ನವದೆಹಲಿ: ಉತ್ತಮ ಆರೋಗ್ಯ ಮತ್ತು ಪೋಷಣೆಗೆ ಸಂಬಂಧಪಟ್ಟ ಅಂಶಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರೀಯ ಪೋಷಣ್ ಅಭಿಯಾನದ ಮಾಸಾಚರಣೆ ಹಿನ್ನೆಲೆಯಲ್ಲಿ ದೇಶದ ಎಲ್ಲ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದರು.
ದೇಶದಲ್ಲಿ ರಕ್ತಹೀನತೆ ಬಹುದೊಡ್ಡ ಸಮಸ್ಯೆಯಾಗಿದೆ. ತುಂಬ ಜನ ಅನೀಮಿಯಾದಿಂದ ಬಳಲುತ್ತಿದ್ದಾರೆ. ಅಂಥವರು ಅಯೋಡಿನ್ಯುಕ್ತ ಉಪ್ಪು ಹಾಗೂ ಕಬ್ಬಿಣಾಂಶ ಜಾಸ್ತಿ ಇರುವ ಆಹಾರಗಳನ್ನು ಸೇವಿಸಲು ಆರೋಗ್ಯ ಕಾರ್ಯಕರ್ತರು ಅರಿವು ಮೂಡಿಸಬೇಕು. ರಕ್ತಹೀನತೆಯನ್ನು ನಿಯಂತ್ರಿಸುವ ಕೆಲಸವಾಗಬೇಕು. ರಕ್ತಹೀನತೆ ಪ್ರಮಾಣ ಪ್ರತಿ ವರ್ಷ ಒಂದು ಪರ್ಸೆಂಟ್ನಷ್ಟು ಮಾತ್ರ ಕಡಿಮೆಯಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಪೋಷಣ್ ಅಭಿಯಾನದಡಿ ಮೂರು ಹಂತದಲ್ಲಿ ಇದನ್ನು ನಿಯಂತ್ರಿಸಲು ನಿರ್ಧರಿಸಿದೆ ಎಂದು ಹೇಳಿದ ಮೋದಿ, ಆರೋಗ್ಯ ಕಾರ್ಯಕರ್ತರು ಕೇವಲ ಮಕ್ಕಳ ಬಗ್ಗೆ ಮಾತ್ರವಲ್ಲದೆ ಗರ್ಭಿಣಿಯರ ಆರೋಗ್ಯ, ಅವರಲ್ಲಿ ಕಾಡುವ ರಕ್ತಹೀನತೆ ನಿವಾರಿಸಲು, ಅದರ ಬಗ್ಗೆ ತಿಳಿವಳಿಕೆ ಮೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಆರೋಗ್ಯವಂತರಾಗಿರಬೇಕು. ಐದು ವರ್ಷದವರೆಗೆ ತುಂಬ ಸೂಕ್ಷ್ಮವಾಗಿ ಇರುತ್ತಾರೆ. ಅವರ ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಬೇಕು. ದೇಶ ಅಭಿವೃದ್ಧಿಯಾಗಬೇಕಾದರೆ ಮಕ್ಕಳು ಸದೃಢವಾಗಿ ಬೆಳೆಯಬೇಕು ಎಂದು ಹೇಳಿದರು.
ಜಾರ್ಖಂಡದಲ್ಲಿ ಕುಟುಂಬದವರು ಸತ್ತುಹೋಗಿದೆ ಎಂದುಕೊಂಡಿದ್ದ ಮಗುವನ್ನು ಬದುಕಿಸಿದ ಆರೋಗ್ಯ ಕಾರ್ಯಕರ್ತೆ ಮನಿತಾ ದೇವಿಯನ್ನು ಪ್ರಧಾನಿ ಮೋದಿ ಸ್ಮರಿಸಿದರು. ಆಕೆ ನವಜಾತ ಶಿಶುಗಳ ಆರೋಗ್ಯ ಕಾಳಜಿ ಬಗ್ಗೆ ತರಬೇತಿ ಪಡೆದವರಾಗಿದ್ದು ಮಗುವನ್ನು ಉಳಿಸಿದ್ದರು. ಹಾಗೇ ಅನೇಕ ವೈದ್ಯರು ಹಣ ತೆಗೆದುಕೊಳ್ಳದೆ ಬಡ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿದ್ದು ಅವರನ್ನೂ ಕೂಡ ಶ್ಲಾಘಿಸಿದರು.
ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಂಗನವಾಡಿ ಕಾರ್ಯಕರ್ತೆಯರ ತಿಂಗಳ ಸಹಾಯಧನವನ್ನು 3,000 ರೂ.ದಿಂದ 4,500 ರೂ. ಹಾಗೂ 2,250 ರೂ.ದಿಂದ 3,500 ರೂ. ಗೆ ಹಾಗೂ ಸಹಾಯಕಿಯರ ಸಹಾಯಧನವನ್ನು 1,500 ರೂ.ದಿಂದ 2,200 ರೂ.ಗೆ ಹೆಚ್ಚಿಸುವುದಾಗಿ ತಿಳಿಸಿದರು.
ಕನ್ನಡದಲ್ಲೇ ನಮಸ್ಕಾರ
ರಾಷ್ಟ್ರೀಯ ಪೋಷಣ ಅಭಿಯಾನದ ಮಾಸಾಚರಣೆ ನಿಮಿತ್ತ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಅನ್ನು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎನ್ಐಸಿ ಸೆಂಟರ್ನಲ್ಲಿ ಏರ್ಪಡಿಸಲಾಗಿತ್ತು. ಯಾದಗಿರಿಯ ವನಜಾಕ್ಷಿ ಹಾಗೂ ಮಲ್ಲಮ್ಮ ಜತೆ ಮೋದಿಯವರು ಸಂವಾದ ನಡೆಸಿದರು. ಮಾತಿಗೂ ಮೊದಲು ಕನ್ನಡದಲ್ಲೇ ನಮಸ್ಕಾರ ಹೇಳಿದ್ದು ವಿಶೇಷವಾಗಿತ್ತು.
ರಾಷ್ಟ್ರೀಯ ಪೋಷಣ್ ಅಭಿಯಾನದ ಮಾಸಾಚರಣೆ ಹಿನ್ನೆಲೆಯಲ್ಲಿ ದೇಶದ ಎಲ್ಲ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದರು.
ದೇಶದಲ್ಲಿ ರಕ್ತಹೀನತೆ ಬಹುದೊಡ್ಡ ಸಮಸ್ಯೆಯಾಗಿದೆ. ತುಂಬ ಜನ ಅನೀಮಿಯಾದಿಂದ ಬಳಲುತ್ತಿದ್ದಾರೆ. ಅಂಥವರು ಅಯೋಡಿನ್ಯುಕ್ತ ಉಪ್ಪು ಹಾಗೂ ಕಬ್ಬಿಣಾಂಶ ಜಾಸ್ತಿ ಇರುವ ಆಹಾರಗಳನ್ನು ಸೇವಿಸಲು ಆರೋಗ್ಯ ಕಾರ್ಯಕರ್ತರು ಅರಿವು ಮೂಡಿಸಬೇಕು. ರಕ್ತಹೀನತೆಯನ್ನು ನಿಯಂತ್ರಿಸುವ ಕೆಲಸವಾಗಬೇಕು. ರಕ್ತಹೀನತೆ ಪ್ರಮಾಣ ಪ್ರತಿ ವರ್ಷ ಒಂದು ಪರ್ಸೆಂಟ್ನಷ್ಟು ಮಾತ್ರ ಕಡಿಮೆಯಾಗುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಪೋಷಣ್ ಅಭಿಯಾನದಡಿ ಮೂರು ಹಂತದಲ್ಲಿ ಇದನ್ನು ನಿಯಂತ್ರಿಸಲು ನಿರ್ಧರಿಸಿದೆ ಎಂದು ಹೇಳಿದ ಮೋದಿ, ಆರೋಗ್ಯ ಕಾರ್ಯಕರ್ತರು ಕೇವಲ ಮಕ್ಕಳ ಬಗ್ಗೆ ಮಾತ್ರವಲ್ಲದೆ ಗರ್ಭಿಣಿಯರ ಆರೋಗ್ಯ, ಅವರಲ್ಲಿ ಕಾಡುವ ರಕ್ತಹೀನತೆ ನಿವಾರಿಸಲು, ಅದರ ಬಗ್ಗೆ ತಿಳಿವಳಿಕೆ ಮೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಆರೋಗ್ಯವಂತರಾಗಿರಬೇಕು. ಐದು ವರ್ಷದವರೆಗೆ ತುಂಬ ಸೂಕ್ಷ್ಮವಾಗಿ ಇರುತ್ತಾರೆ. ಅವರ ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಬೇಕು. ದೇಶ ಅಭಿವೃದ್ಧಿಯಾಗಬೇಕಾದರೆ ಮಕ್ಕಳು ಸದೃಢವಾಗಿ ಬೆಳೆಯಬೇಕು ಎಂದು ಹೇಳಿದರು.
ಜಾರ್ಖಂಡದಲ್ಲಿ ಕುಟುಂಬದವರು ಸತ್ತುಹೋಗಿದೆ ಎಂದುಕೊಂಡಿದ್ದ ಮಗುವನ್ನು ಬದುಕಿಸಿದ ಆರೋಗ್ಯ ಕಾರ್ಯಕರ್ತೆ ಮನಿತಾ ದೇವಿಯನ್ನು ಪ್ರಧಾನಿ ಮೋದಿ ಸ್ಮರಿಸಿದರು. ಆಕೆ ನವಜಾತ ಶಿಶುಗಳ ಆರೋಗ್ಯ ಕಾಳಜಿ ಬಗ್ಗೆ ತರಬೇತಿ ಪಡೆದವರಾಗಿದ್ದು ಮಗುವನ್ನು ಉಳಿಸಿದ್ದರು. ಹಾಗೇ ಅನೇಕ ವೈದ್ಯರು ಹಣ ತೆಗೆದುಕೊಳ್ಳದೆ ಬಡ ಗರ್ಭಿಣಿಯರಿಗೆ ಚಿಕಿತ್ಸೆ ನೀಡುತ್ತಿದ್ದು ಅವರನ್ನೂ ಕೂಡ ಶ್ಲಾಘಿಸಿದರು.
ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಂಗನವಾಡಿ ಕಾರ್ಯಕರ್ತೆಯರ ತಿಂಗಳ ಸಹಾಯಧನವನ್ನು 3,000 ರೂ.ದಿಂದ 4,500 ರೂ. ಹಾಗೂ 2,250 ರೂ.ದಿಂದ 3,500 ರೂ. ಗೆ ಹಾಗೂ ಸಹಾಯಕಿಯರ ಸಹಾಯಧನವನ್ನು 1,500 ರೂ.ದಿಂದ 2,200 ರೂ.ಗೆ ಹೆಚ್ಚಿಸುವುದಾಗಿ ತಿಳಿಸಿದರು.
ಕನ್ನಡದಲ್ಲೇ ನಮಸ್ಕಾರ
ರಾಷ್ಟ್ರೀಯ ಪೋಷಣ ಅಭಿಯಾನದ ಮಾಸಾಚರಣೆ ನಿಮಿತ್ತ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಅನ್ನು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎನ್ಐಸಿ ಸೆಂಟರ್ನಲ್ಲಿ ಏರ್ಪಡಿಸಲಾಗಿತ್ತು. ಯಾದಗಿರಿಯ ವನಜಾಕ್ಷಿ ಹಾಗೂ ಮಲ್ಲಮ್ಮ ಜತೆ ಮೋದಿಯವರು ಸಂವಾದ ನಡೆಸಿದರು. ಮಾತಿಗೂ ಮೊದಲು ಕನ್ನಡದಲ್ಲೇ ನಮಸ್ಕಾರ ಹೇಳಿದ್ದು ವಿಶೇಷವಾಗಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ