ಧಾರವಾಡ: ಇತಿಹಾಸ ಸಂಶೋಧಕ, ನಗರದ ಡಾ. ಆಲೂರು ವೆಂಕಟರಾವ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ರಿತ್ತಿ (89) ಅವರು ಇಲ್ಲಿನ ನವೋದಯನಗರದ ನಿವಾಸದಲ್ಲಿ ಬುಧವಾರ ಬೆಳಗ್ಗೆ ನಿಧನ ಹೊಂದಿದರು.
ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮ ಮೂಲದ ಶ್ರೀನಿವಾಸ ರಿತ್ತಿ ಅವರು, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು- ಬಳಗ ಅಗಲಿದ್ದಾರೆ.
ಪ್ರಸ್ತುತ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಶತಮಾನೋತ್ಸವ ಮತ್ತು ಆಲೂರು ವೆಂಕಟರಾವ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಿತ್ತಿ ಅವರು, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು, ಕುಟುಂಬಸ್ಥರು ದೇಹವನ್ನು ಎಸ್ಡಿಎಂ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ರಿತ್ತಿ ಅವರ ಕುರಿತು: ಉದಕಮಂಡಲದಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಶ್ರೀನಿವಾಸ ರಿತ್ತಿ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ಪ್ರಾಚ್ಯವಸ್ತು ವಿಭಾಗದಲ್ಲಿ 3 ದಶಕಗಳ ಸೇವೆ ಸಲ್ಲಿಸಿ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿ.ಎಚ್ಡಿ ಮಾರ್ಗದರ್ಶನ ನೀಡಿರುವ ಅವರು, ಜರ್ಮನ್, ಜಪಾನ್ ಸೇರಿ ಇನ್ನಿತರ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ನಿವೃತ್ತರಾದ ನಂತರ ದೆಹಲಿಯ ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆಯ ‘ವಿಜಯನಗರ ಅರಸರ ಶಾಸನಗಳು’ ಯೋಜನೆಯಲ್ಲಿ ವಿಜಯನಗರ ಅರಸರ ಕನ್ನಡ ಶಾಸನಗಳನ್ನೊಳಗೊಂಡ 3 ಬೃಹತ್ ಸಂಪುಟಗಳನ್ನು ಐಸಿಎಚ್ಆರ್ ಸಂಸ್ಥೆಯಿಂದ ಪ್ರಕಟಿಸಿದ್ದಾರೆ. ವಿಜಯನಗರ ಅರಸರ ಸಂಸ್ಕೃತ ಶಾಸನಗಳ ಸಂಪುಟ ಇತ್ತೀಚಗಷ್ಟೆ ಬಿಡುಗಡೆಯಾಗಿದೆ. ಈ ಸಂಪುಟಗಳು ವಿಜಯನಗರ ಇತಿಹಾಸ ಸಂಸ್ಕೃತಿಯ ಅಧ್ಯಯನಕ್ಕೆ ಆಕರಗಳಾಗಿದೆ.
ಶಾಸನ ಅಧ್ಯಯನ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಭಾರತೀಯ ಪುರಾಭಿಲೇಖ ಪರಿಷತ್ನ ತಾಮ್ರಪತ್ರ ಪ್ರಶಸ್ತಿ, ಬೆಂಗಳೂರಿನ ಮಿಥಿಕ್ ಸೊಸೈಟಿ ಗೌರವ, ಡಾ. ಬಾ.ರಾ. ಗೋಪಾಲ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣ ದೇವರಾಯ ಪಟ್ಟಾಭಿಷೇಕದ 500ನೇ ವರ್ಷ ಸ್ಮರಣಾರ್ಥ ರಾಜ್ಯ ಸರ್ಕಾರದ ಪ್ರಶಸ್
ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮ ಮೂಲದ ಶ್ರೀನಿವಾಸ ರಿತ್ತಿ ಅವರು, ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು- ಬಳಗ ಅಗಲಿದ್ದಾರೆ.
ಪ್ರಸ್ತುತ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಶತಮಾನೋತ್ಸವ ಮತ್ತು ಆಲೂರು ವೆಂಕಟರಾವ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಿತ್ತಿ ಅವರು, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು, ಕುಟುಂಬಸ್ಥರು ದೇಹವನ್ನು ಎಸ್ಡಿಎಂ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ರಿತ್ತಿ ಅವರ ಕುರಿತು: ಉದಕಮಂಡಲದಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ ಶ್ರೀನಿವಾಸ ರಿತ್ತಿ ಅವರು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ಪ್ರಾಚ್ಯವಸ್ತು ವಿಭಾಗದಲ್ಲಿ 3 ದಶಕಗಳ ಸೇವೆ ಸಲ್ಲಿಸಿ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿ.ಎಚ್ಡಿ ಮಾರ್ಗದರ್ಶನ ನೀಡಿರುವ ಅವರು, ಜರ್ಮನ್, ಜಪಾನ್ ಸೇರಿ ಇನ್ನಿತರ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ನಿವೃತ್ತರಾದ ನಂತರ ದೆಹಲಿಯ ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆಯ ‘ವಿಜಯನಗರ ಅರಸರ ಶಾಸನಗಳು’ ಯೋಜನೆಯಲ್ಲಿ ವಿಜಯನಗರ ಅರಸರ ಕನ್ನಡ ಶಾಸನಗಳನ್ನೊಳಗೊಂಡ 3 ಬೃಹತ್ ಸಂಪುಟಗಳನ್ನು ಐಸಿಎಚ್ಆರ್ ಸಂಸ್ಥೆಯಿಂದ ಪ್ರಕಟಿಸಿದ್ದಾರೆ. ವಿಜಯನಗರ ಅರಸರ ಸಂಸ್ಕೃತ ಶಾಸನಗಳ ಸಂಪುಟ ಇತ್ತೀಚಗಷ್ಟೆ ಬಿಡುಗಡೆಯಾಗಿದೆ. ಈ ಸಂಪುಟಗಳು ವಿಜಯನಗರ ಇತಿಹಾಸ ಸಂಸ್ಕೃತಿಯ ಅಧ್ಯಯನಕ್ಕೆ ಆಕರಗಳಾಗಿದೆ.
ಶಾಸನ ಅಧ್ಯಯನ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಭಾರತೀಯ ಪುರಾಭಿಲೇಖ ಪರಿಷತ್ನ ತಾಮ್ರಪತ್ರ ಪ್ರಶಸ್ತಿ, ಬೆಂಗಳೂರಿನ ಮಿಥಿಕ್ ಸೊಸೈಟಿ ಗೌರವ, ಡಾ. ಬಾ.ರಾ. ಗೋಪಾಲ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣ ದೇವರಾಯ ಪಟ್ಟಾಭಿಷೇಕದ 500ನೇ ವರ್ಷ ಸ್ಮರಣಾರ್ಥ ರಾಜ್ಯ ಸರ್ಕಾರದ ಪ್ರಶಸ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ