ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ನ ಕೇಂದ್ರೀಯ ಮಂಡಳಿಯ ಅರೆಕಾಲಿಕ ನಾನ್ ಅಫೀಷಿಯಲ್ ಡೈರೆಕ್ಟರ್ಗಳಾಗಿ ಆರೆಸ್ಸೆಸ್ ಚಿಂತಕ ಸ್ವಾಮಿನಾಥನ್ ಗುರುಮೂರ್ತಿ (ಎಸ್.ಗುರುಮೂರ್ತಿ) ಮತ್ತು ಸಹಕಾರ ಭಾರತಿ ಎಂಬ ಎನ್ಜಿಒದ ಸಂಸ್ಥಾಪಕ ಸತೀಶ್ ಕಾಶಿನಾಥ್ ಮರಾಠೆ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ. ಇವರ ಅವಧಿ ನಾಲ್ಕು ವರ್ಷಗಳದ್ದು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ನೇಮಕಾತಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ ಸಮಿತಿ ನಿರ್ಣಯ ಕೈಗೊಂಡಿದೆ. ತಮಿಳುನಾಡಿನ ಎಸ್.ಗುರುಮೂರ್ತಿ, ತುಘ್ಲಕ್ ಎಂಬ ತಮಿಳು ನಿಯತಕಾಲಿಕೆಯ ಸಂಪಾದಕರು, ಆರೆಸ್ಸೆಸ್ ಪರಿವಾರ ಸಂಘಟನೆ ಸ್ವದೇಶಿ ಜಾಗರಣ ಮಂಚ್ನ ಸಹಸಂಚಾಲಕ ಹೊಣೆಗಾರಿಕೆಯನ್ನೂ ಹೊಂದಿದ್ದಾರೆ. ಆರ್ಥಿಕ ವಿಚಾರದಲ್ಲಿ ಪರಿಣತರಾಗಿರುವ ಗುರುಮೂರ್ತಿಯವರು, ರಘುರಾಂ ರಾಜನ್ಗೆ ಎರಡನೇ ಅವಧಿ ಯಾಕೆ ನೀಡಬಾರದು ಎಂಬುದು ಸೇರಿ ಆರ್ಬಿಐನ ನೀತಿ, ಅರ್ಥ ವ್ಯವಸ್ಥೆಗಳ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಆರ್ಬಿಐ ಕಾಯ್ದೆ 1934ರ ಸೆಕ್ಷನ್ 8, 1ಸಿ ಪ್ರಕಾರ ಆರ್ಬಿಐನ ಕೇಂದ್ರೀಯ ಮಂಡಳಿಗೆ ಅರೆಕಾಲಿಕ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ನೇಮಕಾತಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ ಸಮಿತಿ ನಿರ್ಣಯ ಕೈಗೊಂಡಿದೆ. ತಮಿಳುನಾಡಿನ ಎಸ್.ಗುರುಮೂರ್ತಿ, ತುಘ್ಲಕ್ ಎಂಬ ತಮಿಳು ನಿಯತಕಾಲಿಕೆಯ ಸಂಪಾದಕರು, ಆರೆಸ್ಸೆಸ್ ಪರಿವಾರ ಸಂಘಟನೆ ಸ್ವದೇಶಿ ಜಾಗರಣ ಮಂಚ್ನ ಸಹಸಂಚಾಲಕ ಹೊಣೆಗಾರಿಕೆಯನ್ನೂ ಹೊಂದಿದ್ದಾರೆ. ಆರ್ಥಿಕ ವಿಚಾರದಲ್ಲಿ ಪರಿಣತರಾಗಿರುವ ಗುರುಮೂರ್ತಿಯವರು, ರಘುರಾಂ ರಾಜನ್ಗೆ ಎರಡನೇ ಅವಧಿ ಯಾಕೆ ನೀಡಬಾರದು ಎಂಬುದು ಸೇರಿ ಆರ್ಬಿಐನ ನೀತಿ, ಅರ್ಥ ವ್ಯವಸ್ಥೆಗಳ ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಆರ್ಬಿಐ ಕಾಯ್ದೆ 1934ರ ಸೆಕ್ಷನ್ 8, 1ಸಿ ಪ್ರಕಾರ ಆರ್ಬಿಐನ ಕೇಂದ್ರೀಯ ಮಂಡಳಿಗೆ ಅರೆಕಾಲಿಕ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ