ಮನುಷ್ಯನ ದೈನಂದಿನ ಚಟುವಟಿಕೆಗಳ ಕುರಿತು ಮಾರ್ಗದರ್ಶನ ಮಾಡುವ ಚಿಂತನೆಗಳು)
ಬೀದಿಮಕ್ಕಳು ಎಂದರೆ ಯಾರು?
ಯಾರಿಗೆ ಅಪ್ಪ-ಅಮ್ಮ, ಬಂಧು, ಬಳಗ ಯಾರೂ ಇರುವುದಿಲ್ಲವೋ ಅವರೇ ಬೀದಿಮಕ್ಕಳು. ಸಾಮಾನ್ಯವಾದ ಭಾಷೆಯಲ್ಲಿ ಹೇಳುವುದಾದರೆ ಅವರನ್ನು ‘ದೇವರೇ ಕಾಪಾಡುತ್ತಿದ್ದಾನೆ’ ಎಂದು. ಏಕೆಂದರೆ ಇವರು ಸಣ್ಣ ವಯಸ್ಸಿನಿಂದಲೇ ಅಥವಾ ಹುಟ್ಟಿನಿಂದಲೇ ಇವರ ಸಂಬಂಧಿಕರಿಂದ ದೂರವಾಗಿರುತ್ತಾರೆ. ಇವರು ಇಡೀ ದಿನ ಏನು ಮಾಡುತ್ತಾರೆ? ಎಲ್ಲಿರುತ್ತಾರೆ? ಎಂಬುದನ್ನು ತಿಳಿದಾಗ ಒಂದೆಡೆ ಭಯವಾದರೆ ಇನ್ನೊಂದೆಡೆ ಅನುಕಂಪವುಂಟಾಗುತ್ತದೆ. ದಿನಪೂರ್ತಿ ಬೀದಿಯಲ್ಲಿಯೇ ಇದ್ದು, ದಿನಾಂತ್ಯಕ್ಕೆ ಎಲ್ಲೋ ಮಲಗಿ ವಿಶ್ರಾಂತಿ/ ನಿದ್ದೆ ಮಾಡುವವರು. ಎಂದರೆ ಅವರಿಗೆ ಅವರ ಪಾಲಕರಿಂದ, ಹೆತ್ತವರಿಂದ ಪೋಷಣೆ ಎಂಬುದೇ ತಿಳಿಯದು. ಇಂತಹವರು ಪ್ರಾಣಿಗಳಂತೆಯೇ ಬದುಕುತ್ತಾರೆ. ಚಿಂದಿ, ಕಸ ಆಯುತ್ತಾರೆ. ಭಿಕ್ಷೆ ಬೇಡುತ್ತಾರೆ. ಪ್ರಾಯಕ್ಕೆ ಬಂದಮೇಲೆ ನಾನಾ ದುಶ್ಚಟಗಳಿಗೆ ಪರಿಸ್ಥಿತಿಗಳ ಒತ್ತಡದಿಂದಾಗಿ ಒಗ್ಗಿಹೋಗುತ್ತಾರೆ.
ಬೀದಿಮಕ್ಕಳು ಹೇಗೆ ಬದುಕುತ್ತಾರೆ? ಎಲ್ಲಿರುತ್ತಾರೆ?
ಸಾಮಾನ್ಯವಾಗಿ ಅವರ ಬದುಕು ಬಹಳವೇ ವಿಚಿತ್ರ. ಕೆಲವೊಮ್ಮೆ ಭಯಾನಕವೂ ಕೂಡ. ಬೆಳಗ್ಗೆ ಎದ್ದು ಸಿಕ್ಕಲ್ಲಿ ತಮ್ಮ ಶೌಚಗಳನ್ನು ಮುಗಿಸಿಕೊಂಡು, ಎಲ್ಲೆಡೆ ಸುತ್ತುತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಓಡಾಡುತ್ತಾ, ಭಿಕ್ಷೆ ಬೇಡುತ್ತಾ ಇರುತ್ತಾರೆ. ಅದರಿಂದ ಹಣ ಗಳಿಸಿ ಆ ಹಣವನ್ನು ಮನಸೋ ಇಚ್ಛೆ ಖರ್ಚುಮಾಡುತ್ತಾರೆ. ಮಧ್ಯಾಹ್ನಗಳಲ್ಲಿ ಉಪವನ, ಬಸ್ ನಿಲ್ದಾಣ ಇತ್ಯಾದಿ ಸ್ಥಾನಗಳಲ್ಲಿ ವಿಶ್ರಮಿಸಿ ಸಂಜೆಯ ತನಕ ಎಲ್ಲ ಕಡೆ ಸುತ್ತಾಡಿ ಸಾಮಾನ್ಯವಾಗಿ ಅವರ ಆವಾಸವಾದ ಯಾವುದೋ ಷೆಡ್, ಜೋಪಡಿ, ಮುರುಕುಮನೆ ಇತ್ಯಾದಿಗಳನ್ನು ಸೇರುವಾಗ ರಾತ್ರಿಯಾಗಿರುತ್ತದೆ. ಏಕಾಂತವನ್ನು ಕಳೆಯಲಿಕ್ಕಾಗಿ ಇಂತಹವರಲ್ಲಿ ಅನೇಕರು ಅನೇಕ ತರಹದ ದುಶ್ಚಟಗಳಿಗೂ ದಾಸರಾಗಿರುತ್ತಾರೆ. ಕೆಲವರು ಕಳ್ಳತನವನ್ನೂ, ಇನ್ನು ಕೆಲವರು ಮಾಡಬಾರದಂಥ ಕೆಲಸಗಳಲ್ಲೂ ತೊಡಗಿ ಸಮಾಜಘಾತುಕರೂ ಆಗುತ್ತಾರೆ.
ಅವರನ್ನು ಗುರುತಿಸಬಹುದೇ?
ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಸ್ವಲ್ಪ ಗಮನಿಸಿದಾಗ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರೂ ನಮ್ಮವರೇ ಎಂಬ ಭಾವವನ್ನು ತಾಳಿದಾಗ ನಾವು ಅವರನ್ನು ಗುರುತಿಸಲೂ ಮತ್ತು ಮೇಲೆ ತರಲೂ ಸಾಧ್ಯವಾಗುತ್ತದೆ. ಅದಕ್ಕೆ ನಮಗೆ ಇರಬೇಕಾದುದು ಗುರುತಿಸಬಲ್ಲ ಕರುಣೆಯ ಕಣ್ಣುಗಳು.
ಅವರನ್ನು ತಿದ್ದಬಹುದೇ?
ಬಿತ್ತಿದಂತೆ ಬೆಳೆ, ಬೆಳೆಸಿದಂತೆ ಮರ ಎಂಬಂತೆ ಇವರಿಗೆ ಸಮಾಜದಲ್ಲಿ ಯಾವ ವಿಧವಾದ ಉಪಚಾರ ಸಲ್ಲುವುದೋ ಅಂಥ ಪ್ರತಿಫಲವನ್ನು ಅಪೇಕ್ಷಿಸಬಹುದು. ಆದ್ದರಿಂದ ಸೂಕ್ತ ಸಂಸ್ಕಾರಗಳಿಂದ ಅವರನ್ನು ತಿದ್ದಬಹುದಾಗಿದೆ. ಮಾನವ ಪ್ರೀತಿಯನ್ನೇ ಕಾಣದೆ, ಅನುಮಾನ, ದ್ವೇಷಗಳ ನಡುವೆಯೇ ಬೆಳೆಯುತ್ತಿರುವ ಅವರನ್ನು ತಿದ್ದುವುದು ಪ್ರಾರಂಭದಲ್ಲಿ ಕಷ್ಟ ಎನ್ನಿಸಿದರೂ ಸಾಧ್ಯ.
ಹೇಗೆ ತಿದ್ದಬಹುದು? ಯಾರು ತಿದ್ದಬಹುದು?
ನಾವು ಈ ಸಮಾಜದ ಅಂಗ, ಅವರೂ ಸಹ ಈ ಸಮಾಜದ್ದೇ ಭಾಗ. ಆದ್ದರಿಂದ ವಿಶೇಷವಾದ ಪ್ರೀತಿ ನೀಡಿ ನಾವು ಅವರನ್ನು ತಿದ್ದಬೇಕು. ಪ್ರೀತಿಯೊಂದೇ ಅವರನ್ನು ತಿದ್ದಬಲ್ಲುದು. ಕೆಲವು ಸಂಘಸಂಸ್ಥೆಗಳೂ ಈ ಕೆಲಸಗಳನ್ನು ನಿರ್ವಹಿಸುತ್ತಿವೆ. ಬೀದಿ ಮಕ್ಕಳಿಗೆ ಸಂಸ್ಕಾರವೇ ಅತಿ ಶ್ರೇಷ್ಠ ಮದ್ದು. ಸ್ವಚ್ಛಂದವಾಗಿ ಬೆಳೆದ ಅವರಿಗೆ ಮನೆ, ಆಶ್ರಮ ಇವೆಲ್ಲ ಜೈಲು ಎನಿಸಿದರೂ ಆಶ್ಚರ್ಯವಿಲ್ಲ. ಆದರೆ ತಾಳ್ಮೆಯಿಂದ ಪ್ರೀತಿಯಿಂದ ಅವರನ್ನು ಕಂಡರೆ ಉಳಿಯುತ್ತಾರೆ. ಬೆಂಗಳೂರಿನ ಹಿಂದು ಸೇವಾ ಪ್ರತಿಷ್ಠಾನದವರು ನಡೆಸುತ್ತಿರುವ ‘ನೆಲೆ’ಯಂಥ ಕೇಂದ್ರಗಳು ಇದಕ್ಕೆ ಸಾಕ್ಷಿ.
(ಆಧಾರಗ್ರಂಥ: ‘ಮನೆಯೇ ಮಾಂಗಲ್ಯ’ 9449057714)
ಬೀದಿಮಕ್ಕಳು ಎಂದರೆ ಯಾರು?
ಯಾರಿಗೆ ಅಪ್ಪ-ಅಮ್ಮ, ಬಂಧು, ಬಳಗ ಯಾರೂ ಇರುವುದಿಲ್ಲವೋ ಅವರೇ ಬೀದಿಮಕ್ಕಳು. ಸಾಮಾನ್ಯವಾದ ಭಾಷೆಯಲ್ಲಿ ಹೇಳುವುದಾದರೆ ಅವರನ್ನು ‘ದೇವರೇ ಕಾಪಾಡುತ್ತಿದ್ದಾನೆ’ ಎಂದು. ಏಕೆಂದರೆ ಇವರು ಸಣ್ಣ ವಯಸ್ಸಿನಿಂದಲೇ ಅಥವಾ ಹುಟ್ಟಿನಿಂದಲೇ ಇವರ ಸಂಬಂಧಿಕರಿಂದ ದೂರವಾಗಿರುತ್ತಾರೆ. ಇವರು ಇಡೀ ದಿನ ಏನು ಮಾಡುತ್ತಾರೆ? ಎಲ್ಲಿರುತ್ತಾರೆ? ಎಂಬುದನ್ನು ತಿಳಿದಾಗ ಒಂದೆಡೆ ಭಯವಾದರೆ ಇನ್ನೊಂದೆಡೆ ಅನುಕಂಪವುಂಟಾಗುತ್ತದೆ. ದಿನಪೂರ್ತಿ ಬೀದಿಯಲ್ಲಿಯೇ ಇದ್ದು, ದಿನಾಂತ್ಯಕ್ಕೆ ಎಲ್ಲೋ ಮಲಗಿ ವಿಶ್ರಾಂತಿ/ ನಿದ್ದೆ ಮಾಡುವವರು. ಎಂದರೆ ಅವರಿಗೆ ಅವರ ಪಾಲಕರಿಂದ, ಹೆತ್ತವರಿಂದ ಪೋಷಣೆ ಎಂಬುದೇ ತಿಳಿಯದು. ಇಂತಹವರು ಪ್ರಾಣಿಗಳಂತೆಯೇ ಬದುಕುತ್ತಾರೆ. ಚಿಂದಿ, ಕಸ ಆಯುತ್ತಾರೆ. ಭಿಕ್ಷೆ ಬೇಡುತ್ತಾರೆ. ಪ್ರಾಯಕ್ಕೆ ಬಂದಮೇಲೆ ನಾನಾ ದುಶ್ಚಟಗಳಿಗೆ ಪರಿಸ್ಥಿತಿಗಳ ಒತ್ತಡದಿಂದಾಗಿ ಒಗ್ಗಿಹೋಗುತ್ತಾರೆ.
ಬೀದಿಮಕ್ಕಳು ಹೇಗೆ ಬದುಕುತ್ತಾರೆ? ಎಲ್ಲಿರುತ್ತಾರೆ?
ಸಾಮಾನ್ಯವಾಗಿ ಅವರ ಬದುಕು ಬಹಳವೇ ವಿಚಿತ್ರ. ಕೆಲವೊಮ್ಮೆ ಭಯಾನಕವೂ ಕೂಡ. ಬೆಳಗ್ಗೆ ಎದ್ದು ಸಿಕ್ಕಲ್ಲಿ ತಮ್ಮ ಶೌಚಗಳನ್ನು ಮುಗಿಸಿಕೊಂಡು, ಎಲ್ಲೆಡೆ ಸುತ್ತುತ್ತ, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಓಡಾಡುತ್ತಾ, ಭಿಕ್ಷೆ ಬೇಡುತ್ತಾ ಇರುತ್ತಾರೆ. ಅದರಿಂದ ಹಣ ಗಳಿಸಿ ಆ ಹಣವನ್ನು ಮನಸೋ ಇಚ್ಛೆ ಖರ್ಚುಮಾಡುತ್ತಾರೆ. ಮಧ್ಯಾಹ್ನಗಳಲ್ಲಿ ಉಪವನ, ಬಸ್ ನಿಲ್ದಾಣ ಇತ್ಯಾದಿ ಸ್ಥಾನಗಳಲ್ಲಿ ವಿಶ್ರಮಿಸಿ ಸಂಜೆಯ ತನಕ ಎಲ್ಲ ಕಡೆ ಸುತ್ತಾಡಿ ಸಾಮಾನ್ಯವಾಗಿ ಅವರ ಆವಾಸವಾದ ಯಾವುದೋ ಷೆಡ್, ಜೋಪಡಿ, ಮುರುಕುಮನೆ ಇತ್ಯಾದಿಗಳನ್ನು ಸೇರುವಾಗ ರಾತ್ರಿಯಾಗಿರುತ್ತದೆ. ಏಕಾಂತವನ್ನು ಕಳೆಯಲಿಕ್ಕಾಗಿ ಇಂತಹವರಲ್ಲಿ ಅನೇಕರು ಅನೇಕ ತರಹದ ದುಶ್ಚಟಗಳಿಗೂ ದಾಸರಾಗಿರುತ್ತಾರೆ. ಕೆಲವರು ಕಳ್ಳತನವನ್ನೂ, ಇನ್ನು ಕೆಲವರು ಮಾಡಬಾರದಂಥ ಕೆಲಸಗಳಲ್ಲೂ ತೊಡಗಿ ಸಮಾಜಘಾತುಕರೂ ಆಗುತ್ತಾರೆ.
ಅವರನ್ನು ಗುರುತಿಸಬಹುದೇ?
ಅವರನ್ನು ಗುರುತಿಸುವುದು ಕಷ್ಟವೇನಲ್ಲ. ಸ್ವಲ್ಪ ಗಮನಿಸಿದಾಗ ಅಲ್ಲಲ್ಲಿ ಕಾಣಸಿಗುತ್ತಾರೆ. ಅವರೂ ನಮ್ಮವರೇ ಎಂಬ ಭಾವವನ್ನು ತಾಳಿದಾಗ ನಾವು ಅವರನ್ನು ಗುರುತಿಸಲೂ ಮತ್ತು ಮೇಲೆ ತರಲೂ ಸಾಧ್ಯವಾಗುತ್ತದೆ. ಅದಕ್ಕೆ ನಮಗೆ ಇರಬೇಕಾದುದು ಗುರುತಿಸಬಲ್ಲ ಕರುಣೆಯ ಕಣ್ಣುಗಳು.
ಅವರನ್ನು ತಿದ್ದಬಹುದೇ?
ಬಿತ್ತಿದಂತೆ ಬೆಳೆ, ಬೆಳೆಸಿದಂತೆ ಮರ ಎಂಬಂತೆ ಇವರಿಗೆ ಸಮಾಜದಲ್ಲಿ ಯಾವ ವಿಧವಾದ ಉಪಚಾರ ಸಲ್ಲುವುದೋ ಅಂಥ ಪ್ರತಿಫಲವನ್ನು ಅಪೇಕ್ಷಿಸಬಹುದು. ಆದ್ದರಿಂದ ಸೂಕ್ತ ಸಂಸ್ಕಾರಗಳಿಂದ ಅವರನ್ನು ತಿದ್ದಬಹುದಾಗಿದೆ. ಮಾನವ ಪ್ರೀತಿಯನ್ನೇ ಕಾಣದೆ, ಅನುಮಾನ, ದ್ವೇಷಗಳ ನಡುವೆಯೇ ಬೆಳೆಯುತ್ತಿರುವ ಅವರನ್ನು ತಿದ್ದುವುದು ಪ್ರಾರಂಭದಲ್ಲಿ ಕಷ್ಟ ಎನ್ನಿಸಿದರೂ ಸಾಧ್ಯ.
ಹೇಗೆ ತಿದ್ದಬಹುದು? ಯಾರು ತಿದ್ದಬಹುದು?
ನಾವು ಈ ಸಮಾಜದ ಅಂಗ, ಅವರೂ ಸಹ ಈ ಸಮಾಜದ್ದೇ ಭಾಗ. ಆದ್ದರಿಂದ ವಿಶೇಷವಾದ ಪ್ರೀತಿ ನೀಡಿ ನಾವು ಅವರನ್ನು ತಿದ್ದಬೇಕು. ಪ್ರೀತಿಯೊಂದೇ ಅವರನ್ನು ತಿದ್ದಬಲ್ಲುದು. ಕೆಲವು ಸಂಘಸಂಸ್ಥೆಗಳೂ ಈ ಕೆಲಸಗಳನ್ನು ನಿರ್ವಹಿಸುತ್ತಿವೆ. ಬೀದಿ ಮಕ್ಕಳಿಗೆ ಸಂಸ್ಕಾರವೇ ಅತಿ ಶ್ರೇಷ್ಠ ಮದ್ದು. ಸ್ವಚ್ಛಂದವಾಗಿ ಬೆಳೆದ ಅವರಿಗೆ ಮನೆ, ಆಶ್ರಮ ಇವೆಲ್ಲ ಜೈಲು ಎನಿಸಿದರೂ ಆಶ್ಚರ್ಯವಿಲ್ಲ. ಆದರೆ ತಾಳ್ಮೆಯಿಂದ ಪ್ರೀತಿಯಿಂದ ಅವರನ್ನು ಕಂಡರೆ ಉಳಿಯುತ್ತಾರೆ. ಬೆಂಗಳೂರಿನ ಹಿಂದು ಸೇವಾ ಪ್ರತಿಷ್ಠಾನದವರು ನಡೆಸುತ್ತಿರುವ ‘ನೆಲೆ’ಯಂಥ ಕೇಂದ್ರಗಳು ಇದಕ್ಕೆ ಸಾಕ್ಷಿ.
(ಆಧಾರಗ್ರಂಥ: ‘ಮನೆಯೇ ಮಾಂಗಲ್ಯ’ 9449057714)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ