ಅಣೆಕಟ್ಟು ಸುರಕ್ಷಾ ಕಾಯ್ದೆಗೆ ಪ್ರಧಾನಿ
ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ದೇಶಾದ್ಯಂತ ಎಲ್ಲ
ಜಲಾಶಯಗಳಿಗೆ ಒಂದೇ ರೀತಿಯ ನಿಯಮಾವಳಿ, ಭದ್ರತಾ ವ್ಯವಸ್ಥೆ ಜಾರಿಗೆ ತರುವುದು ಈ ಕಾಯ್ದೆ
ಉದ್ದೇಶವಾಗಿದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಸಲಹೆಗಳನ್ನು ಪಡೆದು ಈ
ಕಾಯ್ದೆ ರಚಿಸಲಾಗಿದೆ. ಜಲಾಶಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವಹಾನಿ, ಆಸ್ತಿ ನಷ್ಟ
ತಡೆಯಲು ಹಲವು ಕ್ರಮಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಜಲಾಶಯ ಪ್ರದೇಶಗಳಲ್ಲಿ ನಿಗಾ
ಇರಿಸುವುದು, ನಿಯಮಿತ ಪರಿಶೀಲನೆ, ಕಾರ್ಯಾಚರಣೆಯ ನಿರ್ವಹಣೆ ಹಾಗೂ ಭದ್ರತೆಗೆ ದೇಶಾದ್ಯಂತ
ಸಮಾನವಾದ ನೀತಿ ಜಾರಿಗೆ ಬರಲಿದೆ. ಪ್ರಸ್ತುತ ಒಂದೊಂದು ರಾಜ್ಯದಲ್ಲಿ ಒಂದೊಂದು ನೀತಿ
ಜಾರಿಯಲ್ಲಿದೆ.
*ಪ್ರಾಧಿಕಾರ ರಚನೆ:* ನೂತನ ಕಾಯ್ದೆ ಪ್ರಕಾರ, ರಾಷ್ಟ್ರೀಯ ಜಲಾಶಯ ಭದ್ರತಾ ಪ್ರಾಧಿಕಾರ
ರಚಿಸಲಾಗುತ್ತದೆ. ನೀತಿ ನಿರೂಪಣೆ, ಅವುಗಳನ್ನು ಜಾರಿಗೊಳಿಸುವುದು, ಮಾರ್ಗದರ್ಶನ ಮತ್ತಿತರ
ಕಾರ್ಯಗಳನ್ನು ಈ ಸಮಿತಿ ನಿರ್ವಹಿಸಲಿದೆ. ಪ್ರತಿ ರಾಜ್ಯಕ್ಕೂ ಪ್ರತ್ಯೇಕವಾಗಿ ಇಂಥ ಸಮಿತಿ
ರಚಿಸಿಕೊಳ್ಳಲು ಅವಕಾಶವಿದೆ. ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿಗಳು ಸಮನ್ವಯತೆಯೊಂದಿಗೆ ಕೆಲಸ
ಮಾಡಲಿವೆ. ರಾಷ್ಟ್ರೀಯ ಜಲಾಶಯ ಭದ್ರತಾ ಪ್ರಾಧಿಕಾರ ದೇಶದ ಎಲ್ಲ ಜಲಾಶಯಗಳ ದತ್ತಾಂಶವನ್ನು
ಕ್ರೋಡೀಕರಿಸಿ, ಪರಿಶೀಲನೆ ನಡೆಸುತ್ತದೆ. ಶಿಥಿಲಾವಸ್ಥೆಗೆ ತಲುಪಿರುವ ಡ್ಯಾಂಗಳ ನಿರ್ವಹಣೆ,
ತುರ್ತು ಕ್ರಮಗಳ ಕುರಿತು ಸಂಬಂಧಿಸಿದ ಇಲಾಖೆಗೆ ಸೂಚನೆ ರವಾನಿಸುತ್ತದೆ. ದುರ್ಘಟನೆ, ಭದ್ರತಾ
ಲೋಪ ಸಂಭವಿಸಿದಲ್ಲಿ ಈ ಸಮಿತಿ ತನಿಖೆ ಕೈಗೊಳ್ಳಲಿದೆ. ಕಾಲಕಾಲಕ್ಕೆ ಡ್ಯಾಂಗಳಿಗೆ ಭೇಟಿ
ನೀಡಿ, ಪರಿಶೀಲನೆ ನಡೆಸಲಿದೆ.
*ಸಂಪುಟದ ಇತರ ನಿರ್ಣಯಗಳು*
ನವದೆಹಲಿಯಲ್ಲಿರುವ 3.70 ಎಕರೆಯ ಪ್ರಗತಿ ಮೈದಾನ ನವೀಕರಣ, ನಿರ್ವಹಣೆ ಹಾಗೂ ಹೊಟೇಲ್
ನಿರ್ವಣಕ್ಕೆ ಖಾಸಗಿ ಸಹಭಾಗಿತ್ವ
ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದೇ ಬಾಕಿ ಇರುವ ನಳಂದಾ ವಿಶ್ವವಿದ್ಯಾಲಯ ಮಸೂದೆ – 2013
ಹಿಂದಕ್ಕೆ
ಕೃಷಿ ಶಿಕ್ಷಣ ವಿಭಾಗ ಹಾಗೂ ಭಾರತೀಯ ಕೃಷಿ ಸಂಶೋಧನಾ ಕೌನ್ಸಿಲ್ನ ಮೂರು ವರ್ಷದ
ಕಾರ್ಯಸೂಚಿ ರಚನೆಗೆ ನಿರ್ಧಾರ
ಜಲಸಂರಕ್ಷಣೆ ಅಗತ್ಯತೆ ಹಿನ್ನೆಲೆಯಲ್ಲಿ ಸಮಗ್ರ ಜಲ ನಿರ್ವಹಣೆ ಸೂಚ್ಯಂಕ ಮತ್ತು ರಾಜ್ಯಗಳಿಗೆ
ಶ್ರೇಯಾಂಕ ನೀಡುವುದನ್ನು ಜಾರಿಗೊಳಿಸಲು ನೀತಿ ಆಯೋಗ ನಿರ್ಧರಿಸಿದೆ
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 24 ಸಾವಿರ ಕೋಟಿ ರೂ. ವಿದೇಶಿ ಹೂಡಿಕೆ ಮಾಡಲು ಸಂಪುಟ
ಒಪ್ಪಿಗೆ ನೀಡಿದೆ. ಈ ಮೂಲಕ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಒಟ್ಟು ಶೇ. 74ರವರೆಗೆ ಹೂಡಿಕೆ
ಮಾಡಲು ಅವಕಾಶ ಸಿಕ್ಕಂತಾಗಿದೆ.
ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ದೇಶಾದ್ಯಂತ ಎಲ್ಲ
ಜಲಾಶಯಗಳಿಗೆ ಒಂದೇ ರೀತಿಯ ನಿಯಮಾವಳಿ, ಭದ್ರತಾ ವ್ಯವಸ್ಥೆ ಜಾರಿಗೆ ತರುವುದು ಈ ಕಾಯ್ದೆ
ಉದ್ದೇಶವಾಗಿದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಸಲಹೆಗಳನ್ನು ಪಡೆದು ಈ
ಕಾಯ್ದೆ ರಚಿಸಲಾಗಿದೆ. ಜಲಾಶಯಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವಹಾನಿ, ಆಸ್ತಿ ನಷ್ಟ
ತಡೆಯಲು ಹಲವು ಕ್ರಮಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಜಲಾಶಯ ಪ್ರದೇಶಗಳಲ್ಲಿ ನಿಗಾ
ಇರಿಸುವುದು, ನಿಯಮಿತ ಪರಿಶೀಲನೆ, ಕಾರ್ಯಾಚರಣೆಯ ನಿರ್ವಹಣೆ ಹಾಗೂ ಭದ್ರತೆಗೆ ದೇಶಾದ್ಯಂತ
ಸಮಾನವಾದ ನೀತಿ ಜಾರಿಗೆ ಬರಲಿದೆ. ಪ್ರಸ್ತುತ ಒಂದೊಂದು ರಾಜ್ಯದಲ್ಲಿ ಒಂದೊಂದು ನೀತಿ
ಜಾರಿಯಲ್ಲಿದೆ.
*ಪ್ರಾಧಿಕಾರ ರಚನೆ:* ನೂತನ ಕಾಯ್ದೆ ಪ್ರಕಾರ, ರಾಷ್ಟ್ರೀಯ ಜಲಾಶಯ ಭದ್ರತಾ ಪ್ರಾಧಿಕಾರ
ರಚಿಸಲಾಗುತ್ತದೆ. ನೀತಿ ನಿರೂಪಣೆ, ಅವುಗಳನ್ನು ಜಾರಿಗೊಳಿಸುವುದು, ಮಾರ್ಗದರ್ಶನ ಮತ್ತಿತರ
ಕಾರ್ಯಗಳನ್ನು ಈ ಸಮಿತಿ ನಿರ್ವಹಿಸಲಿದೆ. ಪ್ರತಿ ರಾಜ್ಯಕ್ಕೂ ಪ್ರತ್ಯೇಕವಾಗಿ ಇಂಥ ಸಮಿತಿ
ರಚಿಸಿಕೊಳ್ಳಲು ಅವಕಾಶವಿದೆ. ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿಗಳು ಸಮನ್ವಯತೆಯೊಂದಿಗೆ ಕೆಲಸ
ಮಾಡಲಿವೆ. ರಾಷ್ಟ್ರೀಯ ಜಲಾಶಯ ಭದ್ರತಾ ಪ್ರಾಧಿಕಾರ ದೇಶದ ಎಲ್ಲ ಜಲಾಶಯಗಳ ದತ್ತಾಂಶವನ್ನು
ಕ್ರೋಡೀಕರಿಸಿ, ಪರಿಶೀಲನೆ ನಡೆಸುತ್ತದೆ. ಶಿಥಿಲಾವಸ್ಥೆಗೆ ತಲುಪಿರುವ ಡ್ಯಾಂಗಳ ನಿರ್ವಹಣೆ,
ತುರ್ತು ಕ್ರಮಗಳ ಕುರಿತು ಸಂಬಂಧಿಸಿದ ಇಲಾಖೆಗೆ ಸೂಚನೆ ರವಾನಿಸುತ್ತದೆ. ದುರ್ಘಟನೆ, ಭದ್ರತಾ
ಲೋಪ ಸಂಭವಿಸಿದಲ್ಲಿ ಈ ಸಮಿತಿ ತನಿಖೆ ಕೈಗೊಳ್ಳಲಿದೆ. ಕಾಲಕಾಲಕ್ಕೆ ಡ್ಯಾಂಗಳಿಗೆ ಭೇಟಿ
ನೀಡಿ, ಪರಿಶೀಲನೆ ನಡೆಸಲಿದೆ.
*ಸಂಪುಟದ ಇತರ ನಿರ್ಣಯಗಳು*
ನವದೆಹಲಿಯಲ್ಲಿರುವ 3.70 ಎಕರೆಯ ಪ್ರಗತಿ ಮೈದಾನ ನವೀಕರಣ, ನಿರ್ವಹಣೆ ಹಾಗೂ ಹೊಟೇಲ್
ನಿರ್ವಣಕ್ಕೆ ಖಾಸಗಿ ಸಹಭಾಗಿತ್ವ
ರಾಜ್ಯಸಭೆಯಲ್ಲಿ ಅಂಗೀಕಾರಗೊಳ್ಳದೇ ಬಾಕಿ ಇರುವ ನಳಂದಾ ವಿಶ್ವವಿದ್ಯಾಲಯ ಮಸೂದೆ – 2013
ಹಿಂದಕ್ಕೆ
ಕೃಷಿ ಶಿಕ್ಷಣ ವಿಭಾಗ ಹಾಗೂ ಭಾರತೀಯ ಕೃಷಿ ಸಂಶೋಧನಾ ಕೌನ್ಸಿಲ್ನ ಮೂರು ವರ್ಷದ
ಕಾರ್ಯಸೂಚಿ ರಚನೆಗೆ ನಿರ್ಧಾರ
ಜಲಸಂರಕ್ಷಣೆ ಅಗತ್ಯತೆ ಹಿನ್ನೆಲೆಯಲ್ಲಿ ಸಮಗ್ರ ಜಲ ನಿರ್ವಹಣೆ ಸೂಚ್ಯಂಕ ಮತ್ತು ರಾಜ್ಯಗಳಿಗೆ
ಶ್ರೇಯಾಂಕ ನೀಡುವುದನ್ನು ಜಾರಿಗೊಳಿಸಲು ನೀತಿ ಆಯೋಗ ನಿರ್ಧರಿಸಿದೆ
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 24 ಸಾವಿರ ಕೋಟಿ ರೂ. ವಿದೇಶಿ ಹೂಡಿಕೆ ಮಾಡಲು ಸಂಪುಟ
ಒಪ್ಪಿಗೆ ನೀಡಿದೆ. ಈ ಮೂಲಕ ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಒಟ್ಟು ಶೇ. 74ರವರೆಗೆ ಹೂಡಿಕೆ
ಮಾಡಲು ಅವಕಾಶ ಸಿಕ್ಕಂತಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ