ವಿಷಯಕ್ಕೆ ಹೋಗಿ

ಎಲ್ಲರ ಪ್ರೀತಿಯ ‘ಇಂಡಿಯನ್ ಸ್ಪಿಟ್ಜ್’ by ನಡೆ-ನುಡಿ – ನಾಗರಾಜ್ ಬದ್ರಾ.



ಇಂಡಿಯನ್ ಸ್ಪಿಟ್ಜ್ Indian Spitz
ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಇಶ್ಟಪಡುವ ನಾಯಿ ಎಂದರೆ ಸ್ಪಿಟ್ಜ್ (Spitz) ತಳಿಯ ನಾಯಿ. ಇದೊಂದು ವಿಶೇಶ ಬಗೆಯ ತಳಿಯಾಗಿದ್ದು, ಇದನ್ನು ಪಳಗಿಸುವುದು ತುಂಬಾ ಸುಲಬ. ಸ್ಪಿಟ್ಜ್ ನಾಯಿ ತಳಿ ಮೊದಲು ಎಲ್ಲಿ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಆದರೆ ಈ ತಳಿಗಳಲ್ಲಿ ಹೆಚ್ಚಿನವು ಹುಟ್ಟಿಕೊಂಡಿದ್ದು ಆರ‍್ಕ್ಟಿಕ್ (Arctic) ಪ್ರದೇಶ ಅತವಾ ಸೈಬೀರಿಯಾದಲ್ಲಿ ಎಂದು ಹೇಳಲಾಗುತ್ತದೆ. ಸ್ವಿಟ್ಜರ‍್ಲೆಂಡ್‍ನಲ್ಲಿ ಸ್ಪಿಟ್ಜ್ ತಳಿ ನಾಯಿಗಳ ಎಲುಬುಗೂಡುಗಳು (Skeletal) ಪತ್ತೆಯಾಗಿದ್ದು, ಅವು ಸುಮಾರು 2,000 ವರುಶದಶ್ಟು ಹಳೆಯವು ಎಂದು ತಿಳಿದುಬಂದಿದೆ. ಸಾವಿರಾರು ವರುಶಗಳಿಂದ ಮದ್ಯ ಯುರೋಪಿನಲ್ಲಿ ಇವು ನೆಲೆಸಿವೆ ಎಂಬುದಕ್ಕೆ ಪುರಾವೆಗಳು ಕೂಡ ಸಿಕ್ಕಿವೆ. ಆದರೆ ಜಗತ್ತಿನ ಇತರೆ ದೇಶಗಳಿಗೆ ಪರಿಚಯವಾಗಿದ್ದು ತುಂಬಾ ತಡವಾಗಿ.
ಸ್ಪಿಟ್ಜ್ ತಳಿಯಲ್ಲಿ ಪಿನ್ನಿಶ್ ಸ್ಪಿಟ್ಜ್, ಜರ‍್ಮನ್ ಸ್ಪಿಟ್ಜ್, ಡ್ಯಾನಿಶ್ ಸ್ಪಿಟ್ಜ್, ಇಂಡಿಯನ್ ಸ್ಪಿಟ್ಜ್, ಜಪಾನೀಸ್ ಸ್ಪಿಟ್ಜ್, ಅಮೇರಿಕನ್ ಎಸ್ಕಿಮೊ ಡಾಗ್, ಚೀನಾದ ಚೌ ಚೌ ತಳಿ ಹೀಗೆ ಹಲವಾರು ಬಗೆಗಳಿವೆ. ಇವುಗಳಲ್ಲಿ ಹೆಚ್ಚಿನವು ಹುಟ್ಟಿಕೊಂಡಿದ್ದು ಜರ‍್ಮನ್ ಸ್ಪಿಟ್ಜ್ ತಳಿಯಿಂದ, ಆದ್ದರಿಂದ ಇದನ್ನು ಸ್ಪಿಟ್ಜ್ ನ ಮೂಲ ತಳಿ ಎಂದು ಕರೆಯುತ್ತಾರೆ.
ಇಂಡಿಯಾ ಜೊತೆಗಿನ ನಂಟು
ಸ್ಪಿಟ್ಜ್ ತಳಿಯನ್ನು ಇಂಡಿಯಾಕ್ಕೆ ಪರಿಚಯಿಸಿದ್ದು ಬ್ರಿಟೀಶರು. ಅವರು ಜರ‍್ಮನ್ ಸ್ಪಿಟ್ಜ್ ತಳಿ ನಾಯಿಯನ್ನು ಇಂಡಿಯಾದ ಸ್ತಳೀಯ ನಾಯಿಗಳೊಂದಿಗೆ ಒಂದಾಗಿಸಿ ಹೊಸ ಸ್ಪಿಟ್ಜ್ ತಳಿಯನ್ನು ಹುಟ್ಟು ಹಾಕುವ ಪ್ರಯತ್ನ ಆರಂಬಿಸಿದರು. ಹಲವಾರು ವರುಶಗಳ ಬಳಿಕ ಅವರಿಗೆ ಇಂಡಿಯಾದ ಗಾಳಿಪಾಡಿಗೆ ಸರಿಹೊಂದುವ ನಾಯಿ ತಳಿ ಸಿಕ್ಕಿತ್ತು, ಅದುವೇ ಇಂಡಿಯನ್ ಸ್ಪಿಟ್ಜ್.
ಇಂಡಿಯನ್ ಸ್ಪಿಟ್ಜ್ ಮೈಮಾಟ
ಈ ತಳಿಯ ನಾಯಿಗಳ ಮೈಮೇಲೆ ದಟ್ಟವಾದ ಕೂದಲಿದ್ದು, ನೋಡಲು ತುಂಬಾ ಚೆಲುವಾಗಿರುತ್ತವೆ. ಇಂಡಿಯನ್ ಸ್ಪಿಟ್ಜ್ ಗಳನ್ನು ಅವುಗಳ ಗಾತ್ರದ ಅನುಗುಣವಾಗಿ ಚಿಕ್ಕ ಹಾಗೂ ದೊಡ್ಡ ಗಾತ್ರದ ಸ್ಪಿಟ್ಜ್ ಗಳು ಎಂದು ಎರಡು ಬಗೆಗಳಲ್ಲಿ ವಿಂಗಡಿಸಲಾಗಿದೆ. ಚಿಕ್ಕ ಗಾತ್ರದ ಸ್ಪಿಟ್ಜ್ ಗಳು ಸಾಮಾನ್ಯವಾಗಿ 20 ರಿಂದ 25 ಸೆಂಟಿಮೀಟರಿನಶ್ಟು ಉದ್ದ ಹಾಗೂ 5 ರಿಂದ 7 ಕೆ.ಜಿ ಯಶ್ಟು ತೂಕವಿದ್ದರೆ, ದೊಡ್ಡ ಗಾತ್ರದವು 35 ರಿಂದ 45 ಸೆಂಟಿಮೀಟರಿನಶ್ಟು ಉದ್ದ ಹಾಗೂ 12 ರಿಂದ 20 ಕೆ.ಜಿ ಯಶ್ಟು ತೂಕವಿರುತ್ತವೆ. ಸಾಮಾನ್ಯವಾಗಿ 10 ರಿಂದ 14 ವರುಶಗಳ ಕಾಲ ಇವು ಬದುಕುತ್ತವೆ.
ಪಳಗಿಸಲು ತುಂಬಾ ಸುಲಬ
ಇಂಡಿಯನ್ ಸ್ಪಿಟ್ಜ್ ಗಳು ಕಲಿಕೆಯಲ್ಲಿ ಚುರುಕಾಗಿದ್ದು, ಬೇಗನೆ ಪಳಗಿಸಬಹುದು. ತರಬೇತಿ ಸಮಯದಲ್ಲಿ ಹಲವಾರು ಬಗೆಯ ಜಾಣ್ಮೆಗಳನ್ನು ಕಡಿಮೆ ಹೊತ್ತಿನಲ್ಲಿ ಇವು ಕಲಿಯುತ್ತವೆ. ಸಾಕುವವರೊಡನೆ ಬೇಗನೆ ಬೆರೆಯುತ್ತವೆ. ಈ ವಿಶೇಶವಾದ ಅಳವಿನಿಂದ ಇವುಗಳನ್ನು 1970 ಮತ್ತು 1980 ರ ದಶಕಗಳಲ್ಲಿ ಇಂಡಿಯಾದ ಸರ‍್ಕಸ್‍ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿತ್ತು.
ಮನೆಯಲ್ಲಿನ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಜೊತೆಗೆ ತುಂಬಾ ಬೇಗನೆ ಬೆರೆತು, ಅವರೊಂದಿಗೆ ಆಟವಾಡಿ ನಲಿಯುತ್ತವೆ. ಇವು ಸಿಡುಕಿನ ನಾಯಿಗಳಲ್ಲ, ಸ್ನೇಹ ಜೀವಿಗಳಾಗಿದ್ದು ವಿಶೇಶವಾಗಿ ಚಿಕ್ಕ ಮಕ್ಕಳೊಂದಿಗೆ ಆಟವಾಡಲು ಇಶ್ಟಪಡುತ್ತವೆ. ನಮ್ಮ ಆಶಯ ಹಾಗೂ ಸೂಚನೆಗಳನ್ನು ಬೇಗನೆ ತಿಳಿದುಕೊಳ್ಳುವ ವಿಶೇಶವಾದ ಅಳವು ಹೊಂದಿದ್ದು, ಬೇಗನೆ ನಮ್ಮ ಜೀವನಶೈಲಿಗೆ ಹೊಂದಿಕೊಳ್ಳುತ್ತವೆ. ಚಿಕ್ಕ ಮನೆಯಿಂದ ಹಿಡಿದು, ದೊಡ್ಡ ದೊಡ್ಡ ಬಂಗಲೆಗಳಲ್ಲಿಯೂ ಸಹ ತಮ್ಮನ್ನು ಸಂಪೂರ‍್ಣವಾಗಿ ಹೊಂದಿಸಿಕೊಳ್ಳುತ್ತವೆ.
ಇಂಡಿಯನ್ ಸ್ಪಿಟ್ಜ್ Indian Spitz
ಇಂಡಿಯನ್ ಸ್ಪಿಟ್ಜ್ ಗಳಿಗೆ ಇಶ್ಟವಾದ ತಿನಿಸುಗಳೆಂದರೆ ಹಾಲು, ಮೊಸರು ಹಾಗೂ ಅನ್ನ, ಮನುಶ್ಯನಿಗೆ ಹತ್ತಿರವಾಗಲು ಇದು ಕೂಡ ಒಂದು ಮುಕ್ಯ ಕಾರಣವಾಗಿದೆ. ಜೊತೆಗೆ ಮನೆಯ ಕಾವಲುಗಾರರಂತೆಯೂ ಕೆಲಸಮಾಡುತ್ತವೆ. ಆದ್ದರಿಂದ ಮನೆಯ ಪ್ರತಿಯೊಬ್ಬ ಸದಸ್ಯನು ಇಶ್ಟಪಡುತ್ತಾನೆ. ಮನೆಯಲ್ಲಿನ ಇತರೆ ಸಾಕುಪ್ರಾಣಿಗಳೊಂದಿಗೂ ತುಂಬಾ ಸುಲಬವಾಗಿ ಹೊಂದಿಕೊಳ್ಳುತ್ತವೆ.
ಮೈ ಚೊಕ್ಕವಾಗಿದೆ, ಆದರೂ ಸೋಂಕುಗಳಿಗೇನು ಕಡಿಮೆಯಿಲ್ಲ
ಇವು ತುಂಬಾ ಚೊಕ್ಕವಾಗಿರುವ ಉಸಿರಿಗಳಾಗಿವೆ ಆದರೆ ಕೆಲವೊಂದು ಬಾರಿ ಮೈ ಮೇಲಿನ ಕೂದಲುಗಳಿಂದ ಸಮಸ್ಯೆಗಳನ್ನು ಎದುರಿಸುತ್ತವೆ. ದಟ್ಟವಾದ ಕೂದಲು ಹಲವಾರು ಸೋಂಕುಗಳಿಗೆ ದಾರಿ ಮಾಡಿಕೊಡುವ ಸಂಬವ ಇರುತ್ತದೆ. ಆದ್ದರಿಂದ ಅವುಗಳನ್ನು ನಿಯಮಿತವಾಗಿ ಬಾಚಣಿಗೆಯಿಂದ ಚೊಕ್ಕಗೊಳಿಸಬೇಕು. ಬೇಸಿಗೆಯಲ್ಲಿ ಪ್ರತಿದಿನವು ಕೂದಲಿನಲ್ಲಿ ತಗಣೆ ಅತವಾ ಸೋಂಕು ಹರಡಿಸುವ ಇತರೆ ಚಿಕ್ಕ ಕೀಟಗಳಿವೆಯೇ ಎಂದು ನೋಡುತ್ತಿರಬೇಕು. ಇವುಗಳಲ್ಲಿ ಕೂದಲು ಉದರುವಿಕೆ ಸಮಸ್ಯೆ ತುಂಬಾ ಇರುವುದರಿಂದ, ಅಗತ್ಯವಿದ್ದಾಗ ಮಾತ್ರ ಸ್ನಾನ ಮಾಡಿಸಬೇಕು.
ತೋಳಗಳಿಗೆ ಹೋಲುವ ಗುಣಗಳು
ಒಂದು ಅಚ್ಚರಿಯ ವಿಶಯವೆಂದರೆ ಇವುಗಳ ಹಲವಾರು ಗುಣಗಳು ತಕ್ಕಮಟ್ಟಿಗೆ ತೋಳಗಳಿಗೆ ಹೋಲುತ್ತವೆ. ವಿಶೇಶವಾಗಿ ಬೇಟೆಯಾಡುವ ಹೊತ್ತಿನಲ್ಲಿ ತಮ್ಮ ಮೊಣಕಾಲುಗಳ ಮೇಲೆ ಬಾಗಿ ಮೆಲ್ಲನೆ ಬೇಟೆ ಹತ್ತಿರ ನಡೆಯುವಂತಹ ಗುಣ.
ದಟ್ಟವಾದ ಬಿಳಿ ಕೂದಲುಗಳನ್ನು ಹೊಂದಿರುವ ಇಂಡಿಯನ್ ಸ್ಪಿಟ್ಜ್ ಹಲವರ ನೆಚ್ಚಿನ ನಾಯಿ. ಇಂಡಿಯಾದ ಹಲವು ಸಿನಿಮಾಗಳಲ್ಲಿಯೂ ಕಾಣಿಕೊಂಡು ಹಲವರ ಪ್ರೀತಿಗೆ ಪಾತ್ರವಾಗಿವೆ. ದಿನೇ ದಿನೇ ಇವನ್ನು ಸಾಕುವವರ ಎಣಿಕೆಯೂ ಹೆಚ್ಚುತ್ತಿದೆ. ಮನೆಯವರೆಲ್ಲರೊಂದಿಗೆ ಹೊಂದಿಕೊಳ್ಳುವ ಮುದ್ದಿನ ಸಾಕುನಾಯಿಯಾದ ಸ್ಪಿಟ್ಜ್, ಒಂದು ವಿಶೇಶವಾದ ತಳಿ ಎಂದರೆ ತಪ್ಪಾಗಲಾರದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...