ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ಹನಿಟ್ರ್ಯಾಪ್… ಹುಷಾರು

ಹನಿಟ್ರ್ಯಾಪ್… ಹುಷಾರು, << ಹನ್ನೆರಡು ತಿಂಗಳ ಅವಧಿಯಲ್ಲಿ 390 ಪ್ರಕರಣ ಬಹಿರಂಗ>>
| ಅವಿನಾಶ ಮೂಡಂಬಿಕಾನ
ಬೆಂಗಳೂರು: ಕೊಲೆ, ಸುಲಿಗೆ, ಕಳ್ಳತನ, ದರೋಡೆ ಪ್ರಕರಣಗಳು ಒಂದೆಡೆ ಯಾದರೆ, ಕರ್ನಾಟಕದಲ್ಲೀಗ ಹನಿಟ್ರ್ಯಾಪ್ ಎಂಬ ಮೋಹದ ಬಲೆಗೆ ಅನೇಕರು ಹಣ-ಮಾನ ಕಳೆದುಕೊಳ್ಳುತ್ತಿದ್ದಾರೆ. ಪ್ರೀತಿ, ಪ್ರೇಮದ ನಾಟಕವಾಡಿ ಪ್ರಣಯದಾಟಕ್ಕೆ ಕರೆದು, ಬ್ಲಾ್ಯಕ್​ವೆುೕಲ್ ಮಾಡಿ ಸುಲಿಗೆ ಮಾಡುವ ದಂಧೆ ರಾಜ್ಯಾದ್ಯಂತ ವ್ಯಾಪಿಸಿದ್ದು, ಕಳೆದ 12 ತಿಂಗಳಲ್ಲಿ 390 ಪ್ರಕರಣಗಳು ಬಹಿರಂಗವಾಗಿವೆ. ನಿತ್ಯಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅನಿವಾರ್ಯವಾಗುತ್ತಿರುವಂತೆಯೇ, ಫೇಸ್ ಟು ಫೇಸ್ ಮಾತನಾಡುವವರಿಗಿಂತ ಫೇಸ್​ಬುಕ್​ನಲ್ಲಿ ಹರಟುವವರೇ ಜಾಸ್ತಿಯಾಗಿದ್ದಾರೆ! ಒಂದೆಡೆ ದುಡ್ಡು ಹೊಡೆಯುವ ಸೈಬರ್ ಕಳ್ಳರ ಕಾಟ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಆನ್​ಲೈನ್ ವೇಶ್ಯಾವಾಟಿಕೆಯ ಮುಂದುವರಿದ ರೂಪವಾಗಿ ಹನಿಟ್ರ್ಯಾಪ್ ಎಂಬ ಬ್ಲ್ಯಾಕ್​ವೆುೕಲ್ ದಂಧೆ ವ್ಯಾಪಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಂಡು ಸಲುಗೆಯಿಂದ ವರ್ತಿಸಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ 2017ರ ಏಪ್ರಿಲ್​ನಿಂದ 2018 ಏ.ವರೆಗೆ 390ಕ್ಕೂ ಅಧಿಕ ಹನಿಟ್ರ್ಯಾಪ್ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಠಾಣೆಗೆ ಬರದೆ ಬೆಳಕಿಗೆ ಬಾರದ ಪ್ರಕರಣ ಅವೆಷ್ಟಿವೆಯೋ ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಪೊಲೀಸರೇ ಹೇಳುತ್ತಾರೆ.
ಭಯವೇ ಬಂಡವಾಳ: ಹನಿಟ್ರ್ಯಾಪ್​ಗೊಳಗಾದವರಲ್ಲಿ ಬಹುತಕರು ಮಾನಕ್ಕೆ ಅಂಜಿ ಠಾಣೆ ಮೆಟ್ಟಿಲೇರುವುದಿಲ್ಲ. ಪೊಲೀಸರ ಬಳಿ ಹೋದರೆ ಸಾರ್ವಜನಿಕವಾಗಿ ಮುಜುಗರಕ್ಕೀಡಾಗಬೇಕೆಂಬ ಆತಂಕದಲ್ಲಿ ಮೋಸ ಹೋದವರು ಸುಮ್ಮನಾಗುವುದರಿಂದ ದಂಧೆಕೋರರ ಹಾವಳಿ ಹೆಚ್ಚಾಗುತ್ತಿವೆ.
ಆನ್​ಲೈನ್ ವೇಶ್ಯಾವಾಟಿಕೆ
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಬಾಂಗ್ಲಾದೇಶ, ನೇಪಾಳ, ಮಧ್ಯಪ್ರದೇಶ ಸೇರಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಆನ್​ಲೈನ್ ವೆಬ್​ಸೈಟ್ ಮೂಲಕ ಗಿರಾಕಿಗಳನ್ನು ಸಂರ್ಪಸಿ ದಂಧೆ ನಡೆಸುತ್ತಾರೆ.
ಆನ್​ಲೈನ್ ಹನಿಟ್ರ್ಯಾಪ್ ಬಗ್ಗೆ ಜನರು ಎಚ್ಚರ ದಿಂದ ಇರಬೇಕು. ಈಚೆಗೆ ಇಂತಹ ಪ್ರಕರಣ ಹೆಚ್ಚುತ್ತಿವೆ. ವಂಚನೆಗೊಳ ಗಾದವರು ಠಾಣೆ ಮೆಟ್ಟಿಲೇರಲು ಹಿಂದೇಟು ಹಾಕುತ್ತಾರೆ.
| ಅಜಯ್ ಹಿಲೋರಿ, ಡಿಸಿಪಿ-ಪೂರ್ವ ವಿಭಾಗ
ಹನಿಟ್ರ್ಯಾಪ್ ದಂಧೆ ಹೇಗೆ?
ಉದ್ಯಮಿಗಳು, ಶ್ರೀಮಂತ ಕುಟುಂಬದ ಮಕ್ಕಳು, ಪ್ರತಿಷ್ಠಿತ ಹುದ್ದೆಯಲ್ಲಿರುವ ಅಧಿಕಾರಿಗಳೇ ವಂಚಕರ ಟಾರ್ಗೆಟ್. ಶ್ರೀಮಂತ ಹಿನ್ನೆಲೆಯವರನ್ನು ಗುರುತಿಸಿ ಫೋನ್, ಫೇಸ್​ಬುಕ್, ವಾಟ್ಸ್​ಆಪ್, ಟ್ವಿಟರ್, ಇನ್ಸ್​ಟಾಗ್ರಾಂಗಳಲ್ಲಿ ಯುವತಿಯರು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಫ್ರೆಂಡ್ ಆದ ಬಳಿಕ ಚಾಟಿಂಗ್ ಮಾಡುತ್ತ ಹತ್ತಿರವಾಗುತ್ತಾರೆ. ಬಳಿಕ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಅನುನಯದ ಮಾತುಗಳ ಮೂಲಕ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಭೇಟಿ ಮಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಸಲುಗೆಯಿಂದ ವರ್ತಿಸುತ್ತಾರೆ, ಏಕಾಂತದ ದೃಶ್ಯಗಳನ್ನು ವಿಡಿಯೋ ಅಥವಾ ಫೋಟೋ ತೆಗೆದುಕೊಳ್ಳುತ್ತಾರೆ. ಬಳಿಕ ಅವುಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟು ಮಾನ ಕಳೆಯುವುದಾಗಿ ಬ್ಲ್ಯಾಕ್​ವೆುೕಲ್ ಮಾಡಿ ಹಣ ಸುಲಿಗೆ ಮಾಡುತ್ತಾರೆ.
ಎಲ್ಲೆಲ್ಲಿದೆ ದಂಧೆ?
ರಾಜ್ಯದಲ್ಲಿ ಆನ್​ಲೈನ್ ಹನಿಟ್ರ್ಯಾಪ್ ದಂಧೆ ಬೆಂಗಳೂರಿನಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಉಳಿದಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೂ ಈ ಜಾಲ ವಿಸ್ತರಿಸಿದೆ ಎಂದು ಪೊಲೀಸರು ಹೇಳುತ್ತಾರೆ.
ರೂಂಗೆ ನುಗ್ಗಿ ಹೆದರಿಸ್ತಾರೆ!
ಸಾಮಾಜಿಕ ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡು ಅರೆನಗ್ನಗೊಳಿಸಿದ ಬಳಿಕ ಮೊದಲೇ ರೂಪಿಸಿದ ಯೋಜನೆಯಂತೆ ಹೊರಗೆ ಕಾಯುತ್ತಿರುವ ಮೂರ್ನಾಲ್ಕು ಸ್ನೇಹಿತರು ಕೊಠಡಿಗೆ ನುಗ್ಗುತ್ತಾರೆ. ಪೊಲೀಸರು, ಪತ್ರಕರ್ತರು ಅಥವಾ ಯಾವುದೋ ಒಂದು ಸಂಘಟನೆ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. ತಾವೇ ಮೊಬೈಲ್​ನಲ್ಲಿ ವಿಡಿಯೋ ಮಾಡಿ ಥಳಿಸಿದ ಬಳಿಕ ಹಣ ಕೊಡದಿದ್ದರೆ ಠಾಣೆಗೆ ಕರೆದೊಯ್ಯುವುದಾಗಿ, ಸುದ್ದಿ ಪ್ರಕಟಿಸುವುದಾಗಿ ಹೆದರಿಸಿ ಹಣ ಸುಲಿಗೆ ಮಾಡುತ್ತಾರೆ.
ಫೋಟೋ ನೋಡಿ ಹೋದೀರಿ!
ಆನ್​ಲೈನ್​ನಲ್ಲಿ ಡೇಟಿಂಗ್ ವೆಬ್​ಸೈಟ್ ತೆರೆದು ಸುಂದರವಾದ ಯುವತಿಯರ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಾರೆ. ಈ ನಂಬರ್​ಗೆ ಸಂರ್ಪಸಿದರೆ ಡೇಟಿಂಗ್​ಗೆ ಬರುವುದಾಗಿ ಹೇಳಿರುತ್ತಾರೆ. ಗ್ರಾಹಕರು ಮಿಸ್ಡ್ ಕಾಲ್ ಕೊಟ್ಟರೆ ಅಥವಾ ಆ ನಂಬರ್​ಗೆ ಕರೆ ಮಾಡಿದರೆ ಇಂಥ ಸ್ಥಳಕ್ಕೆ ಬಂದರೆ ಸಿಗುವುದಾಗಿ ಹೇಳುತ್ತಾರೆ. ಇದನ್ನು ನಂಬಿ ಅಲ್ಲಿಗೆ ಹೋದರೆ ಯಾವುದೋ ಒಂದು ಮನೆಯೊಳಗೆ ಕರೆಸಿಕೊಂಡು ಮೊದಲೇ ಅಲ್ಲಿರುವ ಯುವಕರ ಗುಂಪು ಸುತ್ತುವರಿದು ಜೇಬಲ್ಲಿರುವುದನ್ನೆಲ್ಲ ಸುಲಿಗೆ ಮಾಡಿ ಹೊರದಬ್ಬುತ್ತದೆ. ಮೋಸಕ್ಕೆ ಒಳಗಾದ ವ್ಯಕ್ತಿ ದೂರು ಕೊಡಲು ಠಾಣೆಗೆ ಹೋಗುವುದು ತೀರಾ ಕಡಿಮೆ. ಒಂದು ವೇಳೆ ದೂರು ಕೊಟ್ಟರೂ ಪೊಲೀಸರ ಕೈಗೆ ಸಿಗಬಾರದು ಎಂಬ ಕಾರಣಕ್ಕೆ ಖದೀಮರು ಬೇರೆಬೇರೆ ಹೆಸರಲ್ಲಿ ನಕಲಿ ದಾಖಲಾತಿ ಸಲ್ಲಿಸಿ ಸಿಮ್ಾರ್ಡ್ ಖರೀದಿಸುತ್ತಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
ಇತ್ತೀಚಿನ ಟ್ರ್ಯಾಪ್​​ಗಳು..
ಪರಿಚಿತನಿಗೇ ಸ್ಕೆಚ್!
ಇತ್ತೀಚೆಗೆ ಅರ್ಪಿತಾ ಮಾನ್ವಿತಾ ಎಂಬ ಯುವತಿ ಫೇಸ್​ಬುಕ್​ನಲ್ಲಿ ಚೆಂದದ ಫೋಟೋಗಳನ್ನು ಅಪ್​ಲೋಡ್ ಮಾಡಿದ್ದಳು. ಫೋಟೋ ನೋಡಿ ಯುವಕರು ಲೈಕ್ ಮಾಡುತ್ತಿದ್ದಂತೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಳು. ನಂತರ ಚಾಟಿಂಗ್ ಮೂಲಕ ಸ್ನೇಹ ಸಂಪಾದಿಸಿ, ವಾಟ್ಸ್​ಆಪ್ ನಂಬರ್ ಪಡೆದುಕೊಳ್ಳುತ್ತಿದ್ದಳು. ಕೊನೆಗೆ ಮನೆಗೆ ಕರೆಸಿಕೊಂಡು ಪ್ರಿಯಕರ ಪವನ್ ಕುಮಾರ್ ಮತ್ತು ಆತನ ಸ್ನೇಹಿತ ಸಿದ್ದಾರ್ಥ್ ಜತೆ ಸೇರಿ ಟ್ಯ್ರಾಪ್ ಮಾಡುತ್ತಿದ್ದಳು. ಜು.29ರಂದು ಪರಿಚಿತ ದಯಾನಂದ್ ಎಂಬಾತನನ್ನು ಮನೆಗೆ ಕರೆಸಿದ್ದಳು. ಆಗ ಪವನ್ ಕುಮಾರ್ ಖಾಸಗಿ ವಾಹಿನಿ ವರದಿಗಾರನೆಂದು, ಸಿದ್ಧಾರ್ಥ್ ಪೊಲೀಸ್ ಎಂದು ಮನೆಗೆ  ನುಗ್ಗಿ ದಯಾನಂದ್​ನಿಂದ ಚಿನ್ನದ ಸರ, ಉಂಗುರ ಕಸಿದುಕೊಂಡು, ಆತನ ಎಟಿಎಂ ಕಾರ್ಡ್​ನಿಂದ 55 ಸಾವಿರ ರೂ. ಹಣ ಡ್ರಾ ಮಾಡಿದ್ದರು. ಇನ್ನೂ 1 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದರು. ದಯಾನಂದ ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಈ ತಂಡ ಇನ್ನೂ ಹಲವರಿಗೆ ಬ್ಲಾ್ಯಕ್​ವೆುೕಲ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವೈದ್ಯನಿಗೆ ಬ್ಲ್ಯಾಕ್​ವೆುೕಲ್
2017ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವೈದ್ಯನಿಗೆ ವೆಬ್​ಸೈಟ್​ನಲ್ಲಿ 32 ವರ್ಷದ ವಿವಾಹಿತ ಮಹಿಳೆ ಕವಿತಾ ಎಂಬಾಕೆಯ ಮೊಬೈಲ್ ನಂಬರ್ ಸಿಕ್ಕಿತ್ತು. ಆಕೆಗೆ ಕರೆ ಮಾಡಿದಾಗ ಮಲ್ಲೇಶ್ವರದಲ್ಲಿ ತಾನು ವಾಸ ಮಾಡುತ್ತಿದ್ದ ಅಪಾರ್ಟ್​ವೆುಂಟ್ ವಿಳಾಸ ನೀಡಿ, ಅಲ್ಲಿಗೆ ಬರುವಂತೆ ಸೂಚಿಸಿದ್ದಳು. 50 ವರ್ಷದ ವೈದ್ಯ ಮನೆಗೆ ಹೋಗಿ ಸರಸ-ಸಲ್ಲಾಪದಲ್ಲಿದ್ದಾಗ, ನಾಲ್ವರು ಯುವಕರು ಮನೆಗೆ ನುಗ್ಗಿ ವಿಡಿಯೋವನ್ನು ತೋರಿಸಿ, 5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. ವೈದ್ಯ 1 ಲಕ್ಷ ನೀಡಿದರೂ ವಾರದ ಬಳಿಕ ಪುನಃ 2 ಲಕ್ಷ ರೂ. ಕೇಳಿದ್ದರು. ಕೊನೆಗೆ ವೈದ್ಯ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
3 ಸಾವಿರಕ್ಕೆ ಕರೆದು 3 ಲಕ್ಷಕ್ಕೆ ಬೇಡಿಕೆ2018 ಫೆ.4ರಂದು ಮಂಡ್ಯದ ಉದ್ಯಮಿ ಆನ್​ಲೈನ್​ನಲ್ಲಿ ವೈಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದ ವೆಬ್​ಸೈಟ್ ಪರಿಶೀಲಿಸುತ್ತಿದ್ದಾಗ ಯುವತಿಯೊಬ್ಬಳ ನಂಬರ್ ಸಿಕ್ಕಿತ್ತು. ತಾನು ಒಂಟಿಯಾಗಿದ್ದು, ಹಣದ ಸಮಸ್ಯೆಯಿದೆ ಎಂದು ಈಕೆ ವೆಬ್​ಸೈಟ್​ನಲ್ಲಿ ಬರೆದುಕೊಂಡಿದ್ದಳು. ಉದ್ಯಮಿ ಈಕೆಗೆ ಮಿಸ್ಡ್​ಕಾಲ್ ನೀಡಿದ ಕೆಲವೇ ನಿಮಿಷಗಳಲ್ಲಿ ಈಕೆ ಮರುಕರೆ ಮಾಡಿ ಕೋಣನಕುಂಟೆಯ ಶೋಭಾ ಎಂದು ಪರಿಚಯಿಸಿಕೊಂಡಿದ್ದಳು. ‘ನನಗೆ ಹಣದ ಅವಶ್ಯಕತೆಯಿದೆ. 3 ಸಾವಿರ ರೂ. ನೀಡಿದರೆ ನನ್ನೊಂದಿಗೆ ಕಾಲ ಕಳೆಯಬಹುದು’ ಎಂದು ಹೇಳಿದ್ದಳು. ಮನೆಗೆ ಹೋಗಿ ಆಕೆಯೊಂದಿಗಿದ್ದ ದೃಶ್ಯವನ್ನು ಶೋಭಾ ಸ್ನೇಹಿತ ಆಟೋ ಚಾಲಕ ರಘುವೀರ್ ಮೊಬೈಲ್​ನಲ್ಲಿ ಸೆರೆಹಿಡಿದು 3 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ. ಉದ್ಯಮಿ ತನ್ನ ಬಳಿಯಿದ್ದ 35 ಸಾವಿರ ರೂ. ನೀಡಿ ಅಲ್ಲಿಂದ ತಪ್ಪಿಸಿಕೊಂಡು ಸುಬ್ರಮಣ್ಯಪುರ ಠಾಣೆಗೆ ದೂರು ನೀಡಿದ್ದ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....