ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಮೂರನೇ ಭಾಗ ಇಲ್ಲಿದೆ.
ಜನರಿಗೆ ಅತಿ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ದಾಪುಗಾಲಿಡುತ್ತಿದೆ. ಹತ್ತು ಹಲವು ಯೋಜನೆಗಳನ್ನು ಕೈಗೊಂಡು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನವನ್ನೂ ಮಾಡುತ್ತಿದೆ. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ…
ಬೆಳಗಿತು ಗ್ರಾಮ
ದೇಶದ ಎಲ್ಲ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಮೋದಿ ಸರ್ಕಾರದ ಮಹತ್ವದ ಸಾಧನೆ. ಮಣಿಪುರ ರಾಜ್ಯದ ಲೀಸಾಂಗ್ ಗ್ರಾಮಕ್ಕೆ ಕಳೆದ ಏ. 28ರಂದು ವಿದ್ಯುತ್ ಸಮರ್ಪಕ ಕಲ್ಪಿಸುವ ಮೂಲಕ ಸರ್ಕಾರ ಮೈಲಿಗಲ್ಲು ಸ್ಥಾಪಿಸಿದೆ. ಮುಂದಿನ ವರ್ಷ ಅಂತ್ಯದ ವೇಳೆಗೆ ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಮಹತ್ವದ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ.
ಮೇಕ್ ಇನ್ ಇಂಡಿಯಾ
ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸುವುದು ಪ್ರಧಾನಿ ಮೋದಿ ಕನಸು. ಇದನ್ನು ನನಸಾಗಿಸುವ ಉದ್ದೇಶದಿಂದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ಭಾರತದಲ್ಲೇ ವಸ್ತುಗಳನ್ನು ಉತ್ಪಾದಿಸುವುದು, ದೇಶೀಯ ಉದ್ದಿಮೆಗಳಿಗೆ ಉತ್ತೇಜನ ನೀಡುವುದು ಪ್ರಮುಖ ಗುರಿಯಾಗಿದೆ. ಪ್ರಮುಖವಾಗಿ ರಕ್ಷಣಾ ಉಪಕರಣಗಳನ್ನು ಈ ಯೋಜನೆ ಅಡಿಯಲ್ಲಿ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ಅಪಾರ ಉದ್ಯೋಗ ಸೃಷ್ಟಿಯಾಗುತ್ತಿದೆ.
ಸರ್ವಋತು ರಸ್ತೆ
ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪ್ರತಿ ದಿನ 133 ಕಿ.ಮೀ. ಹೊಸ ರಸ್ತೆ ನಿರ್ವಿುಸಲಾಗುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ 1.5 ಲಕ್ಷ ಕಿ.ಮೀ ರಸ್ತೆ ನಿರ್ವಣವಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಸುಮಾರು 60 ಸಾವಿರ ಕಿ.ಮೀ. ರಸ್ತೆ ನಿರ್ವಣವಾಗಿದೆ.
ಡಿಜಿಟಲ್ ಭಾರತ
ಪ್ರತಿ ಗ್ರಾಮ ಪಂಚಾಯಿತಿಗೂ ಸುಧಾರಿತ ಅಂತರ್ಜಾಲ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ. ವಿವಿಧ ಬಿಲ್ ಪಾವತಿ, ಹಲವು ಪ್ರಮಾಣಪತ್ರ, ಸರ್ಕಾರದ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ. ಇ- ಗವರ್ನಮೆಂಟ್ ವ್ಯವಸ್ಥೆ ಮೂಲಕ ಜನರು ಕಿರುಬೆರಳಿನಲ್ಲಿ ಸರ್ಕಾರದ ಸಾಕಷ್ಟು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ದೇಶಾದ್ಯಂತ ಆಪ್ಟಿಕಲ್ ಕೇಬಲ್ ಅಳವಡಿಕೆ ಕಾರ್ಯವೂ ವೇಗವಾಗಿ ನಡೆಯುತ್ತಿದೆ.
# ಪ್ರತಿದಿನ 133 ಕಿ.ಮೀ. ರಸ್ತೆ ನಿರ್ಮಾಣ
# ಉಡಾನ್ ಯೋಜನೆಯಡಿ 2500 ರೂ.ಗೆ ವಿಮಾನ ಪ್ರಯಾಣ
# ಸ್ಕಿಲ್ ಇಂಡಿಯಾ ಯೋಜನೆಯಡಿ 1 ಕೋಟಿ ಜನರಿಗೆ ಉದ್ಯೋಗ ತರಬೇತಿ
# ವಿಮಾನಯಾನ ಭಾಗ್ಯ
ಹವಾಯಿ ಚಪ್ಪಲಿ ಧರಿಸುವವರೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂಬುದು ಪ್ರಧಾನಿ ಮೋದಿ ಕನಸು. ಇದಕ್ಕಾಗಿ ಸರ್ಕಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಜಾರಿಗೆ ತಂದಿದೆ. ಪ್ರಮುಖವಾಗಿ ಸಣ್ಣ ಪಟ್ಟಣಗಳನ್ನು ಸಂರ್ಪಸುವ ಯೋಜನೆ ಇದಾಗಿದೆ. ಒಂದು ಗಂಟೆಯೊಳಗೆ ಪ್ರಯಾಣಿಸಬಹುದಾದ ಸ್ಥಳಗಳಿಗೆ ಕೇವಲ 2500 ರೂ. ದರ ನಿಗದಿ ಮಾಡಲಾಗಿದೆ.
ಸ್ಕಿಲ್ ಇಂಡಿಯಾ
ಯುವಕರಲ್ಲಿ ಕೌಶಲ ಹೆಚ್ಚಿಸಿ, ಉದ್ಯೋಗಾವಕಾಶ ವಿಸ್ತರಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಯೋಜನೆಯೇ ಸ್ಕಿಲ್ ಇಂಡಿಯಾ. 2015 ಜುಲೈ 15ರಂದು ಇದಕ್ಕೆ ಚಾಲನೆ ನೀಡಲಾಗಿದೆ. ಖಾಸಗಿ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದು ಕೋಟಿಗೂ ಅಧಿಕ ವ್ಯಕ್ತಿಗಳಿಗೆ ವೃತ್ತಿ ತರಬೇತಿ ನೀಡಲಾಗಿದೆ.
ಜನರಿಗೆ ಅತಿ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ದಾಪುಗಾಲಿಡುತ್ತಿದೆ. ಹತ್ತು ಹಲವು ಯೋಜನೆಗಳನ್ನು ಕೈಗೊಂಡು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನವನ್ನೂ ಮಾಡುತ್ತಿದೆ. ಈ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ…
ಬೆಳಗಿತು ಗ್ರಾಮ
ದೇಶದ ಎಲ್ಲ ಗ್ರಾಮಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು ಮೋದಿ ಸರ್ಕಾರದ ಮಹತ್ವದ ಸಾಧನೆ. ಮಣಿಪುರ ರಾಜ್ಯದ ಲೀಸಾಂಗ್ ಗ್ರಾಮಕ್ಕೆ ಕಳೆದ ಏ. 28ರಂದು ವಿದ್ಯುತ್ ಸಮರ್ಪಕ ಕಲ್ಪಿಸುವ ಮೂಲಕ ಸರ್ಕಾರ ಮೈಲಿಗಲ್ಲು ಸ್ಥಾಪಿಸಿದೆ. ಮುಂದಿನ ವರ್ಷ ಅಂತ್ಯದ ವೇಳೆಗೆ ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಮಹತ್ವದ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ.
ಮೇಕ್ ಇನ್ ಇಂಡಿಯಾ
ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸುವುದು ಪ್ರಧಾನಿ ಮೋದಿ ಕನಸು. ಇದನ್ನು ನನಸಾಗಿಸುವ ಉದ್ದೇಶದಿಂದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ಭಾರತದಲ್ಲೇ ವಸ್ತುಗಳನ್ನು ಉತ್ಪಾದಿಸುವುದು, ದೇಶೀಯ ಉದ್ದಿಮೆಗಳಿಗೆ ಉತ್ತೇಜನ ನೀಡುವುದು ಪ್ರಮುಖ ಗುರಿಯಾಗಿದೆ. ಪ್ರಮುಖವಾಗಿ ರಕ್ಷಣಾ ಉಪಕರಣಗಳನ್ನು ಈ ಯೋಜನೆ ಅಡಿಯಲ್ಲಿ ಉತ್ಪಾದಿಸಲಾಗುತ್ತಿದೆ. ಇದರಿಂದಾಗಿ ಅಪಾರ ಉದ್ಯೋಗ ಸೃಷ್ಟಿಯಾಗುತ್ತಿದೆ.
ಸರ್ವಋತು ರಸ್ತೆ
ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಪ್ರತಿ ದಿನ 133 ಕಿ.ಮೀ. ಹೊಸ ರಸ್ತೆ ನಿರ್ವಿುಸಲಾಗುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈವರೆಗೆ 1.5 ಲಕ್ಷ ಕಿ.ಮೀ ರಸ್ತೆ ನಿರ್ವಣವಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಸುಮಾರು 60 ಸಾವಿರ ಕಿ.ಮೀ. ರಸ್ತೆ ನಿರ್ವಣವಾಗಿದೆ.
ಡಿಜಿಟಲ್ ಭಾರತ
ಪ್ರತಿ ಗ್ರಾಮ ಪಂಚಾಯಿತಿಗೂ ಸುಧಾರಿತ ಅಂತರ್ಜಾಲ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದೆ. ವಿವಿಧ ಬಿಲ್ ಪಾವತಿ, ಹಲವು ಪ್ರಮಾಣಪತ್ರ, ಸರ್ಕಾರದ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ. ಇ- ಗವರ್ನಮೆಂಟ್ ವ್ಯವಸ್ಥೆ ಮೂಲಕ ಜನರು ಕಿರುಬೆರಳಿನಲ್ಲಿ ಸರ್ಕಾರದ ಸಾಕಷ್ಟು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ದೇಶಾದ್ಯಂತ ಆಪ್ಟಿಕಲ್ ಕೇಬಲ್ ಅಳವಡಿಕೆ ಕಾರ್ಯವೂ ವೇಗವಾಗಿ ನಡೆಯುತ್ತಿದೆ.
# ಪ್ರತಿದಿನ 133 ಕಿ.ಮೀ. ರಸ್ತೆ ನಿರ್ಮಾಣ
# ಉಡಾನ್ ಯೋಜನೆಯಡಿ 2500 ರೂ.ಗೆ ವಿಮಾನ ಪ್ರಯಾಣ
# ಸ್ಕಿಲ್ ಇಂಡಿಯಾ ಯೋಜನೆಯಡಿ 1 ಕೋಟಿ ಜನರಿಗೆ ಉದ್ಯೋಗ ತರಬೇತಿ
# ವಿಮಾನಯಾನ ಭಾಗ್ಯ
ಹವಾಯಿ ಚಪ್ಪಲಿ ಧರಿಸುವವರೂ ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂಬುದು ಪ್ರಧಾನಿ ಮೋದಿ ಕನಸು. ಇದಕ್ಕಾಗಿ ಸರ್ಕಾರ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಜಾರಿಗೆ ತಂದಿದೆ. ಪ್ರಮುಖವಾಗಿ ಸಣ್ಣ ಪಟ್ಟಣಗಳನ್ನು ಸಂರ್ಪಸುವ ಯೋಜನೆ ಇದಾಗಿದೆ. ಒಂದು ಗಂಟೆಯೊಳಗೆ ಪ್ರಯಾಣಿಸಬಹುದಾದ ಸ್ಥಳಗಳಿಗೆ ಕೇವಲ 2500 ರೂ. ದರ ನಿಗದಿ ಮಾಡಲಾಗಿದೆ.
ಸ್ಕಿಲ್ ಇಂಡಿಯಾ
ಯುವಕರಲ್ಲಿ ಕೌಶಲ ಹೆಚ್ಚಿಸಿ, ಉದ್ಯೋಗಾವಕಾಶ ವಿಸ್ತರಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಯೋಜನೆಯೇ ಸ್ಕಿಲ್ ಇಂಡಿಯಾ. 2015 ಜುಲೈ 15ರಂದು ಇದಕ್ಕೆ ಚಾಲನೆ ನೀಡಲಾಗಿದೆ. ಖಾಸಗಿ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಒಂದು ಕೋಟಿಗೂ ಅಧಿಕ ವ್ಯಕ್ತಿಗಳಿಗೆ ವೃತ್ತಿ ತರಬೇತಿ ನೀಡಲಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ