ದೇಶದ 72ನೇ ವರ್ಷದ ಸ್ವಾತಂತ್ರ್ಯೊತ್ಸವ ಆಚರಿಸುತ್ತಿದ್ದೇವೆ. ಈ 72 ವರ್ಷಗಳಲ್ಲಿ ವಿಶ್ವದಲ್ಲಿ ಅನೇಕ ಬದಲಾವಣೆಗಳು ಆಗಿರಬಹುದು. ಆದರೆ, ನಮ್ಮ ದೇಶದಲ್ಲಿ ಆಗಿರುವ ಪ್ರಗತಿ, ಸಾಧನೆ, ಬದಲಾವಣೆ ಗಮನಾರ್ಹ. 70 ವರ್ಷ ಹಿಂದೆ ನಮ್ಮ ದೇಶ ಎಷ್ಟು ಹಿಂದುಳಿದಿತ್ತು? ಬೇರೆ ದೇಶಗಳ ಜತೆ ಹೋಲಿಕೆ ಮಾಡುವಾಗ ಎಷ್ಟು ಬಡತನದಲ್ಲಿತ್ತು ಎಂಬುದನ್ನೆಲ್ಲ ಗಮನಿಸಿದಾಗ, ನಾವು ನಮ್ಮ ದೇಶದ ಗೌರವ ಹೆಚ್ಚಿಸಿಕೊಂಡಿದ್ದೇವೆ; ಪ್ರಗತಿ ಸಾಧಿಸಿದ್ದೇವೆ ಮತ್ತು ಎಲ್ಲ ರೀತಿಯಿಂದಲೂ ಭಾರತೀಯರೆಲ್ಲರು ತಲೆಯೆತ್ತಿ ನಿಲ್ಲುವಂತೆ ಆಗಿದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವುದರಿಂದ ವಿದ್ಯಾಸಂಸ್ಥೆಗಳನ್ನು ತೆರೆದು, ಸಾಮಾನ್ಯ ವರ್ಗ, ಬಡವರ್ಗದಿಂದ ಹಿಡಿದು ಎಲ್ಲ ವರ್ಗದವರಿಗೂ ಶಿಕ್ಷಣದ ಅವಕಾಶ ದೊರೆತು ಉನ್ನತ ಶಿಕ್ಷಣ, ಉನ್ನತ ಅವಕಾಶ ಲಭಿಸುವಂತಾಗಿದೆ. ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಪಡೆಯುವಂತಾಗಿದೆ. ಇಂದು ವಿಶ್ವದ ಎಲ್ಲೇ ಆದರೂ ಭಾರತೀಯ ಇಂಜಿನಿಯರ್ಗಳು, ವೈದ್ಯರು, ವಿದ್ಯಾರ್ಥಿಗಳು ದುಡಿಮೆಗಾರರು ಇಲ್ಲದಿದ್ದರೆ, ಶೂನ್ಯ ವಾತಾವರಣ ಸೃಷ್ಟಿಯಾಗುವ ಮಟ್ಟಕ್ಕೆ ಬಂದಿದೆ. ಹಾಗಾಗಿ ನಮ್ಮ ಮುಂದಿನ ಗುರಿ ಇನ್ನೂ ಸ್ಪಷ್ಟವಾಗಿರಲಿ. ನಮ್ಮ ಪ್ರಗತಿಯ ವೇಗ ತೀವ್ರವಾಗಲಿ. ಪ್ರಗತಿ ತೀವ್ರವಾದಷ್ಟು ಸಮಾಜ ಅದಕ್ಕೆ ಸ್ಪಂದಿಸಬೇಕು. ವಿಶೇಷವಾಗಿ ಯುವ ಸಮಾಜ ಸ್ಪಂದಿಸಬೇಕು. ಪ್ರತಿಯೊಬ್ಬ ಪ್ರಜೆಯೂ ನಾನು ಹೆಮ್ಮೆಯ ಭಾರತೀಯ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ದೇಶದ ಪ್ರಗತಿಯಲ್ಲಿ ನನ್ನ ಪಾಲು ಏನಿದೆ ಎಂಬುದನ್ನು ಚಿಂತಿಸಬೇಕು. ದೇಶದ ಪ್ರಗತಿಗೆ ನಾನೂ ಕೊಡುಗೆ ಕೊಡುತ್ತೇನೆ ಎಂಬ ವಚನ ಸ್ವೀಕರಿಸಬೇಕು. ಆಗ ಖಂಡಿತವಾಗಿಯೂ ದೇಶ ಕಟ್ಟುವ ಕೆಲಸವಾಗುತ್ತದೆ. ಈ ದಿಸೆಯಲ್ಲಿ ಮುಂದಿನ ದಿನಗಳು ಬಹಳ ಅಮೂಲ್ಯವಾಗಿವೆ. ನಾವು ಎಚ್ಚೆತ್ತುಕೊಳ್ಳೋಣ, ಎದ್ದೇಳೋಣ ಮತ್ತು ಮುಂದಿನ ದಿನಗಳಲ್ಲಿ ಭಾರತವನ್ನು ವಿಶ್ವದಲ್ಲೇ ಶ್ರೇಷ್ಠ ಮಾಡುವ ಗುರಿಯನ್ನಿಟ್ಟುಕೊಂಡು, ಸಾಧಿಸೋಣ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲಿರಲಿ ಎಂದು ಹಾರೈಸುತ್ತ ಎಲ್ಲರಿಗೂ ಸ್ವಾತಂತ್ರ್ಯೊತ್ಸವದ ಶುಭಾಶಯಗಳು.
ಬೇನಾಮಿ ಆಸ್ತಿ ವ್ಯವಹಾರಗಳ ಪ್ರಕರಣಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಪ್ರಾಧಿಕಾರ ಹಾಗೂ ಮೇಲ್ಮನವಿ ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇವೆರಡು ಸಂಸ್ಥೆಗಳ ರಚನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ 34 ವಿಶೇಷ ನ್ಯಾಯಾಲಯಗಳನ್ನು ಆರಂಭಿಸಲಾಗಿದ್ದು, ನೂತನವಾಗಿ ರಚನೆಯಾಗಿರುವ ಸಂಸ್ಥೆಗಳು ಇದಕ್ಕೆ ಪೂರಕವಾಗಿರಲಿವೆ. ಪ್ರಾಧಿಕಾರವು ಕೋಲ್ಕತ, ಮುಂಬೈ ಹಾಗೂ ಚೆನ್ನೈನಲ್ಲಿದ್ದರೆ, ನ್ಯಾಯಾಧಿಕರಣವು ದೆಹಲಿಯಲ್ಲಿರಲಿದೆ. 1988ರಲ್ಲೇ ಬೇನಾಮಿ ವ್ಯವಹಾರಗಳ ನಿಯಂತ್ರಣ ಕಾಯ್ದೆ ರಚನೆಯಾಗಿತ್ತು. ಆದರೆ, ಸೂಕ್ತ ನಿಯಮ ಅಥವಾ ಸಂಸ್ಥೆಗಳನ್ನು ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ರಚಿಸಿರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಉಡುಗೊರೆ: ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಸಿದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದಕ್ಕೆ ನೀಡುತ್ತಿದ್ದ ಗೌರವಧನದಲ್ಲಿ -ಠಿ; 50 ಏರಿಕೆ ಮಾಡಲಾಗಿದೆ. ಪ್ರಸ್ತುತ ಪ್ರತಿ ಭೇಟಿಗೆ -ಠಿ; 250 ಇದ್ದು, ಇನ್ಮುಂದೆ 300 ದೊರೆಯಲಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕವಾಗಿ 20 ಭೇಟಿ ಇರಲಿದ್ದು, ಇದರಿಂದ -ಠಿ; 1 ಸಾವಿರ ಹೆಚ್ಚುವರಿ ಗೌರವ ಧನ ದೊರೆಯಲಿದೆ. ಐಐಎಸ್ಎಸ್ ಸ್ಥಾಪನೆ: ದೇಶದ ವಿವಿಧೆಡೆ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್ಎಸ್) ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿಸಿ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ