*ಸಿ.ಎ.ಮುರಳೀಧರ್ ಗೌರಿಬಿದನೂರು*
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ 13 ಕೇಂದ್ರೀಯ ವಿದ್ಯಾಲಯಗಳ ಆರಂಭಿಸಲು
ನಿರ್ಧರಿಸಿದ್ದು, ಇದರಲ್ಲಿ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರ ತವರು ಗೌರಿಬಿದನೂರಿನ
ಕುಡುಮಲಕುಂಟೆಯೂ ಒಂದಾಗಿದೆ.
ಗಡಿ ನಾಡಿನಲ್ಲಿ ಉತ್ತಮ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಗ್ರಾಮೀಣ ಮಕ್ಕಳಿಗೆ
ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರ ಆಶಯವಾಗಿತ್ತು.
ಈಗಾಗಲೇ ತಾಲೂಕಿನಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ವಿಜ್ಞಾನ ಪಾರ್ಕ್
ನಿರ್ವಿುಸಲಾಗುತ್ತಿದ್ದು, ಇದೀಗ ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ತಾಲೂಕಿನ
ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.
*ವರ್ಷದ ಪ್ರಯತ್ನಕ್ಕೆ ಫಲ: *2017ರಲ್ಲಿ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ
ಎನ್.ಎಚ್.ಶಿವಶಂಕರರೆಡ್ಡಿ ತಾಲೂಕಿಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ಕೇಂದ್ರ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ಗೆ ಮನವಿ ಸಲ್ಲಿಸಿದ್ದರು. ಬಳಿಕ
ಕೇಂದ್ರೀಯ ವಿದ್ಯಾಲಯ ಸಂಘಟನೆಯ ಕೇಂದ್ರ ಕಚೇರಿಯ ಸಮಿತಿ, ಕುಡುಮಲಕುಂಟೆ ಪ್ರದೇಶಕ್ಕೆ ಭೇಟಿ
ನೀಡಿ ವಿದ್ಯಾಲಯ ಸ್ಥಾಪನೆ ಸಾಧ್ಯತೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ
ಸಲ್ಲಿಸಿತ್ತು. ಅದರಂತೆ ಇದೀಗ ಕುಡುಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯಾಲಯ ಮಂಜೂರು
ಮಾಡಲಾಗಿದೆ.
*ಮುಂದಿನ ಶೈಕ್ಷಣಿಕ ಸಾಲಿನಲ್ಲೇ ಆರಂಭ: *ಆಂಧ್ರದ ಗಡಿಗೆ ಹೊಂದಿಕೊಂಡಿರುವ ಕುಡುಮಲಕುಂಟೆ
ಬಳಿ ರಾಜ್ಯ ಸರ್ಕಾರದಿಂದ 500 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗಿದೆ.
ಜಿಟಿಡಿಸಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ
ಪ್ರಾಥಮಿಕ ಹಂತವಾಗಿ ಒಂದರಿಂದ 6ನೇ ತರಗತಿವರೆಗೆ ವಿದ್ಯಾಲಯ ಆರಂಭವಾಗಲಿದೆ.
*ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ಗೌರಿಬಿದನೂರು ತಾಲೂಕಿಗೆ ಕೇಂದ್ರೀಯ ವಿದ್ಯಾಲಯ
ಮಂಜೂರು ಮಾಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿವಂದನೆ ಸಲ್ಲಿಸುತ್ತೇನೆ.
ಈಗಾಗಲೆ ವಿದ್ಯಾಲಯ ಸ್ಥಾಪನೆಗೆ ಅಗತ್ಯವಾದ ಜಾಗ ಗುರುತಿಸಲಾಗಿದ್ದು, ಮುಂದಿನ ಶೈಕ್ಷಣಿಕ
ಸಾಲಿನಿಂದಲೇ ಪ್ರಾರಂಭವಾಗಲಿದೆ.*
*| ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ*
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ 13 ಕೇಂದ್ರೀಯ ವಿದ್ಯಾಲಯಗಳ ಆರಂಭಿಸಲು
ನಿರ್ಧರಿಸಿದ್ದು, ಇದರಲ್ಲಿ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರ ತವರು ಗೌರಿಬಿದನೂರಿನ
ಕುಡುಮಲಕುಂಟೆಯೂ ಒಂದಾಗಿದೆ.
ಗಡಿ ನಾಡಿನಲ್ಲಿ ಉತ್ತಮ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಗ್ರಾಮೀಣ ಮಕ್ಕಳಿಗೆ
ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರ ಆಶಯವಾಗಿತ್ತು.
ಈಗಾಗಲೇ ತಾಲೂಕಿನಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ವಿಜ್ಞಾನ ಪಾರ್ಕ್
ನಿರ್ವಿುಸಲಾಗುತ್ತಿದ್ದು, ಇದೀಗ ಕೇಂದ್ರೀಯ ವಿದ್ಯಾಲಯ ಮಂಜೂರಾಗಿರುವುದು ತಾಲೂಕಿನ
ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.
*ವರ್ಷದ ಪ್ರಯತ್ನಕ್ಕೆ ಫಲ: *2017ರಲ್ಲಿ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ
ಎನ್.ಎಚ್.ಶಿವಶಂಕರರೆಡ್ಡಿ ತಾಲೂಕಿಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ಕೇಂದ್ರ
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ಗೆ ಮನವಿ ಸಲ್ಲಿಸಿದ್ದರು. ಬಳಿಕ
ಕೇಂದ್ರೀಯ ವಿದ್ಯಾಲಯ ಸಂಘಟನೆಯ ಕೇಂದ್ರ ಕಚೇರಿಯ ಸಮಿತಿ, ಕುಡುಮಲಕುಂಟೆ ಪ್ರದೇಶಕ್ಕೆ ಭೇಟಿ
ನೀಡಿ ವಿದ್ಯಾಲಯ ಸ್ಥಾಪನೆ ಸಾಧ್ಯತೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ
ಸಲ್ಲಿಸಿತ್ತು. ಅದರಂತೆ ಇದೀಗ ಕುಡುಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯಾಲಯ ಮಂಜೂರು
ಮಾಡಲಾಗಿದೆ.
*ಮುಂದಿನ ಶೈಕ್ಷಣಿಕ ಸಾಲಿನಲ್ಲೇ ಆರಂಭ: *ಆಂಧ್ರದ ಗಡಿಗೆ ಹೊಂದಿಕೊಂಡಿರುವ ಕುಡುಮಲಕುಂಟೆ
ಬಳಿ ರಾಜ್ಯ ಸರ್ಕಾರದಿಂದ 500 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗಿದೆ.
ಜಿಟಿಡಿಸಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ
ಪ್ರಾಥಮಿಕ ಹಂತವಾಗಿ ಒಂದರಿಂದ 6ನೇ ತರಗತಿವರೆಗೆ ವಿದ್ಯಾಲಯ ಆರಂಭವಾಗಲಿದೆ.
*ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ಗೌರಿಬಿದನೂರು ತಾಲೂಕಿಗೆ ಕೇಂದ್ರೀಯ ವಿದ್ಯಾಲಯ
ಮಂಜೂರು ಮಾಡಿದ್ದರಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿವಂದನೆ ಸಲ್ಲಿಸುತ್ತೇನೆ.
ಈಗಾಗಲೆ ವಿದ್ಯಾಲಯ ಸ್ಥಾಪನೆಗೆ ಅಗತ್ಯವಾದ ಜಾಗ ಗುರುತಿಸಲಾಗಿದ್ದು, ಮುಂದಿನ ಶೈಕ್ಷಣಿಕ
ಸಾಲಿನಿಂದಲೇ ಪ್ರಾರಂಭವಾಗಲಿದೆ.*
*| ಎನ್.ಎಚ್.ಶಿವಶಂಕರರೆಡ್ಡಿ, ಕೃಷಿ ಸಚಿವ*
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ