ನವದೆಹಲಿ: ರಾಜ್ಯದಲ್ಲಿ ದಶಕಗಳಿಂದ ಮಾರ್ದನಿಸುತ್ತಿದ್ದ ಉತ್ತರ ಕರ್ನಾಟಕದ ಮಹದಾಯಿ ಹೋರಾಟಕ್ಕೆ ಕೊನೆಗೂ ತಕ್ಕಮಟ್ಟಿನ ಸ್ಪಂದನೆ ಸಿಕ್ಕಿದೆ. ಮಹದಾಯಿ ಮತ್ತು ಮಲಪ್ರಭಾ ಕಣಿವೆ ಜನರ ವೇದನೆ ತಣಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವದ ಮುನ್ನಾದಿನವಾದ ಮಂಗಳವಾರ ನ್ಯಾಯಾಧಿಕರಣದಿಂದ ಸಿಹಿ ಸುದ್ದಿ ಹೊರಬಿದ್ದಿದೆ. ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಹದಾಯಿ ನದಿಯಿಂದ ಮಲಪ್ರಭಾ ಕಣಿವೆಗೆ ನೀರು ತಿರುಗಿಸಬಹುದೆಂಬ ಐತಿಹಾಸಿಕ ತೀರ್ವನವನ್ನು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧಿಕರಣ ಪ್ರಕಟಿಸಿದೆ.
ಬಂಡೂರಿ ನಾಲೆಯಿಂದ 2.18 ಟಿಎಂಸಿ, ಕಳಸಾ ನಾಲೆಯಿಂದ 1.72 ಟಿಎಂಸಿ ನೀರನ್ನು ಮಲಪ್ರಭಾಕ್ಕೆ ತಿರುಗಿಸಲು ನ್ಯಾಯಾಧಿಕರಣ ಅವಕಾಶ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಸೇರಿ ಸುತ್ತಮುತ್ತಲಿನ ಭಾಗದ ಜನರಿಗೆ ಕುಡಿಯುವ ಉದ್ದೇಶಕ್ಕಾಗಿ ಈ ನೀರನ್ನು ಬಳಸಿಕೊಳ್ಳಬಹುದಾಗಿದೆ. 3.90 ಟಿಎಂಸಿ ನೀರಿನ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸದಾಗಿ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಧಿಕರಣ ಸಲಹೆ ನೀಡಿದೆ. ಒಟ್ಟು 12 ಸಂಪುಟಗಳಲ್ಲಿ ತೀರ್ಪನ್ನು ಬರೆಯಲಾಗಿದೆ.
2015ರಲ್ಲಿ ನೀರಿನ ಅಭಾವ ಎದುರಾಗಿದ್ದಾಗ ರಾಜ್ಯ ಸರ್ಕಾರ ಇದೇ ಬೇಡಿಕೆ ಮುಂದಿಟ್ಟು, 7.5 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ತಿರುಗಿಸಲು ಅನುಮತಿ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೆ ಪರಿಸರ ಹಾನಿ, ಯೋಜನೆಯ ಸಾಧ್ಯತೆಗಳ ಬಗ್ಗೆ ಅನುಮಾನಪಟ್ಟಿದ್ದ ನ್ಯಾಯಾಧಿಕರಣ ರಾಜ್ಯದ ಬೇಡಿಕೆಯನ್ನು ತಳ್ಳಿಹಾಕಿತ್ತು. ಹಾಗಿದ್ದರೂ, ಅಂತಿಮ ತೀರ್ಪಿನಲ್ಲಿ ರಾಜ್ಯದ ಮನವಿಗೆ ಸಮ್ಮತಿಸಿರುವ ನ್ಯಾಯಾಧಿಕರಣ ಕುಡಿವ ನೀರಿನ ಉದ್ದೇಶಕ್ಕಾಗಿ ಒಂದು ನದಿಯಿಂದ ಮತ್ತೊಂದು ನದಿಯ ನೀರಿನ ತಿರುಗಿಸುವಿಕೆಗೆ ಅನುಮತಿ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಅಂತರ್ ಕಣಿವೆಗೆ ನೀರು ತಿರುಗಿಸಲು ಅವಕಾಶ ನೀಡಲೇಬಾರದು ಎಂದು ಗೋವಾ ಸರ್ಕಾರ ಪ್ರಬಲ ವಾದ ಮಂಡಿಸಿದ್ದರೂ, ಈ ವಿಚಾರದಲ್ಲಿ ಫಾಲಿ ನಾರಿಮನ್ ನೇತೃತ್ವದ ರಾಜ್ಯದ ವಕೀಲರ ತಂಡ ನ್ಯಾಯಾಧಿಕರಣವನ್ನು ತೃಪ್ತಿಪಡಿಸುವಲ್ಲಿ ಯಶಸ್ವಿಯಾಗಿರುವುದು ಎದ್ದುಕಾಣುತ್ತಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಒಂದು ನದಿಯಿಂದ ಮತ್ತೊಂದು ನದಿಗೆ ನೀರು ತಿರುಗಿಸುವ ಯೋಜನೆಗೆ ಇದುವರೆಗೆ ಅನುಮತಿ ಸಿಕ್ಕಿರಲಿಲ್ಲ. ಆದರೆ, ಈ ಜಲವ್ಯಾಜ್ಯದಲ್ಲಿ ನ್ಯಾಯಾಧಿಕರಣ ತೆಗೆದುಕೊಂಡಿರುವ ನಿಲುವು ಬೇರೆ ವ್ಯಾಜ್ಯಗಳ ಮೇಲೂ ಪ್ರಭಾವ ಬೀರುವ ಲಕ್ಷಣಗಳು ಕಂಡುಬಂದಿವೆ.
ಜಲಾಶಯ ನಿರ್ಮಾಣ : ನ್ಯಾಯಾಧಿಕರಣ 8.2 ಟಿಎಂಸಿ ನೀರನ್ನು ಜಲ ವಿದ್ಯುತ್ ಯೋಜನೆಗಳಿಗೆ ನಿಗದಿಪಡಿಸಿರುವುದರಿಂದ ಕರ್ನಾಟಕ-ಗೋವಾ ಗಡಿಭಾಗದಲ್ಲಿ ರಾಜ್ಯ ಸರ್ಕಾರ ಜಲಾಶಯ ನಿರ್ಮಾಣ ಮಾಡುವುದು ಅನಿವಾರ್ಯವಾಗಲಿದೆ. ಗಡಿಭಾಗದಲ್ಲಿ ಜಲಾಶಯ ನಿರ್ವಣಕ್ಕೆ ಪರಿಸರವಾದಿಗಳು, ಗೋವಾ ವಿರೋಧ ವ್ಯಕ್ತಪಡಿಸಿದ್ದರೂ, ಜಲ ವಿದ್ಯುತ್ ಯೋಜನೆಗಳು ಸಾಕಾರಗೊಳ್ಳಲು ಜಲಾಶಯದ ಮೂಲಕ ನೀರು ಸಂಗ್ರಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನ್ಯಾಯಾಧಿಕರಣದ ಕ್ರಮ ರಾಜ್ಯದ ಮಟ್ಟಿಗೆ ಸ್ವಾಗತಾರ್ಹ ಎಂದೇ ವಿಶ್ಲೇಷಿಸಲಾಗುತ್ತಿದೆ.
1979-80ರಲ್ಲಿ ಗುಂಡೂರಾವ್ ಸರ್ಕಾರವಿದ್ದಾಗ ಎಸ್.ಆರ್. ಬೊಮ್ಮಾಯಿ ವಿಪಕ್ಷ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರನ್ನು ಭೇಟಿ ಮಾಡಿದ್ದ ನಿಯೋಗ, ಜಲ ವಿದ್ಯುತ್ ಯೋಜನೆಗೆ ಪರಸ್ಪರ ಒಪ್ಪಿಗೆ ಪಡೆದುಕೊಂಡು, ವಿದ್ಯುತ್ತನ್ನು ಹಂಚಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧದಿಂದಾಗಿ ಈ ಚಿಂತನೆ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ ಈಗ ನ್ಯಾಯಾಧಿಕರಣದ ಈ ಕ್ರಮ ಕೇಂದ್ರ ಪರಿಸರ ಇಲಾಖೆಗೆ ಪರಿಸರ ಸಮ್ಮತಿ ನೀಡಲು ಪೂರಕ ದಾಖಲೆಯಾಗಿ ಪರಿಣಮಿಸಲಿದೆ.
ಗೋವಾ, ಮಹಾ ಪಾಲು
24 ಟಿಎಂಸಿ- ಗೋವಾಗೆ ಸಿಕ್ಕ ಪಾಲು
1.5-ಮಹಾರಾಷ್ಟ್ರ ಬಳಕೆಗೆ ಸಿಕ್ಕಿದ್ದು
ಹೊಸ ಸಂಪ್ರದಾಯ
ಸಾಮಾನ್ಯವಾಗಿ ನ್ಯಾಯಾಧಿಕರಣಗಳು ತಮ್ಮ ಕಚೇರಿಯಲ್ಲೇ ಐತೀರ್ಪನ್ನು ಪ್ರಕಟಿಸುತ್ತವೆ. ಆದರೆ ಮೊದಲ ಬಾರಿಗೆ ಮಹದಾಯಿ ನ್ಯಾಯಾಧಿಕರಣ ಐತೀರ್ಪನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಹಸ್ತಾಂತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಕೇಂದ್ರ ಜಲ ಸಚಿವ ನಿತಿನ್ ಗಡ್ಕರಿ ಅವರನ್ನು ಸಚಿವಾಲಯದಲ್ಲಿ ಭೇಟಿ ಮಾಡಿದ ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ನ್ಯಾಯಪೀಠ ಐತೀರ್ಪಿನ ಕುರಿತ ವಿವರಣೆಗಳನ್ನು ಹಂಚಿಕೊಂಡಿತು. ನಿಗದಿತ ಅವಧಿಯಲ್ಲಿ ತೀರ್ಪು ಪ್ರಕಟಿಸಿದ್ದಕ್ಕೆ ಸಚಿವ ಗಡ್ಕರಿ ನ್ಯಾಯಾಧಿಕರಣಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಹದಾಯಿ ಹನಿ ನೀರಾವರಿ ಯೋಜನೆ ಕುರಿತು ರ್ಚಚಿಸಲು ಬಂದಿದ್ದ ಬೆಂಗಳೂರಿನ ಸಹ್ಯಾದ್ರಿ ಜಲಜನ ಸೊಸೈಟಿ ಸದಸ್ಯರು ಗಡ್ಕರಿ ಅವರನ್ನು ಭೇಟಿ ಮಾಡಿ ಪ್ರಸ್ತಾವನೆಗಳನ್ನು ಸಲ್ಲಿಸಿದರು.
ತೀರ್ಪು ಸಂತಸ ತಂದಿದೆ. ಆದರೆ, ಮಹದಾಯಿ ನೀರು ಮಲಪ್ರಭೆಗೆ ಹರಿಯುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ತೀರ್ಪಿನ ಪ್ರತಿ ತರಿಸಿ ಯಾವ ಯೋಜನೆಗೆ ಎಷ್ಟು ಟಿಎಂಸಿ ನೀರು ಬಿಡಲಾಗಿದೆ ಎಂಬ ಕುರಿತು ತಿಳಿದುಕೊಳ್ಳುತ್ತೇನೆ. ಬಳಿಕ ಹೋರಾಟ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
| ವೀರೇಶ ಸೊಬರದಮಠ, ಅಧ್ಯಕ್ಷ, ರಾಜ್ಯ ರೈತ ಸೇನಾ
ರಾಜ್ಯಕ್ಕೇನು ಲಾಭ?
ಮಹದಾಯಿ ಉಪಕಾಲುವೆಗಳಾದ ಕಳಸಾ, ಬಂಡೂರಿ ಜೋಡಣೆಗೆ ಒಪ್ಪಿಗೆ
ನಾಲೆ ಜೋಡಣೆಯಿಂದ ಉ.ಕರ್ನಾಟಕದ 12 ತಾಲೂಕುಗಳ ನೀರಿನ ಸಮಸ್ಯೆಗೆ ತೆರೆ
ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು ಹಂಚಿಕೆ ಆಗಿರುವುದರಿಂದ ಅಣೆಕಟ್ಟು ನಿರ್ವಣಕ್ಕೆ ಒಪ್ಪಿಗೆ ನೀಡಿದಂತಾಗಿದೆ.
ವಾರ್ಷಿಕ ನೀರಿನ ಲಭ್ಯತೆ
ಕೇಂದ್ರ ಜಲ ಆಯೋಗ ಹೇಳಿದ್ದು : 199.6 ಟಿಎಂಸಿ
ಕರ್ನಾಟಕ : 202 ಟಿಎಂಸಿ
ಗೋವಾ : 113 ಟಿಎಂಸಿ
ಮಹಾರಾಷ್ಟ್ರ: 206 ಟಿಎಂಸಿ
ನ್ಯಾಯಾಧಿಕರಣ ನಿಗದಿಪಡಿಸಿದ್ದು : 188.06 ಟಿಎಂಸಿ
ನ್ಯಾಯಾಧಿಕರಣದ, ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ವಿಸ್ತೃತವಾಗಿ ಅಧ್ಯಯನ ನಡೆಸಿ, ನಂತರ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮಹದಾಯಿ ತೀರ್ಪಿಗೆ ಸಂಬಂಧಿಸಿದ ನ್ಯಾಯಾಧಿ ಕರಣದ 12 ಸಂಪುಟ ಗಳ ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕ ಆದೇಶ ಒಪ್ಪಬೇಕೇ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಬೇಕೇ ಎಂಬುದನ್ನು ನಿರ್ಧರಿಸಲಾಗುವುದು.
| ಮೋಹನ್ ಕಾತರಕಿ, ರಾಜ್ಯದ ಪರ ವಕೀಲ
ಮಹದಾಯಿ ನೀರು ಹಂಚಿಕೆ ಸಂಬಂಧ ಗೋವಾ ಸಿಎಂ ಮನೋಹರ ಪರಿಕ್ಕರ್ಗೆ ಮನವಿ ಮಾಡಿದ್ದೆ. ನೀರಿನ ವಿವಾದ ಬಗೆಹರಿಸಲು ಪರಿಕ್ಕರ್ ಸಮ್ಮತಿಸಿದ್ದರು. ಅಂತೆಯೇ ಈಗ ತೀರ್ಪು ಬಂದಿದೆ. ಈ ಮೂಲಕ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
| ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಗೋವಾಕ್ಕೆ ಹಿನ್ನಡೆ
ಮಹದಾಯಿ ನೀರಿನ ಬಳಕೆ ಕುರಿತ ಮಾಸ್ಟರ್ ಪ್ಲಾ್ಯನ್ನಲ್ಲಿ ಗೋವಾ 94 ಟಿಎಂಸಿ ನೀರಿನ ಅಗತ್ಯದ ಬಗ್ಗೆ ಉಲ್ಲೇಖಿಸಿತ್ತು. ಆದರೆ ಸಮಗ್ರ ಯೋಜನಾ ವರದಿಯಲ್ಲಿ 37 ಟಿಎಂಸಿ ನೀರಿನ ಬಳಕೆಯ ಕುರಿತ ಯೋಜನೆಗಳ ಪಟ್ಟಿಯನ್ನಷ್ಟೇ ನ್ಯಾಯಾಧಿಕರಣಕ್ಕೆ ಸಲ್ಲಿಸಿತ್ತು. ಈ ನಡುವೆ ಮಹದಾಯಿಯಲ್ಲಿ 202 ಟಿಎಂಸಿ ನೀರು ಹರಿಯುತ್ತದೆ ಎಂದು ಕರ್ನಾಟಕ ವರದಿ ನೀಡಿದ ಹಿನ್ನೆಲೆಯಲ್ಲಿ ಗೋವಾ ತನ್ನ ನೀರಿನ ಬೇಡಿಕೆಯನ್ನು 144 ಟಿಎಂಸಿಗೆ ಏರಿಸಿತ್ತು. ಗೋವಾ ಸದ್ಯಕ್ಕೆ ಮಹದಾಯಿ ನೀರನ್ನು ಬಳಸಿಕೊಳ್ಳುತ್ತಿರುವ ಪ್ರಮಾಣ 9 ಟಿಎಂಸಿ ಮಾತ್ರ. ಹೀಗಾಗಿ, ಆ ಪ್ರಸ್ತಾವನೆಯಲ್ಲಿ ಸಾಕಷ್ಟು ಗೊಂದಲಗಳಿದ್ದರಿಂದ ನ್ಯಾಯಾಧಿಕರಣ 24 ಟಿಎಂಸಿಯನ್ನಷ್ಟೇ ಗೋವಾಕ್ಕೆ ನಿಗದಿಪಡಿಸಿದೆ. ಆದರೆ ಕರ್ನಾಟಕ ತನ್ನೆಲ್ಲಾ ಯೋಜನೆಗಳಿಗೆ ನೀರಿನ ಅಗತ್ಯ ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸಿದ್ದರಿಂದ 13.42 ಟಿಎಂಸಿ ನೀರು ಲಭಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.
ಬಂಡೂರಿ ನಾಲೆಯಿಂದ 2.18 ಟಿಎಂಸಿ, ಕಳಸಾ ನಾಲೆಯಿಂದ 1.72 ಟಿಎಂಸಿ ನೀರನ್ನು ಮಲಪ್ರಭಾಕ್ಕೆ ತಿರುಗಿಸಲು ನ್ಯಾಯಾಧಿಕರಣ ಅವಕಾಶ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಸೇರಿ ಸುತ್ತಮುತ್ತಲಿನ ಭಾಗದ ಜನರಿಗೆ ಕುಡಿಯುವ ಉದ್ದೇಶಕ್ಕಾಗಿ ಈ ನೀರನ್ನು ಬಳಸಿಕೊಳ್ಳಬಹುದಾಗಿದೆ. 3.90 ಟಿಎಂಸಿ ನೀರಿನ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸದಾಗಿ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಧಿಕರಣ ಸಲಹೆ ನೀಡಿದೆ. ಒಟ್ಟು 12 ಸಂಪುಟಗಳಲ್ಲಿ ತೀರ್ಪನ್ನು ಬರೆಯಲಾಗಿದೆ.
2015ರಲ್ಲಿ ನೀರಿನ ಅಭಾವ ಎದುರಾಗಿದ್ದಾಗ ರಾಜ್ಯ ಸರ್ಕಾರ ಇದೇ ಬೇಡಿಕೆ ಮುಂದಿಟ್ಟು, 7.5 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ತಿರುಗಿಸಲು ಅನುಮತಿ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಆದರೆ ಪರಿಸರ ಹಾನಿ, ಯೋಜನೆಯ ಸಾಧ್ಯತೆಗಳ ಬಗ್ಗೆ ಅನುಮಾನಪಟ್ಟಿದ್ದ ನ್ಯಾಯಾಧಿಕರಣ ರಾಜ್ಯದ ಬೇಡಿಕೆಯನ್ನು ತಳ್ಳಿಹಾಕಿತ್ತು. ಹಾಗಿದ್ದರೂ, ಅಂತಿಮ ತೀರ್ಪಿನಲ್ಲಿ ರಾಜ್ಯದ ಮನವಿಗೆ ಸಮ್ಮತಿಸಿರುವ ನ್ಯಾಯಾಧಿಕರಣ ಕುಡಿವ ನೀರಿನ ಉದ್ದೇಶಕ್ಕಾಗಿ ಒಂದು ನದಿಯಿಂದ ಮತ್ತೊಂದು ನದಿಯ ನೀರಿನ ತಿರುಗಿಸುವಿಕೆಗೆ ಅನುಮತಿ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಿದೆ.
ಅಂತರ್ ಕಣಿವೆಗೆ ನೀರು ತಿರುಗಿಸಲು ಅವಕಾಶ ನೀಡಲೇಬಾರದು ಎಂದು ಗೋವಾ ಸರ್ಕಾರ ಪ್ರಬಲ ವಾದ ಮಂಡಿಸಿದ್ದರೂ, ಈ ವಿಚಾರದಲ್ಲಿ ಫಾಲಿ ನಾರಿಮನ್ ನೇತೃತ್ವದ ರಾಜ್ಯದ ವಕೀಲರ ತಂಡ ನ್ಯಾಯಾಧಿಕರಣವನ್ನು ತೃಪ್ತಿಪಡಿಸುವಲ್ಲಿ ಯಶಸ್ವಿಯಾಗಿರುವುದು ಎದ್ದುಕಾಣುತ್ತಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಒಂದು ನದಿಯಿಂದ ಮತ್ತೊಂದು ನದಿಗೆ ನೀರು ತಿರುಗಿಸುವ ಯೋಜನೆಗೆ ಇದುವರೆಗೆ ಅನುಮತಿ ಸಿಕ್ಕಿರಲಿಲ್ಲ. ಆದರೆ, ಈ ಜಲವ್ಯಾಜ್ಯದಲ್ಲಿ ನ್ಯಾಯಾಧಿಕರಣ ತೆಗೆದುಕೊಂಡಿರುವ ನಿಲುವು ಬೇರೆ ವ್ಯಾಜ್ಯಗಳ ಮೇಲೂ ಪ್ರಭಾವ ಬೀರುವ ಲಕ್ಷಣಗಳು ಕಂಡುಬಂದಿವೆ.
ಜಲಾಶಯ ನಿರ್ಮಾಣ : ನ್ಯಾಯಾಧಿಕರಣ 8.2 ಟಿಎಂಸಿ ನೀರನ್ನು ಜಲ ವಿದ್ಯುತ್ ಯೋಜನೆಗಳಿಗೆ ನಿಗದಿಪಡಿಸಿರುವುದರಿಂದ ಕರ್ನಾಟಕ-ಗೋವಾ ಗಡಿಭಾಗದಲ್ಲಿ ರಾಜ್ಯ ಸರ್ಕಾರ ಜಲಾಶಯ ನಿರ್ಮಾಣ ಮಾಡುವುದು ಅನಿವಾರ್ಯವಾಗಲಿದೆ. ಗಡಿಭಾಗದಲ್ಲಿ ಜಲಾಶಯ ನಿರ್ವಣಕ್ಕೆ ಪರಿಸರವಾದಿಗಳು, ಗೋವಾ ವಿರೋಧ ವ್ಯಕ್ತಪಡಿಸಿದ್ದರೂ, ಜಲ ವಿದ್ಯುತ್ ಯೋಜನೆಗಳು ಸಾಕಾರಗೊಳ್ಳಲು ಜಲಾಶಯದ ಮೂಲಕ ನೀರು ಸಂಗ್ರಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ನ್ಯಾಯಾಧಿಕರಣದ ಕ್ರಮ ರಾಜ್ಯದ ಮಟ್ಟಿಗೆ ಸ್ವಾಗತಾರ್ಹ ಎಂದೇ ವಿಶ್ಲೇಷಿಸಲಾಗುತ್ತಿದೆ.
1979-80ರಲ್ಲಿ ಗುಂಡೂರಾವ್ ಸರ್ಕಾರವಿದ್ದಾಗ ಎಸ್.ಆರ್. ಬೊಮ್ಮಾಯಿ ವಿಪಕ್ಷ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರನ್ನು ಭೇಟಿ ಮಾಡಿದ್ದ ನಿಯೋಗ, ಜಲ ವಿದ್ಯುತ್ ಯೋಜನೆಗೆ ಪರಸ್ಪರ ಒಪ್ಪಿಗೆ ಪಡೆದುಕೊಂಡು, ವಿದ್ಯುತ್ತನ್ನು ಹಂಚಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪರಿಸರವಾದಿಗಳ ವಿರೋಧದಿಂದಾಗಿ ಈ ಚಿಂತನೆ ಅನುಷ್ಠಾನಕ್ಕೆ ಬಂದಿರಲಿಲ್ಲ. ಆದರೆ ಈಗ ನ್ಯಾಯಾಧಿಕರಣದ ಈ ಕ್ರಮ ಕೇಂದ್ರ ಪರಿಸರ ಇಲಾಖೆಗೆ ಪರಿಸರ ಸಮ್ಮತಿ ನೀಡಲು ಪೂರಕ ದಾಖಲೆಯಾಗಿ ಪರಿಣಮಿಸಲಿದೆ.
ಗೋವಾ, ಮಹಾ ಪಾಲು
24 ಟಿಎಂಸಿ- ಗೋವಾಗೆ ಸಿಕ್ಕ ಪಾಲು
1.5-ಮಹಾರಾಷ್ಟ್ರ ಬಳಕೆಗೆ ಸಿಕ್ಕಿದ್ದು
ಹೊಸ ಸಂಪ್ರದಾಯ
ಸಾಮಾನ್ಯವಾಗಿ ನ್ಯಾಯಾಧಿಕರಣಗಳು ತಮ್ಮ ಕಚೇರಿಯಲ್ಲೇ ಐತೀರ್ಪನ್ನು ಪ್ರಕಟಿಸುತ್ತವೆ. ಆದರೆ ಮೊದಲ ಬಾರಿಗೆ ಮಹದಾಯಿ ನ್ಯಾಯಾಧಿಕರಣ ಐತೀರ್ಪನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಹಸ್ತಾಂತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಕೇಂದ್ರ ಜಲ ಸಚಿವ ನಿತಿನ್ ಗಡ್ಕರಿ ಅವರನ್ನು ಸಚಿವಾಲಯದಲ್ಲಿ ಭೇಟಿ ಮಾಡಿದ ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ನ್ಯಾಯಪೀಠ ಐತೀರ್ಪಿನ ಕುರಿತ ವಿವರಣೆಗಳನ್ನು ಹಂಚಿಕೊಂಡಿತು. ನಿಗದಿತ ಅವಧಿಯಲ್ಲಿ ತೀರ್ಪು ಪ್ರಕಟಿಸಿದ್ದಕ್ಕೆ ಸಚಿವ ಗಡ್ಕರಿ ನ್ಯಾಯಾಧಿಕರಣಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಹದಾಯಿ ಹನಿ ನೀರಾವರಿ ಯೋಜನೆ ಕುರಿತು ರ್ಚಚಿಸಲು ಬಂದಿದ್ದ ಬೆಂಗಳೂರಿನ ಸಹ್ಯಾದ್ರಿ ಜಲಜನ ಸೊಸೈಟಿ ಸದಸ್ಯರು ಗಡ್ಕರಿ ಅವರನ್ನು ಭೇಟಿ ಮಾಡಿ ಪ್ರಸ್ತಾವನೆಗಳನ್ನು ಸಲ್ಲಿಸಿದರು.
ತೀರ್ಪು ಸಂತಸ ತಂದಿದೆ. ಆದರೆ, ಮಹದಾಯಿ ನೀರು ಮಲಪ್ರಭೆಗೆ ಹರಿಯುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ತೀರ್ಪಿನ ಪ್ರತಿ ತರಿಸಿ ಯಾವ ಯೋಜನೆಗೆ ಎಷ್ಟು ಟಿಎಂಸಿ ನೀರು ಬಿಡಲಾಗಿದೆ ಎಂಬ ಕುರಿತು ತಿಳಿದುಕೊಳ್ಳುತ್ತೇನೆ. ಬಳಿಕ ಹೋರಾಟ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
| ವೀರೇಶ ಸೊಬರದಮಠ, ಅಧ್ಯಕ್ಷ, ರಾಜ್ಯ ರೈತ ಸೇನಾ
ರಾಜ್ಯಕ್ಕೇನು ಲಾಭ?
ಮಹದಾಯಿ ಉಪಕಾಲುವೆಗಳಾದ ಕಳಸಾ, ಬಂಡೂರಿ ಜೋಡಣೆಗೆ ಒಪ್ಪಿಗೆ
ನಾಲೆ ಜೋಡಣೆಯಿಂದ ಉ.ಕರ್ನಾಟಕದ 12 ತಾಲೂಕುಗಳ ನೀರಿನ ಸಮಸ್ಯೆಗೆ ತೆರೆ
ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ ನೀರು ಹಂಚಿಕೆ ಆಗಿರುವುದರಿಂದ ಅಣೆಕಟ್ಟು ನಿರ್ವಣಕ್ಕೆ ಒಪ್ಪಿಗೆ ನೀಡಿದಂತಾಗಿದೆ.
ವಾರ್ಷಿಕ ನೀರಿನ ಲಭ್ಯತೆ
ಕೇಂದ್ರ ಜಲ ಆಯೋಗ ಹೇಳಿದ್ದು : 199.6 ಟಿಎಂಸಿ
ಕರ್ನಾಟಕ : 202 ಟಿಎಂಸಿ
ಗೋವಾ : 113 ಟಿಎಂಸಿ
ಮಹಾರಾಷ್ಟ್ರ: 206 ಟಿಎಂಸಿ
ನ್ಯಾಯಾಧಿಕರಣ ನಿಗದಿಪಡಿಸಿದ್ದು : 188.06 ಟಿಎಂಸಿ
ನ್ಯಾಯಾಧಿಕರಣದ, ತೀರ್ಪು 12 ಸಂಪುಟಗಳಷ್ಟಿದ್ದು, ಅದನ್ನು ವಿಸ್ತೃತವಾಗಿ ಅಧ್ಯಯನ ನಡೆಸಿ, ನಂತರ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
| ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಮಹದಾಯಿ ತೀರ್ಪಿಗೆ ಸಂಬಂಧಿಸಿದ ನ್ಯಾಯಾಧಿ ಕರಣದ 12 ಸಂಪುಟ ಗಳ ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕ ಆದೇಶ ಒಪ್ಪಬೇಕೇ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಬೇಕೇ ಎಂಬುದನ್ನು ನಿರ್ಧರಿಸಲಾಗುವುದು.
| ಮೋಹನ್ ಕಾತರಕಿ, ರಾಜ್ಯದ ಪರ ವಕೀಲ
ಮಹದಾಯಿ ನೀರು ಹಂಚಿಕೆ ಸಂಬಂಧ ಗೋವಾ ಸಿಎಂ ಮನೋಹರ ಪರಿಕ್ಕರ್ಗೆ ಮನವಿ ಮಾಡಿದ್ದೆ. ನೀರಿನ ವಿವಾದ ಬಗೆಹರಿಸಲು ಪರಿಕ್ಕರ್ ಸಮ್ಮತಿಸಿದ್ದರು. ಅಂತೆಯೇ ಈಗ ತೀರ್ಪು ಬಂದಿದೆ. ಈ ಮೂಲಕ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ.
| ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಗೋವಾಕ್ಕೆ ಹಿನ್ನಡೆ
ಮಹದಾಯಿ ನೀರಿನ ಬಳಕೆ ಕುರಿತ ಮಾಸ್ಟರ್ ಪ್ಲಾ್ಯನ್ನಲ್ಲಿ ಗೋವಾ 94 ಟಿಎಂಸಿ ನೀರಿನ ಅಗತ್ಯದ ಬಗ್ಗೆ ಉಲ್ಲೇಖಿಸಿತ್ತು. ಆದರೆ ಸಮಗ್ರ ಯೋಜನಾ ವರದಿಯಲ್ಲಿ 37 ಟಿಎಂಸಿ ನೀರಿನ ಬಳಕೆಯ ಕುರಿತ ಯೋಜನೆಗಳ ಪಟ್ಟಿಯನ್ನಷ್ಟೇ ನ್ಯಾಯಾಧಿಕರಣಕ್ಕೆ ಸಲ್ಲಿಸಿತ್ತು. ಈ ನಡುವೆ ಮಹದಾಯಿಯಲ್ಲಿ 202 ಟಿಎಂಸಿ ನೀರು ಹರಿಯುತ್ತದೆ ಎಂದು ಕರ್ನಾಟಕ ವರದಿ ನೀಡಿದ ಹಿನ್ನೆಲೆಯಲ್ಲಿ ಗೋವಾ ತನ್ನ ನೀರಿನ ಬೇಡಿಕೆಯನ್ನು 144 ಟಿಎಂಸಿಗೆ ಏರಿಸಿತ್ತು. ಗೋವಾ ಸದ್ಯಕ್ಕೆ ಮಹದಾಯಿ ನೀರನ್ನು ಬಳಸಿಕೊಳ್ಳುತ್ತಿರುವ ಪ್ರಮಾಣ 9 ಟಿಎಂಸಿ ಮಾತ್ರ. ಹೀಗಾಗಿ, ಆ ಪ್ರಸ್ತಾವನೆಯಲ್ಲಿ ಸಾಕಷ್ಟು ಗೊಂದಲಗಳಿದ್ದರಿಂದ ನ್ಯಾಯಾಧಿಕರಣ 24 ಟಿಎಂಸಿಯನ್ನಷ್ಟೇ ಗೋವಾಕ್ಕೆ ನಿಗದಿಪಡಿಸಿದೆ. ಆದರೆ ಕರ್ನಾಟಕ ತನ್ನೆಲ್ಲಾ ಯೋಜನೆಗಳಿಗೆ ನೀರಿನ ಅಗತ್ಯ ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸಿದ್ದರಿಂದ 13.42 ಟಿಎಂಸಿ ನೀರು ಲಭಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ