ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ಐದು ಗಂಟೆ ವೇಳೆಗೆ ಯಮುನಾ ನದಿ ದಡದಲ್ಲಿನ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆದಿದ್ದು, ಈ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಲು ಸಕಾರಣವೂ ಇದೆ.
ಈ ಸ್ಥಳವನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರ ಅಂತಿಮ ಸಂಸ್ಕಾರಕ್ಕೆ ಮಾತ್ರ ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂಪತ್ತಿನ ರಕ್ಷಣೆಯೂ ಸದುದ್ದೇಶವೂ ಇದೆ.
ಹರಿಸಿನಿಂದ ಸುತ್ತುವರಿದಿರುವ ‘ಸ್ಮೃತಿ ಸ್ಥಳ’ವೆಂಬ ಈ ರಾಷ್ಟ್ರೀಯ ಸ್ಮಾರಕವು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಸ್ಮಾರಕವಿರುವ ಶಾಂತಿವನ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವಿಜಯ್ ಘಾಟ್ ಮಧ್ಯೆ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಭೂ ಸಂಪನ್ಮೂಲ ಕ್ಷೀಣಿಸುತ್ತಿರುವ ಕಳಕಳಿ ಹಿನ್ನೆಲೆಯಲ್ಲಿ ಸಾಮಾನ್ಯ ಸ್ಮಾರಕ ಸ್ಥಳವನ್ನಾಗಿ ಸ್ಮೃತಿ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ.
ಅಗಲಿದ ನಾಯಕರಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಹಾಗೂ ಸಾರ್ವಜನಿಕ ಸಭೆ ನಡೆಸಲು ರಾಜ್ಘಾಟ್ ಸಮೀಪ ಏಕ್ತಾ ಸ್ಥಳದ ಸಮಾಧಿಸ್ ಕಾಂಪ್ಲೆಕ್ಸ್ನಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳ ನಿರ್ಮಾಣಕ್ಕೆ ಮೇ 2013ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು.
ರಾಜಧಾನಿಯಲ್ಲಿ ಹೆಚ್ಚಿನ ಸ್ಮಾರಕಗಳನ್ನು ನಿರ್ಮಿಸಬಾರದು ಎಂದು 2000ನೇ ಇಸ್ವಿಯಲ್ಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ರಾಷ್ಟ್ರದ ಅಗಲಿದ ಪ್ರಮುಖ ನಾಯಕರಿಗಾಗಿ ಒಂದು ಏಕೈಕ ಸ್ಥಳವನ್ನು ಮೀಸಲಿಡುವ ಕುರಿತಾಗಿ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣಕ್ಕೆ ಅನುಮೋದನೆ ದೊರಕಿತು. ಈ ಹಿಂದೆ ರಾಜ್ಘಾಟ್ ಬಳಿ ಹಲವಾರು ನಾಯಕರ ಪ್ರತ್ಯೇಕ ಸ್ಮಾರಕಗಳನ್ನು ರಚಿಸಲಾಗಿದೆ.
ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ಅಂತಿಮ ಸಂಸ್ಕಾರವನ್ನು ಕೂಡ ಸ್ಮೃತಿ ಸ್ಥಳದಲ್ಲಿಯೇ ಡಿಸೆಂಬರ್ 2012ರಲ್ಲಿ ನಡೆಸಲಾಗಿದೆ. (ಏಜೆನ್ಸೀಸ್)
ಈ ಸ್ಥಳವನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರ ಅಂತಿಮ ಸಂಸ್ಕಾರಕ್ಕೆ ಮಾತ್ರ ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂಪತ್ತಿನ ರಕ್ಷಣೆಯೂ ಸದುದ್ದೇಶವೂ ಇದೆ.
ಹರಿಸಿನಿಂದ ಸುತ್ತುವರಿದಿರುವ ‘ಸ್ಮೃತಿ ಸ್ಥಳ’ವೆಂಬ ಈ ರಾಷ್ಟ್ರೀಯ ಸ್ಮಾರಕವು ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ಅವರ ಸ್ಮಾರಕವಿರುವ ಶಾಂತಿವನ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವಿಜಯ್ ಘಾಟ್ ಮಧ್ಯೆ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಭೂ ಸಂಪನ್ಮೂಲ ಕ್ಷೀಣಿಸುತ್ತಿರುವ ಕಳಕಳಿ ಹಿನ್ನೆಲೆಯಲ್ಲಿ ಸಾಮಾನ್ಯ ಸ್ಮಾರಕ ಸ್ಥಳವನ್ನಾಗಿ ಸ್ಮೃತಿ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗಿದೆ.
ಅಗಲಿದ ನಾಯಕರಿಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಹಾಗೂ ಸಾರ್ವಜನಿಕ ಸಭೆ ನಡೆಸಲು ರಾಜ್ಘಾಟ್ ಸಮೀಪ ಏಕ್ತಾ ಸ್ಥಳದ ಸಮಾಧಿಸ್ ಕಾಂಪ್ಲೆಕ್ಸ್ನಲ್ಲಿ ರಾಷ್ಟ್ರೀಯ ಸ್ಮೃತಿ ಸ್ಥಳ ನಿರ್ಮಾಣಕ್ಕೆ ಮೇ 2013ರಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತು.
ರಾಜಧಾನಿಯಲ್ಲಿ ಹೆಚ್ಚಿನ ಸ್ಮಾರಕಗಳನ್ನು ನಿರ್ಮಿಸಬಾರದು ಎಂದು 2000ನೇ ಇಸ್ವಿಯಲ್ಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ರಾಷ್ಟ್ರದ ಅಗಲಿದ ಪ್ರಮುಖ ನಾಯಕರಿಗಾಗಿ ಒಂದು ಏಕೈಕ ಸ್ಥಳವನ್ನು ಮೀಸಲಿಡುವ ಕುರಿತಾಗಿ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣಕ್ಕೆ ಅನುಮೋದನೆ ದೊರಕಿತು. ಈ ಹಿಂದೆ ರಾಜ್ಘಾಟ್ ಬಳಿ ಹಲವಾರು ನಾಯಕರ ಪ್ರತ್ಯೇಕ ಸ್ಮಾರಕಗಳನ್ನು ರಚಿಸಲಾಗಿದೆ.
ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ಅವರ ಅಂತಿಮ ಸಂಸ್ಕಾರವನ್ನು ಕೂಡ ಸ್ಮೃತಿ ಸ್ಥಳದಲ್ಲಿಯೇ ಡಿಸೆಂಬರ್ 2012ರಲ್ಲಿ ನಡೆಸಲಾಗಿದೆ. (ಏಜೆನ್ಸೀಸ್)
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ