ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಸಾಮಾನ್ಯ ಇತಿಹಾಸ ಪ್ರಶ್ಣೆಗಳು 1



1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
* 1674 ರಲ್ಲಿ.
2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
* ರಾಯಗಡದಲ್ಲಿ.
3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
* ಬೈಬಲ್ ನಲ್ಲಿ.
4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
* ಬೆತ್ಲಹೆಂ ನಲ್ಲಿ.
5) 'ಬೆತ್ಲಹೆಂ' ಯಾವ ದೇಶದಲ್ಲಿದೆ?
* ಇಸ್ರೇಲ್.
6) ಯೇಸುಕ್ರಿಸ್ತನ ತಾಯಿಯ ಹೆಸರೇನು?
* ಮೇರಿ.
7) ಕುರಾನ್ ಯಾವ ಭಾಷೆಯಲ್ಲಿದೆ?
* ಅರೇಬಿಕ್.
8) ಇಸ್ಲಾಂ ಪದದ ಅರ್ಥವೇನು?
* ಶರಣಾಗತಿ ಎಂದರ್ಥ.
9) ಮುಸ್ಲಿಂ ಎಂದರೆ -----.
* ದೇವರಿಗೆ ಶರಣರಾದವರು.
10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
* ಕಲೀಫರು.
11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
* ಜರೂಸಲಮ್.
12) ಹಿಜರಿ ಶಕೆಯ ----- ರಿಂದ ಪ್ರಾರಂಭ.
ಕ್ರಿಶ.622.
13) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
* ಖಜುರಾಹೊ.
14) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
* ಜೈಪುರ.
15) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
* ಗ್ವಾಲಿಯರ್ ಕೋಟೆ.
16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
* ಉದಯಪುರ ಅರಮನೆ.
17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
* ಒಂಟೆ.
18) ರಜಪೂತರ ಕಾಲಾವಧಿ ತಿಳಿಸಿ?
* ಕ್ರಿಶ 650-1200.
19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
* ಕವಿರಾಜಮಾರ್ಗ.
20) "ಕೈಲಾಸ ದೇವಾಲಯ" ಎಲ್ಲಿದೆ?
*ಎಲ್ಲೋರ.
21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
* ಮಹಾರಾಷ್ಟ್ರ.
22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
* ಮುಮ್ಮಡಿ ಗೋವಿಂದ.
23) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
* ಚೆನ್ನಕೇಶವ ದೇವಾಲಯ.
24) "ಚೆನ್ನಕೇಶವ ದೇವಾಲಯ" ಎಲ್ಲಿದೆ?
* ಬೇಲೂರಿನಲ್ಲಿದೆ.
25) "ಕೇಶವ ದೇವಾಲಯ" ಎಲ್ಲಿದೆ?
* ಸೋಮನಾಥಪುರ.
26) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
* ಹರಿಹರ.
27) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
* ಆಂಡಯ್ಯ.
28) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
* ರಾಜರಾಜಚೋಳನ.
29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
* ಶಂಕರಾಚಾರ್ಯರ.
30) ಬದರಿ ಯಾವ ರಾಜ್ಯದಲ್ಲಿದೆ?
* ಉತ್ತರಾಖಂಡ.
31) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
* ಮೇಲುಕೋಟೆ.
32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
* ವಿಜಯಪುರ.
33) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
* ಶಕ್ತಿವಿಶಿಷ್ಟಾದ್ವೈತ.
34) "ದೇಹವೇ ದೇಗುಲ" ಎಂದವರು ಯಾರು?
* ಬಸವೇಶ್ವರರು.
35) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
* ಉಡುಪಿಯಲ್ಲಿ.
36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
* ಅರಬ್ಬರು.
37) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
* ಇಲ್ತಮಿಶ್.
38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
* ಅಲ್ಲಾವುದ್ದೀನ್ ಖಿಲ್ಜಿ.
39) "ಅಲೈ ದರ್ವಾಜಾ" ಎಲ್ಲಿದೆ?
* ದಿಲ್ಲಿಯಲ್ಲಿದೆ.
40) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
* ನೇಯ್ಗೆ.
41) ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು?
* ಜಯಸಿ.
42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
* 1206-1210.
43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
* 1236-1240.
44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
* ಕ್ರಿಶ. 1526 ರಲ್ಲಿ.
45) ಮೀನಾರು ಎಂದರೆ -----.
* ಎತ್ತರವಾದ ಸ್ತಂಭಗೋಪುರ.
46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
* ಕ್ರಿಶ 1206 - 1526.
47)ಡಾ.ಸರೋಜಿನಿ ಮಹಿಷಿ ವರದಿ ಯಾವುದಕ್ಕೆ ಸಂಭಂದಿಸಿದೆ?
*ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ
48)ಆಂಗ್ ಸಾಕ್ ಸೂಕಿ ಯಾವ ದೇಶದವರು?
*ಮಯನ್ಮಾರ
49)ಭಾರತದಲ್ಲಿ ಅತಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ?
*ಒಡಿಸ್ಸಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....

**ಜ್ಞಾನ ಕಾರಂಜಿ**::: ನೀತಿ ಆಯೋಗ ಸ್ಥಾಪನೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 26ಕ್ಕೆ ನಾಲ್ಕು ವರ್ಷ. ಸರ್ಕಾರದ ಈ ಅವಧಿಯ ಪಯಣದಲ್ಲಿನ ಪ್ರಮುಖ ರಂಗಗಳ ಚಿತ್ರಣವನ್ನು ವಿಜಯವಾಣಿ ಸರಣಿಯಾಗಿ ಕಟ್ಟಿಕೊಡಲಿದ್ದು, ಅದರ ಎರಡನೇ ಭಾಗ ಇಲ್ಲಿದೆ. ನೆಹರು ಅವಧಿಯಲ್ಲಿ ರಚನೆಯಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿ 2015ರ ಜ.1ರಂದು ನೀತಿ ಆಯೋಗ ರಚಿಸಲಾಯಿತು. ಅಮೃತ್, ಡಿಜಿಟಲ್ ಇಂಡಿಯಾ, ಅಟಲ್ ಇನೋವೇಷನ್, ಸಂಚಾರ ದಟ್ಟಣೆ ನಿಯಂತ್ರಣ ಸೇರಿ ಕೆಲ ಯೋಜನೆಗಳ ನೇರ ಉಸ್ತುವಾರಿಯನ್ನು ನೀತಿ ಆಯೋಗ ವಹಿಸಿಕೊಂಡಿದೆ. ಪ್ರಧಾನಿ ಅಧ್ಯಕ್ಷತೆಯ ಈ ಆಯೋಗದಲ್ಲಿ ರಾಜ್ಯಗಳ ಹಣಕಾಸು ಸಚಿವರು ಸದಸ್ಯರಾಗಿರುತ್ತಾರೆ. 15 ವರ್ಷ ಹಾಗೂ 7 ವರ್ಷಗಳ ಪ್ರತ್ಯೇಕ ಗುರಿಯ ಯೋಜನೆಯ ಜತೆಗೆ, ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಈ ಸಂಸ್ಥೆ ನಿಗಾ ಇಡಲಿದೆ. ಆಡಳಿತಕ್ಕೆ ಹೊಸ ಸ್ಪರ್ಶ ‘ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನನ್ಸ್’ (ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ) ಧ್ಯೇಯ ವಾಕ್ಯದೊಂದಿಗೆ ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಕಾಲಿಟ್ಟಿದ್ದರು. ತೆರಿಗೆ ವ್ಯವಸ್ಥೆಯಿಂದ ಹಿಡಿದು ಆಡಳಿತದ ಪ್ರತಿ ಹಂತದಲ್ಲಿಯೂ ಸುಧಾರಣೆ ತರುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಹೆಜ್ಜೆಗಳನ್ನು ಇರಿಸಿದೆ. ಓಬೀರಾಯನ ಕಾಲದ ಕಾನೂನು ರದ್ದು ದೇಶದಲ್ಲಿ ಹಳೆಯ ಅನವಶ್ಯಕ ಕಾಯ್ದೆಗಳಿಂದ ಕೋರ್ಟ್ ಖಟ್ಲೆಗಳಲ್ಲಿ ವಿಳಂಬವಾಗುತ್ತದೆ. ಈ ಕಾರಣದಿಂದ ಸುಮಾರು 3 ಸಾವಿರ ...