‘ಸಾವನ್ನು ಎದುರಿಸುವುದು ನಿಶ್ಚಿತ, ಸಾವಿನ ಜತೆ ಸೆಣಸುವ ಉದ್ದೇಶ ಇರಲಿಲ್ಲ. ಜೀವಕ್ಕಿಂತ ತಾನೇ ದೊಡ್ಡವನೆಂದು ಸಾವು ನನ್ನನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಹೋರಾಟವಿಲ್ಲದೆ ನಾನು ಜೀವ ಬಿಡಲಾರೆ’-1988ರಲ್ಲಿ ಬರೆದ ‘ಠನ್ ಗಯಿ, ಮೌತ್ ಸೇ ಠನ್ ಗಯಿ’ ಎಂಬ ತಮ್ಮ ಕವನದ ಸಾಲಿನಂತೆ ಜೀವನದ ಕೊನೆಯ ಕ್ಷಣದವರೆಗೂ ಸಾವಿನ ಜತೆ ಹೋರಾಡಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಿಮವಾಗಿ ಕಾಲನ ಕರೆಗೆ ಓಗೊಟ್ಟಿದ್ದಾರೆ. ಅಜಾತಶತ್ರುವಾಗಿ, ಕವಿ ಹೃದಯಿಯಾಗಿ, ನವಭಾರತ ನಿರ್ವಣಕ್ಕಾಗಿ ದುಡಿದ ‘ಭಾರತ ರತ್ನ’ ಇನ್ನು ಕೇವಲ ನೆನಪು. ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಶಕೆ ಮೂಡಿಸಿದ್ದ ವಾಜಪೇಯಿ ಗುರುವಾರ ಸಂಜೆ ಕೊನೆಯುಸಿರೆಳೆದರು.
ಆಸ್ಪತ್ರೆಯಲ್ಲಿನ ಆ 65 ದಿನ…
2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ವಾಜಪೇಯಿಯವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ.11ರಂದು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ಗೆ ದಾಖಲಿಸಲಾಯಿತು. ಕಳೆದ ವಾರದಿಂದೀಚೆಗೆ ಪರಿಸ್ಥಿತಿ ಗಂಭೀರವಾದಾಗ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಗುರುವಾರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರದ ಪ್ರಮುಖ ಸಚಿವರು ಆಸ್ಪತ್ರೆಗೆ ತೆರಳಿ ವೈದ್ಯರೊಂದಿಗೆ ಸಮಾಲೋಚಿಸಿದ್ದರು. ಉಸಿರಾಟದ ತೊಂದರೆ, ಮೂತ್ರಪಿಂಡ ಸೋಂಕಿನ ಜತೆಗೆ ಡಯಾಬಿಟಿಸ್ ವಾಜಪೇಯಿ ಅವರನ್ನು ಮತ್ತಷ್ಟು ಹೈರಾಣಾಗಿಸಿತು. ಅಂತಿಮವಾಗಿ ಗುರುವಾರ ಸಂಜೆ 5 ಗಂಟೆಗೆ ಏಮ್್ಸ ಪ್ರಕಟಣೆ ವಾಜಪೇಯಿ ನಿಧನ ಸುದ್ದಿಯನ್ನು ಬಿತ್ತರಿಸಿತು.
ಅಜಾತಶತ್ರು
ಭಾರತ ರಾಜಕಾರಣಿಗಳ ಸಾಲಿನಲ್ಲಿ ವಾಜಪೇಯಿ ಹೆಸರು ವಿಶೇಷವಾಗಿ ನಿಲ್ಲಲು ಅವರ ಸ್ನೇಹಗುಣವೇ ಕಾರಣ ಎಂಬುದನ್ನು ವಿಪಕ್ಷ ನಾಯಕರೂ ಒಪು್ಪತ್ತಾರೆ. ಬಿಜೆಪಿ ನಾಯಕನಾಗಿ ವಾಜಪೇಯಿ ಅವರನ್ನು ಸಂಸತ್ ಒಳಗೆ, ಹೊರಗೆ ವಿರೋಧಿಸುತ್ತಿದ್ದವರು ಹೊರಗೆ ಅವರ ಸ್ನೇಹಕ್ಕೆ ಅಷ್ಟೇ ಹಾತೊರೆಯುತ್ತಿದ್ದರು. ಕಾಂಗ್ರೆಸ್ ಅದಿಯಾಗಿ ಎಲ್ಲ ಪಕ್ಷಗಳಲ್ಲೂ ಅವರ ಸ್ನೇಹಬಳಗವಿತ್ತು. ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರಂತೂ, ‘ಮುಂದೊಂದು ದಿನ ವಾಜಪೇಯಿ ಈ ದೇಶದ ಪ್ರಧಾನಿಯಾಗಲಿದ್ದಾರೆ’ ಎಂದು 50ರ ದಶಕದಲ್ಲೇ ಭವಿಷ್ಯ ನುಡಿದಿದ್ದರು.
ಅಟಲ್ ನುಡಿಮುತ್ತು…
ಭಾರತ! ಇದು ವಂದನೆಯ ಭೂಮಿ. ಅಭಿನಂದನೆಯ
ಭೂಮಿ. ಅರ್ಪಣೆಯ ಭೂಮಿ. ತರ್ಪಣೆಯ ಭೂಮಿ.
ಇದರ ಕಲ್ಲು-ಕಲ್ಲಿನಲ್ಲಿ ಶಂಕರನಿದ್ದಾನೆ; ಹನಿ-ಹನಿಯಲ್ಲೂ ಗಂಗೆ.
ನಾವು ಬದುಕುವುದು ಇದಕ್ಕಾಗಿ, ಸಾಯುವುದೂ ಇದಕ್ಕಾಗಿಯೇ!
ಸತ್ತ ನಂತರವೂ ಗಂಗಾನದಿಯಲ್ಲಿ ಹರಿಯುವ
ನಮ್ಮ ಅಸ್ಥಿಯ ಬಳಿ ಕಿವಿಗೊಟ್ಟು ಕೇಳಿದರೆ
ಅಲ್ಲಿಂದ ಬರುವ ಧ್ವನಿ ಒಂದೇ…
ಅದು… ಭಾರತ್ ಮಾತಾ ಕೀ ಜೈ!
ಆಸ್ಪತ್ರೆಯಲ್ಲಿನ ಆ 65 ದಿನ…
2009ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ವಾಜಪೇಯಿಯವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಜೂ.11ರಂದು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ಗೆ ದಾಖಲಿಸಲಾಯಿತು. ಕಳೆದ ವಾರದಿಂದೀಚೆಗೆ ಪರಿಸ್ಥಿತಿ ಗಂಭೀರವಾದಾಗ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಗುರುವಾರ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರದ ಪ್ರಮುಖ ಸಚಿವರು ಆಸ್ಪತ್ರೆಗೆ ತೆರಳಿ ವೈದ್ಯರೊಂದಿಗೆ ಸಮಾಲೋಚಿಸಿದ್ದರು. ಉಸಿರಾಟದ ತೊಂದರೆ, ಮೂತ್ರಪಿಂಡ ಸೋಂಕಿನ ಜತೆಗೆ ಡಯಾಬಿಟಿಸ್ ವಾಜಪೇಯಿ ಅವರನ್ನು ಮತ್ತಷ್ಟು ಹೈರಾಣಾಗಿಸಿತು. ಅಂತಿಮವಾಗಿ ಗುರುವಾರ ಸಂಜೆ 5 ಗಂಟೆಗೆ ಏಮ್್ಸ ಪ್ರಕಟಣೆ ವಾಜಪೇಯಿ ನಿಧನ ಸುದ್ದಿಯನ್ನು ಬಿತ್ತರಿಸಿತು.
ಅಜಾತಶತ್ರು
ಭಾರತ ರಾಜಕಾರಣಿಗಳ ಸಾಲಿನಲ್ಲಿ ವಾಜಪೇಯಿ ಹೆಸರು ವಿಶೇಷವಾಗಿ ನಿಲ್ಲಲು ಅವರ ಸ್ನೇಹಗುಣವೇ ಕಾರಣ ಎಂಬುದನ್ನು ವಿಪಕ್ಷ ನಾಯಕರೂ ಒಪು್ಪತ್ತಾರೆ. ಬಿಜೆಪಿ ನಾಯಕನಾಗಿ ವಾಜಪೇಯಿ ಅವರನ್ನು ಸಂಸತ್ ಒಳಗೆ, ಹೊರಗೆ ವಿರೋಧಿಸುತ್ತಿದ್ದವರು ಹೊರಗೆ ಅವರ ಸ್ನೇಹಕ್ಕೆ ಅಷ್ಟೇ ಹಾತೊರೆಯುತ್ತಿದ್ದರು. ಕಾಂಗ್ರೆಸ್ ಅದಿಯಾಗಿ ಎಲ್ಲ ಪಕ್ಷಗಳಲ್ಲೂ ಅವರ ಸ್ನೇಹಬಳಗವಿತ್ತು. ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರಂತೂ, ‘ಮುಂದೊಂದು ದಿನ ವಾಜಪೇಯಿ ಈ ದೇಶದ ಪ್ರಧಾನಿಯಾಗಲಿದ್ದಾರೆ’ ಎಂದು 50ರ ದಶಕದಲ್ಲೇ ಭವಿಷ್ಯ ನುಡಿದಿದ್ದರು.
ಅಟಲ್ ನುಡಿಮುತ್ತು…
ಭಾರತ! ಇದು ವಂದನೆಯ ಭೂಮಿ. ಅಭಿನಂದನೆಯ
ಭೂಮಿ. ಅರ್ಪಣೆಯ ಭೂಮಿ. ತರ್ಪಣೆಯ ಭೂಮಿ.
ಇದರ ಕಲ್ಲು-ಕಲ್ಲಿನಲ್ಲಿ ಶಂಕರನಿದ್ದಾನೆ; ಹನಿ-ಹನಿಯಲ್ಲೂ ಗಂಗೆ.
ನಾವು ಬದುಕುವುದು ಇದಕ್ಕಾಗಿ, ಸಾಯುವುದೂ ಇದಕ್ಕಾಗಿಯೇ!
ಸತ್ತ ನಂತರವೂ ಗಂಗಾನದಿಯಲ್ಲಿ ಹರಿಯುವ
ನಮ್ಮ ಅಸ್ಥಿಯ ಬಳಿ ಕಿವಿಗೊಟ್ಟು ಕೇಳಿದರೆ
ಅಲ್ಲಿಂದ ಬರುವ ಧ್ವನಿ ಒಂದೇ…
ಅದು… ಭಾರತ್ ಮಾತಾ ಕೀ ಜೈ!
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ