ನೋಟು ಅಮಾನ್ಯೀಕರಣದ ನಂತರ ಮೊದಲ ಬಾರಿಗೆ ಭಾರತದ ಜಿಡಿಪಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಅಭಿವೃದ್ಧಿ ಕಂಡಿದ್ದು, ಶೇ.7.7ನ್ನು ಮುಟ್ಟಿದೆ. ಪ್ರಸಕ್ತ ತ್ರೖೆ ಮಾಸಿಕ ಅವಧಿಯಲ್ಲಿ ಶೇ.7.4ರ ಬೆಳವಣಿಗೆ ಸಾಧಿಸ ಬಹುದು ಎಂಬ ನಿರೀಕ್ಷೆಯಿತ್ತು. ಈ ಬೆಳವಣಿಗೆಯೊಂದಿಗೆ ಭಾರತವು ಮತ್ತೆ ವಿಶ್ವ ಮಾರುಕಟ್ಟೆಯಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಆರ್ಥಿಕತೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಅನುಷ್ಠಾನದ ಬಳಿಕ ಭಾರತದ ಆರ್ಥಿಕತೆಯಲ್ಲಿ ತೀವ್ರ ಕುಸಿತ ಕಂಡಿತ್ತು. ಇದು ಅಲ್ಪಕಾಲಿಕ ಹಾಗೂ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದು ಕೇಂದ್ರ ಸರ್ಕಾರವು ಈ ಹಿಂದೆಯೇ ಹೇಳಿದ್ದರೂ, ಭಾರತದ ಆರ್ಥಿಕತೆಗೆ, ನರೇಂದ್ರ ಮೋದಿ ಸರ್ಕಾರಕ್ಕೆ ಆರ್ಥಿಕ ಕುಸಿತ ಭಾರಿ ಹೊಡೆತ ನೀಡಿತ್ತು. 4ನೇ ತ್ರೖೆಮಾಸಿಕದ ಈ ಏರಿಕೆ ಹೊರತಾಗಿಯೂ ಭವಿಷ್ಯದ ಬೆಳವಣಿಗೆ ದರ ಕಠಿಣ ಹಾದಿಯನ್ನು ಕ್ರಮಿಸಬೇಕಿದೆ ಎಂಬ ಮಾತೂ ಕೇಳಿಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಎನ್ಪಿಎ ಕೂಡ ಜಿಡಿಪಿ ವೃದ್ಧಿಗೆ ಕಂಟಕವಾಗುವ ಲಕ್ಷಣವಿದೆ. ಸದ್ಯ ಚೀನಾ ಶೇ.6.8 ಜಿಡಿಪಿ ಬೆಳವಣಿಗೆ ದರ ಹೊಂದಿದ್ದು, ಭಾರತ ಅದನ್ನು ಮತ್ತೆ ಹಿಂದಿಕ್ಕಿ ಆರ್ಥಿಕ ಬೆಳವಣಿಗೆ ದರದಲ್ಲಿ ಮತ್ತೆ ಮುಂಚೂಣಿಗೆ ಬಂದಿದೆ. ಕಳೆದ ಆರ್ಥಿಕ ವರ್ಷ ಡಿಸೆಂಬರ್ಗೆ ಶೇ.7.1ರ ಬೆಳವಣಿಗೆ ದರ ನಿರೀಕ್ಷಿಸಿದ್ದರೂ ಶೇ.7ಕ್ಕೆ ನಿಂತಿತ್ತು. ಇದರಿಂದ ಚೀನಾ ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. 2017-18 ನೇ ಸಾಲಿನ ಕೊನೆಯ ತ್ರೖೆಮಾಸಿಕಕ್ಕೆ ಶೇ.7.3ರ ಬೆಳವಣಿಗೆ ದರ ನಿರೀಕ್ಷಿಸಲಾಗಿತ್ತು.
ಮುಂದುವರಿಯಲಿದೆಯೇ ನಾಗಾಲೋಟ?
ನೋಟು ಅಮಾನ್ಯೀಕರಣದ ಬಳಿಕ ಕೇಂದ್ರ ಸರ್ಕಾರದ ನಿರೀಕ್ಷೆಗೂ ಕಡಿಮೆ ಬೆಳವಣಿಗೆ ದರವನ್ನು ಜಿಡಿಪಿ ತಲುಪುತ್ತಿತ್ತು. ಇದೇ ಮೊದಲ ಸಲ ಶೇ.04ರ ಹೆಚ್ಚುವರಿ ಬೆಳವಣಿಗೆ ದರ ಕಂಡಿದ್ದು, ಕೇಂದ್ರ ಸರ್ಕಾರಕ್ಕೆ ಚುನಾವಣೆ ವರ್ಷದಲ್ಲಿ ಆಶಾಭಾವನೆ ಮೂಡಿಸಿದೆ. ಇದಕ್ಕೆ ಪೂರಕವಾಗಿ ಭಾರತದಲ್ಲಿ ಈ ಬಾರಿ ಸಾಮಾನ್ಯ ಮುಂಗಾರಿನ ಮುನ್ಸೂಚನೆ ಕೂಡ ದೊರೆತಿರುವುದು ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿಲ್ಲ. ಆದಾಗ್ಯೂ ಕಚ್ಚಾತೈಲ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ಗೆ 80 ಡಾಲರ್ ದಾಟಿದರೆ ಜಿಡಿಪಿ ಮೇಲೆ ಮತ್ತೆ ಪ್ರತಿಕೂಲ ಪರಿಣಾಮ ಬೀರಬಹುದು. ಅದರೊಂದಿಗೆ ಸುಮಾರು 14 ಲಕ್ಷ ಕೋಟಿ ರೂ. ಎನ್ಪಿಎ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳ ಹಗರಣಗಳು ಕೂಡ ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಮೂಡಿಸ್ ವರದಿ ನೀಡಿದೆ. ಇದಕ್ಕಾಗಿಯೇ 2018-19ನೇ ಸಾಲಿನ ಮಧ್ಯಂತರ ಅವಧಿಗೆ ಭಾರತವು ಶೇ.7.3ರಿಂದ 7.5ರ ಪ್ರಗತಿ ದರ ಕಾಣಬಹುದು ಎಂದು ಮೂಡಿಸ್ ಹೇಳಿದೆ.
ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಅನುಷ್ಠಾನದ ಬಳಿಕ ಭಾರತದ ಆರ್ಥಿಕತೆಯಲ್ಲಿ ತೀವ್ರ ಕುಸಿತ ಕಂಡಿತ್ತು. ಇದು ಅಲ್ಪಕಾಲಿಕ ಹಾಗೂ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂದು ಕೇಂದ್ರ ಸರ್ಕಾರವು ಈ ಹಿಂದೆಯೇ ಹೇಳಿದ್ದರೂ, ಭಾರತದ ಆರ್ಥಿಕತೆಗೆ, ನರೇಂದ್ರ ಮೋದಿ ಸರ್ಕಾರಕ್ಕೆ ಆರ್ಥಿಕ ಕುಸಿತ ಭಾರಿ ಹೊಡೆತ ನೀಡಿತ್ತು. 4ನೇ ತ್ರೖೆಮಾಸಿಕದ ಈ ಏರಿಕೆ ಹೊರತಾಗಿಯೂ ಭವಿಷ್ಯದ ಬೆಳವಣಿಗೆ ದರ ಕಠಿಣ ಹಾದಿಯನ್ನು ಕ್ರಮಿಸಬೇಕಿದೆ ಎಂಬ ಮಾತೂ ಕೇಳಿಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಎನ್ಪಿಎ ಕೂಡ ಜಿಡಿಪಿ ವೃದ್ಧಿಗೆ ಕಂಟಕವಾಗುವ ಲಕ್ಷಣವಿದೆ. ಸದ್ಯ ಚೀನಾ ಶೇ.6.8 ಜಿಡಿಪಿ ಬೆಳವಣಿಗೆ ದರ ಹೊಂದಿದ್ದು, ಭಾರತ ಅದನ್ನು ಮತ್ತೆ ಹಿಂದಿಕ್ಕಿ ಆರ್ಥಿಕ ಬೆಳವಣಿಗೆ ದರದಲ್ಲಿ ಮತ್ತೆ ಮುಂಚೂಣಿಗೆ ಬಂದಿದೆ. ಕಳೆದ ಆರ್ಥಿಕ ವರ್ಷ ಡಿಸೆಂಬರ್ಗೆ ಶೇ.7.1ರ ಬೆಳವಣಿಗೆ ದರ ನಿರೀಕ್ಷಿಸಿದ್ದರೂ ಶೇ.7ಕ್ಕೆ ನಿಂತಿತ್ತು. ಇದರಿಂದ ಚೀನಾ ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. 2017-18 ನೇ ಸಾಲಿನ ಕೊನೆಯ ತ್ರೖೆಮಾಸಿಕಕ್ಕೆ ಶೇ.7.3ರ ಬೆಳವಣಿಗೆ ದರ ನಿರೀಕ್ಷಿಸಲಾಗಿತ್ತು.
ಮುಂದುವರಿಯಲಿದೆಯೇ ನಾಗಾಲೋಟ?
ನೋಟು ಅಮಾನ್ಯೀಕರಣದ ಬಳಿಕ ಕೇಂದ್ರ ಸರ್ಕಾರದ ನಿರೀಕ್ಷೆಗೂ ಕಡಿಮೆ ಬೆಳವಣಿಗೆ ದರವನ್ನು ಜಿಡಿಪಿ ತಲುಪುತ್ತಿತ್ತು. ಇದೇ ಮೊದಲ ಸಲ ಶೇ.04ರ ಹೆಚ್ಚುವರಿ ಬೆಳವಣಿಗೆ ದರ ಕಂಡಿದ್ದು, ಕೇಂದ್ರ ಸರ್ಕಾರಕ್ಕೆ ಚುನಾವಣೆ ವರ್ಷದಲ್ಲಿ ಆಶಾಭಾವನೆ ಮೂಡಿಸಿದೆ. ಇದಕ್ಕೆ ಪೂರಕವಾಗಿ ಭಾರತದಲ್ಲಿ ಈ ಬಾರಿ ಸಾಮಾನ್ಯ ಮುಂಗಾರಿನ ಮುನ್ಸೂಚನೆ ಕೂಡ ದೊರೆತಿರುವುದು ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿಲ್ಲ. ಆದಾಗ್ಯೂ ಕಚ್ಚಾತೈಲ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ಗೆ 80 ಡಾಲರ್ ದಾಟಿದರೆ ಜಿಡಿಪಿ ಮೇಲೆ ಮತ್ತೆ ಪ್ರತಿಕೂಲ ಪರಿಣಾಮ ಬೀರಬಹುದು. ಅದರೊಂದಿಗೆ ಸುಮಾರು 14 ಲಕ್ಷ ಕೋಟಿ ರೂ. ಎನ್ಪಿಎ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳ ಹಗರಣಗಳು ಕೂಡ ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಮೂಡಿಸ್ ವರದಿ ನೀಡಿದೆ. ಇದಕ್ಕಾಗಿಯೇ 2018-19ನೇ ಸಾಲಿನ ಮಧ್ಯಂತರ ಅವಧಿಗೆ ಭಾರತವು ಶೇ.7.3ರಿಂದ 7.5ರ ಪ್ರಗತಿ ದರ ಕಾಣಬಹುದು ಎಂದು ಮೂಡಿಸ್ ಹೇಳಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ