪರಿಣಾಮಕಾರಿಯಾಗುವಂತೆ ಮಾಡುವ ಜೀವ ಶಾಸ್ತ್ರ ಮತ್ತು ಔಷಧ ಶಾಸ್ತ್ರ ಎರಡನ್ನೂ ಒಳಗೊಂಡ ಎಂಜಿನಿಯರಿಂಗ್‌ ಶಾಕೆ ಬಯೋಮೆಡಿಕಲ್‌ ಎಂಜಿನಿಯರಿಂಗ್‌. ಬಯೋ ಮೆಡಿಕಲ್‌ ಎಂಜಿನಿಯರ್‌ಗಳು ಸಂಶೋಧಕರು ಮತ್ತು ವೈದ್ಯರ ಜೊತೆಗೂಡಿ ವೈದ್ಯಕೀಯ ಉಪಕರಣಗಳು, ಯಂತ್ರಗಳನ್ನು ಅಭಿವೃದ್ದಿ ಪಡಿಸಲು ನೆರವಾಗುತ್ತಾರೆ. ರೋಗದ ವಿಶ್ಲೇಷಣೆ, ರೋಗ ಪತ್ತೆ, ಚಿಕಿತ್ಸೆ ಮತ್ತು ರೋಗಿಯ ಚೇತರಿಕೆ ಈ ರೀತಿ ಎಲ್ಲಾ ಅಂಶಗಳಲ್ಲೂ ಈ ಎಂಜಿನಿಯರಿಂಗ್‌ ವಿಭಾಗದ ಪಾತ್ರವಿರುತ್ತದೆ. ಉಳಿದ ಎಂಜಿನಿಯರಿಂಗ್‌ ವಿಭಾಗದಿಂದ ಭಿನ್ನವಾಗಿರುವ ಇದು, ಆರೋಗ್ಯ ಕಾಳಜಿಯ ಬಗ್ಗೆ ಆಧುನಿಕ ಜೀವ ಶಾಸ್ತ್ರೀಯ ನಿಯಮಗಳನ್ನು ಅಳವಡಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತದೆ.
ಕೋರ್ಸ್‌ ವಿವರ: ಡಿಪ್ಲೋಮಾ, ಬ್ಯಾಚುಲರ್‌ ಡಿಗ್ರಿ ಮತ್ತು ಮಾಸ್ಟರ್‌ ಡಿಗ್ರಿ, ಪಿಎಚ್‌ಡಿ ಕೋರ್ಸ್‌ಗಳು ಬಯೋ ಮೆಡಿಕಲ್‌ ಎಂಜಿನಿಯರಿಂಗ್‌ನಲ್ಲಿವೆ. ಡಿಪ್ಲೋಮಾ ಇನ್‌ ಬಯೋ ಮೆಡಿಕಲ್‌ ಎಂಜಿನಿಯರಿಂಗ್‌, ಬ್ಯಾಚುಲರ್‌ ಆಫ್‌ ಎಂಜಿನಿಯರಿಂಗ್‌ ಇನ್‌ ಬಯೋ ಮೆಡಿಕಲ್‌ ಎಂಜಿನಿಯರಿಂಗ್‌, ಬ್ಯಾಚುಲರ್‌ ಆಫ್‌ ಟೆಕ್ನಾಲಜಿ ಇನ್‌ ಬಯೋ ಮೆಡಿಕಲ್‌ ಎಂಜಿನಿಯರಿಂಗ್‌, ಬ್ಯಾಚುಲರ್‌ ಆಫ್‌ ಟೆಕ್ನಾಲಜಿ ಇನ್‌ ಬಯೋಮೆಡಿಕಲ್‌ ಇನ್‌ಸ್ಟ್ರುಮೆಂಟೇಶನ್‌, ಮಾಸ್ಟರ್‌ ಆಫ್‌ ಎಂಜಿನಿಯರಿಂಗ್‌ ಇನ್‌ ಬಯೋಮೆಡಿಕಲ್‌ ಎಂಜಿನಿಯರಿಂಗ್‌, ಮಾಸ್ಟರ್‌ ಆಫ್‌ ಟೆಕ್ನಾಲಜಿ ಇನ್‌ ಬಯೋಮೆಡಿಕಲ್‌ ಎಂಜಿನಿಯರಿಂಗ್‌, ಡಾಕ್ಟರ್‌ ಆಫ್‌ ಫಿಲಾಸಫಿ ಇನ್‌ ಬಯೋಮೆಡಿಕಲ್‌ ಎಂಜಿನಿಯರಿಂಗ್‌ ಮೊದಲಾದ ಕೋರ್ಸ್‌ಗಳು ಲಭ್ಯವಿದೆ. ಮಣಿಪಾಲದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಕಲಬುರ್ಗಿಯಲ್ಲಿರುವ ಸೆಂಟ್ರಲ್‌ ಯೂನಿವರ್ಸಿಟಿ ಆಫ್‌ ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು ಈ ಕೋರ್ಸ್‌ಗಳನ್ನು ಆಫರ್‌ ಮಾಡುತ್ತವೆ. ಜೀವ ಶಾಸ್ತ್ರ, ಗಣಿತ ಮತ್ತು ರಸಾಯನ ಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು 12ನೇ ತರಗತಿ ಉತ್ತೀರ್ಣರಾದವರು ಬ್ಯಾಚುಲರ್‌ ಡಿಗ್ರಿ ಕೋರ್ಸ್‌ ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ.
ಅವಶ್ಯಕ ಕೌಶಲ್ಯ: ವಿದ್ಯಾರ್ಥಿಗಳಿಗೆ ಹಲವಾರು ಅವಶ್ಯಕ ಕೌಶಲ್ಯಗಳು ಬೇಕಾಗುತ್ತವೆ. ಅದರಲ್ಲಿ ಮುಖ್ಯವಾಗಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ, ಅಪರೇಶನ್‌ ಅನಲೈಸಿಸ್‌, ವಿಶ್ಲೇಷಣಾತ್ಮಕವಾಗಿ ಯೋಚನೆ ಮಾಡುವುದು, ತಂತ್ರಜ್ಞಾನ ವಿನ್ಯಾಸ, ಸಿಸ್ಟಂ ಅನಲೈಸಿಸ್‌, ಕಲಿಕೆಯ ಕಾರ್ಯತಂತ್ರಗಳು, ಸಾಮಾಜಿಕ ಆಯಾಮದ ಯೋಚನೆ, ಸಮಾಜ ಜೀವನದ ಕುರಿತು ಆಸಕ್ತಿ, ಗುಣಮಟ್ಟದ ನಿಯಂತ್ರಣ ವಿಶ್ಲೇಷಣೆ, ಸಮಯ ಪಾಲನೆ, ಟ್ರಬಲ್‌ ಶೂಟಿಂಗ್‌ ಮೊದಲಾದ ಕೌಶಲ್ಯ ಇರಬೇಕು.
ಉದ್ಯೋಗ ಸ್ವರೂಪ: ಆಸ್ಪತ್ರೆ, ಔಷಧ ತಯಾರಕ ಸಂಸ್ಥೆಗಳು, ವೈದ್ಯಕೀಯ ಉಪಕರಣ ಉತ್ಪಾದನಾ ಸಂಸ್ಥೆ, ಸರಕಾರಿ ಸಂಸ್ಥೆಗಳು, ಫರ್ಮಾಸ್ಯುಟಿಕಲ್‌ಗಳಲ್ಲಿ ಬಯೋಮೆಡಿಕಲ್‌ ಎಂಜಿನಿಯರ್‌ಗಳಿಗೆ ಉದ್ಯೋಗ ಸಿಗುತ್ತದೆ. ಸಂಶೋಧನೆ ಮತ್ತು ಸರಕಾರಿ ಸಂಸ್ಥೆ, ವಿಶ್ವವಿದ್ಯಾಲಯಗಳಲ್ಲೂ ಸಾಕಷ್ಟು ಉದ್ಯೋಗಾವಕಾಶ ಇವರಿಗೆ ಇದೆ. ಎರಡು ಪ್ರಮುಖ ವಿಷಯಗಳಾದ ಜೀವ ಶಾಸ್ತ್ರ ಮತ್ತು ಎಂಜಿನಿಯರಿಂಗ್‌ನ್ನು ಒಟ್ಟಾಗಿ ಕಲಿಯುವುದರಿಂದ ಇವರಿಗೆ ಬೇಡಿಕೆ ಹೆಚ್ಚಿದೆ. ಮೆಡಿಕಲ್‌ ಪ್ರಾಕ್ಟೀಶನರ್‌, ಹೊಸ ವೈದ್ಯಕೀಯ ಉಪಕರಣಗಳ ಆವಿಷ್ಕಾರ, ಉತ್ಪಾದನಾ ಕಂಪನಿಗಳಿಗೆ ಇನ್‌ಸ್ಟ್ರುಮೆಂಟೇಶನ್‌ ಆಗಿ ಕೂಡ ಕೆಲಸ ಮಾಡಬಹುದು.
ಉದ್ಯೋಗ ವಿವರ: ನಾನಾ ಹುದ್ದೆಗಳನ್ನು ಬಯೋಮೆಡಿಕಲ್‌ ಎಂಜಿನಿಯರ್‌ಗಳು ಪಡೆಯಬಹುದು. ಮುಖ್ಯವಾಗಿ ಕ್ಲಿನಿಕಲ್‌ ಎಂಜಿನಿಯರ್‌ಗಳು, ಬಯೋಮೆಟೀರಿಯಲ್‌ ಎಂಜಿನಿಯರ್‌, ರೀಸರ್ಚ್‌ ಸೈಂಟಿಸ್ಟ್‌, ಬಯೋಮೆಕ್ಯಾನಿಕ್ಸ್‌ ಎಂಜಿನಿಯರ್‌, ಬಯೋಇನ್‌ಸ್ಟ್ರುಮೆಂಟೇಶನ್‌ ಎಂಜಿನಿಯರ್‌, ಸೆಲ್ಯುಲರ್‌, ಟಿಶ್ಯೂ ಆಂಡ್‌ ಜೆನಟಿಕ್‌ ಎಂಜಿನಿಯರ್‌, ಆರ್ಥೋಪೆಡಿಕ್‌ ಬಯೋ ಎಂಜಿನಿಯರ್‌, ಬೋಧನೆ, ಕ್ಲಾಸಿಕಲ್‌ ಮೆಕ್ಯಾನಿಕ್ಸ್‌, ಮೆಡಿಕಲ್‌ ಇಮೇಜಿಂಗ್‌ ಮೊದಲಾದ ಹುದ್ದೆಗಳು ಈ ವಿಭಾಗದಲ್ಲಿ ಬರುತ್ತವೆ. ಸಾಮಾನ್ಯವಾಗಿ ಸರಕಾರಿ ಕ್ಷೇತ್ರದಲ್ಲಿ ಆರಂಭಿಕ ಹಂತದಲ್ಲಿ 20ರಿಂದ 25 ಸಾವಿರ ವೇತನ ಮಾಸಿಕವಾಗಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....