ಗೀತೆಯಲ್ಲಿ ‘ನವನಾಗಗಳಲ್ಲಿ ಅನಂತನಾಗ ನಾನಾಗಿದ್ದೇನೆ’ ಎಂದು ಶ್ರೀಕೃಷ್ಣ ಹೇಳಿರುವನು. ಪ್ರತಿ ವರ್ಷ ನಾಗರ ಪಂಚಮಿ ಹಬ್ಬ ಬರುವುದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ. ಹಿಂದೆ ದ್ರಾವಿಡ ಜನಾಂಗ ಮತ್ತು ಆರ್ಯರು ಸಹ ಈ ಹಬ್ಬವನ್ನು ಆಚರಿಸುತ್ತಿದ್ದರು.
ನಾಗದೇವತೆಯು ವಿಷ್ಣುವನ್ನು ಶಯನಿಸಿಕೊಂಡು ಆದಿಶೇಷನಾದರೆ, ಶಿವನು ನಾಗದೇವತೆಯನ್ನು ತನ್ನ ಕಂಠಾಭರಣವನ್ನಾಗಿಸಿಕೊಂಡು ಹಾಗೂ ತನ್ನ ತೋಳು, ಭುಜ, ಕೈಗಳಿಗೂ ಆಭರಣ ಮಾಡಿಕೊಂಡ. ಗಣಪತಿ ಹೊಟ್ಟೆಯಲ್ಲಿರುವ ಮೋದಕ ಹೊರ ಬೀಳದಂತೆ ಉದರ ರಕ್ಷಣೆಗೆ ಹಾವನ್ನೇ ಸುತ್ತಿಕೊಂಡ, ಗುರು ವಿದ್ಯಾರಣ್ಯರಿಗೆ ವಿಜಯನಗರ ಸ್ಥಾಪಿಸಲು ಪ್ರೇರೇಪಿಸಿದ್ದು ಕಪ್ಪೆಗೆ ನೆರಳು ನೀಡಿದ ಸರ್ಪದ ಹೆಡೆಯೇ ಆಗಿದೆ. ಸರ್ಪ ನಮ್ಮ ಜೀವನದ ಇತಿಹಾಸ-ಪುರಾಣಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಜಾನಪದ ಕಥೆ: ಕಡು ಬಡವಳಾದ ಓರ್ವ ಹೆಣ್ಣು ಮಗಳು ದೇವರ ಕೃಪೆಯಿಂದ ಶ್ರೀಮಂತ ಪತಿಯನ್ನು ಪಡೆದಿದ್ದಳು. ಪ್ರತಿ ವರ್ಷದಂತೆ ಆ ವರ್ಷವೂ ತಂಗಿಯನ್ನು ತವರುಮನೆಗೆ ಕರೆದುಕೊಂಡು ಹೋಗಲು ಅಣ್ಣನು ಬಂದಿದ್ದನು. ಇಬ್ಬರೂ ಮನೆಗೆ ಬರುತ್ತಿರುವಾಗ ದಾರಿಯ ಮಧ್ಯದಲ್ಲಿ ತಂಗಿ ಧರಿಸಿದ ಆಭರಣಗಳ ಮೇಲೆ ಆಸೆ ಉಂಟಾಗಿ ತಂಗಿಯನ್ನು ಕಲ್ಲಿನಿಂದ ಹೊಡೆಯಲು ಹೋದಾಗ ಒಂದು ನಾಗರ ಹಾವು ಅಣ್ಣನ ಕಾಲಿಗೆ ಕಚ್ಚಿತು. ಆತ ಮರಣಾವಸ್ಥೆ ತಲುಪಿದ. ಆಗ ತಂಗಿಯು ನಾಗದೇವನನ್ನು ಪ್ರಾರ್ಥಿಸಿ, ನಾಗನಿಗೆ ಪೂಜೆ ಮಾಡಿ ಅಣ್ಣನನ್ನು ಬದುಕಿಸಿಕೊಂಡಳು. ಇದು ನಡೆದದ್ದು ಶ್ರಾವಣ ಪಂಚಮಿಯಂದೇ. ಹಾಗಾಗಿ, ಈ ಹಬ್ಬವನ್ನು ಅಣ್ಣ-ತಂಗಿ ಹಬ್ಬ ಎನ್ನುವರು.
ಆಚರಣೆ: ನಾಗಪಂಚಮಿಯ ದಿನ ಬೆಳಗ್ಗೆ ಉಷಾಕಾಲದಲ್ಲಿ ಎಲ್ಲರೂ ಎದ್ದು, ಹೆಂಗಳೆಯರು ಮನೆಯ ಅಂಗಳವನ್ನು ಸಾರಿಸಿ, ರಂಗೋಲಿ ಇಡಬೇಕು. ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ಮಾಡಿ ಮಡಿವಸ್ತ್ರವನ್ನು ಧರಿಸುತ್ತಾರೆ. ಹುರಿಗಡಲೆ, ಎಳ್ಳುಂಡೆ, ತಂಬಿಟ್ಟು, ಹೂವು, ಗೆಜ್ಜೆವಸ್ತ್ರ, ನಾಗರ ಬೋಟು, ನೀರು ತೆಗೆದುಕೊಂಡು ನಾಗಪ್ಪನ ಗುಡಿಗೆ ಹೋಗುತ್ತಾರೆ. ಬೆಲ್ಲದ ಹಾಲು ಹಾಕಿ ಅರಳು ಏರಿಸಿ ನೈವೇದ್ಯ ಮಾಡಿ ಭಕ್ತಿಯಿಂದ ಕೈಮುಗಿಯುತ್ತಾರೆ. ಮರುದಿನ (ಪಂಚಮಿ) ಮಣ್ಣಿನ ನಾಗಪ್ಪನನ್ನು ತರುತ್ತಾರೆ. ಚೌತಿ ದಿನ ರಂಗೋಲಿಯನ್ನು ನಾಗಪ್ಪ ಮನೆ ಒಳಗೆ ಬರುವಂತೆ ಹಾಕಿದರೆ, ಪಂಚಮಿ ದಿನ ನಾಗಪ್ಪ ಹೊರಹೋಗುವ ಹಾಗೆ ಚಿತ್ರಿಸುತ್ತಾರೆ. ಕೆಲವು ಕಡೆ ಜೀವಂತ ನಾಗಗಳಿಗೆ ಹಾಲೆರೆಯುವ ಪದ್ಧತಿ ಇದೆ. ಆ ನಾಗನನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಊರ ಹೊರಗೆ ದಿಗ್ಬಂಧನ ಮಾಡಿ ಬಿಟ್ಟು ಬರುತ್ತಾರೆ. ಇನ್ನು ಕೆಲವರು ಹುತ್ತದ ಬಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸಹೋದರ-ಸಹೋದರಿಯ ಹಬ್ಬ ಆಗಿರುವುದರಿಂದ ಸಹೋದರನ ಬೆನ್ನಿಗೆ ಮತ್ತು ಹೊಟ್ಟೆಗೆ ಹಾಲಿನಿಂದ ತನಿ ಎರೆಯುತ್ತಾರೆ. ಇದರಿಂದ ಬೆನ್ನು ಗಟ್ಟಿಯಾಗಲಿ, ಹೊಟ್ಟೆ ತಂಪಾಗಲಿ ಎಂದು ಹಾರೈಸಲಾಗುತ್ತದೆ. ಅವರಿಬ್ಬರ ಸಂಬಂಧ ಶಾಶ್ವತವಾಗಿರಲಿ ಎಂಬುದು ಇದರ ಒಳ ಅರ್ಥ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ನಾಗದೋಷ: ಮದುವೆ ಆಗದೆ ಇರುವುದು, ಸಂತಾನ ಭಾಗ್ಯ ಇಲ್ಲದಿರುವುದು, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆ. ಹೀಗೆ ಅನೇಕ ತೊಂದರೆಗಳು ನಾಗದೋಷದಿಂದ ಬರಬಹುದು. ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಸರ್ಪಸಂಸ್ಕಾರ, ನಾಗಶಾಂತಿಯನ್ನು ಮಾಡಿಕೊಂಡರೆ ಇಂಥ ದೋಷ ಪರಿಹಾರ ಆಗುವುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ನಾಗದೇವತೆಯು ವಿಷ್ಣುವನ್ನು ಶಯನಿಸಿಕೊಂಡು ಆದಿಶೇಷನಾದರೆ, ಶಿವನು ನಾಗದೇವತೆಯನ್ನು ತನ್ನ ಕಂಠಾಭರಣವನ್ನಾಗಿಸಿಕೊಂಡು ಹಾಗೂ ತನ್ನ ತೋಳು, ಭುಜ, ಕೈಗಳಿಗೂ ಆಭರಣ ಮಾಡಿಕೊಂಡ. ಗಣಪತಿ ಹೊಟ್ಟೆಯಲ್ಲಿರುವ ಮೋದಕ ಹೊರ ಬೀಳದಂತೆ ಉದರ ರಕ್ಷಣೆಗೆ ಹಾವನ್ನೇ ಸುತ್ತಿಕೊಂಡ, ಗುರು ವಿದ್ಯಾರಣ್ಯರಿಗೆ ವಿಜಯನಗರ ಸ್ಥಾಪಿಸಲು ಪ್ರೇರೇಪಿಸಿದ್ದು ಕಪ್ಪೆಗೆ ನೆರಳು ನೀಡಿದ ಸರ್ಪದ ಹೆಡೆಯೇ ಆಗಿದೆ. ಸರ್ಪ ನಮ್ಮ ಜೀವನದ ಇತಿಹಾಸ-ಪುರಾಣಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಜಾನಪದ ಕಥೆ: ಕಡು ಬಡವಳಾದ ಓರ್ವ ಹೆಣ್ಣು ಮಗಳು ದೇವರ ಕೃಪೆಯಿಂದ ಶ್ರೀಮಂತ ಪತಿಯನ್ನು ಪಡೆದಿದ್ದಳು. ಪ್ರತಿ ವರ್ಷದಂತೆ ಆ ವರ್ಷವೂ ತಂಗಿಯನ್ನು ತವರುಮನೆಗೆ ಕರೆದುಕೊಂಡು ಹೋಗಲು ಅಣ್ಣನು ಬಂದಿದ್ದನು. ಇಬ್ಬರೂ ಮನೆಗೆ ಬರುತ್ತಿರುವಾಗ ದಾರಿಯ ಮಧ್ಯದಲ್ಲಿ ತಂಗಿ ಧರಿಸಿದ ಆಭರಣಗಳ ಮೇಲೆ ಆಸೆ ಉಂಟಾಗಿ ತಂಗಿಯನ್ನು ಕಲ್ಲಿನಿಂದ ಹೊಡೆಯಲು ಹೋದಾಗ ಒಂದು ನಾಗರ ಹಾವು ಅಣ್ಣನ ಕಾಲಿಗೆ ಕಚ್ಚಿತು. ಆತ ಮರಣಾವಸ್ಥೆ ತಲುಪಿದ. ಆಗ ತಂಗಿಯು ನಾಗದೇವನನ್ನು ಪ್ರಾರ್ಥಿಸಿ, ನಾಗನಿಗೆ ಪೂಜೆ ಮಾಡಿ ಅಣ್ಣನನ್ನು ಬದುಕಿಸಿಕೊಂಡಳು. ಇದು ನಡೆದದ್ದು ಶ್ರಾವಣ ಪಂಚಮಿಯಂದೇ. ಹಾಗಾಗಿ, ಈ ಹಬ್ಬವನ್ನು ಅಣ್ಣ-ತಂಗಿ ಹಬ್ಬ ಎನ್ನುವರು.
ಆಚರಣೆ: ನಾಗಪಂಚಮಿಯ ದಿನ ಬೆಳಗ್ಗೆ ಉಷಾಕಾಲದಲ್ಲಿ ಎಲ್ಲರೂ ಎದ್ದು, ಹೆಂಗಳೆಯರು ಮನೆಯ ಅಂಗಳವನ್ನು ಸಾರಿಸಿ, ರಂಗೋಲಿ ಇಡಬೇಕು. ಪ್ರತಿಯೊಬ್ಬರೂ ಅಭ್ಯಂಜನ ಸ್ನಾನ ಮಾಡಿ ಮಡಿವಸ್ತ್ರವನ್ನು ಧರಿಸುತ್ತಾರೆ. ಹುರಿಗಡಲೆ, ಎಳ್ಳುಂಡೆ, ತಂಬಿಟ್ಟು, ಹೂವು, ಗೆಜ್ಜೆವಸ್ತ್ರ, ನಾಗರ ಬೋಟು, ನೀರು ತೆಗೆದುಕೊಂಡು ನಾಗಪ್ಪನ ಗುಡಿಗೆ ಹೋಗುತ್ತಾರೆ. ಬೆಲ್ಲದ ಹಾಲು ಹಾಕಿ ಅರಳು ಏರಿಸಿ ನೈವೇದ್ಯ ಮಾಡಿ ಭಕ್ತಿಯಿಂದ ಕೈಮುಗಿಯುತ್ತಾರೆ. ಮರುದಿನ (ಪಂಚಮಿ) ಮಣ್ಣಿನ ನಾಗಪ್ಪನನ್ನು ತರುತ್ತಾರೆ. ಚೌತಿ ದಿನ ರಂಗೋಲಿಯನ್ನು ನಾಗಪ್ಪ ಮನೆ ಒಳಗೆ ಬರುವಂತೆ ಹಾಕಿದರೆ, ಪಂಚಮಿ ದಿನ ನಾಗಪ್ಪ ಹೊರಹೋಗುವ ಹಾಗೆ ಚಿತ್ರಿಸುತ್ತಾರೆ. ಕೆಲವು ಕಡೆ ಜೀವಂತ ನಾಗಗಳಿಗೆ ಹಾಲೆರೆಯುವ ಪದ್ಧತಿ ಇದೆ. ಆ ನಾಗನನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಊರ ಹೊರಗೆ ದಿಗ್ಬಂಧನ ಮಾಡಿ ಬಿಟ್ಟು ಬರುತ್ತಾರೆ. ಇನ್ನು ಕೆಲವರು ಹುತ್ತದ ಬಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸಹೋದರ-ಸಹೋದರಿಯ ಹಬ್ಬ ಆಗಿರುವುದರಿಂದ ಸಹೋದರನ ಬೆನ್ನಿಗೆ ಮತ್ತು ಹೊಟ್ಟೆಗೆ ಹಾಲಿನಿಂದ ತನಿ ಎರೆಯುತ್ತಾರೆ. ಇದರಿಂದ ಬೆನ್ನು ಗಟ್ಟಿಯಾಗಲಿ, ಹೊಟ್ಟೆ ತಂಪಾಗಲಿ ಎಂದು ಹಾರೈಸಲಾಗುತ್ತದೆ. ಅವರಿಬ್ಬರ ಸಂಬಂಧ ಶಾಶ್ವತವಾಗಿರಲಿ ಎಂಬುದು ಇದರ ಒಳ ಅರ್ಥ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ನಾಗದೋಷ: ಮದುವೆ ಆಗದೆ ಇರುವುದು, ಸಂತಾನ ಭಾಗ್ಯ ಇಲ್ಲದಿರುವುದು, ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆ. ಹೀಗೆ ಅನೇಕ ತೊಂದರೆಗಳು ನಾಗದೋಷದಿಂದ ಬರಬಹುದು. ನಾಗಪ್ರತಿಷ್ಠೆ, ಆಶ್ಲೇಷ ಬಲಿ, ಸರ್ಪಸಂಸ್ಕಾರ, ನಾಗಶಾಂತಿಯನ್ನು ಮಾಡಿಕೊಂಡರೆ ಇಂಥ ದೋಷ ಪರಿಹಾರ ಆಗುವುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ