ಮಾನಸ, ವೇದ ಆರೋಗ್ಯ ಕೇಂದ್ರ, ಶಿರಸಿ
ತತ್ತ್ವಜ್ಞಾನಿ ಹಿಪೋಕ್ರೆಟಿಸ್ರವರು ಆಹಾರವೇ ಔಷಧವಾಗಲಿ, ಔಷಧವು ಆಹಾರವೇ ಆಗಿರಲಿ ಎಂದು ಹೇಳಿರುವುದು ನಮಗೆಲ್ಲ ಗೊತ್ತೇ ಇದೆ. ಸುಮಾರು ಕ್ರಿ.ಪೂ. 400ರಲ್ಲಿಯೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಲು ಇರುವ ಪ್ರಮುಖ ದಾರಿಯನ್ನು ಇವರು ತಿಳಿಸಿದ್ದರು.
ಪೋಷಕಾಂಶಯುಕ್ತ ಪ್ರಕೃತಿದತ್ತ ಆಹಾರವು ಉರಿಯೂತವನ್ನು ಕಡಿಮೆ ಮಾಡುವಲ್ಲಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುವಲ್ಲಿ, ಹೃದಯದ ಕಾರ್ಯಗಳನ್ನು ಸಮತೋಲನದಲ್ಲಿಡುವಲ್ಲಿ, ಜೀರ್ಣಕಾರಿ ಅಂಗಗಳನ್ನು ಪ್ರಚೋದಿಸುವಲ್ಲಿ, ದೇಹಕ್ಕೆ ಬೇಡದ ವಸ್ತುಗಳನ್ನು ಹೊರಹಾಕುವಲ್ಲಿ – ಹೀಗೆ ಎಲ್ಲದರಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಆಹಾರ ಎನ್ನುವುದನ್ನು ನಾವು ದೇಹದೊಳಗೆ ಸೇರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಅವು ಔಷಧಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಅವು ವಿಷವಾಗಿಯೂ ಪರಿಣಮಿಸಬಹುದು.
ಆಹಾರದಲ್ಲಿನ ಆಂಟಿ ಆಕ್ಸಿಡೆಂಟ್ಗಳು, ವಿಟಮಿನ್ನುಗಳು, ಖನಿಜಪದಾರ್ಥಗಳು, ನಾರಿನಂಶ, ಕೊಬ್ಬು, ಸಕ್ಕರೆ ಅಂಶಗಳೆಲ್ಲವೂ ತಮ್ಮದೇ ಕೆಲಸವನ್ನು ನಿರ್ವಹಿಸುತ್ತವೆ. ಇವುಗಳ ಕೊರತೆಯು ಅಥವಾ ಅತೀ ಹೆಚ್ಚುವಿಕೆಯು ತೊಂದರೆಗೆ, ರೋಗಕ್ಕೆ ನಾಂದಿಯಾಗಬಲ್ಲುದು. ಹಾಗಾಗಿ ಸಮತೋಲನ ಆಹಾರವ್ಯವಸ್ಥೆ ಬೇಕು. ಉರಿಯೂತವು ಸಾಕಷ್ಟು ಕಾಯಿಲೆಗಳ ಮೂಲ. ನಮ್ಮ ದೇಹಕ್ಕೆ ವಯಸ್ಸಾಗುವುದನ್ನು ಹೆಚ್ಚಿಸುತ್ತದೆ.
ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ಎಂಟಿ-ಇನ್ಪ್ಲಮೇಟರಿ ಆಹಾರ ಬೇಕು. ಇಂದಿನ ದಿನಗಳಲ್ಲಿ ಹಾಮೋನ್ ವ್ಯತ್ಯಾಸವು ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಅದನ್ನೂ ಸಹ ಆಹಾರದಿಂದಲೇ ನಿರ್ವಹಿಸಲು ಸಾಧ್ಯ. ನಮ್ಮ ದೇಹದ ಪಿ.ಎಚ್. ಪ್ರಮಾಣವು ಸುಮಾರು 7.36ನಷ್ಟಿರಬೇಕು. ಇದರ ಅಸಮತೋಲನವು ಪುನಃ ತೊಂದರೆಗೆ ಕಾರಣ. ನಮ್ಮ ಇತ್ತೀಚಿನ ಆಹಾರಪದ್ಧತಿಯ ಪರಿಣಾಮವು ನಮ್ಮ ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚು ಮಾಡುತ್ತಿದೆ. ಆದ್ದರಿಂದ ಪ್ರಕೃತಿದತ್ತವಾಗಿ ಕ್ಷಾರೀಯ ಗುಣವಿರುವ ಹಣ್ಣುಗಳು, ತರಕಾರಿಗಳು, ನಟ್ಸ್ಗಳನ್ನು ಹೆಚ್ಚು ಸೇವಿಸಬೇಕು.
ತತ್ತ್ವಜ್ಞಾನಿ ಹಿಪೋಕ್ರೆಟಿಸ್ರವರು ಆಹಾರವೇ ಔಷಧವಾಗಲಿ, ಔಷಧವು ಆಹಾರವೇ ಆಗಿರಲಿ ಎಂದು ಹೇಳಿರುವುದು ನಮಗೆಲ್ಲ ಗೊತ್ತೇ ಇದೆ. ಸುಮಾರು ಕ್ರಿ.ಪೂ. 400ರಲ್ಲಿಯೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳಲು ಇರುವ ಪ್ರಮುಖ ದಾರಿಯನ್ನು ಇವರು ತಿಳಿಸಿದ್ದರು.
ಪೋಷಕಾಂಶಯುಕ್ತ ಪ್ರಕೃತಿದತ್ತ ಆಹಾರವು ಉರಿಯೂತವನ್ನು ಕಡಿಮೆ ಮಾಡುವಲ್ಲಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುವಲ್ಲಿ, ಹೃದಯದ ಕಾರ್ಯಗಳನ್ನು ಸಮತೋಲನದಲ್ಲಿಡುವಲ್ಲಿ, ಜೀರ್ಣಕಾರಿ ಅಂಗಗಳನ್ನು ಪ್ರಚೋದಿಸುವಲ್ಲಿ, ದೇಹಕ್ಕೆ ಬೇಡದ ವಸ್ತುಗಳನ್ನು ಹೊರಹಾಕುವಲ್ಲಿ – ಹೀಗೆ ಎಲ್ಲದರಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಆಹಾರ ಎನ್ನುವುದನ್ನು ನಾವು ದೇಹದೊಳಗೆ ಸೇರಿಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ಅವು ಔಷಧಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಅವು ವಿಷವಾಗಿಯೂ ಪರಿಣಮಿಸಬಹುದು.
ಆಹಾರದಲ್ಲಿನ ಆಂಟಿ ಆಕ್ಸಿಡೆಂಟ್ಗಳು, ವಿಟಮಿನ್ನುಗಳು, ಖನಿಜಪದಾರ್ಥಗಳು, ನಾರಿನಂಶ, ಕೊಬ್ಬು, ಸಕ್ಕರೆ ಅಂಶಗಳೆಲ್ಲವೂ ತಮ್ಮದೇ ಕೆಲಸವನ್ನು ನಿರ್ವಹಿಸುತ್ತವೆ. ಇವುಗಳ ಕೊರತೆಯು ಅಥವಾ ಅತೀ ಹೆಚ್ಚುವಿಕೆಯು ತೊಂದರೆಗೆ, ರೋಗಕ್ಕೆ ನಾಂದಿಯಾಗಬಲ್ಲುದು. ಹಾಗಾಗಿ ಸಮತೋಲನ ಆಹಾರವ್ಯವಸ್ಥೆ ಬೇಕು. ಉರಿಯೂತವು ಸಾಕಷ್ಟು ಕಾಯಿಲೆಗಳ ಮೂಲ. ನಮ್ಮ ದೇಹಕ್ಕೆ ವಯಸ್ಸಾಗುವುದನ್ನು ಹೆಚ್ಚಿಸುತ್ತದೆ.
ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿ ಎಂಟಿ-ಇನ್ಪ್ಲಮೇಟರಿ ಆಹಾರ ಬೇಕು. ಇಂದಿನ ದಿನಗಳಲ್ಲಿ ಹಾಮೋನ್ ವ್ಯತ್ಯಾಸವು ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಅದನ್ನೂ ಸಹ ಆಹಾರದಿಂದಲೇ ನಿರ್ವಹಿಸಲು ಸಾಧ್ಯ. ನಮ್ಮ ದೇಹದ ಪಿ.ಎಚ್. ಪ್ರಮಾಣವು ಸುಮಾರು 7.36ನಷ್ಟಿರಬೇಕು. ಇದರ ಅಸಮತೋಲನವು ಪುನಃ ತೊಂದರೆಗೆ ಕಾರಣ. ನಮ್ಮ ಇತ್ತೀಚಿನ ಆಹಾರಪದ್ಧತಿಯ ಪರಿಣಾಮವು ನಮ್ಮ ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚು ಮಾಡುತ್ತಿದೆ. ಆದ್ದರಿಂದ ಪ್ರಕೃತಿದತ್ತವಾಗಿ ಕ್ಷಾರೀಯ ಗುಣವಿರುವ ಹಣ್ಣುಗಳು, ತರಕಾರಿಗಳು, ನಟ್ಸ್ಗಳನ್ನು ಹೆಚ್ಚು ಸೇವಿಸಬೇಕು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ