ಬೆಂಗಳೂರು: ಬಹು ನಿರೀಕ್ಷೆಯ ಚಂದ್ರಯಾನ 2ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, 2019ರ ಜ.3ಕ್ಕೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಧರಿಸಿದೆ.
ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್ನಲ್ಲಿದ್ದ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳು ವಲ್ಲಿ ಯಶಸ್ವಿಯಾಗಿದ್ದೇವೆ. ಕೆಲ ದಿನಗಳಿಂದ ಲ್ಯಾಂಡರನ್ನು ಸಂಪೂರ್ಣ ಮರುಪರಿಶೀಲಿಸಿ, ನೂತನವಾಗಿ ವಿನ್ಯಾಸ ಮಾಡಲಾಗಿದೆ. ಉಡಾವಣೆ ಮಾಡಿದ 35 ದಿನಗಳಲ್ಲಿ ಚಂದ್ರನ ಅಂಗಳಕ್ಕೆ ನೌಕೆ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ. ವಿಕ್ರಂ ಸಾರಾಭಾಯ್ ಜನ್ಮ ಶತಮಾನೋತ್ಸವದ ಅಂಗವಾಗಿ ಇಸ್ರೋ ಕೇಂದ್ರ ಕಚೇರಿಯಲ್ಲಿ ವಿಕ್ರಂ ಸಾರಾಭಾಯ್ ಅವರ ಪುತ್ಥಳಿ ಅನಾವರಣ ಮಾಡಿದ ನಂತರ ಶಿವನ್ ಈ ಮಾಹಿತಿ ನೀಡಿದರು. ಇಸ್ರೋ 2020ರ ವೇಳೆಗೆ ಹೊಸದಾಗಿ 50 ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವ ಗುರಿ ಹೊಂದಿದೆ. ಇದರಲ್ಲಿ ಆದಿತ್ಯ -1ಎಲ್ ಸಹ ಸೇರಿದೆ ಎಂದು ಶಿವನ್ ತಿಳಿಸಿದರು.
ವರ್ಷಾಂತ್ಯದಲ್ಲಿ ಇಸ್ರೋ ಟಿವಿ
ಗ್ರಾಮೀಣ ಭಾಗದ ಜನತೆಗೆ ಇಸ್ರೋ ನಡೆಸುತ್ತಿರುವ ಸಂಶೋಧನೆ ಹಾಗೂ ಚಟುವಟಿಕೆ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಸ್ವತಃ ನಾನುಹಳ್ಳಿ ಜನರನ್ನು ಈ ಬಗ್ಗೆ ಸಂರ್ಪಸಿದಾಗ ವಾಸ್ತವಿಕತೆ ಅರಿವಿಗೆ ಬಂದಿದೆ. ಈ ಕೊರತೆ ನೀಗಿಸುವ ಉದ್ದೇಶದಿಂದ ವರ್ಷಾಂತ್ಯ ದಲ್ಲಿ ಇಸ್ರೋ ಟಿವಿ ಚಾನಲ್ ಆರಂಭಿಸಲು ನಿರ್ಧರಿಸಿದ್ದೇವೆ. ಇಸ್ರೋದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಒಪ್ಪಿಗೆ ಸಿಕ್ಕಿದೆ. ಹಾಗಾಗಿ ದೇಶಾದ್ಯಂತ ವಿದ್ಯಾರ್ಥಿ ಗಳಿಗೆ 25-30 ದಿನ ಲ್ಯಾಬ್, ಬಾಹ್ಯಾಕಾಶದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಕೆ. ಶಿವನ್ ತಿಳಿಸಿದರು. ಇಸ್ರೋದ ಮಾಜಿ ಅಧ್ಯಕ್ಷರಾದ ಕಸ್ತೂರಿ ರಂಗನ್, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಯೋಗಿಕ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿದ್ದು, ಪಿಎಸ್ಎಲ್ವಿ ಉಪಗ್ರಹಕ್ಕೆ ಖರ್ಚಾಗುವ ಒಂದು ಭಾಗ ಮಾತ್ರ ಚಂದ್ರಯಾನ 2ಕ್ಕೆ ವೆಚ್ಚವಾಗಲಿದೆ. 72ಗಂಟೆಗಳಲ್ಲಿ ಈ ಉಪಗ್ರಹ ತಯಾರಾಗಿದ್ದು, 500-700ಕೆ.ಜಿ. ತೂಕ ಹೊಂದಿದೆ.
| ಕೆ.ಶಿವನ್ ಇಸ್ರೋ ಅಧ್ಯಕ್ಷ
ಯೋಜನೆ ಉದ್ದೇಶ
ಚಂದ್ರನಲ್ಲಿ ಲಭ್ಯವಿದೆ ಎನ್ನಲಾದ ಹೀಲಿಯಂ-3 ಪರಮಾಣು ಮತ್ತು ನೀರನ್ನು ಅನ್ವೇಷಿಸಲು ಚಂದ್ರಯಾನ-2 ಮಿಷನ್ ಸಿದ್ಧತೆ ನಡೆಸಿದೆ. ಈ ಮಿಷನ್ನಲ್ಲಿ ವಿಶೇಷ ರೋವರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಲಿದ್ದು, ಇದು ಚಂದ್ರನಲ್ಲಿ ನೀರು ಮತ್ತು ಹೀಲಿಯಂ-3ರ ಸೆಲೆ ಹುಡುಕುತ್ತ ನೂರಾರು ಸ್ಯಾಂಪಲ್ಗಳನ್ನು ಪರೀಕ್ಷಿಸಲಿದೆ. ಇಸ್ರೋ ರೋವರ್ ಇಳಿಸಲು ಉದ್ದೇಶಿಸಿರುವ ಚಂದ್ರನ ಪ್ರದೇಶಕ್ಕೆ ಈ ಹಿಂದೆ ಬೇರಾವ ದೇಶಗಳೂ ಹೆಜ್ಜೆ ಹಾಕಿಲ್ಲ ಹೀಗಾಗಿ ಈ ಪ್ರದೇಶವನ್ನು ವರ್ಜಿನ್ ಪ್ರದೇಶ ಎಂದೇ ಕರೆಯಲಾಗಿದೆ. ಚಂದ್ರನ ದಕ್ಷಿಣ ಭಾಗದಲ್ಲಿರುವ ಈ ಪ್ರದೇಶದಲ್ಲಿ ಅಣು ಇಂಧನ (ಹೀಲಿಯಂ-3) ಹೇರಳವಾಗಿರುವ ಸುಳಿವಿದೆ. ಈ ಯೋಜನೆಗೆ ಭಾರತ ಸರ್ಕಾರ -ಠಿ; 830 ಕೋಟಿ ವಿನಿಯೋಗಿಸುತ್ತಿದೆ.
ಹಿನ್ನೆಲೆ-ಮುನ್ನೆಲೆ
ಚಂದ್ರನ ಕುರಿತು ಭಾರತದ ಮೊದಲ ಮಿಷನ್ ‘ಚಂದ್ರಯಾನ-1ನ್ನು’ 2008ರ ಅಕ್ಟೋಬರ್ನಲ್ಲಿ ಕಕ್ಷೆಗೆ ಸೇರಿಸಲಾಗಿತ್ತು. ಇದು ಚಂದ್ರನನ್ನು 3400ಕ್ಕೂ ಹೆಚ್ಚು ಸುತ್ತು ಪ್ರದಕ್ಷಿಣೆ ಹಾಕಿ ನಾಶಗೊಂಡಿತ್ತು. ಚಂದ್ರಯಾನ-2 ಮಿಷನ್ನಲ್ಲಿ ಆರ್ಬಿಟರ್, ಲ್ಯಾಂಡರ್ ಹಾಗೂ ಆಯತಾಕಾರದ ರೋವರ್ ಗಳನ್ನು ಒಳಗೊಂಡಿದೆ.ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುವ 6 ಚಕ್ರದ ವಾಹನ ಇದಾಗಿದ್ದು, ತನ್ನ ಸುತ್ತಲಿನ 400 ಮೀಟರ್ ಪ್ರದೇಶವನ್ನು 14 ದಿನದಲ್ಲಿ ಪರೀಕ್ಷಿಸಬಲ್ಲದು. ಈ ರೋವರ್ ಫೋಟೋ ತೆಗೆದು ಲ್ಯಾಂಡರ್ಗೆ ರವಾನಿಸುತ್ತದೆ. ಲ್ಯಾಂಡರ್ ಇಸ್ರೋಗೆ ರವಾನಿಸುತ್ತದೆ.
ಚಂದ್ರನ ಅಂಗಳದಲ್ಲಿ ಇಳಿಯುವ ಲ್ಯಾಂಡರ್ನಲ್ಲಿದ್ದ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳು ವಲ್ಲಿ ಯಶಸ್ವಿಯಾಗಿದ್ದೇವೆ. ಕೆಲ ದಿನಗಳಿಂದ ಲ್ಯಾಂಡರನ್ನು ಸಂಪೂರ್ಣ ಮರುಪರಿಶೀಲಿಸಿ, ನೂತನವಾಗಿ ವಿನ್ಯಾಸ ಮಾಡಲಾಗಿದೆ. ಉಡಾವಣೆ ಮಾಡಿದ 35 ದಿನಗಳಲ್ಲಿ ಚಂದ್ರನ ಅಂಗಳಕ್ಕೆ ನೌಕೆ ಇಳಿಯಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ. ವಿಕ್ರಂ ಸಾರಾಭಾಯ್ ಜನ್ಮ ಶತಮಾನೋತ್ಸವದ ಅಂಗವಾಗಿ ಇಸ್ರೋ ಕೇಂದ್ರ ಕಚೇರಿಯಲ್ಲಿ ವಿಕ್ರಂ ಸಾರಾಭಾಯ್ ಅವರ ಪುತ್ಥಳಿ ಅನಾವರಣ ಮಾಡಿದ ನಂತರ ಶಿವನ್ ಈ ಮಾಹಿತಿ ನೀಡಿದರು. ಇಸ್ರೋ 2020ರ ವೇಳೆಗೆ ಹೊಸದಾಗಿ 50 ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವ ಗುರಿ ಹೊಂದಿದೆ. ಇದರಲ್ಲಿ ಆದಿತ್ಯ -1ಎಲ್ ಸಹ ಸೇರಿದೆ ಎಂದು ಶಿವನ್ ತಿಳಿಸಿದರು.
ವರ್ಷಾಂತ್ಯದಲ್ಲಿ ಇಸ್ರೋ ಟಿವಿ
ಗ್ರಾಮೀಣ ಭಾಗದ ಜನತೆಗೆ ಇಸ್ರೋ ನಡೆಸುತ್ತಿರುವ ಸಂಶೋಧನೆ ಹಾಗೂ ಚಟುವಟಿಕೆ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಸ್ವತಃ ನಾನುಹಳ್ಳಿ ಜನರನ್ನು ಈ ಬಗ್ಗೆ ಸಂರ್ಪಸಿದಾಗ ವಾಸ್ತವಿಕತೆ ಅರಿವಿಗೆ ಬಂದಿದೆ. ಈ ಕೊರತೆ ನೀಗಿಸುವ ಉದ್ದೇಶದಿಂದ ವರ್ಷಾಂತ್ಯ ದಲ್ಲಿ ಇಸ್ರೋ ಟಿವಿ ಚಾನಲ್ ಆರಂಭಿಸಲು ನಿರ್ಧರಿಸಿದ್ದೇವೆ. ಇಸ್ರೋದಲ್ಲಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಒಪ್ಪಿಗೆ ಸಿಕ್ಕಿದೆ. ಹಾಗಾಗಿ ದೇಶಾದ್ಯಂತ ವಿದ್ಯಾರ್ಥಿ ಗಳಿಗೆ 25-30 ದಿನ ಲ್ಯಾಬ್, ಬಾಹ್ಯಾಕಾಶದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಕೆ. ಶಿವನ್ ತಿಳಿಸಿದರು. ಇಸ್ರೋದ ಮಾಜಿ ಅಧ್ಯಕ್ಷರಾದ ಕಸ್ತೂರಿ ರಂಗನ್, ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಯೋಗಿಕ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆದಿದ್ದು, ಪಿಎಸ್ಎಲ್ವಿ ಉಪಗ್ರಹಕ್ಕೆ ಖರ್ಚಾಗುವ ಒಂದು ಭಾಗ ಮಾತ್ರ ಚಂದ್ರಯಾನ 2ಕ್ಕೆ ವೆಚ್ಚವಾಗಲಿದೆ. 72ಗಂಟೆಗಳಲ್ಲಿ ಈ ಉಪಗ್ರಹ ತಯಾರಾಗಿದ್ದು, 500-700ಕೆ.ಜಿ. ತೂಕ ಹೊಂದಿದೆ.
| ಕೆ.ಶಿವನ್ ಇಸ್ರೋ ಅಧ್ಯಕ್ಷ
ಯೋಜನೆ ಉದ್ದೇಶ
ಚಂದ್ರನಲ್ಲಿ ಲಭ್ಯವಿದೆ ಎನ್ನಲಾದ ಹೀಲಿಯಂ-3 ಪರಮಾಣು ಮತ್ತು ನೀರನ್ನು ಅನ್ವೇಷಿಸಲು ಚಂದ್ರಯಾನ-2 ಮಿಷನ್ ಸಿದ್ಧತೆ ನಡೆಸಿದೆ. ಈ ಮಿಷನ್ನಲ್ಲಿ ವಿಶೇಷ ರೋವರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಲಿದ್ದು, ಇದು ಚಂದ್ರನಲ್ಲಿ ನೀರು ಮತ್ತು ಹೀಲಿಯಂ-3ರ ಸೆಲೆ ಹುಡುಕುತ್ತ ನೂರಾರು ಸ್ಯಾಂಪಲ್ಗಳನ್ನು ಪರೀಕ್ಷಿಸಲಿದೆ. ಇಸ್ರೋ ರೋವರ್ ಇಳಿಸಲು ಉದ್ದೇಶಿಸಿರುವ ಚಂದ್ರನ ಪ್ರದೇಶಕ್ಕೆ ಈ ಹಿಂದೆ ಬೇರಾವ ದೇಶಗಳೂ ಹೆಜ್ಜೆ ಹಾಕಿಲ್ಲ ಹೀಗಾಗಿ ಈ ಪ್ರದೇಶವನ್ನು ವರ್ಜಿನ್ ಪ್ರದೇಶ ಎಂದೇ ಕರೆಯಲಾಗಿದೆ. ಚಂದ್ರನ ದಕ್ಷಿಣ ಭಾಗದಲ್ಲಿರುವ ಈ ಪ್ರದೇಶದಲ್ಲಿ ಅಣು ಇಂಧನ (ಹೀಲಿಯಂ-3) ಹೇರಳವಾಗಿರುವ ಸುಳಿವಿದೆ. ಈ ಯೋಜನೆಗೆ ಭಾರತ ಸರ್ಕಾರ -ಠಿ; 830 ಕೋಟಿ ವಿನಿಯೋಗಿಸುತ್ತಿದೆ.
ಹಿನ್ನೆಲೆ-ಮುನ್ನೆಲೆ
ಚಂದ್ರನ ಕುರಿತು ಭಾರತದ ಮೊದಲ ಮಿಷನ್ ‘ಚಂದ್ರಯಾನ-1ನ್ನು’ 2008ರ ಅಕ್ಟೋಬರ್ನಲ್ಲಿ ಕಕ್ಷೆಗೆ ಸೇರಿಸಲಾಗಿತ್ತು. ಇದು ಚಂದ್ರನನ್ನು 3400ಕ್ಕೂ ಹೆಚ್ಚು ಸುತ್ತು ಪ್ರದಕ್ಷಿಣೆ ಹಾಕಿ ನಾಶಗೊಂಡಿತ್ತು. ಚಂದ್ರಯಾನ-2 ಮಿಷನ್ನಲ್ಲಿ ಆರ್ಬಿಟರ್, ಲ್ಯಾಂಡರ್ ಹಾಗೂ ಆಯತಾಕಾರದ ರೋವರ್ ಗಳನ್ನು ಒಳಗೊಂಡಿದೆ.ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುವ 6 ಚಕ್ರದ ವಾಹನ ಇದಾಗಿದ್ದು, ತನ್ನ ಸುತ್ತಲಿನ 400 ಮೀಟರ್ ಪ್ರದೇಶವನ್ನು 14 ದಿನದಲ್ಲಿ ಪರೀಕ್ಷಿಸಬಲ್ಲದು. ಈ ರೋವರ್ ಫೋಟೋ ತೆಗೆದು ಲ್ಯಾಂಡರ್ಗೆ ರವಾನಿಸುತ್ತದೆ. ಲ್ಯಾಂಡರ್ ಇಸ್ರೋಗೆ ರವಾನಿಸುತ್ತದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ