ಡಾ. ವೆಂಕಟ್ರಮಣ ಹೆಗಡೆ
ಹೈಪರ್ ಅಸಿಡಿಟಿ ಇಂದು ಸಾಮಾನ್ಯವಾಗಿ ಅನೇಕರನ್ನು ಕಾಡುತ್ತಿರುವ ಸಮಸ್ಯೆ. ಇದನ್ನು ಅಸಿಡ್ ಡಿಸ್ಪೆಪ್ಸಿಯಾ ಎಂದೂ ಕರೆಯಲಾಗುತ್ತದೆ. ಹೊಟ್ಟೆನೋವು, ವಾಂತಿ ಬಂದಂತಾಗುವುದು, ಹಸಿವೆ ಆಗದಿರುವುದು, ವಾಯು ತುಂಬಿದಂತೆ ಭಾಸವಾಗುವುದು, ಎದೆಯಲ್ಲಿ ಉರಿಯಾಗುವುದು, ಎದೆನೋವು, ಕಫ, ಶ್ವಾಸಕೋಶ, ಶ್ವಾಸನಾಳಗಳಲ್ಲಿ ಸಮಸ್ಯೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಅನೇಕರಲ್ಲಿ ಅಸಿಡಿಟಿಗೆ ಮುಖ್ಯ ಕಾರಣ ಹೆಲಿಕೋಬ್ಯಾಕ್ಟರ್ ಫೈಲೋರಿ (ಹೆಚ್. ಫೈಲೋರಿ) ಎಂಬ ಬ್ಯಾಕ್ಟೀರಿಯಾ ಎಂದು ಗುರುತಿಸಲಾಗಿದೆ. ನಾವು ಸೇವಿಸುತ್ತಿರುವ ಆಹಾರವು ಹೆಚ್.ಫೈಲೋರಿಯ ಇನ್ನೂ ಹೆಚ್ಚಿನ ವರ್ಧನೆಗೆ ಕಾರಣವಾದರೆ ಸಮಸ್ಯೆ ಉಲ್ಬಣವಾಗುವುದು. ಉಪ್ಪಿನ ಸೇವನೆಯು ಹೆಚ್.ಫೈಲೋರಿ ಹೆಚ್ಚಾಗಲು ಕಾರಣವಾಗುತ್ತದೆ. ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿದರೆ ಶೇ. 70ರಷ್ಟು ಅಸಿಡಿಟಿ ಕಡಿಮೆಯಾಗುತ್ತದೆ. ಬೇಕರಿಯ ಆಹಾರ, ಕರಿದ ಆಹಾರ ಪದಾರ್ಥಗಳು, ಉಪ್ಪಿನಕಾಯಿ ಇಂತಹ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.
ಪ್ರೋಬಯೋಟಿಕ್, ಪ್ರೀಬಯೋಟಿಕ್ಗಳನ್ನು ಹೊಂದಿರುವ ಆಹಾರಸೇವನೆಯು ಅತ್ಯಂತ ಒಳ್ಳೆಯದು. ಹೊಟ್ಟೆಯಲ್ಲಿ ಒಳ್ಳೆಯ, ದೇಹಕ್ಕೆ ಒಳಿತು ಮಾಡುವ ಬ್ಯಾಕ್ಟೀರಿಯಾಗಳು ಹೆಚ್ಚಾಗಬೇಕು. ಮಜ್ಜಿಗೆ, ಮೊಸರು ಈ ನಿಟ್ಟಿನಲ್ಲಿ ಹೆಚ್ಚು ಸಹಕಾರಿ. ಶುಂಠಿಯನ್ನು ಹುಳಿಯಿಲ್ಲದ ಮಜ್ಜಿಗೆಯೊಂದಿಗೆ ಸೇರಿಸಿ ಸೇವಿಸುವುದು, ಯಷ್ಟಿಮಧು ಅಥವಾ ಜ್ಯೇಷ್ಠಮಧು ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದೂ ಸಹಕಾರಿ.
ಏರು ರಕ್ತದೊತ್ತಡ, ಹರ್ನಿಯಾ, ಹೃದಯದ ತೊಂದರೆ ಇರುವವರನ್ನು ಹೊರತುಪಡಿಸಿ, ಉಳಿದವರು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಉಪ್ಪುಬೆರೆತ ಉಗುರುಬೆಚ್ಚಗಿನ ನೀರನ್ನು 7ರಿಂದ 8 ಗ್ಲಾಸ್ ಕುಡಿದು, ತುದಿಗಾಲಿನಲ್ಲಿ ಕುಳಿತು, ಎಡಗೈಯನ್ನು ಹೊಟ್ಟೆಯ ಮೇಲಿಟ್ಟು, ಬಲಗೈಯನ್ನು ಬಾಯೊಳಗೆ ಹಾಕಿ ವಾಂತಿ ಮಾಡಬೇಕು. ದಿನ ಬಿಟ್ಟು ದಿನ ಇದನ್ನು ಮಾಡುವುದರಿಂದ ಗ್ಯಾಸ್ಟ್ರೈಟಿಸ್ ಹತೋಟಿಗೆ ಬರುತ್ತದೆ. ಶುಂಠಿಯನ್ನು ಸೇರಿಸಿದ ಬೂದುಗುಂಬಳದ ಜ್ಯೂಸ್ನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಸಿಡಿಟಿಯ ನಿಯಂತ್ರಣಕ್ಕೆ ಬಹಳ ಸಹಕಾರಿ. ಅಕ್ಕಿಗಂಜಿ ಅಥವಾ ರಾಗಿಗಂಜಿ ಮಾಡಿ ಎಂಟು ತಾಸಿನ ನಂತರ ಹುಳಿಯಿಲ್ಲದ ಮೊಸರು ಸೇರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಸಾಕಷ್ಟು ಉತ್ತಮ ಬ್ಯಾಕ್ಟೀರಿಯಾಗಳು ದೊರೆತು ಸಮಸ್ಯೆಯ ಮೂಲಕಾರಣಕ್ಕೆ ಚಿಕಿತ್ಸೆ ದೊರೆಯುತ್ತದೆ. ಹಣ್ಣುಗಳ ಸೇವನೆ, ದಾಳಿಂಬೆ ಜ್ಯೂಸ್, ಸೇಬು ಜ್ಯೂಸ್ಗಳ ಸೇವನೆ ಒಳ್ಳೆಯದು.
ಹೀಗೆ ನಮ್ಮ ಪ್ರತಿನಿತ್ಯದ ವಿವೇಚನಾಭರಿತ ಆಹಾರಪದ್ಧತಿಯಿಂದ ಸಮಸ್ಯೆಯ ನಿವಾರಣೆ ಸಾಧ್ಯ. ಜೊತೆಯಲ್ಲಿ ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆಗಳಂತಹ ಪ್ರಕೃತಿಚಿಕಿತ್ಸೆಗಳಿಂದ ಅಸಿಡಿಟಿ ಕಡಿಮೆ ಮಾಡಬಹುದು
ಕೊನೇಹನಿ: ಬೆಳಗಿನ ತಿಂಡಿಗೂ ಮುನ್ನ ಬೇಯಿಸಿದ ಬೀಟ್ರೂಟ್ ತಿಂದರೆ ಅಜೀರ್ಣ. ಮಲಬದ್ಧತೆ ದೂರ.
(ಇದು ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ. ಇದೇ ಅಂತಿಮವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ತಜ್ಞವೈದ್ಯರನ್ನು ಸಂರ್ಪಸಲು ಮರೆಯಬೇಡಿ.)
ಹೈಪರ್ ಅಸಿಡಿಟಿ ಇಂದು ಸಾಮಾನ್ಯವಾಗಿ ಅನೇಕರನ್ನು ಕಾಡುತ್ತಿರುವ ಸಮಸ್ಯೆ. ಇದನ್ನು ಅಸಿಡ್ ಡಿಸ್ಪೆಪ್ಸಿಯಾ ಎಂದೂ ಕರೆಯಲಾಗುತ್ತದೆ. ಹೊಟ್ಟೆನೋವು, ವಾಂತಿ ಬಂದಂತಾಗುವುದು, ಹಸಿವೆ ಆಗದಿರುವುದು, ವಾಯು ತುಂಬಿದಂತೆ ಭಾಸವಾಗುವುದು, ಎದೆಯಲ್ಲಿ ಉರಿಯಾಗುವುದು, ಎದೆನೋವು, ಕಫ, ಶ್ವಾಸಕೋಶ, ಶ್ವಾಸನಾಳಗಳಲ್ಲಿ ಸಮಸ್ಯೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಅನೇಕರಲ್ಲಿ ಅಸಿಡಿಟಿಗೆ ಮುಖ್ಯ ಕಾರಣ ಹೆಲಿಕೋಬ್ಯಾಕ್ಟರ್ ಫೈಲೋರಿ (ಹೆಚ್. ಫೈಲೋರಿ) ಎಂಬ ಬ್ಯಾಕ್ಟೀರಿಯಾ ಎಂದು ಗುರುತಿಸಲಾಗಿದೆ. ನಾವು ಸೇವಿಸುತ್ತಿರುವ ಆಹಾರವು ಹೆಚ್.ಫೈಲೋರಿಯ ಇನ್ನೂ ಹೆಚ್ಚಿನ ವರ್ಧನೆಗೆ ಕಾರಣವಾದರೆ ಸಮಸ್ಯೆ ಉಲ್ಬಣವಾಗುವುದು. ಉಪ್ಪಿನ ಸೇವನೆಯು ಹೆಚ್.ಫೈಲೋರಿ ಹೆಚ್ಚಾಗಲು ಕಾರಣವಾಗುತ್ತದೆ. ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿದರೆ ಶೇ. 70ರಷ್ಟು ಅಸಿಡಿಟಿ ಕಡಿಮೆಯಾಗುತ್ತದೆ. ಬೇಕರಿಯ ಆಹಾರ, ಕರಿದ ಆಹಾರ ಪದಾರ್ಥಗಳು, ಉಪ್ಪಿನಕಾಯಿ ಇಂತಹ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.
ಪ್ರೋಬಯೋಟಿಕ್, ಪ್ರೀಬಯೋಟಿಕ್ಗಳನ್ನು ಹೊಂದಿರುವ ಆಹಾರಸೇವನೆಯು ಅತ್ಯಂತ ಒಳ್ಳೆಯದು. ಹೊಟ್ಟೆಯಲ್ಲಿ ಒಳ್ಳೆಯ, ದೇಹಕ್ಕೆ ಒಳಿತು ಮಾಡುವ ಬ್ಯಾಕ್ಟೀರಿಯಾಗಳು ಹೆಚ್ಚಾಗಬೇಕು. ಮಜ್ಜಿಗೆ, ಮೊಸರು ಈ ನಿಟ್ಟಿನಲ್ಲಿ ಹೆಚ್ಚು ಸಹಕಾರಿ. ಶುಂಠಿಯನ್ನು ಹುಳಿಯಿಲ್ಲದ ಮಜ್ಜಿಗೆಯೊಂದಿಗೆ ಸೇರಿಸಿ ಸೇವಿಸುವುದು, ಯಷ್ಟಿಮಧು ಅಥವಾ ಜ್ಯೇಷ್ಠಮಧು ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದೂ ಸಹಕಾರಿ.
ಏರು ರಕ್ತದೊತ್ತಡ, ಹರ್ನಿಯಾ, ಹೃದಯದ ತೊಂದರೆ ಇರುವವರನ್ನು ಹೊರತುಪಡಿಸಿ, ಉಳಿದವರು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಉಪ್ಪುಬೆರೆತ ಉಗುರುಬೆಚ್ಚಗಿನ ನೀರನ್ನು 7ರಿಂದ 8 ಗ್ಲಾಸ್ ಕುಡಿದು, ತುದಿಗಾಲಿನಲ್ಲಿ ಕುಳಿತು, ಎಡಗೈಯನ್ನು ಹೊಟ್ಟೆಯ ಮೇಲಿಟ್ಟು, ಬಲಗೈಯನ್ನು ಬಾಯೊಳಗೆ ಹಾಕಿ ವಾಂತಿ ಮಾಡಬೇಕು. ದಿನ ಬಿಟ್ಟು ದಿನ ಇದನ್ನು ಮಾಡುವುದರಿಂದ ಗ್ಯಾಸ್ಟ್ರೈಟಿಸ್ ಹತೋಟಿಗೆ ಬರುತ್ತದೆ. ಶುಂಠಿಯನ್ನು ಸೇರಿಸಿದ ಬೂದುಗುಂಬಳದ ಜ್ಯೂಸ್ನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಸಿಡಿಟಿಯ ನಿಯಂತ್ರಣಕ್ಕೆ ಬಹಳ ಸಹಕಾರಿ. ಅಕ್ಕಿಗಂಜಿ ಅಥವಾ ರಾಗಿಗಂಜಿ ಮಾಡಿ ಎಂಟು ತಾಸಿನ ನಂತರ ಹುಳಿಯಿಲ್ಲದ ಮೊಸರು ಸೇರಿಸಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಸಾಕಷ್ಟು ಉತ್ತಮ ಬ್ಯಾಕ್ಟೀರಿಯಾಗಳು ದೊರೆತು ಸಮಸ್ಯೆಯ ಮೂಲಕಾರಣಕ್ಕೆ ಚಿಕಿತ್ಸೆ ದೊರೆಯುತ್ತದೆ. ಹಣ್ಣುಗಳ ಸೇವನೆ, ದಾಳಿಂಬೆ ಜ್ಯೂಸ್, ಸೇಬು ಜ್ಯೂಸ್ಗಳ ಸೇವನೆ ಒಳ್ಳೆಯದು.
ಹೀಗೆ ನಮ್ಮ ಪ್ರತಿನಿತ್ಯದ ವಿವೇಚನಾಭರಿತ ಆಹಾರಪದ್ಧತಿಯಿಂದ ಸಮಸ್ಯೆಯ ನಿವಾರಣೆ ಸಾಧ್ಯ. ಜೊತೆಯಲ್ಲಿ ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆಗಳಂತಹ ಪ್ರಕೃತಿಚಿಕಿತ್ಸೆಗಳಿಂದ ಅಸಿಡಿಟಿ ಕಡಿಮೆ ಮಾಡಬಹುದು
ಕೊನೇಹನಿ: ಬೆಳಗಿನ ತಿಂಡಿಗೂ ಮುನ್ನ ಬೇಯಿಸಿದ ಬೀಟ್ರೂಟ್ ತಿಂದರೆ ಅಜೀರ್ಣ. ಮಲಬದ್ಧತೆ ದೂರ.
(ಇದು ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ. ಇದೇ ಅಂತಿಮವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ತಜ್ಞವೈದ್ಯರನ್ನು ಸಂರ್ಪಸಲು ಮರೆಯಬೇಡಿ.)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ