ವಿಜಯವಾಣಿ ಸುದ್ದಿಜಾಲ ಉಡುಪಿ
ಉದ್ಯಾವರ ಗ್ರಾಮ ಪಂಚಾಯಿತಿಯ ಪಿತ್ರೋಡಿಯಲ್ಲಿ ಅಪರೂಪದ ಜ್ವರಕ್ಕೆ ಕಾರಣವಾದ ಬರ್ಕೊಲ್ಡೇರಿಯ ಎಂಬ ಬ್ಯಾಕ್ಟೀರಿಯಾ ಪತ್ತೆ ಹಿನ್ನೆಲೆಯಲ್ಲಿ ನವದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಮಂಡಳಿ (ಎನ್ಸಿಡಿಸಿ) ವೈದ್ಯರ ತಂಡ ಉಡುಪಿಗೆ ಆಗಮಿಸಿದ್ದು, ಬುಧವಾರ ಈ ಕುರಿತ ವರದಿ ಸಿದ್ಧವಾಗಲಿದೆ.
ಗೋವಿಂದ ನಗರ ನಿವಾಸಿ ದೀಕ್ಷಿತ್(18) ಇತ್ತೀಚೆಗೆ ಮೆಲಿಯೊಯಿಡೋಸಿಸ್ ಜ್ವರದಿಂದ ಮೃತಪಟ್ಟಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಎನ್ಸಿಡಿಸಿ ವೈದ್ಯರ ತಂಡ ಪರಿಶೀಲನೆ ನಡೆಸುತ್ತಿದೆ. ಇಬ್ಬರು ಮೈಕ್ರೊ ಬಯಾಲಜಿಸ್ಟ್, ಇಬ್ಬರು ವೈದ್ಯರು, ಎನ್ಸಿಡಿಎಸಿಯ ಇಬ್ಬರು ತಜ್ಞ ವೈದ್ಯರು ಸೇರಿದಂತೆ ಒಟ್ಟು ಐದು ಮಂದಿಯ ತಂಡ ಪರಿಸರ ಅವಲೋಕನ, ಬ್ಯಾಕ್ಟಿರೀಯ ಮತ್ತು ಜ್ವರದ ಲಕ್ಷಣಗಳ ಬಗ್ಗೆ ಆಳ ಅಧ್ಯಯನ ನಡೆಸುತ್ತಿದೆ. ಮೃತಪಟ್ಟ ಯುವಕನಿದ್ದ ಪರಿಸರದ ನೀರು, ಮಣ್ಣಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ.
ಪ್ರಕರಣ ಕುರಿತಂತೆ ಎಲ್ಲ ಆಯಾಮಗಳಿಂದ ಅಧ್ಯಯನ ನಡೆಯುತ್ತಿದೆ. ಮಣಿಪಾಲ ಮುಂತಾದೆಡೆ ಈಗಾಗಲೆ ಈ ಜ್ವರ ಬಾಧಿಸಿ ಗುಣಮುಖರಾದ ಪ್ರಕರಣಗಳು ಇದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಜ್ವರದ ಗುಣಲಕ್ಷಣಗಳು, ಜ್ವರ ಬಂದ ಎಷ್ಟು ದಿನದಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು, ಚಿಕಿತ್ಸೆ ನೀಡಿದ ರೀತಿಯನ್ನು ಅಧ್ಯಯನ ನಡೆಸಲಾಗುತ್ತಿದೆ.
ರೋಗ ಬರುವುದು ಹೇಗೆ?: ಬರ್ಕೊಲ್ಡೇರಿಯ ಬ್ಯಾಕ್ಟೀರಿಯಾದಿಂದ ಬರುವ ಮೆಲಿಯೊಯಿಡೋಸಿಸ್ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಅಲ್ಲ. ಬ್ಯಾಕ್ಟೀರಿಯಾಗಳಿಂದ ದೇಹಕ್ಕೆ ಹರಡುತ್ತದೆ. ಕೈ, ಮೈ ತಾಗಿಸುವುದು, ಕೆಮ್ಮುವುದು, ಸೀನುವ ಮೂಲಕ ಬ್ಯಾಕ್ಟೀರಿಯ ಹರಡುವುದಿಲ್ಲ. ಈ ಜ್ವರ ಮಾರಣಾಂತಿಕವೂ ಅಲ್ಲ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದರೆ ಜ್ವರ ನಿಯಂತ್ರಣಕ್ಕೆ ಬರುತ್ತದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದೊಂದು ನೈಸರ್ಗಿಕ ಬ್ಯಾಕ್ಟೀರಿಯಾ ಆಗಿದ್ದು, ಕೃಷಿ ಗದ್ದೆ ಪ್ರದೇಶಗಳಂಥ ಮಣ್ಣಿನ ಪರಿಸರದಲ್ಲಿ ಮಳೆ ಬಂದ ನಂತರ ಬ್ಯಾಕ್ಟೀರಿಯಾ ಮಣ್ಣಿನ ಒಳಭಾಗದಿಂದ ನೆಲದ ಮೇಲೆ ಬರುತ್ತದೆ. ಕಲುಷಿತ ಮಣ್ಣು ಮತ್ತು ನೀರಿನ ಸಂಪರ್ಕದಿಂದ ಅಥವಾ ಸೇವನೆಯಿಂದ ಅಥವಾ ದೇಹದಲ್ಲಿ ಗಾಯವಿದ್ದರೆ ಬ್ಯಾಕ್ಟೀರಿಯಾ ದೇಹ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಮಧುಮೇಹವಿದ್ದ ವ್ಯಕ್ತಗಳಿಗೆ ಬೇಗನೆ ಆವರಿಸುತ್ತದೆ. ಬಹುಅಂಗಾಗಗಳ ಮೇಲೆ ಇದು ಪರಿಣಾಮ ಬೀರುತ್ತದೆ.
ಮೆದುಳು ಹಾನಿ ಮಾಡಿದ್ದ ಬ್ಯಾಕ್ಯೀರಿಯಾ: ಜುಲೈ 7ರಂದು ಯುವಕನಿಗೆ ಜ್ವರ ಬಾಧಿಸಿದ್ದು, ಮರುದಿನ ಉಲ್ಬಣಗೊಂಡಾಗ ಮನೆಮದ್ದು ಮಾಡಲಾಗಿತ್ತು. ಜ್ವರ ಹೆಚ್ಚಾದಾಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಯುವಕನ ದೇಹಕ್ಕೆ ಸೇರ್ಪಡೆಯಾದ ಬ್ಯಾಕ್ಟೀರಿಯಾ ಮೆದುಳನ್ನು ಆವರಿಸಿ, ಅಲ್ಲಿನ ವ್ಯವಸ್ಥೆಯನ್ನು ಸಂಪೂರ್ಣ ಹಾನಿಗೊಳಿಸಿತ್ತು. ಪರಿಣಾಮ ಆತ ಕೋಮಾ ಸ್ಥಿತಿಗೆ ತಲುಪಿದ್ದ. ಮೆದುಳು ಜ್ವರದ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಜ್ವರ ಮೆದುಳು ಮಾತ್ರವಲ್ಲದೆ ಇತರ ಅಂಗಗಳಿಗೂ ಹಾನಿ ಮಾಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.
ಮೆಲಿಯೊಯಿಡೋಸಿಸ್ ಜ್ವರ ಪ್ರಕರಣ ಅಪರೂಪ. ಈ ಹಿಂದೆಯೂ ಕಂಡು ಬಂದಿದ್ದು ರೋಗಿಗಳು ಗುಣಮುಖವಾಗಿದ್ದಾರೆ. ಸದ್ಯ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಎನ್ಸಿಡಿಸಿ ವೈದ್ಯರು ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಾರ್ವಜನಿಕರು ಆತಂಕಗೊಳ್ಳುವುದು ಬೇಡ, ಇದು ಸಾಂಕ್ರಾಮಿಕ ರೋಗವಲ್ಲ.
– ಡಾ.ರೋಹಿಣಿ, ಜಿಲ್ಲಾ ಆರೋಗ್ಯ ಅಧಿಕಾರಿ
ಉದ್ಯಾವರ ಗ್ರಾಮ ಪಂಚಾಯಿತಿಯ ಪಿತ್ರೋಡಿಯಲ್ಲಿ ಅಪರೂಪದ ಜ್ವರಕ್ಕೆ ಕಾರಣವಾದ ಬರ್ಕೊಲ್ಡೇರಿಯ ಎಂಬ ಬ್ಯಾಕ್ಟೀರಿಯಾ ಪತ್ತೆ ಹಿನ್ನೆಲೆಯಲ್ಲಿ ನವದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಮಂಡಳಿ (ಎನ್ಸಿಡಿಸಿ) ವೈದ್ಯರ ತಂಡ ಉಡುಪಿಗೆ ಆಗಮಿಸಿದ್ದು, ಬುಧವಾರ ಈ ಕುರಿತ ವರದಿ ಸಿದ್ಧವಾಗಲಿದೆ.
ಗೋವಿಂದ ನಗರ ನಿವಾಸಿ ದೀಕ್ಷಿತ್(18) ಇತ್ತೀಚೆಗೆ ಮೆಲಿಯೊಯಿಡೋಸಿಸ್ ಜ್ವರದಿಂದ ಮೃತಪಟ್ಟಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಎನ್ಸಿಡಿಸಿ ವೈದ್ಯರ ತಂಡ ಪರಿಶೀಲನೆ ನಡೆಸುತ್ತಿದೆ. ಇಬ್ಬರು ಮೈಕ್ರೊ ಬಯಾಲಜಿಸ್ಟ್, ಇಬ್ಬರು ವೈದ್ಯರು, ಎನ್ಸಿಡಿಎಸಿಯ ಇಬ್ಬರು ತಜ್ಞ ವೈದ್ಯರು ಸೇರಿದಂತೆ ಒಟ್ಟು ಐದು ಮಂದಿಯ ತಂಡ ಪರಿಸರ ಅವಲೋಕನ, ಬ್ಯಾಕ್ಟಿರೀಯ ಮತ್ತು ಜ್ವರದ ಲಕ್ಷಣಗಳ ಬಗ್ಗೆ ಆಳ ಅಧ್ಯಯನ ನಡೆಸುತ್ತಿದೆ. ಮೃತಪಟ್ಟ ಯುವಕನಿದ್ದ ಪರಿಸರದ ನೀರು, ಮಣ್ಣಿನ ಮಾದರಿ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ.
ಪ್ರಕರಣ ಕುರಿತಂತೆ ಎಲ್ಲ ಆಯಾಮಗಳಿಂದ ಅಧ್ಯಯನ ನಡೆಯುತ್ತಿದೆ. ಮಣಿಪಾಲ ಮುಂತಾದೆಡೆ ಈಗಾಗಲೆ ಈ ಜ್ವರ ಬಾಧಿಸಿ ಗುಣಮುಖರಾದ ಪ್ರಕರಣಗಳು ಇದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಅವರ ಜ್ವರದ ಗುಣಲಕ್ಷಣಗಳು, ಜ್ವರ ಬಂದ ಎಷ್ಟು ದಿನದಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು, ಚಿಕಿತ್ಸೆ ನೀಡಿದ ರೀತಿಯನ್ನು ಅಧ್ಯಯನ ನಡೆಸಲಾಗುತ್ತಿದೆ.
ರೋಗ ಬರುವುದು ಹೇಗೆ?: ಬರ್ಕೊಲ್ಡೇರಿಯ ಬ್ಯಾಕ್ಟೀರಿಯಾದಿಂದ ಬರುವ ಮೆಲಿಯೊಯಿಡೋಸಿಸ್ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಅಲ್ಲ. ಬ್ಯಾಕ್ಟೀರಿಯಾಗಳಿಂದ ದೇಹಕ್ಕೆ ಹರಡುತ್ತದೆ. ಕೈ, ಮೈ ತಾಗಿಸುವುದು, ಕೆಮ್ಮುವುದು, ಸೀನುವ ಮೂಲಕ ಬ್ಯಾಕ್ಟೀರಿಯ ಹರಡುವುದಿಲ್ಲ. ಈ ಜ್ವರ ಮಾರಣಾಂತಿಕವೂ ಅಲ್ಲ, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದರೆ ಜ್ವರ ನಿಯಂತ್ರಣಕ್ಕೆ ಬರುತ್ತದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದೊಂದು ನೈಸರ್ಗಿಕ ಬ್ಯಾಕ್ಟೀರಿಯಾ ಆಗಿದ್ದು, ಕೃಷಿ ಗದ್ದೆ ಪ್ರದೇಶಗಳಂಥ ಮಣ್ಣಿನ ಪರಿಸರದಲ್ಲಿ ಮಳೆ ಬಂದ ನಂತರ ಬ್ಯಾಕ್ಟೀರಿಯಾ ಮಣ್ಣಿನ ಒಳಭಾಗದಿಂದ ನೆಲದ ಮೇಲೆ ಬರುತ್ತದೆ. ಕಲುಷಿತ ಮಣ್ಣು ಮತ್ತು ನೀರಿನ ಸಂಪರ್ಕದಿಂದ ಅಥವಾ ಸೇವನೆಯಿಂದ ಅಥವಾ ದೇಹದಲ್ಲಿ ಗಾಯವಿದ್ದರೆ ಬ್ಯಾಕ್ಟೀರಿಯಾ ದೇಹ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಮಧುಮೇಹವಿದ್ದ ವ್ಯಕ್ತಗಳಿಗೆ ಬೇಗನೆ ಆವರಿಸುತ್ತದೆ. ಬಹುಅಂಗಾಗಗಳ ಮೇಲೆ ಇದು ಪರಿಣಾಮ ಬೀರುತ್ತದೆ.
ಮೆದುಳು ಹಾನಿ ಮಾಡಿದ್ದ ಬ್ಯಾಕ್ಯೀರಿಯಾ: ಜುಲೈ 7ರಂದು ಯುವಕನಿಗೆ ಜ್ವರ ಬಾಧಿಸಿದ್ದು, ಮರುದಿನ ಉಲ್ಬಣಗೊಂಡಾಗ ಮನೆಮದ್ದು ಮಾಡಲಾಗಿತ್ತು. ಜ್ವರ ಹೆಚ್ಚಾದಾಗ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಯುವಕನ ದೇಹಕ್ಕೆ ಸೇರ್ಪಡೆಯಾದ ಬ್ಯಾಕ್ಟೀರಿಯಾ ಮೆದುಳನ್ನು ಆವರಿಸಿ, ಅಲ್ಲಿನ ವ್ಯವಸ್ಥೆಯನ್ನು ಸಂಪೂರ್ಣ ಹಾನಿಗೊಳಿಸಿತ್ತು. ಪರಿಣಾಮ ಆತ ಕೋಮಾ ಸ್ಥಿತಿಗೆ ತಲುಪಿದ್ದ. ಮೆದುಳು ಜ್ವರದ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಜ್ವರ ಮೆದುಳು ಮಾತ್ರವಲ್ಲದೆ ಇತರ ಅಂಗಗಳಿಗೂ ಹಾನಿ ಮಾಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.
ಮೆಲಿಯೊಯಿಡೋಸಿಸ್ ಜ್ವರ ಪ್ರಕರಣ ಅಪರೂಪ. ಈ ಹಿಂದೆಯೂ ಕಂಡು ಬಂದಿದ್ದು ರೋಗಿಗಳು ಗುಣಮುಖವಾಗಿದ್ದಾರೆ. ಸದ್ಯ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಎನ್ಸಿಡಿಸಿ ವೈದ್ಯರು ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಾರ್ವಜನಿಕರು ಆತಂಕಗೊಳ್ಳುವುದು ಬೇಡ, ಇದು ಸಾಂಕ್ರಾಮಿಕ ರೋಗವಲ್ಲ.
– ಡಾ.ರೋಹಿಣಿ, ಜಿಲ್ಲಾ ಆರೋಗ್ಯ ಅಧಿಕಾರಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ