ಭಾರತೀಯ ಆಹಾರಪದ್ಧತಿಯೇ ಹಾಗೆ. ಹಳೆರುಚಿಗಳಲ್ಲೇ ಸಹಸ್ರಾರು ವರ್ಷಗಳಿಗಾಗುವಷ್ಟು ರುಚಿಯಿರುತ್ತದೆ. ದೇಶದೆಲ್ಲೆಡೆ ಉಪಾಹಾರದ ಸಮಯದಲ್ಲಿ ಕಾಣಸಿಗುವ ವಡೆ ಇಂದಿನ ಹೊಸರುಚಿಯೆಂದು ಅನೇಕರು ಭಾವಿಸಿರುತ್ತಾರೆ. ನಿಜಕ್ಕೂ ಈ ವಡೆ ಹಳೆರುಚಿ! ಆಯುರ್ವೆದದ ಭಾವಪ್ರಕಾಶಗ್ರಂಥದ ಕೃತಾನ್ನವರ್ಗದಲ್ಲಿ ವೈವಿಧ್ಯಮಯ ವಡೆ ಮಾಡುವ ವಿಧಾನ ಹೇಳಿರುವುದು ಅಚ್ಚರಿ ಮೂಡಿಸುತ್ತದೆ. ತಯಾರಿ ವಿಧಾನಕ್ಕೂ ಮಿಗಿಲಾಗಿ ಆಯುರ್ವೆದ ಬಳಸಿದ ವಟಕಾ ಎಂಚಿ ಶಬ್ದಕ್ಕೂ ಕನ್ನಡದ ವಡೆ ಶಬ್ದಕ್ಕೂ ಸಾಮ್ಯವಿದೆ!
ಉದ್ದಿನ ಹಿಟ್ಟಿಗೆ ಉಪ್ಪು, ಶುಂಠಿ, ಹಿಂಗು ಸೇರಿಸಿ ಉರುಟಾಗಿ ಆ ಹಿಟ್ಟನ್ನು ಎಣ್ಣೆಯಲ್ಲಿ ಹಾಕಿ ಚಿಕ್ಕ ಬೆಂಕಿಯಲ್ಲಿ ಉದ್ದಿನ ವಡೆ ತಯಾರಿಸಿದರೆ ಅದಕ್ಕೆ ಶುಷ್ಕವಟಕ ಎಂದು ಹೆಸರು. ಬಲ, ದೇಹತೂಕ, ರುಚಿ, ಕಫ, ವೀರ್ಯ ಹೆಚ್ಚಿಸುವುದಲ್ಲದೆ ಮಲಬದ್ಧತೆ ನಿವಾರಿಸುವುದು. ವಾತರೋಗ ನಾಶಕವಾಗಿದ್ದು ವಿಶೇಷವಾಗಿ ಮುಖದ ಪಾರ್ಶ್ವವಾಯುವಿನಲ್ಲಿ ಅತ್ಯುಪಯುಕ್ತ. ಅಧಿಕ ಜೀರ್ಣಶಕ್ತಿ ಇರುವವರಿಗೆ ಹಿತಕರವಾಗಿದೆ. ಉದ್ದಿನ ವಡೆಯನ್ನು ಚಿಕ್ಕದಾಗಿ ತುಂಡರಿಸಿ ದಪ್ಪಮಜ್ಜಿಗೆಯಲ್ಲಿ ಸ್ವಲ್ಪಕಾಲ ಮುಳುಗಿಸಿಟ್ಟು ಸೇವಿಸಿದರೆ ವೀರ್ಯಪ್ರಮಾಣ, ಬಲ, ರುಚಿ, ಕಫ ಹೆಚ್ಚಿಸುತ್ತದೆ. ನಿಧಾನವಾಗಿ ಜೀರ್ಣವಾಗಿ ಎದೆಉರಿ ಉಂಟುಮಾಡುತ್ತದೆ. ವಾತವನ್ನು ಶಮನಗೊಳಿಸುತ್ತದೆ. ಇದಕ್ಕೆ ಸಾಸಿವೆ ಹಾಕಿದರೆ ಅತಿರುಚಿಕಾರಿಯಾಗಿದ್ದು ಜೀರ್ಣಕ್ಕೆ ಸುಲಭವಾಗುತ್ತದೆ.
ಮಣ್ಣಿನ ಪಾತ್ರೆಗೆ ಸಾಸಿವೆ ಎಣ್ಣೆಯನ್ನು ಲೇಪಿಸಿ ನೀರುತುಂಬಿ ಸಾಸಿವೆ, ಜೀರಿಗೆ, ಉಪ್ಪು, ಹಿಂಗು, ಶುಂಠಿ, ಅರಶಿಣಗಳನ್ನೆಲ್ಲ ಹುಡಿ ಮಾಡಿ ಹಾಕಿ ಉದ್ದಿನ ವಡೆಯನ್ನು ಮುಳುಗಿಸಿ ಇಡಬೇಕು. ಮಡಕೆಯ ಬಾಯಿಮುಚ್ಚಿ ಮೂರು ದಿನವಿಟ್ಟರೆ ಸಿಗುವ ಹುಳಿಯಾದ ವಡೆಯೇ ಕಾಂಜಿಕಾವಟಕಾ. ಹೊಟ್ಟೆನೋವು, ಮೈಉರಿಗಳನ್ನು ವಿಶೇಷವಾಗಿ ಕಡಿಮೆ ಮಾಡುತ್ತದೆ. ಬಾಯಿರುಚಿ ಉಂಟುಮಾಡುತ್ತದೆ. ಆದರೆ ಕಣ್ಣಿನ ವ್ಯಾಧಿಗಳಿದ್ದಾಗ ಇದು ಹಿತವಲ್ಲ. ಹುಣಸೆಹಣ್ಣನ್ನು ಸೆಕೆ ಬರಿಸಿ ನೀರಿನಲ್ಲಿ ಅರೆದು ಜೀರಿಗೆ, ಹಿಂಗು, ಉಪ್ಪು, ಅರಶಿಣ ಸೇರಿಸಿ ಉದ್ದಿನ ವಡೆಯನ್ನು ಮುಳುಗಿಸಿಟ್ಟರೆ ಅದು ಅಮ್ಲಿಕಾವಟಕ. ವಡೆಯ ಎಲ್ಲ ಗುಣಗಳೂ ಇದ್ದು ವಿಶೇಷವಾಗಿ ಹಸಿವು, ಬಾಯಿರುಚಿ ಹೆಚ್ಚಿಸುತ್ತದೆ. ಹೆಸರುಬೇಳೆಯ ಹಿಟ್ಟಿನಿಂದ ಮಾಡಿದ ವಡೆಯನ್ನು ಮಜ್ಜಿಗೆಯಲ್ಲಿ ಅಲ್ಪಕಾಲವಿಟ್ಟು ತಿನ್ನುವ ಮುದ್ಗವಟಕಾವು ಸುಲಭವಾಗಿ ಜೀರ್ಣವಾಗುತ್ತದೆ. ಶೀತಲಗುಣ ಹೊಂದಿದ್ದು ಮೂರೂ ದೋಷಗಳನ್ನು ಶಮನಗೊಳಿಸುತ್ತದೆ. ನೀಡುವ ಸಂಸ್ಕಾರದಿಂದಾಗಿ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಉದ್ದಿನ ಅಥವಾ ಹೆಸರಿನ ಹಿಟ್ಟಿಗೆ ಬೂದುಗುಂಬಳದ ಬಿಳಿತಿರುಳು ಸೇರಿಸಿ ಮಾಡುವ ವಡೆಗೆ ಕೂಷ್ಮಾಂಡಕ ವಟಕಾ ಎನ್ನಲಾಗಿದೆ. ಪಿತ್ತ ಹಾಗೂ ರಕ್ತದ ರೋಗಗಳಲ್ಲಿ ಹಿತಕರವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ಹೆಸರುಕಾಳಿನ ಗುಣಗಳು ಈ ವಡೆಯಲ್ಲೂ ಅಡಗಿರುತ್ತದೆ. ಕಡಲೆಬೇಳೆ ಹಿಟ್ಟಿನಿಂದ ಮಾಡಿದ ವೇಸನ ವಟಕಾವನ್ನು ಸಂಸ್ಕರಿತ ಮಸಾಲಾ ಮಜ್ಜಿಗೆಯಲ್ಲಿ ಮುಳುಗಿಸಿಟ್ಟು ಸೇವಿಸಿದರೆ ಬಾಯಿರುಚಿ, ಬಲ, ದೇಹಪುಷ್ಟಿ ಉಂಟುಮಾಡುತ್ತದೆ. ಆದರೆ ಸ್ವಲ್ಪ ಹೊಟ್ಟೆಯುಬ್ಬರ ಕಾಣಿಸಿಕೊಳ್ಳುವುದು. ಕಡಲೆಬೇಳೆಗೆ ಬೇಸನ್ ಎಂಬ ಹೆಸರು ಎಲ್ಲಿಂದ ಬಂತೆಂದು ಈಗ ಅರ್ಥವಾಗಿರಬಹುದು. ವಡೆ, ಮೊಸರೊಡೆ ಎಂದೊಡೆ ಬಾಯಲ್ಲಿ ನೀರೂರುವುದು ಯಾಕೆಂಬುದೂ ಸ್ಪಷ್ಟವಾಗಿರಬಹುದು.
ಉದ್ದಿನ ಹಿಟ್ಟಿಗೆ ಉಪ್ಪು, ಶುಂಠಿ, ಹಿಂಗು ಸೇರಿಸಿ ಉರುಟಾಗಿ ಆ ಹಿಟ್ಟನ್ನು ಎಣ್ಣೆಯಲ್ಲಿ ಹಾಕಿ ಚಿಕ್ಕ ಬೆಂಕಿಯಲ್ಲಿ ಉದ್ದಿನ ವಡೆ ತಯಾರಿಸಿದರೆ ಅದಕ್ಕೆ ಶುಷ್ಕವಟಕ ಎಂದು ಹೆಸರು. ಬಲ, ದೇಹತೂಕ, ರುಚಿ, ಕಫ, ವೀರ್ಯ ಹೆಚ್ಚಿಸುವುದಲ್ಲದೆ ಮಲಬದ್ಧತೆ ನಿವಾರಿಸುವುದು. ವಾತರೋಗ ನಾಶಕವಾಗಿದ್ದು ವಿಶೇಷವಾಗಿ ಮುಖದ ಪಾರ್ಶ್ವವಾಯುವಿನಲ್ಲಿ ಅತ್ಯುಪಯುಕ್ತ. ಅಧಿಕ ಜೀರ್ಣಶಕ್ತಿ ಇರುವವರಿಗೆ ಹಿತಕರವಾಗಿದೆ. ಉದ್ದಿನ ವಡೆಯನ್ನು ಚಿಕ್ಕದಾಗಿ ತುಂಡರಿಸಿ ದಪ್ಪಮಜ್ಜಿಗೆಯಲ್ಲಿ ಸ್ವಲ್ಪಕಾಲ ಮುಳುಗಿಸಿಟ್ಟು ಸೇವಿಸಿದರೆ ವೀರ್ಯಪ್ರಮಾಣ, ಬಲ, ರುಚಿ, ಕಫ ಹೆಚ್ಚಿಸುತ್ತದೆ. ನಿಧಾನವಾಗಿ ಜೀರ್ಣವಾಗಿ ಎದೆಉರಿ ಉಂಟುಮಾಡುತ್ತದೆ. ವಾತವನ್ನು ಶಮನಗೊಳಿಸುತ್ತದೆ. ಇದಕ್ಕೆ ಸಾಸಿವೆ ಹಾಕಿದರೆ ಅತಿರುಚಿಕಾರಿಯಾಗಿದ್ದು ಜೀರ್ಣಕ್ಕೆ ಸುಲಭವಾಗುತ್ತದೆ.
ಮಣ್ಣಿನ ಪಾತ್ರೆಗೆ ಸಾಸಿವೆ ಎಣ್ಣೆಯನ್ನು ಲೇಪಿಸಿ ನೀರುತುಂಬಿ ಸಾಸಿವೆ, ಜೀರಿಗೆ, ಉಪ್ಪು, ಹಿಂಗು, ಶುಂಠಿ, ಅರಶಿಣಗಳನ್ನೆಲ್ಲ ಹುಡಿ ಮಾಡಿ ಹಾಕಿ ಉದ್ದಿನ ವಡೆಯನ್ನು ಮುಳುಗಿಸಿ ಇಡಬೇಕು. ಮಡಕೆಯ ಬಾಯಿಮುಚ್ಚಿ ಮೂರು ದಿನವಿಟ್ಟರೆ ಸಿಗುವ ಹುಳಿಯಾದ ವಡೆಯೇ ಕಾಂಜಿಕಾವಟಕಾ. ಹೊಟ್ಟೆನೋವು, ಮೈಉರಿಗಳನ್ನು ವಿಶೇಷವಾಗಿ ಕಡಿಮೆ ಮಾಡುತ್ತದೆ. ಬಾಯಿರುಚಿ ಉಂಟುಮಾಡುತ್ತದೆ. ಆದರೆ ಕಣ್ಣಿನ ವ್ಯಾಧಿಗಳಿದ್ದಾಗ ಇದು ಹಿತವಲ್ಲ. ಹುಣಸೆಹಣ್ಣನ್ನು ಸೆಕೆ ಬರಿಸಿ ನೀರಿನಲ್ಲಿ ಅರೆದು ಜೀರಿಗೆ, ಹಿಂಗು, ಉಪ್ಪು, ಅರಶಿಣ ಸೇರಿಸಿ ಉದ್ದಿನ ವಡೆಯನ್ನು ಮುಳುಗಿಸಿಟ್ಟರೆ ಅದು ಅಮ್ಲಿಕಾವಟಕ. ವಡೆಯ ಎಲ್ಲ ಗುಣಗಳೂ ಇದ್ದು ವಿಶೇಷವಾಗಿ ಹಸಿವು, ಬಾಯಿರುಚಿ ಹೆಚ್ಚಿಸುತ್ತದೆ. ಹೆಸರುಬೇಳೆಯ ಹಿಟ್ಟಿನಿಂದ ಮಾಡಿದ ವಡೆಯನ್ನು ಮಜ್ಜಿಗೆಯಲ್ಲಿ ಅಲ್ಪಕಾಲವಿಟ್ಟು ತಿನ್ನುವ ಮುದ್ಗವಟಕಾವು ಸುಲಭವಾಗಿ ಜೀರ್ಣವಾಗುತ್ತದೆ. ಶೀತಲಗುಣ ಹೊಂದಿದ್ದು ಮೂರೂ ದೋಷಗಳನ್ನು ಶಮನಗೊಳಿಸುತ್ತದೆ. ನೀಡುವ ಸಂಸ್ಕಾರದಿಂದಾಗಿ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಉದ್ದಿನ ಅಥವಾ ಹೆಸರಿನ ಹಿಟ್ಟಿಗೆ ಬೂದುಗುಂಬಳದ ಬಿಳಿತಿರುಳು ಸೇರಿಸಿ ಮಾಡುವ ವಡೆಗೆ ಕೂಷ್ಮಾಂಡಕ ವಟಕಾ ಎನ್ನಲಾಗಿದೆ. ಪಿತ್ತ ಹಾಗೂ ರಕ್ತದ ರೋಗಗಳಲ್ಲಿ ಹಿತಕರವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ಹೆಸರುಕಾಳಿನ ಗುಣಗಳು ಈ ವಡೆಯಲ್ಲೂ ಅಡಗಿರುತ್ತದೆ. ಕಡಲೆಬೇಳೆ ಹಿಟ್ಟಿನಿಂದ ಮಾಡಿದ ವೇಸನ ವಟಕಾವನ್ನು ಸಂಸ್ಕರಿತ ಮಸಾಲಾ ಮಜ್ಜಿಗೆಯಲ್ಲಿ ಮುಳುಗಿಸಿಟ್ಟು ಸೇವಿಸಿದರೆ ಬಾಯಿರುಚಿ, ಬಲ, ದೇಹಪುಷ್ಟಿ ಉಂಟುಮಾಡುತ್ತದೆ. ಆದರೆ ಸ್ವಲ್ಪ ಹೊಟ್ಟೆಯುಬ್ಬರ ಕಾಣಿಸಿಕೊಳ್ಳುವುದು. ಕಡಲೆಬೇಳೆಗೆ ಬೇಸನ್ ಎಂಬ ಹೆಸರು ಎಲ್ಲಿಂದ ಬಂತೆಂದು ಈಗ ಅರ್ಥವಾಗಿರಬಹುದು. ವಡೆ, ಮೊಸರೊಡೆ ಎಂದೊಡೆ ಬಾಯಲ್ಲಿ ನೀರೂರುವುದು ಯಾಕೆಂಬುದೂ ಸ್ಪಷ್ಟವಾಗಿರಬಹುದು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ