ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ತಾರಿಣಿ ಪರಿಕ್ರಮ ನಾರಿ ಪರಾಕ್ರಮ,

ಭಾರತೀಯ ನೌಕಾಪಡೆಯ 6 ಮಹಿಳಾ ಯೋಧರನ್ನೊಳಗೊಂಡಿದ್ದ ‘ಐಎನ್​ಎಸ್​ವಿ ತಾರಿಣಿ’ ನೌಕೆ ಬರೋಬ್ಬರಿ 8 ತಿಂಗಳ ವಿಶ್ವಯಾನವನ್ನು ಸಂಪನ್ನಗೊಳಿಸಿ ವಾಪಸಾಗಿದೆ. ಐದು ಹಂತಗಳನ್ನೊಳಗೊಂಡಿದ್ದ ಈ ಪರಿಕ್ರಮ, ಮಹಿಳಾ ಸಬಲೀಕರಣದ ಪರಿಕಲ್ಪನೆಯ ಸಾಕಾರರೂಪ ಮಾತ್ರವೇ ಅಲ್ಲ, ವಿಶ್ವವೇದಿಕೆಯಲ್ಲೂ ಭಾರತದ ನಾರೀಶಕ್ತಿಯನ್ನು ಅನಾವರಣಗೊಳಿಸಿದ ಉಪಕ್ರಮ. ಈ ಕುರಿತಾದ ಕಿರುನೋಟವಿದು.
ಸಮುದ್ರಮಾರ್ಗದಲ್ಲಿ ವಿಶ್ವಯಾನ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಮತ್ತು ಅದು ಅಳ್ಳೆದೆಯವರಿಗೆ ಕೈಗೆಟುಕುವ ಫಲವೂ ಅಲ್ಲ. ಅದರಲ್ಲೂ ಮಹಿಳೆಯರು ಇಂಥದೊಂದು ಜೈತ್ರಯಾತ್ರೆಗೆ ಸಂಕಲ್ಪಿಸಿದ್ದಾರೆ ಎಂದಾಗ, ನೌಕೆಗೆ ಉತ್ತೇಜನದ ಇಂಧನ ತುಂಬುವವರಿಗಿಂತಲೂ, ಕೊಂಕುಮಾತಿನ ರಂಧ್ರಗಳನ್ನು ಕೊರೆಯುವವರೇ ಹೆಚ್ಚು! ಹೀಗೆ ಕಾಲೆಳೆಯುವವರ ನಡುವೆಯೂ ಈ ಸಾಹಸಕ್ಕೆ ಮುಂದಾಗಿ ಅದನ್ನು ದಕ್ಕಿಸಿಕೊಂಡು ಬಂದ ವೀರರಮಣಿಯರು ಇಂಥ ಮತ್ತಷ್ಟು ಮಹತ್ವಾಕಾಂಕ್ಷಿಗಳಿಗೆ ಮೇಲ್ಪಂಕ್ತಿಯಾಗಿದ್ದಾರೆ. 2017ರ ಸೆಪ್ಟೆಂಬರ್ 10ರಂದು ಗೋವಾದಿಂದ ಶುರುವಾಗಿ, 2018ರ ಮೇ 21ರಂದು ಅಲ್ಲೇ ಸಂಪನ್ನಗೊಂಡ ಈ ಪರಿಕ್ರಮ 5 ಹಂತಗಳನ್ನೊಳಗೊಂಡಿತ್ತು. ಆಸ್ಟ್ರೇಲಿಯಾ (ಫ್ರೀಮ್ಯಾಂಟಲ್) ನ್ಯೂಜಿಲೆಂಡ್ (ಲಿಟ್ಟೆಲ್​ಟನ್), ಫಾಕ್ಲೆಂಡ್ಸ್ (ಪೋರ್ಟ್ ಸ್ಟಾನ್ಲೆ), ದಕ್ಷಿಣ ಆಫ್ರಿಕಾ (ಕೇಪ್​ಟೌನ್) ಮತ್ತು ಮಾರಿಷಸ್ (ಪೋರ್ಟ್ ಲೂಯಿಸ್) ಬಂದರುಗಳಲ್ಲಿ ಠಿಕಾಣಿ ಹೂಡಿದ್ದು ಬಿಟ್ಟರೆ ಮಿಕ್ಕ ದಿನಗಳೆಲ್ಲವೂ ಜಲಯಾನಕ್ಕೇ ಮೀಸಲಾಗಿತ್ತು.
ಏನಿದರ ವೈಶಿಷ್ಟ್ಯ?
ನೌಕಾಪಡೆಯ ಪಾಲಿಗಿದು ಮೂರನೇ ‘ಪರಿಕ್ರಮ’ವಾದರೂ ಮಹಿಳಾ ತಂಡದ ಮೊಟ್ಟಮೊದಲ ‘ಪರಾಕ್ರಮ’ ಎಂಬುದು ಉಲ್ಲೇಖನೀಯ. ಸಮಭಾಜಕ ವೃತ್ತವನ್ನು 2 ಬಾರಿ ದಾಟಿರುವ, 4 ಖಂಡಗಳು ಮತ್ತು 3 ಸಾಗರಗಳನ್ನು ಕ್ರಮಿಸಿರುವ, ಲೀಯುವಿನ್-ಹಾರ್ನ್- ಗುಡ್​ಹೋಪ್​ನಂಥ ಮೂರು ಭೂಶಿರಗಳ ದಕ್ಷಿಣ ಭಾಗದಲ್ಲಿ ಹಾದುಹೋಗಿರುವ ಯಾತ್ರೆಯಿದು. 21,600 ನಾಟಿಕಲ್ ಮೈಲಿ ದೂರವನ್ನು ಕ್ರಮಿಸಿದ ಈ ಸಾಹಸಕ್ಕೆ ವಾಹಕವಾಗಿದ್ದು ‘ಐಎನ್​ಎಸ್​ವಿ ತಾರಿಣಿ’ ನೌಕೆ. 56 ಅಡಿ ಉದ್ದವಿದ್ದು, 6 ನಾವಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಈ ನೌಕೆಗೆ ಸ್ವದೇಶಿ-ನಿರ್ವಿುತ ಎಂಬ ಹೆಗ್ಗಳಿಕೆಯಿದೆ. ಇದು ನಿರ್ವಣಗೊಂಡಿದ್ದೂ ಗೋವಾದ ಅಕ್ವಾರಿಸ್ ಬಂದರಿನಲ್ಲೇ ಎಂಬುದು ಗಮನಾರ್ಹ. ಲೆ. ಕಮಾಂಡರ್ ವಾರ್ತಿಕಾ ಜೋಷಿ ನೇತೃತ್ವದ ಈ ಯಾನತಂಡದ ಸದಸ್ಯರಲ್ಲಿ ಲೆ. ಕಮಾಂಡರ್​ಗಳಾದ ಪಿ. ಸ್ವಾತಿ ಮತ್ತು ಪ್ರತಿಭಾ ಜಮ್ವಾಲ್, ಲೆಫ್ಟಿನೆಂಟ್​ಗಳಾದ ಬಿ. ಐಶ್ವರ್ಯಾ, ಪಾಯಲ್ ಗುಪ್ತಾ ಮತ್ತು ಎಸ್. ವಿಜಯಾದೇವಿ ಸೇರಿದ್ದರು.

ಯಾನ ಅಂದುಕೊಂಡಷ್ಟು ಸುಲಭವೇ?
ಇಂಥ ಸಮುದ್ರಯಾನವೆಂದರೆ, ಮೋಟಾರ್​ಬೋಟ್​ನಲ್ಲೋ, ಪೆಡಲ್​ಬೋಟ್​ನಲ್ಲೋ ಕುಳಿತು ಸರೋವರದಲ್ಲಿ ವಿಹರಿಸಿದಂತೆಯೇ ಎಂದುಕೊಳ್ಳುವವರುಂಟು. ಆದರೆ ಇದು ಅಷ್ಟು ಸುಲಭಕ್ಕೆ ದಕ್ಕುವ ಕೈತುತ್ತಲ್ಲ. ಇದಕ್ಕೊಂದು ಉದಾಹರಣೆ ನೀಡುವುದಾದರೆ, ದಕ್ಷಿಣ ಅಮೆರಿಕದ ದಕ್ಷಿಣದ ತುತ್ತತುದಿಯಲ್ಲಿರುವ, ವಿಶ್ವದ ಅತ್ಯಂತ ದುರ್ಗಮ ಪ್ರದೇಶ ಎಂದೇ ಹೆಸರಾಗಿರುವ ‘ಹಾರ್ನ್ ಭೂಶಿರ’ ಪ್ರದೇಶವನ್ನು ಹಾದುಹೋಗುವುದೆಂದರೆ ಸುಲಭದ ಮಾತಲ್ಲ. ಕಾರಣ, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳು ಸಂಧಿಸುವ ‘ಡ್ರೇಕ್ ಮಾರ್ಗ’ದಲ್ಲಿ ಈ ತಾಣವಿದ್ದು ಇಲ್ಲಿ ಸಮುದ್ರ ತೀರಾ ಪ್ರಕ್ಷುಬ್ಧ ಸ್ಥಿತಿಯಲ್ಲಿರುತ್ತದೆ. ಭಾರಿ ಎತ್ತರ ಹಾಗೂ ತೀವ್ರತೆಯ ಅಲೆಗಳು ಸದಾಕಾಲ ಕಾಣಿಸಿಕೊಳ್ಳುವುದು, ಅತಿವೇಗದಲ್ಲಿ ಬೀಸುವ ಗಾಳಿ, ಸಮುದ್ರದೊಳಗಿಂದಲೇ ತೇಲಿಬರುವ ನೀರ್ಗಲ್ಲುಗಳು ಈ ತಾಣದಲ್ಲಿ ಕಾಣಿಸಿಕೊಳ್ಳುವ ಸವಾಲುಗಳೆನ್ನಬೇಕು. ಹೀಗಾಗಿ ‘ಸಮುದ್ರದ ಮೌಂಟ್ ಎವರೆಸ್ಟ್’, ‘ನಾವಿಕರ ಸ್ಮಶಾನ’ ಎಂಬೆಲ್ಲ ಹೆಸರುಗಳು ಈ ಭಯಾನಕ ತಾಣಕ್ಕಿದ್ದು, ಯಾತ್ರೆಯಲ್ಲಿನ ಬಹುದೊಡ್ಡ ಸವಾಲಾಗಿದ್ದ ಈ ಘಟ್ಟವನ್ನು ಯಶಸ್ವಿಯಾಗಿ ದಾಟಿದ್ದು ಭಾರತೀಯ ನೌಕಾಪಡೆಯ ಮಹಿಳಾ ಸಿಬ್ಬಂದಿಯ ಸಾಮರ್ಥ್ಯ-ಸಾಧನೆಗೆ ದ್ಯೋತಕವೆನ್ನಬೇಕು. ಹೀಗಾಗಿ ಸಹಜವಾಗಿಯೇ, ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಗಣ್ಯರು ಈ ಸಾಹಸವನ್ನು ಮನದುಂಬಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಒಂದಿಷ್ಟು ಫ್ಲಾಷ್​ಬ್ಯಾಕ್
ಈ ‘ಮಹಿಳಾ ಪರಿಕ್ರಮ-ಪರಾಕ್ರಮ’ಕ್ಕೂ ಮೊದಲು ಭಾರತೀಯ ನೌಕಾಪಡೆಯ ವತಿಯಿಂದ ಇಂಥದೇ ಎರಡು ಪರ್ಯಟನೆಗಳಾಗಿದ್ದವು. ಕ್ಯಾಪ್ಟನ್ ದಿಲೀಪ್ ದೋಂಡೆ (ಈಗ ನಿವೃತ್ತರು) ಅವರು 2009ರಲ್ಲಿ ಐದು ಹಂತದ ಸಾಗರಯಾನದ ಮೂಲಕ ಒಂಟಿಯಾಗಿ ಹೀಗೊಂದು ವಿಶ್ವಪರಿಕ್ರಮ ಕೈಗೊಂಡಿದ್ದರು. ತರುವಾಯ, 2013ರಲ್ಲಿ ಕಮಾಂಡರ್ ಅಭಿಲಾಷ್ ಟೋಮಿ ಕೂಡ ಇಂಥದೇ ಸಾಹಸಕ್ಕೆ ಅಧ್ವರ್ಯುವಾಗಿದ್ದರು. ಈ ಎರಡೂ ಯಾತ್ರೆಗಳಿಗೆ ವಾಹಕವಾಗಿದ್ದು ‘ಐಎನ್​ಎಸ್​ವಿ ಮಹಾದೇಯಿ’ ನೌಕೆ. ಇದು 2009ರಲ್ಲಿ ನೌಕಾಪಡೆಗೆ ಸೇರಿಕೊಂಡಾಗಲೇ ಇಂಥದೊಂದು ಸಮುದ್ರ ಪರಿಕ್ರಮದ ಪರಿಕಲ್ಪನೆಗೂ ಜೀವಬಂದಿತು ಎಂಬುದು ಗಮನಾರ್ಹ. ತರುವಾಯದಲ್ಲಿ, ಸಂಪೂರ್ಣ ಮಹಿಳಾ ಯೋಧರೇ ಇರುವ ತಂಡವೊಂದು ವಿಶ್ವಯಾತ್ರೆ ಕೈಗೊಳ್ಳುವ ವಿಷಯ ಚರ್ಚೆಗೆ ಬಂದಾಗ, ಪಟ್ಟಿಯಲ್ಲಿದ್ದ 20 ಅಭ್ಯರ್ಥಿಗಳ ಪೈಕಿ ಆರು ಮಂದಿಯನ್ನು ಆಯ್ಕೆಮಾಡಿದ ಕ್ಯಾಪ್ಟನ್ ದೋಂಡೆ, ಅವರಿಗೆ ನೌಕಾಯಾನಕ್ಕೆ ಸಂಬಂಧಿಸಿದ ತರಬೇತಿಯನ್ನೂ ನೀಡಿದರು. ಈ ಬಾರಿಯ ಮಹಿಳಾ ತಂಡವು ಕ್ಯಾಪ್ಟನ್ ದೋಂಡೆ ಸಾಗಿದ ಹಾದಿಯಲ್ಲೇ ಸಾಗಿತು, ದೋಂಡೆ ತಮ್ಮ ಏಕಾಂಗಿ ಪರ್ಯಟನೆಯ ವೇಳೆ ತಂಗಿದ್ದ ತಾಣಗಳಲ್ಲೇ ಈ ತಂಡವೂ ಠಿಕಾಣಿ ಹೂಡಿತು ಎಂಬುದು ಗಮನಾರ್ಹ ಸಂಗತಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...