ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಭರತನ ಕಥೆಯ ನೆರಳು ಗುರುರಾಜ ಕರಜಗಿ

ವಾರಾಣಸಿಯ ರಾಜನಾದ ಬ್ರಹ್ಮದತ್ತ ಒಮ್ಮೆ ಬೇಟೆಗೆಂದು ಕಾಡಿಗೆ ಹೋದ. ಆಗ ಅಲ್ಲಿ ಮಧುರವಾಗಿ ಹಾಡುತ್ತ ಒಣಕಟ್ಟಿಗೆಗಳನ್ನು ಆರಿಸುತ್ತಿದ್ದ ಸುಂದರ ಯುವತಿಯನ್ನು ಕಂಡ. ಅವಳಲ್ಲಿ ಅನುರಕ್ತನಾಗಿ ಅಲ್ಲಿಯೇ ಉಳಿದುಬಿಟ್ಟ.
ಸ್ವಲ್ಪ ದಿನಗಳಲ್ಲಿ ಆಕೆ ಗರ್ಭಿಣಿ ಎಂದು ಆತನಿಗೆ ತಿಳಿಯಿತು. ರಾಜ ಬ್ರಹ್ಮದತ್ತ ಆ ಸ್ತ್ರೀಗೆ ತನ್ನ ಉಂಗುರವನ್ನು ಕೊಟ್ಟು ಹೇಳಿದ, “ನಿನಗೆ ಹೆಣ್ಣು ಮಗುವಾದರೆ ಈ ಉಂಗುರವನ್ನು ಬಿಸಾಕಿಬಿಡು. ನಿನ್ನ ಮಗಳನ್ನು ನೀನೇ ಕಾಪಾಡು. ಅದಕ್ಕೆ ಬೇಕಾದ ಸಹಾಯವನ್ನು ಅರಮನೆಯಿಂದ ಪಡೆದುಕೋ. ಗಂಡುಮಗುವಾದರೆ ಅವನನ್ನು ಕರೆದುಕೊಂಡು ಅರಮನೆಗೆ ಬಾ, ಗುರುತಿನ ಈ ಉಂಗುರವನ್ನು ಮರೆಯದೆ ತಾ” ಎಂದು ರಾಜ ವಾರಾಣಸಿಗೆ ಮರಳಿ ಬಂದ.
ಕೆಲತಿಂಗಳುಗಳ ನಂತರ ಆಕೆ ಸುಂದರವಾದ ಗಂಡುಮಗುವಿಗೆ ಜನ್ಮವಿತ್ತಳು. ಅವನ ಲಾಲನೆ ಪೋಷಣೆಯಲ್ಲಿ ರಾಜನ ಅರಮನೆಗೆ ಹೋಗುವುದನ್ನೇ ಮರೆತಳು. ಬಾಲಕ ಬೋಧಿಸತ್ವ ಸ್ನೇಹಿತರೊಡನೆ ಆಟವಾಡುವಾಗ ಉಳಿದ ಮಕ್ಕಳು ತಮ್ಮ ತಂದೆಯ ಬಗ್ಗೆ ಹೇಳಿಕೊಳ್ಳುವುದನ್ನು, ತನ್ನನ್ನು ತಂದೆ ಇಲ್ಲದವನೆಂದು ಹೀಯಾಳಿಸುವುದನ್ನು ತಾಳಲಾರದೆ ಬಂದು ತಾಯಿಯನ್ನು ಕೇಳಿದ, “ಅಮ್ಮ ನನ್ನ ತಂದೆ ಯಾರು ? ಎಲ್ಲಿದ್ದಾರೆ”. ಆಕೆ, “ಮಗೂ, ನೀನು ಸಾಮಾನ್ಯನಲ್ಲ, ನಿನ್ನ ತಂದೆ ವಾರಾಣಸಿಯ ರಾಜ” ಎಂದಳು.
“ಅಮ್ಮ, ಅದಕ್ಕೇನಾದರೂ ಸಾಕ್ಷಿ ಇದೆಯಾ?”
“ಮಗು ರಾಜರು ನನಗೆ ಹೇಳಿದ್ದರು. ಗಂಡುಮಗುವಾದರೆ ಉಂಗುರದ ಜೊತೆಗೆ ಅವನನ್ನು ಕರೆದುಕೊಂಡು ಬಾ ಎಂದು ಹೇಳಿದ್ದರು. ಆದರೆ ನಾನೇ ಇದುವರೆಗೂ ಅದನ್ನು ಮರೆತುಬಿಟ್ಟಿದ್ದೆ” ಎಂದು ರಾಜ ಕೊಟ್ಟ ಉಂಗುರವನ್ನು ತೋರಿಸಿದಳು. ತಂದೆಯ ಬಳಿ ಹೋಗೋಣ ನಡೆ ಎಂದು ಬೋಧಿಸತ್ವ ಒತ್ತಾಯಪಡಿಸಿದ.
ಮರುದಿನ ತಾಯಿ ಮಗನನ್ನು ಕರೆದುಕೊಂಡು ವಾರಾಣಸಿಗೆ ಬಂದು ಅರಮನೆಯನ್ನು ಸೇರಿದಳು. ರಾಜದ್ವಾರದಲ್ಲಿ ಸೇವಕರಿಗೆ ತನ್ನ ಪರಿಚಯ ಹೇಳಿಕೊಂಡು ಉಂಗುರವನ್ನು ತೋರಿಸಿದಳು. ರಾಜ ಮಹಿಳೆ ಮತ್ತು ಮಗುವನ್ನು ದರ್ಬಾರಿಗೆ ಕರೆಸಿದ. ಆಕೆ ರಾಜನಿಗೆ ನಮಸ್ಕಾರ ಮಾಡಿ, “ಪ್ರಭೂ, ಈತ ತಮ್ಮ ಮಗ” ಎಂದಳು.
ರಾಜ ಆಕೆಯನ್ನು ಗುರುತಿಸಿದರೂ, ಕಾಡುಸ್ತ್ರೀಯೊಂದಿಗೆ ಸಹವಾಸ ಮಾಡಿದ್ದಕ್ಕೆ ಸಭಿಕರು ಏನೆಂದುಕೊಂಡಾರು ಎಂಬ ಭಯದಿಂದ, “ನೀನು ಯಾರೊ ಗೊತ್ತಿಲ್ಲ, ಇವನು ನನ್ನ ಪುತ್ರನಲ್ಲ” ಎಂದುಬಿಟ್ಟ. ಆಕೆ, ಪ್ರಭೂ, ಇದು ನೀವು ಕೊಟ್ಟ ಪರಿಚಯದ ಉಂಗುರ. ಇದನ್ನು ಗುರುತಿಸುತ್ತೀರಾ?” ಎಂದು ಕೇಳಿದಳು. ಆತ ಸಂದಿಗ್ಧತೆಯಿಂದ ಪಾರಾಗಲು, “ಈ ಉಂಗುರವೂ ನನ್ನದಲ್ಲ” ಎಂದ.
ಆಕೆ ದು:ಖಿತಳಾಗಿ, “ಮಹಾರಾಜಾ, ನನಗಿನ್ನು ಪುಣ್ಯಪ್ರಮಾಣದ ವಿನ: ಬೇರೆ ಯಾವ ಸಾಕ್ಷಿಯೂ ಇಲ್ಲ. ಈತ ನಿಮ್ಮ ಮಗನೇ ಆಗಿದ್ದಲ್ಲಿ ಆಕಾಶದಲ್ಲಿ ನಿಲ್ಲಲಿ, ಇಲ್ಲದಿದ್ದರೆ ಕೆಳಗೆ ಬಿದ್ದು ಸತ್ತು ಹೋಗಲಿ” ಎಂದು ಮಗುವಿನ ಕಾಲು ಹಿಡಿದು ಗರಗರನೆ ತಿರುವಿ ಆಕಾಶಕ್ಕೆ ಎಸೆದು ಬಿಟ್ಟಳು. ಆ ಬಾಲಕ ಪದ್ಮಾಸನ ಹಾಕಿಕೊಂಡು ಗಾಳಿಯಲ್ಲಿ ತೇಲುತ್ತ, “ರಾಜಾ, ನೀನು ಸಕಲಪ್ರಜೆಗಳಿಗೂ ತಂದೆಯಾಗಿದ್ದವನು, ಮಗನಿಗೆ ತಂದೆಯಾಗಲು ಯಾಕೆ ನಾಚುತ್ತೀ?” ಎಂದ.
ರಾಜನಿಗೆ ಅರಿವು ಬಂದು, “ಬಾ ಮಗೂ, ನೀನೇ ನನ್ನ ಪುತ್ರ” ಎಂದು ಅವನನ್ನು ಹಿಡಿದುಕೊಂಡು ಕೆಳಗಿಳಿಸಿ ನಂತರ ಯುವರಾಜನನ್ನಾಗಿ ಮಾಡಿದ, ಮಹಿಳೆಯನ್ನು ರಾಣಿಯನ್ನಾಗಿ ಸ್ವೀಕರಿಸಿದ.
ಈ ಕಥೆಯಲ್ಲಿ ಶಕುಂತಲೆಯ ಕಥೆಯ ನೆರಳು ಕಾಣುವುದಿಲ್ಲವೇ. ಅಲ್ಲಿ ದುಷ್ಯಂತ ಮರೆತಿದ್ದರೆ, ಇಲ್ಲಿ ನಾಟಕವಾಡಿದ್ದ. ಎರಡೂ ಕಡೆಗೂ ರಾಜನಿಗೆ ಹೆಂಡತಿಯಿಂದ, ಮಗನಿಂದ ಜ್ಞಾನೋದಯವಾಗಿತ್ತು. ಜ್ಞಾನದ ಮೂಲ ಯಾವುದೂ ಆಗಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...