ವಿಷಯಕ್ಕೆ ಹೋಗಿ

**ಜ್ಞಾನ ಕಾರಂಜಿ**::: ವೈದ್ಯಕೀಯ ವರದಿಗಳು ಮತ್ತು ವಾಸ್ತವ, | ಡಾ.ಬಿ.ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು

ಸಕ್ಕರೆಯ ಪ್ರಮಾಣ ಈಗ 100 ಇದ್ದರೆ ಇನ್ನೊಂದು ಗಂಟೆಯಲ್ಲಿ 100 ಆಗಬೇಕು. ಮತ್ತೊಂದು ಗಂಟೆಯಲ್ಲಿ 120 ಆಗಬೇಕು. ರಕ್ತದೊತ್ತಡವೂ ಹಾಗೆಯೇ. ಎಲ್ಲರಿಗೂ ಒಂದೇ ರೀತಿ ಇರಬಾರದು. ಅದು ಕೂಡ ಏರಿಳಿತವಾಗುತ್ತಿರಬೇಕು. ಆದರೆ ಈಗಿನ ಎಷ್ಟೋ ಡಾಕ್ಟರ್​ಗಳು ರಕ್ತದೊತ್ತಡದಲ್ಲಿ ತುಸು ಏರಿಕೆಯಾದರೂ ಸಂಖ್ಯೆಯನ್ನು ತೋರಿಸಿ ಹೆದರಿಸುತ್ತಾರೆ. ಇವೆಲ್ಲ ರೇಖಾನುಕ್ರಮದ ಅಂಕಿಅಂಶಗಳು (ಜ್ಞಿಛಿಚ್ಟ ಠಠಿಚಠಿಜಿಠಠಿಜ್ಚಿಠ). ಬಹಳಷ್ಟು ಸಲ ಈ ರಿಪೋರ್ಟ್​ಗಳಿಗೆ ಅರ್ಥವಿಲ್ಲ. ಇದರಿಂದ ಸುಮ್ಮನೆ ಮನಸ್ಸನ್ನು ಹಾಳುಮಾಡಿಕೊಳ್ಳುತ್ತೇವೆ. ಇಂಥದ್ದಕ್ಕೆ ವೈದ್ಯಜನ್ಯ ಕಾಯಿಲೆ (ಜಿಚಠ್ಟಿಟಜಛ್ಞಿಜ್ಚಿ ಛಜಿಠಛಿಚಠಛಿ) ಎನ್ನುತ್ತಾರೆ. ಇದರಿಂದ ನಾವು ಬಳಲಬೇಕಾಗುತ್ತದೆ. ಕಾಯಿಲೆ ಇದ್ದ ವ್ಯಕ್ತಿಗೆ ಸಂತೋಷದಿಂದ ಔಷಧ ನೀಡಬಲ್ಲೆ, ಆದರೆ ತನಗೆ ಕಾಯಿಲೆ ಇದೆ ಎಂದು ಭಾವಿಸಿಕೊಂಡ ಮನುಷ್ಯನಿಗೆ ಔಷಧ ಕೊಡುವುದು ಬಹಳ ಕಷ್ಟ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ.
ಒಮ್ಮೆ ಪ್ರಸಿದ್ಧ ವಿಮಾನಯಾನ ಸಂಸ್ಥೆಯ ಹಿರಿಯ ಕಮಾಂಡರ್ ಒಬ್ಬರು ನನ್ನನ್ನು ಭೇಟಿಯಾದರು. ಅವರಿಗೆ ವೃತ್ತಿಯಲ್ಲಿ ಬಡ್ತಿ ಸಿಗಬೇಕೆಂದರೆ ನಿಯತವಾಗಿ ಆರೋಗ್ಯ ಪರೀಕ್ಷೆ ಮಾಡಿಸಬೇಕಾಗುತ್ತದೆ. ಹೀಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡರು. ಹೀಗೆ ಸ್ಟ್ರೆಸ್ ಟೆಸ್ಟ್, ಆಂಜಿಯೋಗ್ರಾಮ್ ಮುಂತಾದವುಗಳನ್ನೆಲ್ಲ ಮಾಡಿಸಿದರು. ‘ಎರಡು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ಬೈಪಾಸ್ ಸರ್ಜರಿ ಮಾಡಿಸಿಕೊಂಡು ಬನ್ನಿ. ಅಷ್ಟಾದರೆ ಮಾತ್ರ ಸರ್ಟಿಫೈ ಮಾಡುತ್ತೇನೆ’ ಎಂದರು ವೈದ್ಯರು.
ಈ ರಕ್ತನಾಳ ಹೆಪ್ಪುಗಟ್ಟುವುದಕ್ಕೂ ಹೃದಯಾಘಾತಕ್ಕೂ ಯಾವ ಸಂಬಂಧವೂ ಇಲ್ಲ. ಇರಲಿ. ಐದು ಲಕ್ಷ ಖರ್ಚು ಮಾಡಿ ಬೈಪಾಸ್ ಸರ್ಜರಿ ಮಾಡಿಸಿಕೊಂಡು ಬಂದ ನಂತರ ಆ ವ್ಯಕ್ತಿಗೆ ಹೃದಯಾಘಾತ ಸಂಭವಿಸಿತು. ಅದು ಗುಣವಾದ ಮೇಲೆ ಕೆಲಸಕ್ಕೆ ಹೋದರೆ ಅಲ್ಲಿ, ‘ನಿಮ್ಮ ಛ್ಜಿಛ್ಚಿಠಿಜಿಟ್ಞ fಚ್ಚಠಿಜಿಟ್ಞ (ಹೃದಯದಿಂದ ರಕ್ತ ಸಂಚಾರವಾಗುವ ಪ್ರಮಾಣ) ಕಡಿಮೆ ಇದೆ. ಹಾಗಾಗಿ ನಿಮಗೆ ವಿಮಾನ ಚಾಲನೆ ಸಾಧ್ಯವಿಲ್ಲ. ಅದನ್ನು ಹೆಚ್ಚಿಸಿಕೊಂಡು ಬಂದರೆ ವಿಮಾನಚಾಲನೆ ಮಾಡಬಹುದು’ ಎಂದರು. ಕಮಾಂಡರ್ ಪುಸ್ತಕದಲ್ಲಿ ಆ ಪ್ರಮಾಣ 50 ಆಗಬೇಕು.
49 ಇದ್ದರೂ ವಿಮಾನಚಾಲನೆಗೆ ಅನುಮತಿ ಕೊಡುವುದಿಲ್ಲ. ಹೀಗಾಗಿ ಆ ಕಮಾಂಡರ್ ನನ್ನ ಬಳಿ ಬಂದರು. ‘ನಾನು ಸಾಕಷ್ಟು ಕಡೆಗಳಲ್ಲಿ ಪರೀಕ್ಷೆ ಮಾಡಿಸಿದೆ. ಎಲ್ಲೂ ಏರಿಕೆ ಸಾಧ್ಯವಾಗಲಿಲ್ಲ. ಕೊನೆಗೆ ನಿಮ್ಮ ಬಳಿ ಬಂದರೆ ಸಾಧ್ಯ ಎಂದು ಯಾರೋ ಹೇಳಿದರು. ಅದಕ್ಕೇ ಬಂದೆ’ ಎಂದರು. ‘ನಿಮ್ಮ ಹೃದಯಕ್ಕೆ ಏನಾದರೂ ತೊಂದರೆ ಆಗಿದ್ದರೆ ನಾನು ಪ್ರಯತ್ನಿಸುತ್ತೇನೆ’ ಎಂದು ಹೇಳಿ ಆ ನಿಟ್ಟಿನಲ್ಲಿ ಚಿಕಿತ್ಸೆ ನಡೆಸಿದೆ. ಕೊನೆಗೆ
ಆ ಪ್ರಮಾಣ 49ಕ್ಕೆ ಬಂದು ತಲುಪಿತು. ಆ ವಿವರವನ್ನು ಒಯ್ದರೆ, ಸಂಖ್ಯೆ ಐವತ್ತಕ್ಕೆ ಏರಲಿಲ್ಲ ಎಂಬ ಕಾರಣಕ್ಕೆ ವಿಮಾನಯಾನ ಸಂಸ್ಥೆಯವರು ಮತ್ತೆ ತಿರಸ್ಕರಿಸಿದರು.
‘ರಕ್ತ ಸಂಚಾರವಾಗುವ ಪ್ರಮಾಣ ಎನಿಸಿದ 49ಕ್ಕೂ 50ಕ್ಕೂ ಏನೂ ವ್ಯತ್ಯಾಸವಿಲ್ಲ. ಅದು 50 ಇದ್ದರೂ ಹೃದಯಾಘಾತ ಆಗಬಹುದು. 49 ಆಗಿದ್ದರೂ ಹೃದಯಾಘಾತ ಆಗಬಹುದು. ಈ ವ್ಯಕ್ತಿಯನ್ನು ನೀವು ಕಮಾಂಡರ್ ಮಾಡದಿದ್ದರೆ ಪರವಾಗಿಲ್ಲ. ಕೋ ಪೈಲೆಟ್ ಮಾಡಬಹುದು. ಏನೂ ತೊಂದರೆ ಇಲ್ಲ. ಇವರನ್ನೇ ಕಮಾಂಡರ್ ಮಾಡಿದರೆ 50 ಇದ್ದ ಇನ್ನೊಬ್ಬ ಪೈಲಟ್​ಗೂ ಒತ್ತಡ ಆಯಾಸಗಳಿಂದ ಹೃದಯಾಘಾತ ಸಂಭವಿಸಬಹುದು. ಹಾಗಾಗಿ ದಯವಿಟ್ಟು ಈ ವ್ಯಕ್ತಿಯ ಕೆಲಸವನ್ನು ಕಳೆಯಬೇಡಿ. ಇದು ಅನ್ಯಾಯ’ ಎಂದು ನಾನು ಆ ಸಂಸ್ಥೆಗೆ ಒಂದು ಕಾಗದ ಬರೆದೆ.
ಅದಕ್ಕೆ ಆ ಸಂಸ್ಥೆಯವರೂ ಒಪ್ಪಿ ಆ ವ್ಯಕ್ತಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಆ ವ್ಯಕ್ತಿ ಬಂದು ಅಕ್ಷರಶಃ ಕಾಲು ಹಿಡಿದ ಎನ್ನಬೇಕು. ಏಕೆಂದರೆ ಆ ವ್ಯಕ್ತಿ ವಿಮಾನಚಾಲನೆ ಮಾಡದಿದ್ದರೆ ಸಿಗುವುದ ಕೇವಲ ಮೂವತ್ತು ಸಾವಿರ ರೂ. ಒಮ್ಮೆ ಪೈಲಟ್ ಸೀಟಿನಲ್ಲಿ ಕುಳಿತುಕೊಂಡ ಎಂದಾದರೆ ನಾಲ್ಕು ಲಕ್ಷ ರೂ ಸಿಗುತ್ತದೆ. ವ್ಯತ್ಯಾಸ ಹೇಗಿದೆ ನೋಡಿ? ಹೀಗೆ ಉತ್ಪ್ರೇಕ್ಷಿತ ರಿಪೋರ್ಟ್​ಗಳನ್ನು ನಂಬಿ ಎಷ್ಟೋ ಸಲ ಕಷ್ಟಕ್ಕೀಡಾಗಬೇಕಾಗುತ್ತದೆ. ಎಲ್ಲ ಹಣಕ್ಕಾಗಿ. ಹೀಗಾಗಿ ರಿಪೋರ್ಟ್ ನಂಬಿ ಚಿಕಿತ್ಸೆ ಪಡೆಯುವ ಮುನ್ನ ಯೋಚಿಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

**ಜ್ಞಾನ ಕಾರಂಜಿ**::: ಬೇನಾಮಿ ಆಸ್ತಿ ಪ್ರಕರಣ ವಿಲೇವಾರಿಗೆ ನ್ಯಾಯಾಧಿಕರಣ,

ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್​ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್​ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್​ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...

**ಜ್ಞಾನ ಕಾರಂಜಿ**::: ★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು

1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ. 2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ. 3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ. 4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ. 5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ. 6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ. 7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ. 8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ. 9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ. 10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ. 11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ. 12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ. 13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ. 14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ. 15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ. 16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ. 1...

.. ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯ ಮೀಮಾಂಸೆ ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗಿ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿತರು ಮತ್ತು ವಿಮರ್ಶಕರು ಸಾಹಿತ್ಯದಲ್ಲಿ ಸೌಂದರ್ಯ ಅರಸಿ ಈ ಚಿತ್ತ ಸಂಸ್ಕರಣ ಶಾಸ್ತ್ರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಕ್ರಿ. ಪೂ. 6ನೆಯ ಶತಮಾನದಲ್ಲಿದ ಯಾಸ್ಕಾಚಾರ್ಯ ಉಪಮೆ ರೂಪಕಗಳ ಬಗ್ಗೆ ಉಲ್ಲೇಖಸಿದ್ದಾನೆ. ಕ್ರಿ. ಪೂ. 5ನೆಯ ಶತಕದ ವೇಳೆಗೆ ಪಾಣಿನಿ ನಟರ ವಿಷಯ ಪ್ರಸ್ತಾಪಿಸಿದ್ದಾನೆ. ವೇದಗಳ ಕಾಲದಲ್ಲೂ ಉಪಮಾ ರೂಪಕಾದಿಗಳ ಪ್ರಯೋಗವಿದೆ. ಋಗ್ವೇದದಲ್ಲಿ ಕಂಡುಬರುವ ಯಮಯಮಿಯರ ಸಂವಾದ, ಊರ್ವಶೀ ಪುರೂರವರ ಸಂವಾದ_ಇವುಗಳಿಂದ ವೇದಕಾಲದಲ್ಲಿ ನಾಟಕದ ಅಂಕುರಾರ್ಪಣವಿದ್ದಂತಿದೆ....