ಕಳೆದ ಮೂರು ವರ್ಷಗಳಿಂದ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹೋರಾಟ
ನಡೆಸುತ್ತಿರುವ ರಾಜ್ಯದ ಮಹದಾಯಿ ಕಣಿವೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ
ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಮಲಪ್ರಭಾ ಜಲಾಶಯದಲ್ಲಿ ನೀರಿನ
ಅಭಾವದಿಂದಾಗಿ ಬೆಳೆ ಸಂಕಷ್ಟಕ್ಕೆ ತುತ್ತಾಗಿರುವ ಮಹದಾಯಿ ಕಣಿವೆಯ ರೈತರ ಹಿತಾಸಕ್ತಿ
ಕಾಪಾಡುವ ಉದ್ದೇಶದಿಂದ ಬೆಂಗಳೂರು ಮೂಲದ ‘ಸಹ್ಯಾದ್ರಿ ಜಲ ಜನ ಸೊಸೈಟಿ’ ಸಲ್ಲಿಸಿರುವ
‘ಮಹದಾಯಿ ಸಣ್ಣ ನೀರಾವರಿ ಯೋಜನೆ’ಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರಿಂದ
ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಯೋಜನೆ ಕುರಿತು ಚರ್ಚಿಸಲು ತಿಂಗಳ ಒಳಗಾಗಿ ಕೇಂದ್ರ ಕೃಷಿ
ಮತ್ತು ಸಹಕಾರ ಇಲಾಖೆಗಳ ಉನ್ನತಾಧಿಕಾರಿಗಳು, ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಮತ್ತು
ಸಹ್ಯಾದ್ರಿ ಜಲ ಜನ ಸೊಸೈಟಿ ಸದಸ್ಯರೊಂದಿಗೆ ದೆಹಲಿಯಲ್ಲಿ ಸಭೆ ನಡೆಸುವಂತೆ ಜಲ ಇಲಾಖೆಯ
ಕಾರ್ಯದರ್ಶಿಗೆ ನಿತಿನ್ ಗಡ್ಕರಿ ನಿರ್ದೇಶನ ನೀಡಿದ್ದಾರೆ.
*9 ತಾಲೂಕಿಗೆ ನೀರು:* ಮಹದಾಯಿ ಸಣ್ಣ ನೀರಾವರಿ ಯೋಜನೆಯಿಂದ ಬೆಳಗಾವಿ, ಧಾರವಾಡ,
ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಒಟ್ಟು 9 ತಾಲೂಕಿನ ರೈತರಿಗೆ ನೀರು ಒದಗಿಸಬಹುದು.
ಮಹದಾಯಿ ನ್ಯಾಯಾಧಿಕರಣ ಏನೇ ತೀರ್ಪು ನೀಡಲಿ, ಕರ್ನಾಟಕಕ್ಕೆ ಹಂಚಿಕೆಯಾಗುವ ನೀರನ್ನು
ಸಮರ್ಪಕವಾಗಿ ಬಳಸಿಕೊಂಡು 2,90,000 ಎಕರೆ ಭೂಮಿಗೆ ನೀರು ಪೂರೈಸಿ, ಅಲ್ಲಿನ ರೈತರಿಗೆ
ಶಾಶ್ವತ ಪರಿಹಾರ ಸಿಗುವಂತೆ ಮಾಡಬಹುದು ಎಂದು ಗಡ್ಕರಿಯವರಿಗೆ ಸಹ್ಯಾದ್ರಿ ಜಲ ಜನ ಸೊಸೈಟಿ
ಸದಸ್ಯರು ವಿವರಿಸಿದ್ದಾರೆ.
ಸೊಸೈಟಿ ಅಧ್ಯಕ್ಷ, ವಿಧಾನ ಪರಿಷತ್ನ ಮಾಜಿ ಸದಸ್ಯ ವಿನಯಚಂದ್ರ, ಉಪಾಧ್ಯಕ್ಷ ಡಾ. ರಂಗನಾಥ್,
ಮಾಜಿ ಶಾಸಕ ಕೃಷ್ಣ ಭಟ್, ಸೆಕ್ರೆಟರಿ ಜನರಲ್ ಹೊನ್ನಳ್ಳಿ ನಾರಾಯಣ ಅವರನ್ನೊಳಗೊಂಡ ನಿಯೋಗದ
ಜತೆ ತಮ್ಮ ಕಚೇರಿಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಭೆ ನಡೆಸಿದ ಸಚಿವ ನಿತಿನ್ ಗಡ್ಕರಿ,
ಯಾವ ರೀತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ
ರ್ಚಚಿಸಿದ ಬಳಿಕ ತೀರ್ಮಾನ ಪ್ರಕಟಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗುರುವಾರದಂದು
ಮಹದಾಯಿ ವ್ಯಾಪ್ತಿಯ ರೈತರನ್ನು ಸಚಿವರು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದು, ನಂತರ
ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗುವ ನಿರೀಕ್ಷೆಯಿದೆ.
*ಏನಿದು ಯೋಜನೆ*
ಸುಪ್ರೀಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮುಂದಾಳತ್ವದಲ್ಲಿ
ಸಹ್ಯಾದ್ರಿ ಜಲ ಜನ ಸೊಸೈಟಿ ಮಹದಾಯಿ ಸಣ್ಣ ನೀರಾವರಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿದೆ.
ಯೋಜನೆ ಮೂಲಕ ಖಾನಾಪುರ, ಸವದತ್ತಿ, ರಾಮದುರ್ಗ, ಬಾದಾಮಿ, ಬಾಗಲಕೋಟೆ, ಹುಬ್ಬಳ್ಳಿ,
ಧಾರವಾಡ, ಕುಂದಗೋಳ, ನವಲಗುಂದ ಮತ್ತು ರೋಣ ತಾಲೂಕುಗಳಲ್ಲಿ ನೀರು ಸಂಗ್ರಹಾಗಾರಗಳನ್ನು
ನಿರ್ವಿುಸಿ ರೈತರ ಕೃಷಿಗೆ, ಕುಡಿಯಲು ನೀರು ಪೂರೈಕೆ ಮಾಡಬಹುದು. ಈ ತಾಲೂಕುಗಳ ವಿವಿಧೆಡೆ 8
ಕಿರು ಜಲ ಸಂಗ್ರಹಾಗಾರ, 70 ಸೇತುವೆ ಮತ್ತು ಬ್ಯಾರೇಜ್ಗಳು, 13 ಏತ ನೀರಾವರಿ ಯೋಜನೆ, 273
ಕೆರೆಗಳು ಮತ್ತು ಟ್ಯಾಂಕ್ಗಳನ್ನು ನಿರ್ಮಾಣ ಮಾಡಿ ಒಟ್ಟು 91,593 ಹೆಕ್ಟೇರ್ (2,28,983
ಎಕರೆ) ಭೂಪ್ರದೇಶಕ್ಕೆ ನೀರನ್ನು ತಲುಪಿಸಬಹುದು. ಇದರಿಂದ 9 ತಾಲೂಕುಗಳ 55000 ರೈತರಿಗೆ
ಅನುಕೂಲವಾಗಲಿದೆ ಮತ್ತು ಮಳೆ ನೀರು ಪೋಲಾಗುವುದಕ್ಕೆ ಶಾಶ್ವತ ತಡೆ ಬೀಳಲಿದೆ ಎಂದು ಸೊಸೈಟಿ
ಸದಸ್ಯರು ಹೇಳುತ್ತಾರೆ.
*8,930 ಕೋಟಿ ರೂ. ವೆಚ್ಚ*
ಯೋಜನೆಗೆ 8,930 ಕೋಟಿರೂ. ವೆಚ್ಚವಾಗಲಿದೆ ಎಂದು ಸೊಸೈಟಿ ಅಂದಾಜಿಸಿದ್ದು, ಶೇ.60ರಷ್ಟು
(5,388 ಕೋಟಿ ರೂ.) ನೆರವನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಉಳಿದ ಶೇ.40
ಹಣವನ್ನು ರಾಜ್ಯ ಸರ್ಕಾರ ನೀಡಬೇಕಾಗಿ ಬಂದರೂ, ಇದನ್ನು ಕಾರ್ಪೆರೇಟ್ ಸೋಷಿಯಲ್
ರೆಸ್ಪಾನ್ಸಿಬಿಲಿಟಿ ನಿಧಿಯ (ಸಿಎಸ್ಆರ್ ಫಂಡ್) ಮೂಲಕ ಖಾಸಗಿ ಕಂಪನಿಗಳಿಂದ
ಪಡೆದುಕೊಳ್ಳಬೇಕೆಂಬುದು ನಮ್ಮ ಉದ್ದೇಶ ಎಂದು ಸೊಸೈಟಿ ಸದಸ್ಯ ಡಾ. ರಂಗನಾಥ್ ‘ವಿಜಯವಾಣಿ’ಗೆ
ವಿವರಿಸಿದ್ದಾರೆ.
*ದೇಶದಲ್ಲೇ ಮೊದಲು*
ಕೇಂದ್ರ ಸರ್ಕಾರ ಮಹದಾಯಿ ಸಣ್ಣ ನೀರಾವರಿ ಯೋಜನೆಗೆ ಸಮ್ಮತಿ ಸೂಚಿಸಿದರೆ ದೇಶದಲ್ಲೇ ಮೊದಲ
ಬಾರಿ ಸಿಎಸ್ಆರ್ ಫಂಡ್ ಬಳಸಿ ಜಾರಿಗೆ ಬಂದ ನೀರಾವರಿ ಯೋಜನೆ ಎಂದು ಖ್ಯಾತಿಗೆ
ಪಾತ್ರವಾಗಲಿದೆ ಎಂದು ಸೊಸೈಟಿ ಸದಸ್ಯ ಕೃಷ್ಣ ಭಟ್ ವಿವರಿಸುತ್ತಾರೆ. 2002, 2012 ಮತ್ತು
ಇತ್ತೀಚಿನ ರಾಷ್ಟ್ರೀಯ ಜಲ ನೀತಿ ಪ್ರಕಾರ ಖಾಸಗಿ ಕಂಪನಿಗಳು ತಮ್ಮ ಕಾರ್ಪೆರೇಟ್ ಸಾಮಾಜಿಕ
ಜವಾಬ್ದಾರಿ ನಿಧಿಯನ್ನು ನೀರಾವರಿ ಯೋಜನೆಗಳಿಗೆ ಹೂಡಬೇಕು. ಆದರೆ ಇದಕ್ಕೆ ಖಾಸಗಿ
ಕಂಪನಿಗಳಾಗಲಿ, ಸರ್ಕಾರಗಳಾಗಲೀ ಹೆಚ್ಚು ಆಸಕ್ತಿ ತೋರಿದಂತಿಲ್ಲ. ಸಿಎಎಸ್ಆರ್ ಫಂಡ್ ಬಳಕೆ
ಬಗ್ಗೆ ಸಲ್ಲಿಸಲಾದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕರೆ ಸಹಜವಾಗಿಯೇ
ಕಾರ್ಪೆರೇಟ್ ಕಂಪನಿಗಳು ಮುಂದೆ ಬರುತ್ತವೆ ಎಂಬ ಅಂಶ ಕೇಂದ್ರ ಸಚಿವರ ಜತೆಗಿನ ಸಭೆಯಲ್ಲೂ
ಚರ್ಚೆಯಾಗಿದೆ.
*‘ಸಿಎಸ್ಆರ್ ನಿಧಿ ಬೇರೆ ಬೇರೆ ಯೋಜನೆಗಳಿಗೆ ಬಳಕೆಯಾಗಿವೆ. ಆದರೆ ನೀರಾವರಿ ಯೋಜನೆಗೆಂದು
ಸಿಎಸ್ಆರ್ ಫಂಡ್ ಏಷ್ಯಾ ಖಂಡದ ಯಾವ ದೇಶದಲ್ಲೂ ಬಳಕೆಯಾದ ನಿದರ್ಶನವಿಲ್ಲ. ಹೀಗಾಗಿ,
ಕರ್ನಾಟಕದ ಮಹದಾಯಿ ಸಣ್ಣ ನೀರಾವರಿ ಯೋಜನೆ ಮೂಲಕವೇ ಇಂಥದ್ದೊಂದು ಪ್ರಕ್ರಿಯೆಗೆ ಚಾಲನೆ
ನೀಡಬೇಕು ಎಂಬುದು ಗಡ್ಕರಿಯವರ ಚಿಂತನೆ. ಇದು ಸಾಕಾರಗೊಂಡರೆ ದೇಶಕ್ಕೆ ಮಾತ್ರವಲ್ಲ,
ಏಷ್ಯಾಕ್ಕೇ ಈ ಯೋಜನೆ ಮಾದರಿ ಎನಿಸಲಿದೆ’*
*– ಡಾ. ರಂಗನಾಥ್, ಉಪಾಧ್ಯಕ್ಷರು, ಸಹ್ಯಾದ್ರಿ ಜಲಜನ ಸೊಸೈಟಿ*
*ಕಳೆದ 3 ವರ್ಷಗಳಿಂದ ಪ್ರತಿಭಟಿಸುತ್ತಿದ್ದರೂ ಸಂತ್ರಸ್ತ ರೈತರಿಗೆ ಶಾಶ್ವತ ಪರಿಹಾರ
ಸಿಕ್ಕಿಲ್ಲ. ಹೀಗಾಗಿ, ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ರೈತರ ನೆರವಿಗೆ ಧಾವಿಸಬೇಕೆಂದು ಈ
ನೀರಾವರಿ ಯೋಜನೆ ಸಿದ್ಧಪಡಿಸಿದೆವು. ಕೇಂದ್ರ ಸಚಿವರ **ಸಕಾರಾತ್ಮಕ** ಪ್ರತಿಕ್ರಿಯೆ
ನಮ್ಮಲ್ಲಿ ಭರವಸೆ ಹೆಚ್ಚಿಸಿದೆ*
*| **ವಿನಯಚಂದ್ರ** ಅಧ್ಯಕ್ಷರು, ಸಹ್ಯಾದ್ರಿ ಜಲಜನ ಸೊಸೈಟಿ*
ನಡೆಸುತ್ತಿರುವ ರಾಜ್ಯದ ಮಹದಾಯಿ ಕಣಿವೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ
ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಮಲಪ್ರಭಾ ಜಲಾಶಯದಲ್ಲಿ ನೀರಿನ
ಅಭಾವದಿಂದಾಗಿ ಬೆಳೆ ಸಂಕಷ್ಟಕ್ಕೆ ತುತ್ತಾಗಿರುವ ಮಹದಾಯಿ ಕಣಿವೆಯ ರೈತರ ಹಿತಾಸಕ್ತಿ
ಕಾಪಾಡುವ ಉದ್ದೇಶದಿಂದ ಬೆಂಗಳೂರು ಮೂಲದ ‘ಸಹ್ಯಾದ್ರಿ ಜಲ ಜನ ಸೊಸೈಟಿ’ ಸಲ್ಲಿಸಿರುವ
‘ಮಹದಾಯಿ ಸಣ್ಣ ನೀರಾವರಿ ಯೋಜನೆ’ಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರಿಂದ
ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಯೋಜನೆ ಕುರಿತು ಚರ್ಚಿಸಲು ತಿಂಗಳ ಒಳಗಾಗಿ ಕೇಂದ್ರ ಕೃಷಿ
ಮತ್ತು ಸಹಕಾರ ಇಲಾಖೆಗಳ ಉನ್ನತಾಧಿಕಾರಿಗಳು, ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಮತ್ತು
ಸಹ್ಯಾದ್ರಿ ಜಲ ಜನ ಸೊಸೈಟಿ ಸದಸ್ಯರೊಂದಿಗೆ ದೆಹಲಿಯಲ್ಲಿ ಸಭೆ ನಡೆಸುವಂತೆ ಜಲ ಇಲಾಖೆಯ
ಕಾರ್ಯದರ್ಶಿಗೆ ನಿತಿನ್ ಗಡ್ಕರಿ ನಿರ್ದೇಶನ ನೀಡಿದ್ದಾರೆ.
*9 ತಾಲೂಕಿಗೆ ನೀರು:* ಮಹದಾಯಿ ಸಣ್ಣ ನೀರಾವರಿ ಯೋಜನೆಯಿಂದ ಬೆಳಗಾವಿ, ಧಾರವಾಡ,
ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಒಟ್ಟು 9 ತಾಲೂಕಿನ ರೈತರಿಗೆ ನೀರು ಒದಗಿಸಬಹುದು.
ಮಹದಾಯಿ ನ್ಯಾಯಾಧಿಕರಣ ಏನೇ ತೀರ್ಪು ನೀಡಲಿ, ಕರ್ನಾಟಕಕ್ಕೆ ಹಂಚಿಕೆಯಾಗುವ ನೀರನ್ನು
ಸಮರ್ಪಕವಾಗಿ ಬಳಸಿಕೊಂಡು 2,90,000 ಎಕರೆ ಭೂಮಿಗೆ ನೀರು ಪೂರೈಸಿ, ಅಲ್ಲಿನ ರೈತರಿಗೆ
ಶಾಶ್ವತ ಪರಿಹಾರ ಸಿಗುವಂತೆ ಮಾಡಬಹುದು ಎಂದು ಗಡ್ಕರಿಯವರಿಗೆ ಸಹ್ಯಾದ್ರಿ ಜಲ ಜನ ಸೊಸೈಟಿ
ಸದಸ್ಯರು ವಿವರಿಸಿದ್ದಾರೆ.
ಸೊಸೈಟಿ ಅಧ್ಯಕ್ಷ, ವಿಧಾನ ಪರಿಷತ್ನ ಮಾಜಿ ಸದಸ್ಯ ವಿನಯಚಂದ್ರ, ಉಪಾಧ್ಯಕ್ಷ ಡಾ. ರಂಗನಾಥ್,
ಮಾಜಿ ಶಾಸಕ ಕೃಷ್ಣ ಭಟ್, ಸೆಕ್ರೆಟರಿ ಜನರಲ್ ಹೊನ್ನಳ್ಳಿ ನಾರಾಯಣ ಅವರನ್ನೊಳಗೊಂಡ ನಿಯೋಗದ
ಜತೆ ತಮ್ಮ ಕಚೇರಿಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಭೆ ನಡೆಸಿದ ಸಚಿವ ನಿತಿನ್ ಗಡ್ಕರಿ,
ಯಾವ ರೀತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ
ರ್ಚಚಿಸಿದ ಬಳಿಕ ತೀರ್ಮಾನ ಪ್ರಕಟಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಗುರುವಾರದಂದು
ಮಹದಾಯಿ ವ್ಯಾಪ್ತಿಯ ರೈತರನ್ನು ಸಚಿವರು ಭೇಟಿ ಮಾಡಿ ಅಹವಾಲು ಸ್ವೀಕರಿಸಲಿದ್ದು, ನಂತರ
ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗುವ ನಿರೀಕ್ಷೆಯಿದೆ.
*ಏನಿದು ಯೋಜನೆ*
ಸುಪ್ರೀಂಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮುಂದಾಳತ್ವದಲ್ಲಿ
ಸಹ್ಯಾದ್ರಿ ಜಲ ಜನ ಸೊಸೈಟಿ ಮಹದಾಯಿ ಸಣ್ಣ ನೀರಾವರಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿದೆ.
ಯೋಜನೆ ಮೂಲಕ ಖಾನಾಪುರ, ಸವದತ್ತಿ, ರಾಮದುರ್ಗ, ಬಾದಾಮಿ, ಬಾಗಲಕೋಟೆ, ಹುಬ್ಬಳ್ಳಿ,
ಧಾರವಾಡ, ಕುಂದಗೋಳ, ನವಲಗುಂದ ಮತ್ತು ರೋಣ ತಾಲೂಕುಗಳಲ್ಲಿ ನೀರು ಸಂಗ್ರಹಾಗಾರಗಳನ್ನು
ನಿರ್ವಿುಸಿ ರೈತರ ಕೃಷಿಗೆ, ಕುಡಿಯಲು ನೀರು ಪೂರೈಕೆ ಮಾಡಬಹುದು. ಈ ತಾಲೂಕುಗಳ ವಿವಿಧೆಡೆ 8
ಕಿರು ಜಲ ಸಂಗ್ರಹಾಗಾರ, 70 ಸೇತುವೆ ಮತ್ತು ಬ್ಯಾರೇಜ್ಗಳು, 13 ಏತ ನೀರಾವರಿ ಯೋಜನೆ, 273
ಕೆರೆಗಳು ಮತ್ತು ಟ್ಯಾಂಕ್ಗಳನ್ನು ನಿರ್ಮಾಣ ಮಾಡಿ ಒಟ್ಟು 91,593 ಹೆಕ್ಟೇರ್ (2,28,983
ಎಕರೆ) ಭೂಪ್ರದೇಶಕ್ಕೆ ನೀರನ್ನು ತಲುಪಿಸಬಹುದು. ಇದರಿಂದ 9 ತಾಲೂಕುಗಳ 55000 ರೈತರಿಗೆ
ಅನುಕೂಲವಾಗಲಿದೆ ಮತ್ತು ಮಳೆ ನೀರು ಪೋಲಾಗುವುದಕ್ಕೆ ಶಾಶ್ವತ ತಡೆ ಬೀಳಲಿದೆ ಎಂದು ಸೊಸೈಟಿ
ಸದಸ್ಯರು ಹೇಳುತ್ತಾರೆ.
*8,930 ಕೋಟಿ ರೂ. ವೆಚ್ಚ*
ಯೋಜನೆಗೆ 8,930 ಕೋಟಿರೂ. ವೆಚ್ಚವಾಗಲಿದೆ ಎಂದು ಸೊಸೈಟಿ ಅಂದಾಜಿಸಿದ್ದು, ಶೇ.60ರಷ್ಟು
(5,388 ಕೋಟಿ ರೂ.) ನೆರವನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಉಳಿದ ಶೇ.40
ಹಣವನ್ನು ರಾಜ್ಯ ಸರ್ಕಾರ ನೀಡಬೇಕಾಗಿ ಬಂದರೂ, ಇದನ್ನು ಕಾರ್ಪೆರೇಟ್ ಸೋಷಿಯಲ್
ರೆಸ್ಪಾನ್ಸಿಬಿಲಿಟಿ ನಿಧಿಯ (ಸಿಎಸ್ಆರ್ ಫಂಡ್) ಮೂಲಕ ಖಾಸಗಿ ಕಂಪನಿಗಳಿಂದ
ಪಡೆದುಕೊಳ್ಳಬೇಕೆಂಬುದು ನಮ್ಮ ಉದ್ದೇಶ ಎಂದು ಸೊಸೈಟಿ ಸದಸ್ಯ ಡಾ. ರಂಗನಾಥ್ ‘ವಿಜಯವಾಣಿ’ಗೆ
ವಿವರಿಸಿದ್ದಾರೆ.
*ದೇಶದಲ್ಲೇ ಮೊದಲು*
ಕೇಂದ್ರ ಸರ್ಕಾರ ಮಹದಾಯಿ ಸಣ್ಣ ನೀರಾವರಿ ಯೋಜನೆಗೆ ಸಮ್ಮತಿ ಸೂಚಿಸಿದರೆ ದೇಶದಲ್ಲೇ ಮೊದಲ
ಬಾರಿ ಸಿಎಸ್ಆರ್ ಫಂಡ್ ಬಳಸಿ ಜಾರಿಗೆ ಬಂದ ನೀರಾವರಿ ಯೋಜನೆ ಎಂದು ಖ್ಯಾತಿಗೆ
ಪಾತ್ರವಾಗಲಿದೆ ಎಂದು ಸೊಸೈಟಿ ಸದಸ್ಯ ಕೃಷ್ಣ ಭಟ್ ವಿವರಿಸುತ್ತಾರೆ. 2002, 2012 ಮತ್ತು
ಇತ್ತೀಚಿನ ರಾಷ್ಟ್ರೀಯ ಜಲ ನೀತಿ ಪ್ರಕಾರ ಖಾಸಗಿ ಕಂಪನಿಗಳು ತಮ್ಮ ಕಾರ್ಪೆರೇಟ್ ಸಾಮಾಜಿಕ
ಜವಾಬ್ದಾರಿ ನಿಧಿಯನ್ನು ನೀರಾವರಿ ಯೋಜನೆಗಳಿಗೆ ಹೂಡಬೇಕು. ಆದರೆ ಇದಕ್ಕೆ ಖಾಸಗಿ
ಕಂಪನಿಗಳಾಗಲಿ, ಸರ್ಕಾರಗಳಾಗಲೀ ಹೆಚ್ಚು ಆಸಕ್ತಿ ತೋರಿದಂತಿಲ್ಲ. ಸಿಎಎಸ್ಆರ್ ಫಂಡ್ ಬಳಕೆ
ಬಗ್ಗೆ ಸಲ್ಲಿಸಲಾದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕರೆ ಸಹಜವಾಗಿಯೇ
ಕಾರ್ಪೆರೇಟ್ ಕಂಪನಿಗಳು ಮುಂದೆ ಬರುತ್ತವೆ ಎಂಬ ಅಂಶ ಕೇಂದ್ರ ಸಚಿವರ ಜತೆಗಿನ ಸಭೆಯಲ್ಲೂ
ಚರ್ಚೆಯಾಗಿದೆ.
*‘ಸಿಎಸ್ಆರ್ ನಿಧಿ ಬೇರೆ ಬೇರೆ ಯೋಜನೆಗಳಿಗೆ ಬಳಕೆಯಾಗಿವೆ. ಆದರೆ ನೀರಾವರಿ ಯೋಜನೆಗೆಂದು
ಸಿಎಸ್ಆರ್ ಫಂಡ್ ಏಷ್ಯಾ ಖಂಡದ ಯಾವ ದೇಶದಲ್ಲೂ ಬಳಕೆಯಾದ ನಿದರ್ಶನವಿಲ್ಲ. ಹೀಗಾಗಿ,
ಕರ್ನಾಟಕದ ಮಹದಾಯಿ ಸಣ್ಣ ನೀರಾವರಿ ಯೋಜನೆ ಮೂಲಕವೇ ಇಂಥದ್ದೊಂದು ಪ್ರಕ್ರಿಯೆಗೆ ಚಾಲನೆ
ನೀಡಬೇಕು ಎಂಬುದು ಗಡ್ಕರಿಯವರ ಚಿಂತನೆ. ಇದು ಸಾಕಾರಗೊಂಡರೆ ದೇಶಕ್ಕೆ ಮಾತ್ರವಲ್ಲ,
ಏಷ್ಯಾಕ್ಕೇ ಈ ಯೋಜನೆ ಮಾದರಿ ಎನಿಸಲಿದೆ’*
*– ಡಾ. ರಂಗನಾಥ್, ಉಪಾಧ್ಯಕ್ಷರು, ಸಹ್ಯಾದ್ರಿ ಜಲಜನ ಸೊಸೈಟಿ*
*ಕಳೆದ 3 ವರ್ಷಗಳಿಂದ ಪ್ರತಿಭಟಿಸುತ್ತಿದ್ದರೂ ಸಂತ್ರಸ್ತ ರೈತರಿಗೆ ಶಾಶ್ವತ ಪರಿಹಾರ
ಸಿಕ್ಕಿಲ್ಲ. ಹೀಗಾಗಿ, ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ರೈತರ ನೆರವಿಗೆ ಧಾವಿಸಬೇಕೆಂದು ಈ
ನೀರಾವರಿ ಯೋಜನೆ ಸಿದ್ಧಪಡಿಸಿದೆವು. ಕೇಂದ್ರ ಸಚಿವರ **ಸಕಾರಾತ್ಮಕ** ಪ್ರತಿಕ್ರಿಯೆ
ನಮ್ಮಲ್ಲಿ ಭರವಸೆ ಹೆಚ್ಚಿಸಿದೆ*
*| **ವಿನಯಚಂದ್ರ** ಅಧ್ಯಕ್ಷರು, ಸಹ್ಯಾದ್ರಿ ಜಲಜನ ಸೊಸೈಟಿ*
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ