*|ಡಾ.ಬಿ.ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು*
ವಿದೇಶಗಳಲ್ಲಿ ಅದರಲ್ಲೂ ಅಮೆರಿಕದಂತಹ ದೇಶಗಳಲ್ಲಿ ಮಕ್ಕಳು ಗುಂಡು ಹಾರಿಸಿ ಸಹಪಾಠಿಗಳನ್ನು,
ಶಿಕ್ಷಕರನ್ನು ಕೊಲ್ಲುವುದರ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಭಾರತದಲ್ಲೂ ಅಪರೂಪಕ್ಕೆ
ಇಂತಹ ಘಟನೆಗಳು ವರದಿಯಾಗಿವೆ. ಇದು ಬಹಳ ದುಃಖ ತರುವಂತಹ ಸಂಗತಿ.
ಈ ಬಗ್ಗೆ ಸ್ವಲ್ಪ ಚಿಂತಿಸೋಣ.
ಮುದ್ದು ಮಗುವಿಗೆ ಗೊತ್ತಿರುವುದು ಪ್ರೀತಿ ಮಾತ್ರ. ಅದಕ್ಕೆ ಬೇರೇನೂ ಗೊತ್ತಿಲ್ಲ. ಅಂಥ ಮಗು
ಹೀಗೆ ಕ್ರೂರಿಯಾಗಿ ತನ್ನದೇ ಸಹಪಾಠಿಗಳನ್ನು, ತನ್ನ ಗುರುಗಳನ್ನು ಕೊಲ್ಲುವಂತಹ ಪರಿಸ್ಥಿತಿ
ಯಾಕೆ ಬಂತು? ಇದು ಯೋಚಿಸಬೇಕಾದ ಅಂಶ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ‘ಗುರುಬರ್Åಹ್ಮಾ
ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ
ಗುರವೇ ನಮಃ’, ‘ಆಚಾರ್ಯದೇವೋ ಭವ’ ಎಂದೆಲ್ಲ ಮಕ್ಕಳಿಗೆ ಹೇಳಿಕೊಡುತ್ತೇವೆ. ಆಗ ಗುರುಗಳ
ಬಗ್ಗೆ ಭಯ-ಭಕ್ತಿ ಎರಡೂ ಇತ್ತು. ಈಗ ಬಹಳ ಕಡೆಗಳಲ್ಲಿ ಅದನ್ನು ಹೇಳಿಕೊಡುವುದಿಲ್ಲ. ಹಾಗೆ
ಹೇಳಿಕೊಟ್ಟರೆ ಪ್ರತಿಗಾಮಿಗಳು ಎಂಬ ಅಪವಾದ ಎದುರಿಸಬೇಕಾಗುತ್ತದೆ.
ಈಗ ನಾವು ಬಹಳ ಮುಂದುವರಿದಿದ್ದೇವೆ ಎಂದು ಪಾಶ್ಚಾತ್ಯರು ಭಾವಿಸುತ್ತಾರೆ. ನಮಗೆ ಮಕ್ಕಳ
ಮನಸ್ಸು ಗೊತ್ತು, ನಾವು ಎಲ್ಲ ತಿಳಿದುಕೊಂಡಿದ್ದೇವೆ, ಮನಃಶಾಸ್ತ್ರ ಗೊತ್ತಿದೆ ಎಂದೆಲ್ಲ
ಹೇಳುತ್ತೇವೆ. ಹಾಗಾಗಿ ಹೊಸ ಹೊಸ ಕಾಯಿಲೆಗಳನ್ನು ಹುಟ್ಟುಹಾಕಿದ್ದೇವೆ. ಮಗು ಶಾಲೆಯಲ್ಲಿ
ಶಿಕ್ಷಕರು ಕಲಿಸಿದ್ದನ್ನು ಸರಿಯಾಗಿ ಕೇಳದಿದ್ದರೆ ಅಥವಾ ತರಗತಿಯಲ್ಲಿ ಗಮನ ಹರಿಸದಿದ್ದರೆ,
ಅದರ ಗಮನ ಬೇರೆ ಎಲ್ಲಿಯಾದರೂ ಹೋದರೆ ಅಥವಾ ಅದು ತುಂಬ ಕಷ್ಟದ ಪ್ರಶ್ನೆಯನ್ನು ಕೇಳಿದರೆ
ನಾವು ಕೂಡಲೇ ಮನಶ್ಶಾಸ್ತ್ರಜ್ಞರ ಬಳಿಗೆ ಕಳಿಸುತ್ತೇವೆ.
ಅದಕ್ಕೇ ಈಗ ಅಮೆರಿಕದಲ್ಲಿ ‘ಸ್ಕೂಲ್ ಕೌನ್ಸೆಲರ್ಸ್’ ಇದ್ದಾರೆ. ಅವರು ಈ ಮಕ್ಕಳನ್ನು
ಮಾತಾಡಿಸುತ್ತಾರೆ. ಯಾವ ಮಗು, ತನಗೆ ಶಾಲೆಗೆ ಬರಲು ಆಸಕ್ತಿಯಿಲ್ಲ ಎನ್ನುತ್ತದೆಯೋ ಅದನ್ನು
ಎ.ಡಿ.ಎಚ್.ಡಿ. ಲಕ್ಷಣಗಳಿರುವ ಮಗು ಎಂದು ಗುರುತಿಸುತ್ತಾರೆ. ಹಿಂದಿನ ಕಾಲದ ಬಹಳಷ್ಟು
ಬುದ್ಧಿವಂತರೆಲ್ಲ ಈ ಕಾಯಿಲೆಯುಳ್ಳವರೇ. ಶಾಲೆಯಲ್ಲಿ ಹೇಳಿಕೊಟ್ಟಷ್ಟನ್ನೇ ಕಲಿತರೆ ಅವನು
ಹೆಡ್ಡ, ಸ್ವತಃ ಆಲೋಚನೆ ಮಾಡಿದರೆ ಬುದ್ಧಿವಂತ. ಆದರೆ ಈಗ ಆಲೋಚನೆ ಮಾಡಿದರೆ ಆ ಮಗುವಿಗೆ
ಎ.ಡಿ.ಎಚ್.ಡಿ. ಇದೆ ಎಂದುಬಿಡುತ್ತಾರೆ. ಹಾಗಾಗಿ ಈ ಲಕ್ಷಣಗಳು ಕಾಣಿಸಿದ ಕೂಡಲೇ
ಮನಃಶಾಸ್ತ್ರಜ್ಞರ ಬಳಿಗೆ ಕಳಿಸಿಬಿಡುತ್ತಾರೆ. ಅಲ್ಲಿ ಹೋದ ತಕ್ಷಣ ಅವರು ಔಷಧ ಕೊಡುತ್ತಾರೆ.
ಅಮೆರಿಕದಲ್ಲಿ ನಡೆದ 51 ಗುಂಡಿನ ದಾಳಿಗಳನ್ನು ವಿಶ್ಲೇಷಿಸಲಾಗಿದೆ. ಹೀಗೆ ದಾಳಿ ಮಾಡಿದ
ಪ್ರತೀ ಮಗು ಕೂಡ ಈ ಎ.ಡಿ.ಎಚ್.ಡಿ.ಗೆ, ಖಿನ್ನತೆಗೆ ಔಷಧ ಸೇವಿಸುತ್ತಿತ್ತು. ಈಗ ಕೆಲವು
ದಿನಗಳ ಹಿಂದೆ 17 ಜನರನ್ನು ಕೊಂದ ಒಬ್ಬ ಹುಡುಗನು ಕೂಡ ಈ ಔಷಧ ಸೇವಿಸುತ್ತಿದ್ದ. ಅಲ್ಲದೆ
ಅಮೆರಿಕದಲ್ಲಿ ಗನ್ ಖರೀದಿಸುವುದೂ ಸುಲಭ. ಮಗುವೇ ಖರೀದಿಸದಿದ್ದರೂ ಬಹುತೇಕರ ಮನೆಗಳಲ್ಲಿ ಗನ್
ಇದ್ದೇ ಇರುತ್ತದೆ. ಮಕ್ಕಳು ತಂದೆ-ತಾಯಿಯ ಗನ್ ಹಿಡಿದುಕೊಂಡು ಶಾಲೆಗೆ ಬರುತ್ತಾರೆ. ಈ
ಪ್ರವೃತ್ತಿ ನಿಧಾನವಾಗಿ ಭಾರತಕ್ಕೂ ಬರುತ್ತಿದೆ ಎಂಬುದು ದುಃಖದ ವಿಚಾರ.
ಒಂದು ವರ್ಷದ ಹಿಂದೆ ದೆಹಲಿ ಶಾಲೆಯಲ್ಲಿ ಮನೆಯಿಂದ ಗನ್ ತಂದ ಮಗು ಹಲವರನ್ನು ಸಾಯಿಸಿತು.
ನಮ್ಮ ದೇಶದಲ್ಲಿ ಗನ್ ಖರೀದಿ ಸುಲಭವಲ್ಲ. ಇರಲಿ, ಇಷ್ಟಾದರೂ ಎ.ಡಿ.ಎಚ್.ಡಿ. ಲಕ್ಷಣ
ಕಂಡುಬಂದರೆ ಮಗುವನ್ನು ಮನೋವೈದ್ಯರ ಬಳಿಗೆ ಕಳಿಸಿ ಔಷಧ ಕೊಡುವ ಪ್ರಯತ್ನ ಮಾಡುತ್ತೇವೆ.
ಆದರೆ ಒಂದು ಸಂಗತಿಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಎಲ್ಲ ಕಾಯಿಲೆಗಳು ಇದ್ದರೂ
ಅದು ಇರುವುದು ಮನಸ್ಸಿನಲ್ಲಿ. ಆದರೆ ಈ ಮನಸ್ಸು ಎಂಬುದು ಮಿದುಳು ಅಥವಾ ಯಾವುದೇ ಒಂದು
ನಿರ್ದಿಷ್ಟ ಅಂಗದಲ್ಲಿಲ್ಲ. ಹೀಗಾಗಿ ನಾವು ಕೆಮಿಕಲ್ ಮದ್ದುಗಳನ್ನು ನೀಡಿ ಮನಸ್ಸನ್ನು
ಸರಿಪಡಿಸಲು ಸಾಧ್ಯವಿಲ್ಲ. ಮನಸ್ಸು ಎಂದರೆ ನಮ್ಮ ಪ್ರಜ್ಞೆ (ಟ್ಞಠ್ಚಜಿಟ್ಠಠ್ಞಛಿಠಠ).
ಅದಕ್ಕೆ ಯಾವುದೇ ಕೆಮಿಕಲ್ ಹೋಗುವುದಿಲ್ಲ.
ವಿದೇಶಗಳಲ್ಲಿ ಅದರಲ್ಲೂ ಅಮೆರಿಕದಂತಹ ದೇಶಗಳಲ್ಲಿ ಮಕ್ಕಳು ಗುಂಡು ಹಾರಿಸಿ ಸಹಪಾಠಿಗಳನ್ನು,
ಶಿಕ್ಷಕರನ್ನು ಕೊಲ್ಲುವುದರ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಭಾರತದಲ್ಲೂ ಅಪರೂಪಕ್ಕೆ
ಇಂತಹ ಘಟನೆಗಳು ವರದಿಯಾಗಿವೆ. ಇದು ಬಹಳ ದುಃಖ ತರುವಂತಹ ಸಂಗತಿ.
ಈ ಬಗ್ಗೆ ಸ್ವಲ್ಪ ಚಿಂತಿಸೋಣ.
ಮುದ್ದು ಮಗುವಿಗೆ ಗೊತ್ತಿರುವುದು ಪ್ರೀತಿ ಮಾತ್ರ. ಅದಕ್ಕೆ ಬೇರೇನೂ ಗೊತ್ತಿಲ್ಲ. ಅಂಥ ಮಗು
ಹೀಗೆ ಕ್ರೂರಿಯಾಗಿ ತನ್ನದೇ ಸಹಪಾಠಿಗಳನ್ನು, ತನ್ನ ಗುರುಗಳನ್ನು ಕೊಲ್ಲುವಂತಹ ಪರಿಸ್ಥಿತಿ
ಯಾಕೆ ಬಂತು? ಇದು ಯೋಚಿಸಬೇಕಾದ ಅಂಶ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ‘ಗುರುಬರ್Åಹ್ಮಾ
ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ
ಗುರವೇ ನಮಃ’, ‘ಆಚಾರ್ಯದೇವೋ ಭವ’ ಎಂದೆಲ್ಲ ಮಕ್ಕಳಿಗೆ ಹೇಳಿಕೊಡುತ್ತೇವೆ. ಆಗ ಗುರುಗಳ
ಬಗ್ಗೆ ಭಯ-ಭಕ್ತಿ ಎರಡೂ ಇತ್ತು. ಈಗ ಬಹಳ ಕಡೆಗಳಲ್ಲಿ ಅದನ್ನು ಹೇಳಿಕೊಡುವುದಿಲ್ಲ. ಹಾಗೆ
ಹೇಳಿಕೊಟ್ಟರೆ ಪ್ರತಿಗಾಮಿಗಳು ಎಂಬ ಅಪವಾದ ಎದುರಿಸಬೇಕಾಗುತ್ತದೆ.
ಈಗ ನಾವು ಬಹಳ ಮುಂದುವರಿದಿದ್ದೇವೆ ಎಂದು ಪಾಶ್ಚಾತ್ಯರು ಭಾವಿಸುತ್ತಾರೆ. ನಮಗೆ ಮಕ್ಕಳ
ಮನಸ್ಸು ಗೊತ್ತು, ನಾವು ಎಲ್ಲ ತಿಳಿದುಕೊಂಡಿದ್ದೇವೆ, ಮನಃಶಾಸ್ತ್ರ ಗೊತ್ತಿದೆ ಎಂದೆಲ್ಲ
ಹೇಳುತ್ತೇವೆ. ಹಾಗಾಗಿ ಹೊಸ ಹೊಸ ಕಾಯಿಲೆಗಳನ್ನು ಹುಟ್ಟುಹಾಕಿದ್ದೇವೆ. ಮಗು ಶಾಲೆಯಲ್ಲಿ
ಶಿಕ್ಷಕರು ಕಲಿಸಿದ್ದನ್ನು ಸರಿಯಾಗಿ ಕೇಳದಿದ್ದರೆ ಅಥವಾ ತರಗತಿಯಲ್ಲಿ ಗಮನ ಹರಿಸದಿದ್ದರೆ,
ಅದರ ಗಮನ ಬೇರೆ ಎಲ್ಲಿಯಾದರೂ ಹೋದರೆ ಅಥವಾ ಅದು ತುಂಬ ಕಷ್ಟದ ಪ್ರಶ್ನೆಯನ್ನು ಕೇಳಿದರೆ
ನಾವು ಕೂಡಲೇ ಮನಶ್ಶಾಸ್ತ್ರಜ್ಞರ ಬಳಿಗೆ ಕಳಿಸುತ್ತೇವೆ.
ಅದಕ್ಕೇ ಈಗ ಅಮೆರಿಕದಲ್ಲಿ ‘ಸ್ಕೂಲ್ ಕೌನ್ಸೆಲರ್ಸ್’ ಇದ್ದಾರೆ. ಅವರು ಈ ಮಕ್ಕಳನ್ನು
ಮಾತಾಡಿಸುತ್ತಾರೆ. ಯಾವ ಮಗು, ತನಗೆ ಶಾಲೆಗೆ ಬರಲು ಆಸಕ್ತಿಯಿಲ್ಲ ಎನ್ನುತ್ತದೆಯೋ ಅದನ್ನು
ಎ.ಡಿ.ಎಚ್.ಡಿ. ಲಕ್ಷಣಗಳಿರುವ ಮಗು ಎಂದು ಗುರುತಿಸುತ್ತಾರೆ. ಹಿಂದಿನ ಕಾಲದ ಬಹಳಷ್ಟು
ಬುದ್ಧಿವಂತರೆಲ್ಲ ಈ ಕಾಯಿಲೆಯುಳ್ಳವರೇ. ಶಾಲೆಯಲ್ಲಿ ಹೇಳಿಕೊಟ್ಟಷ್ಟನ್ನೇ ಕಲಿತರೆ ಅವನು
ಹೆಡ್ಡ, ಸ್ವತಃ ಆಲೋಚನೆ ಮಾಡಿದರೆ ಬುದ್ಧಿವಂತ. ಆದರೆ ಈಗ ಆಲೋಚನೆ ಮಾಡಿದರೆ ಆ ಮಗುವಿಗೆ
ಎ.ಡಿ.ಎಚ್.ಡಿ. ಇದೆ ಎಂದುಬಿಡುತ್ತಾರೆ. ಹಾಗಾಗಿ ಈ ಲಕ್ಷಣಗಳು ಕಾಣಿಸಿದ ಕೂಡಲೇ
ಮನಃಶಾಸ್ತ್ರಜ್ಞರ ಬಳಿಗೆ ಕಳಿಸಿಬಿಡುತ್ತಾರೆ. ಅಲ್ಲಿ ಹೋದ ತಕ್ಷಣ ಅವರು ಔಷಧ ಕೊಡುತ್ತಾರೆ.
ಅಮೆರಿಕದಲ್ಲಿ ನಡೆದ 51 ಗುಂಡಿನ ದಾಳಿಗಳನ್ನು ವಿಶ್ಲೇಷಿಸಲಾಗಿದೆ. ಹೀಗೆ ದಾಳಿ ಮಾಡಿದ
ಪ್ರತೀ ಮಗು ಕೂಡ ಈ ಎ.ಡಿ.ಎಚ್.ಡಿ.ಗೆ, ಖಿನ್ನತೆಗೆ ಔಷಧ ಸೇವಿಸುತ್ತಿತ್ತು. ಈಗ ಕೆಲವು
ದಿನಗಳ ಹಿಂದೆ 17 ಜನರನ್ನು ಕೊಂದ ಒಬ್ಬ ಹುಡುಗನು ಕೂಡ ಈ ಔಷಧ ಸೇವಿಸುತ್ತಿದ್ದ. ಅಲ್ಲದೆ
ಅಮೆರಿಕದಲ್ಲಿ ಗನ್ ಖರೀದಿಸುವುದೂ ಸುಲಭ. ಮಗುವೇ ಖರೀದಿಸದಿದ್ದರೂ ಬಹುತೇಕರ ಮನೆಗಳಲ್ಲಿ ಗನ್
ಇದ್ದೇ ಇರುತ್ತದೆ. ಮಕ್ಕಳು ತಂದೆ-ತಾಯಿಯ ಗನ್ ಹಿಡಿದುಕೊಂಡು ಶಾಲೆಗೆ ಬರುತ್ತಾರೆ. ಈ
ಪ್ರವೃತ್ತಿ ನಿಧಾನವಾಗಿ ಭಾರತಕ್ಕೂ ಬರುತ್ತಿದೆ ಎಂಬುದು ದುಃಖದ ವಿಚಾರ.
ಒಂದು ವರ್ಷದ ಹಿಂದೆ ದೆಹಲಿ ಶಾಲೆಯಲ್ಲಿ ಮನೆಯಿಂದ ಗನ್ ತಂದ ಮಗು ಹಲವರನ್ನು ಸಾಯಿಸಿತು.
ನಮ್ಮ ದೇಶದಲ್ಲಿ ಗನ್ ಖರೀದಿ ಸುಲಭವಲ್ಲ. ಇರಲಿ, ಇಷ್ಟಾದರೂ ಎ.ಡಿ.ಎಚ್.ಡಿ. ಲಕ್ಷಣ
ಕಂಡುಬಂದರೆ ಮಗುವನ್ನು ಮನೋವೈದ್ಯರ ಬಳಿಗೆ ಕಳಿಸಿ ಔಷಧ ಕೊಡುವ ಪ್ರಯತ್ನ ಮಾಡುತ್ತೇವೆ.
ಆದರೆ ಒಂದು ಸಂಗತಿಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಎಲ್ಲ ಕಾಯಿಲೆಗಳು ಇದ್ದರೂ
ಅದು ಇರುವುದು ಮನಸ್ಸಿನಲ್ಲಿ. ಆದರೆ ಈ ಮನಸ್ಸು ಎಂಬುದು ಮಿದುಳು ಅಥವಾ ಯಾವುದೇ ಒಂದು
ನಿರ್ದಿಷ್ಟ ಅಂಗದಲ್ಲಿಲ್ಲ. ಹೀಗಾಗಿ ನಾವು ಕೆಮಿಕಲ್ ಮದ್ದುಗಳನ್ನು ನೀಡಿ ಮನಸ್ಸನ್ನು
ಸರಿಪಡಿಸಲು ಸಾಧ್ಯವಿಲ್ಲ. ಮನಸ್ಸು ಎಂದರೆ ನಮ್ಮ ಪ್ರಜ್ಞೆ (ಟ್ಞಠ್ಚಜಿಟ್ಠಠ್ಞಛಿಠಠ).
ಅದಕ್ಕೆ ಯಾವುದೇ ಕೆಮಿಕಲ್ ಹೋಗುವುದಿಲ್ಲ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ