41 ವರ್ಷಗಳಿಂದ ಒಮ್ಮೆಯೂ ತಪ್ಪದಂತೆ, ವ್ರತದಂತೆ ನಡೆದುಕೊಂಡು ಬಂದಿರುವ ಬೆಂಗಳೂರು ವಿಜ್ಞಾನೋತ್ಸವ ಜುಲೈ ಒಂದರಿಂದ ಆಗಸ್ಟ್ 2ರವರೆಗೂ ನಡೆಯಲಿದೆ. ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿ ಮಿಸೈಲ್ ವುಮನ್ (ಅಗ್ನಿ ಕನ್ಯೆ!) ಎಂದೇ ಖ್ಯಾತರಾಗಿರುವ ಡಾ.ಟೆಸ್ಸಿ ಥಾಮಸ್ ‘ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿ’ ಕುರಿತು ಉಪನ್ಯಾಸ ನೀಡಲಿರುವುದು ಉತ್ಸವದ ವಿಶೇಷಗಳಲ್ಲಿ ಒಂದು.
ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು.
‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ.
ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ.
ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ.
ಉದ್ಘಾಟನಾ ಉಪನ್ಯಾಸದ ವಸ್ತು ಬಾಹ್ಯಾಕಾಶ ತಂತ್ರಜ್ಞಾನ, ಸವಾಲುಗಳು ಮತ್ತು ಭವಿಷ್ಯದ ಸಂಶೋಧನೆ. ಈ ಉಪನ್ಯಾಸವನ್ನು ಇಸ್ರೋ ಅಧ್ಯಕ್ಷ ಡಾ.ಕೆ. ಶಿವನ್ ಜುಲೈ ಒಂದರಂದು ನೀಡಲಿದ್ದಾರೆ.
ನಂತರದ ದಿನಗಳಲ್ಲಿ ಮಣಿಪಾಲ ಆಸ್ಪತ್ರೆಯ ಬೆನ್ನು ಹುರಿ ಚಿಕಿತ್ಸಾ ಕೇಂದ್ರದ ಡಾ.ವಿದ್ಯಾಧರ (ಕವಲು ದಾರಿಯಲ್ಲಿ ವೈದ್ಯಕೀಯ ವೃತ್ತಿ);ಐಐಎಸ್ಸಿಯ ನಿವೃತ್ತ ನಿರ್ದೇಶಕ ಡಾ.ಜಿ. ಪದ್ಮನಾಭನ್ (ಸೊಳ್ಳೆಗಳನ್ನು ಮೂಲೋತ್ಪಾಟನ ಮಾಡಬಲ್ಲೆವೆ...? ಮಾಡಬೇಕೇ); ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ (ಆಧುನಿಕ ಭಾರತದಲ್ಲಿ ಸಂವಿಧಾನದ ಪ್ರಸ್ತುತತೆ); ಡಾ.ಮಯ್ಯ (ಔಷಧ,ವ್ಯಾಧಿಗಳು ಮತ್ತು ವೈದ್ಯರು); ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಡಾ.ಪಿ.ಸತೀಶ್ ಚಂದ್ರ (ಮೂರ್ಛೆ ರೋಗವನ್ನು ಅರ್ಥೈಸಿಕೊಳ್ಳುವ ಬಗೆ); ಹಿರಿಯ ಸರ್ಜನ್ ಡಾ.ಕೆ. ಲಕ್ಷ್ಮಣ್ (ಆಧುನಿಕ ವೈದ್ಯಕೀಯ ಸಂಶೋಧನೆ ಮತ್ತು ಇತಿಮಿತಿ); ಮನೋವಿಜ್ಞಾನಿ ಡಾ. ಸಿ.ಆರ್.ಚಂದ್ರಶೇಖರ್ (ನಂಬಿಕೆ ಹೇಗಿರಬೇಕು, ಎಷ್ಟಿರಬೇಕು); ಡಾ. ಸದಾನಂದ ಮಯ್ಯ (ಭಾರತದಲ್ಲಿ ಆಹಾರೋದ್ಯಮ: ಹಿಂದೆ, ಇಂದು ಮತ್ತು ಭವಿಷ್ಯ); ಡಾ.ಸಿ.ಶಿವರಾಂ (ಭೌತ ಶಾಸ್ತ್ರ, ಖಗೋಳಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಉತ್ತರ ಸಿಗದ ಪ್ರಶ್ನೆಗಳು); ಇಸ್ರೊ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ (ಬಾಹ್ಯಾಕಾಶ ತಂತ್ರಜ್ಞಾನ ಎತ್ತ ಸಾಗುತ್ತಿದೆ?); ಟೆಕ್ಸಾಸ್ ವಿಶ್ವವಿದ್ಯಾಲಯದ ಡಾ.ಪುನೀತ್ ಅಯ್ಯಂಗಾರ್ (ಭಾರತದಲ್ಲಿ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ) ಮುಂತಾದವರು ಉಪನ್ಯಾಸ ನೀಡಲಿದ್ದಾರೆ ಎನ್ನುತ್ತಾರೆ ಎ.ಎಚ್.ರಾಮರಾವ್.
ಈ 41 ವರ್ಷದಲ್ಲಿ ನೋಬೆಲ್ ಪುರಸ್ಕೃತರೂ ಒಳಗೊಂಡಂತೆ ನೂರಾರು ವಿಜ್ಞಾನಿಗಳು, ಗಣ್ಯರು 2875 ಉಪನ್ಯಾಸ ನೀಡಿದ್ದಾರೆ. ಒಪ್ಪಿಕೊಂಡ ಯಾರೊಬ್ಬರೂ ತಪ್ಪಿಸಿಕೊಂಡಿಲ್ಲ ಎನ್ನುವುದು ಬೆಂಗಳೂರು ವಿಜ್ಞಾನ ವೇದಿಕೆ ನಡೆಸುತ್ತಿರುವ ವಿಜ್ಞಾನ ಉತ್ಸವದ ಗುಣಮೌಲ್ಯಕ್ಕೆ ನಿದರ್ಶನವಾಗಿದೆ.
ಉಪನ್ಯಾಸವಿರದ ದಿನಗಳಲ್ಲಿ ವಿಜ್ಞಾನ ಸಂಬಂಧಿ ಸಾಕ್ಷ್ಯ, ಚಲನಚಿತ್ರಗಳ ಪ್ರದರ್ಶನವಿರುತ್ತದೆ.
ಸ್ಥಳ: ಡಾ. ಎಚ್. ಎನ್.ಮಲ್ಟಿ ಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ. ಪ್ರತಿದಿನ ಸಂಜೆ 6
ಕೇರಳದ ತುಂಬಾ ಉಡಾವಣಾ ಕೇಂದ್ರದ ಸಮೀಪದಲ್ಲೇ ಹುಟ್ಟಿ ರಾಕೆಟ್ ಉಡಾವಣೆಯನ್ನು ನೋಡನೋಡುತ್ತ, ಒಂದಲ್ಲ ಒಂದು ದಿವಸ ಅಲ್ಲೇ ಉದ್ಯೋಗಿಯಾಗುವ ಕನಸು ಕಾಣುತ್ತ ಭವಿಷ್ಯದಲ್ಲಿ ನನಸಾಗಿಸಿಕೊಂಡ ಹಿರಿಮೆ ಹೆಮ್ಮೆ ಟೆಸ್ಸಿಯವರದು.
‘ಅಗ್ನಿ-4’ ಕ್ಷಿಪಣಿ ಯೋಜನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಸಾಮರ್ಥ್ಯ ಮೆರೆದ ಟೆಸ್ಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗ್ನಿ ಕನ್ಯೆ ಎಂದೇ ಹೆಸರಾದವರು. ಇವರ ಸಾಮರ್ಥ್ಯ ಬೆಳಕಿಗೆ ಕಾರಣರಾದವರು ಎ.ಪಿ.ಜೆ. ಅಬ್ದುಲ್ ಕಲಾಂ! ಜುಲೈ 21ರಂದು ಟೆಸ್ಸಿ ಉಪನ್ಯಾಸ ನೀಡಲಿದ್ದಾರೆ.
ವಿಜ್ಞಾನೋತ್ಸವಕ್ಕೆ ವೇದಿಕೆ ಕಲ್ಪಿಸಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಗೀಗ 100ರ ಸಂಭ್ರಮ, ಅದೇ ರೀತಿ ಡಾ.ಎಚ್. ನರಸಿಂಹಯ್ಯನವರ ಜನ್ಮ ಶತಾಬ್ದಿಯನ್ನೂ ಈ ಶಿಕ್ಷಣ ಸಂಸ್ಥೆ ಈಗಾಗಲೇ ಆರಂಭಿಸಿದೆ.
ಹಾಗಾಗಿ ಈ ಸಲದ ವಿಜ್ಞಾನೋತ್ಸವ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುವುದು ನ್ಯಾಷನಲ್ ಎಜುಕೇಷನ್ ಸೊಸೈಟಿಯ ಹಾಲಿ ಅಧ್ಯಕ್ಷ ಡಾ. ಎ.ಎಚ್.ರಾಮರಾವ್ ಅನಿಸಿಕೆ.
ಉದ್ಘಾಟನಾ ಉಪನ್ಯಾಸದ ವಸ್ತು ಬಾಹ್ಯಾಕಾಶ ತಂತ್ರಜ್ಞಾನ, ಸವಾಲುಗಳು ಮತ್ತು ಭವಿಷ್ಯದ ಸಂಶೋಧನೆ. ಈ ಉಪನ್ಯಾಸವನ್ನು ಇಸ್ರೋ ಅಧ್ಯಕ್ಷ ಡಾ.ಕೆ. ಶಿವನ್ ಜುಲೈ ಒಂದರಂದು ನೀಡಲಿದ್ದಾರೆ.
ನಂತರದ ದಿನಗಳಲ್ಲಿ ಮಣಿಪಾಲ ಆಸ್ಪತ್ರೆಯ ಬೆನ್ನು ಹುರಿ ಚಿಕಿತ್ಸಾ ಕೇಂದ್ರದ ಡಾ.ವಿದ್ಯಾಧರ (ಕವಲು ದಾರಿಯಲ್ಲಿ ವೈದ್ಯಕೀಯ ವೃತ್ತಿ);ಐಐಎಸ್ಸಿಯ ನಿವೃತ್ತ ನಿರ್ದೇಶಕ ಡಾ.ಜಿ. ಪದ್ಮನಾಭನ್ (ಸೊಳ್ಳೆಗಳನ್ನು ಮೂಲೋತ್ಪಾಟನ ಮಾಡಬಲ್ಲೆವೆ...? ಮಾಡಬೇಕೇ); ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ (ಆಧುನಿಕ ಭಾರತದಲ್ಲಿ ಸಂವಿಧಾನದ ಪ್ರಸ್ತುತತೆ); ಡಾ.ಮಯ್ಯ (ಔಷಧ,ವ್ಯಾಧಿಗಳು ಮತ್ತು ವೈದ್ಯರು); ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಡಾ.ಪಿ.ಸತೀಶ್ ಚಂದ್ರ (ಮೂರ್ಛೆ ರೋಗವನ್ನು ಅರ್ಥೈಸಿಕೊಳ್ಳುವ ಬಗೆ); ಹಿರಿಯ ಸರ್ಜನ್ ಡಾ.ಕೆ. ಲಕ್ಷ್ಮಣ್ (ಆಧುನಿಕ ವೈದ್ಯಕೀಯ ಸಂಶೋಧನೆ ಮತ್ತು ಇತಿಮಿತಿ); ಮನೋವಿಜ್ಞಾನಿ ಡಾ. ಸಿ.ಆರ್.ಚಂದ್ರಶೇಖರ್ (ನಂಬಿಕೆ ಹೇಗಿರಬೇಕು, ಎಷ್ಟಿರಬೇಕು); ಡಾ. ಸದಾನಂದ ಮಯ್ಯ (ಭಾರತದಲ್ಲಿ ಆಹಾರೋದ್ಯಮ: ಹಿಂದೆ, ಇಂದು ಮತ್ತು ಭವಿಷ್ಯ); ಡಾ.ಸಿ.ಶಿವರಾಂ (ಭೌತ ಶಾಸ್ತ್ರ, ಖಗೋಳಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಉತ್ತರ ಸಿಗದ ಪ್ರಶ್ನೆಗಳು); ಇಸ್ರೊ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ (ಬಾಹ್ಯಾಕಾಶ ತಂತ್ರಜ್ಞಾನ ಎತ್ತ ಸಾಗುತ್ತಿದೆ?); ಟೆಕ್ಸಾಸ್ ವಿಶ್ವವಿದ್ಯಾಲಯದ ಡಾ.ಪುನೀತ್ ಅಯ್ಯಂಗಾರ್ (ಭಾರತದಲ್ಲಿ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ) ಮುಂತಾದವರು ಉಪನ್ಯಾಸ ನೀಡಲಿದ್ದಾರೆ ಎನ್ನುತ್ತಾರೆ ಎ.ಎಚ್.ರಾಮರಾವ್.
ಈ 41 ವರ್ಷದಲ್ಲಿ ನೋಬೆಲ್ ಪುರಸ್ಕೃತರೂ ಒಳಗೊಂಡಂತೆ ನೂರಾರು ವಿಜ್ಞಾನಿಗಳು, ಗಣ್ಯರು 2875 ಉಪನ್ಯಾಸ ನೀಡಿದ್ದಾರೆ. ಒಪ್ಪಿಕೊಂಡ ಯಾರೊಬ್ಬರೂ ತಪ್ಪಿಸಿಕೊಂಡಿಲ್ಲ ಎನ್ನುವುದು ಬೆಂಗಳೂರು ವಿಜ್ಞಾನ ವೇದಿಕೆ ನಡೆಸುತ್ತಿರುವ ವಿಜ್ಞಾನ ಉತ್ಸವದ ಗುಣಮೌಲ್ಯಕ್ಕೆ ನಿದರ್ಶನವಾಗಿದೆ.
ಉಪನ್ಯಾಸವಿರದ ದಿನಗಳಲ್ಲಿ ವಿಜ್ಞಾನ ಸಂಬಂಧಿ ಸಾಕ್ಷ್ಯ, ಚಲನಚಿತ್ರಗಳ ಪ್ರದರ್ಶನವಿರುತ್ತದೆ.
ಸ್ಥಳ: ಡಾ. ಎಚ್. ಎನ್.ಮಲ್ಟಿ ಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ. ಪ್ರತಿದಿನ ಸಂಜೆ 6
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ